News

The Founding of YouTube A Short History
ವಿಜಯನಗರದಲ್ಲಿ ಭಿಕ್ಷಾಟನೆ ಜಾಲ: ಶಾಲೆ ರಜೆ ಎಂದು ಮಕ್ಕಳನ್ನೇ ಭಿಕ್ಷೆಗೆ ಇಳಿಸಿದ್ದ ತಾಯಂದಿರು
ಬ್ಯಾಕ್ ಟು ಬ್ಯಾಕ್ ಟ್ರೋಫಿ ಗೆದ್ದು ಇತಿಹಾಸ ಬರೆದ ಆರ್‌ಸಿಬಿ – ಬೆಂಗಳೂರು
ಶಿಕ್ಷಕರಿಗೆ ಎಐ (AI) ಆಧರಿತ ಹಾಜರಾತಿ ಫಜೀತಿ;
“ಸಿದ್ದರಾಮಯ್ಯ ಸೀಕ್ರೆಟ್ ರಿವೇಂಜ್‌, ಡಿಕೆಶಿ ಮತ್ತು ರಾಹುಲ್‌ ಗಾಂಧಿಗೆ ಸೈಲೆಂಟ್ ಏಟು”
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ಘೋಷಣೆ – ಡಿಕೆ ಶಿವಕುಮಾರ್ ಮುಂದಿನ ಸಿಎಂ?
ಸ್ಟೈಲ್‌ಗಾಗಿ ಕಡಿಮೆ ಬೆಲೆಯ ಸನ್‌ಗ್ಲಾಸ್ ಧರಿಸುತ್ತೀರಾ? ಹಾಗಾದರೆ ಈ ಅಪಾಯಗಳ ಬಗ್ಗೆ ತಿಳಿಯಲೇಬೇಕು!
DIGITAL ARREST SCAM : ವೃದ್ಧೆ ಆಸ್ತಿ ಮಾರಿ ಖಾತೆಯಲ್ಲಿಟ್ಟಿದ್ದ 24 ಕೋಟಿ ರೂ ಲೂಟಿ
ಭಾರತದಲ್ಲಿ ಚಿನ್ನದ ಬೇಡಿಕೆಗೆ ದೊಡ್ಡ ಹೊಡೆತ ಬಿದ್ದಿದೆ.
ಸಿಲ್ಕಿ ಮತ್ತು ಶೈನಿಂಗ್ ಕೂದಲಿಗೆ ಬೀಟ್ರೂಟ್‌ನ ಈ ಹೇರ್ ಕೇರ್ ಟಿಪ್ಸ್ ಪ್ರಯತ್ನಿಸಿ
National, Place, tourism

ಜಂತರ್ ಮಂತರ್

183

ಇದೊಂದು ಖಗೋಳ ಶಾಸ್ತ್ರಕ್ಕೆ ಸಂಬಂಧಿಸಿದ ರಚನೆಗಳ ಸಂಗ್ರಹವಾಗಿದೆ. ಪ್ರಸ್ತುತ, ರಾಜಸ್ಥಾನದ ಜೈಪುರ ಹಾಗೂ ದೇಶದ ರಾಜಧಾನಿ ದೆಹಲಿಯಲ್ಲಿ ಜಂತರ್ ಮಂತರ್ ಗಳನ್ನು ಕಾಣಬಹುದಾಗಿದ್ದು, ಜೈಪುರದಲ್ಲಿರುವ ಜಂತರ್ ಮಂತರ್ ದೊಡ್ಡ ಹಾಗೂ ಹೆಚ್ಚು ಹೆಸರುವಾಸಿಯಾಗಿದೆ. ರಜಪೂತ್ ದೊರೆ ಸವಾಯ್ ಜೈಸಿಂಗ್ ಈ ರಚನೆಗಳ ನಿರ್ಮಾಣಕಾರ. ದೇಶದ ಒಟ್ಟು ಐದು ಸ್ಥಳಗಳಲ್ಲಿ ಇಂತಹ ರಚನೆಗಳನ್ನು ಈತ ನಿರ್ಮಿಸಿದ್ದಾನೆ. ದೆಹಲಿ ಹಾಗೂ ಜೈಪುರ ಹೊರತುಪಡಿಸಿ ಮಥುರಾ, ವಾರಣಾಸಿ ಹಾಗೂ ಉಜ್ಜಯಿನಿಗಳಲ್ಲಿ ಈ ರಚನೆಗಳನ್ನು ಜೈಸಿಂಗನು ನಿರ್ಮಿಸಿದ್ದು ಸುಮಾರು 1724 ರಿಂದ 1735 ರ ಸಮಯದಲ್ಲಿ ಈ ರಚನೆಗಳು ನಿರ್ಮಾಣಗೊಂಡಿವೆ. ಪ್ರಸ್ತುತ, ಲೇಖನವು ಜೈಪುರದಲ್ಲಿರುವ ಜಂತ ಮಂತರ್ ರಚನೆಗಳ ಕುರಿತು ತಿಳಿಸುತ್ತದೆ.

ಜಂತರ್ ಮಂತರ್: ಜೈಸಿಂಗನು ಖಗೋಳ ಶಾಸ್ತ್ರದಲ್ಲಿ ಅತೀವ ಆಸಕ್ತಿವುಳ್ಳವನಾಗಿದ್ದನು ಹಾಗೂ ಈ ರಚನೆಗಳ ಹಿಂದಿರುವ ಮುಖ್ಯ ಉದ್ದೇಶವೆಂದರೆ ಖಗೋಳಕ್ಕೆ ಸಂಬಂಧಿಸಿದ ವಿಷಯಗಳನ್ನು ಅವಲೋಕಿಸುವುದು ಹಾಗೂ ತಾರಾ ಮಂಡಲದಲ್ಲುಂಟಾಗುವ ಹಲವು ಬದಲಾವಣೆಗಳು, ಗ್ರಹಣಗಳ ಕುರಿತು ತಿಳಿಯುವುದು.

ಈ ಒಂದು ಸಂಗ್ರಹಾಲಯದ ಗುಚ್ಛಕ್ಕೆ ಹಿಂದಿನ ಕಾಲದ ತಾರಾಲಯ ಎಂದೂ ಸಹ ಕರೆಯಭುದು. ಒಟ್ಟು 14 ಬಗೆಯ ಪ್ರಮುಖ ಜಾಮಿತಿಯ (ರೇಖಾಗಣಿತ) ರಚನೆಗಳನ್ನು ಈ ವೀಕ್ಷಣಾಲಯದಲ್ಲಿ ಕಾಣಬಹುದಾಗಿದೆ.
ವಿವಿಧ ಭಂಗಿ ಹಾಗೂ ಕೋನಗಳಲ್ಲಿ ರಚಿಸಲಾದ ಈ ರಚನೆಗಳನ್ನು ವಿಶ್ಲೇಷಿಸುವ ಮೂಲಕ ಅಂದಿನ ಕಾಲದಲ್ಲಿ ತಾರೆಗಳ ಭ್ರಮಣೆ, ಗ್ರಹಣ, ಭೂಮಿಯ ಪ್ರದಕ್ಷಿಣೆಗಳ ಕುರಿತು ತಿಳಿಯಲಾಗುತ್ತಿತ್ತು.

ಇಲ್ಲಿನ ಪ್ರತಿಯೊಂದು ರಚನೆಗಳು ತಮ್ಮದೆ ಆದ ವಿಶೇಷತೆಗಳನ್ನು ಹೊಂದಿದ್ದು, ಯಾವುದೇ ರೀತಿಯ ಚಲನ ವಲನ ಸ್ಥಿತಿಯಲ್ಲಿರದೆ ಸ್ಥಿರವಾಗಿ ಭೂಮಿಯ ಮೇಲೆ ಸ್ಥಾಪಿಸಲ್ಪಟ್ಟಿವೆ.
ಇವುಗಳಲ್ಲಿ ಸಾಮ್ರಾಟ್ ಯಂತ್ರ ಎಂಬ ರಚನೆಯು ಎಲ್ಲಕ್ಕಿಂತ ದೊಡ್ಡದಾಗಿದ್ದು, 90 ಅಡಿಗಳಷ್ಟು ಎತ್ತರವಿದೆ. ಇದರ ಮುಖವು ಜೈಪುರ ನಗರದ ಅಕ್ಷಾಂಶಕ್ಕೆ 27 ಡಿಗ್ರಿಯಷ್ಟು ಕೋನದಲ್ಲಿ ನಿರ್ಮಿಸಲ್ಪಟ್ಟಿದೆ.
ಈ ರಚನೆಯು ದಿನದ ಸಮಯವನ್ನು ತನ್ನ ನೆರಳಿನ ಮೂಲಕ ಕರಾರುವಕ್ಕಾಗಿ ತಿಳಿಸುತ್ತದೆ. ಇದರ ಮೇಲಿರುವ ಚಿಕ್ಕದಾದ ಒಂದು ನಿಲ್ಲುವ ಜಾಗವು ಅಂದಿನ ಸಮಯದಲ್ಲಿ ಗ್ರಹಣ ಹಾಗೂ ಮಳೆಯ ಸೂಚನೆಯನ್ನು ಘೋಷಿಸಲು ಬಳಸಲಾಗುತ್ತಿತ್ತು

ಇಲ್ಲಿನ ಪ್ರತಿಯೊಂದು ರಚನೆಗಳು ಅಳತೆ ಮಾಪಕವನ್ನು ಒಳಗೊಂಡಿವೆ. ಸ್ಥಳೀಯವಾಗಿ ದೊರೆತ ಕಲ್ಲಿನಿಂದಲೆ ನಿರ್ಮಿಸಲಾದ ಈ ರಚನೆಗಳಲ್ಲಿ ಅಳತೆಗಳನ್ನು ಕರಾರುವಕ್ಕಾಗಿ ಮುದ್ರಿಸಲಾಗಿದೆ. 1948 ರಲ್ಲಿ ಇದನ್ನು ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಲಾಯಿತು.
ಸಾಮ್ರಾಟ್ ಯಂತ್ರವು (ರಚನೆ) ಸನ್ ಡಯಲ್ (ಸೂರ್ಯನ ಬೆಳಕಿನಿಂದ ಸಮಯ ಹೇಳುವ ಗಡಿಯಾರ) ಜೈಪುರದ ಸಮಯಕ್ಕೆ ಎರಡು ಕ್ಷಣಗಳ ವ್ಯತ್ಯಾಸ ಹೊಂದಿದ್ದು, ಇದರ ನೆರಳು ಪ್ರತಿ ಸೆಕೇಂಡಿಗೆ ಒಂದು ಮಿ.ಮೀ ಗಳಷ್ಟು ದೂರ ಚಲಿಸುತ್ತದೆ.
ಅಲ್ಲದೆ ಜ್ಯೋತಿಷ್ಯ ಹಾಗೂ ವೇದ ಜ್ಯೋತಿಷ್ಯ ಕಲಿಯುತ್ತಿರುವ ವಿದ್ಯಾರ್ಥಿಗಳ ಪಾಲಿಗೆ ಇದು ಭೇಟಿ ನೀಡಲೇಬೇಕಾದ ತಾಣವಾಗಿದೆ. ವೇದಗಳಲ್ಲಿ ನಮಗಿರುವ ನಂಬಿಕೆಯನ್ನು ಪ್ರಚುರಪಡಿಸುವಂತಹ ರಚನೆ ಇದಾಗಿದ್ದು ಭವ್ಯ ಭಾರತದ ಪುರಾತನ ಜ್ಞಾನದ ಪರಿಚಯ ಇಲ್ಲಿ ಭೇಟಿ ನೀಡಿದಾಗ ನಮಗುಂಟಾಗುತ್ತದೆ.
ಹೀಗೆ ಉತ್ತರ ಭಾರತದಲ್ಲಿ ಐದು ಜಂತರ್ ಮಂತರ್ ಗಳನ್ನು ನೋಡಬಹುದಾಗಿದ್ದು ಅವುಗಳಲ್ಲಿ ಜೈಪುರ ಹಾಗೂ ದೆಹಲಿಯ ಜಂತರ್ ಮಂತರ್ ಗಳು ಪ್ರಮುಖವಾಗಿವೆ ಮತ್ತು ಪ್ರಸಿದ್ಧಿ ಪಡೆದ ಪ್ರವಾಸಿ ಆಕರ್ಷಣೆಗಳಾಗಿವೆ.
ಜೈಪುರವು ರಾಜಸ್ಥಾನದ ರಾಜಧಾನಿ ಪಟ್ಟಣವಾಗಿದ್ದು, ಭಾರತದ ಬಹುತೇಕ ಎಲ್ಲ ಮಹಾನಗರಗಳಿಂದ ಇಲ್ಲಿಗೆ ಸುಲಭವಾಗಿ ತೆರಳಬಹುದು.



About the author / 

Chethan Mardalu

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜ್ಯೋತಿಷ್ಯ

    ದಿನ ಭವಿಷ್ಯ ಶುಕ್ರವಾರ, ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವುನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 9663218892 ಮೇಷ(30 ನವೆಂಬರ್, 2018) ನೀವು ತ್ವರಿತ ಹಣ ಪಡೆಯುವ ಬಯಕೆ ಹೊಂದಿರುತ್ತೀರಿ. ನಿಮ್ಮ ಹಾಸ್ಯದ ಪ್ರಕೃತಿ ನಿಮ್ಮಸುತ್ತಮುತ್ತಲಿನ ಪರಿಸರವನ್ನು ಬೆಳಗಿಸುತ್ತದೆ. ಪ್ರೀತಿಗಾಗಿ ವಿಶೇಷ…

  • ಆಧ್ಯಾತ್ಮ

    ದಯವಿಟ್ಟು ಈ ಏಳು ವಸ್ತುಗಳನ್ನು ಶನಿವಾರದಂದು ಮನೆಗೆ ತರಬೇಡಿ!ಶಾಕ್ ಆಗ್ಬೇಡಿ?ಈ ಲೇಖನ ಓದಿ…

    ನಮ್ಮ ಭಾರತೀಯ ಮತ್ತು ಪಾಶ್ಚಾತ್ಯ ಹಸ್ತಸಾಮುದ್ರಿಕರ ಪ್ರಕಾರ ವ್ಯಕ್ತಿಯೊಬ್ಬರ ಜೀವನದ ಮೇಲೆ ಗ್ರಹಗಳ ಗತಿ ಹಾಗೂ ಸ್ಥಾನ ಅಪಾರವಾದ ಪ್ರಭಾವ ಬೀರುತ್ತವೆ. ಇದಕ್ಕೆ ಈ ಗ್ರಹಗಳ ಗುರುತ್ವಶಕ್ತಿ ಹಾಗೂ ಸೂಸುವ ವಿಕಿರಣದ ಅಲೆಗಳೇ ಕಾರಣ. ಈ ವಿಕಿರಣದ ಅಲೆಗಳು ಭಿನ್ನ ಬಣ್ಣಗಳು ಹಾಗೂ ಭಿನ್ನ ಅಂಗಗಳ ಮೇಲೆ ಭಿನ್ನವಾಗಿ ಪ್ರತಿಕ್ರಿಯಿಸುತ್ತವೆ.

  • inspirational

    “ಸರ್ಕಾರದ ವಿರುದ್ಧ ಮತ್ತೆ ಸಿಡಿದೆದ್ದ ಸಾರಿಗೆ ನೌಕರರು”

    ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಸೇರಿ ನಾಲ್ಕು ಸಾರಿಗೆ ನಿಗಮಗಳ ನೌಕರರು ಮತ್ತೆ ಸರ್ಕಾರದ ವಿರುದ್ಧ ಪ್ರತಿಭಟನೆ ತೀವ್ರಗೊಳಿಸಿದ್ದಾರೆ.ಇದೀಗ ಅವರು ಪದಯಾತ್ರೆ + ಉಪವಾಸ ಸತ್ಯಾಗ್ರಹ ಮಾಡಲು ನಿರ್ಧರಿಸಿದ್ದಾರೆ. ಪ್ರತಿಭಟನೆ ಹೇಗೆ ನಡೆಯುತ್ತಿದೆ? ಏಪ್ರಿಲ್ 8ರಿಂದ ಚಿತ್ತದುರ್ಗದಿಂದ ಬೆಂಗಳೂರಿಗೆ ಪದಯಾತ್ರೆ ಆರಂಭ ಏಪ್ರಿಲ್ 21ಕ್ಕೆ ಬೆಂಗಳೂರು ಫ್ರೀಡಂ ಪಾರ್ಕ್‌ನಲ್ಲಿ ಸಮಾವೇಶ ನಂತರ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಯೋಜನೆ ನೌಕರರ ಪ್ರಮುಖ ಬೇಡಿಕೆಗಳು ಸಾರಿಗೆ ನೌಕರರು ಸರ್ಕಾರದ ಮುಂದೆ ಇಟ್ಟಿರುವ ಪ್ರಮುಖ ಬೇಡಿಕೆಗಳು: 38 ತಿಂಗಳ…

  • ಉಪಯುಕ್ತ ಮಾಹಿತಿ

    ನೀವು ಕೀ ಇಲ್ಲದೆಯೇ ಬೀಗವನ್ನು ತೆರೆಯಬಹುದು..!ಹೇಗೆ ಗೊತ್ತಾ..?ತಿಳಿಯಲು ಈ ಲೇಖನ ಓದಿ..

    ಕೆಲುವು ಸಮಯದಲ್ಲಿ ಬೀಗದ ಕೈ ಕಳೆದು ಹೋಗುತ್ತದೆ. ಆದ್ದರಿಂದ ಬೀಗ ತೆರೆಯಲು ಆಗುವುದಿಲ್ಲ. ನಿಮ್ಮೊಂದಿಗೆ ಯಾವತ್ತಾದರೂ ಹೀಗೆ ಆಗಿದೆಯೇ?. ಬೇರೆ ಬೇರೆ ಬೀಗಗಳಿಗೆ ಬೇರೆ ಬೇರೆ ಬೀಗದ ಕೈ ಇರುತ್ತದೆ. ಎಲ್ಲ ಬೀಗವೂ ಅವುಗಳದೇ ಕೈಯಲ್ಲಿ ಮಾತ್ರ ತೆರೆಯುತ್ತದೆ. ಪ್ರತಿಯೊಂದು ಬೀಗ ತೆರೆಯಲು ಒಂದು ಬೀಗದ ಕೈ ಬೇಕಾಗುತ್ತದೆ.

  • ಜ್ಯೋತಿಷ್ಯ

    ದತ್ತಾತ್ರೇಯ ದೇವರನ್ನು ನೆನೆಯುತ್ತ ನಿಮ್ಮ ಇಂದಿನ ರಾಶಿ ಭವಿಷ್ಯವನ್ನು ನೋಡಿರಿ

    ಮೇಷ ರಾಶಿ ಭವಿಷ್ಯ (Wednesday, December 8, 2021) ಮನರಂಜನೆ ಮತ್ತು ಮೋಜಿನ ಒಂದು ದಿನ. ಹಣಕಾಸಿನಲ್ಲಿ ಸುಧಾರಣೆ ನಿಶ್ಚಿತ. ನಿಮ್ಮ ವರ್ತನೆಯಲ್ಲಿ, ವಿಶೇಷವಾಗಿ ನಿಮ್ಮ ಸಂಗಾತಿಯ ಜೊತೆ, ತಾಳ ತಪ್ಪದಿರಲಿ. ಇಲ್ಲವಾದರೆ ಅದು ಮನೆಯಲ್ಲಿನ ಶಾಂತಿಯನ್ನು ಹಾಳಾಗಿಸಬಹುದು. ಯಾರಾದರೂ ನಿಮ್ಮನ್ನು ಶ್ಲಾಘಿಸಬಹುದು. ಯಾರಾದರೂ ಕೆಲಸದಲ್ಲಿ ನಿಮಗೆ ಅಡ್ಡಿ ಮಾಡಬಹುದು – ಆದ್ದರಿಂದ ಏನಾಗುತ್ತದೆ ಎನ್ನುವುದರ ಬಗ್ಗೆ ಗಮನವಿರಲಿ. ಹೆಚ್ಚು ಜನರನ್ನು ಭೇಟಿಯಾದಾಗ ಅಸಮಾಧಾನಗೊಳ್ಳುವಂತಹ ವ್ಯಕ್ತಿತ್ವ ನಿಮ್ಮದು ಮತ್ತು ನಿಮಗಾಗಿ ಸಾಮ್ಯವನ್ನು ತೆಗೆಯಲು ಪ್ರಯತ್ನಿಸುತ್ತೀರಿ. ಈ ಸಂದರ್ಭದಲ್ಲಿ…

  • ರಾಜಕೀಯ

    ಸುಮಲತಾ ಅಂಬರೀಷ್ ರವರಿಂದ ಸಿಎಂ ಕುಮಾರಸ್ವಾಮಿಗೆ ತಿರುಗೇಟು?ಏಕೆ ಗೊತ್ತಾ?

    ಸದ್ಯ ರಾಜ್ಯ ರಾಜಕೀಯದ ಹಾಟ್ ಸ್ಪಾಟ್ ಆಗಿರುವ ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಲೋಕಸಭೆ ಚುನಾವಣೆಯ ರಾಜಕೀಯ ಚಟುವಟಿಕೆಗಳು ಬಿರುಸುಗೊಳ್ಳತೊಡಗಿವೆ. ಸುಮಲತಾ ಅಂಬರೀಷ್ ಮಂಡ್ಯ ಕ್ಷೇತ್ರದಿಂದ ಕಣಕ್ಕಿಳಿಯುವುದಾಗಿ ಈಗಾಗಲೇ ತಿಳಿಸಿದ್ದು, ಬಿರುಸಿನ ಓಡಾಟ ನಡೆಸಿದ್ದಾರೆ. ಪುತ್ರ ನಿಖಿಲ್ ಕುಮಾರ್ ಅವರನ್ನು ಮಂಡ್ಯದಿಂದ ಕಣಕ್ಕಿಳಿಸಲು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಮುಂದಾಗಿದ್ದು ಪೂರ್ವ ತಯಾರಿ ನಡೆಸಿದ್ದಾರೆ. ಈ ಚುನಾವಣೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮತ್ತು ಸುಮಲತಾ ಅಂಬರೀಶ್ ಅವರ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. ಚುನಾವಣೆ ಘೋಷಣೆಗೂ ಮೊದಲೇ ಮಂಡ್ಯದಲ್ಲಿ ರಾಜಕೀಯ…