News

The Founding of YouTube A Short History
ವಿಜಯನಗರದಲ್ಲಿ ಭಿಕ್ಷಾಟನೆ ಜಾಲ: ಶಾಲೆ ರಜೆ ಎಂದು ಮಕ್ಕಳನ್ನೇ ಭಿಕ್ಷೆಗೆ ಇಳಿಸಿದ್ದ ತಾಯಂದಿರು
ಬ್ಯಾಕ್ ಟು ಬ್ಯಾಕ್ ಟ್ರೋಫಿ ಗೆದ್ದು ಇತಿಹಾಸ ಬರೆದ ಆರ್‌ಸಿಬಿ – ಬೆಂಗಳೂರು
ಶಿಕ್ಷಕರಿಗೆ ಎಐ (AI) ಆಧರಿತ ಹಾಜರಾತಿ ಫಜೀತಿ;
“ಸಿದ್ದರಾಮಯ್ಯ ಸೀಕ್ರೆಟ್ ರಿವೇಂಜ್‌, ಡಿಕೆಶಿ ಮತ್ತು ರಾಹುಲ್‌ ಗಾಂಧಿಗೆ ಸೈಲೆಂಟ್ ಏಟು”
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ಘೋಷಣೆ – ಡಿಕೆ ಶಿವಕುಮಾರ್ ಮುಂದಿನ ಸಿಎಂ?
ಸ್ಟೈಲ್‌ಗಾಗಿ ಕಡಿಮೆ ಬೆಲೆಯ ಸನ್‌ಗ್ಲಾಸ್ ಧರಿಸುತ್ತೀರಾ? ಹಾಗಾದರೆ ಈ ಅಪಾಯಗಳ ಬಗ್ಗೆ ತಿಳಿಯಲೇಬೇಕು!
DIGITAL ARREST SCAM : ವೃದ್ಧೆ ಆಸ್ತಿ ಮಾರಿ ಖಾತೆಯಲ್ಲಿಟ್ಟಿದ್ದ 24 ಕೋಟಿ ರೂ ಲೂಟಿ
ಭಾರತದಲ್ಲಿ ಚಿನ್ನದ ಬೇಡಿಕೆಗೆ ದೊಡ್ಡ ಹೊಡೆತ ಬಿದ್ದಿದೆ.
ಸಿಲ್ಕಿ ಮತ್ತು ಶೈನಿಂಗ್ ಕೂದಲಿಗೆ ಬೀಟ್ರೂಟ್‌ನ ಈ ಹೇರ್ ಕೇರ್ ಟಿಪ್ಸ್ ಪ್ರಯತ್ನಿಸಿ
ಆಧ್ಯಾತ್ಮ, ದೇವರು-ಧರ್ಮ

ಶನಿವಾರ ನಾವೇಕೆ ಆಂಜನೇಯನನ್ನು ಆರಾಧಿಸಬೇಕು.?ಹನುಮನಿಗೆ ಶನಿ ದೇವ ಕೊಟ್ಟ ಆ ವರಗಳೇನು.?ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…

2269

*ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ*

ಸುಮಾರು ಜನ ಶನಿವಾರ ಬಂದರೆ, ಎಲ್ಲರೂ ಆಂಜನೇಯನ ದೇವಸ್ಥಾನಕ್ಕೆ ಹೋಗಿ ಆಂಜನೇಯನ ದರ್ಶನ ಮಾಡಿಬರುತ್ತಾರೆ. ಈಗ ಎಲ್ಲಾ ಕಡೆ ಈ ರಾಮಭಂಟನ ದೇವಾಲಯಗಳು ಇವೆ. ಹಿಂದೆಯೂ ಸಹ ಊರ ಹೊರಗೆ ಒಂದು ಆಂಜನೇಯನ ದೇವಸ್ಥಾನವನ್ನು ನಮ್ಮ ಹಿರಿಯರು ನಿರ್ಮಿಸಿಟ್ಟಿರುತ್ತಿದ್ದರು.

ಶನಿವಾರ ನಾವೇಕೆ ಆಂಜನೇಯನ ದೇವಸ್ಥಾನಕ್ಕೆ ಹೋಗುತ್ತೇವೆ ಗೊತ್ತಾ..?

ಶನಿ ಒಂದೆರಡು ಅಪರೂಪವಾದ ವರವನ್ನು ಆಂಜನೇಯನಿಗೆ ಪ್ರಸಾದಿಸಿದ್ದ. ಆ ಕುತೂಹಲಕಾರಿ ಘಟನೆಗಳನ್ನು ಇಂದು ನಾವು ತಿಳಿದುಕೊಳ್ಳೊಣ…

ತ್ರೇತಾಯುಗದಲ್ಲಿ ರಾವಣನು ಬ್ರಹ್ಮ ಮತ್ತು ಶಿವನ ವರ ಪ್ರಸಾದದಿಂದ ಎಲ್ಲಾ ಲೋಕಗಳನ್ನು ಗೆದ್ದಿದ್ದನು. ಅಲ್ಲದೆ ಆತ ನವಗ್ರಹಗಳನ್ನು ಜಯಿಸಿ, ತನ್ನ ಸಿಂಹಾಸವನ್ನೇರುವ ಮೆಟ್ಟಿಲುಗಳಾಗಿ ಅವರನ್ನು ನೇಮಿಸಿಕೊಂಡನು. ಹೀಗೆ ಇದ್ದಾಗ ರಾವಣನ ಪತ್ನಿ ಮಂಡೋದರೆ ರಾವಣನ ಮಗನಾದ ಮೇಘನಾದನಿಗೆ ಜನ್ಮ ನೀಡುವ ಕಾಲ ಬಂದಿತು. ಆಗ ಮಹಾ ಜ್ಯೋತಿಷ್ಯಜ್ಞನಾದ ರಾವಣನು ಎಲ್ಲಾ ಗ್ರಹಗಳನ್ನು ಆತನ ಜನ್ಮಕುಂಡಲಿಯ 11ನೇ ಮನೆಯಲ್ಲಿ ಹೋಗಿ ನೆಲೆಸುವಂತೆ ಆದೇಶ ನೀಡಿದನು. ಇದರಿಂದ ತನ್ನ ಮಗ ಅಮರನಾಗುತ್ತಾನೆ ಎಂಬ ಆಸೆ ರಾವಣನದಾಗಿತ್ತು.

ಆದರೆ ಇದು ದೇವತೆಗಳಲ್ಲಿ ಭಯವನ್ನುಂಟು ಮಾಡಿತು. ಆಗ ಇದನ್ನು ಅರಿತು, ಮಗು ಜನಿಸುವಾಗ ಶನಿ ಉಚ್ಛ ಸ್ಥಾನದಲ್ಲಿ ಕೂರುವ ಬದಲು ಮೇಘನಾದನ ಕುಂಡಲಿಯಲ್ಲಿ ನೀಚ ಸ್ಥಾನನಾಗಿ ಕುಳಿತು, 12ನೆಯ ಮನೆಯವರೆಗು ಕಾಲು ಚಾಚಿ ಬಿಟ್ಟನು.

ಇದನ್ನೂ ಓದಿ:ಪಂಚಮುಖಿ ಆಂಜನೇಯನ ಅವತಾರದ ಹಿಂದೆ ಇದೆ ರೋಚಕ ಕತೆ…

ಇದು ರಾವಣನಿಗೆ ತಿಳಿಯಲು ಹೆಚ್ಚು ಸಮಯವಾಗಲಿಲ್ಲ, ಏಕೆಂದರೆ ಶನಿಯ ಈ ನಡೆ ತನ್ನ ಮಗನ ಸಾವಿಗೆ ಕಾರಣನಾಗುತ್ತೆ ಎಂದು ಆತ ಗ್ರಹಿಸಿದನು. ಈ ಕಾರಣವಾಗಿ ಶನಿಯನ್ನು ಒಂದು ಕತ್ತಲ ಕೋಣೆಯಲ್ಲಿ ಕೂಡಿಹಾಕಿದನು. ಇದರಿಂದ ಶನಿಯ ಮುಖವನ್ನು ಯಾರೂ ನೋಡುವುದಿಲ್ಲ ಎಂಬುದು ಆತನ ಅನಿಸಿಕೆಯಾಗಿತ್ತು. ಆದರೆ ಸೀತೆಯನ್ನು ಹುಡುಕುಲು ಬಂದ ಆಂಜನೇಯನು ಆ ಕತ್ತಲ ಕೋಣೆಯಲ್ಲಿ ಇಣುಕಿ ನೋಡಿ ಶನಿಯ ಕಣ್ಣಿಗೆ ಬಿದ್ದು ಬಿಟ್ಟನು.

ಆದರೆ ಶನಿಯ ಕಣ್ಣಿಗೆ ಬಿದ್ದನಲ್ಲ ಎಂಬ ಅಳುಕು ಹನುಮಂತನಿಗೂ ಸಹ ಕಾಡಿತು. ನವಗ್ರಹಗಳಲ್ಲಿ ಶನಿಯನ್ನು ಹೊರತುಪಡಿಸಿ, ಎಲ್ಲರನ್ನು ಹನುಮಂತ ಬಿಡುಗಡೆಗೊಳಿಸಿದ. ಇದನ್ನು ಶನಿ ಕೇಳಿದಾಗ, ನಿನ್ನನ್ನು ಬಿಡಿಸಿದರೆ ನೀನು ನನ್ನ ತಲೆಯ ಮೇಲೆ ಕೂರುವೆ ಎಂದು ಹನುಮಂತ ಹೇಳಿದ.

ಇಲ್ಲಿ ಓದಿ :ಅಬ್ಬಬ್ಬಾ..!62 ಅಡಿ ಆಂಜನೇಯನ ಏಕಶಿಲಾವಿಗ್ರಹ,300 ಚಕ್ರದ ಲಾರಿ, ಮುಂದೆ ಓದಿ…

ಇದರಿಂದ ಶನಿಯು ಆತನಿಗೆ ಅಭಯವನ್ನು ನೀಡಿದ. ನಾನು ನಿನಗೆ ಸಹಾಯ ಮಾಡುವೆ ಎಂದು, ಆದರೂ ನೀನು ನನ್ನ ದೃಷ್ಟಿಗೆ ಬಿದ್ದಿದ್ದರಿಂದ, ನೀನು ಮನೆ, ಹೆಂಡತಿ ಮತ್ತು ಮಕ್ಕಳಿಂದ ದೂರವಾಗುವೆ ಎಂದು ಶನಿ ಹೇಳಿದನು. ಹಾಗಾದರೆ ಬಾ ನಾನು ನಿನ್ನನ್ನು ಬಿಡಿಸುವೆ ನನಗೆ ಮನೆ,ಮಠ, ಹೆಂಡತಿ ಮತ್ತು ಮಕ್ಕಳು ಯಾರೂ ಇಲ್ಲ. ನನಗೆ ರಾಮನ ಅಡಿದಾವರೆ ಮತ್ತು ಆತನ ನಾಮ ಬಿಟ್ಟರೆ ಬೇರೆ ಸಂಪತ್ತಿಲ್ಲ ಎಂದು ಶನಿಯನ್ನು ಬಂಧ ಮುಕ್ತಗೊಳಿಸಿದನು.

ಹೀಗೆ ಶನಿ ಕೃತಜ್ಞತಾಪೂರ್ವಕವಾಗಿ ಹನುಮಂತನನ್ನು ಯಾರೂ ಪೂಜಿಸುವರೋ, ಅವರ ಮೇಲೆ ತನ್ನ ಪ್ರಭಾವವನ್ನು ಕಡಿಮೆ ಮಾಡುತ್ತೇನೆ ಎಂದು ಮಾತುಕೊಟ್ಟನು. ಒಂದು ನಂಬಿಕೆಯ ಪ್ರಕಾರ ಆಂಜನೇಯ ಲಂಕಾದಹನವನ್ನು ಸರಿಯಾಗಿ ಮಾಡಲಾಗಲಿಲ್ಲವಂತೆ, ಆಗ ಹನುಮಂತನ ಸಹಾಯಕ್ಕೆ ಬಂದ ಶನಿ ಲಂಕೆಯನ್ನು ನೋಡಿದ್ದರಿಂದ ಸ್ವರ್ಣಲಂಕ, ಭಸ್ಮವಾಗಿ ಕಪ್ಪು ಲಂಕಾವಾಯಿತಂತೆ.

ಇಲ್ಲಿ ಓದಿ :ಉಗ್ರ ಹನುಮಂತನ ಚಿತ್ರ ಬಂದಿದ್ದು ಹೇಗೆ ಗೊತ್ತಾ..?

ಆಂಜನೇಯನ ಹೆಗಲೇರಿದ ಶನಿ ದೇವ…

ಮತ್ತೊಂದು ರೋಚಕ ಕತೆ ಶನಿ ಮತ್ತು ಆಂಜನೇಯನ ನಡುವೆ ನಡೆಯಿತು. ರಾಮಾಯಣ ಯುದ್ಧ ಮುಗಿದು, ಹನುಮಂತನು ಒಮ್ಮೆ ಗುಹೆಯಲ್ಲಿ ರಾಮಧ್ಯಾನ ಮಾಡುತ್ತ ಕುಳಿತಿದ್ದನು. ಆಗ ಶನಿ ಇದೇ ಸಮಯವೆಂದು ಆಂಜನೇಯನ ಹೆಗಲೇರಿದನು. ಇದರಿಂದ ರಾಮ ಧ್ಯಾನಕ್ಕೆ ಭಂಗ ಬಂದಿತು ಎಂದು ಆಂಜನೇಯನಿಗೆ ಸಿಟ್ಟು ಬಂದಿತು.

ಆದರು ಅದನ್ನು ನಿಗ್ರಹಿಸಿಕೊಂಡು, ಆಂಜನೇಯ ಹೀಗೆ ಹೇಳಿದ: ಹೇ ಶನಿದೇವ, ನಿಮ್ಮ ತಂದೆಯಾದ ಸೂರ್ಯ ದೇವನು ನನಗೆ ಅನೇಕ ವರ ನೀಡಿದ್ದಾನೆ. ಆತ ನನ್ನ ಗುರು, ಗುರುವಿನ ಮಗನನ್ನು ಶಿಕ್ಷಿಸುವ ಕೆಲಸ ನನಗೆ ನೀಡಬೇಡ. ಇಳಿದು ಹೋಗಿಬಿಡು ಎಂದು ಹೇಳಿದನು. ಅದಕ್ಕೆ ಶನಿಯು ಆಂಜನೇಯ, ಇದು ನನ್ನ ಸರದಿ, ಅದರ ಪ್ರಕಾರ ನಾನು ನಿನ್ನ ಹೆಗಲೇರಬೇಕು, ಇದು ವಿಧಿ ನಿಯಮ ಎಂದನು. ಮಾತಿಗೆ ಮಾತು ಬೆಳೆಯಿತು, ಶನಿ ಸೋಲಲಿಲ್ಲ.

ಆಗ ಆಂಜನೇಯನು ಉಗ್ರ ಸ್ವರೂಪವನ್ನು ತಾಳಿ ತನ್ನ ದೇಹವನ್ನು ಬೆಳೆಸಿದನು. ಇದರಿಂದ ಹೆಗಲ ಮೇಲಿದ್ದ ಶನಿ ಗುಹೆಯ ಛಾವಣಿ ಮತ್ತು ಆಂಜನೇಯನ ದೇಹದ ನಡುವೆ ಸಿಲುಕಿ ಅಪ್ಪಚ್ಚಿಯಾಗಿ ಹೋದನು. ಆ ನೋವನ್ನು ತಾಳಲಾರದೆ ಶನಿ ಸೋತು ಆಂಜನೇಯನನ್ನು ಅಂಗಲಾಚಿದನು. ಆಗ ಆಂಜನೇಯನು ರಾಮ ನಾಮ ಜಪ ಮಾಡುವವರ ತಂಟೆಗೆ ಹೋಗುವುದಿಲ್ಲ ಎಂದು ಮಾತು ನೀಡಿದರೆ ಮಾತ್ರ ನಿನ್ನನ್ನು ಬಿಡುತ್ತೇನೆ ಎಂದನು. ಇದಕ್ಕೆ ಶನಿಯು ಸಹ ಅಸ್ತು ಎಂದನು.

ಎಷ್ಟಾದರು ಆಂಜನೇಯನನ್ನು ಸ್ಮರಿಸಿದರೆ ರಾಮನನ್ನು ಸ್ಮರಿಸಿದಂತೆ ಅಲ್ಲವೇ, ಹೀಗೆ ಹನುಮಂತನನ್ನು ನಾವು ಶನಿವಾರದಂದು ಪೂಜಿಸಲು ಆರಂಭಿದೆವು. ಇನ್ನೂ ಒಂದು ವಿಚಾರ ಏನಪ್ಪಾ ಎಂದರೆ ಆಂಜನೇಯ ಸಹ ಹುಟ್ಟಿದ್ದು, ಶನಿವಾರವಂತೆ!

ಕೃಪೆ : ಶ್ರೀದರ್ ಭಟ್

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಉಪಯುಕ್ತ ಮಾಹಿತಿ

    ಈ ಸಾಮಾನುಗಳು ನೀವು ಉಪಯೋಗಿಸಿದ್ರೆ ಕ್ಯಾನ್ಸರ್ ಕಾಯಿಲೆಯನ್ನು ಉಂಟು ಮಾಡುತ್ತದೆ ..!ತಿಳಿಯಲು ಈ ಲೇಖನ ಓದಿ ..

    ಈ ಗೃಹೋಪಯೋಗಿ ವಸ್ತುಗಳಲ್ಲಿ ತುಂಬಾನೇ ಹಾನಿ ಉಂಟುಮಾಡೋ, ನಮ್ಮ ಆರೋಗ್ಯದಮೇಲೆ ಕೆಟ್ಟ ಪರಿಣಾಮ ಬೀರೋ ಪದಾರ್ಥಗಳು ಇರುತ್ತೆ. ಈ ವಸ್ತುಗಳನ್ನ ಪದೇ ಪದೇ ಬಳಸೋದ್ರಿಂದ ಒಂದಲ್ಲ ಒಂದು ರೀತಿಯ ಕ್ಯಾನ್ಸರ್ ಉಂಟುಮಾಡೋ ಈ ಪದಾರ್ಥಗಳು ನಮ್ಮ ದೇಹ ಸೇರಿಕೊಳುತ್ತೆ. ಅಂತಹ ಕೆಲವು ಪದಾರ್ಥಗಳ ಪಟ್ಟಿ ಇಲ್ಲಿದೆ.

  • ಸುದ್ದಿ

    ಎಚ್ಚರಿಕೆ ಕಾವೇರಿ ನೀರು ಬಿಟ್ಟರೆ ಜನ ದಂಗೆ ಏಳ್ತಾರೆ: ಮಾದೇಗೌಡ ……!

    ತಮಿಳುನಾಡಿಗೆ ನೀರು ಬಿಡುವಂತೆ ಕೇಂದ್ರ ಜಲ ಆಯೋಗ ಆದೇಶಿಸಿರುವ ಬೆನ್ನಲ್ಲೇ, ಮಂಡ್ಯದಲ್ಲಿ ಆಕ್ರೋಶ ಭುಗಿಲೆದ್ದಿದೆ. ಈ ಆದೇಶ ಹೊರಬೀಳುತ್ತಿದ್ದಂತೆಯೇ ಜಿಲ್ಲೆಯ ವಿವಿಧೆಡೆ ರೈತರು ರಸ್ತೆಗಿಳಿದು ಪ್ರತಿಭಟನೆ ಆರಂಭಿಸಿದ್ದಾರೆ. ರೈತಸಂಘ, ಕನ್ನಡಸೇನೆ ಕಾರ್ಯಕರ್ತರು ಮಂಡ್ಯ ನಗರದ ವಿಶ್ವೇಶ್ವರಯ್ಯ ಪ್ರತಿಮೆ ಎದುರು ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಜಿಲ್ಲೆಯಲ್ಲಿ ಕುಡಿಯುವ ನೀರಿಲ್ಲದೆ ಜನರು ಪರದಾಡುತ್ತಿದ್ದಾರೆ. ನಾಲೆಗಳಿಗೆ ನೀರು ಬಿಡದೆ ಬೆಳೆದ ಬೆಳೆಗಳು ಒಣಗುತ್ತಿವೆ. ಬೆಂಗಳೂರಿಗೆ ಕುಡಿಯುವ ನೀರು ಹರಿಸಲು ಸಹ ಇರುವ ಸಂಗ್ರಹದಲ್ಲಿರುವ ನೀರು ಸಾಲುವುದಿಲ್ಲ. ಪರಿಸ್ಥಿತಿ…

  • ಆರೋಗ್ಯ

    ನೀವು ಬ್ರೇಕ್‌ಫಾಸ್ಟ್ ತಪ್ಪಿಸಿದರೆ ಈ ಗಂಭೀರ ಆರೋಗ್ಯ ಸಮಸ್ಯ ನಿಮಗೆ ಗ್ಯಾರೆಂಟಿ..!ತಿಳಿಯಲು ಈ ಲೇಖನ ಓದಿ..

    ಬೆಳಗಿನ ತಿಂಡಿಯನ್ನು ತಿನ್ನಲೂ ಹೆಚ್ಚಿನವರಿಗೆ ಪುರಸೊತ್ತು ಇರುವುದಿಲ್ಲ. ಹೆಚ್ಚಿನ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳೂ ಇದಕ್ಕೆ ಹೊರತಲ್ಲ. ಬ್ರೇಕ್‌ಫಾಸ್ಟ್ ತಪ್ಪಿಸುವುದರಿಂದ ಆರೋಗ್ಯ ಸಮಸ್ಯೆಗಳಿಗೆ ಮುಕ್ತ ಆಹ್ವಾನ ನೀಡಿದಂತಾಗುತ್ತದೆ ಎನ್ನುವುದು ಹೆಚ್ಚಿನವರಿಗೆ ಗೊತ್ತಿಲ್ಲ

  • inspirational

    ಸ್ಟೈಲ್‌ಗಾಗಿ ಕಡಿಮೆ ಬೆಲೆಯ ಸನ್‌ಗ್ಲಾಸ್ ಧರಿಸುತ್ತೀರಾ? ಹಾಗಾದರೆ ಈ ಅಪಾಯಗಳ ಬಗ್ಗೆ ತಿಳಿಯಲೇಬೇಕು!

    ಸ್ಟೈಲ್‌ಗಾಗಿ ಕಡಿಮೆ ಬೆಲೆಯ ಸನ್‌ಗ್ಲಾಸ್ ಧರಿಸುತ್ತೀರಾ? ಹಾಗಾದರೆ ಈ ಅಪಾಯಗಳ ಬಗ್ಗೆ ತಿಳಿಯಲೇಬೇಕು! ಇತ್ತೀಚಿನ ದಿನಗಳಲ್ಲಿ ಯುವಕರು ಹಾಗೂ ಕಾಲೇಜು ವಿದ್ಯಾರ್ಥಿಗಳಲ್ಲಿ ಕಡಿಮೆ ಬೆಲೆಯ ಫ್ಯಾಷನ್ ಸನ್‌ಗ್ಲಾಸ್ ಧರಿಸುವ ಟ್ರೆಂಡ್ ಹೆಚ್ಚಾಗಿದೆ. ರಸ್ತೆಬದಿ ಅಂಗಡಿಗಳು, ಆನ್‌ಲೈನ್ ತಾಣಗಳು ಹಾಗೂ ಸ್ಥಳೀಯ ಮಾರುಕಟ್ಟೆಗಳಲ್ಲಿ ₹100-₹300 ಒಳಗೆ ಸಿಗುವ ಸ್ಟೈಲಿಶ್ ಗ್ಲಾಸ್‌ಗಳನ್ನು ಹಲವರು ಖರೀದಿಸುತ್ತಿದ್ದಾರೆ. ಆದರೆ ತಜ್ಞರ ಎಚ್ಚರಿಕೆ ಏನೆಂದರೆ — “ಕೇವಲ ಕಪ್ಪು ಬಣ್ಣದ ಗಾಜು ಇದ್ದರೆ ಸಾಕು ಎಂದಲ್ಲ; ಸರಿಯಾದ UV ರಕ್ಷಣೆ ಇಲ್ಲದ ಸನ್‌ಗ್ಲಾಸ್ ಕಣ್ಣಿಗೆ…

  • ಜ್ಯೋತಿಷ್ಯ

    ದಿನ ಭವಿಷ್ಯ ಭಾನುವಾರ, ಈ ರಾಶಿಗಳಿಗೆ ವಿಪರೀತ ಧನಲಾಭವಿದ್ದು,ಇದರಲ್ಲಿ ನಿಮ್ಮ ರಾಶಿಯೂ ಇದೆಯಾ ನೋಡಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ 20 ಜನವರಿ, 2019 ನಿಮ್ಮ ಹಾಸ್ಯಪ್ರಜ್ಞೆ ಜಾಗೃತವಾಗಿರಲಿ ಮತ್ತು ನಿಮ್ಮ ಸ್ವರಕ್ಷಣೆ ಕಡಿಮೆಯಿರಲಿ. ಹೀಗಿದ್ದಲ್ಲಿ ಟೀಕೆಯನ್ನು…

  • ಸ್ಪೂರ್ತಿ

    ಮದ್ವೆಯಾಗಿ ಮೂರೇ ಮೂರು ವಾರದಲ್ಲಿ ಬಿಟ್ಟು ಹೋದ ಪತಿ ಈಗ ಆಕೆ ಐಎಎಸ್ ಅಧಿಕಾರಿ!

    ಇದು 2012ರಲ್ಲಿ ಯುಪಿಎಸ್ಸಿ ಪರೀಕ್ಷೆ ಪಾಸ್ ಮಾಡಿದ್ದ ಗುಜರಾತಿನ ಏಕಮಾತ್ರ ಮಹಿಳೆ ಎನಿಸಿದ್ದ ಕೋಮಲ್ ಗಣಾತ್ರ ಅವರ ಕಥೆ. ಅವರ ಬದುಕಿನ ಸಂಘರ್ಷ ನಮ್ಮ ನಿಮ್ಮ ಬದುಕಿನಂತೆಯೇ ಇದೆ, ನೋಡಿ 2008, ಆಗ ಕೋಮಲ್ ಗಣಾತ್ರ ಅವರಿಗೆ 26 ವರ್ಷ. ಮುಂದೆ ತಾನು ಕೂಡ ಸಮಾಜಕ್ಕೆ ದೊಡ್ಡ ವ್ಯಕ್ತಿಯಾಗಬೇಕೆಂದು ಕನಸು ಕಾಣುತ್ತಿದ್ದರು. ಆದರೆ, ಆ ಸಮಯದಲ್ಲಿ ನ್ಯೂಜಿಲ್ಯಾಂಡ್ ನಲ್ಲಿ ನೆಲೆ ಕಂಡಿದ್ದ ಆನಿವಾಸಿ ಭಾರತೀಯ ತಾನು ಕೋಮಲ್ ಗಣಾತ್ರ ಅವರನ್ನು ಕೈ ಹಿಡಿಯುವುದಾಗಿ ಮನೆಯವರಿಂದ ಒತ್ತಡ ತಂದು ಕೊನೆಗೆ 2008ರಲ್ಲಿ…