India, Place, tourism

ವ್ಯಾಲಿ ಆಫ್ ಫ್ಲಾವರ್ಸ್ ರಾಷ್ಟ್ರೀಯ ಉದ್ಯಾನವನ

287

ವ್ಯಾಲಿ ಆಫ್ ಫ್ಲವರ್ಸ್ ರಾಷ್ಟ್ರೀಯ ಉದ್ಯಾನವನವು ಭಾರತೀಯ ರಾಷ್ಟ್ರೀಯ ಉದ್ಯಾನವನವಾಗಿದ್ದು, ಇದು ಉತ್ತರಾಖಂಡ ರಾಜ್ಯದ ಉತ್ತರ ಚಮೋಲಿ ಮತ್ತು ಪಿಥೋರಗ h ದಲ್ಲಿದೆ ಮತ್ತು ಇದು ಸ್ಥಳೀಯ ಆಲ್ಪೈನ್ ಹೂವುಗಳ ಹುಲ್ಲುಗಾವಲುಗಳು ಮತ್ತು ವಿವಿಧ ಸಸ್ಯವರ್ಗಗಳಿಗೆ ಹೆಸರುವಾಸಿಯಾಗಿದೆ. ಏಷ್ಯಾಟಿಕ್ ಕಪ್ಪು ಕರಡಿ ಹಿಮ ಚಿರತೆ,  ಕಸ್ತೂರಿ ಜಿಂಕೆ, ಕಂದು ಕರಡಿ, ಕೆಂಪು ನರಿ   ಮತ್ತು ನೀಲಿ ಕುರಿಗಳು ಸೇರಿದಂತೆ ಅಪರೂಪದ ಮತ್ತು ಅಳಿವಿನಂಚಿನಲ್ಲಿರುವ ಪ್ರಾಣಿಗಳಿಗೆ ಈ ಸಮೃದ್ಧ ವೈವಿಧ್ಯಮಯ ಪ್ರದೇಶವಿದೆ. ಉದ್ಯಾನದಲ್ಲಿ ಕಂಡುಬರುವ ಪಕ್ಷಿಗಳಲ್ಲಿ ಹಿಮಾಲಯನ್ ಮೋನಾಲ್ ಫೆಸೆಂಟ್ ಮತ್ತು ಇತರ ಎತ್ತರದ ಪಕ್ಷಿಗಳು ಸೇರಿವೆ.  ಸಮುದ್ರ ಮಟ್ಟದಿಂದ 3352 ರಿಂದ 3658 ಮೀಟರ್ ಎತ್ತರದಲ್ಲಿ, ವ್ಯಾಲಿ ಆಫ್ ಫ್ಲವರ್ಸ್ ರಾಷ್ಟ್ರೀಯ ಉದ್ಯಾನದ ಸೌಮ್ಯ ಭೂದೃಶ್ಯವು ಪೂರ್ವಕ್ಕೆ ನಂದಾ ದೇವಿ ರಾಷ್ಟ್ರೀಯ ಉದ್ಯಾನದ ಒರಟಾದ ಪರ್ವತ ಅರಣ್ಯವನ್ನು ಪೂರೈಸುತ್ತದೆ. ಗ್ರೇಟ್ ಹಿಮಾಲಯ ಪರ್ವತ ಶ್ರೇಣಿಗಳ ನಡುವೆ ಒಂದು ವಿಶಿಷ್ಟ ಪರಿವರ್ತನಾ ವಲಯವನ್ನು ಒಳಗೊಂಡಿದೆ. ಈ ಉದ್ಯಾನವನವು 87.50 ಕಿಮೀ 2 ವಿಸ್ತಾರದಲ್ಲಿದೆ ಮತ್ತು ಇದು ಸುಮಾರು 8 ಕಿ.ಮೀ ಉದ್ದ ಮತ್ತು 2 ಕಿ.ಮೀ ಅಗಲವಿದೆ. ಉದ್ಯಾನವು ಸಂಪೂರ್ಣವಾಗಿ ಸಮಶೀತೋಷ್ಣ ಆಲ್ಪೈನ್ ವಲಯದಲ್ಲಿದೆ. ಎರಡೂ ಉದ್ಯಾನವನಗಳು ನಂದಾ ದೇವಿ ಬಯೋಸ್ಫಿಯರ್ ರಿಸರ್ವ್ (223,674 ಹೆಕ್ಟೇರ್) ನಲ್ಲಿ ಆವರಿಸಲ್ಪಟ್ಟಿವೆ, ಇದು ಬಫರ್ ವಲಯದಿಂದ (5,148.57 ಕಿಮಿ 2) ಮತ್ತಷ್ಟು ಸುತ್ತುವರೆದಿದೆ ನಂದಾ ದೇವಿ ನ್ಯಾಷನಲ್ ಪಾರ್ಕ್ ರಿಸರ್ವ್ ಯುನೆಸ್ಕೋ ವರ್ಲ್ಡ್ ನೆಟ್ವರ್ಕ್ ಆಫ್ ಬಯೋಸ್ಫಿಯರ್ ರಿಸರ್ವ್ನಲ್ಲಿದೆ.

ಎತ್ತರದ ಕಣಿವೆ

ಹೂವುಗಳ ಕಣಿವೆ ಎತ್ತರದ ಹಿಮಾಲಯನ್ ಕಣಿವೆಯಾಗಿದ್ದು, ಇದನ್ನು ಪ್ರಸಿದ್ಧ ಪರ್ವತಾರೋಹಿಗಳು, ಸಸ್ಯವಿಜ್ಞಾನಿಗಳು ಮತ್ತು ಸಾಹಿತ್ಯದಲ್ಲಿ ಬಹುಕಾಲದಿಂದ ಅಂಗೀಕರಿಸಲಾಗಿದೆ. ಇದು ಒಂದು ಶತಮಾನಕ್ಕೂ ಹೆಚ್ಚು ಕಾಲ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿದೆ ಮತ್ತು ಇದನ್ನು ಹಿಂದೂ ಧರ್ಮದಲ್ಲಿ ಉಲ್ಲೇಖಿಸಲಾಗಿದೆ. ಪ್ರಾಚೀನ ಕಾಲದಿಂದಲೂ ಸ್ಥಳೀಯ ಜನರು ಕಣಿವೆಗೆ ಭೇಟಿ ನೀಡಿದ್ದಾರೆ ಭಾರತೀಯ ಯೋಗಿಗಳು ಧ್ಯಾನಕ್ಕಾಗಿ ಕಣಿವೆಗೆ ಭೇಟಿ ನೀಡಿದ್ದರು ಎಂದು ತಿಳಿದುಬಂದಿದೆ. ಹೂವುಗಳ ಕಣಿವೆ ಅನೇಕ ವಿಭಿನ್ನ ವರ್ಣರಂಜಿತ ಹೂವುಗಳನ್ನು ಹೊಂದಿದೆ, ಸಮಯ ಮುಂದುವರೆದಂತೆ ವಿವಿಧ ಬಣ್ಣಗಳನ್ನು ತೆಗೆದುಕೊಳ್ಳುತ್ತದೆ. ಕಣಿವೆಯನ್ನು 1982 ರಲ್ಲಿ ರಾಷ್ಟ್ರೀಯ ಉದ್ಯಾನವನವೆಂದು ಘೋಷಿಸಲಾಯಿತು ಮತ್ತು ಈಗ ಅದು ವಿಶ್ವ ಪರಂಪರೆಯ ತಾಣವಾಗಿದೆ.

ಈ ಉದ್ಯಾನವು ತನ್ನ ಅದ್ಭುತ ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾಗಿದ್ದು ಇಲ್ಲಿನ ಹುಲ್ಲುಗಾವಲಿನ ಮೈದಾನಗಳಲ್ಲಿ ನೂರಾರು ಬಗೆಯ ಹೂವುಗಳ ಬೃಹತ್ ನೈಸರ್ಗಿಕ ತೋಟವನ್ನೆ ಕಾಣಬಹುದು ಎಂಥವರೆ ಆಗಲಿ ಇಲ್ಲಿನ ಪರಿಸರದಲ್ಲಿ ಒಂದೆರಡು ಸುತ್ತು ಹೋಡೆದರೆ ಸಾಕು ತಮ್ಮೆಲ್ಲ ಕಷ್ಟ, ಕಾರ್ಪಣ್ಯಗಳನ್ನು ಮರೆತು ಉಲ್ಲಾಸ, ಉತ್ಸಾಹಗಳನ್ನು ಮತ್ತೆ ಮರಳಿ ಪಡೆಯಬಹುದು.


ಕೇವಲ ಪುಷ್ಪಕಣಿವೆಯಂತಲ್ಲ, ಇಲ್ಲಿ ಆಕರ್ಷಕ ಪ್ರಾಣಿ ಪಕ್ಷಿಅಗಳನ್ನೂ ಸಹ ಕಾನಬಹುದಾಗಿದೆ. ಜೀವ ವೈವಿಧ್ಯದ ನೆಲೆಯಾಗಿರುವ ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನವು ಕಪ್ಪು ಕರಡಿ, ಹಿಮ ಚಿರತೆ, ಕಂದು ಕರಡಿ ಮತ್ತು ನೀಲಿ ಕುರಿಗಳಂತಹ ವನ್ಯ ಜೀವಿಗಳಿಗೆ ನೆಲೆಯಾಗಿದೆ. ನಂದಾದೇವಿ ರಾಷ್ಟ್ರೀಯ ಉದ್ಯಾನದೊಂದಿಗೆ ಈ ಪುಷ್ಪಕಣಿವೆಯು ಸಾಮಾನ್ಯವಾಗಿ ಗುರುತಿಸಲ್ಪಡುತ್ತದೆ. ಇವೆರಡನ್ನು ಒಟ್ಟಾರೆಯಾಗಿ ವಿಶ್ವ ಪಾರಂಪರಿಕ ತಾಣ ಎಂದು ಮಾನ್ಯ ಮಾಡಲಾಗಿದೆ. ಇದರ ಭೂಮೇಲ್ಮೈ ಪ್ರದೇಶವು ಪರ್ವತಗಳನ್ನು ಹೊಂದಿದ್ದರೂ ಇವು ಅಷ್ಟೊಂದು ಕಡಿದಾಗಿಲ್ಲ  ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನ ಸುಮಾರು 87.5 ಚ.ಕಿ.ಮೀ ಗಳಷ್ಟು ವಿಸ್ತೀರ್ಣವನ್ನು ಹೊಂದಿದೆ. ತನ್ನ ಮೇಲ್ಮೈ ಮೇಲೆ ವಿವಿಧ ಬಗೆಯ ಸಸ್ಯಗಳು, ಅಂದ ಚೆಂದದ, ಬಣ್ಣ ಬಣ್ಣದ ಹೂವುಗಳನ್ನು, ಕೀಟಗಳನ್ನು ಹೊಂದಿರುವ ಶ್ರೀಮಂತ ಜೈವಿಕ ಪ್ರದೇಶವಾಗಿದೆ.


ಪರಿಸರ ಪ್ರವಾಸೋದ್ಯಮಕ್ಕೆ ಮಾದರಿಯಾಗಿರುವ ಪುಷ್ಪಕಣಿವೆ ಪಶ್ಚಿಮ ಹಿಮಾಲಯದಲ್ಲಿರುವ ಜೀವವಲಯದ ಪ್ರತಿನಿಧಿ ಅಂತಲೇ ಹೇಲಬಹುದು. ಅಲ್ಲದೆ ಇಲ್ಲಿರುವ ಸುಂದರ ಆಲ್ಪೈನ್ ಗಿಡಮರಗಳ ಕಾಡುಗಳು ವಿದೇಶಗಲಲ್ಲಿರುವ ಉದ್ಯಾನಗಳಂತೆ ಕಂಡುಬರುತ್ತವೆ.
ಇಲ್ಲಿನ ಜೀವ ವೈವಿಧ್ಯಗಳು ಒಂದು ರೀತಿಯಲ್ಲಿ ವಿಶಿಷ್ಟವಾಗಿವೆ ಹಾಗೂ ಅಳಿವಿನಂಚಿನಲ್ಲಿವೆ. ಏಕೆಂದರೆ ಇಲ್ಲಿ ಕಂಡುಬರುವ ಕೆಲವು ಅಪರೂಪದ ಜೀವಿಗಳು ಭಾರತದ ಇತರೆ ಭಾಗ ಮಾತ್ರವಲ್ಲ, ಸ್ವತಃ ಇದರ ಪಕ್ಕದಲ್ಲೆ ಇರುವ ನಂದಾದೇವಿ ರಾಷ್ಟ್ರೀಯ ಉದ್ಯಾನದಲ್ಲೂ ಸಹ ಕಂಡುಬರುವುದಿಲ್ಲ.  ಇನ್ನೊಂದು ಸಂಗತಿಯೆಂದರೆ ಇಲ್ಲಿ ಔಷಧೀಯ ಗುಣವುಳ್ಳ ಅನೇಕ ವಿಶಿಷ್ಟ ರೀತಿಯ, ಮತ್ತಿನ್ನೆಲ್ಲೂ ಕಂಡುಬರದ ಗಿಡ ಮೂಲಿಕೆಗಳನ್ನು ಕಾನಬಹುದು. ಅಲ್ಲದೆ ಏಳು ತಳಿಗಳ ಪಕ್ಷಿಗಳು ಇಲ್ಲಿ ವ್ಯಾಪಕವಾಗಿ ಕಾಣಬರುತ್ತವೆ.

ಈ ಕಣಿವೆ ಪ್ರದೇಶವನ್ನು 1982 ರಲ್ಲಿ ರಾಷ್ಟ್ರೀಯ ಉದ್ಯಾನವನ್ನಾಗಿ ಘೋಷಿಸಲಾಯಿತು. ಉತ್ತರಾಖಂಡದ ಗಡ್ವಾಲ್ ಭಾಗದಲ್ಲಿರುವ ಈ ಕಣಿವೆ ಪ್ರದೇಶವನ್ನು ವರ್ಷದ ಎಲ್ಲಾ ಸಮಯದಲ್ಲೂ ತಲುಪುವುದು ಕಷ್ಟಕರವಾಗಿದೆ. ಜೂನ್ ನಿಂದ ಸೆಪ್ಟಂಬರ್ ಇಲ್ಲಿಗೆ ತೆರಳಲು ಪ್ರಶಸ್ತ ಸಮಯವೆಂದೆ ಹೇಳಬಹುದು. ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನ ಪ್ರದೇಶದಲ್ಲಿ ಯಾವುದೇ ಜನವಸತಿ ಇಲ್ಲ. ಅಲ್ಲದೆ ಜಾನುವಾರುಗಳನ್ನು ಇಲ್ಲಿ ಮೇಯಿಸುವುದನ್ನು ನಿಷೇಧಿಸಲಾಗಿದೆ. ಜೂನ್ ನಿಂದ ಅಕ್ಟೋಬರ್ ತಿಂಗಳವರೆಗೆ ತೆರೆದಿರುವ ಈ ಪ್ರದೇಶವು ವರ್ಷದ ಇತರ ಸಮಯದಲ್ಲಿ ಸಂಪೂರ್ಣವಾಗಿ ಹಿಮದಿಂದ ಮುಚ್ಚಿಹೋಗಿರುತ್ತದೆ.


ಚಾರಣದ ಮೂಲಕವೆ ಈ ಕಣಿವೆಯನ್ನು ತಲುಪಬೇಕಾಗಿದೆ. ಅದಕ್ಕೆಂದೆ ಸುಮಾರು ಹನ್ನೆರಡು ಕಿ.ಮೀ. ಗಳಷ್ಟು ದೂರವನ್ನು ಕಾಲ್ನಡೆಯಿಂದಲೆ ಕ್ರಮಿಸಬೇಕಾಗುತ್ತದೆ. ಈ ಕಣಿವೆಗೆ ಹತ್ತಿರದಲ್ಲಿರುವ ಪಟ್ಟಣವೆಂದರೆ ಜೋಷಿಮಠ.
ಜೋಷಿಮಠವು ಹರಿದ್ವಾರ ಮತ್ತು ಡೆಹ್ರಾ ಡೂನ್ ನಗರಗಳೋದಿಗೆ ಉತ್ತಮ ರಸ್ತೆ ಸಂಪರ್ಕವನ್ನು ಹೊಂದಿದೆ. ಜೋಷಿಮಠದಿಂದ ಬದರಿನಾಥಕ್ಕೆ ತೆರಳುವ ರಸ್ತೆಯಲ್ಲಿ ಗೋವಿಂದ್ ಘಾಟ್ ಎಂಬ ಹಳ್ಳಿಗೆ ಸಾಗಿ ಅಲ್ಲಿಂದ ಮುಂದೆ ಕಾಲುದಾರಿಯನ್ನು ಹಿಡಿದು ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನಕ್ಕೆ ತೆರಳಬೇಕಾಗುತ್ತದೆ.

ಗೋವಿಂದ ಘಾಟ್ ಈ ಚಾರಣದ ಪ್ರಾರಂಭಿಕ ಹಂತವಾಗಿದ್ದು ಇಲ್ಲಿಂದ ಹದಿನಾಲ್ಕು ಕಿ.ಮೀ ಗಳಷ್ಟು ಚಾರಣ ಮಾಡಿದಾಗ ಘಂಘಾರಿಯಾ ಎಂಬ ಪುಟ್ಟ ಗ್ರಾಮ ದೊರೆಯುತ್ತದೆ. ವಿಶೇಷವೆಂದರೆ ಇಲ್ಲಿಂದ ಚಾರಣ ಪಥವು ಎರಡು ಕವಲುಗಳಲ್ಲಿ ಒಡೆದಿದ್ದು ಒಂದು ಪುಷ್ಪಕಣೆವೆಯೆಡೆ ಹೋದರೆ ಇನ್ನೊಂದು ಹೇಮಕುಂಡ್ ಸಾಹಿಬ್ ನತ್ತ ಕರೆದೊಯ್ಯುತ್ತದೆ. ಗೋವಿಂದ್ ಘಾಟ್ ನಿಂದ ಘಂಘಾರಿಯಾಗೆ ಹೋಗುವ ಮಾರ್ಗ.
source:- wikipedia & nativeplanet

About the author / 

Chethan Mardalu

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಆಧ್ಯಾತ್ಮ, ಜ್ಯೋತಿಷ್ಯ

    ದೇವಸ್ಥಾನದಲ್ಲಿ ಪ್ರಸಾದದ ರೂಪದಲ್ಲಿ ಸಿಕ್ಕ ಹೂವನ್ನು ಇಟ್ಟುಕೊಳ್ಳಬೇಕಾ?ಬಿಸಾಡಬೇಕಾ?

    ದೇವಸ್ಥಾನಗಳಿಗೆ ಹೋದಾಗ ದೇವರಿಗೆ ಪೂಜೆ ಆದ ನಂತರ ಸಾಮಾನ್ಯವಾಗಿ ಪ್ರಸಾದವನ್ನು ಕೊಡುತ್ತಾರೆ. ಜೊತೆಗೆ ಹೂ ಅಥವಾ ಹೂವಿನ ಮಾಲೆಯನ್ನು ಸಹ ಕೊಡುತ್ತಾರೆ. ಪೂಜಾರಿಗಳು ಪ್ರಸಾದದ ರೂಪದಲ್ಲಿ ಕೊಟ್ಟ ಹೂವನ್ನು ಭಕ್ತರು ಸ್ವಿಕಾರ ಮಾಡುತ್ತಾರೆ. ಆದರೆ ಹೀಗೆ ಕೊಟ್ಟ ಹೂವನ್ನು ಏನು ಮಾಡಬೇಕೆಂದು ಎಷ್ಟೋ ಮಂದಿಗೆ ಗೊತ್ತಿಲ್ಲ. ಹಾಗಾದ್ರೆ ಪ್ರಸಾದದ ರೂಪದಲ್ಲಿ ಸಿಕ್ಕ ಹೂವನ್ನು ಏನು ಮಾಡಬೇಕು..? ದೂರದ ಊರುಗಳಿಗೆ ಹೋಗಿದ್ದರೆ, ಅಲ್ಲಿನ ದೇವಸ್ಥಾನದಲ್ಲಿ ಸಿಕ್ಕ ಹೂಗಳು ಮನೆಗೆ ಬರುವ ಮೊದಲೇ ಬಾಡಿರುತ್ತದೆ. ಸಾಮಾನ್ಯವಾಗಿ ಬಾಡಿದ ಹೂಗಳನ್ನು ಮನೆಯಲ್ಲಿ…

  • ರೆಸಿಪಿ

    ಎಲೆಕೋಸು ಮಂಚೂರಿ ಮನೆಯಲ್ಲೇ ಮಾಡುವುದು ಹೇಗೆ ಗೊತ್ತಾ?

    ಬೇಕಾಗುವ ಸಾಮಗ್ರಿಗಳು: ಚಿಕ್ಕದಾಗಿ ಹೆಚ್ಚಿಟ್ಟುಕೊಂಡ ಎರಡು ಬಟ್ಟಲು ಎಲೆಕೋಸು,ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಹೆಚ್ಚಿದ ಮೀಡಿಯಂ ಸೈಜು ಈರುಳ್ಳಿ, ಕಾನ್೯ ಫ್ಲೋರ್ ಎರಡು ಟೀ ಸ್ಪೂನ್, ಮೈದಾಹಿಟ್ಟು ಎರಡು ಟೀ ಸ್ಪೂನ್, ಅಜಿನ ಮೋಟು ಕಾಲು ಚಮಚ, ಅಚ್ಚ ಕಾರದ ಪುಡಿ 1 ಟೀ ಸ್ಪೂನ್, ಗರಂ ಮಸಾಲ ಅರ್ದ ಟೀ ಸ್ಪೂನ್ ರುಚಿಗೆ ತಕ್ಕಷ್ಟು ಉಪ್ಪು. ಮಾಡುವ ವಿಧಾನ: ಚಿಕ್ಕದಾಗಿ ಹೆಚ್ಚಿಟ್ಟುಕೊಂಡ ಎಲೆಕೋಸನ್ನು ಒಂದು ಬೌಲ್ಗೆ ಹಾಕಿಟ್ಟುಕೊಳ್ಳಿ, ಅದಕ್ಕೆ ಎರಡು ಟೀ ಸ್ಪೂನ್ ಕಾನ್೯ ಫ್ಲೋರ್, ಎರಡು…

  • ಸುದ್ದಿ

    ಮೆದುಳು ಜ್ವರಕ್ಕೆ ಬಲಿಯಾದ ಮಕ್ಕಳ ಸಂಖ್ಯೆ 108ಕ್ಕೆ ಏರಿಕೆ- 290 ಮಕ್ಕಳು ಆಸ್ಪತ್ರೆಗೆ ದಾಖಲು…..!

    ಅಕ್ಯೂಟ್ ಎನ್ಸೆಫಾಲಿಟಿಸ್ ಸಿಂಡ್ರೋಮ್(ಎಇಎಸ್)ಗೆ ಬಿಹಾರದ ಮುಜಾಫರ್​​​ನಗರ ತತ್ತರಿಸಿ ಹೋಗಿದ್ದು, ಈವರೆಗೆ ಮೆದುಳು ಜ್ವರಕ್ಕೆ ಬರೋಬ್ಬರಿ 108 ಮಕ್ಕಳು ಬಲಿಯಾಗಿದ್ದಾರೆ.ಈ ಹಿನ್ನೆಲೆಯಲ್ಲಿ ಇಂದು ಮುಖ್ಯಮಂತ್ರಿ ನಿತೀಶ್ ಕುಮಾರ್, ಶ್ರೀಕೃಷ್ಣ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ನಡೆಸಿದರು. ಜಿಲ್ಲಾಧಿಕಾರಿಗಳ ಪ್ರಕಾರ, ಮಿದುಳು ಜ್ವರದಿಂದ ಬಳಲುತ್ತಿದ್ದ 89 ಮಕ್ಕಳು ಶ್ರೀಕೃಷ್ಣ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮೃತಪಟ್ಟರೆ, 19 ಮಕ್ಕಳು ಕೇಜ್ರಿವಾಲ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಸದ್ಯದ ಮಾಹಿತಿ ಪ್ರಕಾರ, ಶ್ರೀಕೃಷ್ಣ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಇನ್ನೂ 290 ಮಕ್ಕಳು…

  • ಮನರಂಜನೆ

    ‘ಹರ ಹರ ಮಹಾದೇವ’ ಧಾರಾವಾಹಿಯನ್ನು ನಿಲ್ಲಿಸಿದ ಕಾರಣ ಕೇಳಿದ್ರೆ ನೀವ್ ಶಾಕ್ ಆಗ್ತೀರಾ…!

    ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಹರ ಹರ ಮಹಾದೇವ’ ಧಾರಾವಾಹಿ ಜನವರಿ 13ರಂದು ರಾತ್ರಿ 7.30ಕ್ಕೆ ಕೊನೆಯ ಸಂಚಿಕೆಯೊಂದಿಗೆ ಮುಕ್ತಾಯವಾಗಿದೆ. ಈ ದಾರವಾಹಿ ಇದುವರೆಗೂ 416 ಕಂತುಗಳ ಪ್ರಸಾರ ಆಗಿದೆ.

  • ಆಧ್ಯಾತ್ಮ

    ಕೇತುಗ್ರಸ್ತ ಕಂಕಣಾಕೃತಿ ಸೂರ್ಯಗ್ರಹಣ.!

    ದಿನಾಂಕ 26 ಡಿಸೆಂಬರ 2019 ಗುರುವಾರ (ಬೆಳಿಗ್ಗೆ) ಶ್ರೀಶಕೆ 1941 ಶ್ರೀವಿಕಾರಿ ನಾಮ ಸಂವತ್ಸರ ಮಾರ್ಗಶಿರ ಕೃಷ್ಣ ಅಮಾವಾಸ್ಯೆ (ಎಳ್ಳ ಅಮಾವಾಸ್ಯೆ). ಪಂಡಿತ್ ರಾಘವೇಂದ್ರ ಸ್ವಾಮಿಗಳು ನಿಮ್ಮ ಜೀವನದಸಮಸ್ಯೆಗಳಾದ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ. ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ,ಹಣಕಾಸು, ಪ್ರೇಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಕಾಟ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಗುಪ್ತಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 5 ದಿನದಲ್ಲಿ ಶಾಶ್ವತ ಪರಿಹಾರ…

  • corona, Health

    2022 ಕೋವಿಡ್ ಮುಕ್ತ ರಾಜ್ಯ:-ಮುಖ್ಯಮಂತ್ರಿ

    ರಾಜ್ಯದಲ್ಲಿ ಎಲ್ಲ  ಸಾರ್ವಜನಿಕರು ಮತ್ತು ಅರ್ಹ ಮಕ್ಕಳು ಕರೋನ ಲಸಿಕೆ ಪಡೆಯುವ ಮೂಲಕ 2022 ಅನ್ನು ಕೋವಿಡ್ ಮುಕ್ತ ರಾಜ್ಯ ಮತ್ತು ಆರೋಗ್ಯಭರಿತ ವರ್ಷವನ್ನಾಗಿ ಮಾಡುವ ಸಂಕಲ್ಪಕ್ಕೆ ಜನರು ಸಹಕರಿಸಬೇಕು ಎಂದು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಕರೋನ ಸೋಂಕು ನಾವು ಯಾರು ನೀರಿಕ್ಷೀಸಿದಂತೆ ಇರುವುದಿಲ್ಲ.ಮೊದಲು ಕಾಣಿಸಿಕೊಂಡಾಗ ಹೇಗೆ ಹರಡುತ್ತದೆ, ಉಲ್ಬಣಗೊಳ್ಳುತ್ತದೆ,ಸೋಂಕಿತರಿಗೆ ಚಿಕಿತ್ಸೆ ಬಗ್ಗೆ ಗೊತ್ತಿರಲಿಲ್ಲ.ಇಂತಹ ವೇಳೆಯಲ್ಲಿಯೇ ಯಶಸ್ವಿಯಾಗಿ ನಿಯಂತ್ರಣ ಕಾರ್ಯ ನಿಭಾಯಿಸಿದ್ದೇವೆ.ಈ ಹಿಂದಿನ ಅನುಭವದಿಂದ ಸೋಂಕು ನಿಯಂತ್ರಣಕ್ಕೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ. ಕಳೆದೊಂದು ವಾರದಿಂದ…

    Loading