ಆಧ್ಯಾತ್ಮ

ಆಂಜನೇಯ ಸ್ವಾಮಿಯ ಮೊದಲ ಅವತಾರ, ವೃಶ ಕಪಿ ಅವತಾರದ ಬಗ್ಗೆ ನಿಮಗೆ ಗೊತ್ತಾ..?ತಿಳಿಯಲು ಮುಂದೆ ಓದಿ…

4626

ನಮಗೆ ಗೊತ್ತಿರುವ ಹಾಗೆ ಶ್ರೀ ರಾಮ ಭಕ್ತ ಹನುಮಂತನ ಜನ್ಮ ವೃತ್ತಾಂತ, ಹನುಮಂತ ದೇವರು, ಭಗವಾನ್ ಶಿವನ ಅಂಶದ ಅವತಾರ ಇವೆಲ್ಲವೂ ನಮಗೆ ಗೊತ್ತಿದೆ. ಆದರೆ ಗೊತ್ತಿಲ್ಲದ ವಿಷಯ ಏನೆಂದರೆ ಹನುಮಂತನ ಈ ಅವತಾರಕ್ಕೆ ಮುಂಚೆ, ಎಷ್ಟೋ ಯುಗಗಳ ಹಿಂದಯೇ ಹನುಮಂತನ ಮತ್ತೊಂದು ಅವತಾರವಾಗಿತ್ತು. ಆ ಅವತಾರವೇ  ವೃಶ ಕಪಿ ಅವತಾರ.

ಈ ಅವತಾರದ ಬಗ್ಗೆ ಸ್ವತಹ ಶ್ರೀ ರಾಮನೇ ತನ್ನ ಭಕ್ತ ಆಂಜನೇಯನಿಗೆ ತಿಳಿಸುತ್ತಾನೆ. ಕಾರಣ ಶ್ರೀರಾಮನ ಅವತಾರದ ಸಮಯ ಭೂಲೋಕದಲ್ಲಿ ಮುಗಿದು, ತಮ್ಮ ವೈಕುಂಟ ಧಾಮಕ್ಕೆ ತೆರಳುವ ಸಮಯ ಸನಿಹಿತವಾಗಿರುತ್ತದೆ. ಇದನ್ನು ತನ್ನ ಪರಮ ಭಕ್ತ ಹನುಮಂತನಿಗೆ ಹೇಗೆ ತಿಳಿಸುವ ಯೋಚನೆಯಲ್ಲಿ ಶ್ರೀ ರಾಮನು ಹನುಮಂತನ ಅಸ್ಥಿತ್ವದ ಬಗ್ಗೆ ತಿಳಿಸಲು, ಹನುಮಂತನನ್ನು ಗೋದಾವರಿ ನದಿ ತೀರಕ್ಕೆ  ಕರೆದುಕೊಂಡು ಹೋಗುತ್ತಾನೆ.

ಆ ಸ್ಥಳಕ್ಕೆ ತಲುಪಿದ ನಂತರ ಹನುಮಂತನಿಗೆ ಒಂದು ವಿಚಿತ್ರವಾದ ಅಭಾಸವಾಗುತ್ತದೆ. ಅದೇನಂದರೆ ಈ ಜಾಗಕ್ಕೆ ಮುಂಚೆ ಬಂದು ಹೋಗಿರುವ ಹಾಗೆ ಹಾಗೂ ಪದೇ ಪದೇ ತನ್ನಂತಯೇ ಇರುವ ಒಂದು ಚಿತ್ರ ತನ್ನ ಮುಂದೆ ಹಾದು ಹೋಗುತ್ತಿರುತ್ತದೆ.  ಇದರಿಂದ ವಿಚಲಿತನಾದ ಹನುಮಂತನು ಇದರ ಬಗ್ಗೆ ರಾಮನಲ್ಲಿ ಕೇಳಲಾಗಿ, ಆಗ ಶ್ರೀ ರಾಮನು ಹನುಮಂತನಿಗೆ ನಿನಗೆ ಆಗುತ್ತಿರುವ ಅನುಭವವು ನಿಜವಾಗಿದೆ. ಇದರ ಇಂದೇ ಒಂದು ಕಥೆ ಇದೆ. ಅದೇ ವೃಶ ಕಪಿ ಮಹಾ ಶಕ್ತಿಯ ಅವತಾರದ ಕಥೆ.

ಅನೇಕ ಯುಗಗಳ ಹಿಂದೆ ದೈತ್ಯ ಹಿರನ್ಯಕನೆಂಬ ರಾಜನಿದ್ದು ಅವನಿಗೆ ಮಹಾ ಶನಿ ಎಂಬ ಮಗನಿರುತ್ತಾನೆ. ಅವನು ಸ್ವತಹ ತಪಸ್ವಿಯಾಗಿದ್ದರೂ ದೈತ್ಯನಾಗಿರುತ್ತಾನೆ. ತನ್ನ ಮಹಾ ಶಕ್ತಿಯಿಂದ ಮಾನವ ದಾನವರನ್ನು ಸೋಲಿಸಿ ಪಾತಾಳ ಲೋಕದ ರಾಜನಾಗಿರುತ್ತಾನೆ.

ಇಷ್ಟಕ್ಕೆ ತೃಪ್ತನಾಗದ ಮಹಾ ಶನಿಯು ದೇವಲೋಕದ ದಾಳಿ ಮಾಡಲು ಸ್ವರ್ಗದ ಕಡೆ ಒಬ್ಬನೇಹೋಗುತ್ತಾನೆ.

ಇದನ್ನು ತಡೆದ ದೇವತೆಗಳನ್ನು ಸೋಲಿಸಿ ಇಂದ್ರನನ್ನು ತನ್ನ ಜಡೆಗಳಿಂದ  ಬಂದಿಸಿ, ಪಾತಾಳ ಲೋಕದ ಕಾಲ ಕೋಟಿ ಎಂಬಲ್ಲಿ ಬಂದಿಸಿ ಇಡುತ್ತಾನೆ.

ನಂತರ ಕೆಲವು ಶರುತ್ತಗಳ ಮೇಲೆ ಬಿಡುಗಡೆ ಮಾಡುತ್ತಾನೆ. ಇಂದ್ರನನ್ನು ಬಿಡುಗಡೆ ಮಾಡಿದ್ರೂ, ಸಹ ಇಂದ್ರ ಮತ್ತು ಸ್ವರ್ಗಗಳು ದೈತ್ಯ ಮಹಾ ಶನಿಯ ಹಿಡಿತದಲ್ಲೇ ಇರುತ್ತದೆ. ಹೀಗಾಗಿ ಇಂದ್ರನಿಗೆ ಬಿಡುಗಡೆಯಾದ್ರು ಸ್ವತಂತ್ರವಿರುವುದಿಲ್ಲ.

ಹೀಗಾಗಿ ಇದರ ಬಗ್ಗೆ ಯೋಚಿಸಿದ ಇಂದ್ರನ ಪತ್ನಿ ಶಚಿ ದೇವಿಯು ಬ್ರಹ್ಮದೇವರಲ್ಲಿ ಪ್ರಾರ್ಥಿಸಲಾಗಿ,ಸೃಷ್ಟಿ ಕರ್ತ ಬ್ರಹ್ಮನು ದೈತ್ಯ ಮಹಾ ಶನಿಗೆ ಯಾವುದೇ ದೇವತೆಗಳಿಂದ ಸಾವಿಲ್ಲ. ಶಿವ ಮತ್ತು ವಿಷ್ಣು ದೇವರ ಅಂಶದಿಂದ ಜನಿಸಿದ ಮಹಾ ಶಕ್ತಿಯಿಂದ ಮಾತ್ರ ಕೊಲ್ಲಲು ಸಾಧ್ಯ ಎಂದು ತಿಳಿಸುತ್ತಾರೆ.

ನಂತರ ಇಂದ್ರ ಮತ್ತು ಶಚಿ ದೇವಿಯು ಗೋದಾವರಿ ನದಿ ತೀರಕ್ಕೆ ಬಂದು  ಹರಿ ಮತ್ತು ಹರರನ್ನು ಕುರಿತು ತಪಸ್ಸು ಮಾಡುತ್ತಾರೆ. ಅವರ ತಪಸ್ಸಿನ ಫಲವಾಗಿ ಈಶ್ವರ ಮತ್ತ ನಾರಾಯಣರು ಪ್ರತ್ಯಕ್ಷರಾಗಿ ವರ ಕೇಳುವಂತೆ ಇಂದ್ರ ಮತ್ತು ಶಚಿದೇವಿಗೆ ಹೇಳುತ್ತಾರೆ.

ಇಂದ್ರ ಮತ್ತು ಶಚಿದೇವಿಯು ಹರಿ ಮತ್ತು ಹರರಲ್ಲಿ ದೈತ್ಯ ಮಹಾ ಶನಿಯನ್ನು ಕೊಂದು ಲೋಕವನ್ನು ಕಾಪಾಡುವಂತೆ ಕೇಳಿಕೊಳ್ಳುತ್ತಾರೆ.

 ಈ ಚಿತ್ರ ಹರಿ ಮತ್ತು ಹರ ಅಂಶದ ವೃಶ ಕಪಿ ಅವತಾರದ ರೂಪ 

ಅವರ ಈ ಬೇಡಿಕೆಗೆ ತಥಾಸ್ತು ಎಂದ ಶಿವ ಮತ್ತು ನಾರಾಯಣರಿಂದ ಜ್ಯೋತಿಗಳು ಪ್ರಕಟಗೊಂಡು ಎರಡು ಜ್ಯೋತಿಗಳು ಸಂಗಮವಾಗಿರುವ ನದಿಯಲ್ಲಿ ಸೇರುತ್ತವೆ. ಆಗ ಹರೀ ಹರರ ಅಂಶಗಳಿಂದ ಒಂದು ಮಹಾ ಶಕ್ತಿಯ ಉದ್ಭವವಾಗುತ್ತದೆ. ಆ ಮಹಾಶಕ್ತಿಯು ಸ್ವತಹ ಹನುಮಂತನ ರೂಪದಂತಯೇ ಇದ್ದು ಅರ್ಧ ಶಿವನ ರೂಪ ಮತ್ತರ್ಧ ನಾರಾಯಣ ರೂಪ ಆಗಿರುತ್ತದೆ. ಈ ಅವತಾರವೇ ವೃಶ ಕಪಿ ಅವತಾರ.

ಇಂದ್ರ ಮತ್ತು ಶಚಿದೇವಿಯು ವೃಶ ಕಪಿ ದೇವರಲ್ಲಿ ಪ್ರಾರ್ಥಿಸಿ ದೈತ್ಯ ಮಹಾ ಶನಿಯಿಂದ ಈ ಲೋಕಕ್ಕೆ ಮುಕ್ತಿ ದೊರಕಿಸುಕೊಡುವಂತೆ ಕೇಳಿಕೊಳ್ಳುತ್ತಾರೆ.

ವೃಶ ಕಪಿ ಅವತಾರ

ಇವರ ಪ್ರಾರ್ಥನೆಗೆ ಪ್ರಸನ್ನನಾದ ವೃಶ ಕಪಿಯು ಒಂದೇ ಕ್ಷಣಕ್ಕೆ ಪಾತಾಳ ಲೋಕಕ್ಕೆ ಜಿಗಿದು ದೈತ್ಯ ಮಹಾ ಶನಿ ಮತ್ತು ಅವನ ಸೈನ್ಯವನ್ನು ಸಂಹಾರ ಮಾಡುತ್ತಾನೆ.ಹಾಗಾಗಿ ಈ ನದಿಗೆ ವೃಶ ಕಪಿ ತೀರ್ಥ ಎಂಬ ಹೆಸರು ಬಂದಿದೆ ಎಂದು ಹಾಗೂ ಅದು ಹನುಮಂತನ ಮೊದಲ ಅವತಾರವೆಂದು ಶ್ರೀರಾಮನು ತನ್ನ ಪರಮ ಭಕ್ತ ಆಂಜನೇಯನಿಗೆ ತಿಳಿಸುತ್ತಾನೆ.

ಜೈ ಶ್ರೀ ರಾಮ್…

ಜೈ ಹನುಮಾನ್…

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜ್ಯೋತಿಷ್ಯ

    ಉಪ್ಪನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ಮನೆಯ ಆ ಜಾಗದಲ್ಲಿ ಇಟ್ಟರೆ ಏನಾಗುತ್ತೆ ಗೊತ್ತಾ..?

    ಶ್ರೀಮಂತನಾಗುವುದು ಪ್ರತಿಯೊಬ್ಬನ ಬಯಕೆ. ಹಗಲು-ರಾತ್ರಿ ದುಡಿದು ಹಣ ಸಂಪಾದನೆ ಮಾಡ್ತಾರೆ ಅನೇಕರು. ಆದ್ರೆ ಶ್ರೀಮಂತರಾಗಲು ದುಡಿಮೆ ಜೊತೆ ಅದೃಷ್ಟ ಜೊತೆಗಿರಬೇಕು. ಅಡುಗೆ ಮನೆಯಲ್ಲಿರುವ ಉಪ್ಪು, ನಿಮ್ಮ ಅಭಿವೃದ್ಧಿಗೆ ಕಾರಣವಾಗುತ್ತದೆ. ಅಡುಗೆ ರುಚಿ ಹೆಚ್ಚಿಸುವ ಉಪ್ಪಿನಿಂದ ಅನೇಕ ಲಾಭಗಳಿವೆ. ಮನೆಯ ಮುಖ್ಯ ದ್ವಾರದ ಬಳಿ, ಕೆಂಪು ಬಟ್ಟೆಯಲ್ಲಿ ಸ್ವಲ್ಪ ಉಪ್ಪನ್ನು ಕಟ್ಟಿ ನೇತುಹಾಕಿ. ಇದು ನಿಮ್ಮ ಅದೃಷ್ಟ ಬದಲಿಸುತ್ತದೆ. ಯಾವುದೇ ನಕಾರಾತ್ಮಕ ಶಕ್ತಿ ಮನೆ ಪ್ರವೇಶ ಮಾಡುವುದಿಲ್ಲ. ಹಾಗೆ ಯಶಸ್ಸು ನಿಮ್ಮದಾಗುತ್ತದೆ. ವ್ಯಾಪಾರ ಸ್ಥಳದ ಮುಖ್ಯ ದ್ವಾರದ ಬಳಿ…

  • ಸುದ್ದಿ

    ಬಾಣಂತಿಯರಿಗಾಗಿ ಹೊಸ ಯೋಜನೆಯನ್ನು ಜಾರಿಗೆ ತಂದ ಬಿಬಿಎಂಪಿ,.!

    ಬಿಬಿಎಂಪಿ  ಆಸ್ಪತ್ರೆಗಳಲ್ಲಿ ಬಾಣಂತಿಯರಿಗಾಗಿ  ಹೊಸ ಯೋಜನೆಯನ್ನು  ಜಾರಿಗೆ ತರಬೇಕು ಎಂದು ನಿರ್ಧರಿಸಿದ್ದಾರೆ. ಈ ನಿರ್ಧಾರ ಕೈಗೊಳ್ಳಲು  ಮುಖ್ಯ ಕಾರಣವೇನೆಂದರೆ  ಬಾಣಂತಿಯರಿಗಾಗಿ ಉಪಯುಕ್ತ  ಪೌಷ್ಟಿಕಾಂಶ  ಮತ್ತು ಅವರಿಗಾಗಿ ಹಾಲು ಸಹ  ನೀಡಬೇಕು  ಎಂದು ನಿರ್ಧರಿಸಲಾಗಿದೆ.  ಬಿಬಿಎಂಪಿ ಆಸ್ಪತ್ರೆಗಳಲ್ಲಿ ಇನ್ನು ಮುಂದೆ ಬಾಣಂತಿಯರಿಗೆ ಎರಡು ಹೊತ್ತು ಹಾಲು ಪೂರೈಸಲು ನಿರ್ಧರಿಸಿದ್ದಾರೆ. ಬಿಬಿಎಂಪಿಯ 32 ಆಸ್ಪತ್ರೆಗಳಲ್ಲಿನ ಬಾಣಂತಿಯರಲ್ಲಿ ಪೌಷ್ಟಿಕಾಂಶ ಹೆಚ್ಚಿಸಲು ಯೋಜನೆ ರೂಪಿಸಿರುವ ಅಧಿಕಾರಿಗಳು, ಪ್ರತಿದಿನ 500 ಎಂ.ಎಲ್. ಹಾಲು ಪೂರೈಸಲು ನಿರ್ಧರಿಸಿದ್ದಾರೆ. ಯೋಜನೆಗಾಗಿ ಸುಮಾರು 15 ಲಕ್ಷ ರೂ ಮೀಸಲಿಡಲಾಗಿದೆ.ವರ್ಷಕ್ಕೆ…

  • ಜ್ಯೋತಿಷ್ಯ

    ದಿನ ಭವಿಷ್ಯ ಭಾನುವಾರ, ಈ ದಿನದ ನಿಮ್ಮ ರಾಶಿ ಭವಿಷ್ಯದಲ್ಲಿ ಏನಿದೆ ನೋಡಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(10 ಫೆಬ್ರವರಿ, 2019) ನಿಮ್ಮ ಪೋಷಕರು ನೀಡಿದ ಬೆಂಬಲದಿಂದ ಹಣಕಾಸು ಸಮಸ್ಯೆಗಳು ನಿವಾರಣೆಯಾದಂತೆನಿಸುತ್ತವೆ. ನೀವು ಅಪರೂಪಕ್ಕೆಭೇಟಿ ಮಾಡುವ…

  • inspirational

    ಮಗಳನ್ನು ಸರ್ಕಾರಿ ಅಂಗನವಾಡಿಗೆ ಸೇರಿಸಿ ಮಾದರಿಯಾದ ಕೊಡಗು SP..!

    ಕೊಡಗು ಜಿಲ್ಲಾ ಪೊಲೀಸ್ ವರಷ್ಠಾಧಿಕಾರಿ ಡಾ. ಸುಮನ್ ಪನ್ನೇಕರ್ ತಮ್ಮ ಮಗಳನ್ನು ಸರ್ಕಾರಿ ಅಂಗನವಾಡಿಗೆ ಕಳಿಸುವ ಮೂಲಕ ಮಾದರಿಯಾಗಿದ್ದರೆ. ತಮ್ಮ ಪುಟ್ಟ ಮಗಳನ್ನು ಸರ್ಕಾರಿ ಅಂಗನವಾಡಿಗೆ ಕಳಿಸಿ  ಕನ್ನಡ ಕಲಿಗೆ ಒತ್ತು ನೀಡಿದ್ದಾರೆ.ಗ್ರಾಮೀಣ ಮಕ್ಕಳೊಂದಿಗೆ ಬೆರೆಯುವ ಉದ್ದೇಶದಿಂದ ಮಗುವನ್ನು ಅಂಗನವಾಡಿಗೆ ನಿತ್ಯವೂ ಕಳಿಸಿ ತಾವು ಕೆಲಸಕ್ಕೆ ತೆರಳುತ್ತಾರೆ ಸುಮನ್. ಕಲಿಕೆ, ಆಟ, ಊಟದ ಜೊತೆಗೆ ಮಕ್ಕಳೊಂದಿಗೆ ಈ ಅಂಗನವಾಡಿಯಲ್ಲಿ ಎಸ್‍ಪಿ ಮಗಳು ಸಹ ಬೆರೆಯುತ್ತಿದ್ದಾಳೆ. ಸಾಮಾನ್ಯರ ಮಕ್ಕಳಂತೆ ಸರ್ಕಾರಿ ಅಂಗನವಾಡಿಯಲ್ಲಿ ಎಸ್‍ಪಿ ಪುತ್ರಿ ಖುಷಿ ಸಹ ಪಾಠ…

  • ಸಿನಿಮಾ

    ಮತದಾನ ಮಾಡದ ಸಿಟಿ ಮಂದಿಗೆ ಬೆಂಡೆತ್ತಿದ ಜಗ್ಗೇಶ್ ಆಕ್ರೋಶದಿಂದ ಹೇಳಿದ್ದೇನು ಗೊತ್ತಾ..?

    ಮತ ಹಾಕದ ಸಿಲಿಕಾನ್ ಸಿಟಿ ಮಂದಿ ಪ್ರಜ್ಞಾವಂತ ಮುಖವಾಡದ ನಿಷ್ಪ್ರಯೋಜಕ ನತದೃಷ್ಟರು. ಅವರು ಬದುಕಿರುವ ಶವಗಳು ಎಂದು ನವರಸ ನಾಯಕ ಜಗ್ಗೇಶ್ ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಗುರುವಾರದಂದು 2019ರ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ನಡೆದಿದೆ. ಮತದಾನ ಮಾಡಲು ಹಳ್ಳಿಗರು, ಅನಕ್ಷರಸ್ಥರು, ವೃದ್ಧರು, ಅಂಗವಿಕಲರು, ತುಂಬು ಗರ್ಭಿಣಿಯರು ಕೂಡ ಉತ್ಸಾಹದಿಂದ ಮತಗಟ್ಟೆಗೆ ಬಂದು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಆದ್ರೆ ಹೆಚ್ಚು ಪ್ರಜ್ಞಾವಂತರಿರುವ ಗಾರ್ಡನ್ ಸಿಟಿಯಲ್ಲಿಯೇ ಅತೀ ಕಡಿಮೆ ಪ್ರಮಾಣದಲ್ಲಿ ಮತದಾನವಾಗಿದೆ. ಬೆಂಗಳೂರು ದಕ್ಷಿಣದಲ್ಲಿ 53.47%…

  • ಸುದ್ದಿ

    ಮೈಸೂರು ದಸರಾ ವೇದಿಕೆಯಲ್ಲೇ ದಾಂಪತ್ಯ ಜೀವನಕ್ಕೆ ಮುನ್ನುಡಿ ಬರೆದ ‘ಬಿಗ್ ಬಾಸ್’ ಖ್ಯಾತಿಯ ಚಂದನ್ ಶೆಟ್ಟಿ ಹಾಗು ನಿವೇದಿತಾ….!

    ಮೈಸೂರಿನಲ್ಲಿ ನಡೆದ ಯುವ ದಸರಾ ಕಾರ್ಯಕ್ರಮ ವಿಶೇಷ ಘಟನೆಗೆ ಸಾಕ್ಷಿಯಾಗಿದೆ. ನಿವೇದಿತಾ ಗೌಡಗೆ ಚಂದನ್ ಶೆಟ್ಟಿ ಉಂಗುರ ತೊಡಿಸಿದ್ದಾರೆ. ‘ಬಿಗ್ ಬಾಸ್’ನಲ್ಲಿ ಸ್ಪರ್ಧಿಗಳಾಗಿದ್ದ ಚಂದನ್ ಶೆಟ್ಟಿ ಮತ್ತು ನಿವೇದಿತಾ ದಾಂಪತ್ಯ ಜೀವನಕ್ಕೆ ಕಾಲಿಡಲು ಮೈಸೂರು ದಸರಾ ವೇದಿಕೆಯಲ್ಲೇ ಮುನ್ನುಡಿ ಬರೆದಿದ್ದಾರೆ. ಯುವ ದಸರಾದಲ್ಲಿ ನಿವೇದಿತಾ ಅವರಿಗೆ ಪ್ರಪೋಸ್ ಮಾಡಿದ ಚಂದನ್ ಶೆಟ್ಟಿ ಉಂಗುರ ತೊಡಿಸಿದ್ದಾರೆ. ಮೈಸೂರಿನಲ್ಲಿ ನಡೆದ ಯುವ ದಸರಾ ಕಾರ್ಯಕ್ರಮ ರಂಗೇರಿದ್ದು ಕಾರ್ಯಕ್ರಮ ಮುಗಿಯುವ ವೇಳೆಯಲ್ಲಿ ಚಂದನ್ ಶೆಟ್ಟಿ ವೇದಿಕೆಯಲ್ಲಿಯೇ ಐ ಲವ್ ಯು ಹೇಳಿದ್ದಾರೆ….