ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕೆಲವು ರಹಸ್ಯಗಳನ್ನು ಎಂದಿಗೂ ಭೇದಿಸಲಾಗುವುದಿಲ್ಲ. ಪ್ರತೀ 12 ವರ್ಷಗಳಿಗೊಮ್ಮೆ ಮಹಾದೇವನ ಮಂದಿರಕ್ಕೆ ಸಿಡಿಲು ಬಡಿಯುತ್ತೆ. ಅದರ ಹೊಡೆತಕ್ಕೆ ಶಿವಲಿಂಗ ಛಿದ್ರವಾಗುತ್ತೆ. ಆದರೆ ಬೆಳಗಾಗುವಷ್ಟರಲ್ಲಿ ಮತ್ತೆ ಒಂದಾಗಿರುತ್ತದೆ. ಹೀಗೇಕೆ ಆಗುತ್ತದೆಂದು ಕಂಡುಹಿಡಿಯಲು ವಿಜ್ಞಾನಿಗಳಿಗೂ ಸಾಧ್ಯವಾಗುತ್ತಿಲ್ಲ. ಗುಡುಗು…ಸಿಡಿಲು…ಈ ವಿಕೃತ ಶಬ್ಧಕ್ಕೆ ಸುತ್ತ ಮುತ್ತಲಿನ ಬೆಟ್ಟಗಳು ಕಂಪಿಸುತ್ತವೆ. ಜನ ಹೆದರಿ ನಡುಗುತ್ತಾರೆ. ಪಶು ಪಕ್ಷಿಗಳು ಬೆದರಿ ಓಡುತ್ತವೆ.

ಸಿಡಿಲಿನ ಹೊಡೆತಕ್ಕೆ ಶಿವಲಿಂಗ ಛಿದ್ರವಾಗುತ್ತದೆ. ಆದರೆ, ಮಂದಿರಕ್ಕೆ ಮಾತ್ರ ಯಾವುದೇ ಹಾನಿ ಸಂಭವಿಸುವುದಿಲ್ಲ. ಬೆಟ್ಟದ ಮೇಲಿನ ಕಲ್ಲುಗಳು ಕೆಳಗೆ ಬೀಳುವುದಿಲ್ಲ. ಮಾರನೇ ದಿನ ದೇವಾಲಯಕ್ಕೆ ಅರ್ಚಕ ಹೋಗಿ…ತುಂಡು ತುಂಡಾಗಿದ್ದ ಶಿವಲಿಂಗದ ತುಣುಕುಗಳನ್ನು ಒಂದು ಕಡೆ ಸೇರಿಸಿ ಅಭಿಷೇಕ ಮಾಡುತ್ತಾರೆ. ಒಂದು ದಿನ ಕಳೆಯುವಷ್ಟರಲ್ಲಿ ಶಿವಲಿಂಗಕ್ಕೆ ಯಥಾರೂಪ ಬಂದು ಹಿಂದಿನಂತೆಯೇ ಆಗಿರುತ್ತದೆ. ಅಲ್ಲಿ ಏನೂ ನಡೆದಿಲ್ಲವೇನೋ ಎನ್ನುವಂತೆ ಕಾಣುತ್ತದೆ. ಇದನ್ನು ವಿಚಿತ್ರವೆನ್ನಬೇಕೋ..ಶಿವನ ಲೀಲೆ ಎನ್ನಬೇಕೊ ಎಂದು ಅರ್ಥವಾಗದ ಸ್ಥಿತಿಯಲ್ಲಿ ಭಕ್ತರಿದ್ದಾರೆ.

ಈ ರೀತಿ ಆಗುತ್ತಿರುವುದು ಮೊದಲೇನಲ್ಲ. ನೂರಾರು ವರ್ಷಗಳಿಂದ ಹೀಗೇ ನಡೆಯುತ್ತಿದೆ. ಪ್ರತೀ 12 ವರ್ಷಕ್ಕೊಮ್ಮೆ ಇಂತಹ ವಿಧ್ಯಮಾನ ನಡೆಯುವ ದೇವಾಲಯದ ಹೆಸರು…’ ಬಿಜಲೀ ಮಹಾದೇವ್ ವದಿರ್ ‘. ಹಿಮಾಚಲ ಪ್ರದೇಶದ ಕುಲೂ ಕಣಿವೆಯಲ್ಲಿ ಈ ದೇವಾಲಯವಿದೆ. ಹೀಗೆ ನಡೆಯಲು ಕಾರಣವೇನೆಂಬುವುದನ್ನು ತಿಳಿಸುವ ಒಂದು ಕತೆ ಇಲ್ಲಿ ಪ್ರಚಾರದಲ್ಲಿದೆ.

ಹಿಂದೆ ಕುಲೂ ಕಣಿವೆಯಲ್ಲಿ ಬಲಿಷ್ಟನಾದ ರಾಕ್ಷಸನೊಬ್ಬನಿದ್ದನಂತೆ. ಅಲ್ಲಿರುವ ಜನರನ್ನು , ಪಶು ಪಕ್ಷಿಗಳನ್ನು ಅಂತ್ಯಮಾಡಲು ಆತ ಒಂದು ಹಾವಿನ ರೂಪ ತಳೆದನಂತೆ. ಬೀಯಾಸ್ ನದಿ ಪ್ರವಾಹಕ್ಕೆ ಅಡ್ಡಲಾಗಿ ಮಲಗಿ ಸುತ್ತ ಮುತ್ತಲ ಗ್ರಾಮಗಳನ್ನು ಮುಳುಗಿಸಲು ಪ್ರಯತ್ನಿಸುತ್ತಾನಂತೆ. ಇದನ್ನು ನೋಡಿದ ಈಶ್ವರ ತನ್ನ ತ್ರಿಶೂಲದಿಂದ ಆ ರಾಕ್ಷಸನನ್ನು ಸಂಹರಿಸುತ್ತಾನೆ. ಆ ರಾಕ್ಷಸ ಸಾಯುತ್ತಾ ದೊಡ್ಡ ಬೆಟ್ಟವಾಗಿ ರೂಪತಳೆಯುತ್ತಾನೆ.ಒಂದು ವೇಳೆ ಸಿಡಿಲು ಬಡಿದರೆ, ಅಲ್ಲಿರುವ ಜನ, ಪಶು ,ಪಕ್ಷಿಗಳು ನಾಶವಾಗುವುದನ್ನು ತಡೆಯಲು ,ಶಿವ ಆ ಸಿಡಿಲು ತನಗೇ ಬಡಿಯುವಂತೆ ಮಾಡಿದ್ದಾನೆಂದು ಪುರಾಣ ಹೇಳುತ್ತದೆ. ಮಹಾದೇವನ ಆಜ್ಞೆಯಂತೆಯೇ 12 ವರ್ಷಗಳಿಗೊಮ್ಮೆ ಸಿಡಿಲು ಬಡಿಯುತ್ತದೆಂದು…ನಂತರ ಆ ಶಿವಲಿಂಗ ಒಂದುಗೂಡುತ್ತದೆಂಬ ಪ್ರತೀತಿಯಿದೆ.

ಈ ಮಹಾದೇವನ ಆಲಯವನ್ನು ತಲುಪುವುದು ಸುಲಭಸಾಧ್ಯವಲ್ಲ ಸಮುದ್ರ ಮಟ್ಟದಿಂದ 2,450 ಮೀಟರ್ ಎತ್ತರದ ಬೆಟ್ಟದ ಮೇಲಿರುವ ಈ ದೇವಾಲಯವನ್ನು ತಲುಪಲು ಕಲ್ಲು, ಮುಳ್ಳುಗಳ ಮೇಲೆ ನಡೆದುಕೊಂಡು ಹೋಗಬೇಕು.ಬೆಟ್ಟದ ಮೇಲಿಂದ ಕಣಿವೆಯವರೆಗೂ ಮೆರವಣಿಗೆ ಮಾಡುವುದು ಇಲ್ಲಿನ ಪದ್ಧತಿಯಂತೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕುರಿಗಾಯಿ ಹನುಮಂತ ಅವರು ಜೀ ಕನ್ನಡ ವಾಹಿನಿಯ ‘ಸರಿಗಮಪ’ ಕಾರ್ಯಕ್ರಮದಲ್ಲಿ ಹಾಡುವ ಮೂಲಕ ವೀಕ್ಷಕರ ಮನಗೆದ್ದಿದ್ದಾರೆ. ತಮ್ಮದೇ ಶೈಲಿಯಲ್ಲಿ ಹಾಡುವ ಮೂಲಕ ಹನುಮಂತ ಅವರು ಮನೆ ಮಾತಾಗಿದ್ದಾರೆ. ಅವರಿಗೆ ಸಿನಿಮಾದಲ್ಲಿ ಹಾಡುವ ಅವಕಾಶ ಕೊಡುವುದಾಗಿ ನಿರ್ದೇಶಕ ಯೋಗರಾಜ ಭಟ್ ಈಗಾಗಲೇ ಭರವಸೆ ನೀಡಿದ್ದಾರೆ. ‘ಸರಿಗಮಪ’ ಕಾರ್ಯಕ್ರಮದ ನಿರೂಪಕಿ ಅನುಶ್ರೀ ಲಂಬಾಣಿ ಉಡುಗೆ ತಂದುಕೊಡುವಂತೆ ಕೇಳಿಕೊಂಡಿದ್ದರಂತೆ. ಹನುಮಂತ ಅವರ ತಾಯಿ ಲಂಬಾಣಿ ಉಡುಗೆ ತಂದುಕೊಟ್ಟಿದ್ದು, ಅದನ್ನು ಧರಿಸಿ ಸಂತಸ ಹಂಚಿಕೊಂಡ ಅನುಶ್ರೀ ಕ್ಷಮೆ ಕೂಡ ಕೇಳಿದ್ದಾರೆ. ‘ತಮ್ಮ ಹನುಮಂತ…
ಮಳೆರಾಯನ ಆರ್ಭಟಕ್ಕೆ ಬ್ರಹ್ಮಪುತ್ರ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ಅಸ್ಸಾಂನಲ್ಲಿ ಪ್ರವಾಹ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ 17 ಜಿಲ್ಲೆಗಳ 700 ಹಳ್ಳಿಗಳು ಜಲಾವೃತವಾಗಿದ್ದು, ಸುಮಾರು 4 ಲಕ್ಷ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯದಲ್ಲಿ ಭಾರೀ ಭೂಕುಸಿತ ಮುಂದುವರಿದಿದ್ದು, ಮೂರು ಜನರು ಸಾವನ್ನಪ್ಪಿದ್ದಾರೆ. ಧೆಮಾಜಿ, ಲಖಿಂಪುರ್, ಬಿಸ್ವಾನಾಥ್, ಜೋರ್ಹತ್, ದಾರಂಗ್, ಬಾರ್ಪೆಟಾ, ನಲ್ಬಾರಿ, ಮಜುಲಿ, ಚಿರಾಂಗ್, ದಿಬ್ರುಗರ್ಹ್ ಮತ್ತು ಗೋಲಘಾಟ್ ಸೇರಿದಂತೆ ಒಟ್ಟು 17 ಜಿಲ್ಲೆಗಳ 700 ಹಳ್ಳಿಗಳಲ್ಲಿ ಪ್ರವಾಹ ಉಂಟಾಗಿದೆ. ಸುಮಾರು ನಾಲ್ಕು ಲಕ್ಷ…
ಪ್ರತಿ ವರ್ಷವೂ ಮಾನ್ಸೂನ್ನ್ನು ಕಾಯಲಾಗುತ್ತದೆ. ಯಾಕೆಂದರೆ ಆಕಾಶದಿಂದ ಸುರಿಯು ಮಳೆಯಿಂದ ಹಸಿರು ಹರಡುತ್ತದೆ.ಆದರೆ ಜನರು ಆಕಾಶದಿಂದ ಮಳೆ ಸುರಿಯುವುದನ್ನು ಕಾಯದಂತಹ ಸ್ಥಳದ ಬಗ್ಗೆ ನಿಮಗೆ ಗೊತ್ತಿರಲಾರದು.
ಮದುವೆ ಎಂಬುದೇ ವಿಚಿತ್ರ ನಂಟು. ಎಲ್ಲಿಯೋ ಇದ್ದ ಹುಡುಗ – ಹುಡುಗಿ ಮದುವೆ ಎಂಬ ಸಂಬಂಧ ದೊಂದಿಗೆ ಬೆಸೆಯುತ್ತದೆ. ಹುಡುಗ ಏನೋ ಸಂತಸದಲ್ಲೇ ಮದುವೆಯಾಗುತ್ತಾನೆ. ಆದರೆ
ಕಾರ್ಖಾನೆಯ ಕ್ಯಾಂಟೀನ್ ಆಹಾರ ಸೇವಿಸಿದ 100ಕ್ಕೂ ಹೆಚ್ಚು ಮಹಿಳಾ ನೌಕರರು ಹೊಟ್ಟೆ ನೋವು, ವಾಂತಿ, ಬೇಧಿಯಿಂದ ಅಸ್ವಸ್ಥಗೊಂಡು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ನಡೆದಿದೆ. ತಾಲ್ಲೂಕಿನ ಕೈಗಾರಿಕಾ ವಸಾಹತು ಪ್ರದೇಶದ ಅಂಚೇಪಾಳ್ಯದ ಬಳಿ ಇರುವ ಇಂಡೋ ಸ್ಪಾನಿಶ್ ಕಾರ್ಖಾನೆಯಲ್ಲಿ ಈ ದುರಂತ ಸಂಭವಿಸಿದೆ. ನೌಕರರಿಗೆ ನಿನ್ನೆ ಮಧ್ಯಾಹ್ನ ಊಟದ ವ್ಯವಸ್ಥೆ ಇದ್ದು ಅನ್ನ ಮತ್ತು ಮೊಳಕೆಕಾಳು ಸಾಂಬಾರ್ ನೀಡಲಾಗಿತ್ತು. ಊಟ ಮುಗಿದ ಕೆಲವು ನಿಮಿಷಗಳ ನಂತರ 40ಕ್ಕೂ ಹೆಚ್ಚು ಮಹಿಳೆಯರು ಹೊಟ್ಟೆ ನೋವೆಂದು ಒದ್ದಾಡಿದ್ದಾರೆ….
*ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ* ಆಂಡ್ರಾಯ್ಡ್ ಟ್ಯಾಬ್ಲೆಟ್ ಅಥವಾ ಸ್ಮಾರ್ಟ್ಫೋನ್ ಯಾವುದೇ ಆಗಿರಲಿ ಅದರಲ್ಲಿ ಗೂಗಲ್ ಪ್ಲೇಸ್ಟೋರ್ ಇದ್ದೇ ಇರುತ್ತದೆ. ಅಲ್ಲಿಂದಲೇ ಬಳಕೆದಾರರೆಲ್ಲ ಆಪ್ಸ್, ಗೇಮ್ಸ್ ಡೌನ್ಲೋಡ್ ಮಾಡಿಕೊಳ್ಳುತ್ತಾರೆ. ಇದು ಗೂಗಲ್ ಅಧಿಕೃತ ಸ್ಟೋರ್ ಆದ ಕಾರಣ ಅದರಲ್ಲಿರುವ ಆಪ್ಸ್ ಎಲ್ಲವೂ ಸುರಕ್ಷಿತವಾದವು ಎಂದೇ ಭಾವಿಸುತ್ತಾರೆ. ಆದರೆ ಅದು ತಪ್ಪು. ಯಾಕೆಂದರೆ ಪ್ಲೇಸ್ಟೋರ್ನಲ್ಲೂ ಹಲವು ಮಾಲ್ವೇರ್, ವೈರಸ್ ಇರುವ ಆಪ್ಸ್ ಇವೆಯಂತೆ. ಒಂದು ಪ್ರಮುಖ ಐಟಿ ಸೆಕ್ಯುರಿಟಿ ಕಂಪೆನಿ ಈ ವಿಷಯವನ್ನು ಬಯಲುಮಾಡಿದೆ. ಗೂಗಲ್…