ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕೆಲವು ಸಮಯಗಳ ಹಿಂದೆ ರಾತ್ರಿ ಸುಮಾರು 10 ಘಂಟೆ ಸುಮಾರಿಗೆ ನೈಟ್ ಡ್ಯೂಟಿ ಮಾಡುವ ಸಲುವಾಗಿ ಟ್ರಾಫಿಕ್ ಸಬ್ ಇನ್ಸ್ಪೆಕ್ಟರ್ ನಾಗಮಲ್ಲು ಅವರು ಸಿಂಗಲ್ ಬಳಿ ಬಂದರು, ಇನ್ನು ಈ ಸಮಯದಲ್ಲಿ 11 ವರ್ಷದ ಒಬ್ಬ ಹುಡುಗ ಅಳುತ್ತ ರೋಡ ನಲ್ಲಿ ತಿರುಗಾಡುತ್ತಿದ್ದ. ಹಾಗಾದರೆ ಆ ಹುಡುಗ ಅಲ್ಲಿ ಯಾಕೆ ತಿರುಗಾಡುತ್ತಿದ್ದ ಮತ್ತು ಆತನಿಗೆ ಆದ ತೊಂದರೆ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಇದನ್ನ ನೋಡಿದ ಪೊಲೀಸ್ ಅಧಿಕಾರಿ ನಾಗಮಲ್ಲು ಆ ಹುಡುಗನ ಬಳಿ ಹೋಗಿ ಏನಾಯಿತು ಎಂದು ಕೇಳಿದರು, ಇನ್ನು ಅದಕ್ಕೆ ಉತ್ತರಿಸಿದ ಆ ಹುಡುಗ ತನ್ನ ಅಜ್ಜಿ ಇಲ್ಲಿ ಹೂವಿನ ವ್ಯಾಪಾರವನ್ನ ಮಾಡುತ್ತಿದ್ದು ನಾವು ಅವರನ್ನ ನೋಡಲು ಬಂದೆ, ಆದರೆ ಅವರು ಯಾರು ಇಲ್ಲಿ ಕಾಣಿಸುತ್ತಿಲ್ಲ ಮತ್ತು ಅವರು ಎಲ್ಲೋ ಹೋಗಿದ್ದಾರೆ ಎಂದು ಹೇಳಿದನು ಆ ಬಾಲಕ.

ಆ ಬಾಲಕನ ಬಳಿ ನಿನ್ನ ಹೆಸರು ಏನು ಎಂದು ಕೇಳಿದಾಗ ಆ ಬಾಲಕ ನನ್ನ ಹೆಸರು ನಾನಿ ಮತ್ತು ನಾನು ವಿನಕೊಂಡ ಅನಾಥ ಆಶ್ರಮದಲ್ಲಿ ಆರನೇ ತರಗತಿ ಓದುತ್ತಿದ್ದೇನೆ, ನನ್ನ ತಾಯಿ ಬಾವಿಯಲ್ಲಿ ಬಿದ್ದು ಸತ್ತು ಹೋದರು ಮತ್ತು ನನ್ನ ತಂದೆ ಕುಡಿತದಿಂದ ಪ್ರಾಣವನ್ನ ಬಿಟ್ಟರು ಎಂದು ಹೇಳಿದ ಆ ಹುಡುಗ ನಾನು ಇಲ್ಲಿ ಅಜ್ಜಿಯನ್ನ ನೋಡಲು ಬಂದೆ ಆದರೆ ಅವರು ಇಲ್ಲಿ ಕಾಣಿಸುತ್ತಿಲ್ಲ ಮತ್ತು ಈಗ ಊರಿಗೆ ವಾಪಾಸ್ ಹೋಗಲು ಎಲ್ಲಿ ಬಸ್ ಹತ್ತಬೇಕು ಎಂದು ತಿಳಿಯುತ್ತಿಲ್ಲ ಎಂದು ಹೇಳಿ ಅಳಲು ಶುರು ಮಾಡಿದ. ಇನ್ನು ಇದನ್ನ ಕೇಳಿದ ಪೊಲೀಸ್ ಅಧಿಕಾರಿ ಭಯಪಡಬೇಡ ನಾನು ನಿನ್ನನ್ನ ಬಸ್ ಹತ್ತಿಸುತ್ತೇನೆ ಮತ್ತು ಈ ಹಣವನ್ನ ನಿನ್ನ ಬಳಿ ಇಟ್ಟುಕೋ ಎಂದು ಒಂದಷ್ಟು ಹಣವನ್ನ ಆ ಹುಡುಗನಿಗೆ ಕೊಟ್ಟರು.

ನಾಗಮಲ್ಲು ಅವರ ಹಣವನ್ನ ಅತೆಗೆದುಕೊಳ್ಳದ ಆ ಹುಡುಗ ನನ್ನ ಬಳಿ 320 ರೂಪಾಯಿ ಹಣ ಇದೆ ಮತ್ತು ನಾನು ಊರಿಗೆ ಹೋಗಲು ಈ ಹಣ ಸಾಕು ನಿನ್ನ ಹಣ ನನಗೆ ಬೇಡ ಅಂದನು, ಬೆಳಿಗ್ಗೆ ಇಂದ ಏನಾದರು ತಿಂದಿದ್ದೀಯಾ ಎಂದು ಕೇಳಿದಾಗ ಇಲ್ಲ ಸರ್ ಏನು ತಿಂದಿಲ್ಲ ಮತ್ತು ಏನಾದರು ತಿಂದರೆ ನನ್ನ ಕೈಯಲ್ಲಿ ಇರುವ ಹಣ ನನಗೆ ಊರಿಗೆ ಹಣ ಸಾಕಾಗಲ್ಲ ಎಂದು ಎಂದು ಹೇಳಿದನು ಆ ಹುಡುಗ. ಆ ಹುಡುಗನ ನಿಯತ್ತನ್ನ ನೋಡಿ ನಾಗಮಲ್ಲು ಅವರಿಗೆ ತುಂಬಾ ಸಂತೋಷವಾಯಿತು, ತಕ್ಷಣ ಆ ಹುಡುಗನನ್ನ ಪಕ್ಕದ ಹೋಟೆಲ್ ಗೆ ಕರೆದುಕೊಂಡ ಹೋದ ನಾಗಮಲ್ಲು ಹೊಟ್ಟೆ ತುಂಬಾ ಊಟ ಕೊಡಿಸಿ ಆತನಿಗೆ 2000 ಕೊಟ್ಟು ಬಟ್ಟೆ ಪುಸ್ತಕವನ್ನ ಕೊಂಡುಕೊಳ್ಳುವಂತೆ ಹೇಳಿದರು.

ಇನ್ನು ತನ್ನ ಮೊಬೈಲ್ ನಂಬರ್ ನ್ನ ಆ ಹುಡುಗನಿಗೆ ಕೊಟ್ಟ ಪೊಲೀಸ್ ಅಧಿಕಾರಿ ನಾಗಮಲ್ಲು ಅವರು ನಿನಗೆ ಏನಾದರು ಸಹಾಯ ಬೇಕು ಅಂದರೆ ನನಗೆ ಕರೆ ಮಾಡು ಎಂದು ಹೇಳಿದರು. ನಾಗಮಲ್ಲು ಅವರು ತನ್ನನ್ನ ನೋಡಿಕೊಂಡ ರೀತಿಯನ್ನ ನೋಡಿ ಆ ಹುಡುಗನ ಕಣ್ಣಲ್ಲಿ ನೀರು ಬಂತು, ತನ್ನ ವಾಹನದಲ್ಲಿ ಆ ಹುಡುಗನನ್ನ ಬಸ್ ಸ್ಟಾಂಡ್ ಗೆ ಕರೆದುಕೊಂಡು ಆ ಹುಡುಗನನ್ನ ಬಸ್ ಹರಿಸಿದರು ಪೊಲೀಸ್ ಅಧಿಕಾರಿ ನಾಗಮಲ್ಲು. ಹುಡುಗನನ್ನ ಬಸ್ ಹತ್ತಿಸಿದಾಗ ಆತ ನನಗೆ ಹೇಳಿದ ಟಾಟಾ ವಿಧಾನ ನನಗೆ ಇನ್ನು ಕಾಡುತ್ತಿದೆ ಎಂದು ನಾಗಮಲ್ಲು ಅವರು ಹೇಳಿದ್ದಾರೆ, ಸ್ನೇಹಿತರೆ ಆ ಹುಡುಗನ ನಿಯತ್ತು ಮತ್ತು ಪೊಲೀಸ್ ಅಧಿಕಾರಿ ನಾಗಮಲ್ಲು ಅವರ ಹೃದಯದ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಐಷಾರಾಮಿ ಜೀವನ ನಡೆಸ್ತಿದ್ದ ಟೆಕ್ಕಿಗಳಿಗೆ ಇದೀಗ ಹೆಚ್ಆರ್ ಕಡೆಯಿಂದ ಬರ್ತಿರೋ ಪಿಂಕ್ ಸ್ಲಿಪ್ ಆತಂಕಕ್ಕೀಡು ಮಾಡಿದೆ. ಯಾವಾಗ ಯಾರಿಗೆ ಪಿಂಕ್ ಸ್ಲಿಪ್ ಬರುತ್ತೋ ಅನ್ನೋಟೆನ್ಶನ್ ಶುರುವಾಗಿದೆ. ದೊಡ್ಡ ದೊಡ್ಡ ಕಂಪನಿಗಳಲ್ಲೂ ಇದೇ ಆತಂಕ ಶುರುವಾಗಿದ್ದು, ಆಯಾಗಿ ನಿದ್ದೆ ಮಾಡ್ತಿದ್ದ ಟೆಕ್ಕಿಗಳು ಈಗ ನಿದ್ದೆಗೆಡುವಂತಾಗಿದೆ. ಆರ್ಥಿಕ ಸಂಕಷ್ಟ ಅನ್ನೋದು ಐಟಿ ಕಂಪನಿಗಳಿಗೆ ತುಂಬಾ ಹೊಡೆತ ಕೊಟ್ಟಿದೆ. ಕಾಸ್ಟ್ಕಟಿಂಗ್ ಹೆಸರಲ್ಲಿ ಕೆಲಸಕ್ಕೆ ಕತ್ತರಿ ಹಾಕ್ತಿವೆ. ಇದರಿಂದ ಸಾವಿರಾರು ಉದ್ಯೋಗಿಗಳಿಗೆ ಅಭದ್ರತೆ ಎದುರಾಗಿದೆ. ಯಾವುದೇ ರೀತಿಯ ಕನಿಕರ ತೋರಿಸದೆ ಪಿಂಕ್ಸ್ಲಿಪ್ ಕೈಗಿಟ್ಟು…
ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದರಿಂದ ಉದ್ಯಮಿ ಸಿದ್ಧಾರ್ಥ್ ಅವರು ಮಾನಸಿಕವಾಗಿ ಕುಗ್ಗಿದ್ದರು ಎಂದು ಶೃಂಗೇರಿ ಶಾಸಕ ರಾಜೇಗೌಡ ಹೇಳಿದ್ದಾರೆ. ಶಾಸಕರು ಕಾಫಿ ಡೇ ಎಂಡಿ ಸಿದ್ಧಾರ್ಥ್ ಅವರ ಆಪ್ತ ಸ್ನೇಹಿತ ಹಾಗೂ ಹಿತೈಷಿಯಾಗಿದ್ದಾರೆ. ಸಿದ್ಧಾರ್ಥ್ ಅವರು ನಾಪತ್ತೆಯಾದ ಸ್ಥಳಕ್ಕೆ ಭೇಟಿ ನೀಡಿದ ಶಾಸಕರು ಕಾರ್ಯಾಚರಣೆ ವೀಕ್ಷಿಸಿದರು. ಈ ವೇಳೆ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಶಾಸಕರು, ಸಿದ್ಧಾರ್ಥ್ ಅವರು ಲಕ್ಷಾಂತರ ಜನರಿಗೆ ಆಸರೆ, ಬದುಕು ಕೊಟ್ಟಿದ್ದಾರೆ. ಅವರು ಯಾವುದಕ್ಕೂ ಹೆದರಿದವರೇ ಅಲ್ಲ ಎಂದು ಕಣ್ಣೀರು…
ನಲ್ವತ್ತು ದಿನಗಳ ಹಸುಗೂಸನ್ನು ಹೃದಯದ ಶಸ್ತ್ರಚಿಕಿತ್ಸೆಗಾಗಿ ಮಂಗಳೂರಿನಿಂದ ಬೆಂಗಳೂರಿಗೆ ಝೀರೋ ಟ್ರಾಫಿಕ್ ನಲ್ಲಿ ಅಂಬುಲೆನ್ಸ್ ನಲ್ಲಿ ರವಾನಿಸಲಾಗಿದೆ. ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿದ್ದ ಮಗುವಿಗೆ ತುರ್ತಾಗಿ ಶಸ್ತ್ರಚಿಕಿತ್ಸೆ ಆಗಬೇಕಿತ್ತು. ಅದಕ್ಕಾಗಿ ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಗೆ ಮಗುವನ್ನು ರವಾನಿಸಲಾಗಿದೆ. ಚಾಲಕ ಹನೀಫ್ ಅವರು ಮಂಗಳೂರಿನಿಂದ ಆಂಬುಲೆನ್ಸ್ ಮೂಲಕ ಝೀರೋ ಟ್ರಾಫಿಕ್ ವ್ಯವಸ್ಥೆಯಲ್ಲಿ ಮಗುವನ್ನು ಕೇವಲ ಆರು ಗಂಟೆಯಲ್ಲಿ ಬೆಂಗಳೂರು ತಲುಪಿಸಿದ್ದಾರೆ. ಬೆಳ್ತಂಗಡಿ ತಾಲೂಕಿನ ಉಜಿರೆ ಮೂಲದ ಸೈಫುಲ್ ಅಜ್ಮಾನ್ ಎನ್ನುವ ಈ ಮಗುವಿಗೆ…
ಪ್ರಾಣಿಶಾಸ್ತ್ರದ ಪ್ರಕಾರ ಆನೆ ಸಸ್ತನಿಗಳ ವರ್ಗದಲ್ಲಿ ಪ್ರೊಬೊಸಿಡಿಯ ಉಪವರ್ಗದ ಒಂದು ಕುಟುಂಬ. ಹಿಂದೆ ಇವುಗಳನ್ನು ಪಾಚಿಡರ್ಮಾಟಾ ಎಂಬ ದಪ್ಪಚರ್ಮದ ಪ್ರಾಣಿಗಳ ಉಪವರ್ಗದಲ್ಲಿರಿಸಲಾಗಿತ್ತು. ಇಂದು 2 ತಳಿಗಳ ಆನೆಗಳು ಭೂಮಿಯ ಮೇಲೆ ಇವೆ. ಅವೆಂದರೆ: , ಆಫ್ರಿಕದ ಅರಣ್ಯದ ಆನೆ ಮತ್ತು ಏಷ್ಯಾದ ಆನೆ. ಇವುಗಳಲ್ಲಿ ಮೊದಲೆರಡನ್ನು ಒಟ್ಟಾಗಿ ಆಫ್ರಿಕನ್ ಆನೆ ಎಂದು ಸಹ ಕರೆಯುವುದು ವಾಡಿಕೆ. ಏಷ್ಯಾದ ಆನೆಯನ್ನು ಭಾರತದ ಆನೆ ಎಂದು ಸಹ ಕರೆಯಲಾಗುತ್ತದೆ. ಸುಮಾರು ೧೦,೦೦೦ ವರ್ಷಗಳ ಹಿಂದೆ ಕೊನೆಗೊಂಡ ಹಿಮಯುಗದೊಂದಿಗೆ ಉಳಿದ ತಳಿಗಳ ಆನೆಗಳು ಭೂಮಿಯಿಂದ ಶಾಶ್ವತವಾಗಿ ಮರೆಯಾದುವು. ಇವುಗಳಲ್ಲಿ ಮ್ಯಾಮತ್ (ದೈತ್ಯ ಆನೆ) ಬಲು…
ವಿದ್ಯುತ್ ಉತ್ಪಾದನೆಗೆ ಹಲವು ಆಯ್ಕೆಗಳಿವೆ. ನೀರು, ಗಾಳಿ, ಬೆಳಕು ಹೀಗೆ ವಿವಿಧ ಮಾದರಿಯಲ್ಲಿ ವಿದ್ಯುತ್ ಉತ್ಪಾದನೆಯ ಹೊರತಾಗಿಯೂ ವಿದ್ಯುತ್ ಗಳಿಸಲು ಜನರು ವಿವಿಧ ಆಯ್ಕೆಗಳನ್ನು ಸಂಶೋಧಿಸುತ್ತಿದ್ದಾರೆ.
ಹಸಿ ತರಕಾರಿಗಳ ಸೇವನೆಯಿಂದ ನಿಮ್ಮ ದೇಹಕ್ಕೆ ಬೇಕಾದ ಆರೋಗ್ಯ ಶಕ್ತಿ ದೊರೆಯುತ್ತದೆ ಎಂಬುದು ವೈದ್ಯಲೋಕ ತಿಳಿಸಿರುವ ಮಾಹಿತಿಯಾಗಿದೆ. ತರಕಾರಿಗಳನ್ನು ಬೇಯಿಸಿದಾಗ ಅದಲ್ಲಿರುವ ಪೋಷಕಾಂಶಗಳು ನಷ್ಟವಾಗುತ್ತವೆ ಎಂಬುದು ಸಂಶೋಧನೆಗಳಿಂದ ತಿಳಿದು ಬಂದಿದ್ದು ಆದಷ್ಟು ತರಕಾರಿಗಳನ್ನು ಹಸಿಹಸಿಯಾಗಿಯೇ ನಿಮ್ಮ ನಿತ್ಯದ ಆಹಾರ ಕ್ರಮದಲ್ಲಿ ಬಳಸುವುದರಿಂದ ಲಾಭ ನಿಮಗೇ ಉಂಟಾಗಲಿದೆ.