ಸುದ್ದಿ

ವಾಟ್ಸಪ್‌ನಲ್ಲಿ ‘ಪ್ರೊಫೈಲ್‌ ಫೋಟೊ ಸೇವ್’ ಆಯ್ಕೆ ಇನ್ನಿಲ್ಲ!

58

ಜನಪ್ರಿಯ ಮೆಸೆಜಿಂಗ್‌ ಆಪ್‌ ವಾಟ್ಸಪ್‌ ಸದಾ ಒಂದಲ್ಲೊಂದು ವಿಷಯಕ್ಕೆ ಸುದ್ದಿಯಲ್ಲಿರುತ್ತಲೇ ಇರುತ್ತದೆ. ಇತ್ತೀಚಿಗೆ ಬಳಕೆದಾರರ ಖಾತೆಗಳು ಹ್ಯಾಕ್‌ ಆಗಿ ಭಾರಿ ದೊಡ್ಡ ಸುದ್ದಿ ಆಗಿತ್ತು. ಹಾಗೆಯೇ ತನ್ನ ಅಪ್‌ಡೇಟ್‌ ವರ್ಷನ್‌ಗಳಲ್ಲಿ ನೂತನ ಫೀಚರ್‌ಗಳನ್ನು ಅಳವಡಿಸುತ್ತಲೇ ಸಾಗಿ ಬಂದಿದ್ದ ಕಂಪನಿ, ಇದೀಗ ಸದ್ಯ ಬಳಕೆಯಲ್ಲಿರುವ ವಾಟ್ಸಪ್‌ನ ಫೀಚರ್ ಒಂದಕ್ಕೆ ಬ್ರೇಕ್‌ ಹಾಕಿದ್ದು, ಇದು ಐಓಎಸ್‌ ಬಳಕೆದಾರರಿಗೆ ಅಚ್ಚರಿ ತಂದಿದೆ.

ಹೌದು, ವಾಟ್ಸಪ್‌ ಕಂಪನಿಯು IOS ಬೆಂಬಲಿತ ಐಫೋನ್‌ಗಳಲ್ಲಿ ಪ್ರೊಫೈಲ್‌ ಫೋಟೊಗಳನ್ನು ಸೇವ್‌ ಮಾಡಿಕೊಳ್ಳುವ ಆಯ್ಕೆಯನ್ನು ತೆಗೆದು ಹಾಕಿದ್ದು, ಇನ್ಮುಂದೇ IOS ಡಿವೈಸ್‌ಗಳಲ್ಲಿ ವಾಟ್ಸಪ್‌ ಬಳಸುವವರಿಗೆ ಇತರರ ಪ್ರೊಫೈಲ್‌ ಪೋಟೊಗಳನ್ನು ಸೇವ್‌ ಮಾಡುವ ಅವಕಾಶ ಲಭ್ಯವಾಗುವುದಿಲ್ಲ. ಅಂದಹಾಗೇ ಅಂಡ್ರಾಯ್ಡ್‌ ಮಾದರಿಯ ಓಎಸ್‌ ಬಳಕೆದಾರರಿಗೆ ಈ ಆಯ್ಕೆ ಅನ್ವಯವಾಗುವುದಿಲ್ಲ.ವಾಟ್ಸಪ್‌ ಅಪ್‌ಡೇಟ್‌ ವರ್ಷನ್‌ನಲ್ಲಿ ಪ್ರೊಫೈಲ್‌ ಫೋಟೊ ಡೌನ್‌ಲೋಡ್‌ ಮಾಡಿಕೊಳ್ಳುವ ಅವಕಾಶಕ್ಕೆ ಬ್ರೇಕ್‌ ಬೀಳಲಿರುವ ಮಾಹಿತಿಯು WABetaInfo ತಾಣದಲ್ಲಿ ತಿಳಿಸಲಾಗಿದೆ. ಹಾಗಾದರೇ ವಾಟ್ಸಪ್‌ ಐಓಎಸ್‌ ಬಳಕೆದಾರರಿಗೆ ಮಾತ್ರ ಯಾಕೆ ಪ್ರೊಫೈಲ್‌ ಸೇವ್‌ ಮಾಡುವ ಆಯ್ಕೆ ತೆಗೆದು ಹಾಕಿದೆ ಮತ್ತು ಅಂಡ್ರಾಯ್ಡ್‌ ಓಎಸ್‌ ಬಳಕೆದಾರರಿಗೆ ಏನಾದ್ರು ಬದಲಾವಣೆಗಳಿವೆಯಾ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಅಪ್‌ಡೇಟ್‌ ವರ್ಷನ್‌ನಲ್ಲಿ ಸೇರ್ಪಡೆ ವಾಟ್ಸಪ್‌ ಐಓಎಸ್‌ ವರ್ಷನ್‌ನಲ್ಲಿ ಅಪ್‌ಡೇಟ್‌ ಮಾಡಲಿದ್ದು, ವಾಟ್ಸಪ್‌ನ ಹೊಸ ಐಓಎಸ್‌ ವರ್ಷನ್‌(2.19.60.26) ಬೇಟಾದಲ್ಲಿ ಇತರರ ಪ್ರೊಫೈಲ್‌ ಪೋಟೊಗಳನ್ನು ಸೇವ್‌ ಮಾಡುವ ಅವಕಾಶ ಇನ್ಮುಂದೆ ಸ್ಟಾಪ್‌ ಆಗಲಿದೆ. ವೈಯಕ್ತಿಕ ಖಾತೆಗಳ ಪ್ರೊಫೈಲ್‌ ಫೋಟೊ ಸೇವ್‌ ಆಗಲ್ಲ ಆದರೆ ಗ್ರೂಪ್‌ ಪ್ರೊಫೈಲ್‌ ಫೋಟೊ ಸೇವ್‌ ಮಾಡಬಹುದು.ಪ್ರೊಫೈಲ್‌ ಪೋಟೊ ಸೇವ್‌ ಇನ್ನಿಲ್ಲ ಈ ಹಿಂದೆ ವಾಟ್ಸಪ್‌ ಲಿಸ್ಟ್‌ ನಲ್ಲಿರುವ ಇತರರ ಪ್ರೊಫೈಲ್‌ ಫೋಟೊವನ್ನು ಸೇವ್‌ ಮಾಡಬಹುದಾಗಿತ್ತು. ಆದರೆ ಫೇಸ್‌ಬುಕ್‌ ಒಡೆತನದ ವಾಟ್ಸಪ್‌ ಸಂಸ್ಥೆಯು ತನ್ನ ಹೊಸ ಅಪ್‌ಡೇಟ್‌ ವರ್ಷನ್‌ನಲ್ಲಿ ಪ್ರೊಫೈಲ್‌ ಫೋಟೊ ಸೇವ್‌ ಮಾಡುವ ಆಯ್ಕೆಯನ್ನು ತೆಗೆದು ಹಾಕಿದ್ದು, ಇದು ಕೇವಲ ಐಓಎಸ್‌ ಬಳಕೆದಾರರಿಗೆ ಮಾತ್ರ ಅನ್ವಯಿಸಲಿದೆ.

ಗ್ರೂಪ್‌ ಪ್ರೊಫೈಲ್‌ ಫೋಟೊ ಸೇವ್‌ ವಾಟ್ಸಪ್‌ ಲಿಸ್ಟ್‌ನಲ್ಲಿರುವ ಇತರರ ವೈಯಕ್ತಿಕ ಪ್ರೊಫೈಲ್‌ ಫೋಟೊವನ್ನು ಸೇವ್‌ ಮಾಡುವ ಆಯ್ಕೆ ರದ್ದು ಮಾಡಿದ್ದು, ಆದರೆ ವಾಟ್ಸಪ್‌ ಲಿಸ್ಟ್‌ನಲ್ಲಿರುವ ಗ್ರೂಪ್‌ ಪ್ರೊಫೈಲ್‌ ಫೋಟೊಗಳನ್ನು ಸೇವ್‌ ಮಾಡಬಹುದು ಇದಕ್ಕೆ ಯಾವುದೇ ಕಡಿವಾಣ ಹಾಕಿಲ್ಲ. ಹೀಗಾಗಿ ಐಓಎಸ್‌ ಬಳಕೆದಾರರು ಗ್ರೂಪ್‌ ಪ್ರೊಫೈಲ್‌ ಫೋಟೊಗಳನ್ನು ಸೇವ್‌ ಮಾಡಬಹುದುಅಂಡ್ರಾಯ್ಡ್‌ಗೆ ಅನ್ವಯ ಇಲ್ಲ ವಾಟ್ಸಪ್‌ ಪ್ರೊಫೈಲ್‌ ಪೋಟೊ ಸೇವ್‌ ಮಾಡುವ ಆಯ್ಕೆಯನ್ನು ಕೇವಲ ಐಓಎಸ್‌ ಬಳಕೆದಾರರಿಗೆ ಮಾತ್ರ ರದ್ದು ಮಾಡಿದ್ದು, ಅಂಡ್ರಾಯ್ಡ್‌ ಮಾದರಿಯ ಬಳಕೆದಾರರಿಗೆ ಅನ್ವಯವಾಗುವುದಿಲ್ಲ. ಆಂಡ್ರಾಯ್ಡ್‌ ಓಎಸ್‌ನಲ್ಲಿ ಬದಲಾವಣೆ ಇರುವುದಿಲ್ಲ ಮತ್ತು ವೈಯಕ್ತಿಕ ಮತ್ತು ಗ್ರೂಪ್‌ ಪ್ರೊಫೈಲ್‌ ಫೋಟೊಗಳನ್ನು ಗ್ಯಾಲರಿಗೆ ಸೇವ್‌ ಮಾಡಬಹುದು.
ಕಾರಣ ಏನು? ಐಓಎಸ್‌ ಬಳಕೆದಾರರಿಗೆ ಮಾತ್ರ ವಾಟ್ಸಪ್‌ನಲ್ಲಿ ಇತರರ ವೈಯಕ್ತಿಕ ಖಾತೆಗಳ ಪ್ರೊಫೈಲ್‌ ಫೋಟೊ ಸೇವ್‌ ಮಾಡುವ ಆಯ್ಕೆಗೆ ಕೊಕ್ಕ ನೀಡುವುದಕ್ಕೆ ನಿಖರ ಕಾರಣವೇನು ಎಂಬುದನ್ನು ಅಧಿಕೃತವಾಗಿ ವ್ಯಕ್ತಪಡಿಸಿಲ್ಲ. ಆದರೆ ಐಓಎಸ್‌ನಲ್ಲಿ ಗ್ರೂಪ್‌ಗಳ ಪ್ರೊಫೈಲ್‌ ಫೋಟೊಗಳನ್ನು ಸೇವ್‌ ಮಾಡಬಹುದಾಗಿದೆ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಆರೋಗ್ಯ, ಉಪಯುಕ್ತ ಮಾಹಿತಿ

    ಊಟವನ್ನ ಗಬ-ಗಬ ಅಂತ ತಿನ್ನುವ ಮುಂಚೆ ಈ ಲೇಖನ ಓದಿ…ಮರೆಯದೇ ಶೇರ್ ಮಾಡಿ…

    *ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ* ಈಗ ಏನಿದ್ದರೂ ಎಲ್ಲವೂ ಪಾಸ್ಟ್ ಪಾಸ್ಟ್.   ಹೇಗಾಗಿದೆ ಎಂದರೆ ನೆಮ್ಮದಿಯಾಗಿ ಊಟ ಮಾಡಲು ಸಹ ಸಮಯವಿಲ್ಲದಂತಾಗಿದೆ. ಇದು ಯಾವ ಮಟ್ಟಕ್ಕೆ ಹೋಗಿದೆ ಅಂದ್ರೆ, ಊಟವನ್ನ ತಟ್ಟೆಗೆ ಹಾಕಿದ ಕೂಡಲೇ ಗಬ-ಗಬ ತಿಂದು ಕೈ ತೊಳೆಯುವವರೇ ಹೆಚ್ಚಾಗಿದ್ದಾರೆ. ಆದರೆ ಹೀಗೆ ಊಟವನ್ನ ಅಥವಾ ಆಹಾರವನ್ನ ತಿನ್ನುವುದರಿಂದ ಹಲವು ತೊಂದರೆಗಳನ್ನ ಎದುರಿಸ ಬೇಕಾಗುತ್ತದೆ. ಅವಸರ ಅವಸರವಾಗಿ ತಿನ್ನುವುದರಿಂದ ನಿಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮವಾಗುತ್ತದೆ ಎಂದು ವರದಿಯೊಂದು ತಿಳಿಸಿದೆ. ಇತ್ತೀಚೆಗೆ ಹೊರಬಂದ…

  • ಸುದ್ದಿ

    ಇನ್ನು ಮುಂದೆ ಈ ಸಿಮ್ ಗಳು ಬ್ಯಾನ್; ಬಳಕೆದಾರರೂ ಬೇಗ ಎಚ್ಚೆತ್ತುಕೊಳ್ಳಿ, ಈ ಸುದ್ದಿಯನ್ನು ಓದಿ,.!

    ಪ್ರಸ್ತುತ  ಹಣಕಾಸು ವಿಷಯಕ್ಕೆ ಸಂಬಂಧಿಸಿದಂತೆ ಈ  ವರ್ಷದ ಎರಡನೇ ತ್ರೈಮಾಸಿಕದಲ್ಲಿ ಭಾರತೀಯ ಟೆಲಿಕಾಂ ಆಪರೇಟರ್ ವಡಾಫೋನ್​ ಐಡಿಯಾ​ಗೆ ಶಾಕ್​ ಉಂಟಾಗಿದೆ. ಸಂಸ್ಥೆಗೆ  ಎರಡನೇ ತ್ರೈಮಾಸಿಕದಲ್ಲಿ 50,921 ಕೋಟಿ ರೂ  ನಷ್ಟ ಉಂಟಾಗಿದೆ.ಭಾರತದ ಟೆಲಿಕಾಂ ಸಂಸ್ಥೆಯೊಂದು ಇಷ್ಟೊಂದು ನಷ್ಟ ಅನುಭವಿಸಿರುವುದು ಇದೇ ಮೊದಲ ಭಾರಿ ಎನ್ನಲಾಗಿದೆ. ಭಾರತದ ಮತ್ತೊಂದು ಪ್ರಮುಖ ಟೆಲಿಕಾಂ ನೆಟ್ವರ್ಕ್ ಏರ್ಟೆಲ್ಗೆ 23,045 ಕೋಟಿ ರೂ ನಷ್ಟ ಉಂಟಾಗಿದೆ. ಬಾಕಿ ಮೊತ್ತವನ್ನು ಸರ್ಕಾರಕ್ಕೆ ಪಾವತಿಸಬೇಕು ಎಂದು ಕಳೆದ ತಿಂಗಳು ಸುಪ್ರೀಂಕೋರ್ಟ್ ಆದೇಶ ಹೊರಡಿಸಿತ್ತು. ಈ ಆದೇಶದ…

  • ಜ್ಯೋತಿಷ್ಯ

    ದಿನ ಭವಿಷ್ಯ ಬುಧವಾರ, ಈ ದಿನದ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(6 ಮಾರ್ಚ್, 2019) ನಿಮ್ಮ ಪತ್ನಿಯೊಂದಿಗಿನ ಸಂಬಂಧಗಳನ್ನು ಉತ್ತಮಗೊಳಿಸುವ ಒಂದು ದಿನ. ಕುಟುಂಬದಲ್ಲಿರುವ ಇಬ್ಬರೂ ಅವರ ಸಂಬಂಧದಲ್ಲಿ…

  • ಜ್ಯೋತಿಷ್ಯ

    ನವಿಲು ಗರಿಯನ್ನು ಮನೆಯ ಈ ಜಾಗದಲ್ಲಿ ಇಟ್ಟರೆ ಏನಾಗುತ್ತೆ ಗೊತ್ತಾ..?

    ಹಿಂದೂ ಧರ್ಮದಲ್ಲಿ ನವಿಲು ಗರಿಗೆ ಮಹತ್ವದ ಸ್ಥಾನವಿದೆ. ಕಾರ್ತಿಕನ ವಾಹನ ನವಿಲು ಎನ್ನಲಾಗಿದೆ. ಇಂದ್ರ ಕೂಡ ನವಿಲುಗರಿ ಸಿಂಹಾಸನದ ಮೇಲೆ ಕುಳಿತುಕೊಳ್ಳುತ್ತಿದ್ದನಂತೆ. ಶ್ರೀಕೃಷ್ಣನ ತಲೆ ಮೇಲೂ ನವಿಲು ಗರಿಯಿರುತ್ತದೆ. ನವಿಲು ಗರಿ ಮನೆಯಲ್ಲಿದ್ದರೆ ಸಾಕಷ್ಟು ಲಾಭಗಳಿವೆ. ನವಿಲು ಗರಿ ಮನೆಯ ಸುಖ, ಶಾಂತಿ, ಸಮೃದ್ಧಿಗೆ ಕಾರಣವಾಗುತ್ತದೆ. ಶುಕ್ರವಾರದ ದಿನ ನವಿಲು ಗರಿಯನ್ನು ಮನೆಗೆ ತನ್ನಿ. ಅದನ್ನು ದೇವರ ಮನೆಯಲ್ಲಿಡಿ. ದೇವರ ಮನೆಯಲ್ಲಿ ಪೂಜೆ ವೇಳೆ ಗಣೇಶ, ಈಶ್ವರ, ಲಕ್ಷ್ಮಿ, ಸರಸ್ವತಿ ಮತ್ತು ಹನುಮಂತನ ಮೂರ್ತಿ ಅಥವಾ ಫೋಟೋ…

  • ಸುದ್ದಿ

    ದಯಮಾಡಿ ಬಿಟ್ಟುಬಿಡಿ ಎಂದು ಪ್ರಧಾನಿ ನರೇಂದ್ರ ಮೋದಿಗೆ ಕೇಳಿಕೊಂಡ ನಟ ಪ್ರಕಾಶ್ ರೈ ಪತ್ನಿ..!

    ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಸ್ವತಂತ್ರ್ಯ ಅಭ್ಯರ್ಥಿ, ಖಳನಟ ಪ್ರಕಾಶ್ ರೈ ಅವರ ಪತ್ನಿ ದಯಮಾಡಿ ಬಿಟ್ಟುಬಿಡಿ ಎಂದು ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನಟ-ನಟಿಯರನ್ನು ಬಳಸಿಕೊಂಡು ಪ್ರಚಾರ ಮಾಡುತ್ತಿರುವ ಬಗ್ಗೆ ಪ್ರಕಾಶ್ ರೈ ಪತ್ನಿ ಪೋನಿ ಟ್ವೀಟ್ ಮಾಡಿದ್ದಾರೆ. ಬಾಲಿವುಡ್ ಆಕ್ಷನ್ ಕಿಂಗ್ ಅಕ್ಷಯ್ ಕುಮಾರ್ ಕೆಲ ದಿನಗಳ ಹಿಂದೆ ಪ್ರಧಾನಿ ಮೋದಿಯೊಂದಿಗೆ ಮಾಡಿದ ರಾಜಕಿಯೇತ್ತರ ಸಂದರ್ಶನ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಪೋನಿ ಪ್ರಧಾನಿಗೆ ಟ್ವೀಟ್…

  • ಸುದ್ದಿ

    ಕರೋನ ಸಮಸ್ಯೆ ಹೀಗೆ ಇದ್ದರೆ ಚಿನ್ನದ ಬೆಲೆ ಎಷ್ಟಾಗಲಿದೆ. ಮಾರ್ಕೆಟ್ ತಜ್ಞರು ಹೇಳಿದ್ದೇನು ನೋಡಿ.!

    ಭಾರತದಲ್ಲಿ ಕೊರೋನಾ ಸೋಂಕು ಪ್ರಕರಣ ದಿನೇ ದಿನೇ ಹೆಚ್ಚುತ್ತಲೇ ಇದೆ, ಭಾರತದಲ್ಲಿ ಕೊರೋನಾ ಈಗ ಸ್ಟೇಜ್ 2 ಹಂತದಲ್ಲಿದೆ ಎಂದು ತಜ್ಞರು ತಿಳಿಸಿದ್ದಾರೆ. ಸ್ಟೇಜ್ 4 ಗೆ ಕೊರೋನಾ ಆಕ್ರಮಿಸಿದರೆ ಖಂಡಿತ ದುರಂತ ಸಂಭವಿಸಲಿದೆ ಎಂದು ಹಲವಾರು ಮಂದಿ ಅಭಿಪ್ರಾಯ ಪಟ್ಟಿದ್ದಾರೆ, ಚೀನಾ ಈಗಾಗಲೇ ಈ ಸಂಕಷ್ಟದಿಂದ ಪಾರಾಗಿದೆ ಮತ್ತು ಭಾರತ ಈಗಾಗಲೇ ಹಲವಾರು ಮುನ್ನೆಚ್ಚರಿಕಾ ಕ್ರಮವನ್ನು ಕೈಗೊಂಡಿದೆ. ಇಷ್ಟೇ ಅಲ್ಲದೆ ಕೊರೋನಾ ಅಬ್ಬರಕ್ಕೆ ಈಗಾಗಲೇ ಆರ್ಥಿಕ ವಹಿವಾಟು ಕುಸಿದು ಬಿದ್ದಿದೆ, ಕೇವಲ ಏಳು ದಿನಗಳಲ್ಲಿ ಅಂತರದಲ್ಲಿ…