ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ರಾಣಿ ಪದ್ಮಿನಿ 13ನೇ ಶತಮಾನದ ರಾಜಸ್ಥಾನದ ಮೇವಾಡ್ ಸಂಸ್ಥಾನ (ಈಗಿನ ಚಿತ್ತೋಡಗಢ, ರಾಜಸ್ಥಾನ) ರಾಜ ರಾವಲ್ ರತನ ಸಿಂಗ್ ನ ರಾಣಿಯಾಗಿದ್ದಳು.ರಾಣಿ ಪದ್ಮಿನಿಯು ತುಂಬಾ ಸೌಂದರ್ಯವತಿಯಾಗಿದ್ದಳು ಕೂಡ. ಆಗ ಅಲ್ಲಾವುದ್ದೀನ್ ಖಿಲ್ಜಿ ಮೊಘಲ್ ದೊರೆಯಾಗಿ ದೆಹಲಿಯನ್ನಾಳುತ್ತಿದ್ದ, ಆತನೊಬ್ಬ ಹಿಂದೂ ವಿರೋಧಿ, ವಿಕೃತ ಕಾಮಿ & ಸಲಿಂಗಕಾಮಿಯೂ ಆಗಿದ್ದ.

ಅಲ್ಲಾವುದ್ದೀನ್ ಖಿಲ್ಜಿ ಬರೆದ ಆ ಪತ್ರದಲ್ಲಿ ಏನಿತ್ತು..?
ಆತನಿಗೆ ರಾಣಿ ಪದ್ಮಿನಿಯ ಸೌಂದರ್ಯದ ಬಗ್ಗೆ ಹೇಗೋ ತಿಳಿದು ಆಕೆಯನ್ನ ತನ್ನ ಕಾಮತೃಷೆಗಾಗಿ ಬಳಸಿಕೊಳ್ಳಬೇಕೆಂದು ಆಸೆಯಾದಾಗ ಆತ ಮಾಡಿದ ಕುತಂತ್ರವೆಂದರೆ ಆತ ಮೇವಾಡಕ್ಕೆ ಪತ್ರವೊಂದನ್ನ ಬರೀತಾನೆ. “ರಕ್ಷಾ ಬಂಧನ ಸದ್ಯದಲ್ಲೇ ಇರೋದ್ರಿಂದ ನಾನು ನಿನ್ನ(ರಾವಲ್ ರತನ ಸಿಂಗ್) ಹೆಂಡತಿ(ರಾಣಿ ಪದ್ಮಿನಿ)ಯನ್ನ ತಂಗಿಯಂತೆ ಸ್ವೀಕರಿಸಿದ್ದೇನೆ, ರಕ್ಷಾಬಂಧನಕ್ಕೆ ನಿನ್ನ ರಾಜ್ಯಕ್ಕೆ ಬಂದು ನಿನ್ನ ಹೆಂಡತಿಯ ಕೈಯಿಂದ ರಾಖಿ ಕಟ್ಟಿಸಿಕೊಳ್ಳುತ್ತೇನೆ”

ಇದನ್ನ ಓದಿದ ರಾವಲ್ ಸಿಂಗ್ “ಸರಿ ಆಯಿತು ಆದರೆ ಒಂದು ಷರತ್ತು, ನನ್ನ ಹೆಂಡತಿ ಮುಖತಃ ನಿನ್ನ ಕೈಗೆ ರಾಖಿ ಕಟ್ಟಲ್ಲ ಆದರೆ ಆಕೆ ಅದಕ್ಕೆ ಪೂಜೆ ಮಾಡಿ ಇಟ್ಟಿರುತ್ತಾಳೆ ಅದನ್ನ ನಿನ್ನ ಕೈಗೆ ನಮ್ಮ ರಾಣಿಯ ಸಖಿಯರು ಕಟ್ತಾರೆ” ಅಂತ ವಾಪಸ್ ಪತ್ರ ಬರೀತಾನೆ.
ಅಲ್ಲಾವುದ್ದೀನ್ ಖಿಲ್ಜಿಯ ಷಡ್ಯಂತ್ರ:-

ಇದಕ್ಕೊಪ್ಪಿದ ಖಿಲ್ಜಿ ದೆಹಲಿಯಿಂದ ಹೊರಟು ಗುಪ್ತವಾಗಿ ತನ್ನ ದೊಡ್ಡ ಸೈನ್ಯವನ್ನ ಚಿತ್ತೋಡಗಢದಲ್ಲಿ ಬಿಡಾರ ಹೂಡಿಸಿ, ರಾವಲ್ ಸಿಂಗನ ಆಸ್ಥಾನಕ್ಕೆ ಒಂದಿಬ್ಬರು ಸಂಗಡಿಗರ ಜೊತೆ ಬರ್ತಾನೆ, ಬಂದ ಅತಿಥಿಗೆ ಆದರ ಆತಿಥ್ಯಗಳೂ ಸಿಕ್ಕವು, ಆತನ ಕೈಗೆ ರಾಖಿ ಕಟ್ಟಲು ಬಂದ ರಾಣಿಯ ಸಖಿಯನ್ನ ಕಂಡ ಅಲ್ಲಾವುದ್ದೀನ್ ಹೇಳ್ತಾನೆ “ನಾನು ಒಂದೇ ಒಂದು ಬಾರಿ ನನ್ನ ತಂಗಿ ಸಮಾನಳಾದ ಪದ್ಮಿನಿಯನ್ನ ನೋಡಬೇಕಲ್ಲ?”

ಇದಕ್ಕೆ ರಾಜ ಹೇಳ್ತಾನೆ “ಸರಿ ಆಯಿತು ಆದರೆ ಒಂದು ಷರತ್ತು, ರಾಣಿ ಮುಖತಃ ನಿಮಗೆ ತನ್ನ ಮುಖ ತೋರಿಸಲ್ಲ, ಆಕೆ ಆಕೆಯ ಅರಮನೆಯ ಹೊರಾಂಗಣದಲ್ಲಿ ನಿಂತಿರುತ್ತಾಳೆ, ಆಕೆಯ ಪ್ರತಿಬಿಂಬ ಒಂದು ರೂಮಿನ ಕನ್ನಡಿಯಲ್ಲಿ ಕಾಣುತ್ತೆ, ಆ ಪ್ರತಿಬಿಂಬದಲ್ಲಿ ನೀವು ಆಕೆಯ ಮುಖವನ್ನು ನೋಡಬಹುದು”ಇದಕ್ಕೊಪ್ಪಿದ ಖಿಲ್ಜಿ “ಆಯ್ತು ಸರಿ” ಅಂತಾನೆ.
ರಾಜ ರಾವಲ್ ರತನ ಸಿಂಗ್ ನ ಬುದ್ದಿವಂತಿಕೆ…
ಸರಿ ರಾಣಿ ಪದ್ಮಿನಿ ತನ್ನ ಮಹಲಿನ ಸರೋವರದ ಹತ್ತಿರ ಬಂದು ನಿಲ್ತಾಳೆ, ಅವಳ ಪ್ರತಿಬಿಂಬ ಆ ರೂಮಿನ ಕನ್ನಡಿಯ ಮೇಲೆ ಕಂಡ ಖಿಲ್ಜಿಗೆ ಆಕೆಯ ಸೌಂದರ್ಯ ದಂಗುಬಡಿಸಿತ್ತು, ಹೇಗಾದರೂ ಮಾಡಿ ಈಕೆಯನ್ನ ತನ್ನ ಪಟ್ಟದರಸಿ ಮಾಡಿಕೊಳ್ಳೇಬೇಕು ಅಂತ ಖಿಲ್ಜಿ ತೀರ್ಮಾನಿಸಿ ಒಮ್ಮಿಂದೊಮ್ಮೆಲೇ ರಾಜನ ಮೇಲೆ ದಾಳಿ ನಡೆಸಿ ರಾವಲ್ ಸಿಂಗನನನ್ನ ಯುದ್ಧ ಕೈದಿಯಾಗಿ ದೆಹಲಿಗೆ ಕರೆದುಕೊಂಡು ಹೋಗ್ತಾನೆ ಆದರೆ ರಾಣಿ ಪದ್ಮಿನಿ ಆತನ ಕೈಗೆ ಸಿಗಲ್ಲ.

ರಜಪೂತ ಇತಿಹಾಸಕಾರರು ಹೇಳುವುದೇನು?
(ಆದರೆ ರಜಪೂತ ಇತಿಹಾಸಕಾರರ ಪ್ರಕಾರ ಅಲ್ಲಿ ಬಂದು ಖಿಲ್ಜಿಗೆ ಮುಖ ತೋರಿಸಿದ್ದು ರಾಣಿ ಪದ್ಮಿನಿಯದ್ದಲ್ಲ, ಬದಲಾಗಿ ರಾಣಿಯ ಸಖಿ ಅಲ್ಲಿ ಬಂದು ನಿಂತದ್ದು, ಆದರೆ ಖಿಲ್ಜಿ ಒಂದು ಬಾರಿಯೂ ರಾಣಿ ಪದ್ಮಿನಿಯ ಮುಖ ನೋಡಿರದ ಕಾರಣ ರಾಣಿಯ ಸಖಿಯನ್ನೇ ಪದ್ಮಿನಿ ಅಂದುಕೊಳ್ತಾನಂತೆ)ನಿಜವಾಗಿಯೂ ಆತನಿಗೆ ಪದ್ಮಿನಿಯ ಸೌಂದರ್ಯ ಕಂಡು ಆಕೆಯನ್ನ ಮದುವೆ ಆಗೋ ಚಪಲವಿತ್ತೇ ಹೊರತು ಆಕೆಯನ್ನ ಆತ ತಂಗಿ ಅಂತ ಬಾಯಿಮಾತಿಗಷ್ಟೇ ತನ್ನ ಮಾಯಾಜಾಲ ಬೀಸಲು ಸುಳ್ಳು ಹೇಳಿದ್ದು.
ಅಲ್ಲಾವುದ್ದಿನ್ ಖಿಲ್ಜಿ ರಾಣಿ ಪದ್ಮಿನಿಗೆ ಬರೆದ ಪತ್ರದಲ್ಲಿದ್ದ ಆದೇಶ ಏನು..?
ರಾಜಾ ರಾವಲ್ ರತನ್ ಸಿಂಗ್ ಬಂಧಿಯಾಗಿ ದೆಹಲಿಯಲ್ಲಿದ್ದಾಗ ಅಲ್ಲಾವುದ್ದಿನ್ ಖಿಲ್ಜಿ ಚಿತ್ತೋಡಗಢಕ್ಕೆ ಪತ್ರ ಬರೆದು ಪದ್ಮಿನಿಗೆ ಹೀಗೆ ಹೇಳ್ತಾನೆ “ನಿನ್ನ ಗಂಡನನ್ನ ನೀನು ಜೀವಸಹಿತವಾಗಿ ನೋಡಬೇಕೆಂದರೆ ನೀನು ನನ್ನವಳಾಗಬೇಕು, ನೀ ನನ್ನ ಮದುವೆಯಾಗಿ ನನ್ನ ಜನಾನಾಗೆ ಬರಬೇಕು ಆಗ ಮಾತ್ರ ನಾ ನಿನ್ನ ಗಂಡನನ್ನ ಬಿಡುಗಡೆ ಮಾಡ್ತೀನಿ”

ಇದನ್ನೋದಿದ ರಾಣಿ ಪದ್ಮಿನಿಯ ರಕ್ತ ಕೊತ ಕೊತ ಕುದಿಯುತ್ತ ಆಕೆ ಖಿಲ್ಜಿಗೆ ಉತ್ತರ ಕೊಡ್ತಾ ಹೀಗೆ ಹೇಳ್ತಾಳೆ. “ನನಗೆ ನನ್ನ ಗಂಡನ ಕ್ಷೇಮ ಮುಖ್ಯ, ನಾನು ನಿನ್ನ ಷರತ್ತಿಗೆ ಒಪ್ಪುತ್ತೇನೆ, ಆದರೆ ನೀವು ಚಿತ್ತೋಡಗಢಕ್ಕೆ ಬರೋದು ಬೇಡ, ನಾನೇ ನಮ್ಮ ರಜಪೂತ ಪರಂಪರೆಯ ಪ್ರಕಾರ 100 ಪಲ್ಲಕ್ಕಿಗಳ ಜೊತೆಗೆ ನನ್ನ ಸಖಿಯರೊಂದಿಗೆ ನಿಮ್ಮ ಆಸ್ಥಾನಕ್ಕೆ ಬಂದು ನಿಮಗೆ ಶರಣಾಗ್ತೀನಿ”. ಇದನ್ನೋದಿದ ಖಿಲ್ಜಿಗೆ ಮತ್ತೂ ಖುಷಿಯಾಗಿ ಒಬ್ಬ ಸುರಸುಂದರಾಂಗಿ ಪದ್ಮಿನಿ ಸಿಗ್ತಾಳೆ ಅನ್ಕೊಂಡಿದ್ದೆ ಆದರೆ ಆಕೆ ಜೊತೆಗೆ ಇನ್ನೂ ನೂರು ಜನ ಸುಂದರ ಸಖಿಯರಿರ್ತಾರೆ ಅಂತ ಮನದಲ್ಲೇ ತನ್ನ ಕಾಮಾಗ್ನಿಯ ಬಯಕೆಯನ್ನು ಇಮ್ಮಡಿಗೊಳಿಸಿಕೊಳ್ತಾನೆ.

ರಾಣಿ ಪದ್ಮಿನಿಯು ಅಲ್ಲಾವುದ್ದೀನ್ ಖಿಲ್ಜಿಯ ಮೇಲೆ ದಾಳಿ ಮಾಡಿಸಿದ್ದೇ ಒಂದು ರೋಚಕ್…
ಆ ದಿನ ಬಂದೇ ಬಿಟ್ಟಿತು, ರಾಣಿ ಪದ್ಮಿನಿ ನೂರು ಪಲ್ಲಕ್ಕಿಗಳ ಮೂಲಕ ಖಿಲ್ಜಿಯ ಆಸ್ಥಾನಕ್ಕೆ ಬಂದೇ ಬಿಟ್ಟಳು, ಆಗಲೂ ಆತ ಆಕೆಯ ನಿಜವಾದ ಮುಖ ಇನ್ನೂ ನೋಡಿರಲಿಲ್ಲ, ಯಾವಾಗ ಆತ ಪಲ್ಲಕ್ಕಿಯ ಹತ್ತಿರ ಹೊರಟು ಪದ್ಮಿನಿಯನ್ನ ನೋಡಲು ಬರುತ್ತಾನೋ ಆಗ ಪಲ್ಲಕ್ಕಿಗಳಿಂದ ಹರಹರಮಹಾದೇವ ಘೋಷಣೆಗಳನ್ನ ಕೂಗುತ್ತ ನೂರು ಜನ ರಜಪೂತ ಸೈನಿಕರು ಒಮ್ಮೆಲೆ ಅಲ್ಲಾವುದ್ದೀನ್ ಖಿಲ್ಜಿಯ ಮೇಲೆ ದಾಳಿ ಮಾಡ್ತಾರೆ. ಇದು ರಾಣಿ ಪದ್ಮಿನಿಯೇ ಖಿಲ್ಜಿಯ ಸೊಕ್ಕು ಮುರಿಯೋದಕ್ಕೆ ರಚಿಸಿದ್ದ ಪದ್ಮವ್ಯೂಹವಾಗಿತ್ತು, ನೂರು ಪಲ್ಲಕ್ಕಿಗಳಲ್ಲಿ ತನ್ನ ಸಖಿಯರಿರ್ತಾರೆ ಅಂತ ಹೇಳಿದ್ದ ಪದ್ಮಿನಿ ಅವುಗಳಲ್ಲಿ ತನ್ನ 100 ಬಲಾಢ್ಯ ರಜಪೂತ ಸೈನಿಕರನ್ನ ಕರೆತಂದಿರ್ತಾಳೆ. ಖಿಲ್ಜಿಗೆ ತನ್ನ ಆಸ್ಥಾನದಲ್ಲಿ ಏನ್ ನಡೀತಿದೆ ಅಂತ ಅರ್ಥವಾಗೋಕೂ ಮುಂಚೆಯೇ ರಾಣಿ ಪದ್ಮಿನಿ ಖಿಲ್ಜಿಯ ಹೆಡೆಮುರಿಕಟ್ಟಿ ಸೋಲಿಸಿ ತನ್ನ ಗಂಡ ರಾವಲ್ ರತನ್ ಸಿಂಗನನ್ನ ಬಿಡಿಸಿಕೊಂಡು ಚಿತ್ತೋಡಗಢಕ್ಕೆ ವಾಪಸ್ಸಾಗ್ತಾಳೆ.
ಅವಮಾನಿತನಾದ ಅಲ್ಲಾವುದ್ದೀನ್ ಖಿಲ್ಜಿಯಿಂದ ಚಿತ್ತೋಡಗಢದ ಮೇಲೆ ದಾಳಿ…

ಈ ಘಟನೆಯಿಂದ ಅದೂ ಒಂದು ಹೆಣ್ಣಿನ ಕೈಯಿಂದ ನಾನು ಸೋಲೋದಾ ಅಂತ ಪಿತ್ತ ನಿತ್ತಗೇರಿದ ಅಲ್ಲಾವುದ್ದೀನ್ ಖಿಲ್ಜಿ, ಈ ಬಾರಿ ಮತ್ತೆ ಚಿತ್ತೋಡಗಢದ ಮೇಲೆ ದಾಳಿ ಮಾಡ್ತಾನೆ, ಕೆಲ ದಿನಗಳ ಕಾಲ ರಜಪೂತರು ಖಿಲ್ಜಿಗೆ ಪ್ರತಿರೋಧ ತೋರುತ್ತಾರೆ ಆದರೆ ಖಿಲ್ಜಿಯ ಬೃಹತ್ ಸೈನ್ಯದೆದುರು ರಜಪೂತರು ಸೋಲುತ್ತಾರೆ. ಕೋಟೆಗಿದ್ದ ಒಂದೇ ಒಂದು ದ್ವಾರವನ್ನು ತನ್ನ ಸೈನಿಕರಿಂದ ಮುಚ್ಚಿಸಿ ರಜಪೂತ ಸೈನಿಕರಿಗೆ ಹೊರಗಿನಿಂದ ಯಾವ ಸಾಮಗ್ರಿಗಳು ಸಿಗದ ಹಾಗೆ ಮಾಡಿ ಚಿತ್ತೋಡವನ್ನ ಖಿಲ್ಜಿ ವಶಪಡಿಸಿಕೊಂಡು ರಾವಲ್ ರತನ್ ಸಿಂಹನ ತಲೆ ಕಡಿದು ಹಾಕ್ತಾನೆ.
ರಾಣಿ ಪದ್ಮಾವತಿ ತನ್ನ 16,000 ಸಖಿಯರೊಂದಿಗೆ ಬೆಂಕಿಗೆ ಹಾರಿದ್ದು..!

ಈಗ ಮುಂದೇನು? ಅಲ್ಲಾವುದ್ದೀನ್ ಎಂಬ ಕಾಮುಕ ಚಿತ್ತೋಡದಲ್ಲಿರೊ ಎಲ್ಲ ರಜಪೂತ ಮಹಿಳೆಯರನ್ನೂ ಸೆಕ್ಸ್ ಸ್ಲೇವ್ಸ್ಗಳಾಗಿ ಕರೆದುಕೊಂಡು ಹೋಗೋಕೆ ಕೋಟೆ ಒಳ ಬರಿಕೈಲಿ ಮುಂಚೆಯೇ ಈ ವಿಷಯ ಅರಿತ ರಾಣಿ ಪದ್ಮಿನಿ, ನಾವು ರಜಪೂತರು ಯಾವತ್ತೂ ನಮ್ಮ ಶೀಲವನ್ನ ಕಳೆದುಕೊಂಡವರಲ್ಲ, ಅಂಥದ್ರಲ್ಲಿ ಈ ಮುಸಲ್ಮಾನ ದೊರೆಗೆ ನಮ್ಮ ಶೀಲ ಅರ್ಪಿತವಾಗೋದೇ? ಛೀ ಹಾಗೇ ಮಾಡೋದಕ್ಕಿಂತ ವೀರಸ್ವರ್ಗ ಪ್ರಾಪ್ತಿ ಮಾಡಿಕೊಳ್ಳೋದೇ ಎಷ್ಟೋ ವಾಸಿ ಅಂತ ತಕ್ಷಣ ಆಕೆ ಚಿತ್ತೋಡದಲ್ಲಿದ್ದ ತನ್ನ 16,000 ರಜಪೂತನಿಯರೊಂದಿಗೆ ಬೆಂಕಿಗೆ ಹಾರಿ ಜೌಹಾರ್ ಮಾಡಿಕೊಂಡು ಬಿಡ್ತಾಳೆ.

ನಂತರ ಕೋಟೆಯ ಒಳಗೆ ಖಿಲ್ಜಿ ಬಂದು ನೋಡಿದಾಗ ಆತನಿಗೆ ಯಾವೊಬ್ಬ ಹೆಂಗಸೂ ಚಿತ್ತೋಡದಲ್ಲಿ ಸಿಗದೆ ಹೆಣಗಳನ್ನ ಹದ್ದು ಕುಕ್ಕುತ್ತ ಕೂತಿರೊ ದೃಶ್ಯಗಳೇ ಕಂಡು ಆತ ದೆಹಲಿಗೆ ವಾಪಸ್ ಆಗ್ತಾನೆ. ನೋಡಿ ತನ್ನ ಆತ್ಮ & ಶೀಲರಕ್ಷಣೆಗಾಗಿ ತನ್ನನ್ನ ತಾನು ಬೆಂಕಿಗಾಹುತಿ ಮಾಡಿಕಂಡ & ತಾನು ಸಾಯೋವರೆಗೂ ಖಿಲ್ಜಿಯ ವಿರುದ್ಧ ಹೊರಾಡಿದ್ದ ರಜಪೂತರಷ್ಟೇ ಯಾಕೆ ಇಡೀ ಭಾರತದ ಮಹಿಳೆಯರಿಗೆ ಆದರ್ಶಪ್ರಾಯವಾಗಿರೋ ವೀರವನಿತೆ ಪದ್ಮಿನಿ ರಾಣಿ ಬಗ್ಗೆ ಕೆಲವರು ಒಂದು ಚಿತ್ರದ ಮುಖಾಂತರ ಕೆಟ್ಟ ರೀತಿಯಲ್ಲಿ ತೋರಿಸಲು ಹೊರಟಿದ್ದಾರೆ.

ಮೂಲ:
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಪ್ಲಾಸ್ಟಿಕ್ ಬಾಟಲಿಗಳನ್ನು ಮರಳಿನಿಂದ ತುಂಬಿಸಿಲಾಗುತ್ತದೆ, ನಂತರ ಬಾಟಲಿಗಳನ್ನು ಮೇಲೆ ತೋರಿಸಿರುವ ಚಿತ್ರದಂತೆ ಸಾಲಲ್ಲಿ ಜೋಡಿಸಲಾಗುತ್ತದೆ, ಮರಳು ಮತ್ತು ಸಿಮೆಂಟ್ ಅನ್ನು ಬೆರೆಸಿ ನಿರ್ಮಾಣಗೊಂಡ ಬಾಟಲಿಯ ಗೋಡೆಯ ಮೇಲೆ ಹಾಕಲಾಗುತ್ತದೆ, ಇದು ಬಾಟಲಿಗಳನ್ನು ಹಿಡಿದಿಡಲು ಸಹಕಾರಿಯಾಗುರ್ತದೆ ಹಾಗು ಘನ ಗೋಡೆಯನ್ನು ಹೊಂದುತ್ತದೆ.
ನಮಗೆ ಕೆಲವು ಸಮಯದಲ್ಲಿ ಧಿಡೀರನೆ ತಲೆಯಲ್ಲಿ ಬರುವ ಕೆಲವು ಯೋಚನೆಗಳು ಕೆಲವೊಮ್ಮೆ ನಮ್ಮ ಜೀವನವನ್ನ ಬದಲಾಯಿಸಬಹುದು ಅನ್ನುವುದಕ್ಕೆ ಉತ್ತಮ ಉದಾಹರಣೆ ಇದಾಗಿದೆ. ಹೌದು ಕೆಲವೊಮ್ಮೆ ನಮ್ಮ ತಲೆಯಲ್ಲಿ ಬರುವ ಕೆಲವು ಯೋಚನೆಗಳು ಬೇರೆಯವರಿಗೆ ತಮಾಷೆ ಅನಿಸಿದರೂ ಅದೂ ಕೆಲವೊಮ್ಮೆ ನಮ್ಮ ಜೀವನದ ಹಾದಿಯನ್ನೇ ಬದಲಾಯಿಸಬಹುದು. ಹೌದು ಕೇರಳಕ್ಕೆ ರಾಜ್ಯದ ಒಂದು ಕುಗ್ರಾಮದಲ್ಲಿ ಹುಟ್ಟಿದ್ದ ಈ ಹುಡುಗನ ಹೆಸರು ಮುಸ್ತಫಾ, ಮುಸ್ತಫಾ ಅವರು ವಾಸವಿದ್ದ ಊರಿನಲ್ಲಿ ಸರಿಯಾದ ರಸ್ತೆ ಮತ್ತು ನೀರು ಇರಲಿಲ್ಲ ಮತ್ತು ಅವರ ಊರಿನಲ್ಲಿ ಕೇವಲ…
ಆತ್ಮಹತ್ಯೆ ಮಾಡಿಕೊಳ್ಳಲೆಂದು ನದಿಗೆ ಧುಮುಕಿದ ವ್ಯಕ್ತಿಯ ಹಣೆಬರಹದಲ್ಲಿ ದೈವ ಬೇರೆಯದ್ದೇ ಯೋಜನೆ ರೂಪಿಸಿದ್ದ. ಸಾಯಲೆಂದು ನದಿಗೆ ಧುಮುಕಿದ್ದ ಕೆಲವೇ ಕ್ಷಣಗಳಲ್ಲಿ ಆತನ ಮನಸ್ಸು ಬದಲಾಗಿತ್ತು. ನೀರಿಗೆ ಬಿದ್ದ ತಕ್ಷಣ ತಾನು ಬದುಕಬೇಕು ಎಂದೆನಿಸಿತ್ತಂತೆ.ಹೌದು, ಇಂತದ್ದೊಂದು ಘಟನೆ ಗುವಾಹಟಿಯಿಂದ ವರದಿಯಾಗಿದ್ದು, ರಭಸದಿಂದ ಹರಿಯುತ್ತಿದ್ದ ಬ್ರಹ್ಮಪುತ್ರ ನದಿಗೆ ಲಕ್ಷ್ಮಣ್ ಸ್ವರ್ಗೀಯರಿ ಎಂಬಾತ ಧುಮುಕಿ ಆತ್ಮಹತ್ಯೆಗೆ ಮುಂದಾಗಿದ್ದ. ಆದರೆ ಆತನ ಮನಸ್ಸು ಬದಲಾಯಿತು. ನದಿಯ ಪ್ರವಾಹಕ್ಕೆ ಸಿಲುಕಿದ ಈತ 10 ಗಂಟೆಗಳಲ್ಲಿ 100 ಕಿ.ಮೀ. ದೂರಕ್ಕೆ ಸುರಕ್ಷಿತವಾಗಿ ತಲುಪಿದ್ದಾನೆ. ಬಕ್ಸಾ ಜಿಲ್ಲೆಯ…
ಕನ್ನಡದ ಪ್ರಸಿದ್ದ ನಟರೊಬ್ಬರನ್ನ ಹತ್ಯೆ ಮಾಡಲು ಸಂಚು ರೂಪಿಸಿದ್ದ ನಾಲ್ವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಶೇಷಾದ್ರಿಪುರಂನ ನಿತೇಶ್, ನಿತ್ಯಾನಂದ, ವಿಜಯನಗರದ ಮಧು ಹಾಗೂ ಪಿಜಿಹಳ್ಳಿಯ ಪೃಥ್ವಿ ಬಂಧಿತ ಆರೋಪಿಗಳು. ಸಿಸಿಬಿ ಪೊಲೀಸರು ಶೇಷಾದ್ರಿಪುರಂ ಠಾಣೆಯ ಬಿಡಿಎ ಕಚೇರಿ ಬಳಿ ಆರೋಪಿಗಳನ್ನ ಬಂಧಿಸಿದ್ದಾರೆ, ಮಾರ್ಚ್ 7 ರಂದು ಎಸಿಪಿ ಬಾಲರಾಜ್ ನೇತೃತ್ವದಲ್ಲಿ ಸಿಸಿಬಿ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದರು. ಬಂಧಿತ ನಾಲ್ವರ ಬಳಿಯೂ ಲಾಂಗು ಮತ್ತು ಡ್ರಾಗರ್ ಸೇರಿ ಮಾರಕಾಸ್ತ್ರಗಳು ಪತ್ತೆಯಾಗಿವೆ. ಸಿಸಿಬಿ ದಾಳಿ ವೇಳೆ ಐದು ಮಂದಿ…
ಸಿಕ್ಕಿಂ ಸಮೀಪದ ಡೋಕ್ಲಾಮ್ ನಲ್ಲಿ ಭಾರತ ಮಾಡಿರುವುದು ಅತಿಕ್ರಮಣವಾಗಿದ್ದು, ಹೀಗಾಗಿ ಡೋಕ್ಲಾಮ್ ಪ್ರದೇಶದಿಂದ ನಿಮ್ಮ ಸೇನೆಯನ್ನು ಹಿಂತೆಗೆದುಕೊಳ್ಳಿ ಇಲ್ಲದಿದ್ದರೆ ನಿಮ್ಮ ಸೈನಿಕರು ಸೆರೆಯಾಗುತ್ತೀರಿ ಅಥವಾ ಸಾಯುತ್ತೀರಿ’ ಎಂದು ಚೀನಾ ಬೆದರಿಕೆ ಹಾಕಿದೆ.
ಪ್ರತಿಯೊಬ್ಬರ ಪರ್ಸ್ ನಲ್ಲಿಯೂ ನಾಣ್ಯಗಳು ಇದ್ದೇ ಇರುತ್ವೆ. ಕೆಲವರ ಪರ್ಸ್ ನಲ್ಲಿ 10 ರೂಪಾಯಿ ನಾಣ್ಯವಿದ್ರೆ ಇನ್ನು ಕೆಲವರ ಪರ್ಸ್ ನಲ್ಲಿ 2 ರೂಪಾಯಿ, ಒಂದು ರೂಪಾಯಿ ನಾಣ್ಯವಿರುತ್ತದೆ. ಶಾಸ್ತ್ರದ ಪ್ರಕಾರ, ರಾಶಿಗನುಗುಣವಾಗಿ ನಾಣ್ಯವನ್ನು ಪರ್ಸಿನಲ್ಲಿಟ್ಟರೆ ಶುಭಕರ. ಪ್ರತಿಯೊಂದು ರಾಶಿಗೂ ಬೇರೆ ಬೇರೆ ಲೋಹ ಶುಭ ಫಲ ನೀಡುತ್ತವೆ. ಹಾಗಾಗಿ ರಾಶಿಗನುಗುಣವಾಗಿ ಲೋಹದ ನಾಣ್ಯಗಳನ್ನು ಪರ್ಸಿನಲ್ಲಿ ಇಟ್ಟುಕೊಂಡರೆ ಎಂದೂ ಪರ್ಸ್ ಖಾಲಿಯಾಗುವುದಿಲ್ಲ. ಮೇಷ : ಈ ರಾಶಿಯವರು ಪರ್ಸ್ ನಲ್ಲಿ ತಾಮ್ರದ ನಾಣ್ಯವನ್ನು ಇಟ್ಟುಕೊಳ್ಳಬೇಕು. ವೃಷಭ : ಈ ರಾಶಿಯವರು…