ಜನಪ್ರಿಯ ಮೆಸೆಜಿಂಗ್ ಆಪ್ ವಾಟ್ಸಪ್ ಸದಾ ಒಂದಲ್ಲೊಂದು ವಿಷಯಕ್ಕೆ ಸುದ್ದಿಯಲ್ಲಿರುತ್ತಲೇ ಇರುತ್ತದೆ. ಇತ್ತೀಚಿಗೆ ಬಳಕೆದಾರರ ಖಾತೆಗಳು ಹ್ಯಾಕ್ ಆಗಿ ಭಾರಿ ದೊಡ್ಡ ಸುದ್ದಿ ಆಗಿತ್ತು. ಹಾಗೆಯೇ ತನ್ನ ಅಪ್ಡೇಟ್ ವರ್ಷನ್ಗಳಲ್ಲಿ ನೂತನ ಫೀಚರ್ಗಳನ್ನು ಅಳವಡಿಸುತ್ತಲೇ ಸಾಗಿ ಬಂದಿದ್ದ ಕಂಪನಿ, ಇದೀಗ ಸದ್ಯ ಬಳಕೆಯಲ್ಲಿರುವ ವಾಟ್ಸಪ್ನ ಫೀಚರ್ ಒಂದಕ್ಕೆ ಬ್ರೇಕ್ ಹಾಕಿದ್ದು, ಇದು ಐಓಎಸ್ ಬಳಕೆದಾರರಿಗೆ ಅಚ್ಚರಿ ತಂದಿದೆ.
ಹೌದು, ವಾಟ್ಸಪ್ ಕಂಪನಿಯು IOS ಬೆಂಬಲಿತ ಐಫೋನ್ಗಳಲ್ಲಿ ಪ್ರೊಫೈಲ್ ಫೋಟೊಗಳನ್ನು ಸೇವ್ ಮಾಡಿಕೊಳ್ಳುವ ಆಯ್ಕೆಯನ್ನು ತೆಗೆದು ಹಾಕಿದ್ದು, ಇನ್ಮುಂದೇ IOS ಡಿವೈಸ್ಗಳಲ್ಲಿ ವಾಟ್ಸಪ್ ಬಳಸುವವರಿಗೆ ಇತರರ ಪ್ರೊಫೈಲ್ ಪೋಟೊಗಳನ್ನು ಸೇವ್ ಮಾಡುವ ಅವಕಾಶ ಲಭ್ಯವಾಗುವುದಿಲ್ಲ. ಅಂದಹಾಗೇ ಅಂಡ್ರಾಯ್ಡ್ ಮಾದರಿಯ ಓಎಸ್ ಬಳಕೆದಾರರಿಗೆ ಈ ಆಯ್ಕೆ ಅನ್ವಯವಾಗುವುದಿಲ್ಲ.ವಾಟ್ಸಪ್ ಅಪ್ಡೇಟ್ ವರ್ಷನ್ನಲ್ಲಿ ಪ್ರೊಫೈಲ್ ಫೋಟೊ ಡೌನ್ಲೋಡ್ ಮಾಡಿಕೊಳ್ಳುವ ಅವಕಾಶಕ್ಕೆ ಬ್ರೇಕ್ ಬೀಳಲಿರುವ ಮಾಹಿತಿಯು WABetaInfo ತಾಣದಲ್ಲಿ ತಿಳಿಸಲಾಗಿದೆ. ಹಾಗಾದರೇ ವಾಟ್ಸಪ್ ಐಓಎಸ್ ಬಳಕೆದಾರರಿಗೆ ಮಾತ್ರ ಯಾಕೆ ಪ್ರೊಫೈಲ್ ಸೇವ್ ಮಾಡುವ ಆಯ್ಕೆ ತೆಗೆದು ಹಾಕಿದೆ ಮತ್ತು ಅಂಡ್ರಾಯ್ಡ್ ಓಎಸ್ ಬಳಕೆದಾರರಿಗೆ ಏನಾದ್ರು ಬದಲಾವಣೆಗಳಿವೆಯಾ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.
ಅಪ್ಡೇಟ್ ವರ್ಷನ್ನಲ್ಲಿ ಸೇರ್ಪಡೆ ವಾಟ್ಸಪ್ ಐಓಎಸ್ ವರ್ಷನ್ನಲ್ಲಿ ಅಪ್ಡೇಟ್ ಮಾಡಲಿದ್ದು, ವಾಟ್ಸಪ್ನ ಹೊಸ ಐಓಎಸ್ ವರ್ಷನ್(2.19.60.26) ಬೇಟಾದಲ್ಲಿ ಇತರರ ಪ್ರೊಫೈಲ್ ಪೋಟೊಗಳನ್ನು ಸೇವ್ ಮಾಡುವ ಅವಕಾಶ ಇನ್ಮುಂದೆ ಸ್ಟಾಪ್ ಆಗಲಿದೆ. ವೈಯಕ್ತಿಕ ಖಾತೆಗಳ ಪ್ರೊಫೈಲ್ ಫೋಟೊ ಸೇವ್ ಆಗಲ್ಲ ಆದರೆ ಗ್ರೂಪ್ ಪ್ರೊಫೈಲ್ ಫೋಟೊ ಸೇವ್ ಮಾಡಬಹುದು.ಪ್ರೊಫೈಲ್ ಪೋಟೊ ಸೇವ್ ಇನ್ನಿಲ್ಲ ಈ ಹಿಂದೆ ವಾಟ್ಸಪ್ ಲಿಸ್ಟ್ ನಲ್ಲಿರುವ ಇತರರ ಪ್ರೊಫೈಲ್ ಫೋಟೊವನ್ನು ಸೇವ್ ಮಾಡಬಹುದಾಗಿತ್ತು. ಆದರೆ ಫೇಸ್ಬುಕ್ ಒಡೆತನದ ವಾಟ್ಸಪ್ ಸಂಸ್ಥೆಯು ತನ್ನ ಹೊಸ ಅಪ್ಡೇಟ್ ವರ್ಷನ್ನಲ್ಲಿ ಪ್ರೊಫೈಲ್ ಫೋಟೊ ಸೇವ್ ಮಾಡುವ ಆಯ್ಕೆಯನ್ನು ತೆಗೆದು ಹಾಕಿದ್ದು, ಇದು ಕೇವಲ ಐಓಎಸ್ ಬಳಕೆದಾರರಿಗೆ ಮಾತ್ರ ಅನ್ವಯಿಸಲಿದೆ.
ಗ್ರೂಪ್ ಪ್ರೊಫೈಲ್ ಫೋಟೊ ಸೇವ್ ವಾಟ್ಸಪ್ ಲಿಸ್ಟ್ನಲ್ಲಿರುವ ಇತರರ ವೈಯಕ್ತಿಕ ಪ್ರೊಫೈಲ್ ಫೋಟೊವನ್ನು ಸೇವ್ ಮಾಡುವ ಆಯ್ಕೆ ರದ್ದು ಮಾಡಿದ್ದು, ಆದರೆ ವಾಟ್ಸಪ್ ಲಿಸ್ಟ್ನಲ್ಲಿರುವ ಗ್ರೂಪ್ ಪ್ರೊಫೈಲ್ ಫೋಟೊಗಳನ್ನು ಸೇವ್ ಮಾಡಬಹುದು ಇದಕ್ಕೆ ಯಾವುದೇ ಕಡಿವಾಣ ಹಾಕಿಲ್ಲ. ಹೀಗಾಗಿ ಐಓಎಸ್ ಬಳಕೆದಾರರು ಗ್ರೂಪ್ ಪ್ರೊಫೈಲ್ ಫೋಟೊಗಳನ್ನು ಸೇವ್ ಮಾಡಬಹುದುಅಂಡ್ರಾಯ್ಡ್ಗೆ ಅನ್ವಯ ಇಲ್ಲ ವಾಟ್ಸಪ್ ಪ್ರೊಫೈಲ್ ಪೋಟೊ ಸೇವ್ ಮಾಡುವ ಆಯ್ಕೆಯನ್ನು ಕೇವಲ ಐಓಎಸ್ ಬಳಕೆದಾರರಿಗೆ ಮಾತ್ರ ರದ್ದು ಮಾಡಿದ್ದು, ಅಂಡ್ರಾಯ್ಡ್ ಮಾದರಿಯ ಬಳಕೆದಾರರಿಗೆ ಅನ್ವಯವಾಗುವುದಿಲ್ಲ. ಆಂಡ್ರಾಯ್ಡ್ ಓಎಸ್ನಲ್ಲಿ ಬದಲಾವಣೆ ಇರುವುದಿಲ್ಲ ಮತ್ತು ವೈಯಕ್ತಿಕ ಮತ್ತು ಗ್ರೂಪ್ ಪ್ರೊಫೈಲ್ ಫೋಟೊಗಳನ್ನು ಗ್ಯಾಲರಿಗೆ ಸೇವ್ ಮಾಡಬಹುದು.
ಕಾರಣ ಏನು? ಐಓಎಸ್ ಬಳಕೆದಾರರಿಗೆ ಮಾತ್ರ ವಾಟ್ಸಪ್ನಲ್ಲಿ ಇತರರ ವೈಯಕ್ತಿಕ ಖಾತೆಗಳ ಪ್ರೊಫೈಲ್ ಫೋಟೊ ಸೇವ್ ಮಾಡುವ ಆಯ್ಕೆಗೆ ಕೊಕ್ಕ ನೀಡುವುದಕ್ಕೆ ನಿಖರ ಕಾರಣವೇನು ಎಂಬುದನ್ನು ಅಧಿಕೃತವಾಗಿ ವ್ಯಕ್ತಪಡಿಸಿಲ್ಲ. ಆದರೆ ಐಓಎಸ್ನಲ್ಲಿ ಗ್ರೂಪ್ಗಳ ಪ್ರೊಫೈಲ್ ಫೋಟೊಗಳನ್ನು ಸೇವ್ ಮಾಡಬಹುದಾಗಿದೆ.
ಕೋಲಾರ ನಗರದ ಪ್ರಧಾನ ಅಂಚೆ ಕಚೇರಿಯಲಿ ಶನಿವಾರ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಕೋಲಾರ ಜಿಲ್ಲೆಯ ಟೊಮೇಟೋ ಕುರಿತು ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ಇತ್ತೀಚಿನ ದಿನಗಳಲ್ಲಿ ಟೊಮೇಟೋ ಕೋಲಾರ ಜಿಲ್ಲೆಯ ಪ್ರಧಾನ ತೋಟಗಾರಿಕೆ ಬೆಳೆಯಾಗಿ ಹೊರ ಹೊಮ್ಮಿದೆ. ರೈತರು ವರ್ಷದ ೩೬೫ ದಿನವೂ ಟೊಮೇಟೋವನ್ನು ಬೆಳೆಯುತ್ತಿದ್ದಾರೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯೂ ಏಷ್ಯಾದ ಎರಡನೇ ಅತಿ ದೊಡ್ಡ ಟೊಮೇಟೋ ಮಾರುಕಟ್ಟೆಯಾಗಿ ಪ್ರಸಿದ್ಧಿ ಪಡೆದಿದೆ. ಈ ಹಿನ್ನೆಲೆಯಲ್ಲಿ ಟೊಮೇಟೋ ಬೆಳೆಯನ್ನು ಕೋಲಾರದ ಒಂದು ಜಿಲ್ಲೆ ಒಂದು…
ಪ್ರತಿಯೊಂದು ಕೆಲಸ ಯಶಸ್ವಿಯಾಗಬೇಕೆಂದ್ರೆ ಶ್ರಮದ ಜೊತೆ ಅದೃಷ್ಟವಿರಬೇಕು. ಅದೃಷ್ಟ ಕೈಕೊಟ್ಟರೆ ಯಾವುದೇ ಕೆಲಸ ಯಶಸ್ಸು ಕಾಣುವುದಿಲ್ಲ. ದಿನವಿಡಿ ದುಡಿದ್ರೂ ಪರ್ಸ್ ನಲ್ಲಿ ಹಣ ನಿಲ್ಲುವುದಿಲ್ಲ. ಸದಾ ಹಣ ನಿಮ್ಮ ಬಳಿ ಇರಬೇಕು, ರಾತ್ರೋರಾತ್ರಿ ಶ್ರೀಮಂತರಾಗಬೇಕೆಂದ್ರೆ ಈ ಸುಲಭ ಉಪಾಯ ಅನುಸರಿಸಿ. ಏಲಕ್ಕಿಯನ್ನು ಸಾಮಾನ್ಯವಾಗಿ ಅಡುಗೆಗೆ ಬಳಸ್ತಾರೆ. ವಾಸ್ತು ಶಾಸ್ತ್ರದಲ್ಲೂ ಏಲಕ್ಕಿಗೆ ಮಹತ್ವದ ಸ್ಥಾನ ನೀಡಲಾಗಿದೆ. ಸದಾ ಆರ್ಥಿಕ ಸಂಕಷ್ಟದಿಂದ ಬಳಲುವ ವ್ಯಕ್ತಿ ಪರ್ಸ್ ನಲ್ಲಿ ಐದರಿಂದ ಏಳು ಏಲಕ್ಕಿಯನ್ನು ಇಟ್ಟುಕೊಳ್ಳಬೇಕು. ಏಲಕ್ಕಿ ಪರ್ಸ್ ನಲ್ಲಿದ್ದರೆ ಹಣದ ಅಭಾವ…
ಇನ್ನು ಮುಂದೆ ಮೇಘಾಲಯದಲ್ಲಿ ಒಂದು ದಿನಕ್ಕಿಂತ ಹೆಚ್ಚು ದಿನ ಉಳಿಯುವುದಾದರೆ ಮೇಘಾಲಯಕ್ಕೆ ಬರುವ ಮುನ್ನ ನೋಂದಾಯಿಸಿಕೊಳ್ಳಬೇಕು. ಅಲ್ಲಿನ ಬುಡಕಟ್ಟು ಜನಾಂಗದವರ ಸುರಕ್ಷತೆ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಶುಕ್ರವಾರ ನಡೆದ ಮೇಘಾಲಯ ಸಚಿವ ಸಂಪುಟ ಸಭೆಯಲ್ಲಿ ಅಮೆಂಡ್ಮೆಂಟ್ ಗೆ ಒಪ್ಪಿಗೆ ಸಿಕ್ಕಿದೆ. 2016ರ ಮೇಘಾಲಯ ರೆಸಿಡೆಂಟ್ ಕಾಯ್ದೆ ಪ್ರಕಾರ ಈ ವರದಿಯನ್ನು ಮನ್ನಿಸಲಾಗಿದೆ. ತಕ್ಷಣದಿಂದ ಕಾನೂನು ಜಾರಿಯಾಗುವಂತೆ ಆದೇಶಿಸಲಾಗಿದೆ ಎಂದು ಉಪಮುಖ್ಯಮಂತ್ರಿ ತಿಳಿಸಿದ್ದಾರೆ. ಒಂದೊಮ್ಮೆ 24 ಗಂಟೆಗಿಂತ ಹೆಚ್ಚು ಇರುವುದಾದರೆ ಸರ್ಕಾರಕ್ಕೆ ದಾಖಲೆಗಳನ್ನು ಸಲ್ಲಿಸಬೇಕು. ತಕ್ಷಣದಿಂದ ಜಾರಿಗೆ…
ಅರೆ ತಲೆನೋವು ಬಂತು ಎಂದರೆ ಮಾನಸಿಕವಾಗಿ ತುಂಬ ಹಿಂಸೆ ಅನುಭವಿಸುತ್ತೇವೆ. ಈ ಅರೆ ತಲೆನೋವು ಸಹಿಸಿಕೊಳ್ಳಲಾಗದಷ್ಟು ನೋವು ಕೊಡುತ್ತದೆ. ಇಂತಹ ಅರೆತಲೆನೋವಿಗೆ ಮನೆಯಲ್ಲಿ ಪರಿಹರಿಸುವ ಕೆಲವೊಂದು ಟಿಪ್ಸ್ ಗಳನ್ನು ಇಲ್ಲಿ ಇದೆ.
ಈ ಸಾಮಾಜಿಕ ಯುಗದಲ್ಲಿ PAN CARD ಬಳಸದೆ ಇರುವ ವ್ಯಕ್ತಿಯನ್ನು ಹುಡುಕಲು ಕಷ್ಟ ಏಕೆಂದರೆ ಪ್ರತಿಯೊಂದು ಕೆಲಸಕ್ಕೂ ಮತ್ತು ಬ್ಯಾಂಕಿಂಗ್ ಸಂಬಂಧಿತ ವಿವಿಧ ಸೇವೆ, ಸೌಲಭ್ಯಗಳನ್ನು ಪಡೆಯಲು ಅಗತ್ಯವಾಗಿ ಬೇಕಿರುವ Permanent Account Number (PAN) ಕಾರ್ಡ್ ಪಡೆಯುವುದು ಈಗ ಸುಲಭವಾಗಲಿದೆ. ಆದಾಯ ತೆರಿಗೆ ಇಲಾಖೆಯು ಪ್ರಧಾನಿ ಮೋದಿ ಅವರ ಡಿಜಿಟಲ್ ಇಂಡಿಯಾ ಕಲ್ಪನೆಯನ್ನು ಹೆಚ್ಚೆಚ್ಚು ಅನುಷ್ಠಾನಗೊಳಿಸಲು ಡಿಜಿಟಲೀಕರಣಕ್ಕೆ ಒತ್ತು ನೀಡುತ್ತಿದೆ. ಹೀಗಾಗಿ, ಇನ್ಮುಂದೆ ಕೆಲವೇ ನಿಮಿಷಗಳಲ್ಲಿ ಪ್ಯಾನ್ ಕಾರ್ಡ್ ಗಳನ್ನು ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ. ಉಚಿತವಾಗಿ ಇ-ಪ್ಯಾನ್…
ಆಧಾರ್ ಕಾರ್ಡ್ ಎಂಬ ಸಾರ್ವತ್ರಿಕ ಗುರುತಿನ ಚೀಟಿ, ಒಂದೆಡೆ ಅಕ್ರಮ ನುಸುಳುಕೋರರನ್ನು ತಡೆಗಟ್ಟಲು, ಸರ್ಕಾರದ ಯೋಜನೆಗಳು ನೈಜ ಫಲಾನುಭವಿಗಳಿಗೆ ಸಿಗುವಂತೆ ಮಾಡಲು ಸಹಕಾರಿಯಾಗುತ್ತಿರುವ ಹೊತ್ತಲ್ಲೇ, ಇನ್ನೊಂದೆಡೆ ಹಲವು ಬಡವರ ಪಾಲಿಗೆ ಆಧಾರ್ ಕಾರ್ಡ್ ಒಂದು ಶಾಪವಾಗಿ ಪರಿಣಮಿಸಿದೆ!
ಹೊಳೆ ನರಸೀಪುರ ಪಟ್ಟಣದ ಪ್ರೈಂ ಕ್ಲಬ್ ಮತ್ತು ಗೆಳೆಯರ ಬಳಗ ಈ ಶ್ಲಾಘನೀಯ ಕೆಲಸವನ್ನು ಮಾಡಿದೆ. ತಮ್ಮ ತಮ್ಮ ವಾಟ್ಸಪ್ ಗ್ರೂಪ್ನ ಸ್ನೇಹಿತರೆಲ್ಲ ಒಂದಾಗಿ ನೆರೆ ಪೀಡಿತ ಪ್ರದೇಶಗಳಾದ ಹಾವೇರಿಯ ಕೂಡಲ ಗ್ರಾಮ ಮತ್ತು ಬೆಳಗಾವಿಯ ರಾಮದುರ್ಗ ಸರ್ಕಾರಿ ಶಾಲೆಗಳ ಮಕ್ಕಳಿಗೆ ಸ್ಕೂಲ್ ಬ್ಯಾಗ್ಗಳನ್ನು ವಿತರಿಸಿದ್ದಾರೆ. ಎರಡು ಜಿಲ್ಲೆಗಳ ಒಟ್ಟು ಮೂರು ಸರ್ಕಾರಿ ಶಾಲೆಗಳ 350ಕ್ಕೂ ಹೆಚ್ಚು ಮಕ್ಕಳಿಗೆ ಶಾಲಾ ಬ್ಯಾಗ್ ಮತ್ತು ಪಠ್ಯ ಪುಸ್ತಕಗಳನ್ನು ವಿತರಿಸಿದ್ದಾರೆ. ಸ್ನೇಹಿತರೆಲ್ಲ ತಮ್ಮ ಶಕ್ತಿಯಾನುಸಾರ ಹಣ ಸಂಗ್ರಹಿಸಿ ನಂತರ ಹೋಲ್…