inspirational, ಸುದ್ದಿ

ದಾನ ಶೂರ ವೀರ ಕರ್ಣ ಸಾಯುವ ಮುನ್ನ ಕೊನೆಯ ಆಸೆಯನ್ನು ಕೇಳಿದಾಗ ಕೃಷ್ಣನೇ ಬೆಚ್ಚಿಬೆರಗಾದ, ಅಲ್ಲಿ ಏನು ನಡೆಯಿತು ಗೊತ್ತಾ?

1008


ಅವನು ಕರ್ಣ. ಆತ ಕುಂತಿಯ ಮೊದಲ ಮಗ. ಪಾಂಡವರ ಹಿರಿಯಣ್ಣ. ಪರಶುರಾಮರ ಮೆಚ್ಚಿನ ಶಿಷ್ಯ. ದುರ್ಯೋಧನನ ಆಪ್ತಮಿತ್ರ. ಅರ್ಜುನನ ಪರಮಶತ್ರು. ಅವನು, ಭೀಷ್ಮರ ಕಣ್ಣಲ್ಲಿ ಸಿಡಿಮಿಡಿ ಉಂಟುಮಾಡುವ ಆಸಾಮಿ. ಭೀಮನ ಪಾಲಿಗೊಂದು ಅಸೂಯೆ. ಕರ್ಣನೆಂದರೆ ಅಷ್ಟೇ ಅಲ್ಲ. ಆತ, ದ್ರೌಪದಿಯಂಥ ದ್ರೌಪದಿಯ ಎದೆಯಲ್ಲೂ ಆಸೆಯ ತರಂಗ ಎಬ್ಬಿಸಿದ ಸುಂದರಾಂಗ. ಕೊಡುಗೈ ದೊರೆ. ಅಂಗರಾಜ, ಹುಟ್ಟಿನಿಂದ ಕ್ಷತ್ರಿಯನಾಗಿದ್ದರೂ, ಎಲ್ಲರಿಂದಲೂ ಸೂತಪುತ್ರ ಎಂದು ಕರೆಸಿಕೊಂಡ ನತದೃಷ್ಟ ಮತ್ತು ಮಹಾಭಾರತದ ದುರಂತ ನಾಯಕ! ಕುಂತಿ-ಸೂರ್ಯದೇವನ ಸಮಾಗಮದ ಕಾರಣಕ್ಕೆ ಹುಟ್ಟಿದವನು ಕರ್ಣ. ಮಗನ ಮೇಲಿನ ಮಮತೆಯಿಂದ ಅವನು ಕವಚ ಕುಂಡಲಗಳೊಂದಿಗೇ ಜನಿಸುವಂತೆ ನೋಡಿಕೊಂಡ ಸೂರ್ಯದೇವ. 
ಮುಂದೆ, ಅಪವಾದಕ್ಕೆ ಹೆದರಿದ ಕುಂತಿ, ಆಗ ತಾನೆ ಹುಟ್ಟಿದ ಮಗುವನ್ನು ನದಿಯಲ್ಲಿ ತೇಲಿ ಬಿಡುವುದು, ಹಾಗೆ ತೇಲಿ ಹೋದ ಮಗು ರಾಧಾ-ಅದಿರಥ ಎಂಬ ಬೆಸ್ತ ದಂಪತಿಗೆ ಸಿಗುವುದು; ಅವರಿಬ್ಬರೂ ಈತನನ್ನು ಸಾಕುವುದು ಮತ್ತು ಅದೇ ಕಾರಣಕ್ಕೆ ಸೂತಪುತ್ರ ಎಂಬ ಹೀಯಾಳಿಕೆಯಂಥ ಮಾತಿಗೆ ಕರ್ಣ ಪದೇಪದೇ ಈಡಾಗುವುದು. ಈ ಕಥೆ ಎಲ್ಲರಿಗೂ ಗೊತ್ತು. ಅಷ್ಟೇ ಅಲ್ಲ, ಬಿಲ್ವಿದ್ಯೆ ಕಲಿಯಬೇಕೆಂಬ ಮಹದಾಸೆಯಿಂದ ತಾನು ಬ್ರಾಹ್ಮಣ ಕುಮಾರ ಎಂದು ಹೇಳಿಕೊಂಡು ಪರಶುರಾಮರ ಬಳಿ ಹೋಗುವುದು, ವಿದ್ಯೆ ಕಲಿಯುವುದು, ಅವರ ಮೆಚ್ಚಿನ ಶಿಷ್ಯನಾಗುವುದು ಹಾಗೂ ಕಡೆಗೊಮ್ಮೆ ಅನಿವಾರ್ಯ ಸಂದರ್ಭದಲ್ಲಿ ಬಾಣ ಪ್ರಯೋಗದ ಮಂತ್ರವೇ ನೆನಪಿಗೆ ಬಾರದಿರಲಿ’ ಎಂಬ ಶಾಪಕ್ಕೆ ಗುರಿಯಾಗುವುದು.

ಕೊನೆಗೆ ಮಹಾಭಾರತ ಯುದ್ಧದ ಸಮಯದಲ್ಲಿ ಪರಶುರಾಮನ ಶಾಪದ ಕಾರಣ ತನ್ನ ವಿದ್ಯೆ ಮರೆತುಹೋಗಿ ರಥ ಮಣ್ಣಿನಲ್ಲಿ ಹೂತಿದ್ದಾಗ ಅರ್ಜುನನ ಬಾಣದಿಂದ ಸಾಯುತ್ತಾನೆ. ಕರ್ಣ ಪರಾಕ್ರಮಿ ಎಂದು ಕೃಷ್ಣನಿಗೆ ತಿಳಿದಿತ್ತು, ಕರ್ಣ ಅಸಾಧಾರಣ ಯೋಧನೆಂದು ಕೃಷ್ಣನಿಗೆ ಮೊದಲೇ ತಿಳಿದಿತ್ತು, ಅರ್ಜುನ ಎಷ್ಟೇ ದೊಡ್ಡ ಬಿಲ್ಲುಗಾರನಾಗಿದ್ದರೂ ಅವನನ್ನು ಕರ್ಣ ಮುಂದೆ ಸೋಲಿಸಬಹುದು ಎಂಬ ಭಯ ಕೂಡ ಕ್ರಷ್ಣನನಿಗಿತ್ತು.

ಸ್ನೇಹಿತರೆ ಕರ್ಣ ಸಾಯಲು ಅನೇಕ ಕಾರಣಗಳಿವೆ, ಇದರಲ್ಲಿ ಒಂದು ಕಾರಣ ಕರ್ಣನು ಸೂರ್ಯನಿಂದ ಪಡೆದ ರಕ್ಷಾಕವಚ, ಇದು ಇರುವವರೆಗೂ ಕೂಡ ಯಾವುದೇ ಆಯುಧವು ಅವನಿಗೆ ಹಾನಿ ಮಾಡಲು ಸಾದ್ಯವಿರಲಿಲ್ಲ ಆದ್ದರಿಂದ ಅರ್ಜುನ ಕರ್ಣನನ್ನು ಕೊಲ್ಲುವುದು ಅಸಾಧ್ಯವಾಗಿತ್ತು. ಕರ್ಣನ ಪರಾಕ್ರಮ ಜನಜನಿತವಾಗಿ ಬೆಳಗಿದಂತೆಯೇ ಅವನ ದಾನಗುಣವೂ ವಿಖ್ಯಾತವಾಯಿತು, ಭೀಮ ದುರ್ಯೋಧನರಿಗೆ ಹೇಗೆ ಬದ್ಧವೈರವೋ ಹಾಗೆಯೇ ಕರ್ಣ ಅರ್ಜುನರಿಗೆ ಎಲ್ಲ ವಿಷಯಗಳಲ್ಲಿಯೂ ಸ್ಪರ್ಧೆ ನಡೆಯುತ್ತಿತ್ತು. ಅರ್ಜುನನ ಮೇಲ್ಮೈಯಲ್ಲಿ ಆಸಕ್ತನಾಗಿದ್ದ ಇಂದ್ರನಿಗೆ ಕರ್ಣನನ್ನು ಹೇಗಾದರೂ ಮಾಡಿ ನಿಶ್ಶಕ್ತನನ್ನಾಗಿ ಮಾಡಬೇಕೆಂಬ ಯೋಚನೆ ಬಲವಾಗಿ ಕಾಡಲಾರಂಭಿಸಿತು. ಕರ್ಣನ ಉದಾರಗುಣವನ್ನು ಕೇಳಿದ ಆತ ಒಂದು ದಿನ ವಿಪ್ರವೇಷದಲ್ಲಿ ಕರ್ಣನಲ್ಲಿಗೆ ಬಂದು ಆತನ ಕವಚಕುಂಡಲಗಳನ್ನು ಬೇಡಿದ.

ಇಂದ್ರನ ಸಂಚನ್ನು ಮೊದಲೇ ತಿಳಿದ ಸೂರ್ಯ ಕರ್ಣನಿಗೆ ಸ್ವಪ್ನದಲ್ಲಿ ಕಾಣಿಸಿಕೊಂಡು ಎಚ್ಚರಸಿದ್ದರೂ ಕರ್ಣ ತನ್ನ ಸಹಜಗುಣಕ್ಕೆ ಅನುಸಾರವಾಗಿ ತನಗೆ ರಕ್ಷೆಯಂತಿದ್ದ ಕವಚಕುಂಡಲಗಳನ್ನು ಮನಃಪೂರ್ವಕವಾಗಿ ಇಂದ್ರನಿಗೆ ಒಪ್ಪಿಸಿದ. ನಂತರ ತಾನು ಅರಿಯದೆ ಮಾಡಿದ ತಪ್ಪಿನಿಂದಾಗಿ ಹಾಗು ಅಗತ್ಯ ಇರುವ ಸಂದರ್ಭದಲ್ಲೇ ಕರ್ಣನಿಗಿದ್ದ ಶಾಪಗಳು ಅವನಿಗೆ ಮುಳುವಾಗಿ ಸಾಯಬೇಕಾಯಿತು. ಇಷ್ಟಕ್ಕೂ ಸಾಯುವ ಮುನ್ನ ಕೃಷ್ಣನಿಂದ ಮೂರು ವರ ಪಡೆದಕೊಂಡ ಈ ರೋಚಕ ಕಥೆ ನಿಮಗೆ ಗೊತ್ತಾ ಹೇಳುತ್ತೇವೆ ಕೇಳಿ, ಕೊನೆಯ ಕ್ಷಣಗಳಲ್ಲಿ ಕರ್ಣನ ಕೌಶಲ್ಯ ಮತ್ತು ಭಕ್ತಿಯಿಂದ ಸಂತಸಗೊಂಡ ಶ್ರೀ ಕೃಷ್ಣ ಕರ್ಣನಿಗೆ ಮೂರು ವರಗಳನ್ನು ಕೇಳುವಂತೆ ಹೇಳುತ್ತಾನೆ. ಇದೆ ಸಮಯದಲ್ಲಿ ಕರ್ಣ ಕೇಳಿದ ಆ ಕೊನೆಯ ಆಸೆಗಳು ಏನಾಗಿದ್ದವು ಗೊತ್ತಾ, ಹಾಗಾದರೆ ಕರ್ಣ ಕೇಳಿದ ಕೊನೆಯ ಆಸೆಯ ಬಗ್ಗೆ ನಾವು ಈಗ ನಿಮಗೆ ತಿಳಿಸುತ್ತೇವೆ ಓದಿ.

ತನ್ನ ಮೊದಲ ವರದಲ್ಲಿ ಜ್ಞಾನಿ ಕರ್ಣನು ಕೃಷ್ಣನನ್ನು ಮುಂದಿನ ಜೀವನದಲ್ಲಿ ತನ್ನ ರೀತಿಯ ಜನರ ಉನ್ನತಿಗಾಗಿ ವಿಶೇಷವಾದ ಏನನ್ನಾದರೂ ಮಾಡಲು ವರವನ್ನು ಕೇಳಿದನು, ಏಕೆಂದರೆ ಅವನು ಸೂತ್ರ ಪುತ್ರನಾಗಿರುವುದರಿಂದ ಅವನ ಜೀವನದುದ್ದಕ್ಕೂ ಮೋಸ ಮತ್ತು ದುಃಖವನ್ನು ಎದುರಿಸಿದ್ದ. ಎರಡನೆಯ ವರವಾಗಿ ಕರ್ಣನು ತನ್ನ ಮುಂದಿನ ಜೀವನದಲ್ಲಿ ಕೃಷ್ಣನು ತನ್ನ ರಾಜ್ಯದಲ್ಲಿ ಜನಿಸಬೇಕೆಂದು ಕರ್ಣನು ಕೇಳಿಕೊಳ್ಳುತ್ತಾನೆ, ಇನ್ನು ತನ್ನ ಕೊನೆಯ ವರದಲ್ಲಿ ಕರ್ಣ ತನ್ನ ಕೊನೆಯ ವಿಧಿಗಳನ್ನು ಭೂಮಂಡಲದಲ್ಲಿ ಯಾವುದೇ ಪಾಪವಿಲ್ಲದ ಸ್ಥಳದಲ್ಲಿ ನಡೆಸಬೇಕೆಂದು ಕೃಷ್ಣನಿಗೆ ಹೇಳಿದನು, ಇನ್ನು ಇಡೀ ಭೂಮಿಯ ಮೇಲೆ ಅಂತಹ ಸ್ಥಳವಿಲ್ಲದ ಕಾರಣ ಕೃಷ್ಣನು ತನ್ನ ಅಂಗೈಯಲ್ಲೇ ಕರ್ಣನ ಕೊನೆಯ ವಿಧಿಗಳನ್ನು ಮಾಡಿದನು ಇದರಿಂದ ಕರ್ಣ ಮೋಕ್ಷವನ್ನು ಕೂಡ ಪಡೆಯುತ್ತಾನೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಆರೋಗ್ಯ

    ಕಿರುಗೋಣಿ ಸೊಪ್ಪಿನಲ್ಲಿ ಅಡಗಿದೆ ಸಂಜೀವಿನಿಯಂತಹ ಔಷಧಿ. ಈ ಅರೋಗ್ಯ ಮಾಹಿತಿ ನೋಡಿ.

    ಕಿರುಗೋಣಿಸೊಪ್ಪು ಎಂದು ಕರೆಯಲ್ಪಡುವ ಈ ಸಸ್ಯ ಬೆಳೆಯದಿರುವ ಜಾಗವೇ ಇಲ್ಲ. ಶೇಕಡ 65 % ನೀರನ್ನು ಹಿಡಿದಿಟ್ಟು ಕೊಳ್ಳುವ ಹಾಗೂ ಒಮ್ಮೆಲೇ ಸುಮಾರು 3 ಲಕ್ಷ ಬೀಜ ಪ್ರಸರಣ ಸಾಮರ್ಥ್ಯ ಇರುವ ಸಸ್ಯ ಎಂತಹಾ ಬರದಲ್ಲೂ ಬದುಕುವ ಸಾಮರ್ಥ್ಯ ಹೊಂದಿದೆ. ಅಲ್ಲದೇ ಸೇವಿಸುವವರ ಬದುಕನ್ನೂ ಹಸನು ಮಾಡುವ ಗುಣಗಳಿವೆ. Purslane ಎಂದು ವಿಶ್ವದಾದ್ಯಂತ ಸಾಮಾನ್ಯವಾಗಿ ಕರೆಯಲ್ಪಡುವ Portulacaceae ಕುಟುಂಬದ ಇದರ ಸಸ್ಯ ಶಾಸ್ತ್ರೀಯ ಹೆಸರು Portulaca oleracea. ಮುಲತಃ ಉತ್ತರ ಅಮೆರಿಕಾದ ಸಸ್ಯ. ಗೋಣಿಸೊಪ್ಪು ಅತ್ಯಾದಿಕವಾದ ವಿಟಮಿನ್…

  • ಸುದ್ದಿ

    ತೂಕ ಇಳಿಸಿಕೊಳ್ಳಬೇಕೇ ಹಾಗಾದ್ರೆ ದೋಸೆ ತಿನ್ನಿ ಸ್ಲಿಮ್ ಆಗಿರಿ…!

    ದೇಹದ ಫಿಟ್ ನೆಸ್ ಕಾಪಾಡಲು ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಆದರೆ ಈ ವೇಗದ ಜಗತ್ತಿನಲ್ಲಿ ದೇಹದ ಸದೃಢತೆ ಕಾಪಾಡಲು ಗಂಟೆಗಳ ಕಾಲ ವ್ಯಾಯಾಮ ಮಾಡುವ ವ್ಯವಧಾನ ಯಾರಿಗೂ ಇಲ್ಲವಾಗಿದೆ. ಹಾಗೂ ವ್ಯಾಯಾಮ ಮಾಡಿ ದೇಹ ಕರಗಿಸುವ ಪ್ರಯತ್ನ ಮಾಡಿದರೂ ವ್ಯಾಯಾಮದ ನಂತರ ಅಗತ್ಯ ಪ್ರಮಾಣದ ಪೋಷಕಾಂಶಗಳ ಆಹಾರಗಳನ್ನೇ ಸೇವಿಸುವುದು, ಇದನ್ನೇ ನಿತ್ಯ ಪಾಲಿಸುವುದು ಇನ್ನಷ್ಟು ತ್ರಾಸದಾಯಕ. ಅದರಲ್ಲೂ ಬಾಯಿಯ ರುಚಿ ಕಟ್ಟಿಹಾಕಿ ಡಯಟ್ ಮಾಡುವ ನಮ್ಮ ಯೋಜನೆ ರುಚಿಕರ ಆಹಾರ ನೋಡುತ್ತಿದ್ದಂತೆ ಮುರಿದಿರುತ್ತದೆ. ಆದರೆ ನಾವು…

  • ಸಾಧನೆ, ಸುದ್ದಿ, ಸ್ಪೂರ್ತಿ

    500 ರೂ ಸಾಲ ಪಡೆದು ಬಿಸಿನೆಸ್ ಆರಂಭಿಸಿದ ಈಕೆ ಈಗ ಕೋಟಿ ಕೋಟಿ ಒಡತಿ, ಕಣ್ಣೀರಿನ ಕಥೆ.

    ನಾವು ಹುಟ್ಟುವಾಗ ಒಬ್ಬರಾಗಿ ಈ ಪ್ರಪಂಚಕ್ಕೆ ಬರುತ್ತೇವೆ ಮತ್ತು ಸಾಯುವಾಗ ಒಬ್ಬರಾಗಿ ಸಾಯುತ್ತೇವೆ ಮತ್ತು ನಮ್ಮ ಸಾವನ್ನ ಯಾರಿಂದಲೂ ಕೂಡ ತಪ್ಪಿಸಲು ಸಾಧ್ಯವಿಲ್ಲ ಹಾಗೆ ನಮ್ಮ ನೋವನ್ನ ಯಾರು ಭರಿಸಲು ಕೂಡ ಸಾಧ್ಯವಿಲ್ಲ. ನಾವು ಕಷ್ಟದಲ್ಲಿ ಇದ್ದಾಗ ಒಂದು ಹಂತದ ತನಕ ಮಾತ್ರ ಯಾರಾದರೂ ಸಹಾಯ ಮಾಡಬಲ್ಲರು ಆದರೆ ಅದರಿಂದ ಆಚೆ ನಾವೇ ಹೋರಾಡಬೇಕು ಮತ್ತು ನಾವೇ ಬದುಕುವ ದಾರಿಯನ್ನ ಹುಡುಕಾಡಬೇಕು ಯಾಕೆ ಅಂದರೆ ಜೀವನ ಅನ್ನುವುದು ಪ್ರತಿ ಕ್ಷಣದ ಹೋರಾಟ. ಎಲ್ಲಾ ದಾರಿಗಳು ಮುಚ್ಚಿ ಹೋದಾಗ…

  • ಹಣ ಕಾಸು

    ತನ್ನ 6ನೇ ವಯಸ್ಸಿಗೆ ಈ ಬಾಲಕ ಕೋಟಿಗಳ ಸಂಪಾದನೆ ಮಾಡಿದ್ದು ಹೇಗೆ..?ಈ ಪೋರನ ಸಂಪಾದನೆ ಕೇಳಿದ್ರೆ ನೀವ್ ಶಾಕ್ ಆಗ್ತೀರಾ..!

    ಚಿಕ್ಕ ಮಕ್ಕಳು ಆಟಿಕೆಗಳ ಜೊತೆ ಆಟವಾಡುವುದು ಸಹಜ. ಆದ್ರೆ ಅಮೇರಿಕಾದ 6 ವರ್ಷದ ಈ ಪೋರ ತಾನು ಆಟವಾದುವುದರ ಮೂಲಕವೇ ಕೋಟಿಗಳ ಸಂಪಾದನೆ ಮಾಡಿದ್ದಾನೆ ಎಂದರೆ ನೀವ್ ನಂಬಲೇಬೇಕು.

  • ಸುದ್ದಿ

    ದಂಡ ಪಾವತಿಸಿದವರಿಗೆ ಉಚಿತವಾಗಿ ಹೆಲ್ಮೆಟ್ ವಿತರಿಸಿ ಪ್ರೋತ್ಸಾಹಿಸಿದ ಪೊಲೀಸ್…!

    ರಸ್ತೆ ಸುರಕ್ಷತೆಯನ್ನು ಹೆಚ್ಚಿಸುವ ಸಲುವಾಗಿ ಕೇಂದ್ರ ಸರ್ಕಾರ ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಮಸೂದೆಯನ್ನು ಜಾರಿಗೆ ತಂದಾಗಿನಿಂದಲೂ ಸಂಚಾರ ನಿಯಮ ಉಲ್ಲಂಘನೆಗೆ ಮಾಡಿದವರಿಗೆ ದಂಡ ವಿಧಿಸುವ ಪ್ರಕರಣಗಳು ವರದಿಯಾಗುತ್ತಲೇ ಇವೆ. ಕೆಲ ದಂಡದ ಮೊತ್ತ 80 ಸಾವಿರ ರೂ. ತಲುಪಿದ್ದು ಇದೆ. ಮೋಟಾರು ವಾಹನ ಕಾಯಿದೆ (ತಿದ್ದುಪಡಿ) 2019, ಜಾರಿಗೆ ಬಂದ ದಿನದಿಂದಲೂ ದೇಶಾದ್ಯಂತ ಸಂಚಾರ ಶಿಸ್ತು ಪಾಲನೆ ಮಾಡದ ಸವಾರರಿಗೆ ಭಾರೀ ಮೊತ್ತದ ದಂಡ ಪೀಕಿಸುತ್ತಿರುವ ಸುದ್ದಿಗಳೇ ಎಲ್ಲೆಲ್ಲೂ. ಇವುಗಳ ನಡುವೆ ಒಡಿಶಾ ರಾಜಧಾನಿ ಭುವನೇಶ್ವರದ…

  • ಸಿನಿಮಾ

    ಸ್ಯಾಂಡಲ್ ವುಡ್ ನಟ ಮತ್ತು ಸಿಸಿಎಲ್ ಆಟಗಾರ ಧ್ರುವ ಶರ್ಮಾ ಇನ್ನಿಲ್ಲ…

    ಚಂದನವನದ ನಟ ಹಾಗೂ ಸೆಲೆಬ್ರಿಟಿ ಕ್ರಿಕೆಟ್ ಲೀಗ್‍ನ, ಬುಲ್ಡೋಜರ್ಸ್ ತಂಡದ ಖ್ಯಾತ ಆಟಗಾರ ಧ್ರುವ ಶರ್ಮಾ ನಿಧನರಾಗಿದ್ದು, ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.