ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಹಿಂದುಗಳು ನಡೆದುಕೊಳ್ಳುವ ಪವಿತ್ರ ನಾಲ್ಕು ಧಾಮಗಳ ಯಾತ್ರೆಯಲ್ಲಿ ಕೇದಾರನಾಥವೂ ಸಹ ಒಂದು, ಅಲ್ಲದೆ, ಸಮುದ್ರ ಮಟ್ಟದಿಂದ ಅತಿ ಎತ್ತರದಲ್ಲಿ ನೆಲೆಸಿರುವ ದೇವಾಲಯವೂ ಸಹ ಇದೆ. ಮೂಲತಃ ಈ ದೇವಾಲಯವು ಪಾಂಡವರಿಂದ ನಿರ್ಮಿಸಲಾಗಿದೆ ಎನ್ನುತ್ತಾರಾದರೂ ಪ್ರಸ್ತುತ ರಚನೆಯು ಆದಿ ಗುರು ಶಂಕರಾಚಾರ್ಯರಿಂದ ನಿರ್ಮಿಸಲ್ಪಟ್ಟಿದೆ ಎನ್ನಲಾಗುತ್ತದೆ.

ಪ್ರಾಯಶ: ಕೇದಾರನಾಥ ತಲುಪುವುದು ಬಹುತೇಕರಿಗೆ ಬಲು ಕಷ್ಟಕರವಾಗಿದೆ. ಏಕೆಂದರೆ ಇಲ್ಲಿರುವ ವಿಪರೀತ ಹವಾಮಾನ. ಒಮ್ಮೊಮ್ಮೆ ಮೇಘಗಳ ಸ್ಫೋಟವಾಯಿತೆಂದರೆ ಸಾಕಷ್ಟಿ ನೀರು ಹಾಗೂ ಕಲ್ಲು ಬಂಡೆಗಳು ಕೇದಾರನಾಥಕ್ಕೆ ನುಗ್ಗುವುದು ಸಾಮಾನ್ಯ. ಕಳೆದ 2013 ರಲ್ಲಿ ಕೇದಾರನಾಥವು ಅತಿ ಭೀಕರವಾದ ನೆರೆಗೆ ಒಳಗಾಗಿತ್ತು.

ಕೇದಾರನಾಥ ಪಟ್ಟಣದ ಅನೇಕ ಕಟ್ಟಡಗಳು ಹಾಗೂ ಇತರೆ ರಚನೆಗಳಿಗೆ ಸಿಕ್ಕಾಪಟೆ ಹಾನಿ ಉಂಟಾದರೂ ಕೇದಾರನಾಥ ದೇವಾಲಯಕ್ಕೆ ಅಷ್ಟೊಂದು ಹೇಳಿಕೊಳ್ಳುವ ಹಾನಿಯಾಗಿರಲಿಲ್ಲ. ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ಎತ್ತರದ ಪರ್ವತದಿಂದ ಹರಿದು ಬರುತ್ತಿದ್ದ ರಭಸದ ಜಲಧಾರೆಗೆ ದೊಡ್ಡದಾದ ಬಂಡೆಯೊಂದು ಅಡ್ಡ ನಿಂತು ದೇವಾಲಯಕ್ಕೆ ಹೆಚ್ಚಿನ ಹಾನಿ ಉಂಟಾಗಿರಲಿಲ್ಲ. ಇನ್ನೊಂದು ಆಸಕ್ತಿಕರ ವಿಷಯವೆಂದರೆ ಕೆಲ ಪಂಡಿತರು ಹೇಳುವ ಪ್ರಕಾರ, ಸಾಕ್ಷಾತ್ ಶಿವನೆ ಇಲ್ಲಿ ಕೇದಾರ ಖಂಡದ ಅಧಿದೇವನಾಗಿ ನೆಲೆಸಿರುವುದರಿಂದ ಮುಂದೆಯೂ ಈ ದೇವಾಲಯಕ್ಕೆ ಯಾವ ರೀತಿಯ ಹಾನಿಯೂ ಉಂಟಾಗುವುದಿಲ್ಲವಂತೆ. 2013 ರಲ್ಲಿ ಇಲ್ಲಿ ಪ್ರವಾಹ ಜರುಗಿದ ನಂತರ ಸಾಕಷ್ಟು ಹಾನಿಯುಂಟಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ಜನರು ಅಸು ನಿಗಿದ್ದರು. ಹೀಗಾಗಿ ದೇವಾಲಯ ಮರು ನಿರ್ಮಾಣದ ಕೂಗೆದ್ದಿತ್ತು.
ಆದರೆ ಶಸ್ತ್ರಜ್ಞರು, ಪಂಡಿತರು, ವಿದ್ವಾಂಸರು ಹೇಳುವಂತೆ ಇಲ್ಲಿ ಈಗಾಗಲೆ ಸಾಕಷ್ಟು ದೇಹಗಳು ಭೂಮಿಯಲ್ಲಿ ಹಾಗೆಯೆ ಹೂತು ಹೋಗಿರುವುದರಿಂದ ನಕಾರಾತ್ಮಕ ಶಕ್ತಿಯು ಸಾಕಷ್ಟಿದ್ದು ಮೊದಲು ಪ್ರತಿ ಕಳೆಬರವನ್ನು ತೆಗೆದು ನಂತರ ಸ್ಥಳವನ್ನು ಶುದ್ಧಗೊಳಿಸಿ ನಂತರ 12 ಜ್ಯೋತಿರ್ಲಿಂಗಗಳ ಪೈಕಿ ಒಂದಾದ ಈ ದೇವಾಲಯದ ಮರು ನಿರ್ಮಾಣದ ಕಾರ್ಯ ಕೈಗೊಳ್ಳಬೇಕೆನ್ನುವುದು ಅವರ ಅಭಿಪ್ರಾಯವಾಗಿದೆ. ಭಕ್ತರ ಭಕ್ತಿ ಪರೀಕ್ಷಿಸುವ ಅಮರನಾಥ ಇನ್ನು ಈ ಸ್ಥಳಕ್ಕೆ ಸಂಬಂಧಿಸಿದಂತೆ ಕಥೆ ಏನೆಂದರೆ, ಹಿಂದೆ ಪಾಂಡವರು ಕುರುಕ್ಷೇತ್ರದ ಯುದ್ಧದ ನಂತರ ಶಿವನನ್ನು ದರ್ಶಿಸಿ ತಮ್ಮ ಮೇಲೆ ಬಂದೊದಗಿರುವ ಹತ್ಯಾ ಪಾಪಗಳಿಂದ ಮುಕ್ತರಾಗಬೇಕೆಂದು ಬಯಸಿದ್ದರು ಹಾಗೂ ಆ ಕಾರ್ಯದ ನಿಮಿತ್ತ ಕಾಶಿಗೆ ತೆರಳಿದ್ದರು. ಇದನ್ನರಿತ ಶಿವ ಅವರಿಗೆ ಕಾಣದ ಎತ್ತಿನ ವೇಶದಲ್ಲಿ ಉತ್ತರಾಖಂಡದ ಸ್ಥಳಕ್ಕೆ ತೆರಳಿದ್ದ.

ಈ ವಿಷಯ ತಿಳಿದುಕೊಂಡ ಪಾಂಡವರು ತಮ್ಮ ಪ್ರಯತ್ನ ಬಿಡದೆ ಉತ್ತರಾಖಂದ ಆ ಸ್ಥಳಕ್ಕೆ ತೆರಳಿ ಕಾಶಿಯಿಂದ ಬಂದ ಮಾರು ವೇಶದ ಶಿವನನ್ನು ಎತ್ತಿನ ರುಪದಲ್ಲಿರುವುದನ್ನು ಗಮನಿಸಿದರು. ಹೀಗೆ ಈ ಎತ್ತು ಕಂಡ ಸ್ಥಳವು ಗುಪ್ತಕಾಶಿಯಾಯಿತು. ನಂತರ ಅವರು ಶಿವನನ್ನು ಮೆಚ್ಚಿಸಿ ಅವನ ಆಶೀರ್ವಾದ ಪಡೆದು ಮೋಕ್ಷ ಹೊಂದಿದರು. ಇದಕ್ಕೆ ಸಂಕೇತವಾಗಿಯೆ ಇಲ್ಲಿ ತ್ರಿಕೋನಾಕಾರದ ಶಿವಲಿಂಗನನ್ನು ಕೇದಾರನಾಥನಾಗಿ ಪೂಜಿಸಲಾಗುತ್ತದೆ. ಈ ಸ್ಥಳದ ಮಹಿಮೆಯೆಂದರೆ ಯಾರು ಈ ಶಿವನನ್ನು ಭಕ್ತಿಯಿಂದ ಪೂಜಿಸುವರೊ ಅವರ ಎಲ್ಲ ಕರ್ಮಗಳು ಬಿಳುಚಿಕೊಂಡು ನಂತರ ಅವರು ತೀರಿ ಹೋದ ಮೇಲೆ ಕೈಲಾಸವನ್ನು ಸೇರುತ್ತಾರೆಂಬ ಪ್ರತೀತಿಯಿದೆ.

ಕೇದಾರನಾಥಕ್ಕೆ ಏಪ್ರಿಲ್ ನಿಂದ ಸೆಪ್ಟಂಬರ್ ವರೆಗಿನ ಸಮಯ ಅನುಕೂಲ ಎನ್ನಬಹುದು. ಆದರೂ ಮಳೆಯ ಮುನ್ಸೂಚನೆಗಳನ್ನು ಆಧರಿಸಿ ಪ್ರವಾಸ ಯೋಜಿಸಿದರೆ ಉತ್ತಮ. ಮಂದಾಕಿನಿ ತಟದಲ್ಲಿರುವ ಕೇದಾರನಾಥಿಗೆ ರಸ್ತೆ ಮಾರ್ಗದಿಂದ ಹೋಗಬಹುದಾದರೂ ಕೊನೆಯ 14 ಕಿ.ಮೀ ಚಾರಣದ ಮೂಲಕವೆ ಪ್ರವೇಶಿಸಬೇಕು. ಏಕೆಂದರೆ ಅಷ್ಟೊಂದು ಕಠೋರವಾಗಿದೆ ಇಲ್ಲಿನ ಭೂಪ್ರದೇಶಗಳು. ಉತ್ತರಾಖಂಡದ ಪ್ರಭಾವಶಾಲಿ ದೇವಾಲಯಗಳು ಮುಂದೆ ಚಳಿಗಾಲದ ಸಮಯದಲ್ಲಿ ಇಲ್ಲಿ ವಿಪರಿತವಾದ ಹವಾಮಾನವಿರುತ್ತದೆ. ಎಲ್ಲ ಸ್ಥಳಗಳು ಮಂಜುಗಟ್ಟಿರುತ್ತವೆ ಹಾಗೂ ಈ ಸಂದರ್ಭದಲ್ಲಿ ಯಾವುದೆ ರಸ್ತೆ ಮಾರ್ಗಗಳು ಗೋಚರಿಸುವುದಿಲ್ಲ. ಈ ಆರು ತಿಂಗಳುಗಳ ಕಾಲ ಕೇದಾರನಥ ದೇವಾಲಯದಲ್ಲಿರುವ ಎಲ್ಲ ವಿಗ್ರಹಗಳನ್ನು ಉಖಿಮಠದಲ್ಲಿ ತಂದಿರಿಸಿ ಪೂಜಿಸಲಾಗುತ್ತದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ತುಮಕೂರು: ಸುಳ್ವಾಡಿ ವಿಷ ಪ್ರಸಾದ ದುರಂತ ಮರೆಮಾಚುವ ಮುನ್ನವೇ ತುಮಕೂರು ಜಿಲ್ಲೆ ಅಂತಹದ್ದೇ ಘಟನೆ ಮರುಕಳಿಸಿದ್ದು, ಓರ್ವ ಬಾಲಕ ಸಾವನ್ನಪ್ಪಿದ್ದಾನೆ. ಶಿರಾ ತಾಲೂಕಿನ ವೀರಭದ್ರ (16) ಮೃತ ಬಾಲಕ. ಗಂಗಾಧರ್, ತಿಪ್ಪೇಸ್ವಾಮಿ, ರುದ್ರೇಶ್, ನಾಗರತ್ನ, ಪವನ್, ಅರ್ಪಿತಾ, ವಿರೂಪಾಕ್ಷ ಸೇರಿದಂತೆ 20ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದಾರೆ. ಶಿರಾ ವ್ಯಾಪ್ತಿಯ ಜನರಿಗೆ ಶಿರಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಬೆಂಗಳೂರಿನಿಂದ ಬಂದಿದ್ದ ಭಕ್ತರಿಗೆ ಬೆಂಗಳೂರಿನಲ್ಲಿಯೇ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ.ಆಗಿದ್ದೇನು?: ಪಾವಗಡ ತಾಲೂಕಿನ ನಿಡಗಲ್ಲು ಗ್ರಾಮದ ವೀರಭಧ್ರಸ್ವಾಮಿ ದೇವಾಲಯದಲ್ಲಿ ಸೋಮವಾರ ವಿಶೇಷ…
ನವದೆಹಲಿ: ನೂತನ ಸಂಸತ್ ಭವನದ ಉದ್ಘಾಟನೆಯ ಸ್ಮರಣಾರ್ಥ 75 ರೂ. ಮುಖಬೆಲೆಯ ವಿಶೇಷ ನಾಣ್ಯವನ್ನು ಬಿಡುಗಡೆ ಮಾಡಲಾಗುವುದು ಎಂದು ಹಣಕಾಸು ಸಚಿವಾಲಯ ಗುರುವಾರ ತಿಳಿಸಿದೆ. ನೂತನ ಸಂಸತ್ ಭವನದ ಉದ್ಘಾಟನೆಯ ಸ್ಮರಣಾರ್ಥ ₹ 75ರ ವಿಶೇಷ ನಾಣ್ಯವನ್ನು ಬಿಡುಗಡೆ ಮಾಡಲಾಗುವುದು ಎಂದು ಹಣಕಾಸು ಸಚಿವಾಲಯ ಗುರುವಾರ ತಿಳಿಸಿದೆ. ಈ ವಿಶೇಷ ನಾಣ್ಯವು 75 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸುತ್ತಿರುವ ಭಾರತಕ್ಕೆ ಗೌರವ ಸೂಚಕವಾಗಿರಲಿದೆ. ವಿಶೇಷ ನಾಣ್ಯದ ವಿಶೇಷತೆ ಹೀಗಿದೆ: ನಾಣ್ಯದ ಒಂದು ಬದಿಯಲ್ಲಿ ಅಶೋಕ ಸ್ತಂಭದ ಸಿಂಹದ ಲಾಂಛನ…
ಕೊಪ್ಪಳ: ತಲ್ಲೂರು ಕೆರೆ ಯಾರಿಗೆ ನೆನಪಿಲ್ಲ ಹೇಳಿ.. ನಟ ಯಶ್ ಆ ಜಿಲ್ಲೆಯ ತಲ್ಲೂರು ಕೆರೆಯನ್ನು ಅಭಿವೃದ್ದಿ ಪಡಿಸಿ ಅಧುನಿಕ ಭಗಿರಥನಾಗಿದ್ದರು. ಈ ಕಾರಣಕ್ಕಾಗಿಯೇ ತಲ್ಲೂರು ಕೆರೆ ಜನಮಾನಸದಲ್ಲಿ ಉಳಿದಿದೆ. ಆದ್ರೆ ಇದೇ ಕೆರೆಯಲ್ಲಿ ಯಶ್ ಅಭಿವೃದ್ದಿ ಪಡಿಸುವ ಮೊದಲು ಅದೊಂದು ಇಲಾಖೆ ಬರೊಬ್ಬರಿ ಒಂದು ಕೋಟಿ ಖರ್ಚು ಮಾಡಿದೆ ಅಂತಾ ಹಣ ಗುಳುಂ ಮಾಡಿದೆ. ನಟ ಯಶ್ 2017ರಲ್ಲಿ ತಮ್ಮ ಯಶೋಮಾರ್ಗ ಫೌಂಡೇಶನ್ ವತಿಯಿಂದ ಸ್ವಂತ ಖರ್ಚಿನಲ್ಲಿ ಬರೊಬ್ಬರಿ 70 ಲಕ್ಷಕ್ಕೂ ಅಧಿಕ ಹಣ ಖರ್ಚು…
ಶಿಸ್ತುಪಾಲನೆ ವಿಚಾರದಲ್ಲಿ ಪೊಲೀಸ್ ಇಲಾಖೆ ಒಂದು ಹೆಜ್ಜೆ ಮುಂದೆ ಇರುತ್ತದೆ. ಅದರಲ್ಲೂ ಹಿರಿಯ ಅಧಿಕಾರಿಗಳಿಗೆ ಗೌರವ ಕೊಡುವ ಸಂದರ್ಭದಲ್ಲಿ ಸೆಲ್ಯೂಟ್ ಹೊಡೆಯುವುದು ಪದ್ಧತಿಯಾಗಿದೆ. ಆದರೆ ಈಗ ಇದಕ್ಕೆ ಕೊಂಚ ಮಾರ್ಪಾಡು ತರಲು ಇಲಾಖೆ ಮುಂದಾಗಿದೆ. ಕರ್ತವ್ಯದಲ್ಲಿರುವ ಪೊಲೀಸ್ ಸಿಬ್ಬಂದಿ ಬೈಕ್ ಚಾಲನೆ ಮಾಡುವ ವೇಳೆ ಹಿರಿಯ ಅಧಿಕಾರಿಗಳಿಗೆ ಸೆಲ್ಯೂಟ್ ಪಡೆಯಬಾರದೆಂಬ ಕಟ್ಟುನಿಟ್ಟಿನ ಆದೇಶವನ್ನು ಹೊರಡಿಸಲಾಗಿದ್ದು, ಇದನ್ನು ಉಲ್ಲಂಘಿಸಿದರೆ ಮೋಟಾರು ವಾಹನ ಕಾಯ್ದೆ ಅಡಿ 1000 ರೂ. ದಂಡದ ಜೊತೆಗೆ ಮೂರು ತಿಂಗಳವರೆಗೆ ಡಿಎಲ್ ಅಮಾನತುಗೊಳಿಸಲಾಗುತ್ತದೆ. ವಾಹನ ಚಾಲನೆ…
ಬಿಸಿಲು,ಬಿಸಿಲು, ಎಲ್ಲಿ ನೋಡಿದರೂ ಬಿಸಿಲ ಬೇಗೆ, ಧಗೆ. ಇಷ್ಟು ದಿನ ಕಣ್ಣಿಗೆ, ಮನಸಿಗೆ ತಂಪಾಗಿದ್ದ ಬೆಂಗಳೂರು, ಈಗ ಬಿರು ಬಸಿಲಿನ ನಾಡಾಗಿದೆ. ಜನರಿಗೆ ಕುಳಿತಲ್ಲಿ ಕೂರಲಾಗದೆ, ನಿಂತಲ್ಲಿ ನಿಲ್ಲಲಾಗದ ಹಾಗೆ ಮಾಡಿದೆ ಈ ಬಿಸಿಲು. ಬೇಸಿಗೆಯು ಶುಭಾರಂಭವಾಗಿ 4 ದಿನ ಆಗಿಲ್ಲ ಆಗಲೇ ಜನರ ಮೈನೀರಿಳಿಸುತ್ತಿದೆ ಈ ಬೇಸಿಗೆ. ತಂಪು ತಂಪಾದ ತಂಪು ಪಾನೀಯಗಳ ಬಳಕೆ ಹೆಚ್ಚಾಗಿದೆ. ಹಾಗೆ ಕಲ್ಲಂಗಡಿ, ಕಿತ್ತಳೆ ಮತ್ತು ಎಳೆನೀರಿನ ಉಪಯೋಗ ಆಗಲೇ ಶುರುವಾಗಿದೆ. ನೀರಿನ ಕಷ್ಟ ಎದುರಾಗಿದೆ. ಪ್ರಾಣಿಗಳು ಪಕ್ಷಿಗಳಿಗೂ ಈ…
ಮುಖೇಶ್ ಅಂಬಾನಿ ಅವರ ನೇತೃತ್ವದ ರಿಲಾಯನ್ಸ್ ಜಿಯೋ, ತನ್ನ ಗ್ರಾಹಕರಿಗೆ ಹಲವಾರು ಆಫರ್’ಗಳನ್ನು ಕೊಟ್ಟು ಇತಿಹಾಸ ಸೃಷ್ಟಿಸುತ್ತಿದ್ದಲ್ಲದೆ, ಬೇರೆ ಟೆಲಿಕಾಂ ಕಂಪನಿ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ. ಇದರ ಪ್ರಭಾವ ಏರ್ಟೆಲ್, ವೊಡಾಫೋನ್ ಮುಂತಾದ ಟೆಲಿಕಾಂ ಕಂಪನಿಗಳು ತಮ್ಮ ಗ್ರಾಹಕರನ್ನು ಕಳೆದುಕೊಳ್ಳುವ ಭಯದಲ್ಲಿದ್ದು, ಈಗ ಈ ಕಂಪನಿಗಳು ಕೂಡ ತಮ್ಮ ಗ್ರಾಹಕರನ್ನು ಉಳಿಸಿಕೊಳ್ಳಲು ಮತ್ತು ಜಿಯೋ ಕಾಪನಿಗೆ ಟಾಂಗ್ ಕೊಡಲು ಹಲವು ರೀತಿಯ ಇತಿಹಾಸ ಸೃಷ್ಟಿಸುವಂತ ಆಫರ್’ಗಳನ್ನು ತನ್ನ ಗ್ರಾಹಕರಿಗೆ ಕೊಡುವಲ್ಲಿ ಹಟಕ್ಕೆ ಬಿದ್ದಿವೆ.