ಉಪಯುಕ್ತ ಮಾಹಿತಿ

ಮಹಾಲಯ ಅಮಾವಾಸ್ಯೆ ಕಳೆದು ಒಂದು ತಿಂಗಳ ನಂತರ ದಸರಾ ಯಾಕೆ ಬರುತ್ತಿದೆ !

30

ಭಾರತೀಯ ಪ್ರಜೆಗಳಲ್ಲಿ ಬಹು ಸಂಖ್ಯಾತರು ಎನಿಸಿಕೊಂಡ ಹಿಂದೂ ಧರ್ಮೀಯರು ಪ್ರತೀ ಮಾಸದಲ್ಲಿ ಯಾವುದಾದರು ಎಳೆಯಲ್ಲಿ ಧಾರ್ಮಿಕ ಹಬ್ಬವನ್ನು ಆಚರಣೆ ಮಾಡುವುದು ಸಂಪ್ರದಾಯ ಮತ್ತು ಇದನ್ನು ಮೈಗೂಡಿಸಿಕೊಂಡು ಬಂದಿದ್ದಾರೆ ಕೂಡ.
ಸಾಮಾನ್ಯವಾಗಿ ಎಲ್ಲಾ ಜನಾಂಗದವರು ಆಚರಿಸುವ ಪಿತೃಪಕ್ಷ ಮಹಾಲಯ ಅಮಾವಾಸ್ಯೆ ಮುಗಿದ ತಕ್ಷಣ ನವರಾತ್ರಿ ಆರಂಭವಾಗಿ ಹತ್ತನೇಯ ದಿನ ದಸರಾ ಆಚರಣೆ ಮಾಡುವುದು ನಿಯಮವಾಗಿದೆ.
ಆದರೆ ಈ ವರ್ಷ ಅಶ್ವಿಜ ಮಾಸ ಅಧಿಕ ಬಂದಿರುವುದರಿಂದ ಅಂದರೆ ನಿಜ ಅಶ್ವಿಜ, ಅಧಿಕ ಅಶ್ವಿಜ ಎಂದು ಎರಡು ಮಾಸಗಳು ಬಂದಿರುವುದರಿಂದ ದಸರಾ ಹಬ್ಬ ಮಹಾಲಯ ಅಮಾವಾಸ್ಯೆ ಕಳೆದ ಒಂದು ತಿಂಗಳ ನಂತರ ಬರುತ್ತದೆ. ಈ ಬಗ್ಗೆ ಹಲವರಲ್ಲಿ ಗೊಂದಲವಿದೆ.


ನಾವು ಹಬ್ಬ ಆಚರಣೆ ಮಾಡುವುದು ಹಾಗೂ ರಾಶಿ ನಕ್ಷತ್ರಗಳನ್ನು ನೋಡುವುದು ಕೇವಲ ಪರಂಪರೆ ಎಂದು ತಿಳಿದು ಆಚರಣೆ ಮಾಡುವುದಕ್ಕಿಂತ ವೈಜ್ಞಾನಿಕವಾಗಿಯು ತಿಳಿದುಕೊಳ್ಳಬೇಕಾಗುತ್ತದೆ. ನಕ್ಷತ್ರ ರಾಶಿ ಹಾಗೂ ಪಂಚಾಂಗಗಳು ಏನು ಎನ್ನುವುದನ್ನು ವಿಚಾರಿಸಿ ತಿಳಿದುಕೊಂಡು ನಮ್ಮ ಗೊಂದಲವನ್ನು ನಾವೇ ನಿವಾರಣೆ ಮಾಡಿಕೊಳ್ಳಬಹುದು. ಸಂವತ್ಸರಗಳನ್ನು ಸೂರ್ಯ, ಚಂದ್ರರ ಚಲನ ವಲನದಿಂದ ಲೆಕ್ಕ ಹಾಕಿ ಸೌರಮಾನ ಹಾಗೂ ಚಂದ್ರಮಾನ ಎನ್ನುವ ಮಾನದಂಡದಿಂದ ನಿರ್ಣಯಿಸಲಾಗುತ್ತದೆ.


ಸೂರ್ಯನಿಗೆ ಮೇಷ, ವೃಷಭ ಎಂಬ ರಾಶಿ ಚಕ್ರವನ್ನು ಒಂದು ಸುತ್ತು ಸುತ್ತಲು 30 ತಿಂಗಳು 14 ದಿವಸ ಬೇಕು. ಅದೇ ಸೂರ್ಯನಿಗೆ ಒಂದು ವರ್ಷ ಅಂದರೆ ಚೈತ್ರ, ವೈಶಾಖ ದಿಂದ ಮೀನ ಮಾಸ ಎಂಬ ಋತು ಚಕ್ರವನ್ನು ಸುತ್ತಲು 365.25 ಘಳಿಗೆ ಬೇಕಾಗುತ್ತದೆ. ಇದಕ್ಕೆ ಸೌರಮಾನ ಎಂದು ಕರೆಯುತ್ತಾರೆ. ಅದೇ ಚಂದ್ರನಿಗೆ 354 ದಿನಗಳು ಬೇಕಾಗುತ್ತದೆ. ಇದಕ್ಕೆ ಚಂದ್ರಮಾನ ಎಂದು ಕರೆಯುತ್ತಾರೆ.
ಸೂರ್ಯನಿಗೂ, ಚಂದ್ರನಿಗೂ ಒಂದು ವರ್ಷ ಮುಗಿಸಬೇಕಾದರೆ ಪ್ರತಿ ವರ್ಷವು 11 ದಿನ ವ್ಯತ್ಯಾಸಗಳು ಬಂದು ಆ ದಿನಗಳು ಪ್ರತಿ ವರ್ಷವು ಬಾಕಿಯಾಗಿ 3 ವರ್ಷಕ್ಕೊಮ್ಮೆ ಆ 11 ದಿನಗಳನ್ನು ಸೇರಿಸಿ ಒಂದು ಆಧಿಕ ಮಾಸ ಎಂದು ಮಾಡುತ್ತಾರೆ. ಹೀಗೆ ಬೇರೆ ಬೇರೆ ಧರ್ಮದವರು ಹಾಗೂ ಬೇರೆ ಬೇರೆ ದಿನ ಮಾಸಗಳನ್ನು ನಿರ್ಣಯಿಸುವವರು ಇಂಗ್ಲಿಷ್ ಕ್ಯಾಲೆಂಡರ್‍ಗಳನ್ನು 30-31 ಹಾಗೂ ಫೆಬ್ರವರಿ 28-29 ದಿನಾಂಕಗಳನ್ನು ಹೆಚ್ಚುವರಿ ಹಾಕಿ ಸಮದೂಗಿಸುತ್ತಾರೆ. ಹಾಗೆಯೇ ಬೇರೆ ಬೇರೆ ಧರ್ಮದ ಕ್ಯಾಲೆಂಡರ್‍ಗಳಲ್ಲಿ ಕೂಡ ಹೀಗೆ ಸರಿದೂಗಿಸಲಾಗುತ್ತದೆ.
ಅದೇ ಪ್ರಕಾರ ಪ್ರತಿ ಮೂರು ವರ್ಷಕೊಮ್ಮೆ ಬೇರೆ ಬೇರೆ ತಿಂಗಳುಗಳು ಅಧಿಕ ಮಾಸ ಎಂದು ಬರುತ್ತದೆ. ಆದ್ದರಿಂದ ಯಾರೂ ಗೊಂದಲಕ್ಕೆ ಒಳಗಾಗುವ ಅಗತ್ಯವಿಲ್ಲ.
ಪ್ರತಿವರ್ಷ ಮಹಾಲಯ ಅಮಾವಾಸ್ಯೆ ಆಚರಣೆ ಮಾಡುವವರು ಸೆ.17 ರಂದು ಆಚರಿಸಬಹುದು. ನವರಾತ್ರಿ ಹಾಗೂ ದಸರಾ ಆಚರಣೆ ಮಾಡುವವರು ಮುಂದಿನ ಅಮವಾಸ್ಯೆ ಕಳೆದ ಮೇಲೆ ಆಚರಣೆ ಮಾಡಬೇಕು. ಈ ಮಧ್ಯದ ಅಧಿಕ ಮಾಸದಲ್ಲಿ ಶುಭಕಾರ್ಯಗಳನ್ನು ಅಂದರೆ ಮದುವೆ, ಗೃಹ ಪ್ರವೇಶ, ಮಂಗಳ ಕಾರ್ಯಗಳನ್ನು ಆಚರಿಸುವಂತಿಲ್ಲ.


ದೇವತಾ ಆರಾಧನೆ, ವ್ರತÀ, ದಾನ, ಧರ್ಮ ಮತ್ತು ಪೂರ್ವ ನಿಯೋಜಿತ ಅಂದರೆ ಸೀಮಂತಾದಿಗಳನ್ನು ನಡೆಸಬಹುದು. ಹೀಗೆ ಎಲ್ಲವು ಕೂಡ ಹಿಂದಿನ ಋಷಿ ಮುನಿಗಳು ತಮ್ಮ ಸ್ವಯಂ ಆಚರಣೆಯಿಂದ ಸಂತುಷ್ಟಿ ಜೀವನವನ್ನು ಕಂಡಿರುವುದರಿಂದ ಮುಂದಿನ ಪೀಳಿಗೆಗೆ ಮಾರ್ಗದರ್ಶನವಾಗಿ ಇಂತಹ ಧರ್ಮ ವಿಚಾರವನ್ನು ಗ್ರಂಥವಾಗಿ ಬರೆದಿಟ್ಟಿದ್ದಾರೆ.
ಆದ್ದರಿಂದ ಜೋತಿಷ್ಯ ಶಾಸ್ತ್ರವು ಅಂದರೆ ಈಗಿನ (ಆಷ್ಟ್ರಾಲಜಿ) ಸುಳ್ಳಲ್ಲ. ಅದೇ ಜ್ಯೋತಿಷ್ಯ ಹೇಳುವವನು (ಅಸ್ಟ್ರಾಲಜಿಕ್) ಗೊತ್ತಿಲ್ಲದೆ ಸುಳ್ಳು ಹೇಳಬಹುದು. ಆದರೆ ಜ್ಯೋತಿಷ್ಯವೇ ಸುಳ್ಳು ಎಂದು ಪರಿಗಣಿಸಲು ಸಾಧ್ಯವಿಲ್ಲ. ಈ ಬರುವ ಮಹಾಲಯ ಅಮಾವಾಸ್ಯೆ ಕಳೆದ ಒಂದು ತಿಂಗಳ ನಂತರ ಎಂದು ಅವರವರ ವರ್ಗದ ಹಾಗೂ ಕುಟುಂಬದ ನಿಯಮಾನುಸಾರ ಹಿರಿಯರಿಗೆ (ಮರಣ ಹೊಂದಿದ ಪಿತೃಗಳಿಗೆ) ತೃಪ್ತಿಯಾಗಲೆಂದು ಪಿಂಡ ಪ್ರಧಾನ ತಿಲತರ್ಪಣ ಗೋಗ್ರಾಸ ಅಂದರೆ ಗೋವಿನ ಅನ್ನನೀಡುವುದು, ಗೋವು ಪೂಜೆಯನ್ನು ಮಾಡುವುದು, ಕಾಗೆಗಳಿಗೆ ಭಕ್ಷ ಸಿದ್ಧ ಪಡಿಸಿ ಬಡಿಸುವುದು ಹಾಗೂ ಪಿತೃಗಳ ಸಂತುಷ್ಟಿಗೆಂದು ದಾನ ಧರ್ಮಾಧಿಗಳನ್ನು ಮಾಡಿ ಪುಣ್ಯ ಸಂಪಾದನೆಗೆ ಮಾರ್ಗವಿದೆ.
ಅದರಿಂದ ಸಂತೃಪ್ತಿ ಮತ್ತು ಮನ:ಶಾಂತಿಯನ್ನು ಕಂಡುಕೊಳ್ಳಬಹುದು ಮತ್ತು ದಸರಾ ಹಬ್ಬ ಆಚರಣೆಯಲ್ಲಿ ಯಾವುದೇ ಗೊಂದಲಗಳು ಬೇಡ. ಸರ್ವೇ ಜನೋ ಸುಖಿನೋ ಭವಂತು.

ಡಾ.ಮಹಾಭಲೇಶ್ವರ ಭಟ್,

source whatsapp

About the author / 

Chethan Mardalu

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ರಾತ್ರಿ ಉಳಿದ ಅನ್ನ ಸೇವಿಸಿ ‘ಆರೋಗ್ಯ’ ಕಾಪಾಡಿಕೊಳ್ಳಿ..!

    ಅನೇಕ ಬಾರಿ ರಾತ್ರಿ ಮಾಡಿದ ಅನ್ನ ಹಾಗೆ ಉಳಿದು ಬಿಡುತ್ತದೆ. ಈ ಅನ್ನವನ್ನು ಮರು ದಿನ ತಿನ್ನಲು ಸಾಮಾನ್ಯವಾಗಿ ಯಾರೂ ಇಷ್ಟ ಪಡುವುದಿಲ್ಲ. ಕೆಲವರು ಅದನ್ನು ಕಸಕ್ಕೆ ಹಾಕಿದ್ರೆ ಮತ್ತೆ ಕೆಲವರು ಪ್ರಾಣಿಗಳಿಗೆ ನೀಡುತ್ತಾರೆ. ಆದ್ರೆ ಇನ್ನು ಮುಂದೆ ಮಿಕ್ಕ ಅನ್ನವನ್ನು ಕಸಕ್ಕೆ ಹಾಕಬೇಡಿ. ಅದು ಆರೋಗ್ಯದ ಸಂಪತ್ತು ಎಂಬುದನ್ನು ನೆನಪಿಡಿ. ರಾತ್ರಿ ಅನ್ನ ಮಿಕ್ಕಿದ್ದರೆ, ಅದನ್ನು ಒಂದು ಮಡಿಕೆಯಲ್ಲಿ ಹಾಗೆ ಇಡಿ. ಬೆಳಿಗ್ಗೆ ಅದಕ್ಕೆ ಈರುಳ್ಳಿ ಸೇರಿಸಿ ತಿನ್ನಿರಿ. ಇದು ನಿಮ್ಮ ನೆಚ್ಚಿನ ಉಪಹಾರವಾಗದಿರಬಹುದು. ಆದ್ರೆ…

  • ಜ್ಯೋತಿಷ್ಯ

    ಶಿವ ಪರಮೇಶ್ವರನನ್ನು ನೆನೆಯುತ್ತ. ಈ ದಿನದ ನಿಮ್ಮ ರಾಶಿಯ ಶುಭ ಫಲಗಳನ್ನು ತಿಳಿಯಿರಿ.

    ಪಂಡಿತ್ ರಾಘವೇಂದ್ರ ಸಾಮ್ವಿ ಗಳು ಶ್ರೀ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಅರ್ಚಕರು ಮಾಂತ್ರಿಕರು 9901077772 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ(ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ವ್ಯಾಪಾರ ಮಕ್ಕಳು)9901077772 call/ what ಮೇಷ ನಿಮ್ಮ ಮುಖದಲ್ಲಿ…

  • ಉಪಯುಕ್ತ ಮಾಹಿತಿ

    ಮನೆಯಲ್ಲಿ ಗ್ಯಾಸ್‌ ಸಿಲಿಂಡರ್‌ ಬಳಸುತ್ತೀರಾ.? ಹಾಗಾದರೆ ಇದನೊಮ್ಮೆ ಇಗಲೇ ತಿಳಿದುಕೊಳ್ಳಿ.!

    ನಿಮ್ಮ ಕುಟುಂಬದ ಸದಸ್ಯರ ಸುರಕ್ಷತೆಯ ಬಗ್ಗೆ ಯೋಚಿಸಿದ್ದೀರಾ ? ನಿಮ್ಮ ಮನೆಯಲ್ಲಿ , ನಿಮ್ಮ ಅಮ್ಮ , ಅಕ್ಕ, ಹೆಂಡತಿ ಅಡುಗೆಮನೆಯಲ್ಲಿ ವರ್ಷದ 365 ದಿನಗಳು ಬಿಡುವಿಲ್ಲದೆ ಕೆಲಸ ಮಾಡುತ್ತಾರೆ. ಅಡುಗೆಮನೆಯಲ್ಲಿ ಗ್ಯಾಸ್ ಸಿಲಿಂಡರ ಲೀಕ್ ನಿಂದ ಆಗುವ ಭಾರಿ ದುರಂತವನ್ನು ನಾವುಗಳು ಪೇಪರಿನಲ್ಲಿ, ನ್ಯೂಸ್ ಚಾನೆಲ್ಸ್ ಗಳಲ್ಲಿ ನೋಡ್ತಾ ಇರುತೇವೆ , ಆದರೆ ಗ್ಯಾಸ್ ಲೀಕ್ , ಅಥವಾ ಸ್ಪೋಟದಿಂದ ಆಗುವ ಅನಾಹುತ ಭಾರಿ ದೊಡ್ಡದು, ಅದರಿಂದ ನಮ್ಮ ಕುಟುಂಭದ ರಕ್ಷಣೆ ಕೊಡ ನಮ್ಮ ದೊಡ್ಡ…

  • ಕರ್ನಾಟಕ

    ರೈತರ ಸಾಲ ಮನ್ನಾ ಮಾಡಿ, ಮೋದಿಗೆ ಸವಾಲ್ ಹಾಕಿದ ಸಿದ್ದರಾಮಯ್ಯ!!!

    ಬಿಜೆಪಿ ಆಡಳಿತ ಸರ್ಕಾರವಿರುವ ಉತ್ತರಪ್ರದೇಶ, ಮಹಾರಾಷ್ಟ್ರದಲ್ಲಿ ರೈತರ ಸಾಲಮನ್ನಾ, ಹಾಗೂ ಕಾಂಗ್ರೆಸ್ ಆಡಳಿತದ ಪಂಜಾಬ್ ನಲ್ಲಿಯೂ ರೈತರ ಸಾಲ ಮನ್ನಾ ಘೋಷಣೆಯಾದ ನಂತರ ಕರ್ನಾಟಕದಲ್ಲಿಯೂ ರೈತರ ಸಾಲ ಮನ್ನಾ ಮಾಡಬೇಕೆಂದು ಪ್ರತಿಪಕ್ಷಗಳು ತೀವ್ರವಾಗಿ ಆಗ್ರಹಿಸಿದ್ದವು.

  • ಆಧ್ಯಾತ್ಮ

    ಮಹಾಲಕ್ಷ್ಮಿಯ ಹದಿನೆಂಟು ಪುತ್ರರ ಹೆಸರುಗಳು.

    ದೇವಸಖ – ಓಂ ದೇವಸಖಾಯ ನಮಃ, ಚಿಕ್ಲೀತ – ಓಂ ಚಿಕ್ಲೀತಾಯ ನಮಃ, ಆನಂದ – ಓಂ ಆನಂದಾಯ ನಮಃ ಕರ್ದಮ – ಓಂ ಕರ್ದಮಾಯ ನಮಃ , ಶ್ರೀಪ್ರದ – ಓಂ ಶ್ರೀಪ್ರದಾಯ ನಮಃ, ಜಾತವೇದ – ಓಂ ಜಾತವೇದಾಯ ನಮಃ, ಅನುರಾಗ – ಓಂ ಅನುರಾಗಾಯ ನಮಃ, ಸಂವಾದ – ಓಂ ಸಂವಾದಾಯ ನಮಃ, ವಿಜಯ – ಓಂ ವಿಜಯಾಯ ನಮಃ, ವಲ್ಲಭ – ಓಂ ವಲ್ಲಭಾಯ ನಮಃ, ಮದ – ಓಂ ಮದಾಯ…

  • ಜ್ಯೋತಿಷ್ಯ, ಭವಿಷ್ಯ

    ದಿನ ಭವಿಷ್ಯ ಶನಿವಾರ, ಈ ದಿನದ ರಾಶಿ ಭವಿಷ್ಯದ ಜೊತೆಗೆ ನಿಮ್ಮ ಅದೃಷ್ಟದ ಸಂಖ್ಯೆ ಯಾವುದೆಂದು ತಿಳಿಯಿರಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಆಧ್ಯಾತ್ಮಿಕಚಿಂತಕರು 9663218892ನಿಮ್ಮ ಜೀವನದ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಿಕ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಹಾಗೂ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 9663218892 ಮೇಷ(5 ಜನವರಿ, 2019) ನಿಮ್ಮಲ್ಲಿ ಸಾಮರ್ಥ್ಯದ ಕೊರತೆಯಿರದೇ ಇಚ್ಛಾಶಕ್ತಿಯ ಕೊರತೆಯಿದೆಯೆಂದು ನೀವು ಅರ್ಥಮಾಡಿಕೊಳ್ಳಬೇಕು….