ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಜೀವಸತ್ವಗಳು ಅರ್ಥಾತ್ ವಿಟಮಿನ್ ನಮ್ಮ ದೇಹದ ವಿವಿಧ ಕಾರ್ಯಗಳಿಗೆ ಅತ್ಯವಶ್ಯಕವಾಗಿ ಬೇಕಾದ ಅಂಶಗಳು. ನಾವು ಸೇವಿಸುವ ಆಹಾರದಲ್ಲಿನ ಜೀವಸತ್ವಗಳು ಪಚನವಾಗಿ ರಕ್ತದಲ್ಲಿ ಹೀರುವಂತಾಗಲು ಜಿಡ್ಡಿನಂಶದ ಅಗತ್ಯಕ್ಕೆ ಅನುಗುಣವಾಗಿ ಅವುಗಳನ್ನು ಜಿಡ್ಡಿನಲ್ಲಿ ಕರಗುವ ಮತ್ತು ನೀರಿನಲ್ಲಿ ಕರಗುವ ಜೀವಸತ್ವಗಳೆಂದು ವಿಂಗಡಿಸಲಾಗಿದೆ. ವಿಟಮಿನ್ ಎ, ಡಿ, ಇ, ಕೆಗಳನ್ನು ಜಿಡ್ಡಿನಲ್ಲಿ ಕರಗುವ ಜೀವಸತ್ವಗಳೆಂದೂ, ಬಿ ಕಾಂಪ್ಲೆಕ್ಸ್ ಅನ್ನೊಳಗೊಂಡ ಒಂಬತ್ತು ಜೀವಸತ್ವಗಳನ್ನು ನೀರಿನಲ್ಲಿ ಕರಗುವ ಗುಂಪನ್ನಾಗಿಯೂ ಹೆಸರಿಸಲಾಗಿದೆ.

ಈ ಪೈಕಿ ಜೀವಸತ್ವ ‘ಎ’ ಹಾಲು, ಬೆಣ್ಣೆ, ಕೆನೆ, ಮೊಟ್ಟೆಯ ಹಳದಿ, ಹಸಿರು ಮತ್ತು ಹಳದಿ/ಕೇಸರಿ ಬಣ್ಣದ ಹಣ್ಣು, ತರಕಾರಿಗಳಾದ ಕ್ಯಾರೆಟ್, ಮಾವು, ಪಪ್ಪಾಯಿ, ಕುಂಬಳಕಾಯಿಯಲ್ಲಿ ಹೇರಳವಾಗಿದ್ದು ನಮ್ಮ ಕಣ್ಣಿನ ಆರೋಗ್ಯಕ್ಕೆ ಅತ್ಯವಶ್ಯ. ಕಣ್ಣಿನ ದೃಷ್ಟಿ ಬಲಗೊಳ್ಳಲು, ಕತ್ತಲು ಮತ್ತು ಬೆಳಕಿನಲ್ಲಿ ದೃಷ್ಟಿಯ ಸಮತೋಲನ ಕಾಪಾಡಲು ಚರ್ಮದ ಮೇಲ್ಮೈ ಆರೋಗ್ಯಕರವಾಗಿ ಕಾಂತಿಯುಕ್ತವಾಗಿರಲು, ಗಂಡಸರಲ್ಲಿ ಆರೋಗ್ಯಪೂರ್ಣ ವೀರ್ಯ ಉತ್ಪಾದನೆಯಾಗಲು ಮತ್ತು ಅನ್ನನಾಳ, ವಾಯುನಾಳ, ಮೂತ್ರನಾಳಗಳ ಆರೋಗ್ಯ ಕಾಪಾಡಲು ‘ಎ’ ಜೀವಸತ್ವ ಮಹತ್ವದ ಪಾತ್ರ ವಹಿಸುತ್ತದೆ.

ಜೀವಸತ್ವ ‘ಇ’ ಸೊಪ್ಪು, ಕಾಯಿ/ಬೀಜ, ತರಕಾರಿ, ಅಡುಗೆ ಎಣ್ಣೆ, ಮೊಟ್ಟೆಯಲ್ಲಿ ಹೇರಳವಾಗಿದೆ. ನಮ್ಮ ದೇಹದಲ್ಲಿ ನಡೆಯುವ ಹಲವಾರು ಪರಿವರ್ತನಾ ಕ್ರಿಯೆಗಳಿಂದ ಉತ್ಪತ್ತಿಯಾಗುವ ವಿಷಕಾರಿ ಅಂಶಗಳು ಜೀವಕಣಗಳಿಗೆ ಹಾನಿಮಾಡಿ ಕ್ಯಾನ್ಸರ್ ಮತ್ತಿತರ ಮಾರಣಾಂತಿಕ ಕಾಯಿಲೆಗಳಿಗೆ ದಾರಿ ಮಾಡಿಕೊಡುತ್ತವೆ ಎಂಬುದು ಸಂಶೋಧನೆಗಳಿಂದ ತಿಳಿದು ಬಂದಿದೆ. ‘ಇ’ ಜೀವಸತ್ವ ಎಲ್ಲ ಜೀವಕಣ ಮತ್ತು ಅಂಗಗಳನ್ನು ಈ ವಿಷಕಾರಿ ಅಂಶಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ ಎಂದು ದೃಢಪಟ್ಟಿದೆ.

ಇನ್ನು ನೀರಿನಲ್ಲಿ ಕರಗುವ ಜೀವಸತ್ವಗಳ ಗುಂಪಿನಲ್ಲಿ ‘ಬಿ’ ಕಾಂಪ್ಲೆಕ್ಸ್ ಅನ್ನೊಳಗೊಂಡ ಒಂಬತ್ತು ವಿವಿಧ ಜೀವಸತ್ವಗಳಿವೆ. ಈ ಪೈಕಿ ಜೀವಸತ್ವ ‘ಬಿ1’ ಪಾಲಿಷ್ ಮಾಡದ ಅಕ್ಕಿ, ಕಾಳುಗಳಲ್ಲಿ ಯಥೇಚ್ಚವಾಗಿದ್ದು, ನಮ್ಮ ಆಹಾರದಲ್ಲಿನ ಕಾರ್ಬೋಹೈಡ್ರೇಟ್ನ್ನು ಶಕ್ತಿಯನ್ನಾಗಿ ಪರಿವರ್ತಿಸಲು ಅತಿ ಮುಖ್ಯ ಪಾತ್ರ ವಹಿಸುತ್ತದೆ.

ಇನ್ನು ಮೊಟ್ಟೆ, ಮಾಂಸ, ಕಾಳು ಮತ್ತು ಹಾಲಿನಲ್ಲಿ ಹೇರಳವಾಗಿರುವ ‘ಬಿ2’ ಜೀವಸತ್ವ, ನಮ್ಮ ಆಹಾರದಲ್ಲಿನ ಕಾರ್ಬೋಹೈಡ್ರೇಟ್ ಮತ್ತು ಕೊಬ್ಬಿನ ಅಂಶ ಶಕ್ತಿಯಾಗಿ ಪರಿರ್ತನೆಗೊಳ್ಳಲು ಅತ್ಯವಶ್ಯ. ಈ ಜೀವಸತ್ವದ ಕೊರತೆಯುಂಟಾದಾಗ ಬಾಯಿ, ತುಟಿ, ನಾಲಗೆಯಲ್ಲಿ ಹುಣ್ಣುಗಳಾಗುತ್ತವೆ ಮತ್ತು ರೋಗಿಗಳು ಚರ್ಮಕ್ಕೆ ಸಬಂಧಪಟ್ಟ ಕಾಯಿಲೆಗಳಿಂದಲೂ ನರಳುತ್ತಾರೆ. ಜೀವಸತ್ವ ‘ಬಿ3’ ಬೇಳೆಕಾಳು, ಧಾನ್ಯಗಳು, ಹಾಲು, ಮಾಂಸದಲ್ಲಿ ಹೇರಳವಾಗಿದ್ದು; ಆಹಾರದಲ್ಲಿನ ಕಾರ್ಬೋಹೈಡ್ರೇಟ್, ಕೊಬ್ಬು ಮತ್ತು ಪ್ರೋಟೀನ್ಗಳ ಪರಿವರ್ತನೆಗೆ ಸಹಕಾರಿ. ‘ಬಿ3’ ಜೀವಸತ್ವದ ಕೊರತೆಯಾದಾಗ ಪರಿವರ್ತನಾ ಕಾರ್ಯಗಳಿಗೆ ಧಕ್ಕೆಯುಂಟಾಗಿ, ದೇಹದಲ್ಲಿ ಶಕ್ತಿಯ ಉತ್ಪಾದನೆ ಕುಂಠಿತಗೊಳ್ಳುತ್ತದೆ. ಪರಿಣಾಮ ರೋಗಿಗಳು ಚರ್ಮ, ನರಮಂಡಲ ಮತ್ತು ಜೀರ್ಣಕ್ರಿಯೆಗೆ ಸಂಬಂಧಪಟ್ಟ ಕಾಯಿಲೆಗಳಿಂದ ನರಳುತ್ತಾರೆ.

ಬಯೊಟಿನ್ ಜೀವಸತ್ವವು ಕಾಳು, ಬೀಜ ಮತ್ತು ಮೊಟ್ಟೆಯಲ್ಲಿ ಹೇರಳವಾಗಿದ್ದು; ಇದು ಆಹಾರದಲ್ಲಿನ ಕೊಬ್ಬು ಮತ್ತು ಅಂಗಾರಕ ವನ್ನು ಶಕ್ತಿಯನ್ನಾಗಿ ಪರಿವರ್ತಿಸಲು ಅವಶ್ಯ. ಬಯೊಟಿನ್ನ ಕೊರತೆಯುಂಟಾದಾಗ ತುಟಿ, ನಾಲಗೆ, ಚರ್ಮಕ್ಕೆ ಸಂಬಂಧಪಟ್ಟ ಕಾಯಿಲೆಗಳು ತಲೆ ದೋರುತ್ತವೆ ಮತ್ತು ರೋಗಿಗಳು ಮಾಂಸಖಂಡಗಳ ನೋವು, ಅಜೀರ್ಣ, ಖಿನ್ನತೆಯಿಂದ ನರಳುತ್ತಾರೆ. ಹಸಿರು ತರಕಾರಿ, ಸೊಪ್ಪು, ಕಾಳುಗಳಲ್ಲಿ ಹೇರಳವಾಗಿರುವ ಫೋಲಿಕ್ ಆಮ್ಲವು ರಕ್ತಕಣಗಳು ಮತ್ತು ನರಗಳ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.

ಜೀವಸತ್ವ ಬಿ12 ಮೊಟ್ಟೆ, ಮಾಂಸ ಮತ್ತು ಹಾಲಿನಲ್ಲಿ ಹೇರಳವಾಗಿದ್ದು, ರಕ್ತಕಣ ಮತ್ತು ನರಗಳ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಕೊರತೆಯುಂಟಾದರೆ ರಕ್ತಹೀನತೆ, ಕೈ-ಕಾಲು ಅದರಲ್ಲೂ ಅಂಗೈ-ಪಾದಗಳಲ್ಲಿ ಜೋಮು ಹಿಡಿಯುವುದು, ಸ್ಪರ್ಶಹೀನತೆ, ನರಗಳ ದೌರ್ಬಲ್ಯ, ವಿಪರೀತ ಕಿರಿಕಿರಿಯಿಂದ ರೋಗಿಗಳು ನರಳುತ್ತಾರೆ. ಜೀವಸತ್ವ ‘ಸಿ’ ಟೊಮೆಟೊ, ಬೆಟ್ಟದ ನೆಲ್ಲಿ, ಕಿವಿಹಣ್ಣು, ಇನ್ನಿತರ ಹುಳಿ ಹಣ್ಣು ಮತ್ತು ತರಕಾರಿಗಳಲ್ಲಿ ಹೇರಳವಾಗಿರುತ್ತದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬಾಯಿಯಿಂದ ನಿಮ್ಮ ಉಗುರುಗಳನ್ನು ಕಚ್ಚುತ್ತಿದ್ದರೆ ಆರೋಗ್ಯಕ್ಕೆ ಹಾನಿಕಾರಕ ಎಂಬುದು ನಿಮಗೆ ಗೊತ್ತಿರುವ ವಿಚಾರವೇ, ಆದರೆ ಇಲ್ಲಿ ಉಗುರು ಕಚ್ಚುವುದರಿಂದ ದೇಹದ ಮೇಲೆ ಯಾವ ರೀತಿಯೆಲ್ಲಾ ಪರಿಣಾಮ ಬೀರುತ್ತದೆ ಎಂಬ ಅಂಶ ಕೊಡಲಾಗಿದೆ ಓದಿ. ನೋಡಲು ಅಸಹ್ಯಕರವಾಗಿ ಕಾಣುತ್ತದೆ. ಯಾವಾಗಲೂ ಉಗುರುಗಳನ್ನು ಕಚ್ಚುವುದರಿಂದ ನಿಮ್ಮ ಬೆರಳುಗಳಿಗೆ ಹಾನಿಯಾಗುತ್ತದೆ. ನಿಮ್ಮ ಬಾಯಿಯಿಂದ ಹೊರಬರುವ ಲಾಲಾರಸದಲ್ಲಿರುವ ರಾಸಾಯನಿಕಗಳು ಬೆರಳುಗಳಿಗೆ ಸಾಕಷ್ಟು ಹಾನಿಯನ್ನು ಉಂಟುಮಾಡುತ್ತವೆ. ಇದು ನಿಮ್ಮ ಬೆರಳಿನ ಚರ್ಮದ ಮೇಲೆ ಸ್ಕ್ರಾಚಿಂಗ್ ಗುರುತುಗಳನ್ನು ಉಂಟುಮಾಡಲಿದ್ದು, ನೋಡಲು ಸಾಕಷ್ಟು ಅಸಹ್ಯಕರವಾಗಿ ಕಾಣುತ್ತದೆ. ಪರೋನಾಸ್ಸಿಯಾ…
ಪೋರ್ಚುಗೀಸ್ ತೀರದಲ್ಲಿ ಸಾಗರ ತಳದಲ್ಲಿ ಸುಮಾರು 710 ಅಡಿ ಕೆಳಗಿನ ಪ್ರದೇಶದಲ್ಲಿ ಡೈನೋಸಾರ್ ಯುಗದ ತಿಮಿಂಗಿಲವೊಂದನ್ನು ಪತ್ತೆ ಹಚ್ಚಿರುವ ಬೆಳವಣಿಗೆ ವಿಶ್ವಾದ್ಯಂತ ವಿಜ್ಞಾನಿಗಳಲ್ಲಿ ಸಂಚಲನ ಸೃಷ್ಟಿಸಿದೆ.
ರಾತ್ರಿಯಾದರೆ ಸಾಕು ತಮ್ಮ ತಮ್ಮ ಮನೆಗಳಲ್ಲಿ ಬೆಚ್ಚಗೆ ತಮ್ಮ ಮನೆಯಲ್ಲಿ ಮಲುಗುವಂತ ಜನರ ನಡುವೆ ಇಂತವರು ಇರುತ್ತಾರಾ ?ಅನ್ನೋದೇ ಡೌಟ್. ಆದರೆ ಇರುವುದು ಖಚಿತವಾಗಿದೆ. ಇವರು ಮಾಡುವಂತ ಕೆಲಸಕ್ಕೆ ನೀವು ನಿಜವಾಗಿಯೂ ಸಲ್ಯೂಟ್ ಹೊಡೆಯುತ್ತಿರ. ಹೌದು ಇವರು ಅಂಥದೇನಪ್ಪ ಕೆಲಸ ಮಾಡಿರೋದು ಅಂತಿದೀರಾ ? ಮುಂದೆ ನೋಡಿ ನಿಮಗೆ ಗೊತ್ತಾಗುತ್ತೆ.
ನಾನು ಒಬ್ಬ ನಟನಾಗಿ ಕಲೆಯ ಜೊತೆ ಗುರುತಿಸಿಕೊಳುತ್ತೇನೆ ಹೊರತು ರಾಜಕಾರಣದ ಜೊತೆಗಲ್ಲ. ದೇವೇಗೌಡರ ಕುಟುಂಬ ಹಾಗೂ ಅಂಬಿ ಕುಟುಂಬ ನಮ್ಮ ಕುಟುಂಬ ಹಾಗೆ. ಇಬ್ಬರೂ ನಮ್ಮ ಹಿತೈಷಿಗಳೇ ಆಗಿದ್ದು, ಇಬ್ಬರಿಗೂ ಒಳ್ಳೆಯದಾಗಲಿ ಎಂದು ನಟ ಪುನೀತ್ ರಾಜ್ಕುಮಾರ್ ಹೇಳಿದ್ದಾರೆ. ಮಾಜಿ ಸಚಿವ ಅಂಬರೀಶ್ ಪತ್ನಿ ಸುಮಲತಾ ಅವರು ಮಂಡ್ಯ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಇವರ ಜೊತೆಯಾಗಿ ದರ್ಶನ್ ಮತ್ತು ಯಶ್ ನಿಂತಿದ್ದಾರೆ. ಕನ್ನಡ ಚಿತ್ರರಂಗ ಸುಮಲತಾಗೆ ಬೆಂಬಲ ಕೊಡುತ್ತಿದೆ ಎಂಬ ಸುದ್ದಿ…
ಕಣಿವೆ ರಾಜ್ಯ ಜಮ್ಮು- ಕಾಶ್ಮೀರದ ಪುಲ್ವಾಮ ಹಾಗೂ ಶೂಪಿಯಾನ್ ಬಳಿ ಭದ್ರತಾ ಪಡೆಗಳು ನಡೆಸಿದ ಪ್ರತ್ಯೇಕ ಎನ್ ಕೌಂಟರ್ ಗಳಲ್ಲಿ ಆರು ಮಂದಿ ಉಗ್ರರು ಹತ್ಯೆಯಾಗಿದ್ದಾರೆ. ಈ ಮಧ್ಯೆ ಯೋಧರು ಹುತಾತ್ಮರಾಗಿದ್ದು, ನಾಗರಿಕರೊಬ್ಬರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಪುಲ್ವಾಮಾದಲ್ಲಿ ಮೂವರು ಜೈಷ್ -ಇ- ಮೊಹಮ್ಮದ್ ಸಂಘಟನೆ ಉಗ್ರರು ಹತ್ಯೆಯಾಗಿದ್ದರೆ, ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ಈ ಮಧ್ಯೆ ನಾಗರಿಕರೊಬ್ಬರು ಮೃತಪಟ್ಟಿದ್ದಾರೆ. ಶೂಪಿಯಾನ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳ ಜೊತೆಗಿನ ಗುಂಡಿನ ಕಾಳಗದಲ್ಲಿ ಮೂವರು ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸ್…
ಬ್ರಿಟೀಷರ ಅಟ್ಟಹಾಸ ತಾರಕಕ್ಕೇರಿದಾಗ, ಭಾರತವನ್ನು ಬ್ರಿಟೀಷರ ಕಪಿಮುಷ್ಟಿಯಿಂದ ಬಿಡಿಸಲು ಜನಿಸಿದ ಶಾಂತಿ ಪ್ರವರ್ತಕ ಮಹಾತ್ಮಾ ಗಾಂಧಿ. ಗುಜರಾತ್ ನ ಪೋರ್ ಬಂದರ್ ನಲ್ಲಿ ಅಕ್ಟೋಬರ್ 2, 1869 ರಂದು ಮೋಹನ್ ದಾಸ್ ಕರಮ್ ಚಂದ್ ಗಾಂಧಿಯಾಗಿ ಜನಿಸಿ, ವಿದೇಶದಲ್ಲಿ ಕಾನೂನು ಪದವಿ ಪಡೆದು ದಕ್ಷಿಣ ಭಾರತದಲ್ಲೇ ಹೋರಾಟ ಆರಂಭಿಸಿ ಭಾರತಕ್ಕೆ ಬಂದರು.