ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಮ್ಮ ಭಾರತ ಶಾಂತಿ ಪ್ರಿಯ ರಾಷ್ಟ್ರ. ಪಕ್ಕದ ಶತ್ರು ರಾಷ್ಟ್ರಗಳು ಏನೇ ಮಾಡಿದರೂ,ಅವರಿಗೆ ಎಚ್ಚರಿಕೆ ಮಾತ್ರ ಕೊಡುತ್ತಾ ಬರುತ್ತೇವೆ.ಇನ್ನೊಮ್ಮೆ ಹೀಗೆ ಮಾಡಿದ್ರೆ ನಾವು ಸುಮ್ಮನಿರಲ್ಲ ಅಂತ ಎಚ್ಚರಿಕೆ ಮಾತ್ರ ಕೊಡುತ್ತಾ ಬರುತ್ತೇವೆ. ಆದ್ರೆ ಕೆಲವೊಂದು ರಾಷ್ಟ್ರಗಳು ಇದಕ್ಕೆ ತದ್ವಿರುದ್ದ.ಏಕೆಂದರೆ ಅವರು ನಮ್ಮ ತರ ಎಚ್ಚರಿಕೆ ಮಾತ್ರ, ಯಾವುದೋ ಒಂದು ರೀತಿ ಸೇಡು ತೀರಿಸಿಕೊಳ್ಳುತ್ತವೆ.
ಅದೇ ರೀತಿ ಇಸ್ರೇಲ್ ದೇಶ ಸಹ. 1972 ರಲ್ಲಿ ಇಸ್ರೇಲಿನ ಫೂಟಬಾಲ್ ಟೀಮ್ ಮೇಲೆ ಭಯೋತ್ಪಾದಕರು ದಾಳಿ ನಡೆಸಿ ಎಲ್ಲರನ್ನೂ ಕೊಂದುಹಾಕಿ ಮರ್ಮಾಂಗ ಕತ್ತರಿಸಿದ್ದರು. ಈ ಕೃತ್ಯಕ್ಕಾಗಿ ಇಸ್ರೇಲ್ ಸೇಡು ತೀರಿಸಿಕೊಂಡ ರೀತಿ ತುಂಬಾ ರೋಚಕವಾಗಿದೆ.ಮುಂದೆ ಓದಿ….
ಈ ಕೃತ್ಯ ನಂತರ ಇಸ್ರೇಲ್ ದೇಶವು ಅತ್ಯಂತ ರಹಸ್ಯವಾದ ಒಂದು “ಮೊಸ್ಸಾದ್ ” ಎಂಬ ಟೀಮ್ ರಚಿಸಿ, ಈ ದಾಳಿಗೆ ಕಾರಣರಾದ ಎಲ್ಲಾ ಭಯೋತ್ಪಾದಕರನ್ನು ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ಕೊಲ್ಲಲು ನಿರ್ಧರಿಸಿದರು. ಆದರೆ ಅದಾಗಲೇ ಅವರೆಲ್ಲರೂ ಪ್ರಪಂಚದ ಬೇರೆ ಬೇರೆ ದೇಶಗಳಿಗೆ ಹೋಗಿ ಅಡಗಿದ್ದರು. ಇಸ್ರೇಲ್ ಈ ಎಲ್ಲರನ್ನೂ ಮುಗಿಸಲು ತೆಗೆದುಕೊಂಡಿದ್ದು ಬರೋಬ್ಬರಿ ಇಪ್ಪತ್ತು ವರ್ಷ. ಕಾರ್ಯಾಚರಣೆ ಅಷ್ಟೂ ವರ್ಷ ನಡೆದಿತ್ತು. ಇದು ಯಾವ ಹಾಲಿವುಡ್ ಚಿತ್ರಗಳಿಗಿಂತಲೂ ಕಡಿಮೆ ಇರಲಿಲ್ಲ, ಅಷ್ಟು ರೋಚಕವಾಗಿತ್ತು. ಇಸ್ರೇಲ್ ಹೊಡೆದಿದೆ ಅಂತ ಗೊತ್ತಾಗದಂತೆ ನೋಡಿಕೊಳ್ಳುವುದೂ ಕೂಡ ಮುಖ್ಯ ವಾಗಿತ್ತು. ಇದನ್ನು ‘ ಮ್ಯೂನಿಕ್ ‘ ಅಂತ ಸಿನಿಮಾ ಮಾಡಿದ್ದಾರೆ.
1948 ಬ್ರಿಟಿಷರು ಭಾರತ- ಪಾಕ್ ನಂತೇ, ಇಸ್ರೇಲ್- ಪಾಲೆಸ್ಟೈನ್ ವಿಭಜಿಸಿ ಸ್ವಾತಂತ್ರ್ಯ ಕೊಟ್ಟರು. ಇದಕ್ಕೆ ಮೊದಲು ಅಲ್ಲಿ ಜ್ಯೂ ಮತ್ತು ಮುಸ್ಲಿಮರು ಒಟ್ಟಾಗಿಯೇ ಇದ್ದರು.
ಸ್ವಾತಂತ್ರ ಸಿಕ್ಕ ತಕ್ಷಣ ಅಕ್ಕ ಪಕ್ಕದ ಮುಸ್ಲಿಮ ರಾಷ್ಟ್ರಗಳು ಇಸ್ರೇಲ್ ಮೇಲೆ ಆಕ್ರಮಣ ಮಾಡಿದವು. ಹಿಟ್ಲರ್ ಅದಕ್ಕೂ ಮೊದಲು ಇಡೀ ಜಗತ್ತಿನಲ್ಲಿದ್ದ ಒಟ್ಟೂ ಒಂದು ಕೋಟಿ ಹತ್ತು ಲಕ್ಷ ಜ್ಯೂಗಳ ಪೈಕಿ ಅರ್ಧಕ್ಕೂ ಹೆಚ್ಚು ಅಂದರೆ 60 ಲಕ್ಷ ಜ್ಯೂ ಗಳನ್ನು ಕೊಂದಿದ್ದ. . ಈಗ ಅವರ ಒಟ್ಟೂ ಸಂಖ್ಯೆ ಒಂದು ಕೋಟಿ ಇಪ್ಪತ್ತು ಲಕ್ಷ.
ಈ ಯುದ್ಧ ಜ್ಯೂ ಗಳ ಅಳಿವು ಉಳಿವಿನ ಪ್ರಶ್ನೆ ಆಗಿತ್ತು. ಇಸ್ರೇಲ್ ಯುದ್ಧ ಗೆದ್ದಿತು. 1967 ಮತ್ತೆ ಇಸ್ರೇಲ್ ಮೇಲೆ ಆಕ್ರಮಣ, ಮತ್ತೆ ಇಸ್ರೇಲ್ ಗೆಲುವು. ಇಸ್ರೇಲ್ ಯಾವ ಯುದ್ಧವನ್ನೂ ಸೋಲಲೇ ಇಲ್ಲ. ಸೋತಿದ್ದರೆ ಜಗತ್ತಿನಲ್ಲಿ ಜ್ಯೂಗಳು ಉಳಿಯುವುದಿಲ್ಲ ಎಂಬ ಅರಿವೇ ಅವರಿಗೆ ಗೊತ್ತಿತ್ತು. ಬೆಕ್ಕನ್ನು ಕೋಣೆಯಲ್ಲಿ ಕೂಡಿ ಹಾಕಿ ಅದರ ಮೇಲೆ ದೌರ್ಜನ್ಯ ಮಾಡಿದರೆ ಅದೂ ತಿರುಗಿ ಬೀಳುತ್ತದೆ. ಹೇಳಿ ಕೇಳಿ ಇಸ್ರೇಲ್ ಹುಲಿಯ ಜಾತಿ. ಜಗತ್ತಿನಲ್ಲಿ ಅತ್ಯಂತ ಹೆಚ್ಚು ದೌರ್ಜನ್ಯಕ್ಕೆ ಒಳಗಾದವರು ಜ್ಯೂಗಳು.
“ನೀವು ನಮ್ಮ ಒಬ್ಬ ಪ್ರೆಜೆಯನ್ನು ಹೊಡೆದರೆ ನಾವು ನಿಮ್ಮ ನೂರು ಜನರನ್ನು ಹೊಡೆಯುತ್ತೇವೆ ”
ಎರಡನೇ ಮಹಾಯುದ್ಧದ ನಂತರ ತನ್ನ ಗಡಿಯನ್ನು ಯುದ್ಧ ದಲ್ಲಿ ಗೆಲ್ಲುವ ಮೂಲಕ ವಿಸ್ತರಿಸಿದ ಜಗತ್ತಿನ ಏಕೈಕ ರಾಷ್ಟ್ರ ಇಸ್ರೇಲ್.
“ನೀವು ನಮ್ಮ ಒಬ್ಬ ಪ್ರೆಜೆಯನ್ನು ಹೊಡೆದರೆ ನಾವು ನಿಮ್ಮ ನೂರು ಜನರನ್ನು ಹೊಡೆಯುತ್ತೇವೆ ” ಅಂತ ಹೇಳಿ ಮಾಡಿ ತೋರಿಸಿದ ಜಗತ್ತಿನ ಏಕೈಕ ಗಂಡುಗಲಿ ರಾಷ್ಟ್ರ.
ಇಸ್ರೇಲ್ ಮೇಲೆ ಸುತ್ತಲಿನ ದೇಶಗಳು ನೂರಾರು ಬಾರಿ ಭಯೋತ್ಪಾದನಾ ದಾಳಿ ಮಾಡಿದವು. ಎಂಟೆಬ್ಬೆ ವಿಮಾನ ಅಪಹರಸಿ ಶತ್ರು ರಾಷ್ಟ್ರಕ್ಕೆ ಒಯ್ಯಲಾಯಿತು. ಇಸ್ರೇಲ್ ಕಮಾಂಡೋಗಳು ಅಲ್ಲಿಗೇ ಹೋಗಿ ಭಯೋತ್ಪಾದಕರನ್ನು ಮುಗಿಸಿದರು. ಆ ಕಮಾಂಡೋಗಲ್ಲಿ ಇಸ್ರೇಲ್ ಪ್ರಧಾನಿಯ ಸ್ವಂತ ಅಣ್ಣನಿದ್ದ.
ಪಿಎಲಓ ಲೀಡರ್ ಯಾಸಿರ್ ಅರಾಫತ ರನ್ನು ಇಸ್ರೇಲ್ ಸೇನೆ ಸುತ್ತುವರೆದು ಒಂದು ಬಿಲ್ಡಿಂಗನಲ್ಲಿ ನೀರು ವಿದ್ಯುತ್ ಕಟ್ ಮಾಡಿ ಏಳು ದಿನ ಕೂಡಿಹಾಕಿತ್ತು.ಇಸ್ರೇಲ್ ಆರ್ಥಿಕ ವಾಗಿ ತುಂಬಾ ಮುಂದಿದೆ. ಜಗತ್ತಿನ ಶೇ ಹತ್ತು ಶಸ್ತ್ರ ಗಳು ಇಲ್ಲಿ ತಯಾರಾಗುವವು.
ಇಸ್ರೇಲ್ ಬಳಿ ರಹಸ್ಯ ವಾಗಿ ತಯಾರಾದ ಆಟಮ್ ಬಾಂಬ್. ರಾಸಾಯನಿಕ ಅಸ್ತ್ರ ಇವೆ. ಇಡೀ ಜಗತ್ತಿನಲ್ಲಿ ಶಸ್ತ್ರಾಸ್ತ್ರ ತಯಾರಿಕೆ ಪರೀಕ್ಷೆ ಮಾಡಲು ಒಪ್ಪಂದ ಇದೆ. ಆದರೆ ಪರೀಕ್ಷೆಗೆ ಒಳಪಡಿಸಲಾಗದ ಜಗತ್ತಿನ ಏಕೈಕ ರಾಷ್ಟ್ರ ಇಸ್ರೇಲ್.
ತುಂಬಾ ಹಿಂದೆ ಅಮೆರಿಕ ಇಸ್ರೇಲ್ ಅಣು ಬಾಂಬ್ ತಯಾರಿಕಾ ಘಟಕ ವನ್ನು ಪರೀಕ್ಷೆ ಮಾಡಲು ಹೋಗಿತ್ತು. ಏನೂ ಸಿಗಲಿಲ್ಲ. ಯಾಕೆಂದರೆ ಪರೀಕ್ಷಕರಿಗೆ ನೆಲ ಮಹಡಿ ತೋರಿಸಿ ಯಾಮಾರಿಸಿದರು. ಘಟಕ ಇದ್ದದ್ದು ನೆಲದಿಂದ ಏಳು ಮಹಡಿ ಕೆಳಗೆ. ಈಗ ಅಮೆರಿಕ ಇಸ್ರೇಲ್ ಗೆ ಪ್ರತೀ ವರ್ಷ ಬಿಲಿಯನ್ ಡಾಲರ್ ಕೊಡುತ್ತದೆ.
ಅಮೆರಿಕದ ಕೇವಲ ನಾಲ್ಕು ಶೇಕಡಾ ಜ್ಯೂಗಳು ಅಮೆರಿಕದ ಆಯಕಟ್ಟಿನ ಪ್ರಭಾವೀ ಅಧಿಕಾರ ಹೊಂದಿದ್ದಾರೆ. ಜರ್ಮನಿಯಲ್ಲಿ ಅತ್ಯಂತ ಕಡಿಮೆ ಸಂಖ್ಯೆಯಲ್ಲಿರುವ ಜ್ಯೂಗಳು ದೊಡ್ಡ ದೊಡ್ಡ ಅಧಿಕಾರದಲ್ಲಿರುವುದು ಹಿಟ್ಲರನ ಕೋಪಕ್ಕೆ ಕಾರಣವಾಗಿತ್ತು. ಅದಕ್ಕಾಗಿ ಆತ ಜಗತ್ತಿನಲ್ಲಿ ಜ್ಯೂಗಳು ಇರಬಾರದು ಅಂತ ಕೊಂದಿದ್ದು. ಇದಕ್ಕೂ ಮೊದಲು ಮುಸ್ಲಿಮರು ಜ್ಯೂ ಗಳನ್ನು ಕೊಲ್ಲುತ್ತಿದ್ದುದು ಇತಿಹಾಸ. ಆದರೆ ಇಷ್ಟು ಕಡಿಮೆ ಸಂಖ್ಯೆಯ ಜನರು ಪುಟಿದೆದ್ದರು. ಸಂಸ್ಕೃತ ದಂತೆಯೇ ಅವರ ” ಹೀಬ್ರೂ ” ಭಾಷೆ ಸತ್ತು ಹೋಗಿತ್ತು. ಪುರಾತನ ಭಾಷೆಯನ್ನು ಮತ್ತೆ ಜೀವಂತ ಗಳಿಸಿದ ಏಕೈಕ ಜನ ಜ್ಯೂಗಳು.
” ಹೀಬ್ರೂ ” ಭಾಷೆ
ನಿಮಗೆ ಆಚಾರಿ ಅನಿಸಬಹುದು.ಏಕೆಂದರೆ ಜಗತ್ತಿನಲ್ಲಿ ಕೇವಲ ಒಂದು ಕೋಟಿ ಇಪ್ಪತ್ತು ಲಕ್ಷ ಇರುವ ಜ್ಯೂಗಳು ಇಡೀ ಜಗತ್ತಿನ ಮೇಲೆ ಹಿಡಿತ ಸಾಧಿಸಿದ್ದಾರೆ. ಎಷ್ಟು ತುಳಿದರೂ ಮೇಲೆ ಎದ್ದಿದ್ದಾರೆ. ಎಲ್ಲಕ್ಕೂ ಮುಖ್ಯವಾಗಿ ತಮ್ಮ ಭಾಷೆಯಾದ ಹೀಬ್ರೂ ವನ್ನು ಮತ್ತೆ ಕಲಿತು ಅದರಲ್ಲೇ ಮಾತನಾಡುತ್ತಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕೊರೊನಾ ಈ ದೇಶಕ್ಕೆ ಕಾಲಿಟ್ಟಾಗ ಹಳ್ಳಿಗಳು ಕೊರೊನಾ ವೈರಸ್ ನಿಂದ ಬಹುದೂರದಲ್ಲಿದ್ದವು. ಪೇಟೆಗಳಲ್ಲಿ ಮಾತ್ರ ಜನ ಕೊರೊನಾಕ್ಕೆ ಬಲಿ ಆಗ್ತಾ ಇದ್ರು. ಆದ್ರೆ ಕೊರೊನಾ ಎರಡನೇ ಅಲೆ ಹಳ್ಳಿಗರನ್ನು ತೀವ್ರವಾಗಿ ಬಾಧಿಸುತ್ತಿದೆ. ಇದಕ್ಕೆ ಹಳ್ಳಿಗರ ಸ್ವಯಂಕೃತ ಅಪರಾಧವೇ ಕಾರಣವಾಗಿದೆ.
ಗರ್ಭಾವಸ್ಥೆಯಲ್ಲಿ ಅಪೌಷ್ಠಿಕತೆಯಿಂದಾಗಿ ಗರ್ಭಿಣಿಯ ಆರೋಗ್ಯ ಹಾಗೂ ಹೊಟ್ಟೆಯಲ್ಲಿ ಬೆಳೆಯುವ ಮಗುವಿನ ಬೆಳವಣಿಗೆಯಲ್ಲಿ ಹಲಾವಾರು ತೊಂದರೆಗಳು ಉಂಟಾಗಿ ಜನಿಸುವ ಮಗುವಿನ ತೂಕ ಕಡಿಮೆ ಇರುವುದು, ಗರ್ಭಿಣಿಯರಲ್ಲಿ ರಕ್ತಹೀನತೆಯಿಂದಾಗಿ ಹೆರಿಗೆಯ ಸಮಯದಲ್ಲಿ ಸಾವು ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಶಿಶು ಮರಣ ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರದ ಮಾತೃಪೂರ್ಣ ಯೋಜನೆಯು ಅತ್ಯಂತ ಪ್ರಮುಖ ಪಾತ್ರ ವಹಿಸಲಿದೆ. ಮಾತೃಪೂರ್ಣ ಯೋಜನೆಯ ಪ್ರಮುಖ ಅಂಶಗಳು :- ತಾಯಿ ಮತ್ತು ಮಗುವಿನ ಅಪೌಷ್ಟಿಕತೆ ನಿವಾರಿಸಿ, ಆರೋಗ್ಯ ಕಾಪಾಡುವ ದೃಷ್ಟಿಯಿಂದ ಜಾರಿಗೆ ತರಲಾಗುತ್ತಿರುವ…
ನೀವು ಟೀ ಕುಡಿಯುತ್ತೀರಾ…? ಹಾಗಿದ್ದರೆ ನಿಮ್ಮ ಬುದ್ಧಿಮತ್ತೆ ಭಾರಿ ಚುರುಕಾಗಿರುತ್ತೆ. ನಾವು ಇದನ್ನು ಹೇಳುತ್ತಿಲ್ಲ. ಅಧ್ಯಯನ ಒಂದು ಹೇಳುತ್ತಿದೆ. ಚಹಾ ಕುಡಿಯುವವರು ಮತ್ತು ಕುಡಿಯದವರನ್ನು ಅಧ್ಯಯನಕ್ಕೆ ಒಳಪಡಿಸಿದಾಗ, ಚಹಾ ಕುಡಿಯುವವರ ಮೆದುಳಿನ ಬೆಳವಣಿಗೆ ಚೆನ್ನಾಗಿರುವುದಲ್ಲದೆ, ಅವರ ಬುದ್ಧಿ ಮತ್ತೆ ಸಹ ಚುರುಕಾಗಿರುತ್ತದೆ ಎನ್ನುವ ಅಂಶ ತಿಳಿದು ಬಂದಿದೆ. ‘ನಮ್ಮ ಸಂಶೋಧನೆಯಲ್ಲಿ ತಿಳಿದು ಬಂದ ಮೊದಲ ಸಕಾರಾತ್ಮಕ ಅಂಶವೆಂದರೆ ನಿತ್ಯವೂ ಚಹಾ ಸೇವಿಸುವವರ ಮೆದುಳು ಚುರುಕಾಗಿರುವುದಲ್ಲದೆ, ವಯಸ್ಸಾದ ಬಳಿಕ ಕುಂಠಿತವಾಗುವ ಸಾಮರ್ಥ್ಯವನ್ನು ರಕ್ಷಣೆ ಮಾಡುವಲ್ಲಿ ಸಹಕರಿಸುತ್ತದೆ’ ಎಂದು ಸಿಂಗಾಪುರದ…
ಲೋಕಸಭಾ ಚುನಾವಣೆಯ ಹೈವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದು ವಾರಣಾಸಿ. ಕಾರಣ ಪ್ರಧಾನಿ ನರೇಂದ್ರ ಮೋದಿ ಸ್ಪರ್ಧಿಸುವ ಕ್ಷೇತ್ರ. ವಾರಣಾಸಿಯಲ್ಲಿ ಮೋದಿ ವಿರುದ್ಧ ಕಾಂಗ್ರೆಸ್ ನಿಂದ ಪ್ರಿಯಾಂಕಾ ಗಾಂಧಿ ಚುನಾವಣಾ ಅಖಾಡಕ್ಕಿಳಿಯುತ್ತಾರೆ ಅಂತಾ ಹೇಳಲಾಗ್ತಿತ್ತು. ಆದ್ರೀಗ ಮೋದಿ ವಿರುದ್ಧ ಕಾಂಗ್ರೆಸ್ ನ ಅಜಯ್ ರಾಯ್ ಕಣಕ್ಕಿಳಿಯುವುದು ಕನ್ಫರ್ಮ್ ಆಗಿದೆ. ಹಾಗಾದ್ರೆ ಈ ಅಜಯ್ ರಾಯ್ ಯಾರು ಅಂದ್ರಾ? ಇವರು ಕಾಂಗ್ರೆಸ್ ಗೆ ಸೇರುವ ಮುನ್ನ ಬಿಜೆಪಿಯಿಂದ ಟಿಕೆಟ್ ಪಡೆದು ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಎರಡು ಬಾರಿ ಲೋಕಸಭಾ ಚುನಾವಣೆಗೆ…
ಮೆಂತ್ಯ ಪಲಾವ್, ಮೆಂತ್ಯ ರೈಸ್, ಮೆಂತೆ ಪಲ್ಯ ಸೇವನೆ ಮಾಡುತ್ತಿದ್ದೀರಾ. ಹಾಗಿದ್ದರೆ ಇದು ಆರೋಗ್ಯಕ್ಕೆ ಎಷ್ಟು ಒಳ್ಳೆಯ ಪ್ರಯೋಜನ ಕೊಡುತ್ತದೆ ಅಂತ ತಿಳಿಯಿರಿ. ಮಧುಮೇಹ : ಮೆಂತ್ಯ ಸೊಪ್ಪು ಮಧುಮೇಹ ನಿಯಂತ್ರಿಸುವ ಗುಣ ಹೊಂದಿದೆ. ಇದು ಟೈಪ್ 1, ಟೈಪ್ 2 ಮಧುಮೇಹಿಗಳಿಗೆ ಹೇಳಿ ಮಾಡಿಸಿದ ಸೊಪ್ಪು. ಕೊಲೆಸ್ಟ್ರಾಲ್ : ಮೆಂತ್ಯ ಸೊಪ್ಪು ಕರುಳಿನಲ್ಲಿರುವ ಕೊಲೆಸ್ಟ್ರಾಲ್ ಅಂಶವನ್ನು ಹೀರಿಕೊಳ್ಳುವ ಗುಣ ಹೊಂದಿದೆ. ಅಷ್ಟೇ ಅಲ್ಲದೆ, ಲಿವರ್ ನಲ್ಲಿ ಕೊಬ್ಬಿನಂಶ ಹೆಚ್ಚು ಬಿಡುಗಡೆಯಾಗದಂತೆ ನೋಡಿಕೊಳ್ಳುತ್ತದೆ. ಇದು ಒಳ್ಳೆಯ ಕೊಬ್ಬಿನಂಶ ಬಿಡುಗಡೆ ಮಾಡಲು…
ಓದು ಮುಗಿಸಿದ ನಂತರ ಉದ್ಯೋಗ ಹುಡುಕುವುದು, ಒಂದು ಜಾಬ್ನಲ್ಲಿ ಇದ್ದು ಮೊತ್ತೊಂದು ಉದ್ಯೋಗ ಸರ್ಚ್ ಮಾಡುವುದು ಹಲವರಿಗೆ ತುಂಬಾ ಕಷ್ಟದ ಕೆಲಸ.ಇದನ್ನು ಸರಳಗೊಳಿಸುವುದು, ಎಲ್ಲರೂ ಬೆಳೆಸಿಕೊಂಡ ವೃತ್ತಿಪರ ಸಂಪರ್ಕಗಳು ಮಾತ್ರ ಎಂಬುದನ್ನು ಮರೆಯುವ ಹಾಗಿಲ್ಲ. ಉತ್ತಮ ಸಂವಹನ ಬೆಳವಣಿಗೆಗಾಗಿ ಇರುವ ಹಲವು ಮಾರ್ಗಗಳನ್ನು ಅಳವಡಿಸಿಕೊಳ್ಳಬೇಕು. ಖಾಸಗಿ ಕ್ಷೇತ್ರಗಳಲ್ಲಿ ಆಗಲಿ, ಸರ್ಕಾರಿ ಇಲಾಖೆಗಳ ಖಾಯಂ ಮತ್ತು ಗುತ್ತಿಗೆ ಆಧಾರದ ಕೆಲಸಗಳೇ ಆಗಲಿ, ಯಾವುದೇ ಕ್ಷೇತ್ರಗಳಲ್ಲಿ ಉದ್ಯೋಗ ಪಡೆಯಲು ವೃತ್ತಿ ಪರ ಸಂಪರ್ಕಗಳು ಮತ್ತು ಅವರೊಂದಿಗಿನ ಉತ್ತಮ ಸಂವಹನ ಮಾತ್ರ…