Health

ಬೇವು ಬೆಲ್ಲದ ರಹಸ್ಯ ಗೊತ್ತಾದ್ರೆ ನಿಜಕ್ಕೂ ಆಶ್ಚರ್ಯ ಪಡುತ್ತೀರಾ. ನೋಡಿ!

169

ಬೇವು ಬೆಲ್ಲದ ಆರೋಗ್ಯ ಪ್ರಯೋಜನಗಳು ಗೊತ್ತಾದ್ರೆ ನಿಜಕ್ಕೂ ಅಚ್ಚರಿಪಡುವಿರಿ!ಹಿಂದೂ ಕ್ಯಾಲೆಂಡರ್ ಪ್ರಕಾರ ಯುಗಾದಿ ಹೊಸ ವರ್ಷದ ದಿನವಾಗಿದೆ ಹಾಗೂ ಪವಿತ್ರ ಸಮಯ ಎಂದು ಪರಿಗಣಿಸಲ್ಪಡುತ್ತದೆ. ಕರ್ನಾಟಕದಲ್ಲಿ ಈ ಹಬ್ಬಕ್ಕೆ ಯುಗಾದಿ ಎಂದೂ ಮಹಾರಾಷ್ಟ್ರದಲ್ಲಿ ಗುಡಿ ಪಾವ್ಡಾ ಎಂಬ ಹೆಸರಿನಿಂದಲೂ ಆಚರಿಸಲಾಗುತ್ತದೆ. ಹಬ್ಬದ ವಿಶೇಷವಾಗಿ ಬೇವು ಮತ್ತು ಬೆಲ್ಲದ ಮಿಶ್ರಣವನ್ನು ಸಾಂಕೇತಿಕವಾಗಿ ಸೇವಿಸಲಾಗುತ್ತದೆ. ತಮಿಳುನಾದು ಮತ್ತು ಆಂಧ್ರಪ್ರದೇಶದಲ್ಲಿಯೂ ಈ ಹಬ್ಬವನ್ನು ಆಚರಿಸಲಾಗುತ್ತದೆ ಹಾಗೂ ಸುಖ ದುಃಖದ ಸಂಕೇತಗಳಾಗಿ ಬೇವು ಬೆಲ್ಲವನ್ನು ಹಂಚಲಾಗುತ್ತದೆ. ಬೇವು ರುಚಿಯಲ್ಲಿ ಕಹಿ ಮತ್ತು ಬೆಲ್ಲ ಸಿಹಿಯಾಗಿದ್ದರೂ ಗುಣವನ್ನು ಪರಿಗಣಿಸಿದಾಗ ಇವೆರಡೂ ಆರೋಗ್ಯ ಮತ್ತು ಸೌಂದರ್ಯ ಕಾಪಾಡುವ ಮತ್ತು ವೃದ್ದಿಸುವ ಗುಣಗಳನ್ನು ಹೊಂದಿವೆ. ಬನ್ನಿ, ಇವುಗಳ ಪ್ರಯೋಜನಗಳ ಬಗ್ಗೆ ಅರಿಯೋಣ:

ಬೇವು
ಬೇವಿನಲ್ಲಿ ಎರಡು ವಿಧಗಳಿವೆ. ಕರಿಬೇವು ಮತ್ತು ಕಹಿಬೇವು. ಅಡುಗೆಯ ಒಗ್ಗರಣೆಗೆ ಕರಿಬೇವು ಬಳಕೆಯಾದರೆ ಔಷಧೀಯ ರೂಪದಲ್ಲಿ ಕಹಿಬೇವು ಬಳಸಲಾಗುತ್ತದೆ. ಸಾಮಾನ್ಯವಾಗಿ ಕಹಿಬೇವು ಕರಿಬೇವಿಗಿಂತಲೂ ಹೆಚ್ಚು ಕಹಿಯಾಗಿರುತ್ತದೆ. ಹಬ್ಬದ ಸಂಭ್ರವನ್ನು ಹಂಚಿಕೊಳ್ಳಲು ಬಳಸುವ ಬೇವು ಕಹಿಬೇವು ಆಗಿರುತ್ತದೆ. ಕಹಿಬೇವಿನಲ್ಲಿ ಹಲವಾರು ಸೌಂದರ್ಯ ವರ್ಧಕ ಗುಣಗಳಿವೆ. ವಿಶೇಷವಾಗಿ ಮೊಡವೆಗಳು, ಕಪ್ಪುತಲೆ ಅಥವಾ ಬ್ಲಾಕ್ ಹೆಡ್ ಗಳು, ಸೂಕ್ಷ್ಮ ಗೆರೆಗಳು, ತಲೆಹೊಟ್ಟು, ತಲೆಗೂದಲು ಉದುರುವುದು ಮೊದಲಾದ ತೊಂದರೆಗಳಿಗೆ ಕಹಿಬೇವು ಉತ್ತಮ ಔಷಧಿಯಾಗಿದೆ.

ಅಚ್ಚರಿಗೊಳಿಸುವ ಬೇವಿನ ರಸದ ಆರೋಗ್ಯ ಪ್ರಯೋಜನಗಳು.

ಅಲ್ಲದೇ ಕಹಿಬೇವು ಹಲವಾರು ಚರ್ಮದ ಕಾಯಿಲೆಗಳಿಗೆ ನೈಸರ್ಗಿಕ ಪರಿಹಾರವಾಗಿದೆ. ಚಿಕ್ಕ ಮಕ್ಕಳಿಗೆ ಕಾಡುವ ಸಿಡುಬು ಅಥವಾ ಸ್ಮಾಲ್ ಪಾಕ್ಸ್ ಸೋಂಕಿನಿಂದ ಮೈ ಎಲ್ಲಾ ಚಿಕ್ಕ ಚಿಕ್ಕ ಗುಳ್ಳೆಗಳು ಎದ್ದಿದ್ದರೆ ಇದಕ್ಕೆ ಚಿಕಿತ್ಸೆಯಾಗಿ ಕಹಿಬೇವನ್ನು ಕುದಿಸಿದ ನೀರಿನಲ್ಲಿ ಸ್ನಾನ ಮಾಡಿಸುವ ಮೂಲಕ ಉರಿ ಕಡಿಮೆಯಾಗುತ್ತದೆ ಹಾಗೂ ಶೀಘ್ರವೇ ಗುಣವಾಗುತ್ತದೆ. ಅಲ್ಲದೇ ಕಹಿಬೇವು ಪ್ರಬಲ ಬ್ಯಾಕ್ಟೀರಿಯಾ ನಿವಾರಕ ಗುಣವನ್ನೂ ಹೊಂದಿದ್ದು ಇದರ ಸೇವನೆಯಿಂದ ರೋಗ ನಿರೋಧಕ ಶಕ್ತಿಯೂ ಉತ್ತಮಗೊಳ್ಳುತ್ತದೆ.

ಬೇವಿನ ಆರೋಗ್ಯವರ್ಧಕ ಗುಣಗಳು ಕೆಲವಾರು ಕಾಯಿಲೆಗಳ ಚಿಕಿತ್ಸೆಗೆ ನೆರವಾಗುತ್ತದೆ ಎಂದು ನಂಬಲಾಗಿದೆ. ಉದಾಹರಣೆಗೆ ರ್‍ಹೂಮಟಾಯ್ಡ್ ಸಂಧಿವಾತ, ಕೀಲೂರ ಅಥವಾ ಕೀಲುಗಳು ಊದಿ ಕೆರಳುವ ರೋಗ, ಬೆನ್ನುನೋವು, ಸ್ನಾಯುಗಳ ನೋವು ಮೊದಲಾದವುಗಳ ಚಿಕಿತ್ಸೆಗೆ ಕಹಿಬೇವನ್ನು ಬಳಸಲಾಗುತ್ತದೆ.

ಬೆಲ್ಲ
ಬಿಳಿ ಸಕ್ಕರೆ ಆಧುನಿಕ ಐದು ವಿಷಗಳಲ್ಲಿ ಒಂದು ಎಂದು ಈಗಾಗಲೇ ಸಾಬೀತುಗೊಂಡಿದ್ದು ಆರೋಗ್ಯ ಕಾಳಜಿ ಉಳ್ಳವರು ಸಕ್ಕರೆಯ ಬದಲಿಗೆ ಬೆಲ್ಲವನ್ನು ಬಳಸ ತೊಡಗಿದ್ದಾರೆ. ನೋಡಲಿಕ್ಕೆ ಸಕ್ಕರೆಯಂತೆ ಬಿಳಿ ಇಲ್ಲ ಮತ್ತು ಬಳಸುವಾಗ ಅಂಟಂಟು ಆಗಿರುತ್ತದೆ ಎಂಬ ಒಂದೇ ಋಣಾತ್ಮಕ ಗುಣವನ್ನು ಮರೆತರೆ ಬೆಲ್ಲ ಸಕ್ಕರೆಗೆ ಪರ್ಯಾಯವಾಗಲು ಎಲ್ಲಾ ಗುಣಗಳನ್ನೂ ಪಡೆದಿದೆ. ಬೆಲ್ಲವನ್ನೂ ಕಬ್ಬಿನಿಂದಲೇ ತಯಾರಿಸಲಾಗುತ್ತದೆ, ಆದರೆ ಸಕ್ಕರೆಯನ್ನು ತಯಾರಿಸುವಾಗ ಹಲವಾರು ಕೃತಕ ರಾಸಾಯನಿಕಗಳು, ಸುಟ್ಟ ಮೂಳೆಗಳು (bone char) ಮೊದಲಾದವುಗಳನ್ನು ಹಾಕಿ ಬೆಳ್ಳಗಾಗಿಸಲಾಗುತ್ತದೆ. ಆದರೆ ಬೆಲ್ಲ ಕೇವಲ ನೈಸರ್ಗಿಕ ಸಕ್ಕರೆಯ ಅಂಶವನ್ನು ಹೊಂದಿರುವ ಕಾರಣ ಆರೋಗ್ಯಕರವಾಗಿದೆ.

ಬೆಲ್ಲದ ಸೇವನೆಯಿಂದ ಪಡೆಯುವ ಪ್ರಯೋಜನಗಳು.

ಬೆಲ್ಲ ಜೀರ್ಣಗೊಳ್ಳಲು ಹೆಚ್ಚಿನ ಸಮಯ ತೆಗೆದುಕೊಳ್ಳುವ ಕಾರಣ ಸಕ್ಕರೆಯಂತೆ ರಕ್ತದಲ್ಲಿನ ಸಕ್ಕರೆಯ ಮಟ್ಟಗಳನ್ನು ಥಟ್ಟನೇ ಏರಿಸುವುದಿಲ್ಲ. ರೋಗ ನಿರೋಧಕ ಶಕ್ತಿಯನ್ನು ಉತ್ತಮಗೊಳಿಸುತ್ತದೆ. ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ ಹಾಗೂ ಮಲಬದ್ದತೆ ಆಗದಂತೆ ಕಾಪಾಡುತ್ತದೆ. ಸಕ್ಕರೆಯನ್ನು ತಯಾರಿಸುವಾಗ ಅತಿಯಾದ ಬಿಸಿಯ ಕಾರಣ ಇದರ ಕೆಲವಾರು ಪೋಷಕಾಂಶಗಳು ಮತ್ತು ಖನಿಜಗಳು ನಷ್ಟಗೊಂಡಿರುತ್ತವೆ. ಬೆಲ್ಲದಲ್ಲಿ ಹೀಗಾಗದೇ ನೈಸರ್ಗಿಕ ಪೋಷಕಾಂಶಗಳು ಮತ್ತು ಖನಿಜಗಳು. ಉಳಿದುಕೊಳ್ಳುತ್ತವೆ. ಅಲ್ಲದೇ ನೈಸರ್ಗಿಕ ಲವಣಗಳೂ ಉಳಿದುಕೊಂಡಿರುತ್ತವೆ. ಶ್ವಾಸಕೋಶ, ಶ್ವಾಸನಾಳ, ಅನ್ನನಾಳ ಹೊಟ್ಟೆ ಮತ್ತು ಕರುಳುಗಳನ್ನು ಸ್ವಚ್ಛಗೊಳಿಸಲು ನೆರವಾಗುತ್ತದೆ. ಸಕ್ಕರೆಗೆ ಹೋಲಿಸಿದರೆ ಸೇವನೆಯ ಬಳಿಕ ಎದುರಾಗುವ ಆಮ್ಲೀಯತೆ ನಗಣ್ಯ ಮಟ್ಟದಲ್ಲಿರುತ್ತದೆ.

ಬೆಲ್ಲ ಸಂಯುಕ್ತ ಕಾರ್ಬೋಹೈಡ್ರೇಟುಗಳನ್ನು ಹೊಂದಿರುವ ಮೂಲಕ ಈ ಗುಣ ಇಲ್ಲದ ಸಕ್ಕರೆಗಿಂತ ಭಿನ್ನವಾಗಿದೆ. ಜೀರ್ಣಗೊಳ್ಳಲು ಹೆಚ್ಚಿನ ಸಮಯ ತೆಗೆದುಕೊಳ್ಳಲು ಇದೇ ಕಾರಣ. ಪರಿಣಾಮವಾಗಿ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ ಹಾಗೂ ಮಲಬದ್ದತೆಯಾಗದಂತೆ ಕಾಪಾಡುತ್ತದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಉಪಯುಕ್ತ ಮಾಹಿತಿ

    ATMನಲ್ಲಿ ಹಣ ಡ್ರಾ ಮಾಡುವ ವೇಳೆ ಎಚ್ಚರಿಕೆಯಿಂದಿರಿ!ಅಪ್ಪಿ ತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ…

    ಡಿಜಿಟಲ್ ಯುಗದಲ್ಲಿ ಜನರು ಎಟಿಎಂ ಬಳಕೆ ಹೆಚ್ಚು ಮಾಡಿದ್ದಾರೆ. ಒಂದು ದಿನ ಎಟಿಎಂ ಕೆಲಸ ನಿಲ್ಲಿಸಿದ್ರೂ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಎಲ್ಲರೂ ಎಟಿಎಂ ಬಳಕೆ ಮಾಡ್ತಿದ್ದಾರೆ. ಎಟಿಎಂ ಬಳಕೆ ವೇಳೆ ಕೆಲವೊಂದು ತಪ್ಪುಗಳನ್ನು ನಾವು ಮಾಡ್ತೇವೆ. ಈ ತಪ್ಪುಗಳೇ ಹ್ಯಾಕರ್ ಗೆ ಅನುಕೂಲ ಮಾಡಿಕೊಡುತ್ತದೆ. ಎಟಿಎಂ ಬಳಕೆ ವೇಳೆ ಕೆಲವೊಂದು ಸಂಗತಿಗಳನ್ನು ಅವಶ್ಯವಾಗಿ ತಿಳಿದುಕೊಳ್ಳಬೇಕಾಗುತ್ತದೆ. ಎಟಿಎಂನಲ್ಲಿ ಕಾರ್ಡ್ ಹಾಕುವ ಸ್ಲಾಟ್ ಅನ್ನು ಮೊದಲು ಎಚ್ಚರಿಕೆಯಿಂದ ನೋಡಿ. ಕಾರ್ಡ್ ಸ್ಲಾಟ್ ಅನುಮಾನ ಹುಟ್ಟಿಸುವಂತಿದ್ದರೆ, ಸ್ಲಾಟ್ ತಿದ್ದುಪಡಿಯಾಗಿದ್ದರೆ, ತುಂಬಾ…

  • ಆರೋಗ್ಯ

    ಹಲಸಿನ ಹಣ್ಣಿನ ಈ ಪ್ರಯೋಜನಗಳನ್ನು ಕೇಳಿದ್ರೆ, ನೀವು ತಿನ್ನದೇ ಸುಮ್ಮನೆ ಇರಲ್ಲ…

    ಹಲಸಿನ ಹಣ್ಣಿನ ಹೆಸರು ಕೇಳಿದ್ರೆ ಸಾಕು ಬಾಯಲ್ಲಿ ನೀರು ಬರುತ್ತೆ. ಆದ್ರೆ ಇದು ವರ್ಷ ಪೂರ್ತಿ ನಮ್ಗೆ ಸಿಗೋದಿಲ್ಲ. ಕೆಲವೊಂದು ಸೀಸನ್’ಗಳಲ್ಲಿ ಮಾತ್ರ ಸಿಗುತ್ತೆ. ಹಲಸಿನ ಹಣ್ಣಿನ ವಿಚಾರದಲ್ಲಿ, ಆರೋಗ್ಯದ ಕಡೆ ಬಂದ್ರೆ ಕೆಲವೊಂದು ಅಭಿಪ್ರಾಯಗಳು ವಿಭಿನ್ನವಾಗಿವೆ. ಎನಂದ್ರೆ ಹಲಸಿನ ಹಣ್ಣು ತಿಂದ್ರೆ ಖಾಯಿಲೆ ಬರುತ್ತೆ, ಆರೋಗ್ಯ ಕೆಡುತ್ತೆ ಅನ್ನೋದು ಇದೆ.

  • ಸಿನಿಮಾ

    ಶಾಕಿಂಗ್ ಸುದ್ದಿ.!ನಟನನ್ನು ನೋಡಲಾಗದೇ ಆತ್ಮಹತ್ಯೆ ಯತ್ನಿಸಿದ್ದ ಅಭಿಮಾನಿ ಸಾವು..!

    ನಟ ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಶುಭಾಶಯ ಹೇಳಲು ಬಂದಿದ್ದ ಅಭಿಮಾನಿಯೊಬ್ಬ ಯಶ್ ಭೇಟಿ ಸಾಧ್ಯವಾಗದ ಹಿನ್ನಲೆಯಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ರವಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾದೇ ರವಿ ಮಧ್ಯರಾತ್ರಿಯೇ ಸಾವನ್ನಪ್ಪಿದ್ದಾನೆ. ರವಿ ನೆಲಮಂಗಲ ತಾಲೂಕಿನ ಶಾಂತಿನಗರ ನಿವಾಸಿಯಾಗಿದ್ದು, ಮಂಗಳವಾರ ತನ್ನ ನೆಚ್ಚಿನ ನಟ ಯಶ್ ಅವರ ಹುಟ್ಟುಹಬ್ಬವಿದ್ದ ಕಾರಣ ಅವರನ್ನು ಭೇಟಿ ಮಾಡಲು ಬೆಂಗಳೂರಿನ…

  • ಉಪಯುಕ್ತ ಮಾಹಿತಿ

    ಮೊಡವೆ ಕಲೆಗಳು ಒಂದೇ ದಿನದಲ್ಲಿ ಮಾಯವಾಗಲು ಆಲ್ಮಂಡ್ ನಿಂದ ಈಗೆ ಮಾಡಿದರೆ ಸಾಕು,.!

    ಪ್ರಾಯದ ಸಮಯದಲ್ಲಿ ಪ್ರತಿಯೊಬ್ಬರಿಗೂ ಮುಖದಲ್ಲಿ ಮೊಡವೆ ಗುಳ್ಳೆಗಳು ಮೂಡುವುದು ಸಹಜ. ಕೇವಲ ಒಂದು ಅಥವಾ ಎರಡು ಗುಳ್ಳೆಗಳು ಬಂದರೆ ಪರವಾಗಿಲ್ಲ ಎನ್ನಬಹುದು. ಆದರೆ ಇಡೀ ಮುಖದ ತುಂಬಾ ತುಂಬಿಕೊಂಡು ಮುಖದ ಅಂದವನ್ನೇ ಹಾಳು ಮಾಡಿ ಬಿಡುತ್ತವೆ. ಮತ್ತು ವಾಸಿಯಾದ ನಂತರವೂ ಸಹ ಅವುಗಳ ಕಲೆಗಳು ಮುಖದ ಚರ್ಮದ ಮೇಲೆ ದೀರ್ಘಕಾಲ ಹಾಗೆಯೇ ಉಳಿದು ಮುಖದ ಮೇಲೆ ಕಪ್ಪು ಬಣ್ಣ ಚುಕ್ಕೆಗಳ ರೀತಿಯಲ್ಲಿ ಮೆತ್ತಿಕೊಂಡಂತೆ ಕಾಣುತ್ತದೆ. ಇಷ್ಟೇ ಅಲ್ಲದೆ ಚಿಕನ್ ಪಾಕ್ಸ್ ನಿಂದ ಬಳಲುತ್ತಿರುವವರು ಸಹ ಮುಖದ ಮೇಲೆ…

  • ಉಪಯುಕ್ತ ಮಾಹಿತಿ

    ಜಗತ್ತಿನಲ್ಲಿ ಬಿರುಗಾಳಿ ಎಬ್ಬಿಸುತ್ತಿರುವ ಬಿಟ್‌ಕಾಯಿನ್‌ ಹಣದ ಬಗ್ಗೆ ನಿಮಗೆ ಗೊತ್ತಾ..?ನಿಮ್ಮಲ್ಲಿ ಬಿಟ್‌ಕಾಯಿನ್‌ ಕರೆನ್ಸಿ ಇದ್ರೆ ನೀವ್ ಏನಾಗ್ತೀರಾ..?ತಿಳಿಯಲು ಈ ಲೇಖನ ಓದಿ…

    ಬಿಟ್‌ಕಾಯಿನ್‌ ಎನ್ನುವುದು ಅಂತರಜಾಲ ಲೋಕದಲ್ಲಿ ಬಳಕೆಗೆ ಬರುತ್ತಿರುವ ವರ್ಚುಯಲ್‌ ಹಣ. ಭಾರತದಲ್ಲಿ ರೂಪಾಯಿ, ಅಮೆರಿಕದಲ್ಲಿ ಡಾಲರುಗಳೆಲ್ಲ ಇದ್ದ ಹಾಗೆ ಅಂತರಜಾಲದ ಹಣ ಇದು. ಅಂತರಜಾಲ ಹೇಗೆ ಮಿಥ್ಯಾಲೋಕವೋ ಅಲ್ಲಿ ಚಲಾವಣೆಯಾಗುವ ಈ ಬಿಟ್‌ಕಾಯಿನ್‌” ಕೂಡ ವರ್ಚುಯಲ್‌, ಅಂದರೆ ಕಣ್ಣಿಗೆ ಕಾಣದ, ಕರೆನ್ಸಿಯೇ. ಮೂಲತಃ ನಾಣ್ಯ- ನೋಟುಗಳಾವುದೂ ಇಲ್ಲದ ಬಿಟ್‌ಕಾಯಿನ್‌ ಅಸ್ತಿತ್ವ ಕಂಪ್ಯೂಟರ್‌ ಪ್ರಪಂಚಕ್ಕೆ ಸೀಮಿತ

  • ಸುದ್ದಿ

    ದೇವಸ್ಥಾನದ ಬಳಿ ಭಿಕ್ಷೆ ಬೇಡಿದರೆ ಇಷ್ಟೊಂದು ಹಣ ಇರುತ್ತಾ.?ಬಿಕ್ಷುಕಿ ಬಳಿ ಬ್ಯಾಂಕ್ ಅಕೌಂಟ್, ಕ್ರೆಡಿಟ್ ಕಾರ್ಡ್…!

    ಮಿಳುನಾಡಿನಲ್ಲಿ ನಡೆದ ಘಟನೆ ಬಗ್ಗೆ ಕೇಳಿದರೆ ಎಂಥವರೂ ಶಾಕ್ ಆಗುತ್ತಾರೆ. ಭಿಕ್ಷೆ ಬೇಡುವವರನ್ನು ಕಂಡರೆ ಸಾಮಾನ್ಯವಾಗಿ ಜನರು ಮುಖ ಕಿವುಚುತ್ತಾರೆ. ಕೈಯಲ್ಲಿರುವ ಎರಡು ಮೂರು ರೂಪಾಯಿ ಕೊಟ್ಟು ಮುಂದೆ ಹೋಗುತ್ತಾರೆ. ಹೀಗೆ ಪಡೆದ ಭಿಕ್ಷೆಯ ಹಣವೇ ಇಲ್ಲೊಬ್ಬಮಹಿಳೆಯನ್ನು ಲಕ್ಷಾಧೀಶೆಯನ್ನಾಗಿ ಮಾಡಿದೆ. ಪಾಂಡಿಚೇರಿಯ ದೇವಾಲಯವೊಂದರ ಹೊರಗಡೆ ಭಿಕ್ಷೆ ಬೇಡುತ್ತಿರುವ ವೃದ್ಧೆಯ ಕೈಯಲ್ಲಿ 12 ಸಾವಿರ ರೂ. ಹಾಗೂ ಆಕೆಯ ಬ್ಯಾಂಕ್ ಅಕೌಂಟಿನಲ್ಲಿ ಸುಮಾರು 2 ಲಕ್ಷ ಹಣ ಇರುವುದು ಗುರುವಾರ ಬೆಳಕಿಗೆ ಬಂದಿದೆ. ವೃದ್ಧೆಯನ್ನು ಪಾರ್ವತಮ್ಮ(70)ಎಂದು ಗುರುತಿಸಲಾಗಿದೆ. ಪ್ರತಿ…