ಸುದ್ದಿ

ಮನೆಗೆ ಹೋದ ದಿವಾಕರ್ ಪತ್ನಿಯಿಂದ ಈ ಸುದ್ದಿ ಕೇಳಿ ಶಾಕ್ ಆದ್ರು..!ಏನದು ಸುದ್ದಿ ಗೊತ್ತಾ..?

663

‘ಬಿಗ್ ಬಾಸ್ ಕನ್ನಡ ಸಂಚಿಕೆ 5’ ಮುಕ್ತಾಯವಾಗಿದೆ. ಎಲ್ಲರೂ  ಜಯರಾಂ ಕಾರ್ತಿಕ್(ಜೆಕೆ) ಅವರಿಗೆ ‘ಬಿಗ್ ಬಾಸ್ ಪಟ್ಟ ಸಿಗಬಹುದು, ಎಂದುಕೊಂಡಿದ್ದವರಿಗೆ ಶಾಕ್ ನೀಡಿದ್ದಾನೆ ಬಿಗ್ ಬಾಸ್.ತಮ್ಮ ಗಾಯನದಿಂದಲೇ ಮೋಡಿ ಮಾಡಿದ ಸಂಗೀತ ಮಾಂತ್ರಿಕ ಚಂದನ್ ಶೆಟ್ಟಿ ಬಿಗ್ ಬಾಸ್ ವಿನ್ನರ್ ಆಗಿ ಜಯಗಳಿಸಿದ್ದಾರೆ.ಕಾಮಾನ್ ಮ್ಯಾನ್ ಆಗಿ ‘ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟ ದಿವಾಕರ್ ರನ್ನರ್ ಆಪ್ ಆಗಿ ಹೊರಬಂದಿದ್ದಾರೆ.

ಸಾಮಾನ್ಯ ಸೇಲ್ಸ್ ಮ್ಯಾನ್ ಆಗಿ ಜೀವನ ನಡೆಸುತ್ತಿದ್ದ ದಿವಾಕರ್ ಬಿಗ್ ಬಾಸ್ ನ ಕೊನೆಯವರೆಗೂ ಉಳಿದು ರನ್ನರ್ ಆಪ್ ಆಗುತ್ತಾರೆ ಎಂದು ಯಾರು ಕೂಡ ಮೊದಲಿಗೆ ಊಹಿಸಿರಲಿಲ್ಲ.

ಇಲ್ಲಿ ಓದಿ :-ದಿವಾಕರ್’ಗೆ ಕೇವಲ ಒಂದು ಲಕ್ಷ ಕೊಟ್ಟಿದ್ದು ಸರಿಯೇ..?ಯಾಕೆ ಹೀಗಾಯ್ತು ಗೊತ್ತಾ..?

ಜೀವನದಲ್ಲಿ ತುಂಬಾ ಕಷ್ಟಪಟ್ಟಿದ್ದಾರಂತೆ ದಿವಾಕರ್…

ಒಂಬತ್ತು ವರ್ಷಗಳಿಂದ ಸೇಲ್ಸ್ ಮ್ಯಾನ್ ಕೆಲಸ ಮಾಡುತ್ತಿದ್ದೇನೆ. ಜೀವನದಲ್ಲಿ ತುಂಬಾ ಕಷ್ಟ ಪಟ್ಟಿದ್ದೇನೆ. ಜೀವನ ನಡೆಸಲು ಏನೇನು ಕೆಲಸ ಮಾಡಬೇಕೋ, ಎಲ್ಲವನ್ನೂ ಮಾಡಿದ್ದೇನೆ. ಎಮ್ಮೆ ಮೇಯಿಸಿದ್ದೇನೆ. ಕೂಲಿ, ಗಾರೆ ಕೆಲಸ ಮಾಡಿದ್ದೇನೆ. ಹೊಟ್ಟೆ ಹಸಿವು ಆದಾಗ ಭಿಕ್ಷೆ ಕೂಡ ಬೇಡಿದ್ದೇನೆ” ಎಂದು ದಿವಾಕರ್ ಹೇಳಿಕೊಂಡಿದ್ದರು.

ಕಾಮಾನ್ ಮ್ಯಾನ್’ನಿಂದ ಸೆಲೆಬ್ರೆಟಿವರೆಗು…

ಆದ್ರೆ, ಬಿಗ್ ಬಾಸ್ ಬರುವುದಕ್ಕೆ ಮುಂಚೆ ಊರೂರು ಸುತ್ತಿ ಸೇಲ್ಸ್ ಮ್ಯಾನ್ ಆಗಿ ತೈಲ ಮಾರಾಟ ಮಾಡುತ್ತಿದ್ದ ದಿವಾಕರ್, ಸದ್ಯ ಇಡೀ ಕರ್ನಾಟಕಕ್ಕೆ ‘ಬಿಗ್ ಬಾಸ್’ ಮೂಲಕ ಚಿರಪರಿಚಿತರಾಗಿಬಿಟ್ಟಿದ್ದಾರೆ.

ಘಟಾನುಘಟಿಗಳನ್ನೇ ಹಿಂದೆ ಹಾಕಿ 106 ದಿನ ‘ಬಿಗ್ ಬಾಸ್’ ಮನೆಯಲ್ಲಿ ಇದ್ದು ಕೊನೆಗೆ ಖ್ಯಾತಿ, ಜನಪ್ರಿಯತೆ ಜೊತೆಗೆ ಒಂದು ಲಕ್ಷ ರೂಪಾಯಿ ಬಹುಮಾನ ಹಣ ಮತ್ತು ರನ್ನರ್-ಅಪ್’ಯೊಂದಿಗೆ ತಮ್ಮ ಕುಟುಂಬವನ್ನು ಸೇರಿಕೊಂಡಿದ್ದಾರೆ.

ಮನೆಗೆ ಹೋದ ದಿವಾಕರ್’ಗೆ ಹೆಂಡತಿಯಿಂದ…

ಖುಷಿಯ ಅಲೆಯಲ್ಲಿ, ರನ್ನರ್ ಆಪ್ ಟ್ರೋಪಿ ಹಿಡಿದು ಮನೆಗೆ ಹೋದ ದಿವಾಕರ್’ಗೆ ಅವರ ಪತ್ನಿ ಮಮತಾ ಅವರ ಕಡೆಯಿಂದ ಶಾಕಿಂಗ್ ನ್ಯೂಸ್ ಕಾಡಿತ್ತು. ಒಂದು ಕಡೆ ವಿನ್ನರ್ ಆಗಬೇಕಿದ್ದ ದಿವಾಕರ್ ರನ್ನರ್ ಆಪ್ ಆಗಿದ್ದು ಬೇಸರ ತಂದಿದ್ದರೂ, ಅವರಿಗೆ ಬೇರೆಯದೇ ವಿಷಯದಲ್ಲಿ ತುಂಬಾ ಬೇಸರವಾಗಿತ್ತು.

ದಿವಾಕರ್ ರವರಿಗೆ ಈಗಾಗಲೇ ಒಬ್ಬ ಗಂಡು ಮಗು ಇದ್ದಾನೆ.ಆದ್ರೆ ದಿವಾಕರ್ ರವರಿಗೆ ಹೆಣ್ಣು ಮಕ್ಕಳೆಂದರೆ ಪಂಚಪ್ರಾಣ.ಈ ವಿಚಾರವಾಗಿಯೇ ಬೇರೆಯದೇ ಸುದ್ದಿ ನಿರೀಕ್ಷೆ ಮಾಡಿದ್ದ ದಿವಾಕರ್’ಗೆ ಅಲ್ಲಿ ಕಹಿ ಸುದ್ದಿ ಕಾಡಿತ್ತು..!ಅದು ಏನು ಗೊತ್ತಾ…

ಈ ಸುದ್ದಿ ಕೇಳಿ ಶಾಕ್ ಆದ್ರು ದಿವಾಕರ್..!

ದಿವಾಕರ್ ಬಿಗ್ ಬಾಸ್ ಮನೆಯೊಳಗೆ ಹೋಗುವ ಮುನ್ನ ಅವರ ಹೆಂಡತಿ ಮಮತಾ ಎರಡನೇ ಮಗುವಿಗಾಗಿ ಗರ್ಭಿಣಿ ಯಾಗಿದ್ದರು.ಆದರೆ ದಿವಾಕರ್ ಬಿಗ್ ಬಾಸ್ ಮನೆಯಲ್ಲಿದ್ದಾಗ , ಪತ್ನಿ ಮಮತಾರವರಿಗೆ ಅನಾರೋಗ್ಯ ಉಂಟಾಗಿ ಗರ್ಭಪಾತವಾಗಿತ್ತು.ಆದ್ರೆ ಈ ವಿಷಯ ದಿವಾಕರ್’ಗೆ ತಿಳಿಸಿರಲಿಲ್ಲ.ಪತ್ನಿ ಮಮತಾ ಬಿಗ್ ಬಾಸ್ ಮನೆಯೊಳಗೆ ಹೋಗಿದ್ದಾಗ ಕೂಡ ಈ ವಿಷಯದ ಬಗ್ಗೆ ತಿಳಿಸಿರಲಿಲ್ಲ.

ಪತ್ನಿ ಹೇಳಿದ ಸತ್ಯ…

ಹೌದು,ದಿವಾಕರ್ ಬಿಗ್ ಬಾಸ್ ಮನೆಯಿಂದ ಬಂದಮೇಲೆ ಎರಡನೇ ಮಗುವಿನ ಕುರಿತಾಗಿ ಚರ್ಚೆ ನಡೆದಿದ್ದು, ಕೊನೆಗೂ ಮಮತಾರವರು ನಿಜ ವಿಷಯವನ್ನು ದಿವಾಕರ್’ಗೆ ಹೇಳಿದ್ದಾರೆ.ಎರಡನೇ ಮಗುವಿನ ಆಗಮನದ ಖುಷಿಯಲ್ಲಿದ್ದ ದಿವಾಕರ್’ಗೆ ಈ ಪತ್ನಿ ಮಮತಾಗೆ ಗರ್ಭಪಾತ ಆಗಿರುವ ವಿಷಯ ಕೇಳಿ ತುಂಬಾ ಬೇಸರವಾಗಿದೆಯಂತೆ.ಎರಡನೇ ಮಗುವಾಗಿ ಹೆಣ್ಣು ಮಗು ಹುಟ್ಟಲಿ ಎಂದು ಅಂದುಕೊಂಡಿದ್ದ ದಿವಾಕರ್ ರವರಿಗೆ ತುಂಬಾ ಬೇಜಾರಗಿದೆಯಂತೆ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    90 ವರ್ಷದ ಹಳೆಯ ಟೇಬಲ್ ಮನೆಗೆ ತಂದು ಓಪನ್ ಮಾಡಿದ ವ್ಯಕ್ತಿಗೆ ದೊಡ್ಡ ಶಾಕ್, ಒಳಗಡೆ ಏನಿತ್ತು ಗೊತ್ತಾ.

    ಒಬ್ಬ ವ್ಯಕ್ತಿಯನ್ನ ಸಮಾಜ ಉತ್ತಮ ವ್ಯಕ್ತಿಯಾಗಿ ನೋಡುವುದು ಆತನ ವರ್ತನೆ ಮತ್ತು ಮಾನವೀಯತೆ ಗುಣಗಳಿಂದ ಎಂದು ಹೇಳಿದರೆ ತಪ್ಪಾಗಲ್ಲ, ಇನ್ನು ಒಬ್ಬ ವ್ಯಕ್ತಿ ಅದೃಷ್ಟ ಬದಲಾವಣೆ ಆಗಲು ಜಾಸ್ತಿ ಸಮಯ ಕೂಡ ಬೇಕಾಗಿಲ್ಲ ಅನ್ನುವುದು ಇನ್ನೊಮ್ಮೆ ಸಾಭೀತಾಗಿದೆ. ಇನ್ನು ಅದೃಷ್ಟ ಅನ್ನುವುದು ಯಾವಾಗಲೂ ಒಂದೇ ರೀತಿಯಲ್ಲಿ ಇರುವುದಿಲ್ಲ ಮತ್ತು ಕೆಲವೊಮ್ಮೆ ಇರುವ ಅದೃಷ್ಟ ನಮ್ಮನ್ನು ದೂರ ಆದರೆ ಇನ್ನು ಕೆಲವು ಭಾರಿ ಅದೃಷ್ಟ ನಮ್ಮನ್ನ ಹುಡುಕಿಕೊಂಡು ಬರುತ್ತದೆ. ನಾವು ಹೇಳುವ ಈ ವ್ಯಕ್ತಿ ಸೆಕೆಂಡ್ ಹ್ಯಾಂಡ್ ಫರ್ನಿಚರ್…

  • ಸ್ಪೂರ್ತಿ

    ಮಗಳ ಜನ್ಮದಿನಕ್ಕೆ ಬೆಂಗಳೂರು ದಂಪತಿಯಿಂದ ಕ್ಯಾನ್ಸರ್ ಆಸ್ಪತ್ರೆ ಗಿಫ್ಟ್..! ತಿಳಿಯಲು ಈ ಲೇಖನ ಓದಿ..

    ನ್ಯೂ ಇಂಡಿಯಾ ಎ ಚಾರಿಟಬಲ್ ಟ್ರಸ್ಟ್ ಉದ್ಘಾಟಿಸಿದ ನಟ ಇಮ್ರಾನ್ ಹಶ್ಮಿ.ಬೆಂಗಳೂರು ಮೂಲದ ಉದ್ಯಮಿ ದಂಪತಿ ವಿಜಯ್ ಟಾಟಾ ಮತ್ತು ಅಮೃತಾ ಟಾಟಾ ದಂಪತಿ ನ್ಯೂ ಇಂಡಿಯಾ ಎ ಚಾರಿಟೆಬಲ್ ಟ್ರಸ್ಟ್ ಗೆ 200 ಕೋಟಿ ರು ಹಣ ನೀಡಿದ್ದಾರೆ.ಬೆಂಗಳೂರಿನಲ್ಲಿ ಉಚಿತ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣಕ್ಕಾಗಿ ಈ ದಂಪತಿ ಹಣ ನೀಡಿದ್ದು ಬಾಲಿವುಡ್ ನಟ ಇಮ್ರಾನ್ ಹಸ್ಮಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

  • corona, Health

    ರಾಜ್ಯಾದ್ಯಂತ 4ಲಕ್ಷ ಮಕ್ಕಳಿಗೆ ಉಚಿತ ಲಸಿಕೆ

    ಮೊದಲದಿನ 4 ಲಕ್ಷ ಮಕ್ಕಳಿಗೆ ಉಚಿತ ಲಸಿಕೆ  ರಾಜ್ಯದಲ್ಲಿ 15-18ವರ್ಷದ ಮಕ್ಕಳಿಗೆ ಕೋವಿಡ್ ಲಸಿಕೆ ವಿತರಣೆ ಅಭಿಯಾನ ಆರಂಭವಾಗಿದೆ.ಮೊದಲದಿನ 4.03 ಲಕ್ಷಕ್ಕೂ ಅಧಿಕ ಮಕ್ಕಳಿಗೆ ಉಚಿತ ಲಸಿಕೆ ನೀಡಲಾಗಿದೆ.ಆ ಮೂಲಕ ಶೇ.63 ಗುರಿ ಸಾಧನೆ ಮಾಡಲಾಗಿದೆ. ಸೋಮವಾರ ರಾಜ್ಯಾದ್ಯಂತ ನಡೆದ ಲಸಿಕೆ ಅಭಿಯಾನದಲ್ಲಿ 6,38,891 ಮಕ್ಕಳಿಗೆ ಉಚಿತ ಲಸಿಕೆ ಹಾಕುವ ಗುರಿ ಹೊಂದಲಾಗಿತ್ತು.ಈ ಪೈಕಿ (ಸಂಜೆ 7:30ರವೆರಗೂ) 4,03,928 ಮಕ್ಕಳಿಗೆ ಉಚಿತ ಲಸಿಕೆ ನೀಡಲಾಗಿದೆ.ಈ ವಯೋಮಾನದ ಎಲ್ಲ ಮಕ್ಕಳಿಗೂ ಕೋವ್ಯಾಕ್ಸೀನ್ ಹಾಕಿರುವುದರಿಂದ 28ದಿನಗಳ ನಂತರ 2ನೇ ಡೋಸ್…

    Loading

  • ಉಪಯುಕ್ತ ಮಾಹಿತಿ

    ಇಂತಹದೆನಾದ್ರು ನಿಮ್ಮ ಮನೆಯಲ್ಲಿ ಕಂಡುಬಂದ್ರೆ ಅವುಗಳಿಂದ ತುಂಬಾ ಹುಷಾರಾಗಿರಿ..!ತಿಳಿಯಲು ಮುಂದೆ ಓದಿ…

    ನಾವು ದಿನ ನಿತ್ಯ ಬಳುಸುವ ಕೆಲವೊಂದು ವಸ್ತುಗಳೇ ನಮ್ಮ ದೇಹಕ್ಕೆ ಹಾನಿಕಾರಕ. ಅವುಗಳಲ್ಲಿ ಯಾವುವು ಅಂತ ತಿಳಿದುಕೊಲ್ಲಬೇಕಾದ್ರೆ ಮುಂದೆ

  • ಸುದ್ದಿ

    ಮದುವೆಯಾದ ಒಂದೇ ದಿನಕ್ಕೆ ಪತಿಯೊಬ್ಬ ತನ್ನ ಪತ್ನಿಯನ್ನು ರೈಲಿನಿಂದ ತಳ್ಳಿ ತಾನೂ ಹಾರಿದ…ಕಾರಣ ?

    ಮದುವೆಯಾಗಿ ಒಂದೇ ದಿನಕ್ಕೆ ಪತಿಯೊಬ್ಬ ತನ್ನ ಪತ್ನಿಯನ್ನು ವೇಗವಾಗಿ ಚಲಿಸುತ್ತಿದ್ದ ರೈಲಿನಿಂದ ತಳ್ಳಿ ತಾನೂ ಹಾರಿದ ಘಟನೆ ಅಸ್ಸಾಂನ ಟೆನ್ಸುಕಿಯದ ರೈಲಿನಲ್ಲಿ ನಡೆದಿದೆ.ಈ ಘಟನೆ ಮಂಗಳವಾರ ನಡೆದಿದ್ದು, ತನ್ನ 18 ವರ್ಷದ ಪತ್ನಿ ಬೇಬಿಯನ್ನು ಚಲಿಸುತ್ತಿರುವ ರೈಲಿನಿಂದ ತಳ್ಳಿ ನಂತರ ಪತಿ ಹಿರಾನು ಕೂಡ ಹಾರಿದ್ದಾನೆ. ಆದರೆ ಈ ಘಟನೆಯಲ್ಲಿ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಫತೇಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರೈಲ್ವೆ ಹಳಿಗಳ ಮೇಲೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ದಂಪತಿಯನ್ನು ಪೊಲೀಸರು ಹತ್ತಿರದ ಜಿಲ್ಲಾ ಆಸ್ಪತ್ರೆಯ ತುರ್ತು…

  • govt, nation, ಉಪಯುಕ್ತ ಮಾಹಿತಿ, ಸರ್ಕಾರದ ಯೋಜನೆಗಳು, ಸರ್ಕಾರಿ ಯೋಜನೆಗಳು

    ಪಿಎಂ ಕಿಸಾನ್ ಸಮ್ಮನ್ ನಿಧಿ ಯೋಜನೆ

    ಪಿಎಂ ಕಿಸಾನ್ ಸಮ್ಮನ್ ನಿಧಿ ಯೋಜನೆ ಎಂದರೇನು? ದೇಶದ ರೈತರ ಕಷ್ಟವನ್ನು ಕಡಿಮೆ ಮಾಡಲು, ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ, 6,000 ರೂಪಾಯಿಗಳನ್ನು ಕೇಂದ್ರ ಸರ್ಕಾರವು ರೈತರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸುತ್ತದೆ ನೋಂದಣಿಗೆ ಯಾವ ದಾಖಲೆ ಬೇಕು? ಪಿಎಂ ಕಿಸಾನ್ ಸಮ್ಮನ್ ನಿಧಿ ಯೋಜನೆಯ ಲಾಭ ಪಡೆಯುವ ರೈತನಿಗೆ ಆಧಾರ್ ಸಂಖ್ಯೆಯನ್ನು ನೀಡುವುದು ಕಡ್ಡಾಯವಾಗಿದೆ. ನೀವು ಆಧಾರ್ ಕಾರ್ಡ್ ನೀಡದಿದ್ದರೆ ಈ ಯೋಜನೆಯ ಲಾಭ ಪಡೆಯಲು ಸಾಧ್ಯವಾಗುವುದಿಲ್ಲ. ಜೊತೆಗೆ ಕಂತು ಪಡೆಯಲು, ನೀವು ಬ್ಯಾಂಕ್ ಖಾತೆ…