Place

ಕೇದಾರನಾಥ ದೇವಾಲಯ

57

ಹಿಂದುಗಳು ನಡೆದುಕೊಳ್ಳುವ ಪವಿತ್ರ ನಾಲ್ಕು ಧಾಮಗಳ ಯಾತ್ರೆಯಲ್ಲಿ ಕೇದಾರನಾಥವೂ ಸಹ ಒಂದು, ಅಲ್ಲದೆ, ಸಮುದ್ರ ಮಟ್ಟದಿಂದ ಅತಿ ಎತ್ತರದಲ್ಲಿ ನೆಲೆಸಿರುವ ದೇವಾಲಯವೂ ಸಹ ಇದೆ. ಮೂಲತಃ ಈ ದೇವಾಲಯವು ಪಾಂಡವರಿಂದ ನಿರ್ಮಿಸಲಾಗಿದೆ ಎನ್ನುತ್ತಾರಾದರೂ ಪ್ರಸ್ತುತ ರಚನೆಯು ಆದಿ ಗುರು ಶಂಕರಾಚಾರ್ಯರಿಂದ ನಿರ್ಮಿಸಲ್ಪಟ್ಟಿದೆ ಎನ್ನಲಾಗುತ್ತದೆ.



ಪ್ರಾಯಶ: ಕೇದಾರನಾಥ ತಲುಪುವುದು ಬಹುತೇಕರಿಗೆ ಬಲು ಕಷ್ಟಕರವಾಗಿದೆ. ಏಕೆಂದರೆ ಇಲ್ಲಿರುವ ವಿಪರೀತ ಹವಾಮಾನ. ಒಮ್ಮೊಮ್ಮೆ ಮೇಘಗಳ ಸ್ಫೋಟವಾಯಿತೆಂದರೆ ಸಾಕಷ್ಟಿ ನೀರು ಹಾಗೂ ಕಲ್ಲು ಬಂಡೆಗಳು ಕೇದಾರನಾಥಕ್ಕೆ ನುಗ್ಗುವುದು ಸಾಮಾನ್ಯ. ಕಳೆದ 2013 ರಲ್ಲಿ ಕೇದಾರನಾಥವು ಅತಿ ಭೀಕರವಾದ ನೆರೆಗೆ ಒಳಗಾಗಿತ್ತು.


ಕೇದಾರನಾಥ ಪಟ್ಟಣದ ಅನೇಕ ಕಟ್ಟಡಗಳು ಹಾಗೂ ಇತರೆ ರಚನೆಗಳಿಗೆ ಸಿಕ್ಕಾಪಟೆ ಹಾನಿ ಉಂಟಾದರೂ ಕೇದಾರನಾಥ ದೇವಾಲಯಕ್ಕೆ ಅಷ್ಟೊಂದು ಹೇಳಿಕೊಳ್ಳುವ ಹಾನಿಯಾಗಿರಲಿಲ್ಲ. ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ಎತ್ತರದ ಪರ್ವತದಿಂದ ಹರಿದು ಬರುತ್ತಿದ್ದ ರಭಸದ ಜಲಧಾರೆಗೆ ದೊಡ್ಡದಾದ ಬಂಡೆಯೊಂದು ಅಡ್ಡ ನಿಂತು ದೇವಾಲಯಕ್ಕೆ ಹೆಚ್ಚಿನ ಹಾನಿ ಉಂಟಾಗಿರಲಿಲ್ಲ. ಇನ್ನೊಂದು ಆಸಕ್ತಿಕರ ವಿಷಯವೆಂದರೆ ಕೆಲ ಪಂಡಿತರು ಹೇಳುವ ಪ್ರಕಾರ, ಸಾಕ್ಷಾತ್ ಶಿವನೆ ಇಲ್ಲಿ ಕೇದಾರ ಖಂಡದ ಅಧಿದೇವನಾಗಿ ನೆಲೆಸಿರುವುದರಿಂದ ಮುಂದೆಯೂ ಈ ದೇವಾಲಯಕ್ಕೆ ಯಾವ ರೀತಿಯ ಹಾನಿಯೂ ಉಂಟಾಗುವುದಿಲ್ಲವಂತೆ. 2013 ರಲ್ಲಿ ಇಲ್ಲಿ ಪ್ರವಾಹ ಜರುಗಿದ ನಂತರ ಸಾಕಷ್ಟು ಹಾನಿಯುಂಟಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ಜನರು ಅಸು ನಿಗಿದ್ದರು. ಹೀಗಾಗಿ ದೇವಾಲಯ ಮರು ನಿರ್ಮಾಣದ ಕೂಗೆದ್ದಿತ್ತು.

ಆದರೆ ಶಸ್ತ್ರಜ್ಞರು, ಪಂಡಿತರು, ವಿದ್ವಾಂಸರು ಹೇಳುವಂತೆ ಇಲ್ಲಿ ಈಗಾಗಲೆ ಸಾಕಷ್ಟು ದೇಹಗಳು ಭೂಮಿಯಲ್ಲಿ ಹಾಗೆಯೆ ಹೂತು ಹೋಗಿರುವುದರಿಂದ ನಕಾರಾತ್ಮಕ ಶಕ್ತಿಯು ಸಾಕಷ್ಟಿದ್ದು ಮೊದಲು ಪ್ರತಿ ಕಳೆಬರವನ್ನು ತೆಗೆದು ನಂತರ ಸ್ಥಳವನ್ನು ಶುದ್ಧಗೊಳಿಸಿ ನಂತರ 12 ಜ್ಯೋತಿರ್ಲಿಂಗಗಳ ಪೈಕಿ ಒಂದಾದ ಈ ದೇವಾಲಯದ ಮರು ನಿರ್ಮಾಣದ ಕಾರ್ಯ ಕೈಗೊಳ್ಳಬೇಕೆನ್ನುವುದು ಅವರ ಅಭಿಪ್ರಾಯವಾಗಿದೆ. ಭಕ್ತರ ಭಕ್ತಿ ಪರೀಕ್ಷಿಸುವ ಅಮರನಾಥ ಇನ್ನು ಈ ಸ್ಥಳಕ್ಕೆ ಸಂಬಂಧಿಸಿದಂತೆ ಕಥೆ ಏನೆಂದರೆ, ಹಿಂದೆ ಪಾಂಡವರು ಕುರುಕ್ಷೇತ್ರದ ಯುದ್ಧದ ನಂತರ ಶಿವನನ್ನು ದರ್ಶಿಸಿ ತಮ್ಮ ಮೇಲೆ ಬಂದೊದಗಿರುವ ಹತ್ಯಾ ಪಾಪಗಳಿಂದ ಮುಕ್ತರಾಗಬೇಕೆಂದು ಬಯಸಿದ್ದರು ಹಾಗೂ ಆ ಕಾರ್ಯದ ನಿಮಿತ್ತ ಕಾಶಿಗೆ ತೆರಳಿದ್ದರು. ಇದನ್ನರಿತ ಶಿವ ಅವರಿಗೆ ಕಾಣದ ಎತ್ತಿನ ವೇಶದಲ್ಲಿ ಉತ್ತರಾಖಂಡದ ಸ್ಥಳಕ್ಕೆ ತೆರಳಿದ್ದ.



ಈ ವಿಷಯ ತಿಳಿದುಕೊಂಡ ಪಾಂಡವರು ತಮ್ಮ ಪ್ರಯತ್ನ ಬಿಡದೆ ಉತ್ತರಾಖಂದ ಆ ಸ್ಥಳಕ್ಕೆ ತೆರಳಿ ಕಾಶಿಯಿಂದ ಬಂದ ಮಾರು ವೇಶದ ಶಿವನನ್ನು ಎತ್ತಿನ ರುಪದಲ್ಲಿರುವುದನ್ನು ಗಮನಿಸಿದರು. ಹೀಗೆ ಈ ಎತ್ತು ಕಂಡ ಸ್ಥಳವು ಗುಪ್ತಕಾಶಿಯಾಯಿತು. ನಂತರ ಅವರು ಶಿವನನ್ನು ಮೆಚ್ಚಿಸಿ ಅವನ ಆಶೀರ್ವಾದ ಪಡೆದು ಮೋಕ್ಷ ಹೊಂದಿದರು. ಇದಕ್ಕೆ ಸಂಕೇತವಾಗಿಯೆ ಇಲ್ಲಿ ತ್ರಿಕೋನಾಕಾರದ ಶಿವಲಿಂಗನನ್ನು ಕೇದಾರನಾಥನಾಗಿ ಪೂಜಿಸಲಾಗುತ್ತದೆ. ಈ ಸ್ಥಳದ ಮಹಿಮೆಯೆಂದರೆ ಯಾರು ಈ ಶಿವನನ್ನು ಭಕ್ತಿಯಿಂದ ಪೂಜಿಸುವರೊ ಅವರ ಎಲ್ಲ ಕರ್ಮಗಳು ಬಿಳುಚಿಕೊಂಡು ನಂತರ ಅವರು ತೀರಿ ಹೋದ ಮೇಲೆ ಕೈಲಾಸವನ್ನು ಸೇರುತ್ತಾರೆಂಬ ಪ್ರತೀತಿಯಿದೆ.


ಕೇದಾರನಾಥಕ್ಕೆ ಏಪ್ರಿಲ್ ನಿಂದ ಸೆಪ್ಟಂಬರ್ ವರೆಗಿನ ಸಮಯ ಅನುಕೂಲ ಎನ್ನಬಹುದು. ಆದರೂ ಮಳೆಯ ಮುನ್ಸೂಚನೆಗಳನ್ನು ಆಧರಿಸಿ ಪ್ರವಾಸ ಯೋಜಿಸಿದರೆ ಉತ್ತಮ. ಮಂದಾಕಿನಿ ತಟದಲ್ಲಿರುವ ಕೇದಾರನಾಥಿಗೆ ರಸ್ತೆ ಮಾರ್ಗದಿಂದ ಹೋಗಬಹುದಾದರೂ ಕೊನೆಯ 14 ಕಿ.ಮೀ ಚಾರಣದ ಮೂಲಕವೆ ಪ್ರವೇಶಿಸಬೇಕು. ಏಕೆಂದರೆ ಅಷ್ಟೊಂದು ಕಠೋರವಾಗಿದೆ ಇಲ್ಲಿನ ಭೂಪ್ರದೇಶಗಳು. ಉತ್ತರಾಖಂಡದ ಪ್ರಭಾವಶಾಲಿ ದೇವಾಲಯಗಳು ಮುಂದೆ ಚಳಿಗಾಲದ ಸಮಯದಲ್ಲಿ ಇಲ್ಲಿ ವಿಪರಿತವಾದ ಹವಾಮಾನವಿರುತ್ತದೆ. ಎಲ್ಲ ಸ್ಥಳಗಳು ಮಂಜುಗಟ್ಟಿರುತ್ತವೆ ಹಾಗೂ ಈ ಸಂದರ್ಭದಲ್ಲಿ ಯಾವುದೆ ರಸ್ತೆ ಮಾರ್ಗಗಳು ಗೋಚರಿಸುವುದಿಲ್ಲ. ಈ ಆರು ತಿಂಗಳುಗಳ ಕಾಲ ಕೇದಾರನಥ ದೇವಾಲಯದಲ್ಲಿರುವ ಎಲ್ಲ ವಿಗ್ರಹಗಳನ್ನು ಉಖಿಮಠದಲ್ಲಿ ತಂದಿರಿಸಿ ಪೂಜಿಸಲಾಗುತ್ತದೆ.


About the author / 

Chethan Mardalu

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    36 ಗಂಟೆಯಲ್ಲಿ ದುಬೈ ತೋರಿಸುವ ಹೊಸ ಸ್ಟಾಪ್‍ಓವರ್ ಪಾಸ್…!

    ಬೆಂಗಳೂರು, : ದುಬೈನ ಪ್ರವಾಸೋದ್ಯಮಮತ್ತು ವಾಣಿಜ್ಯ ಮಾರುಕಟ್ಟೆ (ದುಬೈ ಟೂರಿಸಂ) ತನ್ನ ದೇಶದ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವನಿಟ್ಟಿನಲ್ಲಿ ಹೊಸ ಯೋಜನೆಯಾದ ದುಬೈ ಸ್ಟಾಪ್‍ಓವರ್ ಪಾಸ್ ಅನ್ನು ಪ್ರಕಟಿಸಿದೆ. ಇದು ವಿಶೇಷವಾಗಿ ದುಬೈನಲ್ಲಿಕಡಿಮೆ ಅವಧಿವರೆಗೆ ಭೇಟಿ ನೀಡಲಿರುವ ಪ್ರವಾಸಿಗರನ್ನು ಗಮನದಲ್ಲಿಟ್ಟುಕೊಂಡು ರೂಪಿಸಿರುವ ಯೋಜನೆಯಾಗಿದೆ.ಅಲ್ಲಿನ ಆಕರ್ಷಕ ತಾಣಗಳನ್ನು ಕಡಿಮೆ ದರದಲ್ಲಿ ವೀಕ್ಷಿಸಿ ಕಣ್ತುಂಬಿಕೊಳ್ಳುವ ಯೋಜನೆ ಇದು. ಅರೇಬಿಯನ್ಟ್ರಾವೆಲ್ ಮಾರ್ಕೆಟ್ 2019 (ಎಟಿಎಂ)ನಲ್ಲಿ ಈ ಹೊಸ ಯೋಜನೆಯನ್ನು ಪ್ರಕಟಿಸಲಾಗಿದೆ. ದುಬೈ ಸ್ಟಾಪ್‍ಓವರ್ ಪಾಸ್ ಪ್ರವಾಸಿಗರಿಗೆ ಸಮಯ ಮತ್ತು ಹಣವನ್ನು ಉಳಿತಾಯ ಮಾಡಲಿದೆ.ಈ ಮೂಲಕ…

  • ವ್ಯಕ್ತಿ ವಿಶೇಷಣ

    ಈ 10 ಗುಣಗಳು ನಿಮ್ಮಲ್ಲಿದ್ರೆ ಜನರು ನಿಮ್ಮನು ಅಪರೂಪದ ವ್ಯಕ್ತಿ ಎಂದು ಕಾಣುತ್ತಾರೆ ..!ತಿಳಿಯಲು ಈ ಲೇಖನ ಓದಿ…

    ನಿಮಗೆ ನೀವು ಬೇರೆಯವರಿಗಿಂತ ವಿಭಿನ್ನ ಅಂತ ಅನಿಸುತ್ತೀರಾ? ನಿಮ್ಮನ್ನ ಅರ್ಥ ಮಾಡಿಕೊಳ್ಳೋರು ಯಾರು ಇಲ್ಲ ಅನ್ನಿಸುತ್ತಾ?
    ಕಾರ್ಲ್ ಜಂಕ್ ಸೈಕೋ ಅನಾಲಿಸಿಸ್ ಥಿಯರೀ ಅನುದಾರ ಮೇಯರ್ಸ್ ಅಂಡ್ ಬ್ರಿಗ್ಗರ್ಸ್ ಸಿಸ್ಟೆಮ್ ಪ್ರತಿ ಮನುಷ್ಯನನ್ನ ಬೇರೆ ಬೇರೆ ವ್ಯಕ್ತಿತ್ವದವರಾಗಿ ವಿಂಗಡಿಸಲಾಗಿದ್ಯಂತೆ.

  • inspirational

    ಮಕ್ಕಳ ತಂದೆ ತಾಯಿಯರಿಗೆ ರಾಜ್ಯ ಶಿಕ್ಷಣ ಇಲಾಖೆಯಿಂದ ಗುಡ್ ನ್ಯೂಸ್.! ಈ ಮಾಹಿತಿ ನೋಡಿ.

    ಕರ್ನಾಟಕ ರಾಜ್ಯ ಶಿಕ್ಷಣ ಇಲಾಖೆಯಿಂದ ಶಾಲೆಗೆ ಹೋಗುವ ಎಲ್ಲಾ ಮಕ್ಕಳ ಪೋಷಕರಿಗೆ ಸಿಹಿ ಸುದ್ದಿ ಬಂದಿದೆ, ಹೌದು ಸ್ನೇಹಿತರೆ ಕರ್ನಾಟಕ ರಾಜ್ಯ ಶಿಕ್ಷಣ ಇಲಾಖೆಯು ಹೊಸ ಆದೇಶವನ್ನ ಜಾರಿಗೆ ತಂದಿದ್ದು ಇದು ಶಾಲೆಗೆ ಹೋಗುವ ಎಲ್ಲಾ ಮಕ್ಕಳ ಪೋಷಕರಿಗೆ ಸಂತಸವನ್ನ ತಂದಿದೆ. ಹಾಗಾದರೆ ರಾಜ್ಯ ಶಿಕ್ಷಣ ಇಲಾಖೆಯು ಜಾರಿಗೆ ತಂದಿರುವ ಆ ಹೊಸ ನಿಯಮಗಳು ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ನಿಯಮಗಳ ಬಗ್ಗೆ ನಿಮ್ಮ ಅಭಿಪ್ರಾಯವನ್ನ…

  • ಸುದ್ದಿ

    ರಾಮ..ರಾಮ..ಮತ್ತೆ ಭಗವಾನ್ ಶ್ರೀರಾಮನ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಟ್ಟು ಭಕ್ತರ ಕೆಂಗಣ್ಣಿಗೆ ಗುರಿಯಾದ ಪ್ರೊಫೆಸರ್ ಭಗವಾನ್..!

    ತಾವು ಬುದ್ದಿವಂತರು ವಿಚಾರವಾದಿಗಳು ಅಂತ ಹೇಳಿಕೊಳ್ಳುವ ಕೆಲವರು ಹಿಂದೂ ದೇವತೆಗಳನ್ನು ಟೀಕಿಸುವುದನ್ನೇ ಕೆಲಸ ಮಾಡಿಕೊಂಡುಬಿಟ್ಟಿದ್ದಾರೆ. ಅವರಲ್ಲಿ ಒಬ್ಬರು ಪ್ರೊಫೆಸರ್ ಭಗವಾನ್. ಯಾವಾಗಲೂ ಹಿಂದೂ ದೇವತೆಗಳ ಬಗ್ಗೆ ಒಂದಲ್ಲಾ ಒಂದು ಹೇಳಿಕೆ ವಿವಾದಾತ್ಮಕ ಕೊಟ್ಟು ಸುದ್ದಿಯಾಗುವ ಇವರು ಈಗ ಮತ್ತೊಂದು ವಿವಾದದ ಸುದ್ದಿಯಲ್ಲಿದ್ದಾರೆ. ವಿಚಾರವಾದಿ ಆಗಿರುವ ಪ್ರೊಫೆಸರ್ ಭಗವಾನ್ ಮತ್ತೊಂದು ವಿವಾದಾತ್ಮಕ ಪುಸ್ತಕ ಬರೆದಿದ್ದು, ಅದರಲ್ಲಿ ರಾಮ ಒಬ್ಬ ಕುಡುಕ, ಮಾಂಸ ತಿನ್ನುತ್ತಿದ್ದನೆಂದು ಉಲ್ಲೇಖಿಸಿ, ಭಕ್ತರ ಭಾವನೆಗಳನ್ನು ಕೆರಳಿಸುವ ಮೂಲಕ ಇದೀಗ ಮತ್ತೆ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಪ್ರೊಫೆಸರ್ ಭಗವಾನ್‍ರವರು…

  • ಸುದ್ದಿ

    ಮದ್ವೆ ಆಗಲು ಏಳು ಸಮುದ್ರ ದಾಟಿ ಬಂದಳು!ಯಾವ ಲವ್ ಸ್ಟೋರಿಗೂ ಕಡಿಮೆಯಿಲ್ಲ ಇವರ ಪ್ರೀತಿ…

    ಪ್ರೀತಿ ಕುರುಡು. ಅದಕ್ಕೆ ವಯಸ್ಸು, ಜಾತಿ, ಊರಿನ ನಿರ್ಬಂಧವಿಲ್ಲ. ಏಳು ಸಮುದ್ರಗಳನ್ನು ದಾಟಿ ಬರುವ ತಾಕತ್ತು ಪ್ರೀತಿಗಿದೆ ಎನ್ನಲಾಗುತ್ತದೆ. ಈ ಮಾತು ಮಧ್ಯಪ್ರದೇಶದ ಹೋಷಂಗಾಬಾದ್ ಯುವಕನ ಪ್ರೀತಿ ವಿಚಾರದಲ್ಲಿ ನಿಜವಾಗಿದೆ. ದೀಪಕ್ ರಜಪೂತ್ ಎಂಬಾತನನ್ನು ಅಮೆರಿಕಾ ಪ್ರೇಯಸಿ ಮದುವೆಯಾಗಿದ್ದಾಳೆ. 36 ವರ್ಷದ ದೀಪಕ್ ಹಾಗೂ ಅಮೆರಿಕಾದ 40 ವರ್ಷದ ಜೂಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಜೂಲಿ, ಯುಎಸ್ಎಯ ಮಾನವ ಸಂಪನ್ಮೂಲ ಇಲಾಖೆಯಲ್ಲಿ ಕೆಲಸ ಮಾಡ್ತಿದ್ದಾಳೆ. ಫೇಸ್ಬುಕ್ ನಲ್ಲಿ ಶುರುವಾದ ಸ್ನೇಹ, ವಾಟ್ಸಾಪ್, ಕರೆ ಮೂಲಕ ಪ್ರೀತಿಗೆ ತಿರುಗಿತ್ತು….

  • ಸುದ್ದಿ

    ಜನ್ಮ ಕೊಟ್ಟಾಗ ಈ ಮಗುವಿನ ತೂಕ ಎಷ್ಟು ಎಂದು ಗೊತ್ತಾದರೆ ಅಚ್ಚರಿ ಪಡುವುದು ಗ್ಯಾರಂಟಿ,.!!

    ಸಾಮಾನ್ಯವಾಗಿ ನವಜಾತ ಶಿಶುಗಳ ತೂಕ 2.5 ಕೆಜಿಯಿಂದ 4.3 ಕೆಜಿಯೊಳಗೆ ಇರುತ್ತದೆ. ಆದರೆ, ಇಲ್ಲೊಬ್ಬಳು ತಾಯಿ ಜನ್ಮ ನೀಡಿದ ಮಗುವಿನ ತೂಕ ಸುಮಾರು 6 ಕೆಜಿ…! ಈ ಕಂದನ ತೂಕ ನೋಡಿ ಸ್ವತಃ ತಾಯಿಯೇ ಅಚ್ಚರಿಗೊಂಡಿದ್ದು, `ನಾನು ಮಿನಿ ರೆರ್ಸ್ಲೆರ್‌ಗೆ ಜನ್ಮ ನೀಡಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ. ಸಿಡ್ನಿಯ ಎಮ್ಮಾ ಮಿಲ್ಲರ್ ಮತ್ತು ಡೇನಿಯರ್ ದಂಪತಿ ಕಳೆದ ವಾರ ರೆಮಿ ಫ್ರಾನ್ಸಿಸ್ ಮಿಲ್ಲರ್‌ನನ್ನು ಮನೆಗೆ ಸ್ವಾಗತಿಸಿದ್ದರು. ಆದರೆ, ರೆಮಿ ಎಲ್ಲಾ ಚಿಣ್ಣರಂತಿಲ್ಲ. ಇವಳ ದೇಹದ ತೂಕ ಸಹಜ ಮಕ್ಕಳ…