ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಅದೊಂದು ಊರು ಇದೆ ಅಲ್ಲಿ ಹೆಂಗಸರದ್ದೇ ಕಾರುಬಾರು ! ಅಲ್ಲಿನ ಮನೆಯ ಪ್ರತಿಯೊಂದು ನಿರ್ಣಯಗಳೂ ಕೂಡ ಮಹಿಳಾ ನಿರ್ಧರಿತವಾಗಿರುತ್ತವೆ. ಅದೂ ಸಾಲದೆಂಬಂತೆ ನಮ್ಮ ಕಡೆ ಹುಟ್ಟಿದ ಮಕ್ಕಳ ಹೆಸರಿನ ಜೊತೆಗೆ ತಂದೆಯ ಹೆಸರು ಸೇರಿಸುವುದು ಸಂಪ್ರದಾಯಿಕವಾಗಿದೆ. ಆದರೆ ಆ ಊರಿನಲ್ಲಿ ಮಕ್ಕಳ ಹೆಸರಿನ ಜೊತೆ ತಾಯಿಯ ಹೆಸರನ್ನು ಸೇರಿಸುತ್ತಾರೆ ಎಂಬುದು ಆಶ್ಚರ್ಯಕರ ವಿಚಾರ .

ಅದಲ್ಲದೆ ಈ ಊರಿನ ವಿಚಾರವು ಬಿ.ಬಿ.ಸಿ ಯಂತಹಾ ಅಂತರಾಷ್ಟ್ರೀಯ ಚಾನಲ್ ಗಳಲ್ಲೂ ಕೂಡ ಬಹಳ ಸಲ ಹೊಗಳಲ್ಪಟ್ಟಿದೆ !ಅಂದರೆ “ಈ ಊರಿನಾಗೆ ಹೆಂಗಸ್ರುದೇ ಕಾರುಬಾರು ನೋಡ್ಕಳಿ “ಅಂತೇನೂ ಆ ಚಾನಲ್ಲಿನವರು ಹೊಗಳಿಲ್ಲ ! ಅವರು ಹೊಗಳಿರುವುದು “ಈ ಊರು ಇಡೀ ಏಷ್ಯಾದಲ್ಲಿಯೇ ಅತ್ಯಂತ ಸ್ವಚ್ಚವಾದ ಊರು ಹಾಗೂ ಅತ್ಯಂತ ಸುಶಿಕ್ಷಿತ ಜನರು “ಎಂದು ಹೊಗಳಿದ್ದಾರೆ .
ಅದಲ್ಲದೆ ಇವರೆಲ್ಲರೂ ಹೊಗಳುವ ಮುಂಚೆಯೇ ಆ ಊರಿಗೆ “ದೇವರ ಸ್ವಂತದ ಉದ್ಯಾನವನ”ಎಂಬ ಹೆಸರು ಅಂಟಿಕೊಂಡಿತ್ತು ! ಸರಿಸುಮಾರು ‘ದೇವರ ಸ್ವಂತ ನಾಡು’ಎಂದು ಹೆಸರು ಪಡೆದಿರುವ ಕೇರಳಕ್ಕೆ ಸಡ್ಡು ಹೊಡೆಯುವಂತಹಾ ನಿಸರ್ಗ ಈ ಊರಿನ ಹೆಮ್ಮೆ !
ಈ ಊರು ಇರುವುದು ಭಾರತದ ಮೇಘಾಲಯದಲ್ಲಿ .ಊರಿನ ಹೆಸರು ಮೌಲಿನ್ನಾಂಗ್ ಎಂದಿದೆ.ಇಂತಹದಕ್ಕಿಂತಲೂ ಸಾವಿರಪಟ್ಟು ಹೆಚ್ಚು ಮಹಿಳಾ ಸ್ವಾತಂತ್ರ್ಯ ಇರುವ ಮತ್ತೊಂದು ಸಮುದಾಯವಿದೆ ಅದು ಇರುವುದು ಸಹಾರಾ ಮರುಭೂಮಿಯ ಅಕ್ಕ ಪಕ್ಕ .ಅದರ ಹೆಸರು “ಟೌರೆಗ್” .ಅದೊಂದು ವಿಚಿತ್ರ ಮುಸ್ಲಿಂ ಸಮುದಾಯ.

ಈ ಸಮುದಾಯದಲ್ಲಿ ನಾವೀಗ ನೋಡುತ್ತಿರುವಂತೆ ಹೆಂಗಸರೆಲ್ಲಾ ಮುಖ ಮುಚ್ಚುವ ಬುರ್ಕಾ ಹಾಕಿಕೊಂಡು ಜೀವನ ಸಾಗಿಸುವುದಿಲ್ಲ. ಈ ಸಮುದಾಯವು ಪ್ರಪಂಚದ ಎಲ್ಲ ಮುಸ್ಲಿಂ ಸಮುದಾಯಕ್ಕಿಂತಲೂ ವಿಭಿನ್ನ !ಇವರ ಸಮುದಾಯದಲ್ಲಿ ಗಂಡಸರೇ ಮುಖಕ್ಕೆ ಬುರ್ಖಾ ಧರಿಸಿ ಓಡಾಡಬೇಕಿದೆ ,ಹೆಂಗಸರು ತಮಗಿಷ್ಟ ಬಂದಂತಹಾ ಬಟ್ಟೆ ಧರಿಸಿ ಓಡಾಡುತ್ತಾರೆ .

ಇದು ಸಂಪ್ರದಾಯ ಎನ್ನುವುದಕ್ಕಿಂತ ಅಲ್ಲಿನ ಗಂಡಸರಿಗೆ ಇರುವ ಭಯ ಅಂತಲೇ ಹೇಳುವುದು ಸೂಕ್ತ. ಯಾಕಂದರೆ ಈ ಗಂಡಸರು ಮುಖ ಮುಚ್ಚಿಕೊಳ್ಳುವುದು ಎಲ್ಲಿ ಟೌರೆಗ್ ಮುಸ್ಲಿಂ ಮಹಿಳೆಯರು ಎತ್ಹಾಕಿಕೊಂಡು ಹೋಗಿ ಏನಾದ್ರೂ ಮಾಡಿ ಬಿಡುತ್ತಾರೋ ಎಂಬ ಭಯಕ್ಕೆ ಹಾಗೆ ಮುಸುಗು ಧರಿಸುವುದು !
ಕಿಡ್ನಾಪ್ ಮಾಡಿದ ಈ ಟೌರೆಗ್ ಹೆಂಗಸರು ಕೇವಲ ಒಬ್ಬರೇ ಕಿಡ್ನಾಪ್ ಮಾಡದೇ ಹತ್ತು ಹದಿನೈದು ಹುಡುಗಿಯರು ಒಟ್ಟಾಗಿ ಸೇರಿ ಕಿಡ್ನಾಪ್ ಮಾಡುತ್ತಾರೆ ಎಂಬ ವಿಚಾರವಿದೆ.

ಈ ಮುಸ್ಲಿ ಸಮುದಾಯವು ಈಜಿಪ್ಟಿನಿಂದ ಬಂದದ್ದು ಲಿಬಿಯಾದಿಂದ ಬಂದದ್ದು ವರ್ಜೀನಿಯಾದಿಂದ ಬಂದದ್ದು ಎಂದು ಇತಿಹಾಸಕಾರರು ಮನಬಂದಂತೆ ಹೇಳುತ್ತಿದ್ದಾರಾದರೂ ದಾಖಲೆಗಳೊಂದೂ ಲಭ್ಯವಿಲ್ಲ ಆದರೂ ಈ ಮಹಿಳೆಯರು ಮಾತ್ರ ಬುರ್ಖಾ ಧರಿಸದ ಯಾವನಾದರೂ ಚೆನ್ನಾಗಿ ಕಂಡರೆ ಮಾತ್ರ ಕಿಡ್ನಾಪ್ ಮಾಡುವುದು ಮಾತ್ರ ದಾಖಲೆ ಸಹಿತ ಇತಿಹಾಸದಲ್ಲಿ ದಾಖಲೆಯಾಗಿದೆ .

ಅದರಲ್ಲಿಯೂ ಇಲ್ಲಿನ ಗಂಡಸರು ನೀಲಿ ಬಣ್ಣದ ಬುರ್ಖಾ ಧರಿಸಿರಬೇಕೆಂಬ ಕಾನೂನು ಇದೆ ಹಾಗಾಗಿ ಇವರಿಗೆ ‘ದ ಬ್ಲೂ ಮನ್ ಆಫ್ ಸಹಾರಾ’ ಎಂಬ ಹೆಸರಿದೆ ಇದರ ಜೊತೆಗೆ ಗಂಡಸರು ಸಂಜೆಯಾಗುತ್ತಿದ್ದಂತೆಯೇ ಹೊರಹೋದರೆ ಅದಾವ ಹುಡುಗಿ ನಮ್ಮನ್ನು ಅಟ್ಟಾಸಿಕೊಂಡು ಬಟ್ಟೆ ಹರಿದು ಅತ್ಯಾಚಾರ ಮಾಡಿಬಿಡುತ್ತಾಳೋ ಎಂಬ ಭಯವೂ ಇದೆ !

ಮತ್ತೊಂದು ಆಶ್ಚರ್ಯದ ವಿಚಾರ ಏನೆಂದರೆ ಈ ಹುಡುಗಿಯರು ಊರಿನಲ್ಲಿ ಯಾರ ಜೊತೆಗೆ ಬೇಕಿದ್ದರೂ ಸಂಭಂದ ಇಟ್ಟುಕೊಳ್ಳಬಹುದು. ಈ ವಿಚಾರವನ್ನು ಮನೆಯವರಾಗಲೀ ತನ್ನ ಗಂಡನಾಗಲೀ ಪ್ರಶ್ನಿಸುವಂತಿಲ್ಲ ಹಾಗೇನಾದರೂ ಪ್ರಶ್ನಿಸಿದರೆ ಅಕ್ಕಪಕ್ಕದ ಹೆಂಗಸರೆಲ್ಲಾ ಸೇರಿಕೊಂದು ಮಕ್ ಮಕ್ಕೆ ಕುಟ್ಟಿಬಿಡುತ್ತಾರೆ ಎಂಬುದೂ ಕೂಡ ಇತಿಹಾಸ ಕಂಡ ಸತ್ಯ.
ಹೀಗೆ ಗಂಡನಾದವನು ತನ್ನ ಈ ಅಪರೂಪದ ಅನೈತಿಕ ಸಂಭಂದದ ವಿರುದ್ಧ ಎಗರಾಡಿದ್ದೇ ಆದರೆ ಆ ಹೆಂಡತಿಯು ತನ್ನ ಗ್ರಾಮದ ಹಿರಿಯ ಹೆಂಗಸಿಗೆ ತಿಳಿಸಿ ತನ್ನ ಅಪರೂಪದ ಸಂಭಂದ ಹದಗೆಡಿಸುತ್ತಿರೋ ಈ ಗಂಡ ನನಗೆ ಬೇಡ ಎಂದು ಬೈಯ್ದು ಡೈವೋರ್ಸ್ ಕೊಡುತ್ತಾಳೆ.

ಈ ಡೈವೋರ್ಸ್ ಪ್ರೋಗ್ರಾಮನ್ನು ಅಕ್ಕಪಕ್ಕದ ಎರಡೂ ಊರುಗಳಲ್ಲಿ ಹಬ್ಬ ಎಂದು ಆಚರಿಸುತ್ತಾರೆ, ಏಕೆಂದರೆ ಈ ಅಮಾಯಕ ಹೆಂಡತಿಯು ಕೆಟ್ಟ ಗಂಡನಿಂದ ದೂರವಾಗಿದ್ದಾಳೆ ಹಾಗಾಗಿ ಈ ಯುವತಿಯನ್ನು ಯಾರು ಬೇಕಿದ್ದರೂ ‘ಕೂಡಾಣಿಕೆ’ ಮಾಡಿಕೊಳ್ಳಬಹುದು ಎಂದು ಈ ಹಬ್ಬ ಅಷ್ಟೇ !
ಈ ಡೈವೋರ್ಸ್ ಕೇಸಿನಲ್ಲಿ ಬಹಳ ಚೆಂದ ಇರುವ ವಿಚಾರ ಏನೆಂದರೆ ಗಂಡನೇ ತನಗೆ ಈ ಹೆಂಡತಿ ಬೇಡವೆಂದು ಗ್ರಾಮಸ್ಥರ ಮೊರೆ ಹೊಕ್ಕರೆ ನಂತರ ಗಂಡನಾದವನೇ ತನ್ನ ಹೆಂಡತಿ ಬದುಕಲಿಕ್ಕಾಗಿ ತನ್ನ ಅರ್ಧ ಆಸ್ತಿ ಬಿಟ್ಟು ಕೊಡಬೇಕಾಗುತ್ತದೆ. ಇದನ್ನು ಬಿಟ್ಟು ಹೆಂಡತಿ ಏನಾದರೂ ತನಗೆ ಈ ಕೆಟ್ಟ ಗಂಡ ಬೇಡವೆಂದರೆ ಸಾಕು ಆತನ ಇಡೀ ಆಸ್ತಿ ಹೆಂಡತಿಯ ಪಾಲಾಗುತ್ತದೆ !

ಇದೆಲ್ಲದರ ಹೆನ್ನೆಲೆ ಹುಡುಕಿದರೆ “ಟಿನ್ ಹಿನಾನ್”ಎಂಬ ಹೆಸರಿನ ನಾಲ್ಕನೇ ಶತಮಾನದಲ್ಲಿ ಬದುಕಿದ್ದ ರಾಣಿ ಈ ಕಾನೂನು ಮಾಡಿದ್ದು ಎಂದು ಇತಿಹಾಸ ಹೇಳುತ್ತದೆ !ಆ ರಾಣಿಯ ಚಿತ್ರ ಲಭ್ಯವಿಲ್ಲ ಆದರೂ ನಾವೆಲ್ಲ ಆ ರಾಣಿಯ ಮುಖವನ್ನೊಮ್ಮೆ ನೋಡಿಕೊಂಡು ಧನ್ಯರಾಗಬೇಕಿತ್ತು !
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮಾಲೂರಿನ ‘ಯಶವಂತಪುರ’ ಗ್ರಾಮ ರಾಜ್ಯದ ಮೊದಲ ಡಿಜಿಟಲ್ ವಿಲೇಜ್’ ಆಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಹಯೋಗದಲ್ಲಿ ರೂಪಿಸಿರುವ ರಾಜ್ಯದ ಮೊದಲ ಡಿಜಿಟಲ್ ವಿಲೇಜ್’ ಇದನ್ನು ಮಾಲೂರಿನ ಶಾಸಕ ಎಸ್.ಮಂಜುನಾಥ್ ಗೌಡ ಉದ್ಘಾಟನೆ ಮಾಡುವ ಮೂಲಕ ಲೋಕಾರ್ಪಣೆ ಮಾಡಿದರು.
ರಿಲಾಯನ್ಸ್ ಜಿಯೋ ಬ್ರಾಡ್ ಬ್ಯಾಂಡ್ ಕ್ಷೇತ್ರದಲ್ಲಿ ಅತೀ ಶೀಘ್ರದಲ್ಲೇ ಸಂಚಲನ ಮೂಡಿಸಲಿದೆ.
ವಿಶ್ವದ ಅತ್ಯಂತ ದೊಡ್ಡ ಕಂಪನಿ ಆಪಲ್ ನ ಸಿಇಒ ಟಿಮ್ ಕುಕ್ 23,700 ಷೇರುಗಳನ್ನು ದಾನ ಮಾಡಿದ್ದಾರೆ. ಕಂಪನಿ ಈ ಬಗ್ಗೆ ಮಾಹಿತಿ ನೀಡಿದೆ. ದಾನ ಮಾಡಿದ ಷೇರಿನ ಮೌಲ್ಯ 36 ಕೋಟಿ ರೂಪಾಯಿ ಎನ್ನಲಾಗಿದೆ. ಯಾರಿಗೆ ದಾನ ಮಾಡಲಾಗಿದೆ ಎಂಬುದನ್ನು ಕಂಪನಿ ಬಹಿರಂಗಪಡಿಸಿಲ್ಲ. ಹಿಂದಿನ ವರ್ಷ ಇಷ್ಟೇ ಷೇರನ್ನು ಕುಕ್, ಚಾರಿಟಿ ಟ್ರಸ್ಟ್ ಒಂದಕ್ಕೆ ದಾನ ಮಾಡಿದ್ದರು. ಆಪಲ್ ಪ್ರಕಾರ, ಕುಕ್ ಬಳಿ 854,849 ಷೇರುಗಳಿವೆ. ಇದ್ರ ಬೆಲೆ 17.6 ಕೋಟಿ ಡಾಲರ್ ಅಂದ್ರೆ ಸುಮಾರು…
ನಗರದಲ್ಲಿ ಹೆಚ್ಚುತ್ತಿರುವ ಮೊಬೈಲ್ ಕಳವು ಪ್ರಕರಣಗಳ ಶೀಘ್ರ ಪತ್ತೆಗೆ ನುರಿತ ತಜ್ಞರ ತಂಡ ರಚನೆ … ಮಾಡಲು ನಿರ್ಧರಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ರಾವ್ ಹೇಳಿದರು. ಗುರುವಾರಸುದ್ದಿಗೋಷ್ಠಿಯಲ್ಲಿ ಮಾತನಾ. ಕದ್ದ ಮೊಬೈಲ್ನಲ್ಲಿನ ದತ್ತಾಂಶ ಹಾಗೂ ಐಎಂಇಐ ಸಂಖ್ಯೆ ಅಳಿಸಿ ಹಾಕುವುದನ್ನು ಕಳ್ಳರುಕರಗತ ಮಾಡಿಕೊಂಡಿದ್ದಾರೆ. ಹೀಗಾಗಿಮೊಬೈಲ್ ಕಳವು ಪ್ರಕರಣಗಳ ಶೀಘ್ರ ಪತ್ತೆಗೆ ನುರಿತ ತಜ್ಞರ ತಂಡ ರಚಿಸಲಾಗುವುದು ಎಂದರು. ಮೊಬೈಲ್ ಬಳಕೆದಾರರು ಜಿಪಿಎಸ್ ಬಳಕೆ ಮಾಡಿಕೊಂಡರೆ ಒಳಿತು… ಇದರಿಂದ ಕಳವಾದ ಮೊಬೈಲ್ ಸುಲಭವಾಗಿ ಸಿಗುವ ಸಾಧ್ಯತೆ ಹೆಚ್ಚಿದೆ…
ಲಂಕೆಯಲ್ಲಿ ಮಹಾಯುದ್ಧ ನಡೆದು ರಾವಣ ರಾಮಬಾಣಕ್ಕೆ ತುತ್ತಾಗಿ ಧರೆಗುರುಳಿದ. ಅವನು ಇನ್ನೂ ಮರಣಶಯ್ಯೆಯಲ್ಲಿರುವಾಗ ರಾಮ, “ಲಕ್ಷ್ಮಣಾ, ರಾವಣ ಮಹಾ ಪಂಡಿತ. ಅಧ್ಯಯನ ಮತ್ತು ಅನುಭವದಿಂದ ಅಪಾರ ಜ್ಞಾನ ಗಳಿಸಿದ್ದಾನೆ. ಅವನ ಬಳಿ ಹೋಗಿ, ಅವನಿಂದ ಅಮೂಲ್ಯವಾದ ಪಾಠಗಳನ್ನು ಕಲಿತು ಕೊಂಡು ಬಾ ಎಂದು ಹೇಳಿದ. ಅದರಂತೆ ಲಕ್ಷ್ಮಣ ರಾವಣನ ಪಾದದ ಬಳಿ ನಿಂತು, ರಾವಣನ ಬೋಧನೆಗಳನ್ನು ಆಲಿಸಿ, ಹೃದ್ಗತ ಮಾಡಿಕೊಳ್ಳುತ್ತಾನೆ. ರಾವಣ ಸಾಯುವ ಮುನ್ನ ಲಕ್ಷ್ಮಣನಿಗೆ ರಾವಣ ಯೋಧ ಮಾತ್ರವಲ್ಲ, ಸರ್ವೋಚ್ಚ ವಿದ್ವಾಂಸನು ಆಗಿದ್ದ ಬ್ರಾಹ್ಮಣ ಕುಲದಲ್ಲಿ ಜನಿಸಿದ…
ಶ್ರೀಕ್ಷೇತ್ರ ಧರ್ಮಸ್ಥಳದ ಮಾದರಿಯಲ್ಲಿ ಉಚಿತವಾಗಿ ಸಾಮೂಹಿಕ ವಿವಾಹ ಆಯೋಜಿಸಲು ಮುಜರಾಯಿ ಇಲಾಖೆ ಕ್ರಮಕೈಗೊಂಡಿದೆ ಎನ್ನಲಾಗಿದೆ. ಸರಳ ಸಾಮೂಹಿಕ ವಿವಾಹದಿಂದ ದುಂದುವೆಚ್ಚಕ್ಕೆ ಕಡಿವಾಣ ಹಾಕುವ ಮೂಲಕ ಬಡವ ಶ್ರೀಮಂತ ಎಂಬ ಭೇದ ಭಾವ ಬಿಟ್ಟು ಸಮಾತನೆ ಕಾಣಬಹದು. ಬಡವರು, ಜನಸಾಮಾನ್ಯರಿಗೆಅನುಕೂಲವಾಗುವಂತೆ ಮುಜರಾಯಿ ಇಲಾಖೆ ವತಿಯಿಂದ ಉಚಿತ ಸಾಮೂಹಿಕ ವಿವಾಹ ಆಯೋಜಿಸುವ ಹೊಸ ಯೋಜನೆಯನ್ನುಜಾರಿಗೆ ತರಲು ಸರ್ಕಾರ ಮುಂದಾಗಿದೆ. ಯಾವುದೇ ಜಾತಿ ಭೇದವಿಲ್ಲದೆ ಹಿಂದೂ ಸಂಪ್ರದಾಯದಂತೆ ಸರಳವಾಗಿವಿವಾಹವಾಗಲು ಅನುಕೂಲವಾಗುವಂತೆ ಯೋಜನೆ ಜಾರಿಗೆ ತರಲಾಗುವುದು.ಇದು ಬಡವರ ಅನುಕೂಲಕ್ಕಾಗಿ ಮಾಡಿದ್ದಾರೆ ಎನ್ನಬಹುದು. ರಾಜ್ಯದಲ್ಲಿರುವ …