ಉದ್ಯೋಗ

ಸಾಫ್ಟ್ ವೇರ್ ಉದ್ಯೋಗಿಗಳಲ್ಲಿ ಕವಿದ ಆತಂಕದ ಕಾರ್ಮೋಡ!!!

195

ಆತ ಸಾಫ್ಟವೇರ್ ಟೆಕ್ಕಿ. ಒಳ್ಳೆಯ ಪ್ಯಾಕೇಜ್‌ನ ಸಂಬಳ. ಪ್ರತಿಷ್ಠಿತ ಶಾಲೆಯಲ್ಲಿ ಓದುವ ಇಬ್ಬರು ಮುದ್ದಾದ ಮಕ್ಕಳ ಸಂಸಾರ. ಸಕಲ ಆಧುನಿಕ ಸೌಲಭ್ಯಗಳಿರುವ ಅಪಾರ್ಟ್‌ಮೆಂಟ್‌ನಲ್ಲಿ ಬ್ಯಾಂಕ್ ಸಾಲದಿಂದ ಖರೀದಿಸಿದ ಮೂರು ಬೆಡ್ ರೂಮ್‌ನ ಐಷಾರಾಮಿ ಫ್ಲ್ಯಾಟ್.

ಸದಾ ಚಟುವಟಿಕೆಯಿಂದ, ನಗುವಿನಿಂದ ತುಂಬಿರುತ್ತಿದ್ದ ಮನೆಯಲ್ಲಿ ಇತ್ತೀಚೆಗೆ ಸ್ವಲ್ಪ ಆತಂಕ ಕಾಣುತ್ತಿದೆ. ಮಕ್ಕಳ ವಿದ್ಯಾಭ್ಯಾಸ, 30-40 ಲಕ್ಷದಷ್ಟಿರುವ ಗೃಹಸಾಲ ಅವನನ್ನು ಅಣಕಿಸುತ್ತಿವೆ.

ಸಹೋದ್ಯೋಗಿಗಳು ಬಿಟ್ಟು ಹೋದ ತಿರುಗುವ ಕುರ್ಚಿಗಳು ಅವನನ್ನು ಬೆವರಿಸುತ್ತವೆ. ತನ್ನ ಕುರ್ಚಿಯೂ ಹೀಗೆ ಬರಿದಾಗಬಹುದೇನೋ ಎನ್ನುವ ಅವ್ಯಕ್ತ ಭಯ ಅವನನ್ನು ಕಾಡಲು ಶುರು ಮಾಡಿದೆ.

ಸಂಜೆ ಆಫೀಸು ಮುಗಿಯುವಾಗ ಬರುವ ಇ ಮೇಲ್ ತೆರೆಯುವಾಗ ಕೈ ನಡುಗುತ್ತದೆ. ಹಾಗೆಯೇ ಮುಂಜಾನೆ ಆಫೀಸಿನಲ್ಲಿ ಲಾಗ್ ಇನ್ ಮಾಡುವಾಗ ಎಸಿ ಕ್ಯಾಬಿನ್‌ನಲ್ಲಿಯೂ ಬೆವರುತ್ತಾನೆ.

ಇದು ಇವನೊಬ್ಬನ ಕಥೆಯಲ್ಲ. ಭಾರತದ ಐಟಿ ಉದ್ಯಮದಲ್ಲಿ ಸುಮಾರು 13,000 ಕಂಪನಿಗಳಲ್ಲಿ ದುಡಿಯುವ 28 ಲಕ್ಷ ಟೆಕ್ಕಿಗಳು ನೇರವಾಗಿ ಮತ್ತು ಇದರ ಮೂಲಕ ಪರೋಕ್ಷವಾಗಿ ಕೆಲಸ ಮಾಡುವ 89 ಲಕ್ಷ ಜನರು ಎದುರಿಸುತ್ತಿರುವ ಭಯ, ಆತಂಕ.

ಬೆಂಗಳೂರು ನಗರವೊಂದರಲ್ಲೇ ಸುಮಾರು 5,000 ಟೆಕ್ ಕಂಪನಿಗಳಿವೆ. ಇತ್ತೀಚೆಗಿನ ದಿನಗಳಲ್ಲಿ ಇನ್ ಫೋಸಿಸ್, ವಿಪ್ರೋ, ಟೆಕ್ ಮಹೀಂದ್ರ, ಕಾಗ್ನಿಜೆಂಟ್ ಮತ್ತು ಐಬಿಎಂನಂಥ ಕಂಪನಿಗಳು ಸುಮಾರು 58,000 ಸಿಬ್ಬಂದಿಯನ್ನು ಕೆಲಸದಿಂದ ತೆಗೆದಿವೆ ಎಂದು ಹೇಳಲಾಗುತ್ತಿದ್ದು, ಈ ಹಾದಿಯಲ್ಲಿ ಇನ್ನೂ ಕೆಲವು ಕಂಪನಿಗಳು ಇವೆಯಂತೆ.

ಹಾಗೆಯೇ ಈ ದೊಡ್ಡ ಕಂಪನಿಗಳ ಹಾದಿಯಲ್ಲಿಯೇ ಸಣ್ಣ ಸಣ್ಣ ಕಂಪನಿಗಳು ಇನ್ನೂ ದೂರ ಸಾಗಿದರೆ ಆಶ್ಚರ್ಯವಿಲ್ಲ.

ಈ ಕಂಪನಿಗಳ ಪ್ರಕಾರ ಇದು ಸಾಧಿಸಿದವರನ್ನು ಉಳಿಸಿಕೊಳ್ಳುವ ಮತ್ತು ಸಾಧಿಸದವರನ್ನು ಕೆಲಸದಿಂದ ತೆಗೆದು ಹಾಕುವ ವಾರ್ಷಿಕ ಪ್ರಕ್ರಿಯೆಯಷ್ಟೆ. ಇದು ಸಿಬ್ಬಂದಿ ವೇತನದ ಬಿಲ್‌ನ್ನು ಕಡಿಮೆ ಮಾಡುವ ಮತ್ತು ನಿರ್ವಹಣಾ ವೆಚ್ಚವನ್ನು ತಗ್ಗಿಸಲು shifting to automation, robotic, manning legacy system to digital and cloud  ಎನ್ನುವ ಸತ್ಯವನ್ನು ಮರೆಮಾಚಲಾಗುತ್ತದೆ ಎಂದು ಸಾಫ್ಟವೇರ್ ತಜ್ಞರು ಅಭಿಪ್ರಾಯ ಪಡುತ್ತಾರೆ.

ಟೆಕ್ಕಿಗಳ ಉದ್ಯೋಗ ಉಳಿಯಬೇಕಾದರೆ ಅವರು ತಮ್ಮ ತಾಂತ್ರಿಕ ಕೌಶಲ ಮತ್ತು ವಿದ್ಯಾರ್ಹತೆಯನ್ನು ಹೆಚ್ಚಿಸಿಕೊಬೇಕಾದ ಅನಿವಾರ್ಯ ಉಂಟಾಗಿದೆ.

ಸಾಫ್ಟ್‌ವೇರ್ ಉದ್ಯಮದಲ್ಲಿನ ಕಳೆದ ಒಂದೆರಡು ವರ್ಷಗಳ ಆಗುಹೋಗುಗಳನ್ನು ಮತ್ತು ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಇಂಥ ಪರಿಸ್ಥಿತಿಯ ಆಗಮನದ ಸಂಕೇತ ಮತ್ತು ಸೂಚನೆಗಳು ಎದ್ದು ಕಾಣುತ್ತಿದ್ದವು ಮತ್ತು ಅದನ್ನು ಗೋಡೆಯ ಮೇಲೆ ನಿಚ್ಚಳವಾಗಿ ಬರೆಯಲಾಗಿತ್ತು ಕೂಡಾ.

ಆದರೆ, ವ್ಯಾಧಿ ಪಸರಿಸಿ ಹತೋಟಿ ತಪ್ಪುವ ಹಂತಕ್ಕೆ ಬಂದಾಗ ಮಾತ್ರ ಎಚ್ಚೆತ್ತುಕೊಳ್ಳುವ ನಮ್ಮ ಮನೋಸ್ಥಿತಿಗೆ ಇದು ಬೇಗ ಅರ್ಥವಾಗಲಿಲ್ಲವಷ್ಟೆ. ಉದ್ಯೋಗಿಗಳು ಕೂಡ ಸ್ವಲ್ಪ ನಿರ್ಲಿಪ್ತತೆ ತೋರಿಸಿದರು.

ಐಟಿ ಕ್ಷೇತ್ರದ ಮಾಜಿ ದಿಗ್ಗಜರೊಬ್ಬರ ಪ್ರಕಾರ ಸಾಫ್ಟ್ ವೇರ್ ಕ್ಷೇತ್ರದಲ್ಲಿ ಅಡಿಯಿಡುತ್ತಿರುವ ಅಟೋಮೇಷನ್ ವ್ಯವಸ್ಥೆ, ಭಾರತದಲ್ಲಿ ಇನ್ನು 9 ವರ್ಷಗಳಲ್ಲಿ 20 ಕೋಟಿ ಯುವಕರನ್ನು ನಿರುದ್ಯೋಗಿಗಳನ್ನಾಗಿ ಮಾಡುವ ಸಾಧ್ಯತೆ ಇದೆ.

ಸುಮಾರು 2ರಿಂದ 2.50 ಲಕ್ಷ ಹೆಚ್ಚುವರಿ ಉದ್ಯೋಗಗಳು ಬೆಳಕು ಕಾಣುವ ಸಾಧ್ಯತೆ ಕಡಿಮೆ. ಹಾಗೆಯೇ 2.25 ಲಕ್ಷ ಮಧ್ಯಮ ದರ್ಜೆ ಉದ್ಯೋಗಗಳು ಕಡಿಮೆಯಾಗಬಹುದು. ವಿಶೇಷ ತಂತ್ರಜ್ಞಾನ ಇದ್ದವರು ಮಾತ್ರ ಉಳಿಯಬಲ್ಲರು.

ಈಗಿನಂತೆ ಕೇವಲ ಒಂದು ಎಂಜಿನಿಯರಿಂಗ್ ಪದವಿ ಉದ್ಯೋಗ ಕೊಡಲಾರದು. ವಿಶ್ವ ಬ್ಯಾಂಕಿನ ಒಂದು ವರದಿ ಪ್ರಕಾರ ಸಾಫ್ಟ್ ವೇರ್ ಉದ್ಯಮದ ಈ ಹೊಸ ಆವಿಷ್ಕಾರ ಭಾರತದಲ್ಲಿ 69% ಉದ್ಯೋಗಿಗಳನ್ನು ಎತ್ತಂಗಡಿ ಮಾಡುವ ಸಾಧ್ಯತೆ ಇದೆ.

ಬರಗಾಲದಲ್ಲಿ ಅಧಿಕ ಮಾಸ ಅಥವಾ ಗಾಯದ ಮೇಲೆ ಬರೆ ಎನ್ನುವಂತೆ ಅಮೆರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಎಚ್1ಬಿ ವೀಸಾ ಹೆಸರಿನಲ್ಲಿ ಭಾರತದ ಸಾಫ್ಟ್ ವೇರ್ ಉದ್ಯಮವನ್ನು ಹಳಿ ತಪ್ಪಿಸುತ್ತಿದ್ದಾರೆ.

ಈ ವರದಿಯ ಪ್ರಕಾರ ತಂತ್ರಜ್ಞಾನ ವಲಯದಲ್ಲಿ ಅಟೋಮೇಷನ್ ನುಸುಳುವುದರಿಂದ ಮುಂದಿನ 5 ವರ್ಷಗಳಲ್ಲಿ 5 ರಿಂದ 6.50 ಲಕ್ಷ ಟೆಕ್ಕಿಗಳು ನಿರುದ್ಯೋಗಿಗಳಾಗುವ ಸಂಭವ ಇದೆ.

2021ರ ಹೊತ್ತಿಗೆ ತಂತ್ರಜ್ಞಾನ ವಲಯದಲ್ಲಿ ಸುಮಾರು 9% ಅಥವಾ 14 ಲಕ್ಷ ಉದ್ಯೋಗ ಕಡಿತವಾಗಲಿದೆ. ಇದು ನಿಜವಾದರೆ, ದೇಶದ ಹತ್ತು ಲಕ್ಷ ಕೋಟಿ ಮೌಲ್ಯದ ಉದ್ಯಮಕ್ಕೆ ಆಘಾತಕಾರಿ ಅಥವಾ ಮಾರಣಾಂತಿಕ ಪೆಟ್ಟು ಬೀಳಲಿದೆ ಎನ್ನಬಹುದು.

ಕೆಲವು ಮೂಲಗಳ ಪ್ರಕಾರ ಆರಂಭದಲ್ಲಿ ಈ ಅಟೋಮೇಷನ್ ಆವಿಷ್ಕಾರ 37 ಲಕ್ಷ ಉದ್ಯೋಗಿಗಳನ್ನು ಹೊಂದಿದ ಬಿಪಿಓ ವಲಯವನ್ನು ಹೆಚ್ಚು ಸಂಕಷ್ಟಕ್ಕೆ ದೂಡಬಹುದು.

ಹಾಗೆಯೇ ಮಧ್ಯಮ ಕೌಶಲದ 8% ಉದ್ಯೋಗಗಳನ್ನು ಮತ್ತು ಕಡಿಮೆ ಕೌಶಲದ 30% ಉದ್ಯೋಗಗಳನ್ನು ಕಡಿತಗೊಳಿಸಬಹುದು ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.

ಇವರ ಪ್ರಕಾರ 30-50 ಲಕ್ಷ ಸಂಬಳ ದುಡಿಯುವ 50% ಮ್ಯಾನೇಜರ್‌ಗಳು ಪ್ರತಿವರ್ಷ ಉದ್ಯೋಗ ಕಳೆದು ಕೊಳ್ಳಬಹುದು. ಆರಂಭಿಕ ಹಂತದ ನೇಮಕದಲ್ಲಿ 10-12% ಕಡಿಮೆಯಾಗುವ ಸಾಧ್ಯತೆ ಇದೆ. ಪ್ರತಿವರ್ಷ ಕಾಲೇಜುಗಳು 15 ಲಕ್ಷ ಎಂಜಿನಿಯರ್‌ಗಳನ್ನು ಕಳಿಸುತ್ತಿದ್ದು, ಉದ್ಯೋಗ ಲಭ್ಯತೆ ಕೇವಲ 2ರಿಂದ 2.25 ಲಕ್ಷ ಎಂದು ಹೇಳಲಾಗುತ್ತಿದೆ.

ಯಾವುದು ಸತ್ಯ?

ವಿಪರ್ಯಾಸವೆಂದರೆ ಪಿಂಕ್ ಸ್ಲಿಪ್ ಭಯದಲ್ಲಿ ಐಟಿ ಸೆಕ್ಟರ್ ತಳಮಳಗೊಳ್ಳುತ್ತಿರುವಾಗ ಟೆಕ್ ಕಂಪನಿಗಳ ಮಹಾ ಸಂಘ (Nasscom)  ಅಧ್ಯಕ್ಷ ಆರ್. ಚಂದ್ರಶೇಖರ ಅವರು ವ್ಯತಿರಿಕ್ತ ಹೇಳಿಕೆ ನೀಡಿದ್ದು, 2017ರಲ್ಲಿ ಟೆಕ್ ಕಂಪನಿಗಳು 1.70 ಲಕ್ಷ ನೇಮಕ ಮಾಡಿದ್ದು, ಮಾರ್ಚ್ 2017ರ ತ್ರೈಮಾಸಿಕದಲ್ಲಿಯೇ 50,000 ನೇಮಕ ಮಾಡಿವೆಯಂತೆ.

2025ರ ಹೊತ್ತಿಗೆ ಐಟಿ ಸೆಕ್ಟರ್‌ನಲ್ಲಿ 30 ಲಕ್ಷ ಉದ್ಯೋಗ ಸೃಷ್ಟಿಯಾಗುವ ಆಶಾಭಾವನೆಯನ್ನು ಅವರು ವ್ಯಕ್ತ ಪಡಿಸಿದ್ದಾರೆ. ಈ ಹೇಳಿಕೆಗೆ ಪುಷ್ಟಿ ಕೊಡುವಂತೆ ಟೆಕ್ ಕಂಪನಿಗಳ ಹಿರಿಯಣ್ಣ ಇನ್‌ಫೋಸಿಸ್ 2017ರಲ್ಲಿ 20,000 ನೇಮಕ ಮಾಡುವುದಾಗಿ ಹೇಳಿದೆ.

ಇದು ಸತ್ಯವೋ ಅಥವಾ ಮಿಥ್ಯವೋ ಎನ್ನುವುದನ್ನು ಮುಂದಿನ ದಿನಗಳಲ್ಲಿ ನೋಡಬೇಕು. ಐಟಿ ಕಂಪನಿಗಳಲ್ಲಿ ಉಂಟಾದ ಪಿಂಕ್ ಸ್ಲಿಪ್ ತಳಮಳದ ದಾವಾಗ್ನಿಯನ್ನು ತಣ್ಣಗಾಗಿಸುವ ಪ್ರಯತ್ನ ಇದು ಎಂದು ವಿಶ್ಲೇಷಕರು ಭಾಷ್ಯ ಬರೆಯುತ್ತಿದ್ದಾರೆ.

ಸಾಫ್ಟವೇರ್ ಕ್ಷೇತ್ರದ ಇಂದಿನ ತಳಮಳವನ್ನು ಕಂಪನಿಗಳ ಸ್ವಯಂಕೃತ ಅಪರಾಧ ಎಂದು ಧಾರಾಳವಾಗಿ ಹೇಳಬಹುದು. ತನ್ನ ಸಿಬ್ಬಂದಿಯ ವೇತನ, ಸೌಲಭ್ಯವನ್ನು ನಿಗದಿ ಮಾಡುವಾಗ ಅದು ಇನ್ನಿತರ ರಂಗಗಳಲ್ಲಿಯ ವೇತನ ಸೌಲಭ್ಯವನ್ನು ಪರಿಗಣನೆಗೆ ತೆಗೆದುಕೊಂಡಂತೆ ಕಾಣುವುದಿಲ್ಲ.

ಜಗತ್ತಿನಲ್ಲಿ ಯಾರೂ ಮಾಡದ, ತೋರದ ಕೆಲಸ ಮತ್ತು ನೈಪುಣ್ಯವನ್ನು ಟೆಕ್ಕಿಗಳು ಮಾಡುತ್ತಾರೆ ಎನ್ನುವ ಭ್ರಮಾಲೋಕವನ್ನು ಸೃಷ್ಟಿಸಲಾಯಿತು ಮತ್ತು ಆರಂಭದ ಹಂತದಲ್ಲಿಯೇ ಐದಂಕಿ ವೇತನ ನೀಡಲಾಯಿತು. ಮುಂಬರಲಿರುವ ಪರಿಣಾಮವನ್ನು ಯಾರೂ ಯೋಚಿಸುವ ಪ್ರಯತ್ನ ಮಾಡಲಿಲ್ಲ. ಟೆಕ್ಕಿಗಳು ಕೂಡ ಇಂಥ ಒಳ್ಳೆಯ ಪರಿಸ್ಥಿತಿಯೇ ಯಾವಾಗಲೂ ಇರುತ್ತದೆ ಎಂದು ಬಲವಾಗಿ ನಂಬಿದ್ದರು.

ಬದಲಾವಣೆಯ ಸಾಧ್ಯತೆಯನ್ನು ಎಂದೂ ಚಿಂತಿಸಲಿಲ್ಲ. ಆರಂಭದ ದಿನಗಳಲ್ಲಿ ಸಾಫ್ಟ್‌ವೇರ್ ಬಿಜಿನೆಸ್‌ನಲ್ಲಿ ಪೂರೈಕೆ ಕಡಿಮೆ ಇದ್ದು, ಬೇಡಿಕೆ ಹೆಚ್ಚಾಗಿತ್ತು. ಹಾಗೆಯೇ ವ್ಯವಹಾರದಲ್ಲಿ ಬೇರೆ ಉದ್ಯಮದವರು ಹೊಟ್ಟೆ ಕಿಚ್ಚು ಪಡುವಷ್ಟು ಮಾರ್ಜಿನ್ ಕೂಡಾ ಇತ್ತು.

ದಿನಗಳು ಕಳೆದಂತೆ ಪೂರೈಸುವ ಕಂಪನಿಗಳು ನಾಯಿಕೊಡೆಗಳಂತೆ ಹೆಚ್ಚಿ, ಬೇಡಿಕೆ ಕಡಿಮೆಯಾಗಿ ಮಾರ್ಜಿನ್ ಕಡಿಮೆಯಾಯಿತು. ಅದೇ ರೀತಿ ನಿರ್ವಹಣಾ ವೆಚ್ಚ ಕಡಿಮೆಯಾಗಲಿಲ್ಲ.

ಒಂದು ಟೆಕ್ ಕಂಪನಿಯ ಮುಖ್ಯಸ್ಥನ ವಾರ್ಷಿಕ ಸಂಬಳ 67 ಕೋಟಿ ಎಂದರೆ, ಬಹುತೇಕ ಟೆಕ್ಕಿಗಳ ಸಂಬಳದ ಗಾತ್ರದ ಪರಿಚಯವಾಗಬಹುದು. ಈ ಸಂಬಳ ಸೌಲಭ್ಯಗಳಿಗೆ ಜೀವನ ಚಕ್ರವನ್ನು ಹೊಂದಿಸಿಕೊಂಡವರು, ಎಲ್ಲೂ ಕೆಲಸ ಪಡೆಯದೆ, ಅಥವಾ ಕಡಿಮೆ ಸಂಬಳಕ್ಕೆ ಒಪ್ಪಿಕೊಳ್ಳದೆ ಜೀವನ ರಥ ಓಡಿಸಬಹುದೇ ಎನ್ನುವುದು ಮುಖ್ಯಪ್ರಶ್ನೆ. ಇದೇ ಅವರ ದುಃಸ್ವಪ್ನದ ಹಿಂದಿನ ವ್ಯಾಕುಲತೆ.

ಕೆಲವರಿಗೆ ಪಿಂಕ್ ಸ್ಲಿಪ್ ಕೊಡಲು ಸಿಬ್ಬಂದಿಯ ಪಟ್ಟಿ ತಯಾರಿಸುವಂತೆ ಕಂಪನಿಯೊಂದರ ಮುಖ್ಯಸ್ಥರು ಮಾನವ ಸಂಪನ್ಮೂಲ ಅಧಿಕಾರಿ (ಎಚ್‌ಆರ್)ಗೆ ಹೇಳಿದಾಗ, ಯಾರನ್ನು ಮನೆಗೆ ಕಳಿಸುವುದು ಎಂದು ಸುಲಭಕ್ಕೆ ನಿರ್ಣಯಿಸಲಾಗದೆ ವಾರಗಟ್ಟಲೆ ಸಂದಿಗ್ಧದಲ್ಲಿ ಒದ್ದಾಡಿದ್ದರಂತೆ. ಒಬ್ಬರ ಅನ್ನ ಕಸಿಯುವಾಗ ಅನುಭವಿಸುವ ಪಾಪ ಪ್ರಜ್ಞೆ ಊಹೆಗೆ ನಿಲುಕದ್ದು!

ಗಣಕೀಕರಣ ಅಥವಾ ಸಾಫ್ಟವೇರ್ ಮೂಲಕ ಬ್ಯಾಂಕ್, ವಿಮಾ, ರೈಲ್ವೆ ಹೀಗೆ ಸಾವಿರಾರು ಇಲಾಖೆಗಳಲ್ಲಿ ಕೋಟ್ಯಂತರ ಉದ್ಯೋಗಿಗಳ ಬದುಕಿನ ಆಸರೆಯನ್ನು ಕಸಿದುಕೊಂಡ ಸಾಫ್ಟವೇರ್ ಉಧ್ಯಮ ಅದೇ ತಂತ್ರಜ್ಞಾನಕ್ಕೇ ಬಲಿಯಾಗುತ್ತಿರುವದು, ಆಧುನಿಕ ಜಗತ್ತಿನ ಒಂದು ಮಹಾ ವಿಪರ್ಯಾಸ ಎನ್ನಬಹುದು.

ಹಾಗೆಯೇ ತಮ್ಮ ಬೇಡಿಕೆಗಳಿಗೆ, ವೇತನ ಹೆಚ್ಚಳಕ್ಕೆ, ಸೌಲಭ್ಯಗಳಿಗೆ ಮತ್ತು ಉದ್ಯೋಗ ಸ್ಥಿರತೆಗಾಗಿ ಸದಾ ತಮ್ಮ ಕಾರ್ಯಾಲಯದ ದ್ವಾರದ ಮುಂದೆ ಕೆಂಪು ಬಾವುಟದಡಿಯಲ್ಲಿ ಮುಷ್ಟಿ ಎತ್ತಿ, ಕುತ್ತಿಗೆ ನರ ಉಬ್ಬಿಸಿ ಘೋಷಣೆ ಕೂಗುವ ದುಡಿಯುವ ವರ್ಗವನ್ನು ಆಶ್ಚರ್ಯದಿಂದ ನೋಡುತ್ತಿದ್ದ ಟೆಕ್ಕಿಗಳು ಮುಂದಿನ ದಿನಗಳಲ್ಲಿ ಅವರಿಗೆ ಕೈ ಜೋಡಿಸುವ ಮತ್ತು ಅವರೊಂದಿಗೆ ಧ್ವನಿಗೂಡಿಸುವ ಕಾಲ ಬಂದಿದ್ದು ಇನ್ನೊಂದು ವಿಪರ್ಯಾಸ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜ್ಯೋತಿಷ್ಯ

    ದಿನ ಭವಿಷ್ಯ ಸೋಮವಾರ…..ಪಂಡಿತ್ ವಿಶ್ವರೂಪ ಆಚಾರ್ಯರವರಿಂ7ದ..ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…ಶೇರ್ ಮಾಡಿ.

    ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು  9739124121ಶ್ರೀ ಕ್ಷೇತ್ರ ಧರ್ಮಸ್ಥಳ ನುಡಿದಂತೆ ನಡೆಯುವುದು ಮೇಷ ನಿಮ್ಮ ಎಲ್ಲಾ ಕೆಲಸ ಕಾರ್ಯಗಳು ಪ್ರಗತಿಯತ್ತ ಸಾಗುವವು. ಕೆಲವರಿಗೆ ಬಡ್ತಿ ಸಿಗುವುದು. ದೂರದ ಊರುಗಳಿಗೆ ವರ್ಗಾವಣೆಗೆ ಹೋಗುವುದಕ್ಕಿಂತ ಇದ್ದಲ್ಲೇ ಇದ್ದರೆ ಬಡ್ತಿ ದೊರೆಯುವುದು.ನಿಮ್ಮ ಸಮಸ್ಯೆ.ಏನೇ .ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ…

  • ಸುದ್ದಿ

    ಗುರುವಾರದಂದು ತಪ್ಪದೇ ಈ ನಿಯಮ ಪಾಲಿಸಿದರೆ ಸಾಕು ನೀವು ಶ್ರೀಮಂತರಾಗುವುದು ಖಚಿತ,..!!

    ಎಲ್ಲರು ಶ್ರೀಮಂತರಾಗಬೇಕು, ಇನ್ನಷ್ಟು ಹೆಚ್ಚು  ಹಣ ಗಳಿಸಬೇಕು ಎಂಬ ಆಸೆ ಯಾರಿಗಿಲ್ಲ ಹೇಳಿ. ಎಲ್ಲರೂ ಹಣಕ್ಕಾಗಿಯೇ  ಶ್ರಮ ಪಡುವವರೇ, ಶ್ರಮದ ಹೊರತಾಗಿಯೂ, ಎಷ್ಟೇ ಕಷ್ಟಪಟ್ಟರೂ ಕೂಡ ಕೆಲವೊಮ್ಮೆ ನೀವು ಪಡೆದ ಹಣ ನೀರಿನಂತೆ ಕರಗಿ ಹೋಗಬಹುದು. ಹಿಂದಿನ ಜನ್ಮದ ಪಾಪಗಳು ಈ ಜನ್ಮದಲ್ಲಿಯೂ ಮನುಷ್ಯನನ್ನು ಆರ್ಥಿಕವಾಗಿ ಜರ್ಝರಿತಗೊಳಿಸಬಹುದು. ಇದನ್ನು ಜಗದ ನಿಯಮದಿಂದಲೂ ಬಗೆಹರಿಸಲು ಸಾಧ್ಯವಿಲ್ಲ, ಆದರೆ ಕೆಲವೊಂದು ಧರ್ಮಗ್ರಂಥಗಳಲ್ಲಿ ತಿಳಿಸಿರುವಂತೆ ಕೆಲವು ದೈವಿಕ ವಿಧಿಗಳ ಮೂಲಕ ಈ ಸಮಸ್ಯೆ ಬಗೆಹರಿಸಬಹುದು. ಗುರುವಾರವನ್ನು ದೇವಗುರುವಿನ ದಿನವೆಂದು ಕರೆಯಲಾಗಿದೆ. ಗುರುವು…

  • ಸುದ್ದಿ

    ಯಾವುದೇ ರಸಗೊಬ್ಬರ ಬಳಕೆ ಮಾಡದೇ. ಅತೀ ಕಡಿಮೆ ಬೆಲೆಯಲ್ಲಿ, ಬೆಳೆಯನ್ನ ತೆಗೆದ ನಟ ಉಪೇಂದ್ರ.

    ಹಲವಾರು ನಟ ನಟಿಯರು ಲಾಕ್ ಡೌನ್ ಸಮಯದಲ್ಲಿ ತಮ್ಮ ತಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿದ್ದರು. ಆದರೆ ನಟ ಉಪೇಂದ್ರ ಅವರು ರೈತನಂತೆ ಭೂಮಿಗಿಳಿದು ಕೃಷಿ ಮಾಡುವುದರಲ್ಲಿ ತಮ್ಮ ಸಮಯವನ್ನು ಸದುಪಯೋಗ ಪಡಿಸಿಕೊಂಡಿದ್ದಾರೆ. ಕೇವಲ ಎರಡೂವರೆ ತಿಂಗಳಲ್ಲಿ ಬೆಳೆಯನ್ನೂ ತೆಗೆದಿದ್ದಾರೆ. ಹೌದು ಉಪೇಂದ್ರ ಅವರು ತಮ್ಮ ಹೊಲದಲ್ಲಿ ಹೂವು, ತರಕಾರಿ ಬೆಳೆದಿದ್ದಾರೆ. ಈ ಖುಷಿಯಲ್ಲಿ ಒಂದು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅತೀ ಕಡಿಮೆ ಬೆಲೆಯಲ್ಲಿ ಮಾಡಬಹುದಾದ ನೈಸರ್ಗಿಕ ಕೃಷಿ ಎಂದು ಸಾಲುಗಳನ್ನು ಬರೆದು ವಿಡಿಯೋ ಪೋಸ್ಟ್ ಮಾಡಿದ್ದಾರೆ. ಇದಕ್ಕೆ…

  • ಸರ್ಕಾರದ ಯೋಜನೆಗಳು

    ಮನೆಯಲ್ಲಿ ಕುಳಿತು ನೀವು ಈ ಕೆಲಸ ಮಾಡಿದ್ರೆ ಸಿಗುತ್ತೆ 1 ಲಕ್ಷ ರೂ..!ತಿಳಿಯಲು ಈ ಲೇಖನ ಓದಿ..

    ಗಣರಾಜ್ಯೋತ್ಸವದ ಬಗ್ಗೆ ಜನರಲ್ಲಿ ಉತ್ಸಾಹ ತುಂಬಲು ಮೋದಿ ಸರ್ಕಾರ ವಿಶೇಷ ಸ್ಪರ್ಧೆಯೊಂದನ್ನು ಏರ್ಪಡಿಸಿದೆ. ಸ್ಪರ್ಧೆಯಲ್ಲಿ ವಿಜೇತರಾದವರಿಗೆ 1 ಲಕ್ಷ ರೂಪಾಯಿ ಬಹುಮಾನ ಸಿಗಲಿದೆ.

  • ಸುದ್ದಿ

    ಬಿಗ್ಬಾಸ್ ಪ್ರಥಮ್, ಸಚಿವ ಯು.ಟಿ.ಖಾದರ್’ಗೆ ಕೊಟ್ಟ ಟಾಂಗ್ ಏನು ಗೊತ್ತಾ..?ತಿಳಿಯಲು ಮುಂದೆ ನೋಡಿ…

    ಕನ್ನಡದ ರಿಯಾಲಿಟಿ ಶೋ ಬಿಗ್ಬಾಸ್ ಸಂಚಿಕೆ 5ರಲ್ಲಿ ವಿಜೇತರಾಗಿದ್ದ ಒಳ್ಳೆ ಹುಡುಗ ಪ್ರಥಮ್,ಈಗಂತೂ ಸಾಮಾಜಿಕ ಜಾಲತಾಣ ಫೇಸ್ಬುಕ್’ನಲ್ಲಿ ತುಂಬಾ ಆಕ್ಟಿವ್ ಆಗಿದ್ದಾರೆ.ರಾಜ್ಯದಲ್ಲಿ ಯಾರಿಗೆ ಏನೇ ಆದರೂ, ಅದರ ಬಗ್ಗೆ ತಮ್ಮ ಫೇಸ್ಬುಕ್ ವಾಲ್ನಲ್ಲಿ ಬರೆದುಕೊಂಡು ಅದರ ಬಗ್ಗೆ ಪ್ರತಿಕ್ರಿಯೆ ನೀಡುತ್ತಾರೆ.

  • ಸುದ್ದಿ

    ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆಯಿಂದ ನನಗೆ ಭಯ ಆಗ್ತಿದೆ ಎಂದ ಸುಮಲತಾ ಅಂಬರೀಶ್!ಸಿಎಂ ಹೇಳಿದ್ದೇನು?

    ದಿನೇ ದಿನೇ ಮಂಡ್ಯ ಲೋಕಸಭಾ ಚುನಾವಣಾ ಕಣಾ ರಂಗೆರುತ್ತಿದ್ದು ಚುನಾವಣೆಗೆ ಎರಡು ದಿನ ಇರುವಾಗ ಅವರ ಕಡೆಯವರಿಂದಲೇ ಕಲ್ಲು ಹೊಡೆಸಿಕೊಂಡು ನಮ್ಮ ಮೇಲೆ ಹಾಕಲು ಯತ್ನಿಸ್ತಿದ್ದಾರೆ ಎನ್ನುವ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಪ್ರಚಾರ ಮಾಡುತ್ತಿದ್ದ ವೇಳೆ ಮಾತನಾಡಿದ ಸುಮಲತಾ, ಒಬ್ಬ ಮುಖ್ಯಮಂತ್ರಿ ಆದವರು ತಮ್ಮ ಪದವಿಯನ್ನು ಮರೆತು ಹೇಗೆಲ್ಲಾ ಮಾತನಾಡುತ್ತಿದ್ದಾರೆ. ನಿಜವಾಗಲೂ ಕಲ್ಲು ಹೊಡೆಸಿ ನಮ್ಮ ಮೇಲೆಯೇ ಗೂಬೆ ಕೂರಿಸಲು ಈ ತರಹದ ಹೇಳಿಕೆ ನೀಡಿದ್ದಾರೆ ಎಂದು ನಮಗೆ ಅನುಮಾನವಾಗುತ್ತಿದ್ದು,  ಮುಖ್ಯಮಂತ್ರಿಯವರ ಹೇಳಿಕೆಗಳಿಂದ ನನಗೆ ಭಯವಾಗ್ತಿದೆ…