inspirational

ಸ್ಲೆಡ್ಜಿಂಗ್ ಸೈತಾನರ ಸೊಕ್ಕು ಮುರಿದ ಪಂದ್ಯ

22

ಸ್ಲೆಡ್ಜಿಂಗ್ ಸೈತಾನರ ಸೊಕ್ಕು ಮುರಿದ ಪಂದ್ಯ

ಪಡಿಕ್ಕಲ್ ಯಾವ್ ಬಸ್ಸನ್ನ ಹತ್ಕೊಂಡು ಬಂದ..? ಅರೆ ಇವ್ನು ರೆಡ್ಡಿಗಾರು ಎಲ್ಲಿಂದ ಬಂದ..? ರಾಣಾ ಇಲ್ಲೇನ್ ಮಾಡ್ತಾ ಇದಾನೆ..? ಧ್ರುವ ಜುರೇಲ್ ಕೂಡ ಆಡ್ತಾ ಇದಾನಾ..? ಅವರು ನೋಡಿದ್ರೆ ಅವರ ಬೆಸ್ಟ್ ಟೀಮ್ ತಂದಿದೆ. ಬೌಲಿಂಗ್ ಲೈನ್ ಅಪ್ ನೋಡಿದರೆ ಎದೆಯೊಳಗೆ ಜಲ್ಲಿ ಮಶೀನ್ ಆನ್ ಆದ ಹಾಗಿದೆ.

ಖವಾಜಾ, ಸ್ಮಿತ್, ಹೆಡ್, ಲಬುಶೇನ್, ಮಾರ್ಶ್, ಕ್ಯಾಪ್ಟನ್ ಕಮ್ಮಿನ್ಸ್, ಸ್ಟಾರ್ಕ್, ಹೆಜಲ್ವುಡ್, ನಥಾನ್ ಲಿನ್ ಯಪ್ಪ.. ಅನುಭವಿಗಳೇ ಎಲ್ ನೋಡಿದರೂ ಕಾಣೋದು. ಮೊದಲ ಮ್ಯಾಚ್ ದೇವರಿಗೆ ಅಂತ ಭಾರತದ ಮೊದಲ ಇನ್ನಿಂಗ್ಸ್ ನೋಡಿ ನನ್ನನ್ನೂ ಸೇರಿ ಅನೇಕರಿಗೆ ಅನಿಸಿರಬಹುದು. ಇದಕ್ಕೆ ಇನ್ನೊಂದು ಕಾರಣ ಟೀಮಲ್ಲಿ ಕಂಡ ಮುಖಗಳು.

ಆದ್ರೆ ಈ ಆಟದಲ್ಲಿ ಏನನ್ನೂ ಬೇಗ ನಿರ್ಧರಿಸಬಾರದು ಅನ್ನೋದನ್ನ ಈ ಹಿಂದೆ ಅನೇಕ ಪಂದ್ಯಗಳು ಸಾಬೀತು ಮಾಡಿವೆ. ಮೊದಲ ಇನ್ನಿಂಗ್ಸಲ್ಲಿ ನಮ್ದು 150..ಆಸ್ಟ್ರೇಲಿಯಾ 104..ಕೊನೆ ವಿಕೆಟಿಗೆ ಬಂದ 25 ರನ್ನುಗಳ ಪಾರ್ಟ್​ನರ್ ಶಿಪ್ ಅತಿ ದೊಡ್ಡದು. ಬುಮ್ರಾ , ರಾಣಾ, ಸಿರಾಜ್ ಎಸೆದಿದ್ದು ಬೆಂಕಿ ಉಂಡೆಗಳನ್ನ. ಎರಡೂ ತಂಡದ ಮೊದಲ ಇನ್ನಿಂಗ್ಸ್ ಸೇರಿಸಿದ್ರೆ ಆಗೋದು 254 ರನ್ಸ್.. ಆದ್ರೆ ಈಗ ಭಾರತ ಗೆದ್ದ ಲೀಡ್ 295 ರನ್ಸ್.. 🔥

ಎರಡನೇ ಇನ್ನಿಂಗ್ಸ್ ತುಂಬಾ ವರ್ಷಗಳ ಕಾಲ ನೆನಪಲ್ಲಿ ಉಳಿಯೋ ಆಟ.. ಇಡೀ ದಿನ ಜೈಸ್ವಾಲ್ ಹಾಗೂ ರಾಹುಲ್ ಆ ದೈತ್ಯ ಬೌಲಿಂಗ್ ಲೈನ್​ ಅಪ್​ನ ಗೋಳಾಡಿಸಿದ್ರಲ್ಲ.. ಜೈಸ್ವಾಲ್ ಅಂತೂ ಬೌಲ್ ಮಾಡಿದ್ರೆ ಬ್ಯಾಟ್ ಮಾಡೋದು ಬಾಕಿ ಟೈಮಲ್ಲಿ ರೋಸ್ಟ್ ಮಾಡೋದು. ಅದು ಸ್ಟಾರ್ಕ್​ಗೆ.. ಆತ್ಮವಿಶ್ವಾಸ ತುಂಬಿ ತುಳುಕ್ತಾ ಇದೆ. ಪಡಿಕ್ಕಲ್ ತನಗಿರೋ ಅನುಭಕ್ಕೆ ತಕ್ಕಂತೆ ಕೊಡುಗೆ ಕೊಟ್ಟ ಅನಿಸ್ತು..

ಬಟ್ ಗರ್ಜಿಸುವಂತೆ ಮಾಡಿದ್ದು ಕೊಹ್ಲಿ ಶತಕ. ಕೊಹ್ಲಿ ಮತ್ತು ಆಸ್ಟ್ರೇಲಿಯಾ ಚಕಾಮಕಿ ತುಂಬಾ ಹಳೆಯದ್ದು.. ಎಂತದ್ದೇ ಅಸ್ತ್ರ ಹೂಡಿದ್ರೂ ಕೊಹ್ಲಿ ವಿಕೆಟ್ ಪಡೆಯೋಕೆ ಆಗಲೆ ಇಲ್ಲ. ಇನ್ನೊಂದು ಕಡೆಯಲ್ಲಿ ನಿತೀಶ್ ರೆಡ್ಡಿಯ ಆಟ.. ಮಕ ಮೂತಿ ನೋಡದೇ ಚಚ್ಚೋದು ಅಂತಾರಲ್ಲ.. ಅದನ್ನೇ ಮಾಡಿದ್ದು.. ಡಿಕ್ಲೇರ್ ಹೊತ್ತಿಗೆ ಆಸ್ಟ್ರೇಲಿಯಾ ಮುಂದೆ ದೊಡ್ಡ ಬೆಟ್ಟ.

ಬೆಟ್ಟ ಹತ್ತೋಕೆ ಬಂದ ಮೊದಲ ನಾಲ್ವರು ಡಬಲ್ ಡಿಜಿಟ್ ಚೆಂದವನ್ನೂ ಕಾಣೋಕೆ ಆಗಲಿಲ್ಲ. ಬುಮ್ರಾ ಸಿರಾಜ್ ಅಬ್ಬರವೇ ಹಾಗಿತ್ತು. ಇಲ್ಲಿ ತನಕ ಆಸ್ಟ್ರೇಲಿಯಾ ಪರ್ತ್ ಸ್ಟೇಡಿಯಂನಲ್ಲಿ ಸೋಲೇ ಕಂಡಿರ್ಲಿಲ್ಲವಂತೆ. ಅದನ್ನೂ ಕೂಡ ಮನೆಗೆ ಬಂದ ನೆಂಟರು ಉಡುಗೊರೆ ಕೊಟ್ಟಿದಾರೆ.

ಈ ಸಮಯದಲ್ಲಿ ಗಂಭೀರ್ ಕೂಡ ನೆನಪಾಗಲೇ ಬೇಕು. ಸೋತಾಗ ಮಾತ್ರ ನೆನಪಿಸಿಕೊಂಡ್ರೆ ಸರಿ ಅನಿಸೋದೇ ಇಲ್ಲ..

ಥ್ಯಾಂಕ್ಯೂ ಟೀಮ್ ಇಂಡಿಯಾ.. ಗೆಲ್ತಾನೆ ಇರೋಣ.. ಬೀಗ್ತಾನೇ ಇರೋಣ ❤️🇮🇳

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಕೇರಳದಲ್ಲಿ ಮತ್ತೆ ನಿಪಾಹ್ ವೈರಸ್ ಪತ್ತೆ, ಓರ್ವ ಆಸ್ಪತ್ರೆಗೆ ದಾಖಲು…….!

    ಕೇರಳದಲ್ಲಿ ಮತ್ತೆ ನಿಪಾಹ್ ವೈರಸ್ ಭೀತಿ ಎದುರಾಗಿದೆ, 23 ವರ್ಷದ ವ್ಯಕ್ತಿಯೊಬ್ಬ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ವರ್ಷ ನಿಪಾಹ್ ವೈರಸ್‌ನಿಂದಾಗಿ 17 ಮಂದಿ ಮೃತಪಟ್ಟಿದ್ದರು. ವೈರಲ್ ಇನ್‌ಫೆಕ್ಷನ್ ಹಾಗೂ ನಿಪಾಹ್ ವೈರಸ್ ಲಕ್ಷಣಗಳಿದ್ದ ಕಾರಣ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ಎರ್ನಾಕುಲಮ್ ಜಿಲ್ಲೆಯ ವೈದ್ಯಾಧಿಕಾರಿ ಡಾ. ಎಂ.ಕೆ.ಕುಟ್ಟಪ್ಪನ್ ತಿಳಿಸಿದ್ದಾರೆ. ಈಗಾಗಲೇ ವ್ಯಕ್ತಿಯ ರಕ್ತದ ಸ್ಯಾಂಪಲ್ ತೆಗೆದು ಎರಡು ಇನ್‌ಸ್ಟಿಟ್ಯೂಟ್‌ ಗಳಿಗೆ ಕಳುಹಿಸಲಾಗಿದೆ.ಯಾರೂ ಆತಂಕಪಡುವ ಅಗತ್ಯವಿಲ್ಲ ವರದಿ ಇಂದು ಕೈಸೇರಲಿದೆ ಎಂದು ತಿಳಿಸಿದ್ದಾರೆ. ಕೆಲವು ದಿನಗಳ ಹಿಂದೆಯೂ ಸಾಕಷ್ಟು…

  • ದೇಶ-ವಿದೇಶ

    ಸೋಶಿಯಲ್ ಮೀಡಿಯಾದಲ್ಲಿ ಎಸ್ಸಿ/ಎಸ್ಟಿ ವ್ಯಕ್ತಿಗಳಿಗೆ ನಿಂದಿಸಿದರೆ ಯಾವ ಶಿಕ್ಷೆ ಗೊತ್ತಾ?ಈ ಲೇಖನಿ ಓದಿ…

    ಪ್ರಸ್ತುತ ದಿನಗಳಲ್ಲಿ ಹೆಚ್ಚಿನ ಜನರು ಅವಲಂಬಿಸಿರುವ ಸೋಸಿಯಲ್ ಮೀಡಿಯಗಳಾದ ಪೇಸ್ಬುಕ್, ವಾಟ್ಸಪ್, ಟ್ವಿಟರ್ ಮುಂತಾದವುಗಳಲ್ಲಿ ಕೆಲವರು ಅವಹೇಳನಕಾರಿ ಬರಹಗಳನ್ನು ಪ್ರಕಟಿಸುವುದು ಸಾಮಾನ್ಯವಾಗಿದೆ.

  • Uncategorized

    ಬಿಸಿಲು ಬಿಸಿಲು ಬಿಸಿಲು…!!!

    ಬಿಸಿಲು,ಬಿಸಿಲು, ಎಲ್ಲಿ ನೋಡಿದರೂ ಬಿಸಿಲ ಬೇಗೆ, ಧಗೆ. ಇಷ್ಟು ದಿನ ಕಣ್ಣಿಗೆ, ಮನಸಿಗೆ ತಂಪಾಗಿದ್ದ ಬೆಂಗಳೂರು, ಈಗ ಬಿರು ಬಸಿಲಿನ ನಾಡಾಗಿದೆ. ಜನರಿಗೆ ಕುಳಿತಲ್ಲಿ ಕೂರಲಾಗದೆ, ನಿಂತಲ್ಲಿ ನಿಲ್ಲಲಾಗದ ಹಾಗೆ ಮಾಡಿದೆ ಈ ಬಿಸಿಲು. ಬೇಸಿಗೆಯು ಶುಭಾರಂಭವಾಗಿ 4 ದಿನ ಆಗಿಲ್ಲ ಆಗಲೇ ಜನರ ಮೈನೀರಿಳಿಸುತ್ತಿದೆ ಈ ಬೇಸಿಗೆ. ತಂಪು ತಂಪಾದ ತಂಪು ಪಾನೀಯಗಳ ಬಳಕೆ ಹೆಚ್ಚಾಗಿದೆ. ಹಾಗೆ ಕಲ್ಲಂಗಡಿ, ಕಿತ್ತಳೆ ಮತ್ತು ಎಳೆನೀರಿನ ಉಪಯೋಗ ಆಗಲೇ ಶುರುವಾಗಿದೆ. ನೀರಿನ ಕಷ್ಟ ಎದುರಾಗಿದೆ. ಪ್ರಾಣಿಗಳು ಪಕ್ಷಿಗಳಿಗೂ ಈ…

  • ಆಯುರ್ವೇದ

    ಆಯುರ್ವೇದ ಮೂಲಕ ಕರೊನಾ ಸೋಂಕು ಗೆದ್ದ ಬ್ರಿಟನ್​ ರಾಜ, ಬೆಂಗಳೂರಿನ ಸೌಖ್ಯದಿಂದ ಚಿಕಿತ್ಸೆ

    ಬೆಂಗಳೂರು ಮೂಲದ ಆರೋಗ್ಯ ರೆಸಾರ್ಟ್ ಆಯುರ್ವೇದ ಮತ್ತು ಹೋಮಿಯೋಪತಿ ಬಳಕೆಯಿಂದ ಕರೋನವೈರಸ್ನ ಬ್ರಿಟಿಷ್ ಸಿಂಹಾಸನದ ಉತ್ತರಾಧಿಕಾರಿಯಾದ ಪ್ರಿನ್ಸ್ ಚಾರ್ಲ್ಸ್ ಅವರನ್ನು ಗುಣಪಡಿಸಿದೆ ಎಂದು ಕೇಂದ್ರ ಆಯುಷ್ ರಾಜ್ಯ ಸಚಿವ ಶ್ರೀಪಾಡ್ ನಾಯಕ್ ಗುರುವಾರ ಹೇಳಿದ್ದಾರೆ.

  • ಸುದ್ದಿ

    ಕೀನ್ಯಾ ನಿಂದ 200 ರೂ ಸಾಲ ತೀರಿಸಲು 30 ವರ್ಷಗಳ ಬಳಿಕ ಭಾರತಕ್ಕೆ ಬಂದ ಭೂಪ…!

    ಔರಂಗಾಬಾದ್, ಜು.11: ಸುಮಾರು ಮೂರು ದಶಕಗಳ ಹಿಂದೆ, 1985-1989ರ ಅವಧಿಯಲ್ಲಿ ಕೀನ್ಯಾ ಸಂಜಾತ ರಿಚರ್ಡ್ ಟೊಂಗಿ ಅವರು ಔರಂಗಾಬಾದ್ ನಗರದ ಮೌಲಾನ ಆಝಾದ್ ಕಾಲೇಜಿನಲ್ಲಿ ಮ್ಯಾನೇಜ್ಮೆಂಟ್ ವಿಷಯದ ವಿದ್ಯಾರ್ಥಿಯಾಗಿದ್ದ ವೇಳೆ ಅವರ ಬಳಿ ಹೆಚ್ಚಿನ ಹಣವಿರಲಿಲ್ಲ. ಆಗ ಅವರಿಗೆ ಸ್ಥಳೀಯ ದಿನಸಿ ಅಂಗಡಿ ಮಾಲಕ ಕಾಶೀನಾಥ್ ಗಾವ್ಲಿ ಎಂಬವರು ಅಲ್ಪಸ್ವಲ್ಪ ಸಹಾಯವನ್ನು ಆಗಾಗ ಮಾಡುತ್ತಿದ್ದರು.ಮುಂದೆ ಶಿಕ್ಷಣ ಪೂರೈಸಿ ರಿಚರ್ಡ್ ಕೀನ್ಯಾಗೆ ಮರಳಿದಾಗ ಕಾಶೀನಾಥ್ ಗೆ ಇನ್ನೂ ರೂ 200 ಕೊಡುವುದು ಬಾಕಿಯಿತ್ತು. ಇದೀಗ ಮೂವತ್ತು ವರ್ಷಗಳ ನಂತರ…

  • ಜ್ಯೋತಿಷ್ಯ

    ದಿನ ಭವಿಷ್ಯ ಶುಕ್ರವಾರ, ಈ ದಿನದ ರಾಶಿ ಭವಿಷ್ಯದ ಜೊತೆಗೆ ನಿಮ್ಮ ಅದೃಷ್ಟದ ಸಂಖ್ಯೆ ತಿಳಿಯಿರಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(22 ಮಾರ್ಚ್, 2019) ನಿಮ್ಮ ಶೀಘ್ರ ಕ್ರಮ ನಿಮ್ಮ ಸುದೀರ್ಘವಾದ ಸಮಸ್ಯೆಯನ್ನು ಪರಿಹರಿಸುತ್ತದೆ. ನೀವು ಜನರು ನಿಮ್ಮಿಂದ…