ಆಧ್ಯಾತ್ಮ, ದೇವರು-ಧರ್ಮ

ಶನಿವಾರ ನಾವೇಕೆ ಆಂಜನೇಯನನ್ನು ಆರಾಧಿಸಬೇಕು.?ಹನುಮನಿಗೆ ಶನಿ ದೇವ ಕೊಟ್ಟ ಆ ವರಗಳೇನು.?ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…

2114

*ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ*

ಸುಮಾರು ಜನ ಶನಿವಾರ ಬಂದರೆ, ಎಲ್ಲರೂ ಆಂಜನೇಯನ ದೇವಸ್ಥಾನಕ್ಕೆ ಹೋಗಿ ಆಂಜನೇಯನ ದರ್ಶನ ಮಾಡಿಬರುತ್ತಾರೆ. ಈಗ ಎಲ್ಲಾ ಕಡೆ ಈ ರಾಮಭಂಟನ ದೇವಾಲಯಗಳು ಇವೆ. ಹಿಂದೆಯೂ ಸಹ ಊರ ಹೊರಗೆ ಒಂದು ಆಂಜನೇಯನ ದೇವಸ್ಥಾನವನ್ನು ನಮ್ಮ ಹಿರಿಯರು ನಿರ್ಮಿಸಿಟ್ಟಿರುತ್ತಿದ್ದರು.

ಶನಿವಾರ ನಾವೇಕೆ ಆಂಜನೇಯನ ದೇವಸ್ಥಾನಕ್ಕೆ ಹೋಗುತ್ತೇವೆ ಗೊತ್ತಾ..?

ಶನಿ ಒಂದೆರಡು ಅಪರೂಪವಾದ ವರವನ್ನು ಆಂಜನೇಯನಿಗೆ ಪ್ರಸಾದಿಸಿದ್ದ. ಆ ಕುತೂಹಲಕಾರಿ ಘಟನೆಗಳನ್ನು ಇಂದು ನಾವು ತಿಳಿದುಕೊಳ್ಳೊಣ…

ತ್ರೇತಾಯುಗದಲ್ಲಿ ರಾವಣನು ಬ್ರಹ್ಮ ಮತ್ತು ಶಿವನ ವರ ಪ್ರಸಾದದಿಂದ ಎಲ್ಲಾ ಲೋಕಗಳನ್ನು ಗೆದ್ದಿದ್ದನು. ಅಲ್ಲದೆ ಆತ ನವಗ್ರಹಗಳನ್ನು ಜಯಿಸಿ, ತನ್ನ ಸಿಂಹಾಸವನ್ನೇರುವ ಮೆಟ್ಟಿಲುಗಳಾಗಿ ಅವರನ್ನು ನೇಮಿಸಿಕೊಂಡನು. ಹೀಗೆ ಇದ್ದಾಗ ರಾವಣನ ಪತ್ನಿ ಮಂಡೋದರೆ ರಾವಣನ ಮಗನಾದ ಮೇಘನಾದನಿಗೆ ಜನ್ಮ ನೀಡುವ ಕಾಲ ಬಂದಿತು. ಆಗ ಮಹಾ ಜ್ಯೋತಿಷ್ಯಜ್ಞನಾದ ರಾವಣನು ಎಲ್ಲಾ ಗ್ರಹಗಳನ್ನು ಆತನ ಜನ್ಮಕುಂಡಲಿಯ 11ನೇ ಮನೆಯಲ್ಲಿ ಹೋಗಿ ನೆಲೆಸುವಂತೆ ಆದೇಶ ನೀಡಿದನು. ಇದರಿಂದ ತನ್ನ ಮಗ ಅಮರನಾಗುತ್ತಾನೆ ಎಂಬ ಆಸೆ ರಾವಣನದಾಗಿತ್ತು.

ಆದರೆ ಇದು ದೇವತೆಗಳಲ್ಲಿ ಭಯವನ್ನುಂಟು ಮಾಡಿತು. ಆಗ ಇದನ್ನು ಅರಿತು, ಮಗು ಜನಿಸುವಾಗ ಶನಿ ಉಚ್ಛ ಸ್ಥಾನದಲ್ಲಿ ಕೂರುವ ಬದಲು ಮೇಘನಾದನ ಕುಂಡಲಿಯಲ್ಲಿ ನೀಚ ಸ್ಥಾನನಾಗಿ ಕುಳಿತು, 12ನೆಯ ಮನೆಯವರೆಗು ಕಾಲು ಚಾಚಿ ಬಿಟ್ಟನು.

ಇದನ್ನೂ ಓದಿ:ಪಂಚಮುಖಿ ಆಂಜನೇಯನ ಅವತಾರದ ಹಿಂದೆ ಇದೆ ರೋಚಕ ಕತೆ…

ಇದು ರಾವಣನಿಗೆ ತಿಳಿಯಲು ಹೆಚ್ಚು ಸಮಯವಾಗಲಿಲ್ಲ, ಏಕೆಂದರೆ ಶನಿಯ ಈ ನಡೆ ತನ್ನ ಮಗನ ಸಾವಿಗೆ ಕಾರಣನಾಗುತ್ತೆ ಎಂದು ಆತ ಗ್ರಹಿಸಿದನು. ಈ ಕಾರಣವಾಗಿ ಶನಿಯನ್ನು ಒಂದು ಕತ್ತಲ ಕೋಣೆಯಲ್ಲಿ ಕೂಡಿಹಾಕಿದನು. ಇದರಿಂದ ಶನಿಯ ಮುಖವನ್ನು ಯಾರೂ ನೋಡುವುದಿಲ್ಲ ಎಂಬುದು ಆತನ ಅನಿಸಿಕೆಯಾಗಿತ್ತು. ಆದರೆ ಸೀತೆಯನ್ನು ಹುಡುಕುಲು ಬಂದ ಆಂಜನೇಯನು ಆ ಕತ್ತಲ ಕೋಣೆಯಲ್ಲಿ ಇಣುಕಿ ನೋಡಿ ಶನಿಯ ಕಣ್ಣಿಗೆ ಬಿದ್ದು ಬಿಟ್ಟನು.

ಆದರೆ ಶನಿಯ ಕಣ್ಣಿಗೆ ಬಿದ್ದನಲ್ಲ ಎಂಬ ಅಳುಕು ಹನುಮಂತನಿಗೂ ಸಹ ಕಾಡಿತು. ನವಗ್ರಹಗಳಲ್ಲಿ ಶನಿಯನ್ನು ಹೊರತುಪಡಿಸಿ, ಎಲ್ಲರನ್ನು ಹನುಮಂತ ಬಿಡುಗಡೆಗೊಳಿಸಿದ. ಇದನ್ನು ಶನಿ ಕೇಳಿದಾಗ, ನಿನ್ನನ್ನು ಬಿಡಿಸಿದರೆ ನೀನು ನನ್ನ ತಲೆಯ ಮೇಲೆ ಕೂರುವೆ ಎಂದು ಹನುಮಂತ ಹೇಳಿದ.

ಇಲ್ಲಿ ಓದಿ :ಅಬ್ಬಬ್ಬಾ..!62 ಅಡಿ ಆಂಜನೇಯನ ಏಕಶಿಲಾವಿಗ್ರಹ,300 ಚಕ್ರದ ಲಾರಿ, ಮುಂದೆ ಓದಿ…

ಇದರಿಂದ ಶನಿಯು ಆತನಿಗೆ ಅಭಯವನ್ನು ನೀಡಿದ. ನಾನು ನಿನಗೆ ಸಹಾಯ ಮಾಡುವೆ ಎಂದು, ಆದರೂ ನೀನು ನನ್ನ ದೃಷ್ಟಿಗೆ ಬಿದ್ದಿದ್ದರಿಂದ, ನೀನು ಮನೆ, ಹೆಂಡತಿ ಮತ್ತು ಮಕ್ಕಳಿಂದ ದೂರವಾಗುವೆ ಎಂದು ಶನಿ ಹೇಳಿದನು. ಹಾಗಾದರೆ ಬಾ ನಾನು ನಿನ್ನನ್ನು ಬಿಡಿಸುವೆ ನನಗೆ ಮನೆ,ಮಠ, ಹೆಂಡತಿ ಮತ್ತು ಮಕ್ಕಳು ಯಾರೂ ಇಲ್ಲ. ನನಗೆ ರಾಮನ ಅಡಿದಾವರೆ ಮತ್ತು ಆತನ ನಾಮ ಬಿಟ್ಟರೆ ಬೇರೆ ಸಂಪತ್ತಿಲ್ಲ ಎಂದು ಶನಿಯನ್ನು ಬಂಧ ಮುಕ್ತಗೊಳಿಸಿದನು.

ಹೀಗೆ ಶನಿ ಕೃತಜ್ಞತಾಪೂರ್ವಕವಾಗಿ ಹನುಮಂತನನ್ನು ಯಾರೂ ಪೂಜಿಸುವರೋ, ಅವರ ಮೇಲೆ ತನ್ನ ಪ್ರಭಾವವನ್ನು ಕಡಿಮೆ ಮಾಡುತ್ತೇನೆ ಎಂದು ಮಾತುಕೊಟ್ಟನು. ಒಂದು ನಂಬಿಕೆಯ ಪ್ರಕಾರ ಆಂಜನೇಯ ಲಂಕಾದಹನವನ್ನು ಸರಿಯಾಗಿ ಮಾಡಲಾಗಲಿಲ್ಲವಂತೆ, ಆಗ ಹನುಮಂತನ ಸಹಾಯಕ್ಕೆ ಬಂದ ಶನಿ ಲಂಕೆಯನ್ನು ನೋಡಿದ್ದರಿಂದ ಸ್ವರ್ಣಲಂಕ, ಭಸ್ಮವಾಗಿ ಕಪ್ಪು ಲಂಕಾವಾಯಿತಂತೆ.

ಇಲ್ಲಿ ಓದಿ :ಉಗ್ರ ಹನುಮಂತನ ಚಿತ್ರ ಬಂದಿದ್ದು ಹೇಗೆ ಗೊತ್ತಾ..?

ಆಂಜನೇಯನ ಹೆಗಲೇರಿದ ಶನಿ ದೇವ…

ಮತ್ತೊಂದು ರೋಚಕ ಕತೆ ಶನಿ ಮತ್ತು ಆಂಜನೇಯನ ನಡುವೆ ನಡೆಯಿತು. ರಾಮಾಯಣ ಯುದ್ಧ ಮುಗಿದು, ಹನುಮಂತನು ಒಮ್ಮೆ ಗುಹೆಯಲ್ಲಿ ರಾಮಧ್ಯಾನ ಮಾಡುತ್ತ ಕುಳಿತಿದ್ದನು. ಆಗ ಶನಿ ಇದೇ ಸಮಯವೆಂದು ಆಂಜನೇಯನ ಹೆಗಲೇರಿದನು. ಇದರಿಂದ ರಾಮ ಧ್ಯಾನಕ್ಕೆ ಭಂಗ ಬಂದಿತು ಎಂದು ಆಂಜನೇಯನಿಗೆ ಸಿಟ್ಟು ಬಂದಿತು.

ಆದರು ಅದನ್ನು ನಿಗ್ರಹಿಸಿಕೊಂಡು, ಆಂಜನೇಯ ಹೀಗೆ ಹೇಳಿದ: ಹೇ ಶನಿದೇವ, ನಿಮ್ಮ ತಂದೆಯಾದ ಸೂರ್ಯ ದೇವನು ನನಗೆ ಅನೇಕ ವರ ನೀಡಿದ್ದಾನೆ. ಆತ ನನ್ನ ಗುರು, ಗುರುವಿನ ಮಗನನ್ನು ಶಿಕ್ಷಿಸುವ ಕೆಲಸ ನನಗೆ ನೀಡಬೇಡ. ಇಳಿದು ಹೋಗಿಬಿಡು ಎಂದು ಹೇಳಿದನು. ಅದಕ್ಕೆ ಶನಿಯು ಆಂಜನೇಯ, ಇದು ನನ್ನ ಸರದಿ, ಅದರ ಪ್ರಕಾರ ನಾನು ನಿನ್ನ ಹೆಗಲೇರಬೇಕು, ಇದು ವಿಧಿ ನಿಯಮ ಎಂದನು. ಮಾತಿಗೆ ಮಾತು ಬೆಳೆಯಿತು, ಶನಿ ಸೋಲಲಿಲ್ಲ.

ಆಗ ಆಂಜನೇಯನು ಉಗ್ರ ಸ್ವರೂಪವನ್ನು ತಾಳಿ ತನ್ನ ದೇಹವನ್ನು ಬೆಳೆಸಿದನು. ಇದರಿಂದ ಹೆಗಲ ಮೇಲಿದ್ದ ಶನಿ ಗುಹೆಯ ಛಾವಣಿ ಮತ್ತು ಆಂಜನೇಯನ ದೇಹದ ನಡುವೆ ಸಿಲುಕಿ ಅಪ್ಪಚ್ಚಿಯಾಗಿ ಹೋದನು. ಆ ನೋವನ್ನು ತಾಳಲಾರದೆ ಶನಿ ಸೋತು ಆಂಜನೇಯನನ್ನು ಅಂಗಲಾಚಿದನು. ಆಗ ಆಂಜನೇಯನು ರಾಮ ನಾಮ ಜಪ ಮಾಡುವವರ ತಂಟೆಗೆ ಹೋಗುವುದಿಲ್ಲ ಎಂದು ಮಾತು ನೀಡಿದರೆ ಮಾತ್ರ ನಿನ್ನನ್ನು ಬಿಡುತ್ತೇನೆ ಎಂದನು. ಇದಕ್ಕೆ ಶನಿಯು ಸಹ ಅಸ್ತು ಎಂದನು.

ಎಷ್ಟಾದರು ಆಂಜನೇಯನನ್ನು ಸ್ಮರಿಸಿದರೆ ರಾಮನನ್ನು ಸ್ಮರಿಸಿದಂತೆ ಅಲ್ಲವೇ, ಹೀಗೆ ಹನುಮಂತನನ್ನು ನಾವು ಶನಿವಾರದಂದು ಪೂಜಿಸಲು ಆರಂಭಿದೆವು. ಇನ್ನೂ ಒಂದು ವಿಚಾರ ಏನಪ್ಪಾ ಎಂದರೆ ಆಂಜನೇಯ ಸಹ ಹುಟ್ಟಿದ್ದು, ಶನಿವಾರವಂತೆ!

ಕೃಪೆ : ಶ್ರೀದರ್ ಭಟ್

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಇದ್ದಕ್ಕಿದ್ದಂತೆ ಚೈತ್ರಾ ಕೋಟೂರ್ ಉಡುಗೆ-ತೊಡುಗೆಯ ವ್ಯತ್ಯಾಸಕ್ಕೆ ಕಾರಣವೇನು? ಅದಕ್ಕೆ ಚೈತ್ರಾ ಅವರು ಕೊಟ್ಟ ಉತ್ತರವಿದು ?

    ಚೈತ್ರಾ ಕೋಟೂರ್ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಎರಡನೇ ಬಾರಿಗೆ ಬಿಗ್ ಬಾಸ್ ಮನೆಗೆ ಬಂದಾಗ ಅಲ್ಲಿದ್ದವರೆಲ್ಲರಿಗೂ ತುಂಬಾನೇ  ಶಾಕ್ ಆಗಿತ್ತು. ಚೈತ್ರಾ  ಅವರು ಬಿಗ್ ಬಾಸ್ ಮನೆಗೆ ಬಂದಾಗ ಅಲ್ಲಿದ್ದವರು ಎಲ್ಲರೂ ಚೈತ್ರಾರವರನ್ನೇ ನೋಡುತ್ತಿದ್ದರು ಅವರು ಧರಿಸಿರುವ  ವಸ್ತ್ರವಿನ್ಯಾಸ ಕೂಡ ಬದಲಾಗಿದ್ದೂ, ಬಿಗ್ ಮನೆಯ ಸ್ಪರ್ಧಿಗಳಿಗೆ, ಅಷ್ಟೇ ಅಲ್ಲದೆ ಪ್ರೇಕ್ಷಕರಿಗೂ ಕೂಡ ಶಾಕ್ ನೀಡಿದೆ. ಚೈತ್ರಾ ಡ್ರೆಸ್ಸಿಂಗ್‌ ಸೆನ್ಸ್ ಬದಲಾಗಿದ್ದೇಕೆ? “ನಾನು, ಚಂದನ್ ಯಾವಾಗಲೂ ಟಾರ್ಗೆಟ್ ಆಗಿರುತ್ತಿದ್ದೆವು, ಏನೆ ಕಮೆಂಟ್ ಬಂದರೂ, ಬಿರುದು ಅದನ್ನು ನಾನು ನಗುನಗುತ್ತ…

  • ಸುದ್ದಿ

    ಕುಮಾರಸ್ವಾಮಿಯವರು ಆಪರೇಷನ್ ಕಮಲಕ್ಕೆ ಬೆಚ್ಚಿಬಿದ್ರಾ..?ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ಕರೆದಿದ್ದೇಕೆ..?

    ಲೋಕಸಭಾ ಚುನಾವಣೆಯವರೆಗೆ ತಣ್ಣಗಿದ್ದ ಆಪರೇಷನ್ ಕಮಲ ವಿಚಾರ ಮತದಾನ ಮುಗಿದ ಬಳಿಕ ತರೆಮರೆಯಲ್ಲಿ ಆರಂಭವಾಗಿದೆ ಎನ್ನಲಾಗಿದ್ದು, ಈಗ ಸಿಎಂ ಎಚ್‍ಡಿ ಕುಮಾರಸ್ವಾಮಿ ಅವರು ತಮ್ಮ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಮುಂದಾಗಿದ್ದಾರೆ. ರಮೇಶ್ ಜಾರಕಿಹೊಳಿ ರಾಜೀನಾಮೆ ಮಾತಿನ ಬೆನ್ನಲ್ಲೇ ಸಿಎಂ ಕುಮಾರಸ್ವಾಮಿ ಅವರಿಗೆ ಆತಂಕ ಶುರುವಾಗಿದೆ ಎನ್ನಲಾಗಿದ್ದು ಹೀಗಾಗಿ ಶಾಸಕರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳಲು ಭಾನುವಾರ ಸಂಜೆ ಖಾಸಗಿ ಹೋಟೆಲ್‍ನಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ. ಲೋಕಸಭೆ ಚುನಾವಣೆ ಬಳಿಕ ನಡೆಯಲಿರುವ ಮೊದಲ ಜೆಡಿಎಸ್ ಶಾಸಕಾಂಗ ಸಭೆ ಇದಾಗಿದೆ….

  • ಜ್ಯೋತಿಷ್ಯ

    ದಿನ ಭವಿಷ್ಯ ಬುಧವಾರ..ಪಂಡಿತ್ ವಿಶ್ವರೂಪ ಆಚಾರ್ಯರವರಿಂದ..ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…ಶೇರ್ ಮಾಡಿ..

    ಒಂದೆಕರೆ ಕ್ಷಣದಲ್ಲೇ ಪರಿಹಾರ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು  9739124121ಶ್ರೀ ಕ್ಷೇತ್ರ ಧರ್ಮಸ್ಥಳ ನುಡಿದಂತೆ ನಡೆಯುವುದು ಮೇಷ:- ಸುಡು ಕೆಂಡಗಳನ್ನು ಕಟ್ಟಿಕೊಂಡೇ ತಿರುಗಾಡುತ್ತಿದ್ದೀರಿ. ಹಾಗಾಗಿ ಯಾವುದೇ ಕಾರ್ಯ ಮಾಡುವ ಮೊದಲು ನಿಧಾನವಾಗಿ ನಿರ್ಣಯ ತೆಗೆದುಕೊಂಡು ನಂತರ ಮುನ್ನುಗ್ಗುವುದು ಒಳ್ಳೆಯದು. ಸದ್ಯದ ಪರಿಸ್ಥಿತಿಯಲ್ಲಿ ಗ್ರಹಗತಿಗಳು ಉತ್ತಮ ಸ್ಥಾನದಲ್ಲಿ ಸಂಚರಿಸದೆ…

  • ಸುದ್ದಿ

    ಅಭಿಮಾನಿಗಳಿಗೆ ಕೃತಜ್ಞತೆ ತಿಳಿಸಿದ ಪೈಲ್ವಾನ್ ಕಿಚ್ಚ ಸುದೀಪ್…!

    ಇಂದು ಬೆಳಗ್ಗೆ ಟ್ವೀಟ್ ಮಾಡಿರುವ ಕಿಚ್ಚ ಸುದೀಪ್, ಪೈರಸಿ ಸಿನಿಮಾದ ನೋಡದೇ, ಚಿತ್ರಮಂದಿರಗಳಿಗೆ ಹೋಗಿ ಚಿತ್ರ ವೀಕ್ಷಣೆ ಮಾಡಿರುವ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ. ನಮ್ಮ ಹಾರ್ಡ್ ವರ್ಕ್ ಪರಿಗಣಿಸಿ ಸಿನಿಮಾವನ್ನು ಥಿಯೇಟರ್ ಗಳಲ್ಲಿ ವೀಕ್ಷಣೆ ಮಾಡಿರೋದು ನಿಮ್ಮ ಪ್ರಾಮಾಣಿಕತೆಯನ್ನು ತೋರಿಸುತ್ತದೆ. ನಮ್ಮ ಸಿನಿಮಾಗೆ ಬೆಂಬಲವಾಗಿ ನಿಂತ ಪ್ರತಿಯೊಬ್ಬರಿಗೂ ನಾನು ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ. ಶುಕ್ರವಾರ ರಾತ್ರಿ ಚಿತ್ರದ ಪೈರಸಿ ಬಗ್ಗೆ ಖಡಕ್ ಟ್ವೀಟ್ ಮಾಡಿದ್ದ ಸುದೀಪ್, ನಾನು ಹಾಗೂ ನನ್ನ ಸ್ನೇಹಿತರು ಕೈಗೆ ಹಾಕಿರುವುದು ಕಡಗ, ಬಳೆ…

  • ಆಧ್ಯಾತ್ಮ

    ಇಂದು ವೈಕುಂಠ ಏಕಾದಶಿ ರಾತ್ರಿ 9 ಗಂಟೆಒಳಗೆ ಈ ಚಿಕ್ಕ ಕೆಲಸ ಮಾಡಿದರೆ ಕೋಟ್ಯಾಧಿಪತಿಯಾಗುತ್ತೀರ..!

    ಇಂದು ವೈಕುಂಟ ಏಕಾದಶಿಯ ದಿನವಾಗಿದ್ದು ಶ್ರೀ ಮಹಾ ವಿಷ್ಣುವು ನೆಲೆಸಿರುವ ವೈಕುಂಟದ ಬಾಗಿಲು ತೆರೆದಿರುತ್ತದೆ ಎಂಬ ಪ್ರತೀತಿ ಇದೆ. ತಿರುಪತಿ ವೆಂಕಟೇಶ್ವರ ಸೇರಿದಂತೆ ಶ್ರೀಮನ್ನಾರಯಾಣ ಅವತಾರದ ಎಲ್ಲಾ ದೇವಸ್ಥಾನಗಳಲ್ಲಿ ಈ ದಿನವಂತೂ ಕಿಕ್ಕಿರಿದು ಜನ ತುಂಬಿರುತ್ತಾರೆ. ಈ ಏಕಾದಶಿಯು ತುಂಬಾ ವಿಶಿಷ್ಟವಾಗಿದ್ದು ಈ ಸಮಯದಲ್ಲಿ ಮಾಡುವ ಕೆಲವೊಂದು ಆಚರಣೆಗಳು ಭಕ್ತರ ಇಸ್ಥಾರ್ಥ ಸಿದ್ದಿಗಳು ನೆರವೇರುತ್ತವೆ ಎಂದು ನಂಬಲಾಗಿದೆ. ಈ ಶುಭ ದಿನದಂದು ಈ ಒಂದು ಚಿಕ್ಕ ಕೆಲಸ ಮಾಡಿದ್ದಲ್ಲಿ ಅಪಾರ ಪುಣ್ಯ ಪ್ರಾಪ್ತಿಯಾಗಿ ಕೋಟ್ಯಾಧೀಶವರರಾಗುತ್ತಾರೆ ಎಂದು ಹೇಳಲಾಗಿದೆ.!…

  • ಸಿನಿಮಾ

    ನವರಸನಾಯಕನ ಮೇಲೆ ಸೋಶಿಯಲ್ ಮೀಡಿಯಾದಲ್ಲಿ ಕನ್ನಡಿಗರ ಆಕ್ರೋಶ!ಕಾರಣ ಏನು ಗೊತ್ತಾ?

    ಕನ್ನಡ ಚಿತ್ರ ರಂಗದ ನವರಸನಾಯಕ ನಟ ಮತ್ತು ರಾಜಕಾರಣಿ ಜಗ್ಗೇಶ್’ರವರು ಮಾಡಿದ ಒಂದು ಟ್ವೀಟ್ ಕಾರಣದಿಂದಾಗಿ ವಿವಾದದಲ್ಲಿ ಸಿಲುಕಿದ್ದು ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.