ವಿಚಿತ್ರ ಆದರೂ ಸತ್ಯ

ಈ ಊರಲ್ಲಿ ಬರೀ ಸುಂದರ ಹುಡುಗಿಯರೇ ಇರೋದು!ಇವರಿಗೆ ಇಷ್ಟ ಆದ್ರೆ ಮಾತ್ರ ಮದುವೆ ಆಗ್ತಾರೆ!ಮಾಡ್ರನ್ ಆಗಿರೋ ಇವರು ಮಾಡೋ ಕೆಲಸ ಕೇಳಿದ್ರೆ ನೀವ್ ಶಾಕ್ ಆಗ್ತೀರಾ…

2296

ಬ್ರೆಜಿಲ್ ದೇಶಕ್ಕೆ ಹೋಗಿ ಆಗ್ನೇಯ ದಿಕ್ಕಿಗೆ ಹೊರಟರೆ ಬೆಲೋ ಹಾರಿಝಾಂಟ್ ಎಂಬ ಊರು ಸಿಗುತ್ತದೆ ಅಲ್ಲಿಂದ ಪೂರ್ವಕ್ಕೆ ಹೊರಟರೆ ನೊಯಿವಾ -ಡೂ- ಒಡೇರಿಯೋ (Noiva do Cordeiro)ಎಂಬ ಹೆಸರಿನ ಊರಿಗೆ ಹೋಗಬೇಕು.

ಆ ಊರಿನಲ್ಲಿ ಅಂದ ಅನ್ನೋಅಂದಕ್ಕೇನೆ ಹಂಗಿದಂಗಂಗೆ ಉಂಡೆನಾಮ ತಿಕ್ಕಿದಂತೆ ಬೆಳ್ಳಗಾಗಿಸಿ ಮಿರಿಮಿರಿ ಮಿಂಚಿಸಿದಂತಹಾ ಹುಡುಗಿಯರಿದ್ದಾರಂತೆ, ಅದರಲ್ಲೂ ಅವರ ಮೇಲೆ ನಲವತ್ತು ಹಿಡಿ ಮರಳು ಅವರ ಮೇಲೆಸೆದರೂ ಕೆಳಕ್ಕಿಳಿಯದಷ್ಟು ಹುಡುಗಿಯರ ರಾಶಿ ರಾಶಿ ಇದ್ದಾರೆ !

ಬರೀ ಹುಡುಗಿಯರೋ ಅಥವಾ ವಯಸ್ಸಾದವರೋ ಅಂತ ಕೇಳುವ ಹಾಗೆಯೇ ಇಲ್ಲ ಭಾರತೀಯ ಮಾಪನವಾದ ಏಳು ಮಲ್ಲಿಗೆ ತೂಕದ ಹುಡುಗಿಯರಿಂದ ಹಿಡಿದು ಎಲ್ಲಾ ತೂಕದ ಮಲ್ಲಿಗೆಯಂತಾ ಹುಡುಗಿಯರು ಕೂಡ ಇಲ್ಲಿದ್ದಾರೆ. ಇಲ್ಲಿರುವವರಲ್ಲಿ ಹಲವರನ್ನು ನೋಡಿದರೆ ಇಂದ್ರ ಇಲ್ಲಿಂದಲೇ ಆಯ್ಕಂಡ್ ಹೋಗಿರಬಹುದು ಎಂಬ ಸಂದೇಹ ಬರುವಷ್ಟು ಸುರಸುಂದರಿಯವರು ಇವರು.

ಇದ್ಯಾಕೆ ಹೀಗೆ ಅನ್ನೋದು ಬದಿಗಿರಲಿ ಮೊದಲಿಗೆ ಇವರ ಕಾನೂನು ಅನ್ನೋದಕ್ಕಿಂತ ಇವರು ಬದುಕುತ್ತಿರುವ ರೀತಿ ಸ್ವಲ್ಪ ವಿಚಿತ್ರವಿದೆ ಅಂದರೆ ಯಾರಾದರೂ ಹುಡುಗ ಇಲ್ಲಿನ ಹುಡುಗಿಯರನ್ನು ಮದುವೆ ಆಗುವುದಾದರೆ ಹುಡುಗಿ ಒಪ್ಪಿದರೆ ಆಗಬಹುದು .

 

ಆದರೆ ಮದುವೆಯಾದ ನಂತರ ವಾರಕ್ಕೊಮ್ಮೆ ಮಾತ್ರ ಗಂಡ ಮನೆಗೆ ಬರಬೇಕು ಹಾಗೂ ಜೊತೆಗಿದ್ದು ದುಡಿಮೆಯ ಲೆಕ್ಕ ಕೊಟ್ಟು ಮರುದಿನ ಕೆಲಸಕ್ಕೆ ಹೊರಡುತ್ತಿರಬೇಕು ! ಗಂಡನನ್ನು ಜೊತೆಯಲ್ಲೇ ಇಟ್ಟುಕೊಂಡು ಬದುಕಲು ಇವರಿಗೆ ಇಷ್ಟವಿಲ್ಲ ! ಇನ್ನು ಮಕ್ಕಳಾದಾಗ ಅದು ಗಂಡಾದರೆ ಆ ಹುಡುಗನಿಗೆ ಹದಿನೆಂಟು ವರ್ಷ ವಯಸ್ಸಾದದ್ದೇ ತಡ, ಒದ್ದು ದುಡಿಯಲು ಕಳುಹಿಸುತ್ತಾರೆ .

ಅವರ ಪ್ರೀತಿ ಪಾತ್ರವಾದ ಹೆಣ್ಣು ಹುಟ್ಟಿದರೆ ಅವರಂತೆಯೇ ನಿರಾತಂಕವಾಗಿ ಹೊಲದಲ್ಲಿ ಕೆಲಸ ಮಾಡುತ್ತಾ ಲೇಡಿ ರೈತರಂತೆ ಬದುಕಬಹುದು. ಅಲ್ಲಿನ ಪ್ರಮುಖ ಕೆಲಸವೇ ಕೃಷಿ ಹಾಗಂದ ಮಾತ್ರಕ್ಕೆ ಅದಾವುದೋ ಹಳೇ ನೈಟಿ ತೊಟ್ಟು ಹೊಲದಲ್ಲಿ ಕೆಲಸ ಮಾಡುವುದಿಲ್ಲ .ಫುಲ್ಲೀ ಅಪಡೇಟೇಡ್ ನಯಾ ನಯಾ ಡ್ರೆಸ್ ಧರಿಸಿ ಟಿಪ್ ಟಾಪಾಗಿ ಇರುವ ಟ್ರೆಂಡೀ ಹುಡುಗಿಯವರು ಇವರು.

ಅಸಲಿಗೆ ಇವರು ಹೀಗಾಗಿದ್ದಕ್ಕೆ ಕಾರಣ ಏನು ಅಂತ ಹಿನ್ನೆಲೆ ತಿಳಿಯಲು ನೋಡಿದರೆ ಹಿಂದೆಮ್ಮೆ 1891 “ಮರಿಯಾ ಸನ್ಹೋರಿಯಾ”ಎಂಬ ಹುಡುಗಿಗೆ ಮದುವೆ ಮಾಡಲು ಮುಂದಾದಾಗ ಆ ಹುಡುಗಿಗೆ ಹುಡುಗ ಇಷ್ಟವಾಗದೆ ಮದುವೆಗೆ ಒಪ್ಪುವುದಿಲ್ಲ ಆಗ ಹುಡುಗಿ ಮನೆಯವರೂ ಕೂಡ ಸುಮ್ಮನಾಗುತ್ತಾರೆ ಆದರೆ ಆ ಊರಿನ ಜನ ಈ ಹುಡುಗಿಯ ವಿರುದ್ಧ ತಿರುಗಿಬಿದ್ದು ಗಡೀಪಾರು ಮಾಡುತ್ತಾರೆ ಆ ಹುಡುಗಿ ಅಲ್ಲಿಂದ ಹೊರಬಂದು ಊರ ಹೊರಗಿನ ಜಾಗದಲ್ಲಿ ಹೊಸ ಊರನ್ನು ಸೃಷ್ಟಿಸುತ್ತಾಳೆ .

ಆನಂತರ ಹಿರಿಯಕ್ಕನ ಚಾಳಿ ಮನೆ ಮಕ್ಕಳಿಗೆಲ್ಲಾ ಎಂಬಂತೆ ಇದೇ ಊರಿನಲ್ಲಿ ಮದುವೆ ವಿರೋಧಿಸಿದವರೆಲ್ಲಾ ಇವರಳ ಊರಿಗೆ ಸೇರಿ ಇವರದ್ದೇ ಸ್ವಂತ ನೆಲೆಯಾಗಿಸಿಕೊಳ್ಳುತ್ತಾ ಸಾಗುತ್ತಾರೆ ಅದೇ ಈ ಊರು ನೊಯಿವಾ -ಡೂ- ಒಡೇರಿಯೋ.

ಈಗ ಪ್ರಶ್ನೆ ಅವರ ಅಕ್ಕ ಪಕ್ಕ ಊರಿನವರು ಈ ಹುಡುಗಿಯರನ್ನ ಮದುವೆ ಆಗಬಹುದಲ್ಲ ಎಂದು .ಆದರೆ ಸಂಭಂದದ ರೀತಿ ನೋಡಿದರೆ ಇಲ್ಲಿರುವ ಶೇ 90 ರಷ್ಟು ಹುಡುಗಿಯರು ಅಕ್ಕಪಕ್ಕದ ಊರಿನವರಿಗೆ ಅಕ್ಕ.ತಂಗಿಯರಾಗಬೇಕಂತೆ ಇದು ಸಮಸ್ಯೆ.

ಕೃಪೆ: ಉಮೇಶ್ ಆಚಾರ್

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಪ್ರವಾಹದಿಂದ ಪಾರು ಮಾಡುವಂತೆ ಕೋರಿ 108 ಬಗೆಯ ಸಿಹಿ ಮಾಡಿ ದೇವಿಗೆ ವಿಶೇಷ ಪೂಜೆ…!

    ಉತ್ತರ ಕರ್ನಾಟಕ, ಕರಾವಳಿಯಲ್ಲಿ ಪ್ರವಾಹ ದಿನದಿಂದ ದಿನಕ್ಕೆ ಅತಿಯಾಗುತ್ತಿದ್ದು, ಪ್ರವಾಹಕ್ಕೆ ಜನರು ತತ್ತರಿಸಿ ಹೋಗುತ್ತಿದ್ದಾರೆ. ವರಮಹಾಲಕ್ಷ್ಮಿ ಹಬ್ಬದಲ್ಲಿ ಅನಾಹುತದಿಂದ ಪಾರು ಮಾಡುವಂತೆ ಇಲ್ಲೊಂದು ದೇವಾಲಯದಲ್ಲಿ ವಿಭಿನ್ನ ರೀತಿಯಲ್ಲಿ ಪೂಜೆ ಸಲ್ಲಿಸಲಾಗಿದೆ. ಜಿಲ್ಲೆಯ ಮುಳಬಾಗಿಲು ತಾಲೂಕು ಪಿಚ್ಚಗುಂಟ್ಲಹಳ್ಳಿ ಗ್ರಾಮದ ಆದಿಪರಾಶಕ್ತಿ ದೇವಾಲಯದಲ್ಲಿ ವಿಶೇಷ ರೀತಿಯ ತಿಂಡಿ ತಿನಿಸುಗಳು ಮಾಡಿ ಪೂಜೆ ಮಾಡಲಾಗಿದೆ. ವಿವಿಧ ಬಗೆಯ ಮೈಸೂರ್ ಪಾಕ್, ಲಾಡು, ಜಹಂಗೀರ್, ಜಿಲೇಬಿ, ಚಕ್ಕುಲಿ, ನಿಪ್ಪಟ್, ಪುರಿಉಂಡೆಯಂತಹ 108 ಬಗೆಯ ತಿಂಡಿಗಳನ್ನು ಮಾಡಲಾಗಿತ್ತು. ಅದನ್ನು ದೇವರಿಗೆ ಅರ್ಪಿಸಿ ನಂತರ ಭಕ್ತರಿಗೂ…

  • Sports

    Multiple Layout Options

    A number of such two-sided contests may be arranged in a tournament producing a champion. Many sports leagues make an annual champion by arranging games in a regular sports season, followed in some cases by playoffs. Hundreds of sports exist, from those between single contestants, through to those with hundreds of simultaneous participants, either in…

  • ಸಿನಿಮಾ

    ಅಬ್ಬಬ್ಬಾ “ರಾಜ್ ವಿಷ್ಣು” ಕನ್ನಡ ಚಿತ್ರದ ಟ್ರೇಲರ್ ಯೂಟ್ಯೂಬಲ್ಲಿ ಚಿಂದಿ! ಟ್ರೇಲರ್ ನೋಡಲು ಈ ಲೇಖನಿ ಓದಿ….

    ಶರಣ್ ನಾಯಕ ನಟನಾಗಿ ನಟಿಸಿದ್ದು ಪ್ರಮುಖ ಪಾತ್ರಧಾರಿಗಳಾಗಿ ಚಿಕ್ಕಣ್ಣ, ಸಾಧು ಕೋಕಿಲ ನಟಿಸಿದ್ದಾರೆ. ಅದರಲ್ಲೂ ಕನ್ನಡ ಚಿತ್ರರಂಗದ ಇಬ್ಬರು ದಿಗ್ಗಜರ ಹೆಸರುಗಳನ್ನು ಇಟ್ಟು ನಿರ್ಮಾಣವಾಗುತ್ತಿರುವ ಸಿನಿಮಾ ‘ರಾಜ್ ವಿಷ್ಣು’ ಸಿನಿಮಾದ ಟ್ರೇಲರ್ ಇದೀಗ ಯೂಟ್ಯೂಬಲ್ಲಿ

  • ಜ್ಯೋತಿಷ್ಯ

    ದಿನ ಭವಿಷ್ಯ ಶುಕ್ರವಾರ..ಈ ದಿನದ ನಿಮ್ಮ ಭವಿಷ್ಯ ಶುಭವೋ ಅಶುಭುವೋ ನೋಡಿ ತಿಳಿಯಿರಿ.. ಶೇರ್ ಮಾಡಿ

    *ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ* ಶುಕ್ರವಾರ, 20/04/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…ಪಂಡಿತ್ ಸುದರ್ಶನ್ ಭಟ್  ದೈವಜ್ಞ ಜ್ಯೋತಿಷ್ಯರು ಹಾಗೂ ಆಧ್ಯಾತ್ಮಿಕ ಚಿಂತಕರು ನಿಮ್ಮ ಜೀವನದ ನಿಖರವಾದ ಭವಿಷ್ಯ ತಿಳಿಸುತ್ತಾರೆ ಹಾಗೂ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ಮಕ್ಕಳು ವ್ಯವಹಾರ ಹಣಕಾಸು ಸಮಸ್ಯೆಗಳಿಗೆ ಪರಿಹಾರ ಸೂಚಿಸುವರು 9663542672 ಮೇಷ:- ಹೊಸ ಉದ್ಯೋಗಗಳ ಹುಡುಕಾಟದಲ್ಲಿರುವರಿಗೆ ಹೇರಳ ಅವಕಾಶಗಳು ದೊರೆಯಲಿವೆ. ದೈವಕೃಪೆಯಿಂದ ಶುಭಫಲ ನಿಮ್ಮದಾಗಲಿದೆ. ಸ್ನೇಹಿತರು ಸಹಾಯಕೋರಿ ಬರಲಿದ್ದು,…

  • ಜ್ಯೋತಿಷ್ಯ

    ದಿನ ಭವಿಷ್ಯ …..ಪಂಡಿತ್ ವಿಶ್ವರೂಪ ಆಚಾರ್ಯರವರಿಂದ..ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…ಶೇರ್ ಮಾಡಿ..

    ಒಂದೆಕರೆ ಕ್ಷಣದಲ್ಲೇ ಪರಿಹಾರ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು  9739124121ಶ್ರೀ ಕ್ಷೇತ್ರ ಧರ್ಮಸ್ಥಳ ನುಡಿದಂತೆ ನಡೆಯುವುದು ಮೇಷ:- ನೂರಕ್ಕೆ ನೂರರಷ್ಟು ಯಶಸ್ಸು ನಿರೀಕ್ಷಿಸಿ ನಂತರ ಬೇಸರ ಮಾಡಿಕೊಳ್ಳಬೇಡಿ. ನಿಮ್ಮ ಎಲ್ಲಾ ಕಾರ್ಯಗಳು ಯಶಸ್ಸಿನತ್ತ ಪಯಣಿಸುವವು. ಬಂಧುವರ್ಗ ಮತ್ತು ಸ್ನೇಹಿತವರ್ಗವೂ ನಿಮ್ಮನ್ನು ಪ್ರಶಂಸಿಸುವರು.ನಿಮ್ಮ ಸಮಸ್ಯೆ.ಏನೇ .ಇರಲಿ ಎಷ್ಟೇ ಕಠಿಣವಾಗಿರಲಿ…

  • ಸುದ್ದಿ

    Month End Mobiles Fest: ಫ್ಲಿಪ್‌ಕಾರ್ಟ್ ಆಫರ್ ಸೇಲ್…!

    ಜನಪ್ರಿಯ ಇ ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್‌ನಲ್ಲಿ ತಿಂಗಳ ಕೊನೆಯ ಮೊಬೈಲ್ ಫೆಸ್ಟ್ ಸೇಲ್ ನಡೆಯುತ್ತಿದೆ. ಬುಧವಾರ ಜುಲೈ 31ರವರೆಗೆ ನಡೆಯುವ ವಿಶೇಷ ಸೇಲ್‌ನಲ್ಲಿ ಗೂಗಲ್ ಪಿಕ್ಸೆಲ್ 3, ಮೋಟೋರೋಲ ಒನ್ ಪವರ್, ಹೊನೊರ್ 9N, ಪೋಕೋ F1 ಮತ್ತು ನೋಕಿಯಾ 6.1 ಮೇಲೆ ವಿಶೇಷ ಆಫರ್ ಸೇಲ್ ಘೋಷಿಸಲಾಗಿದೆ.  ಅಲ್ಲದೆ ಹೊನೊರ್ ಸರಣಿಯ ಫೋನ್‌ ಮೇಲೂ ಆಕರ್ಷಕ ಡಿಸ್ಕೌಂಟ್ ಪ್ರಕಟಿಸಲಾಗಿದೆ.  ಹೊನೊರ್ 10 Lite, ಹೊನೊರ್ 7s, ಹೊನೊರ್ 9i ಮತ್ತು ಹೊನೊರ್ 9 Lite ಮಾದರಿ ಡಿಸ್ಕೌಂಟ್‌ನಲ್ಲಿ ದೊರೆಯುತ್ತದೆ. ಉಳಿದಂತೆ ಸ್ಯಾಮ್‌ಸಂಗ್ ಗ್ಯಾಲಕ್ಸಿ…