ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬ್ರೆಜಿಲ್ ದೇಶಕ್ಕೆ ಹೋಗಿ ಆಗ್ನೇಯ ದಿಕ್ಕಿಗೆ ಹೊರಟರೆ ಬೆಲೋ ಹಾರಿಝಾಂಟ್ ಎಂಬ ಊರು ಸಿಗುತ್ತದೆ ಅಲ್ಲಿಂದ ಪೂರ್ವಕ್ಕೆ ಹೊರಟರೆ ನೊಯಿವಾ -ಡೂ- ಒಡೇರಿಯೋ (Noiva do Cordeiro)ಎಂಬ ಹೆಸರಿನ ಊರಿಗೆ ಹೋಗಬೇಕು.
ಆ ಊರಿನಲ್ಲಿ ಅಂದ ಅನ್ನೋಅಂದಕ್ಕೇನೆ ಹಂಗಿದಂಗಂಗೆ ಉಂಡೆನಾಮ ತಿಕ್ಕಿದಂತೆ ಬೆಳ್ಳಗಾಗಿಸಿ ಮಿರಿಮಿರಿ ಮಿಂಚಿಸಿದಂತಹಾ ಹುಡುಗಿಯರಿದ್ದಾರಂತೆ, ಅದರಲ್ಲೂ ಅವರ ಮೇಲೆ ನಲವತ್ತು ಹಿಡಿ ಮರಳು ಅವರ ಮೇಲೆಸೆದರೂ ಕೆಳಕ್ಕಿಳಿಯದಷ್ಟು ಹುಡುಗಿಯರ ರಾಶಿ ರಾಶಿ ಇದ್ದಾರೆ !

ಬರೀ ಹುಡುಗಿಯರೋ ಅಥವಾ ವಯಸ್ಸಾದವರೋ ಅಂತ ಕೇಳುವ ಹಾಗೆಯೇ ಇಲ್ಲ ಭಾರತೀಯ ಮಾಪನವಾದ ಏಳು ಮಲ್ಲಿಗೆ ತೂಕದ ಹುಡುಗಿಯರಿಂದ ಹಿಡಿದು ಎಲ್ಲಾ ತೂಕದ ಮಲ್ಲಿಗೆಯಂತಾ ಹುಡುಗಿಯರು ಕೂಡ ಇಲ್ಲಿದ್ದಾರೆ. ಇಲ್ಲಿರುವವರಲ್ಲಿ ಹಲವರನ್ನು ನೋಡಿದರೆ ಇಂದ್ರ ಇಲ್ಲಿಂದಲೇ ಆಯ್ಕಂಡ್ ಹೋಗಿರಬಹುದು ಎಂಬ ಸಂದೇಹ ಬರುವಷ್ಟು ಸುರಸುಂದರಿಯವರು ಇವರು.

ಇದ್ಯಾಕೆ ಹೀಗೆ ಅನ್ನೋದು ಬದಿಗಿರಲಿ ಮೊದಲಿಗೆ ಇವರ ಕಾನೂನು ಅನ್ನೋದಕ್ಕಿಂತ ಇವರು ಬದುಕುತ್ತಿರುವ ರೀತಿ ಸ್ವಲ್ಪ ವಿಚಿತ್ರವಿದೆ ಅಂದರೆ ಯಾರಾದರೂ ಹುಡುಗ ಇಲ್ಲಿನ ಹುಡುಗಿಯರನ್ನು ಮದುವೆ ಆಗುವುದಾದರೆ ಹುಡುಗಿ ಒಪ್ಪಿದರೆ ಆಗಬಹುದು .

ಆದರೆ ಮದುವೆಯಾದ ನಂತರ ವಾರಕ್ಕೊಮ್ಮೆ ಮಾತ್ರ ಗಂಡ ಮನೆಗೆ ಬರಬೇಕು ಹಾಗೂ ಜೊತೆಗಿದ್ದು ದುಡಿಮೆಯ ಲೆಕ್ಕ ಕೊಟ್ಟು ಮರುದಿನ ಕೆಲಸಕ್ಕೆ ಹೊರಡುತ್ತಿರಬೇಕು ! ಗಂಡನನ್ನು ಜೊತೆಯಲ್ಲೇ ಇಟ್ಟುಕೊಂಡು ಬದುಕಲು ಇವರಿಗೆ ಇಷ್ಟವಿಲ್ಲ ! ಇನ್ನು ಮಕ್ಕಳಾದಾಗ ಅದು ಗಂಡಾದರೆ ಆ ಹುಡುಗನಿಗೆ ಹದಿನೆಂಟು ವರ್ಷ ವಯಸ್ಸಾದದ್ದೇ ತಡ, ಒದ್ದು ದುಡಿಯಲು ಕಳುಹಿಸುತ್ತಾರೆ .

ಅವರ ಪ್ರೀತಿ ಪಾತ್ರವಾದ ಹೆಣ್ಣು ಹುಟ್ಟಿದರೆ ಅವರಂತೆಯೇ ನಿರಾತಂಕವಾಗಿ ಹೊಲದಲ್ಲಿ ಕೆಲಸ ಮಾಡುತ್ತಾ ಲೇಡಿ ರೈತರಂತೆ ಬದುಕಬಹುದು. ಅಲ್ಲಿನ ಪ್ರಮುಖ ಕೆಲಸವೇ ಕೃಷಿ ಹಾಗಂದ ಮಾತ್ರಕ್ಕೆ ಅದಾವುದೋ ಹಳೇ ನೈಟಿ ತೊಟ್ಟು ಹೊಲದಲ್ಲಿ ಕೆಲಸ ಮಾಡುವುದಿಲ್ಲ .ಫುಲ್ಲೀ ಅಪಡೇಟೇಡ್ ನಯಾ ನಯಾ ಡ್ರೆಸ್ ಧರಿಸಿ ಟಿಪ್ ಟಾಪಾಗಿ ಇರುವ ಟ್ರೆಂಡೀ ಹುಡುಗಿಯವರು ಇವರು.

ಅಸಲಿಗೆ ಇವರು ಹೀಗಾಗಿದ್ದಕ್ಕೆ ಕಾರಣ ಏನು ಅಂತ ಹಿನ್ನೆಲೆ ತಿಳಿಯಲು ನೋಡಿದರೆ ಹಿಂದೆಮ್ಮೆ 1891 “ಮರಿಯಾ ಸನ್ಹೋರಿಯಾ”ಎಂಬ ಹುಡುಗಿಗೆ ಮದುವೆ ಮಾಡಲು ಮುಂದಾದಾಗ ಆ ಹುಡುಗಿಗೆ ಹುಡುಗ ಇಷ್ಟವಾಗದೆ ಮದುವೆಗೆ ಒಪ್ಪುವುದಿಲ್ಲ ಆಗ ಹುಡುಗಿ ಮನೆಯವರೂ ಕೂಡ ಸುಮ್ಮನಾಗುತ್ತಾರೆ ಆದರೆ ಆ ಊರಿನ ಜನ ಈ ಹುಡುಗಿಯ ವಿರುದ್ಧ ತಿರುಗಿಬಿದ್ದು ಗಡೀಪಾರು ಮಾಡುತ್ತಾರೆ ಆ ಹುಡುಗಿ ಅಲ್ಲಿಂದ ಹೊರಬಂದು ಊರ ಹೊರಗಿನ ಜಾಗದಲ್ಲಿ ಹೊಸ ಊರನ್ನು ಸೃಷ್ಟಿಸುತ್ತಾಳೆ .

ಆನಂತರ ಹಿರಿಯಕ್ಕನ ಚಾಳಿ ಮನೆ ಮಕ್ಕಳಿಗೆಲ್ಲಾ ಎಂಬಂತೆ ಇದೇ ಊರಿನಲ್ಲಿ ಮದುವೆ ವಿರೋಧಿಸಿದವರೆಲ್ಲಾ ಇವರಳ ಊರಿಗೆ ಸೇರಿ ಇವರದ್ದೇ ಸ್ವಂತ ನೆಲೆಯಾಗಿಸಿಕೊಳ್ಳುತ್ತಾ ಸಾಗುತ್ತಾರೆ ಅದೇ ಈ ಊರು ನೊಯಿವಾ -ಡೂ- ಒಡೇರಿಯೋ.

ಈಗ ಪ್ರಶ್ನೆ ಅವರ ಅಕ್ಕ ಪಕ್ಕ ಊರಿನವರು ಈ ಹುಡುಗಿಯರನ್ನ ಮದುವೆ ಆಗಬಹುದಲ್ಲ ಎಂದು .ಆದರೆ ಸಂಭಂದದ ರೀತಿ ನೋಡಿದರೆ ಇಲ್ಲಿರುವ ಶೇ 90 ರಷ್ಟು ಹುಡುಗಿಯರು ಅಕ್ಕಪಕ್ಕದ ಊರಿನವರಿಗೆ ಅಕ್ಕ.ತಂಗಿಯರಾಗಬೇಕಂತೆ ಇದು ಸಮಸ್ಯೆ.
ಕೃಪೆ: ಉಮೇಶ್ ಆಚಾರ್
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಯಾವುದೇ ರಾಜ್ಯದಲ್ಲಿ ಚುನಾವಣೆ ಬಂದಾಗ ತಮ್ಮ ನಾಯಕರು ಗೆಲ್ಲಲೆಂದು ಅಭಿಮಾನಿಗಳು ಎನೆಲ್ಲಾ ಕಸರತ್ತುಗಳನ್ನು ಮಾಡುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ. ತೆಲಂಗಾಣ ವಿಧಾನಸಭಾ ಚುನಾವಣಾ ಕಣ ಚಿತ್ರ, ವಿಚಿತ್ರ ಸಂಗತಿಗಳಿಂದ ಗಮನ ಸೆಳೆಯುತ್ತಿದೆ. ಚುನಾವಣೆಯಲ್ಲಿ ತಮ್ಮ ನಾಯಕರು ಗೆಲಲ್ಲಿ ಎಂದು ಜನರು ಹೋಮ, ಯಜ್ಞ ಮತ್ತಿತರ ಪೂಜೆ ಮಾಡುತ್ತಿದ್ದರೆ, ಕೆಲವರು ದೇವಾಲಯಗಳಿಗೆ ಲಕ್ಷ ಗಟ್ಟಲೇ ಹಣದ ಆಮಿಷವೊಡ್ಡುತ್ತಿದ್ದಾರೆ. ಮತ್ತೆ ಕೆಲವರು ಮೂಢನಂಬಿಕೆಗಳಿಗೆ ಜೋತು ಬಿದಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ ಪಶ್ಚಿಮ ಗೋಧಾವರಿ ಜಿಲ್ಲೆಯ ಮಹೇಶ್ ಎಂಬಾತ ಇನ್ನೂ…
ಸ್ವೀಡನ್ ದೇಶಕ್ಕೆ ಸೇರಿದ ಲೀನಾ ಅನ್ನುವ ಮಹಿಳೆ 16 ವರ್ಷಗಳ ಹಿಂದೆ ತನ್ನ ಮನೆಯಲ್ಲಿ ಇದ್ದಾಗ ತನ್ನ ಮದುವೆಯ ದಿನ ಗಂಡ ಕೊಡಿಸಿದ್ದ ಅಮೂಲ್ಯವಾದ ವಸ್ತುವನ್ನ ಕಳೆದುಕೊಳ್ಳುತ್ತಾಳೆ. ಇನ್ನು ಅದೂ ವೆಡ್ಡಿಂಗ್ ರಿಂಗ್ ಮತ್ತು ದುಬಾರಿ ಬೆಲೆಯ ವಜ್ರದ ಉಂಗುರ ಆದ್ದರಿಂದ ತುಂಬಾ ಬೇಜಾರು ಮಾಡಿಕೊಂಡು ಕಣ್ಣೀರು ಹಾಕುತ್ತ ಮಕ್ಕಳ ಜೊತೆ ಮನೆಯ ತುಂಬಾ ಹುಡುಕಿದಳು ಲೀನಾ, ಆದರೆ ಎಷ್ಟೇ ಹುಡುಕಿದರೂ ಕೂಡ ಆ ಉಂಗುರ ಮಾತ್ರ ಸಿಗಲೇ ಇಲ್ಲ. ಹೀಗೆ 16 ವರ್ಷ ಕಳೆದ ನಂತರ…
ವಾಸ್ತುಶಾಸ್ತ್ರವೆನ್ನುವುದು ಶತಮಾನಕ್ಕಿಂತಲೂ ಹಿಂದಿನಿಂದಲೂ ಇತ್ತು. ಆಗಿನ ಕಾಲದಲ್ಲಿ ಕಟ್ಟಡ, ಮನೆ ಹಾಗೂ ಯಾವುದೇ ರೀತಿಯ ನಿರ್ಮಾಣ ಮಾಡಬೇಕಿದ್ದರೂ ವಾಸ್ತು ಪ್ರಕಾರವೇ ಅದನ್ನು ಮಾಡಿಕೊಂಡು ಬರಲಾಗುತ್ತಿತ್ತು. ಇಂದಿನ ದಿನಗಳಲ್ಲಿ ಪ್ರತಿಯೊಂದು ವಿಚಾರವೂ ವಾಣಿಜ್ಯೀಕರಣವಾಗಿರುವ ಹಿನ್ನೆಲೆಯಲ್ಲಿ ವಾಸ್ತು ಶಾಸ್ತ್ರವು ಹಾಗೆ ಆಗಿದೆ. ವಾಸ್ತುಶಾಸ್ತ್ರವು ಅತಿಯಾಗಿ ಜನಪ್ರಿಯತೆ ಪಡೆದುಕೊಂಡಿದೆ. ಇದರಿಂದ ಇಂದು ಯಾವುದೇ ಮನೆ ಅಥವಾ ವಾಣಿಜ್ಯ ಕಟ್ಟಡವನ್ನು ನಿರ್ಮಾಣ ಮಾಡಬೇಕಿದ್ದರೂ ಅಲಂಕಾರ ಅಥವಾ ಯಾವುದೇ ಪೀಠೋಪಕರಣ ಇಡಬೇಕಿದ್ದರೂ ಅದನ್ನು ವಾಸ್ತುಶಾಸ್ತ್ರದ ಪ್ರಕಾರ ಮಾಡಲಾಗುತ್ತದೆ. ಮನೆ ಅಥವಾ ಕಟ್ಟಡದಲ್ಲಿ ಸುಖ, ಸಮೃದ್ಧಿ ನೆಲೆಸಬೇಕಿದ್ದರೆ…
ಈರುಳ್ಳಿಯನ್ನು ಕ್ರಮವಾಗಿ ಸೇವಿಸುತ್ತಾ ಬಂದರೆ ಮೂಳೆಗಳು, ನರಗಳು ದೃಢವಾಗಿರುತ್ತವೆಯಂತೆ. ಎರಡೂ ಹೊತ್ತಿನ ಊಟದಲ್ಲಿ ಹಸಿ ಈರುಳ್ಳಿ ಮಜ್ಜಿಗೆ ಅನ್ನದೊಂದಿಗೆ ಸೇವಿಸುವವರು ನಿತ್ಯ ಆರೋಗ್ಯವಂತರಾಗಿ ಮುಂದುವರೆಯುತ್ತಾರೆ.
ಭಾರತದ ಮಾಜಿ ನಾಯಕ ಮತ್ತು ಕ್ರಿಕೆಟ್ನ ಶ್ರೇಷ್ಠ ಆಲ್ರೌಂಡರ್ಗಳಲ್ಲಿ ಒಬ್ಬರಾದ ಕಪಿಲ್ ದೇವ್ ಇಂದು ಜನವರಿ 6, 2022 ರಂದು ತಮ್ಮ 63 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಬಹುಶಃ ಭಾರತವು ನಿರ್ಮಿಸಿದ ಶ್ರೇಷ್ಠ ಆಲ್ರೌಂಡರ್ ಮತ್ತು ಭಾರತ ಪ್ರಸ್ತುತಪಡಿಸಿದ ಮೊದಲ ನಿಜವಾದ ವೇಗಿಗಳಲ್ಲಿ ಒಬ್ಬರು ಜಗತ್ತಿಗೆ, ಕಪಿಲ್ ದೇವ್ 1978 ರಲ್ಲಿ ಪ್ರಾರಂಭವಾದ ಅಂತಸ್ತಿನ ವೃತ್ತಿಜೀವನವನ್ನು ಹೊಂದಿದ್ದರು. ಭಾರತದ ಮಾಜಿ ನಾಯಕ ಮತ್ತು ಕ್ರಿಕೆಟ್ನ ಶ್ರೇಷ್ಠ ಆಲ್ರೌಂಡರ್ಗಳಲ್ಲಿ ಒಬ್ಬರಾದ ಕಪಿಲ್ ದೇವ್ ಇಂದು ಜನವರಿ 6, 2022…
![]()
ಇನ್ಫೋಸಿಸ್ ದಂಪತಿ ನಾರಾಯಣ ಮೂರ್ತಿ, ಸುಧಾ ಮೂರ್ತಿ ಅವರ ಮಗನ ಮದುವೆ ಡಿ. 2ರಂದು ಬೆಂಗಳೂರಿನ ಹೋಟೆಲಿನಲ್ಲಿ ಸರಳವಾಗಿ ನಡೆಯಲಿದೆ. ಸುಧಾಮೂರ್ತಿ ಅವರ ಮಗ ರೋಹನ್ ಮೂರ್ತಿ ಅವರು ಕೇರಳದ ಕೊಚ್ಚಿ ಮೂಲದ ಅರ್ಪಣಾ ಕೃಷ್ಣನ್ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈ ಮದುವೆ ಸರಳವಾಗಿ ನಡೆಯಲಿದ್ದು, ಕೇವಲ ಕುಟುಂಬಸ್ಥರು ಹಾಗೂ ಆತ್ಮೀಯ ಸ್ನೇಹಿತರಿಗೆ ಆಹ್ವಾನ ನೀಡಲಾಗಿದೆ. ರೋಹನ್ ಹಾಗೂ ಅರ್ಪಣಾ ಸ್ನೇಹಿತರೊಬ್ಬರ ಮೂಲಕ ಮೂರು ವರ್ಷಗಳಿಂದ ಪರಿಚಯವಾಗಿದ್ದರು. ಅರ್ಪಣಾ ನಿವೃತ್ತ ಎಸ್ಬಿಐ ಉದ್ಯೋಗಿ ಸಾವಿತ್ರಿ…