ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕೊನೆಗೂ ಬಿಗ್ ಬಾಸ್ ಕನ್ನಡ ಸಂಚಿಕೆ 5 ಕಾರ್ಯಕ್ರಮಕ್ಕೆ ಭರ್ಜರಿಯಾಗಿ ತೆರೆ ಬಿದ್ದಿದೆ.ಈ ಸಲದ ಬಿಗ್ ಬಾಸ್ ಸಂಚಿಕೆಯಲ್ಲಿ ಕಾಮಾನ್ ಮ್ಯಾನ್’ಗೂ ಕೂಡ ಕಲರ್ಸ್ ಕನ್ನಡ ವಾಹಿನಿಯವರು ಅವಕಾಷ ಕೊಟ್ಟಿದ್ದರು.ಕಾಮಾನ್ ಮ್ಯಾನ್’ಗಳಾಗಿ ದಿವಾಕರ್,ಸಮೀರ್ ಆಚಾರ್ಯ ಮತ್ತು ರಿಯಾಜ್ ರವರು ಭಾಗವಹಿಸಿ ಸುಮಾರು ವಾರಗಳು ಬಿಗ್ ಬಾಸ’ನಲ್ಲಿ ಇದ್ದು ಕಾಮಾನ್ ಮ್ಯಾನ್’ಗೂ ಕೂಡ ಜನ ಪ್ರೀತಿ ತೋರಿಸ್ತಾರೆ ಅನ್ನೋದರ ಬಗ್ಗೆ ಸಾಧಿಸಿ ತೋರಿಸಿದ್ದಾರೆ.

ಈ ಸಲದ ಬಿಗ್ ಬಾಸ್ ಶೋ ಕಾಮನ್ ಮ್ಯಾನ್ ಮತ್ತು ಸೆಲೆಬ್ರೆಟಿಗಳ ನಡುವಿನ ಸಮರ ಎಂದು ಬಿಂಬಿಸಲಾಗಿತ್ತು.ಬಿಗ್ ಬಾಸ್ ನಲ್ಲಿ ನಡೆದ ಕೆಲವೊಂದು ಸನ್ನಿವೇಶಗಳು ಜನರಲ್ಲಿ ಉಂಟು ಮಾಡಿದ್ದು ಸಹಜ.

ನೆನ್ನೆ ಬಿಡದಿ ಹತ್ತಿರವಿರುವ ಇನ್ನೋವೇಟಿವ್ ಫಿಲಂ ಸಿಟಿಯಲ್ಲಿ ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ, ತನ್ನ ವಿಶಿಷ್ಟ ಗಾಯನದಿಂದಲೇ, ಕರ್ನಾಟಕದ ಜನರಲ್ಲಿ ಮನೆ ಮಾತಾಗಿರುವ ಚಂದನ್ ಶೆಟ್ಟಿಯನ್ನು ಸುದೀಪ್ ಅವರು ವಿಜೇತ ಎಂದು ಘೋಷಣೆ ಮಾಡಿದರು. ತುಂಬಾ ಕಷ್ಟದಲ್ಲಿ ಜೀವನಸಾಗಿಸುತ್ತಿದ್ದ, ಸೇಲ್ಸ್ ಮ್ಯಾನ್ ಆಗಿದ್ದ, ಕಾಮಾನ್ ಮ್ಯಾನ್ ದಿವಾಕರ್ ರನ್ನರ್ ಅಪ್ ಪಟ್ಟವನ್ನು ತಮ್ಮದಾಗಿಸಿಕೊಂಡರು.ಹಾಗೂ ನಟ ಕಾರ್ತಿಕ್ ಜಯರಾಂ ಮೂರನೇ ಸ್ಥಾನ ಗಳಿಸಿಕೊಂಡರು.

ಜಗನ್ ಮಾತನಾಡುತ್ತಾ ಹೊರಗಡೆ ಸೆಲೆಬ್ರೆಟಿಗಳ ಬಗ್ಗೆ ತುಂಬಾ ಕೆಟ್ಟದಾಗಿ ಬಿಂಬಿಸಲಾಗುತ್ತಿದೆ.ನಾವು ಅಂದ್ರೆ ಸೆಲೆಬ್ರೆಟಿಗಳು ಕಾಮಾನ್ ಮ್ಯಾನ್’ಗಳನ್ನು ತುಳಿತಾ ಇದ್ದೇವೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟದಾಗಿ ಬಣ್ಣಿಸಲಾಗುತ್ತಿದೆ.ನಿಜ ಹೇಳೆಬೇಕಂದ್ರೆ ಆತರ ಏನೂ ನಡೆದಿಲ್ಲ.ನಾವೆಲ್ಲಾ ಒಂದೇ, ಮನೆಯಲ್ಲಿ ಒಂದೇ ತರ ಇದ್ದೆವು ಎಂದು ಹೇಳಿದ್ರು ಇವರ ಮಾತಿಗೆ ಮಾತು ಜೋಡಿಸಿದ ಸಿಹಿ ಕಹಿ ಚಂದ್ರುರವರು ಸಹ ಹೊರಗಡೆ ಸೆಲೆಬ್ರೆಟಿಗಳನ್ನು ಕೆಟ್ಟದಾಗಿ ಬಿಂಬಿಸಲಾಗುತ್ತಿದೆ ಎಂದು ಹೇಳಿದ್ರು.
ಈ ಸೆಲೆಬ್ರೆಟಿಗಳು ಏನೇ ಹೇಳಿದ್ರು, ಕಾಮಾನ್ ಮ್ಯಾನ್ ಗಳನ್ನು ಅವರು ನೋಡೋದು ಹಾಗೆಯೇ ಬಿಡಿ.ಏಕೆಂದರೆ ಒಬ್ಬ ಕಾಮಾನ್ ಮ್ಯಾನ್ ಸೆಲೆಬ್ರೆಟಿಯನ್ನು ಅವರ ಹತ್ತಿರ ಹೋಗಿ ಮಾತನಾಡಿಸೋದು ಅಷ್ಟೊಂದು ಸುಲಭ ಇಲ್ಲ.ಇದಕ್ಕೆ ನೀವೇ ನೋಡಿದಂತೆ ತುಂಬಾ ನಿದರ್ಶನಗಳಿವೆ.

ತನ್ನ ವಿಶಿಷ್ಟ ಗಾಯನದಿಂದಲೇ ಕರ್ನಾಟಕದ ಜನರ ಮನೆಮಾತಾಗಿರುವ ರ್ಯಾಪರ್ ಚಂದನ್ ಶೆಟ್ಟಿ, ಈಗಾಗಲೇ ಅವರು ಕರುನಾಡಿನ ಕೋಟ್ಯಾಂತರ ಜನರ ಮನವನ್ನು ಗೆದ್ದಿದ್ದಾರೆ. ಇವರಿಗಿರುವ ಟ್ಯಾಲೆಂಟ್’ಗೆ ಬಿಗ್ ಬಾಸ್ ತರದ ನೂರಾರು ವೇದಿಕೆಗಳು ಇವರನ್ನು ಹುಡುಕಿಕೊಂಡು ಬರುತ್ತವೆ. ಸೆಲೆಬ್ರೆಟಿಗಳು ಹೇಳಿದ ಹಾಗೆ ಇವರ ಒಂದು ಹಾಡನ್ನು youtubeನಲ್ಲಿ ಬಿಟ್ರೆ ಕೆಲವೇ ನಿಮಿಷಗಳಲ್ಲಿ ಕೋಟ್ಯಾಂತರ ಜನ ನೋಡುತ್ತಾರೆ.ಇವರಿಗಿರುವ ಟ್ಯಾಲೆಂಟ್’ಗೆ ಹಣ ಸಂಪಾದನೆ ಮಾಡುವುದು ಇವರಿಗೆ ಕಷ್ಟವೇನಲ್ಲ. ಇವರು ಟ್ರೋಪಿ ಗೆಲ್ಲುವುದಕ್ಕೆ ಅರ್ಹರು ಅದರಲ್ಲಿ ಬೇರೆ ಮಾತಿಲ್ಲ. ಆದರೆ ಇವರ ಜೊತೆ ಇದ್ದಿದ್ದು ಕಷ್ಟ ಜೀವಿ ಸೇಲ್ಸ್ ಮ್ಯಾನ್ ದಿವಾಕರ್. ಈ ಎಲ್ಲಾ ಕಾರಣಗಳಿಂದ ಚಂದನ್ ಶೆಟ್ಟಿ ಗೆಲ್ಲಬಾರದಿತ್ತು ಎಂಬುದು ನಮ್ಮ ಅಭಿಪ್ರಾಯ ಅಷ್ಟೆ.

ಕಾಮಾನ್ ಮ್ಯಾನ್ ಆಗಿ ಎಂಟ್ರಿ ಕೊಟ್ಟಿದ್ದ ಸೇಲ್ಸ್ ಮ್ಯಾನ್ ದಿವಾಕರ್ ತುಂಬಾ ಕಷ್ಟ ಜೀವನದಿಂದ ಬಂದವರು. ಆದ್ರು ಬಿಗ್ ಬಾಸ್’ನಲ್ಲಿ ಕೊನೆಯವರೆಗೂ ಘಟಾನು ಘಟಿಗಳ ಜೊತೆ ಆಟ ಆಡಿ ಎಲ್ಲರ ಮನ ಗೆದ್ದದ್ದು ಸುಳ್ಳಲ್ಲ.ನೆನ್ನೆ ಗ್ರಾಂಡ್ ಪಿನಾಲೆ ವೇದಿಕೆಯಲ್ಲಿ ಯಾರೂ ಗೆಲ್ಲ ಬೇಕು ಎಂಬ ಸುದೀಪ್ ಪ್ರಶ್ನೆಗೆ ಅಲ್ಲಿದ್ದ ಸೇಲೆಬ್ರೆಟಿಗಳೇ ಕಾಮಾನ್ ಮ್ಯಾನ್ ದಿವಾಕರ್ ಗೆಲ್ಲಬೇಕು.ಏಕೆಂದರೆ ಅವರಿಗೆ ಈ ತರದ ಬೇರೆ ವೇದಿಕೆಗಳು ಸಿಗುವುದು ಕಷ್ಟ. ಅವರಿಗೆ ಹಣದ ಅವಶ್ಯಕತೆ ತುಂಬಾ ಇದೆ.ಒಂದು ವೇಳೆ ಬಿಗ್ ಬಾಸ್ ಗೆದ್ರೆ ಬರುವ ಹಣ ಅವರ ಕುಟುಂಬಕ್ಕೆ ಮತ್ತು ಮಗನ ಮುಂದಿನ ಜೀವನಕ್ಕೆ ತುಂಬಾ ಅನುಕುಲವಾಗುತ್ತೆ, ಹಾಗಾಗಿ ದಿವಾಕರ್ ರವರೆ ಬಿಗ್ ಬಾಸ್ ಗೆಲ್ಲಬೇಕು ಎಂದು ಹೇಳಿದ್ರು.

ಆದ್ರೆ ಕೊನೆಯಲ್ಲಿ ರನ್ನರ್ ಆಪ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡ್ರು.ಆದ್ರೆ ದಿವಾಕರ್ ರವರಿಗೆ ಕೇವಲ ಒಂದು ಲಕ್ಷ ಹಣ ಮಾತ್ರ ಕೊಟ್ಟಿದ್ದು, ಯಾಕೋ ಮೋಸ ಅನಿಸ್ತು.ಈ ಕಾರಣಗಳಿಂದ ಚಂದನ್ ಶೆಟ್ಟಿ ರವರಿಗೆ ಹೋಲಿಸಿದರೆ ಕಾಮಾನ್ ಮ್ಯಾನ್ ದಿವಾಕರ್ ರವರೇ ಗೆಲ್ಲಬೇಕಿತ್ತು ಎಂಬುದು ನಮ್ಮ ಅಭಿಮತ ಅಷ್ಟೆ.ಇದಕ್ಕೆ ನೀವೇನ್ ಹೇಳ್ತೀರಾ ಕಾಮೆಂಟ್ ಮೂಲಕ ತಿಳಿಸಿ.

ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಪ್ಯಾರಾಚ್ಯೂಟ್ ಕೋಕೊನಟ್ ಆಯಿಲ್ ಗೊತ್ತಲ್ಲವೇ. ನಾವು ಚಿಕ್ಕಂದಿನಿಂದ ಅದನ್ನು ನಮ್ಮ ತಲೆಕೂದಲಿಗೆ ಹಚ್ಚಿಕೊಳ್ಳುತ್ತಿದ್ದೇವೆ. ಚಳಿಗಾಲದಲ್ಲಾದರೆ ಅದರಲ್ಲಿರುವ ಎಣ್ಣೆ ಗಡ್ಡೆಕಟ್ಟಿಕೊಳ್ಳುತ್ತದೆ. ಇದರಿಂದ ಅದನ್ನು ಬಿಸಿ ಮಾಡಿ ಹಚ್ಚಿಕೊಳ್ಳುತ್ತಿದ್ದೆವು.. ನೆನಪಿದೆಯೇ.
‘ವಿಟಮಿನ್ ಡಿ’ ಇರುವ ಆಹಾರ, ಫುಡ್ ಸಪ್ಲಿಮೆಂಟ್ಸ್ ಅನ್ನು ನಿಯಮಿತವಾಗಿ ಸೇವಿಸುವು ದರಿಂದ ಅನೇಕ ಕಾಯಿಲೆಗಳನ್ನು ಕ್ಷಣಮಾತ್ರದಲ್ಲಿ ಹಿಮ್ಮೆಟ್ಟಿಸಬಹುದು. ಆದರೆ ಭಾರತದಲ್ಲಿ ಹೆಚ್ಚಿನ ಜನರು ‘ವಿಟಮಿನ್ ಡಿ’ ಕೊರತೆಯಿಂದ ಬಳಲುತ್ತಿದ್ದಾರೆ ಎಂದು ಅಧ್ಯಯನವೊಂದು ತಿಳಿಸಿದೆ. ನಿಮಗೆಲ್ಲರಿಗೂ ತಿಳಿದಿರುವಂತೆ ಸೂರ್ಯನ ಕಿರಣಗಳಲ್ಲಿ ವಿಟಮಿನ್ ಡಿ ಇದ್ದು, ಮೂಳೆ ಮತ್ತು ಸ್ನಾಯುಗಳ ಆರೋಗ್ಯಕ್ಕೆ ಉತ್ತಮ ಔಷಧ. ಪ್ರತಿಯೊಂದು ಸಂಶೋಧನೆಗಳು ‘ವಿಟಮಿನ್ ಡಿ’ ಸೇವನೆಯಿಂದ ಕೊರತೆ ಯಿರುವ ಜನರಲ್ಲಿ ತೀವ್ರವಾದ ಉಸಿರಾಟದ ಸೋಂಕಿನ ಅಪಾಯ ಅರ್ಧಕ್ಕರ್ಧ ಕಡಿಮೆಯಾಗಿದೆ ಎಂದು ತೋರಿಸಿವೆ. ಆದರೆ ‘ವಿಟಮಿನ್ ಡಿ’…
ಸುಂದರ್ ಪಿಚೈ ಅವರು ಮೊದಲು ಕಂಪನಿಯ ಇಂಟರ್ ನೆಟ್ ವ್ಯವಹಾರವನ್ನು ಉನ್ನತಮಟ್ಟಕ್ಕೇರಿಸುವ ನಿಟ್ಟಿನಲ್ಲಿ ಪ್ರಾಡಕ್ಟ್ ಮತ್ತು ಇಂಜಿನಿಯರಿಂಗ್ ವಿಭಾಗದ ಜವಾಬ್ದಾರಿಯನ್ನು ನೋಡಿಕೊಳ್ಳುತ್ತಿದ್ದರು.
ಲೆಜೆಂಡ್ಸ್ ಲೀಗ್ ಕ್ರಿಕೆಟ್ (LLC) ನ ಉದ್ಘಾಟನಾ ಆವೃತ್ತಿಯು ಜನವರಿ 20 ರಂದು ಪ್ರಾರಂಭವಾಗಲಿದೆ ಮತ್ತು ಪಂದ್ಯಾವಳಿಯ ಅಧಿಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಎಲ್ಲಾ ಪಂದ್ಯಗಳು ಓಮನ್ನ ಮಸ್ಕತ್ನಲ್ಲಿರುವ ಅಲ್ ಅಮರತ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿವೆ. LLC ಎರಡು ಸುತ್ತುಗಳು ಮತ್ತು ಫೈನಲ್ಗಳನ್ನು ಹೊಂದಲಿದ್ದರೆ, ಆಟಗಳ ಸಮಯದಲ್ಲಿ ಮೂರು ವಿಶ್ರಾಂತಿ ದಿನಗಳು ಸಹ ಇರುತ್ತವೆ. ಮೂರನೇ ಮತ್ತು ಅಂತಿಮ ವಿಶ್ರಾಂತಿ ದಿನವು ಗ್ರ್ಯಾಂಡ್ ಫಿನಾಲೆಗೆ ಒಂದು ದಿನ ಮೊದಲು ಇರುತ್ತದೆ. ಪ್ರತಿ ಎರಡು…
![]()
ಚೈತ್ರಾ ಕೋಟೂರ್ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಎರಡನೇ ಬಾರಿಗೆ ಬಿಗ್ ಬಾಸ್ ಮನೆಗೆ ಬಂದಾಗ ಅಲ್ಲಿದ್ದವರೆಲ್ಲರಿಗೂ ತುಂಬಾನೇ ಶಾಕ್ ಆಗಿತ್ತು. ಚೈತ್ರಾ ಅವರು ಬಿಗ್ ಬಾಸ್ ಮನೆಗೆ ಬಂದಾಗ ಅಲ್ಲಿದ್ದವರು ಎಲ್ಲರೂ ಚೈತ್ರಾರವರನ್ನೇ ನೋಡುತ್ತಿದ್ದರು ಅವರು ಧರಿಸಿರುವ ವಸ್ತ್ರವಿನ್ಯಾಸ ಕೂಡ ಬದಲಾಗಿದ್ದೂ, ಬಿಗ್ ಮನೆಯ ಸ್ಪರ್ಧಿಗಳಿಗೆ, ಅಷ್ಟೇ ಅಲ್ಲದೆ ಪ್ರೇಕ್ಷಕರಿಗೂ ಕೂಡ ಶಾಕ್ ನೀಡಿದೆ. ಚೈತ್ರಾ ಡ್ರೆಸ್ಸಿಂಗ್ ಸೆನ್ಸ್ ಬದಲಾಗಿದ್ದೇಕೆ? “ನಾನು, ಚಂದನ್ ಯಾವಾಗಲೂ ಟಾರ್ಗೆಟ್ ಆಗಿರುತ್ತಿದ್ದೆವು, ಏನೆ ಕಮೆಂಟ್ ಬಂದರೂ, ಬಿರುದು ಅದನ್ನು ನಾನು ನಗುನಗುತ್ತ…
ಆಸ್ತಿ ವಹಿವಾಟಿಗೆ ಆಧಾರ್ ಜೋಡಣೆ ಕಡ್ಡಾಯಗೊಳಿಸುವ ಯಾವುದೇ ಪ್ರಸ್ತಾವವೂ ಸದ್ಯಕ್ಕೆ ತನ್ನ ಮುಂದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.