News

The Founding of YouTube A Short History
ವಿಜಯನಗರದಲ್ಲಿ ಭಿಕ್ಷಾಟನೆ ಜಾಲ: ಶಾಲೆ ರಜೆ ಎಂದು ಮಕ್ಕಳನ್ನೇ ಭಿಕ್ಷೆಗೆ ಇಳಿಸಿದ್ದ ತಾಯಂದಿರು
ಬ್ಯಾಕ್ ಟು ಬ್ಯಾಕ್ ಟ್ರೋಫಿ ಗೆದ್ದು ಇತಿಹಾಸ ಬರೆದ ಆರ್‌ಸಿಬಿ – ಬೆಂಗಳೂರು
ಶಿಕ್ಷಕರಿಗೆ ಎಐ (AI) ಆಧರಿತ ಹಾಜರಾತಿ ಫಜೀತಿ;
“ಸಿದ್ದರಾಮಯ್ಯ ಸೀಕ್ರೆಟ್ ರಿವೇಂಜ್‌, ಡಿಕೆಶಿ ಮತ್ತು ರಾಹುಲ್‌ ಗಾಂಧಿಗೆ ಸೈಲೆಂಟ್ ಏಟು”
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ಘೋಷಣೆ – ಡಿಕೆ ಶಿವಕುಮಾರ್ ಮುಂದಿನ ಸಿಎಂ?
ಸ್ಟೈಲ್‌ಗಾಗಿ ಕಡಿಮೆ ಬೆಲೆಯ ಸನ್‌ಗ್ಲಾಸ್ ಧರಿಸುತ್ತೀರಾ? ಹಾಗಾದರೆ ಈ ಅಪಾಯಗಳ ಬಗ್ಗೆ ತಿಳಿಯಲೇಬೇಕು!
DIGITAL ARREST SCAM : ವೃದ್ಧೆ ಆಸ್ತಿ ಮಾರಿ ಖಾತೆಯಲ್ಲಿಟ್ಟಿದ್ದ 24 ಕೋಟಿ ರೂ ಲೂಟಿ
ಭಾರತದಲ್ಲಿ ಚಿನ್ನದ ಬೇಡಿಕೆಗೆ ದೊಡ್ಡ ಹೊಡೆತ ಬಿದ್ದಿದೆ.
ಸಿಲ್ಕಿ ಮತ್ತು ಶೈನಿಂಗ್ ಕೂದಲಿಗೆ ಬೀಟ್ರೂಟ್‌ನ ಈ ಹೇರ್ ಕೇರ್ ಟಿಪ್ಸ್ ಪ್ರಯತ್ನಿಸಿ
ಆಧ್ಯಾತ್ಮ

ಆಂಜನೇಯ ಸ್ವಾಮಿಯ ಮೊದಲ ಅವತಾರ, ವೃಶ ಕಪಿ ಅವತಾರದ ಬಗ್ಗೆ ನಿಮಗೆ ಗೊತ್ತಾ..?ತಿಳಿಯಲು ಮುಂದೆ ಓದಿ…

4875

ನಮಗೆ ಗೊತ್ತಿರುವ ಹಾಗೆ ಶ್ರೀ ರಾಮ ಭಕ್ತ ಹನುಮಂತನ ಜನ್ಮ ವೃತ್ತಾಂತ, ಹನುಮಂತ ದೇವರು, ಭಗವಾನ್ ಶಿವನ ಅಂಶದ ಅವತಾರ ಇವೆಲ್ಲವೂ ನಮಗೆ ಗೊತ್ತಿದೆ. ಆದರೆ ಗೊತ್ತಿಲ್ಲದ ವಿಷಯ ಏನೆಂದರೆ ಹನುಮಂತನ ಈ ಅವತಾರಕ್ಕೆ ಮುಂಚೆ, ಎಷ್ಟೋ ಯುಗಗಳ ಹಿಂದಯೇ ಹನುಮಂತನ ಮತ್ತೊಂದು ಅವತಾರವಾಗಿತ್ತು. ಆ ಅವತಾರವೇ  ವೃಶ ಕಪಿ ಅವತಾರ.

ಈ ಅವತಾರದ ಬಗ್ಗೆ ಸ್ವತಹ ಶ್ರೀ ರಾಮನೇ ತನ್ನ ಭಕ್ತ ಆಂಜನೇಯನಿಗೆ ತಿಳಿಸುತ್ತಾನೆ. ಕಾರಣ ಶ್ರೀರಾಮನ ಅವತಾರದ ಸಮಯ ಭೂಲೋಕದಲ್ಲಿ ಮುಗಿದು, ತಮ್ಮ ವೈಕುಂಟ ಧಾಮಕ್ಕೆ ತೆರಳುವ ಸಮಯ ಸನಿಹಿತವಾಗಿರುತ್ತದೆ. ಇದನ್ನು ತನ್ನ ಪರಮ ಭಕ್ತ ಹನುಮಂತನಿಗೆ ಹೇಗೆ ತಿಳಿಸುವ ಯೋಚನೆಯಲ್ಲಿ ಶ್ರೀ ರಾಮನು ಹನುಮಂತನ ಅಸ್ಥಿತ್ವದ ಬಗ್ಗೆ ತಿಳಿಸಲು, ಹನುಮಂತನನ್ನು ಗೋದಾವರಿ ನದಿ ತೀರಕ್ಕೆ  ಕರೆದುಕೊಂಡು ಹೋಗುತ್ತಾನೆ.

ಆ ಸ್ಥಳಕ್ಕೆ ತಲುಪಿದ ನಂತರ ಹನುಮಂತನಿಗೆ ಒಂದು ವಿಚಿತ್ರವಾದ ಅಭಾಸವಾಗುತ್ತದೆ. ಅದೇನಂದರೆ ಈ ಜಾಗಕ್ಕೆ ಮುಂಚೆ ಬಂದು ಹೋಗಿರುವ ಹಾಗೆ ಹಾಗೂ ಪದೇ ಪದೇ ತನ್ನಂತಯೇ ಇರುವ ಒಂದು ಚಿತ್ರ ತನ್ನ ಮುಂದೆ ಹಾದು ಹೋಗುತ್ತಿರುತ್ತದೆ.  ಇದರಿಂದ ವಿಚಲಿತನಾದ ಹನುಮಂತನು ಇದರ ಬಗ್ಗೆ ರಾಮನಲ್ಲಿ ಕೇಳಲಾಗಿ, ಆಗ ಶ್ರೀ ರಾಮನು ಹನುಮಂತನಿಗೆ ನಿನಗೆ ಆಗುತ್ತಿರುವ ಅನುಭವವು ನಿಜವಾಗಿದೆ. ಇದರ ಇಂದೇ ಒಂದು ಕಥೆ ಇದೆ. ಅದೇ ವೃಶ ಕಪಿ ಮಹಾ ಶಕ್ತಿಯ ಅವತಾರದ ಕಥೆ.

ಅನೇಕ ಯುಗಗಳ ಹಿಂದೆ ದೈತ್ಯ ಹಿರನ್ಯಕನೆಂಬ ರಾಜನಿದ್ದು ಅವನಿಗೆ ಮಹಾ ಶನಿ ಎಂಬ ಮಗನಿರುತ್ತಾನೆ. ಅವನು ಸ್ವತಹ ತಪಸ್ವಿಯಾಗಿದ್ದರೂ ದೈತ್ಯನಾಗಿರುತ್ತಾನೆ. ತನ್ನ ಮಹಾ ಶಕ್ತಿಯಿಂದ ಮಾನವ ದಾನವರನ್ನು ಸೋಲಿಸಿ ಪಾತಾಳ ಲೋಕದ ರಾಜನಾಗಿರುತ್ತಾನೆ.

ಇಷ್ಟಕ್ಕೆ ತೃಪ್ತನಾಗದ ಮಹಾ ಶನಿಯು ದೇವಲೋಕದ ದಾಳಿ ಮಾಡಲು ಸ್ವರ್ಗದ ಕಡೆ ಒಬ್ಬನೇಹೋಗುತ್ತಾನೆ.

ಇದನ್ನು ತಡೆದ ದೇವತೆಗಳನ್ನು ಸೋಲಿಸಿ ಇಂದ್ರನನ್ನು ತನ್ನ ಜಡೆಗಳಿಂದ  ಬಂದಿಸಿ, ಪಾತಾಳ ಲೋಕದ ಕಾಲ ಕೋಟಿ ಎಂಬಲ್ಲಿ ಬಂದಿಸಿ ಇಡುತ್ತಾನೆ.

ನಂತರ ಕೆಲವು ಶರುತ್ತಗಳ ಮೇಲೆ ಬಿಡುಗಡೆ ಮಾಡುತ್ತಾನೆ. ಇಂದ್ರನನ್ನು ಬಿಡುಗಡೆ ಮಾಡಿದ್ರೂ, ಸಹ ಇಂದ್ರ ಮತ್ತು ಸ್ವರ್ಗಗಳು ದೈತ್ಯ ಮಹಾ ಶನಿಯ ಹಿಡಿತದಲ್ಲೇ ಇರುತ್ತದೆ. ಹೀಗಾಗಿ ಇಂದ್ರನಿಗೆ ಬಿಡುಗಡೆಯಾದ್ರು ಸ್ವತಂತ್ರವಿರುವುದಿಲ್ಲ.

ಹೀಗಾಗಿ ಇದರ ಬಗ್ಗೆ ಯೋಚಿಸಿದ ಇಂದ್ರನ ಪತ್ನಿ ಶಚಿ ದೇವಿಯು ಬ್ರಹ್ಮದೇವರಲ್ಲಿ ಪ್ರಾರ್ಥಿಸಲಾಗಿ,ಸೃಷ್ಟಿ ಕರ್ತ ಬ್ರಹ್ಮನು ದೈತ್ಯ ಮಹಾ ಶನಿಗೆ ಯಾವುದೇ ದೇವತೆಗಳಿಂದ ಸಾವಿಲ್ಲ. ಶಿವ ಮತ್ತು ವಿಷ್ಣು ದೇವರ ಅಂಶದಿಂದ ಜನಿಸಿದ ಮಹಾ ಶಕ್ತಿಯಿಂದ ಮಾತ್ರ ಕೊಲ್ಲಲು ಸಾಧ್ಯ ಎಂದು ತಿಳಿಸುತ್ತಾರೆ.

ನಂತರ ಇಂದ್ರ ಮತ್ತು ಶಚಿ ದೇವಿಯು ಗೋದಾವರಿ ನದಿ ತೀರಕ್ಕೆ ಬಂದು  ಹರಿ ಮತ್ತು ಹರರನ್ನು ಕುರಿತು ತಪಸ್ಸು ಮಾಡುತ್ತಾರೆ. ಅವರ ತಪಸ್ಸಿನ ಫಲವಾಗಿ ಈಶ್ವರ ಮತ್ತ ನಾರಾಯಣರು ಪ್ರತ್ಯಕ್ಷರಾಗಿ ವರ ಕೇಳುವಂತೆ ಇಂದ್ರ ಮತ್ತು ಶಚಿದೇವಿಗೆ ಹೇಳುತ್ತಾರೆ.

ಇಂದ್ರ ಮತ್ತು ಶಚಿದೇವಿಯು ಹರಿ ಮತ್ತು ಹರರಲ್ಲಿ ದೈತ್ಯ ಮಹಾ ಶನಿಯನ್ನು ಕೊಂದು ಲೋಕವನ್ನು ಕಾಪಾಡುವಂತೆ ಕೇಳಿಕೊಳ್ಳುತ್ತಾರೆ.

 ಈ ಚಿತ್ರ ಹರಿ ಮತ್ತು ಹರ ಅಂಶದ ವೃಶ ಕಪಿ ಅವತಾರದ ರೂಪ 

ಅವರ ಈ ಬೇಡಿಕೆಗೆ ತಥಾಸ್ತು ಎಂದ ಶಿವ ಮತ್ತು ನಾರಾಯಣರಿಂದ ಜ್ಯೋತಿಗಳು ಪ್ರಕಟಗೊಂಡು ಎರಡು ಜ್ಯೋತಿಗಳು ಸಂಗಮವಾಗಿರುವ ನದಿಯಲ್ಲಿ ಸೇರುತ್ತವೆ. ಆಗ ಹರೀ ಹರರ ಅಂಶಗಳಿಂದ ಒಂದು ಮಹಾ ಶಕ್ತಿಯ ಉದ್ಭವವಾಗುತ್ತದೆ. ಆ ಮಹಾಶಕ್ತಿಯು ಸ್ವತಹ ಹನುಮಂತನ ರೂಪದಂತಯೇ ಇದ್ದು ಅರ್ಧ ಶಿವನ ರೂಪ ಮತ್ತರ್ಧ ನಾರಾಯಣ ರೂಪ ಆಗಿರುತ್ತದೆ. ಈ ಅವತಾರವೇ ವೃಶ ಕಪಿ ಅವತಾರ.

ಇಂದ್ರ ಮತ್ತು ಶಚಿದೇವಿಯು ವೃಶ ಕಪಿ ದೇವರಲ್ಲಿ ಪ್ರಾರ್ಥಿಸಿ ದೈತ್ಯ ಮಹಾ ಶನಿಯಿಂದ ಈ ಲೋಕಕ್ಕೆ ಮುಕ್ತಿ ದೊರಕಿಸುಕೊಡುವಂತೆ ಕೇಳಿಕೊಳ್ಳುತ್ತಾರೆ.

ವೃಶ ಕಪಿ ಅವತಾರ

ಇವರ ಪ್ರಾರ್ಥನೆಗೆ ಪ್ರಸನ್ನನಾದ ವೃಶ ಕಪಿಯು ಒಂದೇ ಕ್ಷಣಕ್ಕೆ ಪಾತಾಳ ಲೋಕಕ್ಕೆ ಜಿಗಿದು ದೈತ್ಯ ಮಹಾ ಶನಿ ಮತ್ತು ಅವನ ಸೈನ್ಯವನ್ನು ಸಂಹಾರ ಮಾಡುತ್ತಾನೆ.ಹಾಗಾಗಿ ಈ ನದಿಗೆ ವೃಶ ಕಪಿ ತೀರ್ಥ ಎಂಬ ಹೆಸರು ಬಂದಿದೆ ಎಂದು ಹಾಗೂ ಅದು ಹನುಮಂತನ ಮೊದಲ ಅವತಾರವೆಂದು ಶ್ರೀರಾಮನು ತನ್ನ ಪರಮ ಭಕ್ತ ಆಂಜನೇಯನಿಗೆ ತಿಳಿಸುತ್ತಾನೆ.

ಜೈ ಶ್ರೀ ರಾಮ್…

ಜೈ ಹನುಮಾನ್…

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    750 ಕೋಟಿ ರೂ. ವೆಚ್ಚದಲ್ಲಿ ಕಲಬುರಗಿಗೆ ಶಾಶ್ವತ ಕುಡಿಯವ ನೀರು ಯೋಜನೆ…!

    ಕಲಬುರಗಿ ಮಹಾನಗರಕ್ಕೆ ಶಾಶ್ವತ ಕುಡಿಯವ ನೀರು ಕಲ್ಪಿಸುವ ಸಂಬಂಧ 750 ಕೋಟಿ ರೂ.ಗಳ ವೆಚ್ಚದ ಯೋಜನೆಗೆ ಮುಂದಿನ ಮೂರು ತಿಂಗಳಲ್ಲಿ ಚಾಲನೆ ನೀಡಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಅವರು ಘೋಷಿಸಿದ್ದಾರೆ. ಕಲಬುರಗಿ ಪಾಲಿಕೆಯ ಸ್ಮಾರಕ ಭವನ (ಟೌನ್‍ಹಾಲ್) ದಲ್ಲಿ ಮಂಗಳವಾರ ಜನಸ್ಪಂದನ ಕಾರ್ಯಕ್ರಮದ ಬಳಿಕ ಪತ್ರಕರ್ತರನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ಮುಂದಿನ 5 ವರ್ಷಗಳಲ್ಲಿ ಈ ಯೋಜನೆ ಪೂರ್ಣಗೊಳ್ಳಲಿದ್ದು, ಭೀಮಾ ನದಿ, ಬೆಣ್ಣೆತೊರಾವಲ್ಲದೆ, ನಗರದ ಕಲ್ಯಾಣಿಗಳು, ಬಾವಿಗಳು ಮುಂತಾದ ನೀರಿನ ಮೂಲಗಳನ್ನು ಪತ್ತೆ ಹಚ್ಚಿ ಯೋಜನೆ…

  • ಸುದ್ದಿ

    ಬಹಿರಂಗವಾಹಿತು ಈ ಸಲದ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡ್ತಿರೋ ಸೆಲೆಬ್ರೆಟಿ ಸ್ಪರ್ದಿಗಳ ಪಟ್ಟಿ…!

    ಈ ಪಟ್ಟಿಯಲ್ಲಿ ಇರುವ ಎಲ್ಲ ಕಲಾವಿದರು ಮನೆ ಸೇರುತ್ತಾರಾ ಇಲ್ಲವೋ ಎನ್ನುವುದು ಅಧಿಕೃತವಾಗಿ ತಿಳಿದು ಬಂದಿಲ್ಲ. ಈ ಕಲಾವಿದರ ಬಗ್ಗೆ ಚರ್ಚೆ ನಡೆಯುತ್ತಿದೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಬಿಗ್ ಬಾಸ್ ಕನ್ನಡ 7ನೇ ಆವೃತ್ತಿ ಭಾನುವಾರ ಅಧಿಕೃತವಾಗಿ ಆರಂಭವಾಗುತ್ತಿದೆ. ಈ ಸಲ ಒಟ್ಟು 17 ಜನ ಸ್ಪರ್ಧಿಗಳು ಬಿಗ್ ಮನೆಗೆ ಪ್ರವೇಶ ಮಾಡಲಿದ್ದಾರೆ ಎಂದು ಸ್ವತಃ ವಾಹಿನಿ ಅಧಿಕೃತಪಡಿಸಿದೆ. ಯಾರೆಲ್ಲ ಹೋಗಬಹುದು, ಆದರೂ, ದೊಡ್ಮನೆಯೊಳಗೆ ಹೋಗುವ ಹದಿನೇಳು ಜನರ ಸಂಭಾವ್ಯ ಪಟ್ಟಿ ಮೂಲಗಳಿಂದ ಬಹಿರಂಗವಾಗಿದೆ….

  • ಸಿನಿಮಾ

    ಎಲ್ಲಾ ಕಾಲಕ್ಕೂ ಬ್ಲಾಕ್ ಬಸ್ಟರ್ ಚಿತ್ರವಾಗಿರುವ ‘ಓಂ’ನಲ್ಲಿ ಅವಕಾಶ ಕೊಟ್ಟಿದ್ದ ಉಪೇಂದ್ರರವರನ್ನೇ, ನಟಿ ಪ್ರೇಮಾ ದ್ವೇಷ ಮಾಡಿದ್ದು ಏಕೆ ಗೊತ್ತಾ.!?

    ‘ಓಂ’ ಚಿತ್ರ ಕನ್ನಡ ಚಿತ್ರರಂಗದಲ್ಲಿ ದಾಖಲೆ ಬರೆದ ಚಿತ್ರವಾಗಿದೆ. ಶಿವರಾಜ್ ಕುಮಾರ್ ಅಭಿನಯದ ಉಪೇಂದ್ರ ನಿರ್ದೇಶನದ ಈ ಚಿತ್ರದಲ್ಲಿ ಪ್ರೇಮಾ ಅಭಿನಯಿಸಿದ್ದಾರೆ. ಶಿವಣ್ಣ ಜೊತೆಗೆ ‘ಸವ್ಯಸಾಚಿ’ ಚಿತ್ರದಲ್ಲಿ ಅಭಿನಯಿಸಿದ್ದ ಪ್ರೇಮಾ ‘ಓಂ’ ಚಿತ್ರದಲ್ಲಿ ನಾಯಕಿಯಾಗಿದ್ದಾರೆ. ಆದರೆ, ಈ ಚಿತ್ರದ ಚಿತ್ರೀಕರಣದ ವೇಳೆ ಉಪೇಂದ್ರ ಮೇಲೆ ಅವರು ಕೋಪ ಮಾಡಿಕೊಂಡಿದ್ದರು. ‘ವೀಕೆಂಡ್ ವಿತ್ ರಮೇಶ್’ ಶೋನಲ್ಲಿ ಉಪೇಂದ್ರ ಮೇಲೆ ಮುನಿಸಿಕೊಂಡಿದ್ದ ಕಾರಣವನ್ನು ಪ್ರೇಮಾ ಹೇಳಿದ್ದಾರೆ. ಮೊದಲ ಸಿನಿಮಾ ಮುಗಿದ ಬಳಿಕ ‘ಓಂ’ ಚಿತ್ರಕ್ಕೆ ಆಯ್ಕೆಯಾದೆ. ಉಪೇಂದ್ರ ಅವರಿಗೆ ಹೆಣ್ಣು ಮಕ್ಕಳ…

  • ಆರೋಗ್ಯ, ಉಪಯುಕ್ತ ಮಾಹಿತಿ

    ಈ ಸೊಪ್ಪು ತಿನ್ನೋದರಿಂದ ಆಗೋ ಪ್ರಯೋಜನಗಳನ್ನು ತಿಳಿದ್ರೆ, ನೀವ್ ತಿನ್ನದೇ ಸುಮ್ಮನೆ ಇರಲ್ಲ..!ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…

    *ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ* ಆಯುರ್ವೇದ ಪದ್ದತಿಯು ನಮ್ಮ ಹಿರಿಯರು ನಮಗೆ ನೀಡಿರುವ ಒಂದು ವರದಾನ. ವಿಶ್ವದಾದ್ಯಂತ ಈಗ ಆಯುರ್ವೇದಕ್ಕೆ ಅತ್ಯುತ್ತಮ ಹೆಸರಿದೆ ಅದಕ್ಕೆಕಾರಣ ಇಂಗ್ಲೀಷ್ ಔಷದೀಯ ಪದ್ದತಿಯಿಂದ ಹಲವಾರು ಅಡ್ಡಪರಿಣಾಮಗಳು ಉಂಟಾಗುವವು ಮತ್ತು ದೀರ್ಘಕಾಲಿಕ ಕಾಯಿಲೆಗಳು ಬರುವುದು. ಆಯುರ್ವೇದದ ಪ್ರಕಾರ ನಾವು ಅಡುಗೆಯಲ್ಲಿ ಬಳಸುವ ಪದಾರ್ಥಗಳು ಸೊಪ್ಪು, ತರಕಾರಿಗಳಲ್ಲಿರುವ ಪೋಷಕಾಂಶಗಳೇ ತುಂಬಾ ಕಾಯಿಲೆಗಳನ್ನು ವಾಸಿಮಾಡುತ್ತವೆ. ಅಂತಹ ಪೋಷಕ ಮೌಲ್ಯಗಳಿರುವ ಗಿಡ “ನುಗ್ಗೆಗಿಡ” ನುಗ್ಗೆ ಗಿಡಗಳ ಎಲೆಗಳಲ್ಲಿ, ಕಾಯಿಗಳಲ್ಲಿ, ಕಾಂಡದಲ್ಲಿ ಬಹಳ ಪೋಷಕಾಂಶಗಳಿರುತ್ತವೆ. ಬಹಳ ಜನರು ನುಗ್ಗೆಕಾಯಿಯ…

  • ಜ್ಯೋತಿಷ್ಯ

    ಮಾತೆ ಅನ್ನಪೂರ್ಣಾ ದೇವಿಯ ಕೃಪೆಯಿಂದ ಶುಭಯೋಗ, ನಿಮ್ಮ ರಾಶಿಯೂ ಇದೆಯಾ ನೋಡಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(17 ಮಾರ್ಚ್, 2019) ಅತಿಥಿಗಳು ನಿಮ್ಮ ಮನೆಯನ್ನು ಒಂದು ಆಹ್ಲಾದಕರ ಮತ್ತು ಅದ್ಭುತ ಸಂಜೆಗಾಗಿ ಬಳಸಿಕೊಳ್ಳುತ್ತಾರೆ. ಪ್ರಣಯದ…

  • ಉಪಯುಕ್ತ ಮಾಹಿತಿ

    ಮುಂದಿನ ತಿಂಗಳಿಂದ 500 ಕಿಮೀ. ದೂರ ಸಂಚರಿಸುವ ರೈಲುಗಳ ಪ್ರಯಾಣದ ಅವಧಿ ಕಡಿತ..! ತಿಳಿಯಲು ಓದಿ…

    ಮುಂದಿನ ತಿಂಗಳಿಂದ 500 ಕಿ.ಮೀ.ಗಿಂತ ಹೆಚ್ಚು ದೂರ ಸಂಚರಿಸುವ ರೈಲುಗಳ ಪ್ರಯಾಣದ ಅವಧಿಯನ್ನು ಸ್ವಲ್ಪ ಕಡಿಮೆ ಮಾಡಲು ಭಾರತೀಯ ರೈಲ್ವೆ ನಿರ್ಧರಿಸಿದೆ ಎಂದು ಹಿರಿಯ ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.