ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬ್ರೆಜಿಲ್ ದೇಶಕ್ಕೆ ಹೋಗಿ ಆಗ್ನೇಯ ದಿಕ್ಕಿಗೆ ಹೊರಟರೆ ಬೆಲೋ ಹಾರಿಝಾಂಟ್ ಎಂಬ ಊರು ಸಿಗುತ್ತದೆ ಅಲ್ಲಿಂದ ಪೂರ್ವಕ್ಕೆ ಹೊರಟರೆ ನೊಯಿವಾ -ಡೂ- ಒಡೇರಿಯೋ (Noiva do Cordeiro)ಎಂಬ ಹೆಸರಿನ ಊರಿಗೆ ಹೋಗಬೇಕು.
ಆ ಊರಿನಲ್ಲಿ ಅಂದ ಅನ್ನೋಅಂದಕ್ಕೇನೆ ಹಂಗಿದಂಗಂಗೆ ಉಂಡೆನಾಮ ತಿಕ್ಕಿದಂತೆ ಬೆಳ್ಳಗಾಗಿಸಿ ಮಿರಿಮಿರಿ ಮಿಂಚಿಸಿದಂತಹಾ ಹುಡುಗಿಯರಿದ್ದಾರಂತೆ, ಅದರಲ್ಲೂ ಅವರ ಮೇಲೆ ನಲವತ್ತು ಹಿಡಿ ಮರಳು ಅವರ ಮೇಲೆಸೆದರೂ ಕೆಳಕ್ಕಿಳಿಯದಷ್ಟು ಹುಡುಗಿಯರ ರಾಶಿ ರಾಶಿ ಇದ್ದಾರೆ !
ಬರೀ ಹುಡುಗಿಯರೋ ಅಥವಾ ವಯಸ್ಸಾದವರೋ ಅಂತ ಕೇಳುವ ಹಾಗೆಯೇ ಇಲ್ಲ ಭಾರತೀಯ ಮಾಪನವಾದ ಏಳು ಮಲ್ಲಿಗೆ ತೂಕದ ಹುಡುಗಿಯರಿಂದ ಹಿಡಿದು ಎಲ್ಲಾ ತೂಕದ ಮಲ್ಲಿಗೆಯಂತಾ ಹುಡುಗಿಯರು ಕೂಡ ಇಲ್ಲಿದ್ದಾರೆ. ಇಲ್ಲಿರುವವರಲ್ಲಿ ಹಲವರನ್ನು ನೋಡಿದರೆ ಇಂದ್ರ ಇಲ್ಲಿಂದಲೇ ಆಯ್ಕಂಡ್ ಹೋಗಿರಬಹುದು ಎಂಬ ಸಂದೇಹ ಬರುವಷ್ಟು ಸುರಸುಂದರಿಯವರು ಇವರು.
ಇದ್ಯಾಕೆ ಹೀಗೆ ಅನ್ನೋದು ಬದಿಗಿರಲಿ ಮೊದಲಿಗೆ ಇವರ ಕಾನೂನು ಅನ್ನೋದಕ್ಕಿಂತ ಇವರು ಬದುಕುತ್ತಿರುವ ರೀತಿ ಸ್ವಲ್ಪ ವಿಚಿತ್ರವಿದೆ ಅಂದರೆ ಯಾರಾದರೂ ಹುಡುಗ ಇಲ್ಲಿನ ಹುಡುಗಿಯರನ್ನು ಮದುವೆ ಆಗುವುದಾದರೆ ಹುಡುಗಿ ಒಪ್ಪಿದರೆ ಆಗಬಹುದು .
ಆದರೆ ಮದುವೆಯಾದ ನಂತರ ವಾರಕ್ಕೊಮ್ಮೆ ಮಾತ್ರ ಗಂಡ ಮನೆಗೆ ಬರಬೇಕು ಹಾಗೂ ಜೊತೆಗಿದ್ದು ದುಡಿಮೆಯ ಲೆಕ್ಕ ಕೊಟ್ಟು ಮರುದಿನ ಕೆಲಸಕ್ಕೆ ಹೊರಡುತ್ತಿರಬೇಕು ! ಗಂಡನನ್ನು ಜೊತೆಯಲ್ಲೇ ಇಟ್ಟುಕೊಂಡು ಬದುಕಲು ಇವರಿಗೆ ಇಷ್ಟವಿಲ್ಲ ! ಇನ್ನು ಮಕ್ಕಳಾದಾಗ ಅದು ಗಂಡಾದರೆ ಆ ಹುಡುಗನಿಗೆ ಹದಿನೆಂಟು ವರ್ಷ ವಯಸ್ಸಾದದ್ದೇ ತಡ, ಒದ್ದು ದುಡಿಯಲು ಕಳುಹಿಸುತ್ತಾರೆ .
ಅವರ ಪ್ರೀತಿ ಪಾತ್ರವಾದ ಹೆಣ್ಣು ಹುಟ್ಟಿದರೆ ಅವರಂತೆಯೇ ನಿರಾತಂಕವಾಗಿ ಹೊಲದಲ್ಲಿ ಕೆಲಸ ಮಾಡುತ್ತಾ ಲೇಡಿ ರೈತರಂತೆ ಬದುಕಬಹುದು. ಅಲ್ಲಿನ ಪ್ರಮುಖ ಕೆಲಸವೇ ಕೃಷಿ ಹಾಗಂದ ಮಾತ್ರಕ್ಕೆ ಅದಾವುದೋ ಹಳೇ ನೈಟಿ ತೊಟ್ಟು ಹೊಲದಲ್ಲಿ ಕೆಲಸ ಮಾಡುವುದಿಲ್ಲ .ಫುಲ್ಲೀ ಅಪಡೇಟೇಡ್ ನಯಾ ನಯಾ ಡ್ರೆಸ್ ಧರಿಸಿ ಟಿಪ್ ಟಾಪಾಗಿ ಇರುವ ಟ್ರೆಂಡೀ ಹುಡುಗಿಯವರು ಇವರು.
ಅಸಲಿಗೆ ಇವರು ಹೀಗಾಗಿದ್ದಕ್ಕೆ ಕಾರಣ ಏನು ಅಂತ ಹಿನ್ನೆಲೆ ತಿಳಿಯಲು ನೋಡಿದರೆ ಹಿಂದೆಮ್ಮೆ 1891 “ಮರಿಯಾ ಸನ್ಹೋರಿಯಾ”ಎಂಬ ಹುಡುಗಿಗೆ ಮದುವೆ ಮಾಡಲು ಮುಂದಾದಾಗ ಆ ಹುಡುಗಿಗೆ ಹುಡುಗ ಇಷ್ಟವಾಗದೆ ಮದುವೆಗೆ ಒಪ್ಪುವುದಿಲ್ಲ ಆಗ ಹುಡುಗಿ ಮನೆಯವರೂ ಕೂಡ ಸುಮ್ಮನಾಗುತ್ತಾರೆ ಆದರೆ ಆ ಊರಿನ ಜನ ಈ ಹುಡುಗಿಯ ವಿರುದ್ಧ ತಿರುಗಿಬಿದ್ದು ಗಡೀಪಾರು ಮಾಡುತ್ತಾರೆ ಆ ಹುಡುಗಿ ಅಲ್ಲಿಂದ ಹೊರಬಂದು ಊರ ಹೊರಗಿನ ಜಾಗದಲ್ಲಿ ಹೊಸ ಊರನ್ನು ಸೃಷ್ಟಿಸುತ್ತಾಳೆ .
ಆನಂತರ ಹಿರಿಯಕ್ಕನ ಚಾಳಿ ಮನೆ ಮಕ್ಕಳಿಗೆಲ್ಲಾ ಎಂಬಂತೆ ಇದೇ ಊರಿನಲ್ಲಿ ಮದುವೆ ವಿರೋಧಿಸಿದವರೆಲ್ಲಾ ಇವರಳ ಊರಿಗೆ ಸೇರಿ ಇವರದ್ದೇ ಸ್ವಂತ ನೆಲೆಯಾಗಿಸಿಕೊಳ್ಳುತ್ತಾ ಸಾಗುತ್ತಾರೆ ಅದೇ ಈ ಊರು ನೊಯಿವಾ -ಡೂ- ಒಡೇರಿಯೋ.
ಈಗ ಪ್ರಶ್ನೆ ಅವರ ಅಕ್ಕ ಪಕ್ಕ ಊರಿನವರು ಈ ಹುಡುಗಿಯರನ್ನ ಮದುವೆ ಆಗಬಹುದಲ್ಲ ಎಂದು .ಆದರೆ ಸಂಭಂದದ ರೀತಿ ನೋಡಿದರೆ ಇಲ್ಲಿರುವ ಶೇ 90 ರಷ್ಟು ಹುಡುಗಿಯರು ಅಕ್ಕಪಕ್ಕದ ಊರಿನವರಿಗೆ ಅಕ್ಕ.ತಂಗಿಯರಾಗಬೇಕಂತೆ ಇದು ಸಮಸ್ಯೆ.
ಕೃಪೆ: ಉಮೇಶ್ ಆಚಾರ್
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಇತ್ತೀಚಿನ ವೇಗದ ಜೀವನ ಶೈಲಿಯಲ್ಲಿ ಬಹಳಷ್ಟು ಜನರಿಗೆ ಮಾರುಕಟ್ಟೆಗಳಿಗೆ ಹೋಗಿ ತಮಗೆ ಬೇಕಾದ ವಸ್ತುಗಳನ್ನ ಕೊಂಡುಕೊಳ್ಳಲು ಸಮಯವಿಲ್ಲ, ಅಷ್ಟೆ ಯಾಕೆ ತಾವು ತಮ್ಮ ಕೆಲಸ ಮುಗಿಸಿ ಮನೆಗೆ ಬಂದರೆ ತಮ್ಮ ಹೊಟ್ಟೆಗೆ ಊಟ ಮಾಡಿಕೊಂಡು ತಿನ್ನಲು ಸಹ ಸಮಯವಿಲ್ಲ. ಇಂತಹ ಎಲ್ಲಾ ಸಮಸ್ಯೆಗಳಿಗೂ ಪರಿಹಾರವೆಂಬಂತೆ ಹಲವಾರು ಆನ್ಲೈನ್ ಶಾಪಿಂಗ್ (ಅಂತರ್ಜಲ ಮಾರುಕಟ್ಟೆ) ವೆಬಸೈಟ್ಗಳು ಪ್ರಾರಂಭವಾಗಿವೆ. ಇದರೊಂದಿಗೆ ಊಟವನ್ನು ಸಹ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆಯನ್ನು ಸಹ ನಾವು ಕಾಣಬಹುದು. ಆದರೆ ಇವುಗಳೆಲ್ಲ ದೊಡ್ಡ ದೊಡ್ಡ ನಗರಗಳಿಗೆ ಮಾತ್ರ…
ನೋಡುವುದಕ್ಕೆ ಸಣ್ಣ ದಾರದಂತಿದೆ… ಆದರೆ, ಇದು ಮಾಡುವ ಕೆಲಸ ಅತಿ ಭಯಾನಕ. ಮನುಷ್ಯನ ಮೆದುಳನ್ನು ಸ್ವಲ್ಪ ಸ್ವಲ್ಪವೇ ತಿನ್ನುವುದು ಈ ಹುಳುವಿನ ಕೆಲಸ. ವೈದ್ಯಕೀಯ ಪರಿಭಾಷೆಯಲ್ಲಿ ಇದನ್ನು `ಟೇಪ್ ವರ್ಮ್’ ಎಂದು ಕರೆಯುತ್ತಾರೆ. ಇಂತಹ ವಿಚಿತ್ರ ಹುಳುವನ್ನು ವ್ಯಕ್ತಿಯೊಬ್ಬರ ಮೆದುಳಿನಿಂದ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದಿದ್ದಾರೆ ಆಗ್ನೇಯ ಚೀನಾದ 36 ವರ್ಷದ ವಾಂಗ್ ಎಂಬವರು ಬರೋಬ್ಬರಿ 15 ವರ್ಷಗಳಿಂದ ಈ ದಾರದಂತಹ ಹುಳುವಿನ ಕಾಟದಿಂದ ನಲುಗಿದ್ದರು. ಸುಮಾರು 12 ಸೆಂಟಿ ಮೀಟರ್ನಷ್ಟು ಉದ್ದವಿದ್ದ ಈ ಹುಳು…
ಸ್ಯಾಂಡಲ್ವುಡ್ ನಟಿ ಶ್ರುತಿ ಹರಿಹರನ್ ಅವರು ತಮ್ಮ ಮಗಳ ನಾಮಕರಣವನ್ನು ನೆರವೇರಿಸಿದ್ದಾರೆ. ಸದ್ಯ ನಾಮಕರಣದ ಫೋಟೋವನ್ನು ಶ್ರುತಿ ಅವರ ಪತಿ ರಾಮ್ ಕಲರಿ ಅವರು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಶ್ರುತಿ ಹರಿಹರನ್ ಮುದ್ದಿನ ಮಗಳು ಹೇಗಿದ್ದಾಳೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇದೆ. ಆದ್ರೀಗ ಶ್ರುತಿ ಮಗಳ ಮೊದಲ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಶ್ರುತಿ ಪತಿ ರಾಮ್ ಮಗಳ ನಾಮಕರಣದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಮುದ್ದು ಮಗಳಿಗೆ ಶ್ರುತಿ ದಂಪತಿ ಇಟ್ಟ ಹೆಸರೇನು ಗೊತ್ತಾ?…
ಹೋಟೆಲ್ ಹಾಗೂ ರೆಸ್ಟೋರೆಂಟ್ಗಳಲ್ಲಿ ಗ್ರಾಹಕರಿಗೆ ನೀಡಲಾಗುವ ಆಹಾರಕ್ಕೆ ಮಿತಿ ಹೇರಲು ಕೇಂದ್ರ ಸರ್ಕಾರ ಮುಂದಾಗಿದೆ. ಅಲ್ಲದೇ, ಒಬ್ಬ ವ್ಯಕ್ತಿ ಗರಿಷ್ಠ ಎಷ್ಟುಆಹಾರ ಸೇವಿಸಬಲ್ಲ ಎಂಬುದನ್ನು ಹೋಟೆಲ್ನವರೇ ತಿಳಿಸಬೇಕು ಹೇಳಿದೆ.
ಕಣಿವೆ ರಾಜ್ಯ ಜಮ್ಮು- ಕಾಶ್ಮೀರದ ಪುಲ್ವಾಮ ಹಾಗೂ ಶೂಪಿಯಾನ್ ಬಳಿ ಭದ್ರತಾ ಪಡೆಗಳು ನಡೆಸಿದ ಪ್ರತ್ಯೇಕ ಎನ್ ಕೌಂಟರ್ ಗಳಲ್ಲಿ ಆರು ಮಂದಿ ಉಗ್ರರು ಹತ್ಯೆಯಾಗಿದ್ದಾರೆ. ಈ ಮಧ್ಯೆ ಯೋಧರು ಹುತಾತ್ಮರಾಗಿದ್ದು, ನಾಗರಿಕರೊಬ್ಬರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಪುಲ್ವಾಮಾದಲ್ಲಿ ಮೂವರು ಜೈಷ್ -ಇ- ಮೊಹಮ್ಮದ್ ಸಂಘಟನೆ ಉಗ್ರರು ಹತ್ಯೆಯಾಗಿದ್ದರೆ, ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ಈ ಮಧ್ಯೆ ನಾಗರಿಕರೊಬ್ಬರು ಮೃತಪಟ್ಟಿದ್ದಾರೆ. ಶೂಪಿಯಾನ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳ ಜೊತೆಗಿನ ಗುಂಡಿನ ಕಾಳಗದಲ್ಲಿ ಮೂವರು ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸ್…
ಪಶ್ಚಿಮ ಬಂಗಾಳ ಹಾಗೂ ಬಿಹಾರದಲ್ಲಿ ಇವಿಎಂ ಹ್ಯಾಕ್ ಸುದ್ದಿ ಪಸರಿಸಿರೋ ಬೆನ್ನಲ್ಲೇ ಬೆಂಗಳೂರಿನಲ್ಲಿ ಮತಪೆಟ್ಟಿಗೆ ಇರುವ ಕೇಂದ್ರಗಳ ಮೇಲೆ ಹದ್ದಿನ ಕಣ್ಣು ಇಡಲಾಗಿದೆ. ಕೇಂದ್ರ ವಿಭಾಗದ ಮತಪೆಟ್ಟಿಗೆ ಮೌಂಟ್ ಕಾರ್ಮಲ್ ಕಾಲೇಜಿನಲ್ಲಿ, ದಕ್ಷಿಣ ವಿಭಾಗದ ಜಯನಗರ ಎನ್ಎಂಕೆಆರ್ ವಿ ಕಾಲೇಜಿನಲ್ಲಿ ಕಡೆಯದಾಗಿ ಉತ್ತರ ವಿಭಾಗದ ಮತಪೆಟ್ಟಿಗೆ ಮಹಾರಾಣಿ ಕಾಲೇಜಿನಲ್ಲಿ ಭದ್ರವಾಗಿದೆ. ಈ ಮತಪೆಟ್ಟಿಗೆ ಸ್ಟ್ರಾಂಗ್ ರೂಂ ಒಳಗೆ ಓಡಾಡಲು ನಿಯೋಜಿತ ಸಿಬ್ಬಂದಿ, ಗುರುತಿನ ಚೀಟಿ ಇರುವ ಅಭ್ಯರ್ಥಿ, ಅಭ್ಯರ್ಥಿಯ ಏಜೆಂಟ್ಗೆ ಮಾತ್ರ ಪ್ರವೇಶವಿದೆ. ಉಳಿದಂತೆ ಯಾರಿಗೂ ಸಹ…