ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಂಬಲೇಬೇಕಾದ ಆದರೆ ನಂಬಲು ಸಾಧ್ಯವೇ ಇಲ್ಲದ ಸತ್ಯವಿದು. ವೈಷ್ಣವ ಪರಂಪರೆಯ ದಾರ್ಶನಿಕರಲ್ಲಿ ಒಬ್ಬರಾದ ವಿಶಿಷ್ಟಾದ್ವೈತ ಪ್ರತಿಪಾದಕ, ಸನಾತನ ಧರ್ಮ ರಕ್ಷಕ ಭಗವಾನ್ ರಾಮಾನುಜಾಚಾರ್ಯರ ಮೂಲ ಶರೀರವನ್ನು ಕಳೆದ 884 ವರ್ಷಗಳಿಂದ ಜೋಪಾನವಾಗಿಡಲಾಗಿದೆ!! ತಮ್ಮ ಆರಾಧ್ಯ ರಾಮಾನುಜಾಚಾರ್ಯರ ಶರೀರವನ್ನು ಇನ್ನೂ ಸುಸ್ಥಿತಿಯಲ್ಲೇ ಇಡಲಾಗಿದೆ ಎನ್ನುವ ವಿಚಾರವೇ ಹೆಚ್ಚಿನ ವೈಷ್ಣವರಿಗೆ ಗೊತ್ತಿಲ್ಲ. ತಿರುಚರಾಪಳ್ಳಿಯ ಶ್ರೀರಂಗಮ್ ನ ರಂಗನಾಥ ಸ್ವಾಮಿ ಮಂದಿರದಲ್ಲಿ ರಾಮಾನುಜಾಚಾರ್ಯರ ಮೂಲ ಶರೀರವನ್ನು ಇಡಲಾಗಿದೆ.
ವೈಯಕ್ತೀಕರಣ ತತ್ತ್ವಶಾಸ್ತ್ರದ ದೃಢವಾದ ಪ್ರತಿಪಾದಕರಾದ ಆಚಾರ್ಯರು ಭಗವಂತ ಮತ್ತು ವೈಯಕ್ತಿಕ ಆತ್ಮಗಳು ಗುಣಾತ್ಮಕವಾಗಿ ಒಂದೇ ಆದರೂ, ಅವುಗಳ ನಡುವೆ ವ್ಯತ್ಯಾಸವಿದೆ, ಏಕೆಂದರೆ ಭಗವಂತ ಅನಂತ ಮತ್ತು ಜೀವಂತ ಘಟಕಗಳು ಅನಂತ ಸೂಕ್ಷ್ಮ ಎನ್ನುವುದನ್ನು ತಮ್ಮ ಅಪಾರ ಬುದ್ದಿ ಮತ್ತೆಯ ಮೂಲಕ ಜಗತ್ತಿಗೆ ಸಾರಿದರು. ಭಾರತದ ಉದ್ದಗಲಕ್ಕೂ ವ್ಯಾಪಕವಾಗಿ ಪ್ರಯಾಣ ಬೆಳೆಸಿ ಆಚಾರ್ಯರು ವ್ಯಕ್ತಿಗತವಾದವನ್ನು ಬೋಧಿಸಿ, ಏಕತಾವಾದ ತತ್ತ್ವಶಾಸ್ತ್ರದ ಬಗ್ಗೆ ಚರ್ಚೆಗಳನ್ನೂ ಕೈಗೊಂಡಿದ್ದರು. ವೇದಾಂತ-ಸೂತ್ರದ ಕುರಿತಾದ ಅವನ ವ್ಯಾಖ್ಯಾನವನ್ನು ಶ್ರೀ-ಭಾಸ್ಯ ಎಂದು ಕರೆಯಲಾಗುತ್ತದೆ. ಭಾರತದಲ್ಲಿ ವೈಶ್ಣವ ಪರಂಪರೆಯ ಎಪ್ಪತ್ತನಾಲ್ಕು ಕೇಂದ್ರಗಳನ್ನು ಸ್ಥಾಪಿಸಿ ಏಳು ನೂರು ಸನ್ಯಾಸಿಗಳು, ಹನ್ನೆರಡು ಸಾವಿರ ಬ್ರಹ್ಮಚಾರಿಗಳು, ಸಾವಿರಾರು ರಾಜ ಮನೆತನ ಮತ್ತು ಶ್ರೀಮಂತ ಭೂಮಾಲೀಕರು ಸೇರಿದಂತೆ ಮೂರು ನೂರು ಕೆಟ್ಟಿ- ಅಮ್ಮನಿ ಮಹಿಳೆಯರಿಗೆ ಸಂನ್ಯಾಸ ದೀಕ್ಷೆ ನೀಡಿ ಧರ್ಮ ರಕ್ಷಣೆಯ ಕಾರ್ಯ ಕೈಂಗೊಡರು ಆಚಾರ್ಯ ರಾಮನುಜರು.
ತಮ್ಮ120 ವರ್ಷಗಳ ಜೀವಿತಾವಧಿಯಲ್ಲಿ 80 ವರ್ಷಗಳನ್ನು ಆಚಾರ್ಯರು ಶ್ರೀರಂಗಮ್ ನಲ್ಲೇ ಕಳೆದಿರುತ್ತಾರೆ. ಶ್ರೀರಂಗಮ್ ನ ರಂಗನಾಥ ಸ್ವಾಮಿ ಸನ್ನಿಧಾನದಲ್ಲಿ 1137 ರಲ್ಲಿ ರಾಮಾನುಜರು ದೈವಾಧೀನರಾಗುತ್ತಾರೆ. ಸಮಾಧಿಯ ಬಳಿಕ ಇವರ ಶರೀರವನ್ನು ಪಚ್ಚೆ ಕರ್ಪೂರ, ಚಂದನ ಮತ್ತು ಕುಂಕುಮದ ವಿಶೇಷ ಲೇಪನ ಬಳಸಿ ಸಂರಕ್ಷಿಸಲಾಗಿದೆ ಎಂದರೆ ಆಶ್ಚರ್ಯವಾಗುತ್ತದೆ! ಶರೀರಕ್ಕೆ ಯಾವುದೇ ತೆರನಾದ ರಾಸಯನಿಕ ಲೇಪನಗಳನ್ನು ಬಳಸಲಾಗಿಲ್ಲ. ಬಲ್ಲವರ ಪ್ರಕಾರ ಕಳೆದ 884 ವರ್ಷಗಳಿಂದ ವರ್ಷಕ್ಕೆ ಎರಡು ಬಾರಿ ಈ ಲೇಪವನ್ನು ಶರೀರಕ್ಕೆ ಲೇಪಿಸಲಾಗುತ್ತದೆ. ಈ ಲೇಪದ ಕಾರಣ ಆಚಾರ್ಯರ ಶರೀರ ಸಂಪೂರ್ಣ ಕೇಸರಿ ವರ್ಣಕ್ಕೆ ಪರಿವರ್ತಿತವಾಗುತ್ತದೆ.
ರಂಗನಾಥ ಸ್ವಾಮಿ ಮಂದಿರದಲ್ಲಿ ರಾಮಾನುಜಾಚಾರ್ಯರ ಮೂರ್ತಿಯ ಹಿಂದುಗಡೆ ಅವರ ಮೂಲ ಶರೀರವನ್ನು ಇಡಲಾಗಿದೆ. ಸರ್ವ ಸಮಯದಲ್ಲೂ ಭಕ್ತಾದಿಗಳು ದರ್ಶನ ಪಡೆಯುವ ಅವಕಾಶವನ್ನು ಹೊಂದಿದ್ದಾರೆ. ಸ್ವಯಂ ರಂಗನಾಥ ಸ್ವಾಮಿಯ ಆಜ್ಞಾನುಸಾರ ಶರೀರವನ್ನು ದಕ್ಷಿಣ-ಪಶ್ಚಿಮಾಭಿಮುಖವಾಗಿ ಇಡಲಾಗಿದೆ ಎಂದು ಹೇಳಲಾಗುತ್ತದೆ. ಈಜಿಪ್ಟಿನ ಮಮ್ಮಿ ಮತ್ತು ಗೋವಾದ ಕ್ಸೇವಿಯರ್ ನ ಶರೀರಗಳನ್ನು ಸಂರಕ್ಷಿಸಲು ರಾಸಾಯನಿಕಗಳನ್ನು ಬಳಸಲಾಗಿದೆ. ಆದರೆ ರಾಮಾನುಜಾಚಾರ್ಯರ ಶರೀರವನ್ನು ಕೇವಲ ಕರ್ಪೂರ, ಚಂದನ ಮತ್ತು ಕುಂಕುಮ ಮಿಶ್ರಣದ ಲೇಪದಿಂದ ಸಂರಕ್ಷಿಸಿರುವುದು ಬಿಡಸಲಾಗದ ಕಗ್ಗಂಟಾಗಿ ವಿಜ್ಞಾನಿಗಳಿಗೂ ತಲೆನೋವಾಗಿದೆ.
ಭಗವಂತನ ಲೀಲೆ ಭಗವಂತನೇ ಬಲ್ಲ, ಹುಲು ಮಾನವರಿಗೆ ಆತನ ಮಹಿಮೆ ತಿಳಿಯುವುದೇ? ಈ ಶರೀರದ ಇನ್ನೂ ಒಂದು ವಿಶಿಷ್ಟತೆ ಎಂದರೆ ಇದು ಪದ್ಮಾಸನ ಸ್ಥಿತಿಯಲ್ಲಿದ್ದು ಉಪದೇಶ ಮುದ್ರಾ ಭಂಗಿಯಲ್ಲಿದೆ. ಪ್ರಪಂಚದಾದ್ಯಂತ ಇರುವ ಮಮ್ಮಿಗಳು ನಿದ್ರಾ ಭಂಗಿಯಲ್ಲಿರುತ್ತವೆ. ಆದರೆ ರಾಮಾನುಜಾಚಾರ್ಯರ ಶರೀರ ಉಪದೇಶ ಮುದ್ರಾ ಭಂಗಿಯಲ್ಲಿದೆ. ಕೈಗಳ ಉಗುರುಗಳ ಮೂಲಕ ಇದು ಮೂಲ ಶರೀರ ಹೌದೋ ಅಲ್ಲವೋ ಎಂದು ಪರೀಕ್ಷಿಸಬಹುದೆನ್ನುತ್ತಾರೆ ಭಕ್ತರು. ಒಬ್ಬ ವ್ಯಕ್ತಿಯ ಮೂಲ ಶರೀರವನ್ನು ಸಂರಕ್ಷಿಸಿ ದೇವಸ್ಥಾನದೊಳಗೆ ಇಡಲಾಗಿರುವ ಜಗತ್ತಿನ ಏಕೈಕ ಉದಾಹರಣೆ ಇದು ಎಂದರೆ ತಪ್ಪಾಗಲಾರದು.
ಭಾರತೀಯ ಸನಾತನ ಪರಂಪರೆಯ ಮೂಲ ಸ್ಥಂಭಗಳಲ್ಲಿ ಒಬ್ಬರಾದ ರಾಮಾನುಜರ ಮೂಲ ಶರೀರ ರಂಗನಾಥ ಮಂದಿರಲ್ಲಿರುವ ವಿಚಾರ ಪ್ರಚಾರದ ಕೊರತೆಯಿಂದ ಪ್ರಪಂಚಕ್ಕೆ ತಿಳಿದೇ ಇಲ್ಲ. ವಿಜ್ಞಾನಕ್ಕೂ ಸವಾಲಾಗುವ ಇಂತಹ ಅಭೇಧ್ಯ ವಿಚಾರಗಳಿರುವುದರಿಂದಲೇ ಸನಾತನದ ಬಗ್ಗೆ ಇನ್ನಷ್ಟು ಮತ್ತಷ್ಟು ಹೆಮ್ಮೆ ಮೂಡುತ್ತದೆ. ಪರಮ ಪೂಜ್ಯ ಮಹಾ ಮಹಿಮರು ಹುಟ್ಟಿದಂತಹ ಸನಾತನ ಧರ್ಮದಲ್ಲಿ ನಾವು ಹುಟ್ಟಿರುವುದೇ ನಮ್ಮ ಸೌಭಾಗ್ಯ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕಳೆದ 19 ವರ್ಷಗಳಲ್ಲಿ ಉಭಯ ತಂಡಗಳ ನಡುವೆ 128 ಏಕದಿನ ಪಂದ್ಯ ನಡೆದಿವೆ. ಆದರೆ, ಐಸಿಸಿ ಆಯೋಜನೆಯ ಏಕದಿನ ಟೂರ್ನಿಯೊಂದರ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತ-ಪಾಕಿಸ್ತಾನ ತಂಡಗಳು ಫೈನಲ್ನಲ್ಲಿ ಭಾನುವಾರ ಎದುರಾಗುತ್ತಿವೆ.
ತನ್ನ ಸೊಸೆಗೆ ಲೈಂಗಿಕ ಕಿರುಕಳ ನೀಡಿದ ಆರೋಪದ ಮೇಲೆ 50 ವರ್ಷದ ಆಟೋ ಚಾಲಕನನ್ನು ಮುಂಬೈ ವಿಹಾರ್ ಪೊಲೀಸರು ಬಂಧಿಸಿದ್ದಾರೆ. ಮಾವನಿಂದಲೇ ಶೋಷಣೆ ಆಗುತ್ತಿರುವ ಬಗ್ಗೆ ಮಹಿಳೆ ತನ್ನ ಗಂಡನ ಬಳಿ ಹೇಳಿಕೊಂಡಿದ್ದಳು. ಆದರೆ ಗಂಡ ಆಕೆಯ ಮಾತನ್ನು ನಂಬಿರಲಿಲ್ಲ. ಹಾಗಾಗಿ ಮಹಿಳೆ ಸಾಕ್ಷಿ ಸಮೇತ ಮಾವನನ್ನು ಹಿಡಿದಕೊಡುವ ನಿರ್ಧಾರಕ್ಕೆ ಬಂದಿದ್ದರು. ಅಡುಗೆ ಕೋಣೆಯಲ್ಲಿ ಮೊಬೈಲ್ ಕ್ಯಾಮರಾ ಫಿಕ್ಸ್ ಮಾಡಿದಳು. ಮಾವ ಆಕೆಯ ಮೇಲೆ ಶೋಷಣೆ ಮಾಡಲು ಆಗಮಿಸಿದ. ಆಕೆ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಬಂದವ ಸೊಸೆಯ…
ಕೇವಲ ಮೂರೂ ನಿಮಿಷದ ಈ ಅನಿಮೇಟೆಡ್ ವಿಡಿಯೋ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.ನಾವು ಮಾಡುವ ಒಂದು ಚಿಕ್ಕ ಸಹಾಯ ನಮ್ಮ ಜೀವನದಲ್ಲಿ ಏನೆಲ್ಲಾ ಬದಲಾವಣೆ ತರುತ್ತೆ ಎಂಬುದಕ್ಕೆ ಈ ವಿಡಿಯೋನೆ ಸಾಕ್ಷಿ. ಪ್ಯಾಶನ್’ಸ್ ಕೆಯ್ರ & ಕಾನ್ಸ್ಟಂಟೈನ್ ಅನ್ನುವವರು ಈ ಅದ್ಭುತವಾದ ವಿಡಿಯೋ ನಿರ್ದೇಶನ ಮಾಡಿದ್ದಾರೆ. ತಪ್ಪದೆ ಕೊನೆಯವರೆಗೂ ನೋಡಿ… ಒಂದು ಒಳ್ಳೆ ಮೆಸೇಜ್ ಹೊಂದಿರೋ ಈ ವಿಡಿಯೋವನ್ನು ನೋಡಿ ಮತ್ತು ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ…
ಐತಿಹಾಸಿಕ ಬೆಂಗಳೂರು ನಗರವನ್ನು ಸ್ವಚ್ಛ ಹಾಗೂ ಸುಂದರವಾಗಿ ಉಳಿಸಿಕೊಳ್ಳುವ ಪ್ರಯತ್ನಗಳು ಇತ್ತೀಚಿಗೆ ಹೆಚ್ಚುತ್ತಿದ್ದು ಇಂತಹುದೇ ಅಭಿಯಾನವೊಂದರ ಭಾಗವಾಗಿ ಯುವಬ್ರಿಗೇಡ್ ಕೆಂಪೇಗೌಡ ನಗರಿಯ ಐತಿಹಾಸಿಕ ವೃಷಭಾವತಿ ನದಿ ಉಳಿಸಲು ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ. ಯುವಬ್ರಿಗೇಡ್ ನ ಈ ಪ್ರಯತ್ನ ಕ್ಕೆ ಗೋಲ್ಡನ್ ಸ್ಟಾರ್ ಗಣೇಶ ಕೈಜೋಡಿಸಿದ್ದು, ಇದೇ ಸಪ್ಟೆಂಬರ್ ೨೨ ರಂದು ಭಾನುವಾರ ನಡೆಯುವ ಮ್ಯಾರಥಾನ್ ನಲ್ಲಿ ಪಾಲ್ಗೊಳ್ಳಲಿದ್ದಾರೆ. ಸಪ್ಟೆಂಬರ್ ೨೨ ರಂದು ಭಾನುವಾರ, ವೃಷಭಾವತಿ ಸ್ವಚ್ಛತೆ ಗಾಗಿ ಕೆಂಗೇರಿ ಗಣಪತಿ ದೇವಾಲಯದಿಂದ ಬೆಂಗಳೂರು ವಿವಿವರೆಗೆ ಮ್ಯಾರಥಾನ್ ನಡೆಯಲಿದೆ….
ಕರ್ನಾಟಕದಿಂದ ತಯಾರಾಗುತ್ತಿರುವ ಬಹು ವೆಚ್ಚದಾಯಕ ಸಿನಿಮಾ ಕೆಜಿಎಫ್ ಸಿನಿಮಾಇತ್ತೀಚಿನ ಸುದ್ದಿ ಆಗಿದೆ.ಮಾಸ್ಟರ್ ಪೀಸ್ ಮತ್ತು ಮಿ. ಅಂಡ್ ಮಿಸಸ್ ರಾಮಾಚಾರಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ತಮ್ಮ ಮನೋಜ್ಞ ಅಭಿನಯದ ಮೂಲಕ ಸ್ಯಾಂಡಲ್ ವುಡ್ ಹಾಟ್ ಫೇವರಿಟ್ ನಟ ಯಶ್ ಅಭಿನಯದ ಕೆಜಿಎಫ್ ಸಿನಿಮಾ 2 ಭಾಗವಾಗಿ ತೆರೆಕಾಣಲಿದೆ.
ಸ್ನೇಹಿತರೆ ನಾವು ತೋರಿಸುತ್ತಿರುವ ಈ ವ್ಯಕ್ತಿಯ ಹೆಸರು ಗುಮ್ಮಡಿ ನರಸಯ್ಯ, ಇವರು ತೆಲಂಗಾಣ ರಾಜ್ಯದ ಖಮ್ಮಮ್ ಜಿಲ್ಲೆಯ ಎಲ್ಲಂದು ಕ್ಷೇತ್ರದಲ್ಲಿ ಅಡಿಯೂ ಭಾರಿ MLA ಆಗಿ ಗೆದ್ದು ಜನರಿಗೆ ಸೇವೆಯನ್ನ ಸಲ್ಲಿಸಿರುವ ಮಹಾನ್ ವ್ಯಕ್ತಿ. ಇವರು MLA ಆಗಿದ್ದಾಗ ಕೋಟಿಗಟ್ಟಲೆ ಹಣವನ್ನ ಸಂಪಾದನೆ ಮಾಡುವ ಅವಕಾಶ ಇದ್ದರೂ ಕೂಡ MLA ನರಸಯ್ಯನವರು ನನಗೆ ಹಣ ಬೇಡ ಜನರ ಪ್ರೀತಿ ಬೇಕು ಎಂದು 25 ವರ್ಷ ಅಧಿಕಾರದಲ್ಲಿ ಇದ್ದರೂ ಕೂಡ ಒಂದೇ ಒಂದು ರೂಪಾಯಿಯನ್ನ ಕೆಟ್ಟ ದಾರಿಯಲ್ಲಿ ಸಂಪಾದನೆ…