ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಮ್ಮ ಭಾರತ ಶಾಂತಿ ಪ್ರಿಯ ರಾಷ್ಟ್ರ. ಪಕ್ಕದ ಶತ್ರು ರಾಷ್ಟ್ರಗಳು ಏನೇ ಮಾಡಿದರೂ,ಅವರಿಗೆ ಎಚ್ಚರಿಕೆ ಮಾತ್ರ ಕೊಡುತ್ತಾ ಬರುತ್ತೇವೆ.ಇನ್ನೊಮ್ಮೆ ಹೀಗೆ ಮಾಡಿದ್ರೆ ನಾವು ಸುಮ್ಮನಿರಲ್ಲ ಅಂತ ಎಚ್ಚರಿಕೆ ಮಾತ್ರ ಕೊಡುತ್ತಾ ಬರುತ್ತೇವೆ. ಆದ್ರೆ ಕೆಲವೊಂದು ರಾಷ್ಟ್ರಗಳು ಇದಕ್ಕೆ ತದ್ವಿರುದ್ದ.ಏಕೆಂದರೆ ಅವರು ನಮ್ಮ ತರ ಎಚ್ಚರಿಕೆ ಮಾತ್ರ, ಯಾವುದೋ ಒಂದು ರೀತಿ ಸೇಡು ತೀರಿಸಿಕೊಳ್ಳುತ್ತವೆ.
ಅದೇ ರೀತಿ ಇಸ್ರೇಲ್ ದೇಶ ಸಹ. 1972 ರಲ್ಲಿ ಇಸ್ರೇಲಿನ ಫೂಟಬಾಲ್ ಟೀಮ್ ಮೇಲೆ ಭಯೋತ್ಪಾದಕರು ದಾಳಿ ನಡೆಸಿ ಎಲ್ಲರನ್ನೂ ಕೊಂದುಹಾಕಿ ಮರ್ಮಾಂಗ ಕತ್ತರಿಸಿದ್ದರು. ಈ ಕೃತ್ಯಕ್ಕಾಗಿ ಇಸ್ರೇಲ್ ಸೇಡು ತೀರಿಸಿಕೊಂಡ ರೀತಿ ತುಂಬಾ ರೋಚಕವಾಗಿದೆ.ಮುಂದೆ ಓದಿ….
ಈ ಕೃತ್ಯ ನಂತರ ಇಸ್ರೇಲ್ ದೇಶವು ಅತ್ಯಂತ ರಹಸ್ಯವಾದ ಒಂದು “ಮೊಸ್ಸಾದ್ ” ಎಂಬ ಟೀಮ್ ರಚಿಸಿ, ಈ ದಾಳಿಗೆ ಕಾರಣರಾದ ಎಲ್ಲಾ ಭಯೋತ್ಪಾದಕರನ್ನು ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ಕೊಲ್ಲಲು ನಿರ್ಧರಿಸಿದರು. ಆದರೆ ಅದಾಗಲೇ ಅವರೆಲ್ಲರೂ ಪ್ರಪಂಚದ ಬೇರೆ ಬೇರೆ ದೇಶಗಳಿಗೆ ಹೋಗಿ ಅಡಗಿದ್ದರು. ಇಸ್ರೇಲ್ ಈ ಎಲ್ಲರನ್ನೂ ಮುಗಿಸಲು ತೆಗೆದುಕೊಂಡಿದ್ದು ಬರೋಬ್ಬರಿ ಇಪ್ಪತ್ತು ವರ್ಷ. ಕಾರ್ಯಾಚರಣೆ ಅಷ್ಟೂ ವರ್ಷ ನಡೆದಿತ್ತು. ಇದು ಯಾವ ಹಾಲಿವುಡ್ ಚಿತ್ರಗಳಿಗಿಂತಲೂ ಕಡಿಮೆ ಇರಲಿಲ್ಲ, ಅಷ್ಟು ರೋಚಕವಾಗಿತ್ತು. ಇಸ್ರೇಲ್ ಹೊಡೆದಿದೆ ಅಂತ ಗೊತ್ತಾಗದಂತೆ ನೋಡಿಕೊಳ್ಳುವುದೂ ಕೂಡ ಮುಖ್ಯ ವಾಗಿತ್ತು. ಇದನ್ನು ‘ ಮ್ಯೂನಿಕ್ ‘ ಅಂತ ಸಿನಿಮಾ ಮಾಡಿದ್ದಾರೆ.
1948 ಬ್ರಿಟಿಷರು ಭಾರತ- ಪಾಕ್ ನಂತೇ, ಇಸ್ರೇಲ್- ಪಾಲೆಸ್ಟೈನ್ ವಿಭಜಿಸಿ ಸ್ವಾತಂತ್ರ್ಯ ಕೊಟ್ಟರು. ಇದಕ್ಕೆ ಮೊದಲು ಅಲ್ಲಿ ಜ್ಯೂ ಮತ್ತು ಮುಸ್ಲಿಮರು ಒಟ್ಟಾಗಿಯೇ ಇದ್ದರು.
ಸ್ವಾತಂತ್ರ ಸಿಕ್ಕ ತಕ್ಷಣ ಅಕ್ಕ ಪಕ್ಕದ ಮುಸ್ಲಿಮ ರಾಷ್ಟ್ರಗಳು ಇಸ್ರೇಲ್ ಮೇಲೆ ಆಕ್ರಮಣ ಮಾಡಿದವು. ಹಿಟ್ಲರ್ ಅದಕ್ಕೂ ಮೊದಲು ಇಡೀ ಜಗತ್ತಿನಲ್ಲಿದ್ದ ಒಟ್ಟೂ ಒಂದು ಕೋಟಿ ಹತ್ತು ಲಕ್ಷ ಜ್ಯೂಗಳ ಪೈಕಿ ಅರ್ಧಕ್ಕೂ ಹೆಚ್ಚು ಅಂದರೆ 60 ಲಕ್ಷ ಜ್ಯೂ ಗಳನ್ನು ಕೊಂದಿದ್ದ. . ಈಗ ಅವರ ಒಟ್ಟೂ ಸಂಖ್ಯೆ ಒಂದು ಕೋಟಿ ಇಪ್ಪತ್ತು ಲಕ್ಷ.
ಈ ಯುದ್ಧ ಜ್ಯೂ ಗಳ ಅಳಿವು ಉಳಿವಿನ ಪ್ರಶ್ನೆ ಆಗಿತ್ತು. ಇಸ್ರೇಲ್ ಯುದ್ಧ ಗೆದ್ದಿತು. 1967 ಮತ್ತೆ ಇಸ್ರೇಲ್ ಮೇಲೆ ಆಕ್ರಮಣ, ಮತ್ತೆ ಇಸ್ರೇಲ್ ಗೆಲುವು. ಇಸ್ರೇಲ್ ಯಾವ ಯುದ್ಧವನ್ನೂ ಸೋಲಲೇ ಇಲ್ಲ. ಸೋತಿದ್ದರೆ ಜಗತ್ತಿನಲ್ಲಿ ಜ್ಯೂಗಳು ಉಳಿಯುವುದಿಲ್ಲ ಎಂಬ ಅರಿವೇ ಅವರಿಗೆ ಗೊತ್ತಿತ್ತು. ಬೆಕ್ಕನ್ನು ಕೋಣೆಯಲ್ಲಿ ಕೂಡಿ ಹಾಕಿ ಅದರ ಮೇಲೆ ದೌರ್ಜನ್ಯ ಮಾಡಿದರೆ ಅದೂ ತಿರುಗಿ ಬೀಳುತ್ತದೆ. ಹೇಳಿ ಕೇಳಿ ಇಸ್ರೇಲ್ ಹುಲಿಯ ಜಾತಿ. ಜಗತ್ತಿನಲ್ಲಿ ಅತ್ಯಂತ ಹೆಚ್ಚು ದೌರ್ಜನ್ಯಕ್ಕೆ ಒಳಗಾದವರು ಜ್ಯೂಗಳು.
“ನೀವು ನಮ್ಮ ಒಬ್ಬ ಪ್ರೆಜೆಯನ್ನು ಹೊಡೆದರೆ ನಾವು ನಿಮ್ಮ ನೂರು ಜನರನ್ನು ಹೊಡೆಯುತ್ತೇವೆ ”
ಎರಡನೇ ಮಹಾಯುದ್ಧದ ನಂತರ ತನ್ನ ಗಡಿಯನ್ನು ಯುದ್ಧ ದಲ್ಲಿ ಗೆಲ್ಲುವ ಮೂಲಕ ವಿಸ್ತರಿಸಿದ ಜಗತ್ತಿನ ಏಕೈಕ ರಾಷ್ಟ್ರ ಇಸ್ರೇಲ್.
“ನೀವು ನಮ್ಮ ಒಬ್ಬ ಪ್ರೆಜೆಯನ್ನು ಹೊಡೆದರೆ ನಾವು ನಿಮ್ಮ ನೂರು ಜನರನ್ನು ಹೊಡೆಯುತ್ತೇವೆ ” ಅಂತ ಹೇಳಿ ಮಾಡಿ ತೋರಿಸಿದ ಜಗತ್ತಿನ ಏಕೈಕ ಗಂಡುಗಲಿ ರಾಷ್ಟ್ರ.
ಇಸ್ರೇಲ್ ಮೇಲೆ ಸುತ್ತಲಿನ ದೇಶಗಳು ನೂರಾರು ಬಾರಿ ಭಯೋತ್ಪಾದನಾ ದಾಳಿ ಮಾಡಿದವು. ಎಂಟೆಬ್ಬೆ ವಿಮಾನ ಅಪಹರಸಿ ಶತ್ರು ರಾಷ್ಟ್ರಕ್ಕೆ ಒಯ್ಯಲಾಯಿತು. ಇಸ್ರೇಲ್ ಕಮಾಂಡೋಗಳು ಅಲ್ಲಿಗೇ ಹೋಗಿ ಭಯೋತ್ಪಾದಕರನ್ನು ಮುಗಿಸಿದರು. ಆ ಕಮಾಂಡೋಗಲ್ಲಿ ಇಸ್ರೇಲ್ ಪ್ರಧಾನಿಯ ಸ್ವಂತ ಅಣ್ಣನಿದ್ದ.
ಪಿಎಲಓ ಲೀಡರ್ ಯಾಸಿರ್ ಅರಾಫತ ರನ್ನು ಇಸ್ರೇಲ್ ಸೇನೆ ಸುತ್ತುವರೆದು ಒಂದು ಬಿಲ್ಡಿಂಗನಲ್ಲಿ ನೀರು ವಿದ್ಯುತ್ ಕಟ್ ಮಾಡಿ ಏಳು ದಿನ ಕೂಡಿಹಾಕಿತ್ತು.ಇಸ್ರೇಲ್ ಆರ್ಥಿಕ ವಾಗಿ ತುಂಬಾ ಮುಂದಿದೆ. ಜಗತ್ತಿನ ಶೇ ಹತ್ತು ಶಸ್ತ್ರ ಗಳು ಇಲ್ಲಿ ತಯಾರಾಗುವವು.
ಇಸ್ರೇಲ್ ಬಳಿ ರಹಸ್ಯ ವಾಗಿ ತಯಾರಾದ ಆಟಮ್ ಬಾಂಬ್. ರಾಸಾಯನಿಕ ಅಸ್ತ್ರ ಇವೆ. ಇಡೀ ಜಗತ್ತಿನಲ್ಲಿ ಶಸ್ತ್ರಾಸ್ತ್ರ ತಯಾರಿಕೆ ಪರೀಕ್ಷೆ ಮಾಡಲು ಒಪ್ಪಂದ ಇದೆ. ಆದರೆ ಪರೀಕ್ಷೆಗೆ ಒಳಪಡಿಸಲಾಗದ ಜಗತ್ತಿನ ಏಕೈಕ ರಾಷ್ಟ್ರ ಇಸ್ರೇಲ್.
ತುಂಬಾ ಹಿಂದೆ ಅಮೆರಿಕ ಇಸ್ರೇಲ್ ಅಣು ಬಾಂಬ್ ತಯಾರಿಕಾ ಘಟಕ ವನ್ನು ಪರೀಕ್ಷೆ ಮಾಡಲು ಹೋಗಿತ್ತು. ಏನೂ ಸಿಗಲಿಲ್ಲ. ಯಾಕೆಂದರೆ ಪರೀಕ್ಷಕರಿಗೆ ನೆಲ ಮಹಡಿ ತೋರಿಸಿ ಯಾಮಾರಿಸಿದರು. ಘಟಕ ಇದ್ದದ್ದು ನೆಲದಿಂದ ಏಳು ಮಹಡಿ ಕೆಳಗೆ. ಈಗ ಅಮೆರಿಕ ಇಸ್ರೇಲ್ ಗೆ ಪ್ರತೀ ವರ್ಷ ಬಿಲಿಯನ್ ಡಾಲರ್ ಕೊಡುತ್ತದೆ.
ಅಮೆರಿಕದ ಕೇವಲ ನಾಲ್ಕು ಶೇಕಡಾ ಜ್ಯೂಗಳು ಅಮೆರಿಕದ ಆಯಕಟ್ಟಿನ ಪ್ರಭಾವೀ ಅಧಿಕಾರ ಹೊಂದಿದ್ದಾರೆ. ಜರ್ಮನಿಯಲ್ಲಿ ಅತ್ಯಂತ ಕಡಿಮೆ ಸಂಖ್ಯೆಯಲ್ಲಿರುವ ಜ್ಯೂಗಳು ದೊಡ್ಡ ದೊಡ್ಡ ಅಧಿಕಾರದಲ್ಲಿರುವುದು ಹಿಟ್ಲರನ ಕೋಪಕ್ಕೆ ಕಾರಣವಾಗಿತ್ತು. ಅದಕ್ಕಾಗಿ ಆತ ಜಗತ್ತಿನಲ್ಲಿ ಜ್ಯೂಗಳು ಇರಬಾರದು ಅಂತ ಕೊಂದಿದ್ದು. ಇದಕ್ಕೂ ಮೊದಲು ಮುಸ್ಲಿಮರು ಜ್ಯೂ ಗಳನ್ನು ಕೊಲ್ಲುತ್ತಿದ್ದುದು ಇತಿಹಾಸ. ಆದರೆ ಇಷ್ಟು ಕಡಿಮೆ ಸಂಖ್ಯೆಯ ಜನರು ಪುಟಿದೆದ್ದರು. ಸಂಸ್ಕೃತ ದಂತೆಯೇ ಅವರ ” ಹೀಬ್ರೂ ” ಭಾಷೆ ಸತ್ತು ಹೋಗಿತ್ತು. ಪುರಾತನ ಭಾಷೆಯನ್ನು ಮತ್ತೆ ಜೀವಂತ ಗಳಿಸಿದ ಏಕೈಕ ಜನ ಜ್ಯೂಗಳು.
” ಹೀಬ್ರೂ ” ಭಾಷೆ
ನಿಮಗೆ ಆಚಾರಿ ಅನಿಸಬಹುದು.ಏಕೆಂದರೆ ಜಗತ್ತಿನಲ್ಲಿ ಕೇವಲ ಒಂದು ಕೋಟಿ ಇಪ್ಪತ್ತು ಲಕ್ಷ ಇರುವ ಜ್ಯೂಗಳು ಇಡೀ ಜಗತ್ತಿನ ಮೇಲೆ ಹಿಡಿತ ಸಾಧಿಸಿದ್ದಾರೆ. ಎಷ್ಟು ತುಳಿದರೂ ಮೇಲೆ ಎದ್ದಿದ್ದಾರೆ. ಎಲ್ಲಕ್ಕೂ ಮುಖ್ಯವಾಗಿ ತಮ್ಮ ಭಾಷೆಯಾದ ಹೀಬ್ರೂ ವನ್ನು ಮತ್ತೆ ಕಲಿತು ಅದರಲ್ಲೇ ಮಾತನಾಡುತ್ತಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕಣಿವೆ ರಾಜ್ಯ ಜಮ್ಮು- ಕಾಶ್ಮೀರದ ಪುಲ್ವಾಮ ಹಾಗೂ ಶೂಪಿಯಾನ್ ಬಳಿ ಭದ್ರತಾ ಪಡೆಗಳು ನಡೆಸಿದ ಪ್ರತ್ಯೇಕ ಎನ್ ಕೌಂಟರ್ ಗಳಲ್ಲಿ ಆರು ಮಂದಿ ಉಗ್ರರು ಹತ್ಯೆಯಾಗಿದ್ದಾರೆ. ಈ ಮಧ್ಯೆ ಯೋಧರು ಹುತಾತ್ಮರಾಗಿದ್ದು, ನಾಗರಿಕರೊಬ್ಬರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಪುಲ್ವಾಮಾದಲ್ಲಿ ಮೂವರು ಜೈಷ್ -ಇ- ಮೊಹಮ್ಮದ್ ಸಂಘಟನೆ ಉಗ್ರರು ಹತ್ಯೆಯಾಗಿದ್ದರೆ, ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ಈ ಮಧ್ಯೆ ನಾಗರಿಕರೊಬ್ಬರು ಮೃತಪಟ್ಟಿದ್ದಾರೆ. ಶೂಪಿಯಾನ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳ ಜೊತೆಗಿನ ಗುಂಡಿನ ಕಾಳಗದಲ್ಲಿ ಮೂವರು ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸ್…
ಎರಡನೇ ಬಾರಿಗೆ ನರೇಂದ್ರ ಮೋದಿ ನೇತೃತ್ವದಲ್ಲಿ ಇಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಚೊಚ್ಚಲ ಬಜೆಟ್ ಮಂಡನೆ ಮಾಡಿದ್ದಾರೆ. ಕೆಲ ವಸ್ತುಗಳು ಹಾಗೂ ಸೇವೆಗಳು ದುಬಾರಿಯಾದರೆ ,ಕೆಲವಸ್ತುಗಳ ಬೆಲೆಯಲ್ಲಿ ಇಳಿಕೆಯಾಗಿದೆ.ಯಾವ ವಸ್ತುಗಳ ಬೆಲೆ ಏರಿಕೆಯಾಗಲಿದೆ? ಯಾವ ವಸ್ತುಗಳ ಬೆಲೆ ಇಳಿಕೆಯಾಗಲಿದೆ? ಎಂಬುದರ ಪೂರ್ತಿ ವಿವರ ಇಲ್ಲಿದೆ ನೋಡಿ.. ಯಾವ ವಸ್ತುಗಳ ಬೆಲೆ ಏರಿಕೆಯಾಗಿದೆ ಎಂಬುದರ ವಿವರ ಇಲ್ಲಿದೆ. ಪ್ರಮುಖವಾಗಿ ಚಿನ್ನ ಮತ್ತು ಆಭರಣಗಳ ದರ ಏರಿಕೆಯಾಗಿದ್ದು, ಪೆಟ್ರೋಲ್ ಮತ್ತು ಡಿಸೇಲ್ ಮೇಲಿನ ಸೆಸ್ ಏರಿಕೆಯಾಗಿದ್ದು, ಒಂದು…
ಚೆನ್ನೈ ನ 7 ವರ್ಷದ ಬಾಲಕನ ಬಾಯಲ್ಲಿ ಸುಮಾರು 526 ಹಲ್ಲುಗಳು ಬೆಳೆದಿರುವ ಅಪರೂಪದ ಪ್ರಕರಣ ಬೆಳಕಿಗೆ ಬಂದಿದೆ.ನಗರದ ಸವಿತಾ ದಂತ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯಲ್ಲಿ 7 ವರ್ಷದ ಬಾಲಕನ ಬಾಯಿಯಲ್ಲಿದ್ದ 526 ಹಲ್ಲುಗಳನ್ನು ವೈದ್ಯರು ಆಪರೇಷನ್ ಮಾಡಿ ಹೊರ ತೆಗೆದಿದ್ದಾರೆ.‘ಕಾಂಪೌಂಡ್ ಕಾಂಪೋಸಿಟ್ ಒಂಡೊಂಟೊಮ್’ ಎಂಬ ಅಪರೂಪದ ಖಾಯಿಲೆಯಿಂದ ಬಾಲಕ ಬಳಲುತ್ತಿದ್ದ. ಸುಮಾರು 526 ಹಲ್ಲುಗಳು ಬೆಳೆದಿದ್ದರಿಂದ ಕೆಳಗಿನ ಬಲ ದವಡೆ ತುಂಬಾ ಊದಿಕೊಂಡಿತ್ತು. ಸರ್ಜರಿ ಮೂಲಕ ಆ ಎಲ್ಲ ಹಲ್ಲುಗಳನ್ನು ಹೊರ ತೆಗೆಯುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ. ಬಾಲಕ…
ಇತ್ತೀಚಿನ ದಿನಗಳಲ್ಲಿ ಗೋವುಗಳನ್ನು ಸಾಕುವ ಜಮಾನ ಕಡಿಮೆಯಾಗುತ್ತಾ ಬರುತ್ತಿದೆ. ಹೀಗಾಗಿ ಕೃಷಿಗೆ ಬೇಕಾದ ಗೊಬ್ಬರಕ್ಕಾಗಿ ಜನ ಅಲೆದಾಡುತ್ತಾರೆ. ಸಗಣಿಯನ್ನು ರಸಗೊಬ್ಬರವಾಗಿ ಕೃಷಿಗಳಿಗೆ ಬಳಸುವುದರಿಂದ ಸದ್ಯ ಇದಕ್ಕೆ ಬೇಡಿಕೆ ಇದೆ. ಇದರಂತೆಯೇ ಇದೀಗ ನಾಯಿಗಳ ಮಲಕ್ಕೂ ಬೇಡಿಕೆಯಿದೆ. ಹೌದು. ಪಿಲಿಫೈನ್ಸ್ ಶಾಲೆಯೊಂದರ ವಿದ್ಯಾರ್ಥಿಗಳು ಹೊಸ ಆವಿಷ್ಕಾರವೊಂದನ್ನು ಮಾಡಿದ್ದು, ಅದರಲ್ಲಿ ನಾಯಿಗಳ ಮಲದಿಂದಲೂ ಉಪಯೋಗವಿದೆ ಎಂಬುದನ್ನು ಸಾಬೀತುಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇದೀಗ ನಾಯಿಗಳ ಮಲಕ್ಕೂ ಹೆಚ್ಚಿನ ಬೇಡಿಕೆ ಬರಬಹುದಾದ ಸಾಧ್ಯತೆಗಳಿವೆ. ಸಿಮೆಂಟ್ ನೊಂದಿಗೆ ನಾಯಿ ಮಲವನ್ನು ಮಿಕ್ಸ್ ಮಾಡಿ ಇಟ್ಟಿಗೆ…
ಒಂದೆಕರೆ ಕ್ಷಣದಲ್ಲೇ ಪರಿಹಾರ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು 9739124121ಶ್ರೀ ಕ್ಷೇತ್ರ ಧರ್ಮಸ್ಥಳ ನುಡಿದಂತೆ ನಡೆಯುವುದು ಮೇಷ:- ಸುಡು ಕೆಂಡಗಳನ್ನು ಕಟ್ಟಿಕೊಂಡು ತಿರುಗಾಡುವ ಮೊದಲು ನಿಧಾನವಾಗಿ ನಿರ್ಣಯ ತೆಗೆದುಕೊಂಡು ಮುನ್ನುಗ್ಗುವುದು ಒಳ್ಳೆಯದು. ಸದ್ಯದ ಪರಿಸ್ಥಿತಿಯಲ್ಲಿ ಗ್ರಹಗತಿಗಳು ಉತ್ತಮ ಸ್ಥಾನದಲ್ಲಿ ಸಂಚರಿಸದೆ ಅನೇಕ ತೊಂದರೆಗಳು ಉಂಟಾಗುವವು.ನಿಮ್ಮ ಸಮಸ್ಯೆಏನೇಇರಲಿ ಎಷ್ಟೇ…
ಬ್ರಹ್ಮ ಗುಪ್ತ ಇದನ್ನು ಡೆವಲಪ್ ಮಾಡಿ ಈಗಿನ ಸೊನ್ನೆ ರೂಪಕ್ಕೆ ತಂದ? ಹಾಗಿದ್ದರೆ ಕೇವಲ ಒಂದೂವರೆ ಸಾವಿರ ವರ್ಷದ ಹಿಂದೆ ಬಂದಿದ್ದಾ ಸೊನ್ನೆ ? ಅದರ ಮೊದಲು ಏನಿತ್ತು ? ಉಳಿದ ನಂಬರಗಳು ಯಾರು ಕಂಡುಹಿಡಿದಿದ್ದು ?