ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಮ್ಮ ಭಾರತ ಶಾಂತಿ ಪ್ರಿಯ ರಾಷ್ಟ್ರ. ಪಕ್ಕದ ಶತ್ರು ರಾಷ್ಟ್ರಗಳು ಏನೇ ಮಾಡಿದರೂ,ಅವರಿಗೆ ಎಚ್ಚರಿಕೆ ಮಾತ್ರ ಕೊಡುತ್ತಾ ಬರುತ್ತೇವೆ.ಇನ್ನೊಮ್ಮೆ ಹೀಗೆ ಮಾಡಿದ್ರೆ ನಾವು ಸುಮ್ಮನಿರಲ್ಲ ಅಂತ ಎಚ್ಚರಿಕೆ ಮಾತ್ರ ಕೊಡುತ್ತಾ ಬರುತ್ತೇವೆ. ಆದ್ರೆ ಕೆಲವೊಂದು ರಾಷ್ಟ್ರಗಳು ಇದಕ್ಕೆ ತದ್ವಿರುದ್ದ.ಏಕೆಂದರೆ ಅವರು ನಮ್ಮ ತರ ಎಚ್ಚರಿಕೆ ಮಾತ್ರ, ಯಾವುದೋ ಒಂದು ರೀತಿ ಸೇಡು ತೀರಿಸಿಕೊಳ್ಳುತ್ತವೆ.
ಅದೇ ರೀತಿ ಇಸ್ರೇಲ್ ದೇಶ ಸಹ. 1972 ರಲ್ಲಿ ಇಸ್ರೇಲಿನ ಫೂಟಬಾಲ್ ಟೀಮ್ ಮೇಲೆ ಭಯೋತ್ಪಾದಕರು ದಾಳಿ ನಡೆಸಿ ಎಲ್ಲರನ್ನೂ ಕೊಂದುಹಾಕಿ ಮರ್ಮಾಂಗ ಕತ್ತರಿಸಿದ್ದರು. ಈ ಕೃತ್ಯಕ್ಕಾಗಿ ಇಸ್ರೇಲ್ ಸೇಡು ತೀರಿಸಿಕೊಂಡ ರೀತಿ ತುಂಬಾ ರೋಚಕವಾಗಿದೆ.ಮುಂದೆ ಓದಿ….
ಈ ಕೃತ್ಯ ನಂತರ ಇಸ್ರೇಲ್ ದೇಶವು ಅತ್ಯಂತ ರಹಸ್ಯವಾದ ಒಂದು “ಮೊಸ್ಸಾದ್ ” ಎಂಬ ಟೀಮ್ ರಚಿಸಿ, ಈ ದಾಳಿಗೆ ಕಾರಣರಾದ ಎಲ್ಲಾ ಭಯೋತ್ಪಾದಕರನ್ನು ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ಕೊಲ್ಲಲು ನಿರ್ಧರಿಸಿದರು. ಆದರೆ ಅದಾಗಲೇ ಅವರೆಲ್ಲರೂ ಪ್ರಪಂಚದ ಬೇರೆ ಬೇರೆ ದೇಶಗಳಿಗೆ ಹೋಗಿ ಅಡಗಿದ್ದರು. ಇಸ್ರೇಲ್ ಈ ಎಲ್ಲರನ್ನೂ ಮುಗಿಸಲು ತೆಗೆದುಕೊಂಡಿದ್ದು ಬರೋಬ್ಬರಿ ಇಪ್ಪತ್ತು ವರ್ಷ. ಕಾರ್ಯಾಚರಣೆ ಅಷ್ಟೂ ವರ್ಷ ನಡೆದಿತ್ತು. ಇದು ಯಾವ ಹಾಲಿವುಡ್ ಚಿತ್ರಗಳಿಗಿಂತಲೂ ಕಡಿಮೆ ಇರಲಿಲ್ಲ, ಅಷ್ಟು ರೋಚಕವಾಗಿತ್ತು. ಇಸ್ರೇಲ್ ಹೊಡೆದಿದೆ ಅಂತ ಗೊತ್ತಾಗದಂತೆ ನೋಡಿಕೊಳ್ಳುವುದೂ ಕೂಡ ಮುಖ್ಯ ವಾಗಿತ್ತು. ಇದನ್ನು ‘ ಮ್ಯೂನಿಕ್ ‘ ಅಂತ ಸಿನಿಮಾ ಮಾಡಿದ್ದಾರೆ.
1948 ಬ್ರಿಟಿಷರು ಭಾರತ- ಪಾಕ್ ನಂತೇ, ಇಸ್ರೇಲ್- ಪಾಲೆಸ್ಟೈನ್ ವಿಭಜಿಸಿ ಸ್ವಾತಂತ್ರ್ಯ ಕೊಟ್ಟರು. ಇದಕ್ಕೆ ಮೊದಲು ಅಲ್ಲಿ ಜ್ಯೂ ಮತ್ತು ಮುಸ್ಲಿಮರು ಒಟ್ಟಾಗಿಯೇ ಇದ್ದರು.
ಸ್ವಾತಂತ್ರ ಸಿಕ್ಕ ತಕ್ಷಣ ಅಕ್ಕ ಪಕ್ಕದ ಮುಸ್ಲಿಮ ರಾಷ್ಟ್ರಗಳು ಇಸ್ರೇಲ್ ಮೇಲೆ ಆಕ್ರಮಣ ಮಾಡಿದವು. ಹಿಟ್ಲರ್ ಅದಕ್ಕೂ ಮೊದಲು ಇಡೀ ಜಗತ್ತಿನಲ್ಲಿದ್ದ ಒಟ್ಟೂ ಒಂದು ಕೋಟಿ ಹತ್ತು ಲಕ್ಷ ಜ್ಯೂಗಳ ಪೈಕಿ ಅರ್ಧಕ್ಕೂ ಹೆಚ್ಚು ಅಂದರೆ 60 ಲಕ್ಷ ಜ್ಯೂ ಗಳನ್ನು ಕೊಂದಿದ್ದ. . ಈಗ ಅವರ ಒಟ್ಟೂ ಸಂಖ್ಯೆ ಒಂದು ಕೋಟಿ ಇಪ್ಪತ್ತು ಲಕ್ಷ.
ಈ ಯುದ್ಧ ಜ್ಯೂ ಗಳ ಅಳಿವು ಉಳಿವಿನ ಪ್ರಶ್ನೆ ಆಗಿತ್ತು. ಇಸ್ರೇಲ್ ಯುದ್ಧ ಗೆದ್ದಿತು. 1967 ಮತ್ತೆ ಇಸ್ರೇಲ್ ಮೇಲೆ ಆಕ್ರಮಣ, ಮತ್ತೆ ಇಸ್ರೇಲ್ ಗೆಲುವು. ಇಸ್ರೇಲ್ ಯಾವ ಯುದ್ಧವನ್ನೂ ಸೋಲಲೇ ಇಲ್ಲ. ಸೋತಿದ್ದರೆ ಜಗತ್ತಿನಲ್ಲಿ ಜ್ಯೂಗಳು ಉಳಿಯುವುದಿಲ್ಲ ಎಂಬ ಅರಿವೇ ಅವರಿಗೆ ಗೊತ್ತಿತ್ತು. ಬೆಕ್ಕನ್ನು ಕೋಣೆಯಲ್ಲಿ ಕೂಡಿ ಹಾಕಿ ಅದರ ಮೇಲೆ ದೌರ್ಜನ್ಯ ಮಾಡಿದರೆ ಅದೂ ತಿರುಗಿ ಬೀಳುತ್ತದೆ. ಹೇಳಿ ಕೇಳಿ ಇಸ್ರೇಲ್ ಹುಲಿಯ ಜಾತಿ. ಜಗತ್ತಿನಲ್ಲಿ ಅತ್ಯಂತ ಹೆಚ್ಚು ದೌರ್ಜನ್ಯಕ್ಕೆ ಒಳಗಾದವರು ಜ್ಯೂಗಳು.
“ನೀವು ನಮ್ಮ ಒಬ್ಬ ಪ್ರೆಜೆಯನ್ನು ಹೊಡೆದರೆ ನಾವು ನಿಮ್ಮ ನೂರು ಜನರನ್ನು ಹೊಡೆಯುತ್ತೇವೆ ”
ಎರಡನೇ ಮಹಾಯುದ್ಧದ ನಂತರ ತನ್ನ ಗಡಿಯನ್ನು ಯುದ್ಧ ದಲ್ಲಿ ಗೆಲ್ಲುವ ಮೂಲಕ ವಿಸ್ತರಿಸಿದ ಜಗತ್ತಿನ ಏಕೈಕ ರಾಷ್ಟ್ರ ಇಸ್ರೇಲ್.
“ನೀವು ನಮ್ಮ ಒಬ್ಬ ಪ್ರೆಜೆಯನ್ನು ಹೊಡೆದರೆ ನಾವು ನಿಮ್ಮ ನೂರು ಜನರನ್ನು ಹೊಡೆಯುತ್ತೇವೆ ” ಅಂತ ಹೇಳಿ ಮಾಡಿ ತೋರಿಸಿದ ಜಗತ್ತಿನ ಏಕೈಕ ಗಂಡುಗಲಿ ರಾಷ್ಟ್ರ.
ಇಸ್ರೇಲ್ ಮೇಲೆ ಸುತ್ತಲಿನ ದೇಶಗಳು ನೂರಾರು ಬಾರಿ ಭಯೋತ್ಪಾದನಾ ದಾಳಿ ಮಾಡಿದವು. ಎಂಟೆಬ್ಬೆ ವಿಮಾನ ಅಪಹರಸಿ ಶತ್ರು ರಾಷ್ಟ್ರಕ್ಕೆ ಒಯ್ಯಲಾಯಿತು. ಇಸ್ರೇಲ್ ಕಮಾಂಡೋಗಳು ಅಲ್ಲಿಗೇ ಹೋಗಿ ಭಯೋತ್ಪಾದಕರನ್ನು ಮುಗಿಸಿದರು. ಆ ಕಮಾಂಡೋಗಲ್ಲಿ ಇಸ್ರೇಲ್ ಪ್ರಧಾನಿಯ ಸ್ವಂತ ಅಣ್ಣನಿದ್ದ.
ಪಿಎಲಓ ಲೀಡರ್ ಯಾಸಿರ್ ಅರಾಫತ ರನ್ನು ಇಸ್ರೇಲ್ ಸೇನೆ ಸುತ್ತುವರೆದು ಒಂದು ಬಿಲ್ಡಿಂಗನಲ್ಲಿ ನೀರು ವಿದ್ಯುತ್ ಕಟ್ ಮಾಡಿ ಏಳು ದಿನ ಕೂಡಿಹಾಕಿತ್ತು.ಇಸ್ರೇಲ್ ಆರ್ಥಿಕ ವಾಗಿ ತುಂಬಾ ಮುಂದಿದೆ. ಜಗತ್ತಿನ ಶೇ ಹತ್ತು ಶಸ್ತ್ರ ಗಳು ಇಲ್ಲಿ ತಯಾರಾಗುವವು.
ಇಸ್ರೇಲ್ ಬಳಿ ರಹಸ್ಯ ವಾಗಿ ತಯಾರಾದ ಆಟಮ್ ಬಾಂಬ್. ರಾಸಾಯನಿಕ ಅಸ್ತ್ರ ಇವೆ. ಇಡೀ ಜಗತ್ತಿನಲ್ಲಿ ಶಸ್ತ್ರಾಸ್ತ್ರ ತಯಾರಿಕೆ ಪರೀಕ್ಷೆ ಮಾಡಲು ಒಪ್ಪಂದ ಇದೆ. ಆದರೆ ಪರೀಕ್ಷೆಗೆ ಒಳಪಡಿಸಲಾಗದ ಜಗತ್ತಿನ ಏಕೈಕ ರಾಷ್ಟ್ರ ಇಸ್ರೇಲ್.
ತುಂಬಾ ಹಿಂದೆ ಅಮೆರಿಕ ಇಸ್ರೇಲ್ ಅಣು ಬಾಂಬ್ ತಯಾರಿಕಾ ಘಟಕ ವನ್ನು ಪರೀಕ್ಷೆ ಮಾಡಲು ಹೋಗಿತ್ತು. ಏನೂ ಸಿಗಲಿಲ್ಲ. ಯಾಕೆಂದರೆ ಪರೀಕ್ಷಕರಿಗೆ ನೆಲ ಮಹಡಿ ತೋರಿಸಿ ಯಾಮಾರಿಸಿದರು. ಘಟಕ ಇದ್ದದ್ದು ನೆಲದಿಂದ ಏಳು ಮಹಡಿ ಕೆಳಗೆ. ಈಗ ಅಮೆರಿಕ ಇಸ್ರೇಲ್ ಗೆ ಪ್ರತೀ ವರ್ಷ ಬಿಲಿಯನ್ ಡಾಲರ್ ಕೊಡುತ್ತದೆ.
ಅಮೆರಿಕದ ಕೇವಲ ನಾಲ್ಕು ಶೇಕಡಾ ಜ್ಯೂಗಳು ಅಮೆರಿಕದ ಆಯಕಟ್ಟಿನ ಪ್ರಭಾವೀ ಅಧಿಕಾರ ಹೊಂದಿದ್ದಾರೆ. ಜರ್ಮನಿಯಲ್ಲಿ ಅತ್ಯಂತ ಕಡಿಮೆ ಸಂಖ್ಯೆಯಲ್ಲಿರುವ ಜ್ಯೂಗಳು ದೊಡ್ಡ ದೊಡ್ಡ ಅಧಿಕಾರದಲ್ಲಿರುವುದು ಹಿಟ್ಲರನ ಕೋಪಕ್ಕೆ ಕಾರಣವಾಗಿತ್ತು. ಅದಕ್ಕಾಗಿ ಆತ ಜಗತ್ತಿನಲ್ಲಿ ಜ್ಯೂಗಳು ಇರಬಾರದು ಅಂತ ಕೊಂದಿದ್ದು. ಇದಕ್ಕೂ ಮೊದಲು ಮುಸ್ಲಿಮರು ಜ್ಯೂ ಗಳನ್ನು ಕೊಲ್ಲುತ್ತಿದ್ದುದು ಇತಿಹಾಸ. ಆದರೆ ಇಷ್ಟು ಕಡಿಮೆ ಸಂಖ್ಯೆಯ ಜನರು ಪುಟಿದೆದ್ದರು. ಸಂಸ್ಕೃತ ದಂತೆಯೇ ಅವರ ” ಹೀಬ್ರೂ ” ಭಾಷೆ ಸತ್ತು ಹೋಗಿತ್ತು. ಪುರಾತನ ಭಾಷೆಯನ್ನು ಮತ್ತೆ ಜೀವಂತ ಗಳಿಸಿದ ಏಕೈಕ ಜನ ಜ್ಯೂಗಳು.
” ಹೀಬ್ರೂ ” ಭಾಷೆ
ನಿಮಗೆ ಆಚಾರಿ ಅನಿಸಬಹುದು.ಏಕೆಂದರೆ ಜಗತ್ತಿನಲ್ಲಿ ಕೇವಲ ಒಂದು ಕೋಟಿ ಇಪ್ಪತ್ತು ಲಕ್ಷ ಇರುವ ಜ್ಯೂಗಳು ಇಡೀ ಜಗತ್ತಿನ ಮೇಲೆ ಹಿಡಿತ ಸಾಧಿಸಿದ್ದಾರೆ. ಎಷ್ಟು ತುಳಿದರೂ ಮೇಲೆ ಎದ್ದಿದ್ದಾರೆ. ಎಲ್ಲಕ್ಕೂ ಮುಖ್ಯವಾಗಿ ತಮ್ಮ ಭಾಷೆಯಾದ ಹೀಬ್ರೂ ವನ್ನು ಮತ್ತೆ ಕಲಿತು ಅದರಲ್ಲೇ ಮಾತನಾಡುತ್ತಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕರ್ನಾಟಕ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಕಾಯ್ದೆಗೆ ಪ್ರಸ್ತಾವಿತ ತಿದ್ದುಪಡಿಯಲ್ಲಿನ ಕೆಲ ಅಂಶ ಕೈಬಿಡುವಂತೆ ಒತ್ತಾಯಿಸಿ ಖಾಸಗಿ ಆಸ್ಪತ್ರೆಗಳು ಶುಕ್ರವಾರ ಬೆಳಗ್ಗೆ 8 ಗಂಟೆಯಿಂದ ಶನಿವಾರ ಬೆಳಗ್ಗೆ 8ರ
ವರೆಗೆ 24 ತಾಸು ಹೊರರೋಗಿ ವಿಭಾಗದ ಸೇವೆ ಸ್ಥಗಿತಗೊಳಿಸಿ ಹೋರಾಟಕ್ಕಿಳಿದಿವೆ.
ದೇವಸ್ಥಾನದ ಮುಂದೆ ಭಿಕ್ಷಾಟನೆ ನಡೆಸುತ್ತಿರುವ ಓರ್ವ ಮಹಿಳೆ ದೇವಸ್ಥಾನದ ನವೀಕರಣಕ್ಕಾಗಿ ಎರಡು ಲಕ್ಷ ರೂ. ದೇಣಿಗೆ ನೀಡಿ ನಿಬ್ಬೆರಗಾಗುವಂತೆ ಮಾಡಿದ್ದಾಳೆ. ಮೈಸೂರು ಅರಮನೆಯ
ಮುಂಭಾಗದಲ್ಲಿರುವ ಪ್ರಸಿದ್ದ ಪ್ರಸನ್ನ ಅಂಜನೇಯ ದೇವಾಲಯದ ಮುಂದೆ ಭಿಕ್ಷೆ ಬೇಡುತ್ತಿರುವ ಎಂ.ವಿ.ಸೀತಾ, ದೇವಸ್ಥಾನದ ನವೀಕರಣಕ್ಕೆ ದೇಣಿಗೆ ನೀಡಿದ ಮಹಾನ್ ಭಕ್ತೆ.
ಶ್ರೀಲಂಕಾ ರಾಜಧಾನಿ ಕೊಲಂಬೊದಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟದಲ್ಲಿ 290ಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ. 500 ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಬೆಚ್ಚಿ ಬೀಳಿಸಿದ ಸರಣಿ ಬಾಂಬ್ ಸ್ಫೋಟದ ಅವಘಡದಲ್ಲಿ ಬಹುಭಾಷಾ ನಟಿ ರಾಧಿಕಾ ಶರತ್ ಕುಮಾರ್ ಸ್ವಲ್ಪದರಲ್ಲೇ ಪಾರಾಗಿ ಬಂದಿದ್ದಾರೆ. ಕೊಲಂಬೋಕ್ಕೆ ತೆರಳಿದ್ದ ರಾಧಿಕಾ ಶರತ್ ಕುಮಾರ್, ಭಾನುವಾರ ಬೆಳಿಗ್ಗೆ ಸಿನ್ನಾಮನ್ ಗ್ರ್ಯಾಂಡ್ ಹೋಟೆಲ್ ನಲ್ಲಿ ಕೆಲಸ ಮುಗಿಸಿಕೊಂಡು ಹೊರ ಬಂದ ಕೆಲವೇ ನಿಮಿಷಗಳಲ್ಲಿ ಸ್ಪೋಟ ಸಂಭವಿಸಿದೆ. ಈ ಸಂಗತಿಯನ್ನು ರಾಧಿಕಾ ಶರತ್ ಕುಮಾರ್…
ಬೆಳಿಗ್ಗೆ ಉಪಹಾರದ ಜೊತೆ ಮೊಟ್ಟೆ ಸೇವಿಸಿದ್ರೆ ಆರೋಗ್ಯಕ್ಕೆ ಒಳ್ಳೆಯದು. ಮೊಟ್ಟೆ ಶಕ್ತಿಯನ್ನು ಹೆಚ್ಚು ಮಾಡುತ್ತೆ. ಹಾಗಾಗಿಯೇ ಅನೇಕರು ಬೆಳಿಗ್ಗೆ, ಸಂಜೆ ಮೊಟ್ಟೆ ಸೇವಿಸ್ತಾರೆ. ಆದ್ರೆ ನೀವು ಸೇವಿಸುವ ಮೊಟ್ಟೆಯಲ್ಲಿ ಶಕ್ತಿ ನೀಡುವಂತ ಅಂಶ ಇರಬೇಕೆಂದೇನೂ ಇಲ್ಲ. ಯಾಕೆಂದ್ರೆ ಮಾರುಕಟ್ಟೆಯಲ್ಲಿ ಮೊಟ್ಟೆಗೆ ಬೇಡಿಕೆ ಹೆಚ್ಚಾಗ್ತಾ ಇದ್ದಂತೆ ಕೃತಕವಾಗಿ ಮೊಟ್ಟೆ ತಯಾರಿಸಲಾಗ್ತಾ ಇದೆ. ಈ ಮೊಟ್ಟೆಯನ್ನು ಹೇಗೆ ತಯಾರಿಸಲಾಗುತ್ತೆ ಎನ್ನುವ ವಿಷಯ ಗೊತ್ತಾದ್ರೆ ಕೆಲವರು ಇಂದಿನಿಂದಲೇ ಮೊಟ್ಟೆ ಸೇವನೆಯನ್ನು ನಿಲ್ಲಿಸಿದ್ರೂ ಸಂಶಯವಿಲ್ಲ. ಈಗ ಒಂದು ಕೋಳಿಗೆ ಮೊಟ್ಟೆ ಉತ್ಪಾದಿಸಲು ಸುಮಾರು…
ಚಾಮರಾಜನಗರ ತಾಲೂಕಿನ ಚಂದಕವಾಡಿ ನಿವಾಸಿ ಟೈಲರ್ ಎಸಾಬುಲ್ಲಾ ಖಾನ್ ಕಳೆದ 12 ವರ್ಷಗಳಿಂದ ಟೈಲರ್ ವೃತ್ತಿ ಮಾಡಿಕೊಂಡಿದ್ದಾರೆ. ಹುಡುಗರಿಗೆ ಅಂಗಿ, ನಿಕ್ಕರ್ ಮತ್ತು ಬಾಲಕಿಯರಿಗೂ ಡ್ರೆಸ್ ಹೊಲಿದು ಕೊಡುತ್ತಿದ್ದಾರೆ. ಪ್ರತಿ ಸರ್ಕಾರಿ ಶಾಲೆಗೆ ಕೂಡ ತಾವೇ ಖುದ್ದಾಗಿ ಭೇಟಿ ನೀಡಿ ಮಕ್ಕಳಿಂದ ಬಟ್ಟೆಯ ಅಳತೆ ಪಡೆದುಕೊಳ್ಳುತ್ತಾರೆ. 5 ವರ್ಷದಿಂದ 30 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಬಟ್ಟೆ ಹೊಲಿದು ಕೊಟ್ಟಿದ್ದಾರೆ. ಪ್ರತಿ ವರ್ಷ 5 ರಿಂದ6 ಸಾವಿರ ವಿದ್ಯಾರ್ಥಿಗಳಿಗೆ ಬಟ್ಟೆ ಹೊಲಿಯುತ್ತಿದ್ದಾರೆ. ಬೇರೆಯವರ ಬಳಿ ಒಂದು ಜೊತೆ ಬಟ್ಟೆ…
ಒಂದು ಸಣ್ಣ ಕಾಯಿಲೆಗೆ ಹೆಚ್ಚು ಹೆಚ್ಚು ದುಡ್ಡು ಪೀಕಿಸುವ ಈಗಿನ ಆಸ್ಪತ್ರೆಗಳ ಮಂದಿಯನ್ನು ನೋಡಿದರೆ ಈಕೆ ಬಹಳ ಸಿಂಪಲ್ ಅನಿಸದೇ ಇರೋದಿಲ್ಲ , ಶಾಲೆಯ ಮೆಟ್ಟಿಲನ್ನೇ ಹತ್ತಿಲ್ಲ ಆದರೂ ಈಕೆ ಆ ಊರಿನ ಹಳ್ಳಿಗರ ಪಾಲಿಗೆ ಡಾಕ್ಟರ್ ಯಾವ ಎಂಬಿಬಿಎಸ್ ಓದಿಲ್ಲ ಯಾವ ಸರ್ಜನ್ ಕೂಡ ಅಲ್ಲ ಅಷ್ಟೇ ಅಲ್ಲದೆ ಯಾವುದೇ ಫಾರಿನ್ಗೆ ಹೋಗಿ ಅಲ್ಲಿ ಓದಿಕೊಂಡು ಬಂದಿಲ್ಲ.ಬಿಳಿಗಿರಿ ರಂಗನ ಬೆಟ್ಟದಲ್ಲಿ ವಾಸಿಸುವ ಸೋಲಿಗ ಎಂಬ ಬುಡಕಟ್ಟು ಜನಾಂಗಕ್ಕೆ ಸೇರಿದ ಈ ಮಹಿಳೆಯ ಹೆಸರು ಜಡೇ ಮಾದಮ್ಮ…