ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ರಂಗು ರಂಗಾದ ನಮ್ಮ ದೇಶದಲ್ಲಿ ನಾನಾ ವಿಧಗಳ ಜಾತ್ರೆ, ಮೇಳಗಳು ಆಯೋಜನೆಗೊಳ್ಳುವುದು ಸಾಮಾನ್ಯ. ಅಷ್ಟೆ ಏಕೆ, ಪ್ರಾಣಿಗಳಿಗೆಂದು ಸಮರ್ಪಿತವಾದ ಉತ್ಸವಗಳೂ ಕೂಡ ನಮ್ಮಲ್ಲಿ ಕಂಡುಬರುತ್ತವೆ. ಇಂದಿನ ಈ ಲೇಖನದಲ್ಲಿ ಒಂಟೆಗಳ ಉತ್ಸವದ ಕುರಿತು ತಿಳಿಯಿರಿ. ಇದೊಂದು ವಿಶಿಷ್ಟ ಉತ್ಸವವಾಗಿದ್ದು ರಾಜಸ್ಥಾನ ರಾಜ್ಯದಲ್ಲಿ ಈ ಮೇಳವು ಕಂಡುಬರುತ್ತದೆ
ರಾಜಸ್ತಾನಲ್ಲಿ ಪ್ರತಿವರ್ಷ ಪುಷ್ಕರ್ ಮೇಳ ನಡೆಯುತ್ತದೆ. ಈ ಮೇಳವೇ ಒಂಟೆಗಳಿಗಾಗಿ ಸ್ಪರ್ಧೆಯನ್ನು ಇಟ್ಟಿರುವಂತಹದ್ದು. ಈ ಮೇಳವು ನೋಡಲೂ ತುಂಬಾ ಸುಂದರವಾಗಿರುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಈ ಮೇಳದಲ್ಲಿ ಭಾಗವಹಿಸುತ್ತಾರೆ.

ಪುಷ್ಕರ್ ಪಟ್ಟಣವು ಪುಷ್ಕರ್ ಕೆರೆಯ ತಟದಲ್ಲಿ ನೆಲೆಸಿದ್ದು ಈ ಕೆರೆಯ ನೀರು ಮಾನಸ ಸರೋವರದ ನೀರಿನಷ್ಟೆ ಪವಿತ್ರವಾದುದು ಎಂದು ನಂಬಲಾಗಿದೆ. ಆದ್ದರಿಂದಲೆ ಎಷ್ಟೊ ಜನ ಈ ಕ್ಷೇತ್ರವನ್ನು ತೀರ್ಥ ರಾಜ ಅಂದರೆ ತೀರ್ಥ ಕ್ಷೇತ್ರಗಳ ರಾಜನೆಂದೂ ಸಹ ಸಂಭೋದಿಸುತ್ತಾರೆ. ಪ್ರತಿ ವರ್ಷವು ಇಲ್ಲಿನ ಪುಷ್ಕರ್ ಕೆರೆಯ ಪ್ರದೇಶದಲ್ಲಿ ಆಯೋಜನೆಗೊಳ್ಳುವ ಪುಷ್ಕರ್ ಮೇಳವು ಪ್ರವಾಸಿ ಆಕರ್ಷಣೆಯ ಉತ್ಸವವಾಗಿದೆ. ಜಗತ್ತಿನಲ್ಲಿ ದೊಡ್ಡ ಪ್ರಮಾಣದಲ್ಲಿ ನಡೆಯುವ ಒಂಟೆಗಳ ಉತ್ಸವ ಪೈಕಿ ಒಂದಾಗಿರುವ ಪುಷ್ಕರ್ ಒಂಟೆ ಉತ್ಸವವು ಇತ್ತೀಚೆಗೆ ಕೇವಲ ಒಂಟೆಗಳು ಮಾತ್ರವಲ್ಲದೆ ಇತರೆ ವೈವಿಧ್ಯಮಯ ಕಾರ್ಯಕ್ರಮಗಳಿಂದಲೂ ಸಹ ಆಕರ್ಷಕವಾಗುತ್ತಿದೆ. ವಿಶೇಷವಾಗಿ ವಿದೇಶಿ ಪ್ರವಾಸಿಗರ ನೆಚ್ಚಿನ ಉತ್ಸವವಾಗಿ ಈ ಪುಷ್ಕರ್ ಮೇಳವು ಇಂದು ಕಂಗೊಳಿಸುತ್ತಿದೆ.

ವರ್ಷದಲ್ಲಿ ಐದು ದಿನಗಳ ಕಾಲ ನಡೆಯುವ ಈ ಉತ್ಸವದಲ್ಲಿ ಮುಖ್ಯವಾಗಿ ಒಂಟೆಗಳ ವ್ಯಾಪಾರವು ಪ್ರಥಮ ಆಕರ್ಷಣೆಯಾಗಿದೆ. ಕಾಲ ಉರುಳಿದಂತೆ ಈ ಉತ್ಸವವು ಕೇವಲ ಒಂಟೆಗಳಿಗೆ ಸೀಮತವಾಗಿರದೆ ಇತರೆ ಹಲವು ವಿವಿಧ ಸ್ಪರ್ಧೆಗಳು ಪ್ರವರ್ಧಮಾನಕ್ಕೆ ಬಂದಿವೆ. ಉದಾಹರಣೆಯಾಗಿ “ಮಟ್ಕಾ ಫೋಡ್” (ಗಡಿಗೆ ಒಡೆಯುವುದು), ಉದ್ದ ಮೀಸೆಯ ಸ್ಪರ್ಧೆ, ವಧು ಸ್ಪರ್ಧೆ ಹೀಗೆ ಹಲವು ಆಕರ್ಷಕ ಸ್ಪರ್ಧೆಗಳು ಪ್ರವಾಸಿಗರನ್ನು ಆಕರ್ಷಿಸುತ್ತಿವೆ.
ಹಿಂದೂ ಕ್ಯಾಲೆಂಡರಿನ ಅನುಸಾರ ಕಾರ್ತಿಕ ಏಕಾದಶಿಯಿಂದ ಕಾರ್ತಿಕ ಪೂರ್ಣಿಮೆಯವರೆಗೂ ನಡೆಯುವ ಈ ಉತ್ಸವವು ಒಂಟೆಗಳ ಓಟದ ಸ್ಪರ್ಧೆಯ ಮೂಲಕ ಆರಂಭಗೊಳ್ಳುತ್ತದೆ ಪುಷ್ಕರ್ ಗೆ ಭೇಟಿ ನೀಡಿದಾಗ ಸಮ್ದರ್ಶಿಸಬೇಕಾದ ಒಂದು ಪ್ರಮುಖ ದೇವಾಲಯವೆಂದರೆ ಬ್ರಹ್ಮನ ದೇವಾಲಯ.
ಬ್ರಹ್ಮ ದೇವಸ್ಥಾನವು ಪುಷ್ಕರ್ ಸರೋವರದ ದಂಡೆಯ ಮೇಲೆ ಸ್ಥಿತವಾಗಿದೆ. ಪುಷ್ಕರ್ ನಲ್ಲಿರುವ ಬ್ರಹ್ಮ ದೇವಸ್ಥಾನವು, ಬ್ರಹ್ಮ ದೇವರಿಗೆ ಸಮರ್ಪಿತವಾಗಿರುವ ಭಾರತದಲ್ಲಿ ಕಾಣಸಿಗುವ ಕೆಲವೆ ಕೆಲವು ದೇವಾಲಯಗಳಲ್ಲಿ ಒಂದಾಗಿದೆ. ಇನ್ನು ಪುಷ್ಕರ್ ಪಟ್ಟಣವು ಉತ್ತಮವಾದ ರಸ್ತೆ ಸಂಪರ್ಕ ಹೊಂದಿದ್ದು ಇಲ್ಲಿಗೆ ತೆರಳುವುದು ಸುಲಭವಾಗಿದೆ.
ಈ ಮೇಳದ ಆಕರ್ಷಣೆಯೆಂದರೆ ಜನರು ಈ ಮೇಳಕ್ಕೆ ತಮ್ಮ ಒಂಟೆಗಳನ್ನು ಕರೆದುಕೊಂಡು ಬರುತ್ತಾರೆ. ಒಂಟೆಯನ್ನು ಹೊರತುಪಡಿಸಿ ಇತರ ಪ್ರಾಣಿಗಳೂ ಈ ಉತ್ಸವದಲ್ಲಿ ಭಾಗಿಗೊಳ್ಳುತ್ತವೆ. ಈ ಉತ್ಸವದ ಸೌಂದರ್ಯವನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲು ದೇಶಾದ್ಯಂತದ ಫೋಟೋಗ್ರಾಫರ್ಗಳು ಬರುತ್ತಾರೆ. ಈ ಮೇಳದಲ್ಲಿ ಒಂಟೆಗಳಿಗೆ ಸೌಂದರ್ಯ ಸ್ಪರ್ಧೆ ಹಾಗೂ ನೃತ್ಯವನ್ನು ಆಯೋಜಿಸಲಾಗುತ್ತದೆ. ಅದನ್ನು ಹೊರತುಪಡಿಸಿ ಈ ಮೇಳದಲ್ಲಿ ಹಾಡುಗಾರರು, ಜಾದುಗಾರರು ಪಾಲ್ಗೊಳ್ಳುತ್ತಾರೆ.

ದೇಶ ವಿದೇಶಗಳಿಂದ ಜನರು ಈ ಮೇಳವನ್ನು ನೋಡಲು ಬರುತ್ತಾರೆ. ಹಾಗಾಗಿ ಪುಷ್ಕರ್ ಸುತ್ತಮುತ್ತಲಿರುವ ಹೋಟೆಲ್ಗಳೆಲ್ಲಾ ತುಂಬಿರುತ್ತವೆ. ಅದಕ್ಕಾಗಿ ನೀವು ಮುಂಚಿತವಾಗಿಯೇ ರೂಮ್ ಬುಕ್ ಮಾಡಿಕೊಳ್ಳುವುದು ಒಳ್ಳೆಯದು.
ಬ್ರಹ್ಮ ಮಂದಿರ ಪುಷ್ಕರ್ ಒಂದು ಧಾರ್ಮಿಕ ತಾಣವೂ ಹೌದು. ಇಲ್ಲಿ ವಿಶ್ವದ ಏಕೈಕ ಬ್ರಹ್ಮ ಮಂದಿರವಿದೆ. ಜನರು ಇಲ್ಲಿನ ಪುಷ್ಕರ್ ಸರೋವರದಲ್ಲಿ ಸ್ನಾನ ಮಾಡಿ ಬ್ರಹ್ಮ ಮಂದಿರದ ದರ್ಶನ ಪಡೆಯುತ್ತಾರೆ.
ಈ ಪಶುಮೇಳದಲ್ಲಿ ನಿಮಗೆ ರಾಜಸ್ತಾನಿ ವಿಧಿ ವಿಧಾನಗಳು, ಸಂಸ್ಕೃತಿಯನ್ನು ಕಾಣಬಹುದು. ಈ ಮೇಳವನ್ನು ಬಹಳ ಸುಂದರವಾಗಿ ಆಚರಿಸಲಾಗುತ್ತದೆ. ಜನರು ತಮ್ಮ ತಮ್ಮ ಒಂಟೆಗಳನ್ನು ಸುಂದರವಾಗಿ ಶೃಂಗರಿಸುತ್ತಾರೆ.
ಪ್ರಯಾಣಿಕರು ಪುಷ್ಕರ್ ಅನ್ನು ಬಸ್ಸು ಮತ್ತು ಟ್ಯಾಕ್ಸಿ ಮೂಲಕವು ತಲುಪಬಹುದಾಗಿದೆ. ಅಜ್ಮೇರ್ ನ ಮುಖ್ಯ ಬಸ್ಸು ತಂಗುದಾಣವು ಪುಷ್ಕರ್ ನಿಂದ 11 ಕಿ.ಮೀ ದೂರದಲ್ಲಿದೆ. ಈ ಬಸ್ ನಿಲ್ದಾಣದಲ್ಲಿ ಬಹುಸಂಖ್ಯೆಯಲ್ಲಿ ಬಸ್ಸುಗಳಿದ್ದು ರಾಜಸ್ಥಾನದ ಇತರೆ ಭಾಗಗಳು ಮತ್ತು ರಾಜಧಾನಿಯಾದ ನವದೆಹಲಿಗೆ ಸಂಪರ್ಕವನ್ನು ಹೊಂದಿವೆ. ಪ್ರವಾಸಿಗರು ಅಜ್ಮೇರ್, ಜೈಪುರ್, ಜೈಸಲ್ಮೇರ್ ಮತ್ತು ದೆಹಲಿಯಿಂದ ವೊಲ್ವೊ, ಡಿಲಕ್ಸ್ ಬಸ್ಸುಗಳ ಸೇವಯನ್ನೂ ಪಡೆಯಬಹುದು.
ಅಜ್ಮೇರ್ ರೈಲು ನಿಲ್ದಾಣವು ಪುಷ್ಕರ್ ಗೆ ಹತ್ತಿರದಲ್ಲಿರುವ ರೈಲು ನಿಲ್ದಾಣ. ಈ ರೈಲು ನಿಲ್ದಾಣವು ಪ್ರಮುಖ ನಗರಗಳಾದ ಆಗ್ರಾ, ನವದೆಹಲಿ, ಅಹ್ಮದಾಬಾದ್ ಮತ್ತು ಜೋಧಪುರ್ ನೊಂದಿಗೆ ಉತ್ತಮವಾದ ಸಂಪರ್ಕವನ್ನು ಹೊಂದಿದೆ. ಶತಾಬ್ದಿ ಎಕ್ಸಪ್ರೆಸ್ಸ್ ಮತ್ತು ಪಿಂಕ್ ಸಿಟಿ ಎಕ್ಸಪ್ರೆಸ್ಸ್ ರೈಲುಗಳು ಅಜ್ಮೇರ್ ಅನ್ನು ನೇರವಾಗಿ ನವದೆಹಲಿ ಮತ್ತು ಜೈಪುರ್ ಗೆ ಸಂಪರ್ಕ ಕಲ್ಪಿಸುತ್ತವೆ
ಜೈಪುರಿನ ಸಂಗನೇರ್ ವಿಮಾನ ನಿಲ್ದಾಣವು ಪುಷ್ಕರ್ ಗೆ ಹತ್ತಿರದ ವಿಮಾನ ನಿಲ್ದಾಣವಾಗಿದೆ. ಈ ವಿಮಾನ ನಿಲ್ದಾಣವು ಪುಷ್ಕರ್ ಗೆ 138 ಕಿ.ಮೀ ದೂರದಲ್ಲಿದ್ದು ಭಾರತದ ಪ್ರಮುಖ ನಗರಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಇನ್ನು ಸಂಗನೇರ್ ನಿಂದ ಪುಷ್ಕರ್ ಗೆ ತಲುಪಲು ಟ್ಯಾಕ್ಸಿ ಅಥವಾ ಕ್ಯಾಬ್ ಸೇವೆ ಪಡೆಯಬಹುದು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಇತ್ತೀಚೆಗಷ್ಟೇ ಅತ್ಯಾಚಾರ ಪ್ರಕರಣದಲ್ಲಿ ಜೈಲು ಪಾಲಾಗಿರುವ ಸ್ವಯಂಘೋಷಿತ ದೇವಮಾನವ ಗುರ್ಮೀತ್ ರಾಮ್ ರಹಿಮ್ ಸಿಂಗ್ ಜೈಲು ಪಾಲಾಗಿದ್ದಾರೆ.ಇದರ ಬೆನ್ನಲ್ಲೇ ಸ್ವಯಂಘೋಷಿತ ದೇವ ಮಹಿಳೆಯೊಬ್ಬರು ಸಂಕಷ್ಟಕ್ಕೀಡಾಗಿದ್ದಾರೆ.
ಪಂಡಿತ್ ರಾಘವೇಂದ್ರ ಸಾಮ್ವಿ ಗಳು ಶ್ರೀ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಅರ್ಚಕರು ಮಾಂತ್ರಿಕರು 9901077772 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ(ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ವ್ಯಾಪಾರ ಮಕ್ಕಳು) 9901077772 call/ what ಬಿಲ್ವಪತ್ರೆಯಿಂದ ತೋರಣ…
ಬೆಂಗಳೂರು: ಬಿಎಂಟಿಸಿ ಕಿರಿಯ ಸಹಾಯಕ ಕಂ ಡಾಟಾ ಎಂಟ್ರಿ ಆಪರೇಟರ್ ಗಳ ನೇಮಕಾತಿ ಪ್ರಕ್ರಿಯೆಯನ್ನು ರದ್ದುಗೊಳಿಸಲಾಗಿದೆ. 2018 ರ ಮಾರ್ಚ್ 23 ರಂದು 100 ಕಿರಿಯ ಸಹಾಯಕರ ನೇರ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿತ್ತು. ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಲ್ಲಿ 6 ತಿಂಗಳ ಕಂಪ್ಯೂಟರ್ ತರಬೇತಿ ಪಡೆದಿರಬೇಕು. ಪಿಯುಸಿ ವಿದ್ಯಾರ್ಹತೆ ಹೊಂದಿರಬೇಕು ಎಂದು ತಿಳಿಸಲಾಗಿತ್ತು. 26 ಸಾವಿರಕ್ಕೂ ಹೆಚ್ಚು ಮಂದಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ಜೂನ್ 10 ರಂದು ಪರೀಕ್ಷೆ ಬರೆದಿದ್ದರು. ಮೂಲ ದಾಖಲಾತಿಗಳ ಪರಿಶೀಲನೆಗೆ 1:5 ಅನುಪಾತದಲ್ಲಿ…
ಕೇವಲ ತನ್ನ ಬಣ್ಣದ ಕಾರಣ ಹೆಚ್ಚಿನವರ ಅವಗಣನೆಗೆ ಒಳಗಾಗಿರುವ ತರಕಾರಿ ಎಂದರೆ ಬೀಟ್ರೂಟ್. ಹೆಚ್ಚಿನವರು ಕೆಂಪು ಬಣ್ಣವನ್ನು ತಮ್ಮ ಊಟದಲ್ಲಿ ಇಷ್ಟಪಡದಿರುವುದೇ ಇದಕ್ಕೆ ಕಾರಣ. ವಾಸ್ತವವಾಗಿ ಜೀವ ಉಳಿಸುವ ಔಷಧಿ ಕಹಿಯಿರುವಂತೆ ಬಣ್ಣದಲ್ಲಿ ಆಕರ್ಷಕವಲ್ಲದಿದ್ದರೂ ಪೋಷಕಾಂಶಗಳ ಆಗರವಾಗಿರುವ ಬೀಟ್ರೂಟ್ ಅನ್ನು ನಮ್ಮ ಆಹಾರದಲ್ಲಿ ನಿಯಮಿತವಾಗಿ ಸೇರಿಸುವ ಮೂಲಕ ಇದರ ಅದ್ಭುತ ಪ್ರಯೋಜನಗಳನ್ನು ಪಡೆಯಬಹುದು
ಗುಜರಾತ್ನ ಬನಸ್ಕಾಂತ ಜಿಲ್ಲೆಯ ಠಾಕೂರ್ ಸಮುದಾಯದಲ್ಲಿ ಯುವತಿಯರು ಮೊಬೈಲ್ ಪೋನ್ ಬಳಕೆ ಮಾಡದಂತೆ ನಿಷೇಧವೇರಿದೆ. ಇನ್ನು ಬೇರೆ ಜಾತಿ ಯುವಕರನ್ನು ಮದುವೆಯಾದರೇ ಭಾರಿ ಮೊತ್ತದ ದಂಡವನ್ನು ಪಾಲಕರಿಗೆ ವಿಧಿಸಲಾಗುವುದು ಜಿಲ್ಲೆಯ 12 ಗ್ರಾಮಗಳಲ್ಲಿ ಈ ಕಾನೂನು ಜಾರಿಗೆ ಬರಲಿದೆ ಎಂದು ಸಮುದಾಯದ ನಾಯಕರು ಹಾಗೂ ಸ್ಥಳೀಯ ಶಾಸಕರು ತಿಳಿಸಿದ್ದಾರೆ. ಮದುವೆಗೂ ಮುನ್ನ ಯುವತಿಯರು ಮೊಬೈಲ್ ಬಳಸಬಾರದು. ಒಂದೆ ವೇಳೆ ಬಳಸಿದರೆ, ಅದಕ್ಕೆ ಹೆತ್ತವರೇ ಜವಾಬ್ದಾರಿಯಾಗಲಿದ್ದಾರೆ. ಇನ್ನು ಸಮುದಾಯದ ಯುವತಿ ಹಾಗೂ ಯುವಕರು ಬೇರೆ ಜಾತಿಯವರನ್ನು ಪ್ರೀತಿಸಿ ಮದುವೆಯಾದರೆ,…
ಸ್ಯಾಂಡಲ್ವುಡ್ ಕಲಾ ಸಾಮ್ರಾಟ್ ಎಸ್.ನಾರಾಯಣ್ ಅವರು ವಂಚನೆ ಪ್ರಕರಣದ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಬುಧವಾರ ಡಿಸಿಪಿ ರವಿ ಕುಮಾರ್ ಕಚೇರಿಗೆ ಆಗಮಿಸಿದ ಅವರು 1.60 ಕೋಟಿ ರೂ. ವಂಚನೆ ವಿರುದ್ಧ ದೂರು ದಾಖಲಿಸಿದ್ದಾರೆ. ಕನ್ನಡದಲ್ಲಿ ನಿರ್ಮಾಪಕ, ನಿರ್ದೇಶಕ, ನಟರಾಗಿ ಗುರುತಿಸಿಕೊಂಡಿರುವ ಎಸ್. ನಾರಾಯಣ್ ಅವರು ಕಳೆದ ವರ್ಷ ಚಿತ್ರವೊಂದನ್ನು ನಿರ್ಮಿಸಲು ಮುಂದಾಗಿದ್ದರು. ಮೂವರು ನಿರ್ಮಾಪಕರು ಸೇರಿ ನಿರ್ಮಿಸಬೇಕಿದ್ದ ಆ ಸಿನಿಮಾದ ಮುಹೂರ್ತ ಕೂಡ ನೆರವೇರಿಸಲಾಗಿತ್ತು. ಇದೇ ವೇಳೆ ಪಾಲುದಾರರು ಸಂಭಾವನೆ ಬದಲು ನಿವೇಶನ ಖರೀದಿಸುವಂತೆ ಎಸ್.ನಾರಾಯಣ್…