ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಸಾಮಾಜಿಕ ತಾಣಗಳಾದ ವಾಟ್ಸ್ ಅಪ್ ಮತ್ತು ಅಂತರ್ಜಾಲದಲ್ಲಿ ಕೊರೋನಾ ವೈರಸ್ ಕುರಿತಂತೆ ಹಲವು ಸಂಗತಿಗಳು ಹರಡುತ್ತಿವೆ. ಇವುಗಳಲ್ಲಿ ಕೆಲವು ನಿಜವಾದರೆ, ಹಲವು ಮಾಹಿತಿಗಳು ಆಧಾರರಹಿತವಾಗಿವೆ. ಯಾವಾಗ ಕರೊನಾ ಮಹಾಮಾರಿ ವಿಶ್ವದಾದ್ಯಂತ ಹಬ್ಬಲು ಆರಂಭಿಸಿದೆಯೋ ಆ ಸಂದರ್ಭದಲ್ಲಿ ಈ ಮಾರಕ ವೈರಾಣುವಿಗೆ ಸಂಬಂಧಿಸಿದಂತಹ ವಿಚಾರ ತಿಳಿಯುವುದು ಅಷ್ಟೇ ಮಹತ್ವದ್ದಾಗಿದೆ. ವಿಜ್ಞಾನ ಪ್ರಸಾರದ ಹಿರಿಯ ವಿಜ್ಞಾನಿ ಡಾ. ಟಿ.ವಿ. ವೆಂಕಟೇಶ್ವರನ್ ಈ ವೈರಸ್ ಕುರಿತ ಸಂಶೋಧನೆಯ ಬಳಿಕ ನಮಗೆ ಹಲವು ಫಲಶ್ರುತಿಗಳನ್ನು ತಿಳಿಯಪಡಿಸಿದ್ದಾರೆ.

ಸೋಂಕು: ಈ ವೈರಾಣು ಗಂಟಲು ಮತ್ತು ಶ್ವಾಸಕೋಶದಲ್ಲಿನ ಎಪಿತೀಲಿಯಲ್ ಕೋಶಗಳಿಗೆ ಸೋಂಕು ಉಂಟು ಮಾಡುತ್ತದೆ. ಎಸ್.ಎ.ಆರ್.ಎಸ್.- ಸಿ.ಓ.ವಿ-2 ಮಾನವ ಜೀವಕೋಶಗಳ ಮೇಲೆ ಕೆಎಇಸಿ2 ಬಿಸಿ, ಬೆಳಕಿಗೆ ಒಡ್ಡಿಕೊಳ್ಳುವ (ರಿಸಿಪ್ಟರ್ಸ್) ಅಂಗದಂಥ ಮಾನವನ ಜೀವಕೋಶಗಳನ್ನು ಬಂಧಿಸುತ್ತದೆ, ಇದು ಹೆಚ್ಚಾಗಿ ಗಂಟಲು ಮತ್ತು ಶ್ವಾಸಕೋಶಗಳಲ್ಲಿ ಕಂಡುಬರುತ್ತದೆ. ನಿಮ್ಮ ಚರ್ಮದ ಮೇಲಿನ ವೈರಾಣು, ಎಸಿಇ 2 ಅಭಿವ್ಯಕ್ತಿ ಕೊರತೆಯಿಂದಾಗಿ, ಹಾನಿಕಾರಕವಲ್ಲ. ಈ ವೈರಾಣುಗಳು ಮೂಗಿನ ಹೊಳ್ಳೆಗಳು, ಕಣ್ಣು ಮತ್ತು ಬಾಯಿ ಮೂಲಕ ಒಳ ಪ್ರವೇಶಿಸುತ್ತವೆ. ನಮ್ಮ ಕೈಗಳು ಈ ವೈರಾಣುವನ್ನು ನಮ್ಮ ಬಾಯಿ, ಮೂಗು ಮತ್ತು ಕಣ್ಣಿನ ಬಳಿಗೆ ತೆಗೆದುಕೊಂಡು ಹೋಗುವ ವಾಹಕಗಳಾಗಿವೆ. ಪದೇ ಪದೇ ನಮ್ಮ ಕೈಗಳನ್ನು ಸಾಬೂನಿನಿಂದ ತೊಳೆದುಕೊಳ್ಳುವುದರಿಂದ ಈ ಸೋಂಕು ತಡೆಸಲು ಸಾಧ್ಯವಾಗುತ್ತದೆ.
ಸೋಂಕಿನ ಡೋಸೇಜ್: ಮಕಾಕ್ (ಒಂದು ಜಾತಿ ಮಂಗ)ಗೆ ಸೋಂಕು ತಗುಲಲು 700000 ಪಿಎಫ್.ಯು ಡೋಸ್ ಅಗತ್ಯವಿರುತ್ತದೆ. ಪಿಎಫ್.ಯು (ಪ್ಲಕ್ ರೂಪಿಸುವ ಘಟಕ) ಮಾದರಿ ಸೋಂಕಿನ ಅಳತೆಯ ಒಂದು ಘಟಕವಾಗಿದೆ. ಆದಾಗ್ಯೂ ಪ್ರಾಣಿಗಳು ಯಾವುದೇ ಕ್ಲಿನಿಕಲ್ ಲಕ್ಷಣಗಳನ್ನು ತೋರಿಲ್ಲ, ಮೂಗಿನಿಂದ ಹೊರಬರುವ ರೋಗಾಣು ಹನಿಗಳು ಮತ್ತು ಜೊಲ್ಲಿನ ರಸ ವೈರಾಣುವನ್ನು ಒಳಗೊಂಡಿರುತ್ತವೆ. ಮಾನವರಿಗೆ ಸೋಂಕು ತಗುಲಲು 700000ಪಿಎಫ್.ಯುಗಿಂತ ಹೆಚ್ಚಿನ ಡೋಸೇಜ್ ಬೇಕಾಗುತ್ತದೆ. ಜೈವಿಕವಾಗಿ ಮಾರ್ಪಾಡು ಮಾಡಿದ ಇಲಿಗಳ ಮೇಲೆ ನಡೆಸಲಾದ ಎಸಿಇ2 ರೆಸೆಪ್ಟರ್ಸ್ ನ ಪ್ರಾಣಿಗಳ ಮೇಲಿನ ಅಧ್ಯಯನವು ಸಾರ್ಸ್ ಸಹಿತವಾದ ಕೇವಲ 240 ಪಿ.ಎಫ್.ಯು.ನಿಂದ ಸೋಂಕು ಹರಡುತ್ತದೆ ಎಂಬುದನ್ನು ತೋರಿಸಿದೆ. ತುಲನಾತ್ಮಕವಾಗಿ ಅದು ಸೋಂಕಿತವಾಗಲು 70,000ಪಿಎಫ್.ಯು ಮಾರಕ ಕೊರೋನಾ ವೈರಾಣು ಬೇಕಾಗುತ್ತದೆ.

ಸೋಂಕಿನ ಅವಧಿ: ಒಬ್ಬ ವ್ಯಕ್ತಿಯು ಸೋಂಕನ್ನು ಇತರರಿಗೆ ಹರಡುವ ಸಮಯದ ಬಗ್ಗೆ ನಿಖರವಾಗಿ ತಿಳಿದಿಲ್ಲ, ಆದರೆ ಬಹುಶಃ 10-14 ದಿನಗಳವರೆಗೆ ಆಗಬಹುದು. ಸಾಂಕ್ರಾಮಿಕತೆಯ ಅವಧಿಯನ್ನು ಕೃತಕವಾಗಿ ಕಡಿಮೆ ಮಾಡುವುದು ಒಟ್ಟಾರೆ ಪ್ರಸರಣವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಮಹತ್ವದ ವಿಧಾನವಾಗಿದೆ. ಆಸ್ಪತ್ರೆಗೆ ಸೇರಿಸುವುದು, ಪ್ರತ್ಯೇಕವಾಗಿರಿಸುವುದು, ಲಾಕ್ಡೌನ್ ಮತ್ತು ದಿಗ್ಬಂಧನದಲ್ಲಿಡುವುದು ಎಲ್ಲವೂ ಪರಿಣಾಮಕಾರಿ ವಿಧಾನಗಳು.
ಯಾರಿಗೆ ಸೋಂಕು ತಗುಲಬಹುದು: ಯಾವುದೇ ವ್ಯಕ್ತಿ ವೈರಾಣುವಿನಿಂದ ಸೋಂಕಿತರಾಗಬಹುದು, ಅವರಲ್ಲಿ ಅದರ ಲಕ್ಷಣಗಳು ಕಾಣಿಸಿಕೊಳ್ಳುವ ಮೊದಲೇ ಸೋಂಕಿತರಾಗಬಹುದು. ಹಲವು ಸೋಂಕು ಸಾಗಿಸುವವರಲ್ಲಿ ಅಂಥ ಲಕ್ಷಣಗಳು ಕಾಣಿಸುವುದಿಲ್ಲ. ನಮ್ಮ ಬಾಯಿ ಮತ್ತು ಮೂಗನ್ನು ಕೆಮ್ಮುವಾಗ ಮತ್ತು ಸೀನುವಾಗ ಮುಚ್ಚಿಕೊಳ್ಳುವುದರಿಂದ ಸೋಂಕನ್ನು ತಗ್ಗಿಸಬಹುದಾಗಿದೆ. ಸೋಂಕು ಸೋಂಕಿತ ವ್ಯಕ್ತಿಯ ಜೋಲ್ಲುರಸ, ಕಫ ಮತ್ತು ಮಲದಲ್ಲಿ ಸೋಕಿರುವ ಸಂಪೂರ್ಣ ಅವಧಿಯಲ್ಲಿರುತ್ತದೆ.
ನಾವು ಹೇಗೆ ಸೋಂಕಿತರಾಗುತ್ತೇವೆ: ಬಹುತೇಕ ರೋಗಾಣುಹನಿಯ ಮೂಲಕ ಇದು ಹರಡುತ್ತದೆ. ಇದಕ್ಕೆ 6 ಅಡಿಗಿಂತಲೂ ಕಡಿಮೆಯ ಆಪ್ತ ಸಂಪರ್ಕದ ಅಗತ್ಯವಿದೆ. ಹೀಗಾಗಿಯೇ ಸಾರ್ವಜನಿಕ ಸ್ಥಳದಲ್ಲಿ ಅಂದರೆ ಸೂಪರ್ ಮಾರ್ಕೆಟ್, ತರಕಾರಿ ಮಾರುಕಟ್ಟೆಗಳಲ್ಲಿ ಒಬ್ಬರಿಂದ ಒಬ್ಬರ ನಡುವೆ ಕನಿಷ್ಠ 1.5 ಮೀಟರ್ ದೂರದಲ್ಲಿರುವಂತೆ ನಮಗೆ ಸಲಹೆ ಮಾಡಲಾಗುತ್ತದೆ. ಹಾಕಾಂಗ್ ನಲ್ಲಿ ನಡೆದ ಒಂದು ಅಧ್ಯಯನ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಶೇ.44ರಷ್ಟು ಪ್ರಸರಣವನ್ನು ತಡೆಯುತ್ತದೆ ಎಂದು ಹೇಳಿದೆ. ರೋಗವನ್ನು ಸಾಗಿಸುವ ನಿರ್ಜೀವ ವಸ್ತುಗಳಲ್ಲಿ, ನಿರ್ದಿಷ್ಟ ಫೋನ್ಗಳು, ಬಾಗಿಲ ಹಿಡಿಗಳು, ಮೇಲ್ಮೈಗಳು ಪ್ರಸರಣಕ್ಕೆ ಸಂಭಾವ್ಯ ಮೂಲವಾಗಿದೆ, ಆದರೆ ಇದರ ಬಗ್ಗೆ ಹೆಚ್ಚು ಮಾಹಿತಿ ಇಲ್ಲ. ಆದರೂ ಸಾರ್ವಜನಿಕ ಸ್ಥಳಗಳಲ್ಲಿ ಬಾಗಿಲ ಹಿಡಿಗಳು, ಲಿಫ್ಟ್ ನ ಒತ್ತು ಗುಂಡಿಗಳು ಮತ್ತು ಕೌಂಟರ್ಗಳನ್ನು ಸ್ಪರ್ಶಿಸಿದ ನಂತರ ಕೈಗಳನ್ನು ಸ್ಯಾನಿಟೈಜರ್ ಗಳಿಂದ ಶುಚಿಗೊಳಿಸುವುದು ಸುರಕ್ಷಿತವಾಗಿದೆ.
ನಾವು ಎಷ್ಟು ಜನ ಸೋಂಕಿತರಾಗಬಹುದು: ಸಾಂಕ್ರಾಮಿಕ ವ್ಯಕ್ತಿಯಿಂದ ಉಂಟಾಗುವ ಹೊಸ ಸೋಂಕುಗಳ ಸರಾಸರಿ ಸಂಖ್ಯೆ, ಅಂದರೆ ಮಾನವ ಪ್ರಸರಣ ಶ್ರೇಣಿ (ಆರ್0) 2.2 ರಿಂದ 3.1 ರ ನಡುವೆ ಇರುತ್ತದೆ. ಸರಳ ವಾಕ್ಯದಲ್ಲಿ ಹೇಳುವುದಾದರೆ, ಒಬ್ಬ ಸೋಂಕಿತ ವ್ಯಕ್ತಿಯು ಸರಾಸರಿ 2.2 ರಿಂದ 3.1 ವ್ಯಕ್ತಿಗಳಿಗೆ ಸೋಂಕು ತಗುಲಿಸುತ್ತಾನೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರಿಂದ ನಾವು ಕೃತಕವಾಗಿ ಸೋಂಕು ಹರಡುವಿಕೆಯನ್ನು ತಗ್ಗಿಸಬಹುದು, ಅದು ಸೋಂಕಿನ ದರವನ್ನು ಕಡಿಮೆ ಮಾಡುತ್ತದೆ.

ವೈರಾಣು ಬಂದಿದ್ದು ಎಲ್ಲಿಂದ: ಇದು ಬಾವುಲಿಯ ಸೂಪ್ ಕುಡಿದಿದ್ದರಿಂದ ಬಂದಿದ್ದಲ್ಲ. ಒಂದು ಬಾರಿ ಕುದಿಸಿದಾಗ ವೈರಾಣು ನಾಶವಾಗುತ್ತದೆ. ಪ್ರಾಥಮಿಕವಾಗಿ, ಎಸ್.ಎ.ಆರ್.ಸಿ. – ಸಿಓವಿ-2 ವೈರಾಣು ಬಾವುಲಿಯಿಂದ ಮನುಷ್ಯನಿಗೆ ಬಂದಿದೆ ಎಂಬ ಊಹೆಗಳಿದ್ದವು. ಆದರೆ, ಇತ್ತೀಚಿನ ಜಿನೊಮ್ಗಳ ಅಧ್ಯಯನವು ಅದು ಮಾನವರಿಗೆ ಅಂಟಿಕೊಳ್ಳುವ ಮೊದಲು ಬಾವಲಿಯಿಂದ ಮಧ್ಯವರ್ತಿ ಪ್ರಭೇದಕ್ಕೆ ತಾಕಿರಬಹುದು ಎಂದು ಹೇಳಿದೆ. ಮತ್ತೊಂದು ಅಧ್ಯಯನವು ಎಸ್.ಎ.ಆರ್.ಎಸ್.-ಸಿಓವಿ-2 ವೈರಸ್ ನ ವಂಶಾವಳಿ ರೋಗ ಹರಡುವ ಮೊದಲು ಮಾನವರಲ್ಲಿ ಸಂಚರಿಸುತ್ತಿದೆ ಎಂದು ಸೂಚಿಸುತ್ತದೆ.
ಅದು ಹೇಗೆ ವಿಕಸನಗೊಳ್ಳುತ್ತದೆ: ಮಾನವರಿಗೆ ಪ್ರಾಣಿ ರಹಿತ ವರ್ಗಾವಣೆಯ ಮೊದಲು ಮಾನವರಲ್ಲದ ಪ್ರಾಣಿಗಳ ಆತಿಥೇಯರಲ್ಲಿ ಸ್ವಾಭಾವಿಕ ವೈರಾಣು ತಳಿಗಳ ಮೂಲಕ ಅಥವಾ ಪ್ರಾಣಿಗಳಿಂದ ಮಾನವರಿಗೆ ಪ್ರಸರಣವಾದ ನಂತರ ಮಾನವರಲ್ಲಿ ನೈಸರ್ಗಿಕ ವೈರಾಣು ತಳಿಗಳ ಮೂಲಕ ಎಸ್.ಎ.ಆರ್.ಸಿ. –ಸಿ.ಓ.ವಿ. -2 ಹೊರಹೊಮ್ಮಿದೆ. ಈ ಎರಡರಲ್ಲಿ ಯಾವುದು ಸರಿ ಎಂಬುದನ್ನು ಹೆಚ್ಚಿನ ಅಧ್ಯಯನಗಳು ಮಾತ್ರ ತಿಳಿಸಬಹುದು. ಮಾನವ ಸೋಂಕು ಮತ್ತು ಪ್ರಸರಣಕ್ಕೆ ಅನುವು ಮಾಡಿಕೊಟ್ಟ ಎಸ್.ಎ.ಆರ್.ಸಿ. –ಸಿ.ಓ.ವಿ. -2 ನಲ್ಲಿನ ರೂಪಾಂತರಗಳು ಯಾವುವು ಎಂಬುದು ನಮಗೆ ಇನ್ನೂ ಸ್ಪಷ್ಟವಾಗಿಲ್ಲ.
ಯಾವಾಗ ಎಸ್.ಎ.ಆರ್.ಸಿ. –ಸಿ.ಓ.ವಿ. -2 ಹೊರಹೊಮ್ಮಿತು: ಡಿಸೆಂಬರ್ 2019 ಕ್ಕಿಂತ ಮೊದಲು ಎಸ್.ಎ.ಆರ್.ಸಿ. –ಸಿ.ಓ.ವಿ. -2 ನ ಯಾವುದೇ ದಾಖಲಿತ ಪ್ರಕರಣಗಳು ಇರಲಿಲ್ಲ. ಆದಾಗ್ಯೂ, ಪ್ರಾಥಮಿಕ ಜಿನೋಮಿಕ್ ವಿಶ್ಲೇಷಣೆಗಳು ಎಸ್.ಎ.ಆರ್.ಸಿ. –ಸಿ.ಓ.ವಿ. -2 ನ ಮೊದಲ ಮಾನವ ಪ್ರಕರಣಗಳು ಅಕ್ಟೋಬರ್ ಮಧ್ಯ ಮತ್ತು 2019 ರ ಡಿಸೆಂಬರ್ ಮಧ್ಯದಲ್ಲಿ ಕಾಣಿಸಿಕೊಂಡಿವೆ ಎಂದು ಸೂಚಿಸುತ್ತದೆ. ಇದರ ಅರ್ಥ ಮಾನವರಲ್ಲಿ ಪತ್ತೆಯಾಗಿಲ್ಲದ ಪ್ರಸರಣ ಅವಧಿ ಪ್ರಾಣಿಗಳಿಂದ ಮಾನವರಿಗೆ ಸೋಂಕು ಹರಡುವ ಮತ್ತು ಮಹಾಮಾರಿ ಸ್ಫೋಟಕಕ್ಕೂ ಮೊದಲಿನದಾಗಿದೆ.
ಇದು ಪ್ರಾಣಿಗಳಿಗೂ ಸೋಂಕು ತರುತ್ತದೆಯೇ: ಮಾನವ, ಬಾವುಲಿ, ಪುನುಗು ಬೆಕ್ಕು (ಸಿವೆಟ್), ಕೋತಿ ಮತ್ತು ಹಂದಿಯ ಕೋಶಗಳಲ್ಲದೆ ಎಸ್.ಎ.ಆರ್.ಸಿ. –ಸಿ.ಓ.ವಿ. -2 ಪರಿಣಾಮ ಬೀರಬಹುದು ಎಂದು ಮಾಲಿಕ್ಯುಲರ್ ಮಾದರಿ ಸೂಚಿಸುತ್ತದೆ. ಸಾಕು ಪ್ರಾಣಿಗಳು ಅಥವಾ ಜಾನುವಾರುಗಳಿಗೆ ಸೋಂಕು ತಗುಲಿರುವುದಿಲ್ಲ. ಮೊಟ್ಟೆ ಅಥವಾ ಕೋಳಿ ಸೇವಿಸುವುದರಿಂದ ಎಸ್.ಎ.ಆರ್.ಸಿ. –ಸಿ.ಓ.ವಿ. -2 ಸೋಂಕು ಉಂಟಾಗುವುದಿಲ್ಲ.
ಒಬ್ಬರಿಗೆ ಎರಡು ಬಾರಿ ಸೋಂಕು ಬರಬಹುದೇ: ಒಂದು ಬಾರಿ ದಡಾರ ಬಂದರೆ ನಮಲ್ಲಿ ಬಹುತೇಕರಿಗೆ ಜೀವಮಾನಪರ್ಯಂತ ರೋಗನಿರೋಧಕ ಶಕ್ತಿ ಬರುತ್ತದೆ. ಮತ್ತೆ ದಡಾರ ಬರುವುದಿಲ್ಲ. ಪ್ರಾಯೋಗಾತ್ಮಕವಾಗಿ ಸೋಂಕಿತ ಮಕಾಕ್ ಗಳಿಗೆ ಮರು ಸೋಂಕು ಹೊಂದಿರಲಿಲ್ಲ. ಅಂತೆಯೇ, ಮಾನವರಲ್ಲಿ ಚೇತರಿಸಿಕೊಂಡ ನಂತರ ಎಸ್.ಎ.ಆರ್.ಸಿ. –ಸಿ.ಓ.ವಿ. -2 ನೊಂದಿಗೆ ಮರುಹೊಂದಿಸುವ ಯಾವುದೇ ಪುರಾವೆಗಳಿಲ್ಲ. ಆದಾಗ್ಯೂ, ರೋಗನಿರೋಧಕ ಶಕ್ತಿ ಎಷ್ಟು ಕಾಲ ಉಳಿಯುತ್ತದೆ ಎಂಬುದು ತಿಳಿದಿಲ್ಲ.

ರೋಗ ಎಷ್ಟು ತೀವ್ರತೆಯಿಂದ ಕೂಡಿದೆ: ಕೋವಿಡ್ -19 ಒಂದು ಮರಣ ಶಾಸನವೇನಲ್ಲ. ಬಹುತೇಕ ಕೋವಿಡ್ ಪ್ರಕರಣಗಳು ಅತ್ಯಂತ ಕಡಿಮೆ ಪ್ರಭಾವದ್ದಾಗಿವೆ (ಶೇ.81), ಸುಮಾರು ಶೇ.15ರಷ್ಟಕ್ಕೆ ಆಸ್ಪತ್ರೆಯ ದಾಖಲೀಕರಣದ ಅಗತ್ಯವಿದೆ ಮತ್ತು ಶೇ. 5ರಷ್ಟಕ್ಕೆ ಕ್ಲಿನಿಕಲ್ ಆರೈಕೆಯ ಅಗತ್ಯವಿದೆ. ಬಹುತೇಕ ಸೋಂಕಿತರಿಗೆ ಆಸ್ಪತ್ರೆಯ ದಾಖಲೀಕರಣದ ಅಗತ್ಯವೂ ಇರುವುದಿಲ್ಲ.
ಯಾರು ಅತ್ಯಂತ ದುರ್ಬಲರು: ಆರೋಗ್ಯ ಕಾರ್ಯಕರ್ತರು ಬಹುತೇಕ ಶಂಕಿತರಾಗುತ್ತಾರೆ. ಲೋಮ್ಬಾರ್ಡಿ, ಇಟಲಿಯಲ್ಲಿ ಸುಮಾರು ಶೇ. 20ರಷ್ಟು ಆರೋಗ್ಯ ಕಾರ್ಯಕರ್ತರು ರೋಗಿಗಳಿಗೆ ಆರೈಕೆ ನೀಡುವಾಗ ಸೋಂಕಿತರಾಗಿದ್ದಾರೆ. ಸಾರ್ವಜನಿಕರಲ್ಲಿ, ವಯಸ್ಸಾದವರು ಅದರಲ್ಲೂ 60ವರ್ಷ ಮೇಲ್ಪಟ್ಟವರು ಮತ್ತು ಮೊದಲೇ ಹೃದಯಸಂಬಂಧಿ ಕಾಯಿಲೆ ಇದ್ದವರು, ರಕ್ತದೊತ್ತಡ, ಮಧುಮೇಹ ಮತ್ತು ಉಸಿರಾಟದ ತೊಂದರೆಯವರಲ್ಲಿ ಹೆಚ್ಚಿನ ಅಪಾಯ ಇರುತ್ತದೆ.
ಸಾವಿಗೆ ಕಾರಣವೇನು: ಬಹುತೇಕ ಸಾವುಗಳು ಉಸಿರಾಟದ ವೈಫಲ್ಯ ಅಥವಾ ಉಸಿರಾಟದ ಸಮಸ್ಯೆಯ ಜೊತೆಗೆ ಹೃದಯ ಹಾನಿ ಜೊತೆಗೂಡಿ ಸಂಭವಿಸಿವೆ. ದ್ರವ ಶ್ವಾಸಕೋಶಕ್ಕೆ ಸೋರಿಕೆಯಾಗುವುದರಿಂದ, ಇದು ಉಸಿರಾಟಕ್ಕೆ ಅಡ್ಡಿಯುಂಟು ಮಾಡುತ್ತದೆ ಮತ್ತು ಅಸ್ವಸ್ಥತೆಗೆ ಕಾರಣವಾಗುತ್ತದೆ, ಇದು ಪ್ರಾಥಮಿಕ ವೈದ್ಯಕೀಯ ಸ್ಥಿತಿಯಾಗಿದೆ. ಪ್ರಸ್ತುತ, ಅಗತ್ಯವಿದ್ದಲ್ಲಿ ವೆಂಟಿಲೇಟರ್ ಸೇರಿದಂತೆ ಕೋವಿಡ್-19 ಚಿಕಿತ್ಸೆ ಪ್ರಾಥಮಿಕವಾಗಿ ಪೂರಕ ಆರೈಕೆಯಾಗಿದೆ. ಹಲವಾರು ಚಿಕಿತ್ಸಕ ಪ್ರಯೋಗಗಳನ್ನು ನಡೆಸಲಾಗುತ್ತಿದ್ದು ಫಲಿತಾಂಶಕ್ಕಾಗಿ ಕಾಯಲಾಗುತ್ತಿದೆ.
ವೈರಾಣು ಹಾಲು ಅಥವಾ ದಿನಪತ್ರಿಕೆ ಹಾಕುವರಿಂದ ಹಬ್ಬುತ್ತದೆಯೇ: ಎಸ್.ಎ.ಆರ್.ಸಿ. –ಸಿ.ಓ.ವಿ. -2 ಪ್ಲಾಸ್ಟಿಕ್ ಮತ್ತು ಸ್ಟೈನ್ ಲೆಸ್ ಸ್ಟೀಲ್ ಮೇಲ್ಮೈಮೇಲೆ 3 ದಿನಗಳ ಕಾಲ ಇರುತ್ತದೆ. ಯಾವಾಗ ವೈರಾಣುವಿನ ಭಾರ 10,000 ಪಿಎಫ್.ಯು. ಇದ್ದಾಗ ಅದು ಹತ್ತಿ ಬಟ್ಟೆ ಮತ್ತು ದಿನಪತ್ರಿಕೆಗಳ ಮೇಲೆ 5 ನಿಮಿಷ ಮಾತ್ರವೇ ಇರುತ್ತದೆ. ಹಾಲಿನ ಪೊಟ್ಟಣ ನೀರಿನಿಂದ ತೊಳೆಯುವುದು ಅದರ ವೈರಾಣು ನಿವಾರಣೆಗೆ ಸಾಕಾಗುತ್ತದೆ.
ಅದು ಗಾಳಿಯ ಮೂಲಕ ಹಬ್ಬುತ್ತದೆಯೇ: ಗಾಳಿಯಲ್ಲಿ ವೈರಾಣು ಕೇವಲ 2. ಗಂಟೆ ಮಾತ್ರ ಇರುತ್ತದೆ. ಹೀಗಾಗಿ ಬಯಲು ಪ್ರದೇಶ ಅಂದರೆ ಬಾಲ್ಕನಿ ಅಥವಾ ಮಹಡಿಯಲ್ಲಿರುವುದರಿಂದ ಯಾವುದೇ ಹಾನಿ ಆಗುವುದಿಲ್ಲ.
ಕಡಿಮೆ ವೈರಾಣು ತಳಿ ಇದೆಯೇ: ಅನೇಕ ತಳಿಗಳನ್ನು ಗುರುತಿಸಲಾಗುತ್ತಿರುವಾಗ, ಇದುವರೆಗಿನ ಅಧ್ಯಯನಗಳು ಪ್ರಸರಣ ಅಥವಾ ರೋಗದ ತೀವ್ರತೆಯ ಯಾವುದೇ ಬದಲಾವಣೆಗಳಿಗೆ ಸಂಬಂಧಿಸಿರುವ ಯಾವುದೇ ರೂಪಾಂತರಗಳನ್ನು ಸೂಚಿಸುವುದಿಲ್ಲ.

Published by
MAYOON N / BIOTECHNOLOGIST / DIRECTOR OF DRM CAREER BUILD CENTER, KOLAR – 563101
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಮ್ಮ ಭಾರತ ದೇಶ ಚಾರಿತ್ರಿಕ ಪುರಾತನ ದೇವಾಲಯಗಳ ನಿಲಯ. ಹೀಗಾಗಿ ಅರಬ್ಬಿ ಸಮುದ್ರದಲ್ಲಿ ಇರುವ ಈ ಶಿವಾಲಯ ದಿನವೂ ಮಾಯವಾಗುತ್ತೆ ಮತ್ತೆ ಪ್ರತ್ಯಕ್ಷವಾಗುತ್ತದೆ. ಹಲವಾರು ಶತಮಾನಗಳ ಹಿಂದೆ ನಿರ್ಮಿಸಿದರೂ ಇಂದಿಗೂ ಸುಸ್ಥಿತಿಯಲ್ಲಿರುವ ದೇವಾಲಯಗಳು ಕೆಲವಾದರೆ, ಪುರಾಣಗಳ ಹಿನ್ನೆಲೆಯಲ್ಲಿ ವಿಶಿಷ್ಠ ದೇವಾಲಯಗಳು ಕೂಡ ಸಾಕಷ್ಟು ನಾವು ನೋಡಬಹುದು.ಕೆಲವು ದೇವಾಲಯಗಳು ಅವುಗಳ ನಿರ್ಮಾಣ ಶೈಲಿ, ಆಕಾರ, ಪ್ರಾಚೀನತೆ ಮೊದಲಾದ ಅಂಶಗಳಿಂದ ಪ್ರಚಾರಕ್ಕೆ ಬಂದಿವೆ. ಆದರೆ ಗುಜರಾತ್ ರಾಜ್ಯದಲ್ಲಿರುವ ಒಂದು ಶಿವಾಲಯ ಮಾತ್ರ ಇವೆಲ್ಲಕ್ಕೂ ಭಿನ್ನವಾಗಿವೆ. ಏಕೆಂದರೆ ಈ ದೇವಾಲಯ ಪ್ರತಿದಿನ…
ಹೊಸ ವರ್ಷ ಹೊಸದಾಗಿರಲಿ ಎಂಬುದು ಪ್ರತಿಯೊಬ್ಬರ ಆಸೆ. ಜ್ಯೋತಿಷ್ಯ ಶಾಸ್ತ್ರ ಕೂಡ ಈ ವರ್ಷ ಯಾವ ರಾಶಿಯವರಿಗೆ ರಾಜಯೋಗ ಎಂಬುದನ್ನು ಹೇಳಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 2019 ಕುಂಭ ರಾಶಿಯವರಿಗೆ ಶುಭ ಫಲಗಳನ್ನು ನೀಡಲಿದೆಯಂತೆ. ಕುಂಭ ರಾಶಿಯವರ ಪ್ರತಿಯೊಂದು ಸಮಸ್ಯೆ ದೂರವಾಗಿ ಯಶಸ್ಸು ಅರಸಿ ಬರಲಿದೆಯಂತೆ. ಸಂತೋಷ ಎಲ್ಲೆಲ್ಲೂ ಮನೆ ಮಾಡಿರಲಿದೆಯಂತೆ. 2019 ಕುಂಭ ರಾಶಿಯವರಿಗೆ ಸರಳ ಹಾಗೂ ಸುಲಭವಾಗಿರಲಿದೆಯಂತೆ. ಮಂಗಳಕರ ಘಟನೆಗಳು ನಡೆಯಲಿದ್ದು, ಉದ್ಯೋಗ, ಬಡ್ತಿ ಪ್ರಾಪ್ತಿಯಾಗಲಿದೆಯಂತೆ. ಕಂಕಣ ಬಲ ಕೂಡಿ ಬರಲಿದೆಯಂತೆ. ಮಾನ, ಸನ್ಮಾನ,…
ತಾಯಿಯೊಬ್ಬಳು ತನ್ನ ಇಬ್ಬರು ಮಕ್ಕಳನ್ನು ಪೆಟ್ಟಿಗೆಯಲ್ಲಿಟ್ಟು ಉಸಿರುಗಟ್ಟಿಸಿ ಕೊಲೆ ಮಾಡಿದ ಅಮಾನವೀಯ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಭದೋಹಿಯ ಖಮಾರಿಯಾ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಹಥೇನ್ (6) ಮತ್ತು ಸಹೋದರ ಹಸನ್ (3) ಮೃತ ಬಾಲಕರು. ತಾಯಿ ಮಾನಸಿಕ ಅಸ್ವಸ್ಥೆಯಾಗಿದ್ದರಿಂದ ದುರ್ಘಟನೆ ನಡೆದಿದೆ ಎಂದು ವರದಿಯಾಗಿದೆ. ಮೃತ ಬಾಲಕರ ತಂದೆ ಮಾಲು ಅನ್ಸಾರಿ ಖಮರಿಯಾದ ಕಾರ್ಪೆಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಗುರುವಾರ ರಾತ್ರಿ ಕೆಲಸ ಮುಗಿಸಿಕೊಂಡು ಮನೆಗೆ ಬಂದು ಮಕ್ಕಳನ್ನು ನೋಡಿದ್ದಾರೆ. ಆದರೆ ಮಕ್ಕಳು…
ರಾತ್ರಿ ಮಲಗುವ ಸಮಯದಲ್ಲಿ ಒಂದು ಏಲಕ್ಕಿಯನ್ನ ತಿಂದು ಉಗುರು ಬೆಚ್ಚಗಿನ ನೀರನ್ನ ನಮ್ಮ ದೇಹಕ್ಕೆ ಎಷ್ಟು ಪ್ರಯೋಜನ ಅನ್ನುವುದು ಇನ್ನು ಹಲವು ಜನರಿಗೆ, ಹಾಗಾದರೆ ಒಂದು ಏಲಕ್ಕಿ ತಿಂದು ಉಗುರು ಬೆಚ್ಚಗಿನ ನೀರನ್ನ ಕುಡಿದರೆ ಏನಾಗುತ್ತದೆ ತಿಳಿಯೋಣ. ಸ್ನೇಹಿತರೆ ಸುಗಂಧ ದ್ರವ್ಯಗಳಲ್ಲಿ ಏಲಕ್ಕಿ ಪ್ರಧಾನವಾದದ್ದು ಎಂದು ಹೇಳಿದರೆ ತಪ್ಪಾಗಲ್ಲ, ಇನ್ನು ದೇಶದಲ್ಲಿ ದೊಡ್ಡ ಸುಗಂಧ ದ್ರವ್ಯಗಳು ದೊರೆಯುತ್ತದೆ ಮತ್ತು ಇದು ನಮ್ಮ ದೇಹಕ್ಕೆ ಮತ್ತು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಅನ್ನುವ ಉದ್ದೇಶದಿಂದ ಅದನ್ನ ಕೊಳ್ಳೆ ಹೊಡೆದುಕೊಂಡು ಹೋಗುವ ಸಲುವಾಗಿ…
ಒತ್ತಡದ ಜೀವನಶೈಲಿ ಅನೇಕ ಆರೋಗ್ಯ ಸಮಸ್ಯೆಗಳನ್ನು ತರುತ್ತದೆ, ಅದರಲ್ಲೊಂದು ರಕ್ತದೊತ್ತಡ. ರಕ್ತದೊತ್ತಡ ಸಮಸ್ಯೆಯಿಂದ ಹೃದಯಾಘತ, ಹೃದಯ ಸ್ತಂಭನ ಉಂಟಾಗುವುದು. ಇಲ್ಲಿ ರಕ್ತದೊತ್ತಡವನ್ನು ನಿಯತ್ರದಲ್ಲಿಡುವ ಟಿಪ್ಸ್ ನೀಡಿದ್ದೇವೆ ನೋಡಿ.ಅಧಿಕ ರಕ್ತದೊತ್ತಡದ ಸಮಸ್ಯೆ ಹೆಚ್ಚಿನವರಲ್ಲಿ ಕಂಡು ಬರುತ್ತದೆ. ಕೆಲಸದ ಒತ್ತಡ, ಮಾನಸಿಕ ಒತ್ತಡ ಈ ರಕ್ತದೊತ್ತಡ ಸಮಸ್ಯೆಯನ್ನು ಮತ್ತಷ್ಟು ಹೆಚ್ಚು ಮಾಡುವುದು. ರಕ್ತದೊತ್ತಡ ಹೆಚ್ಚಾದರೆ ಸ್ಟ್ರೋಕ್(ಪಾರ್ಶ್ವವಾಯು), ಹೃದಯಾಘಾತ, ಹೃದಯ ಸ್ತಂಭನ ಮುಂತಾದ ಸಮಸ್ಯೆ ಕಂಡು ಬರುವುದು. ಆರೋಗ್ಯಕರ ಜೀವನಶೈಲಿ, ಧ್ಯಾನ, ವ್ಯಾಯಾಮ ರಕ್ತದೊತ್ತಡ ನಿಯಂತ್ರಣದಲ್ಲಿಡುವಲ್ಲಿ ಸಹಕಾರಿ. ರಕ್ತದೊತ್ತಡ ಸಮಸ್ಯೆ ಇರುವವರು…
ಬುದ್ಧಿಮತ್ತೆ :
ಅಧ್ಯಯನದ ಪ್ರಕಾರ, ಪೊಟಾಷಿಯಮ್ ಜಾಗೃತಗೊಳಿಸುವ ಕೆಲಸದಲ್ಲಿ ನೆರವಾಗಿದೆ.
ಮಲಬದ್ಧತೆ :
ನಾರಿನ ಅಂಶ ಯತೇಚ್ಛ. ಕೃತಕ ವಿರೇಚಕಗಳಿಲ್ಲದೆ, ಮಲಬದ್ಧತೆಯ ಸಮಸ್ಯೆಯನ್ನು, ಹೋಗಲಾಡಿಸಲು ಅತ್ಯಂತ ಸಹಾಯಕಾರಿ.
ಈ ಸಮಸ್ಯೆ ಇದ್ದವರು ತಪ್ಪಿಯೂ ಬಾಳೆಹಣ್ಣು ತಿನ್ನಬಾರದು…!!!
ಅಸಿಡಿಟಿ ಸಮಸ್ಯೆ ಇರುವವರು ಇದನ್ನು ತಿನ್ನಬಾರದು.
ಹೃದಯ ಸಂಬಂಧಿತ ಖಾಯಿಲೆ ಇದ್ದವರು ಇದನ್ನು ಸೇವಿಸಬಾರದು
ಮಧುಮೇಹ ರೋಗಿಗಳಿಗೂ ಇದರ ಸೇವನೆ ಒಳ್ಳೆಯದಲ್ಲ.
ಹೆಚ್ಚು ತಲೆನೋವು ಸಮಸ್ಯೆ ಎದುರಿಸುವವರು. ಅಜೀರ್ಣತೆ ಸಮಸ್ಯೆಯಿಂದ ಬಳಲುತ್ತಿರುವವರು..
ಕಿಡ್ನಿ ಅಲರ್ಜಿ ಸಮಸ್ಯೆ ಇದ್ದವರು ಬಾಳೆಹಣ್ಣು ತಿನ್ನಬಾರದು.