ಸಿನಿಮಾ

ಅಣ್ಣಾವ್ರ ಬಗ್ಗೆ ರಜನಿ ಬಿಚ್ಚಿಟ್ಟರು, ನಮಗ್ಯಾರಿಗೂ ಗೊತ್ತಿಲ್ಲದ ಆ ರಹಸ್ಯ..!

633

ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯ ಪ್ರವೇಶಕ್ಕೆ ಪೂರ್ವಭಾವಿಯಾಗಿ ಅಭಿಮಾನಿಗಳೊಂದಿಗೆ ಸಂವಾದ ನಡೆಸುತ್ತಿದ್ದಾರೆ.ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ರಜನಿಕಾಂತ್, ‘ನಾನು ರಾಜಕೀಯಕ್ಕೆ ಬರುತ್ತೇನೆ ಎಂದು ಹೇಳಿಲ್ಲ. ನನ್ನ ನಿರ್ಧಾರವನ್ನು ಡಿಸೆಂಬರ್ 31ಕ್ಕೆ ಹೇಳುತ್ತೇನೆ’ ಎಂದಿದ್ದಾರೆ.

ರಾಜಕೀಯ ಪ್ರವೇಶದ ಬಗ್ಗೆ ಎದ್ದಿರುವ ಊಹಾಪೋಹಗಳಿಗೆ ಡಿಸೆಂಬರ್ 31ಕ್ಕೆ ತೆರೆ ಎಳೆಯಲಿದ್ದೇನೆ ಎಂದು ಹೇಳಿದ್ದಾರೆ.

ತಲೈವಾ ಅಣ್ಣಾವ್ರ ಬಗ್ಗೆ ಹೇಳಿದ್ದು ಏನು ಗೊತ್ತಾ..?

ನಟ ರಜನಿಕಾಂತ್ ಚೆನ್ನೈನ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಕಳೆದ 3 ದಿನಗಳಿಂದ ಅಭಿಮಾನಿಗಳೊಂದಿಗೆ ಸಭೆ ನಡೆಸಿರುವ ಅವರು, ತಮ್ಮ ಭಾಷಣದಲ್ಲಿ ವರನಟ ಡಾ. ರಾಜ್ ಕುಮಾರ್ ಅವರನ್ನು ನೆನಪಿಸಿಕೊಂಡಿದ್ದಾರೆ.

ಅಣ್ಣಾವ್ರ ಬಗ್ಗೆ ತನ್ನ ಅಭಿಮಾನಿಗಳಲ್ಲಿ, ಅವರು ಹಿರಿಯರಿಗೂ,ಕಿರಿಯರಿಗೂ ಹೇಗೆ ಗೌರವ ಕೊಡುತ್ತಿದ್ದರು ಎಂಬುದರ ಬಗ್ಗೆ ಮಾತನಾಡಿದ್ದು,ರಾಜಕುಮಾರ ಅವರ ಸರಳತೆ ಬಗ್ಗೆ ಅವರ ಅಭಿಮಾನಿಗಳಲ್ಲಿ ಹಂಚಿಕೊಂಡಿದ್ದಾರೆ.

ರಜನಿಕಾಂತರವರು ಬೆಂಗಳೂರಿನಲ್ಲಿದ್ದಾಗ ರಾಜ್ ರವರನ್ನು ನೋಡಲು ಗಂಟೆಗಟ್ಟಲೆ ಕಾಯುತ್ತಿದ್ದು,ಅವರು ಸಿಕ್ಕಾಗ ಅವರ ಕಾಲು ಮುಟ್ಟಿ ನಮಸ್ಕಾರ ಮಾಡಿ ಪುಳಕಿತನಾಗಿದ್ದೆ.

ಏನ್ಟಿಆರ್,ಶಿವಾಜಿ ಗಣೇಶನ್, ಮತ್ತು ಎಂ.ಜಿ.ಆರ್. ಅವರಂತೆಯೇ ರಾಜ್ ಕುಮಾರ್ ಅವರು ಮೇರುನಟರಾಗಿದ್ದು,ತುಂಬಾ ಸರಳ ಸ್ವಭಾವದ ಮೂರ್ತಿಯಾಗಿದ್ದರು ಎಂದು ರಜನಿ ಅಭಿಮಾನಿಗಳಲ್ಲಿ ಹೇಳಿಕೊಂಡಿದ್ದಾರೆ.

ನಾನು ಅಣ್ಣಾವ್ರ ಅಭಿಮಾನಿ…

ನಾನು ರಾಜಣ್ಣರವರ ಅಭಿಮಾನಿಯಾಗಿದ್ದು,ಅವರ ಚಿತ್ರಗಳನ್ನು ತುಂಬಾ ಇಷ್ಟಪಟ್ಟು ನೋಡುತ್ತಿದ್ದೆ.ಅವರು ಸರಳ ವ್ಯಕ್ತಿತ್ವ ನನಗೆ ಮಾದರಿಯಾಗಿದೇ ಎಂದು ಹೇಳಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ