ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಜಗತ್ತಿನಲ್ಲಿ ಡಿಜಿಟಲ್ ಕ್ರಾಂತಿ ಏನೆಲ್ಲಾ ಪ್ರಭಾವ ಬೀರಿದೆಯೆಂದರೆ, ಆಟವಾಡುವ ಮಕ್ಕಳು ಕೂಡ ಕೋಟಿಗಳ ಅಧಿಪತಿಗಳಾಗಿದ್ದಾರೆ ಎಂದರೆ ನೀವು ನಂಬಲೇಬೇಕು.ಇದಕ್ಕೆ ವಯಸ್ಸಿನ ಮಿತಿಯಿಲ್ಲ, ವಿಧ್ಯಾಭ್ಯಾಸದ ಅವಶ್ಯಕತೆಯಿಲ್ಲ, ಎಲ್ಲಾ ಅವರವರ ಬುದ್ದಿವಂತಿಕೆಯ ಮೇಲೆ ನಡೆಯುತ್ತದೆ.
ಚಿಕ್ಕ ಮಕ್ಕಳು ಆಟಿಕೆಗಳ ಜೊತೆ ಆಟವಾಡುವುದು ಸಹಜ. ಆದ್ರೆ ಅಮೇರಿಕಾದ 6 ವರ್ಷದ ಈ ಪೋರ ತಾನು ಆಟವಾದುವುದರ ಮೂಲಕವೇ ಕೋಟಿಗಳ ಸಂಪಾದನೆ ಮಾಡಿದ್ದಾನೆ ಎಂದರೆ ನೀವ್ ನಂಬಲೇಬೇಕು.

ಹೌದು, ಈ ಬಾಲಕನ ಹೆಸರು ರಯಾನ್. ಅವನು ತಾನು ಆಟವಾಡುವ ವಿಡಿಯೋಗಳನ್ನು ಯುಟ್ಯೂಬ್ನಲ್ಲಿ ಹಾಕುತ್ತಲೇ ಸುಮಾರು 70 ಕೋಟಿ ರೂ. ಸಂಪಾದನೆ ಮಾಡಿದ್ದಾನೆ.
ರಿಯಾನ್ ಟಾಯ್ಸ್ ರಿವ್ಯೂ’ ಎಂಬ ಯುಟ್ಯೂಬ್ ಚಾನೆಲ್ ಹೊಂದಿದ್ದಾನೆ. 2017ರಲ್ಲಿ ಈ ಯುಟ್ಯೂಬ್ ಚಾನೆಲ್ ನಿಂದ ಸುಮಾರು 11 ಮಿಲಿಯನ್ ಡಾಲರ್ ಹಣ ಗಳಿಸಿದ್ದಾನೆ. ಫೋರ್ಬ್ಸ್ ಪಟ್ಟಿ ಮಾಡಿರೋ ಅತಿ ಹೆಚ್ಚು ಹಣ ಗಳಿಸಿರೋ ಯುಟ್ಯೂಬ್ ಸೆಲೆಬ್ರಿಟಿಗಳಲ್ಲಿ ಇವನೂ ಒಬ್ಬ.

ಫೋರ್ಬ್ಸ್ ನ ಪ್ರಸಿದ್ಧ ವ್ಯಕ್ತಿಗಳ ಪಟ್ಟಿಯಲ್ಲಿ ರಯಾನ್ 8 ನೇ ಸ್ಥಾನದಲ್ಲಿದ್ದಾನೆ. ಯೂಟ್ಯೂಬ್ನಲ್ಲಿ “ರಯಾನ್ ಟಾಯ್ಸ್ ರಿವೀವ್” ಚಾನೆಲ್ ನನ್ನು ಈತನ ಪೋಷಕರು ಆರಂಭಿಸಿದ್ದು, ಹಲವಾರು ಟಾಯ್ಸ್ ಗಳ ವಿಮರ್ಶೆ ಮಾಡಿ ಅದರ ವಿಡಿಯೋಗಳನ್ನು ಯೂಟ್ಯೂಬ್ಗೆ ಅಪ್ಲೋಡ್ ಮಾಡಲಾಗಿದೆ.

ಈ ಬಾಲಕನಿಗೆ ಕಾರ್ಗಳು, ರೈಲುಗಳು, ಥಾಮಸ್ ಅಂಡ್ ಫ್ರೆಂಡ್ಸ್, ಲೀಗೋ, ಸೂಪರ್ಹೀರೋಸ್, ಡಿಸ್ನಿ ಆಟಿಕೆ ಇತ್ಯಾದಿಗಳನ್ನು ತುಂಬಾ ಪ್ರೀತಿಸುತ್ತಾನೆ. ಜೊತೆಗೆ ಕುಟುಂಬದ ಮೋಜು, ಸಾಹಸಗಳನ್ನು ಇಷ್ಟಪಟ್ಟಿದ್ದಾನೆ. ಅಷ್ಟೇ ಅಲ್ಲದೇ ಮಕ್ಕಳಿಗಾಗಿ ಮೋಜು ಮತ್ತು ಸುಲಭವಾದ ವಿಜ್ಞಾನ ಪ್ರಯೋಗಳನ್ನು ಮಾಡುತ್ತಾನೆ.

‘2015ರ ಮಾರ್ಚ್ ನಲ್ಲಿ ಈ ಚಾನೆಲ್ ಆರಂಭಿಸಲಾಗಿತ್ತು. ಆಗ ರಯಾನ್ ಗೆ ಕೇವಲ ನಾಲ್ಕು ವರ್ಷ. ಜುಲೈನಲ್ಲಿ ಈತನ ವಿಡಿಯೋ ಒಂದು ವೈರಲ್ ಆಗಿತ್ತು. ಆಗಿನಿಂದ್ಲೂ ರಯಾನ್ ಯುಟ್ಯೂಬ್ ಸ್ಟಾರ್ ಆಗಿಬಿಟ್ಟಿದ್ದಾನೆ. ಇವನ ಹೆತ್ತವರೇ ವಿಡಿಯೋಗಳನ್ನು ಮಾಡಿ ಪೋಸ್ಟ್ ಮಾಡುತ್ತಾರೆ. ಇವನ ಚಾನೆಲ್ ಗೆ 10 ಮಿಲಿಯನ್ ಚಂದಾದಾರರಿದ್ದಾರೆ.ಅವನು ಅಪ್ಲೋಡ್ ಮಾಡಿದ ಡಜನ್ಸ್ ವಿಡಿಯೋಗಳನ್ನು ಸುಮಾರು 1,600 ಕೋಟಿ (16 ಬಿಲಿಯನ್) ಬಾರಿ ವೀಕ್ಷಣೆ ಮಾಡಲಾಗಿದೆ.
ಈಗ ಈ ಕುಟುಂಬ “ರಯಾನ್ ಫ್ಯಾಮಿಲಿ ರಿವೀವ್” ಎಂಬ ಎರಡನೇ ಚಾನೆಲ್ ಪ್ರಾರಂಭಿಸಿದ್ದಾರೆ. ಇದು ಕುಟುಂಬದ ಪ್ರತಿದಿನ ಸಾಹಸ ಮತ್ತು ರಯಾನ್ ಸಹೋದರಿಯರಾದ ಎಮ್ಮಾ ಮತ್ತು ಕೇಟ್ ಅವರ ಮೇಲೆ ಕೇಂದ್ರಿಕರಿಸಲಾಗಿದೆ. 10 ಲಕ್ಷಕ್ಕೂ ಅಧಿಕ ಮಂದಿ ಚಾನೆಲ್ ಸಬ್ಸ್ ಸ್ಕ್ರೈಬ್ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಗಂಡ ಹೆಂಡತಿ” ಸಿನಿಮಾ ವೇಳೆ ನಿರ್ದೇಶಕ ರವಿ ಶ್ರೀವತ್ಸ ಚಿತ್ರೀಕರಣದ ಸಮಯ ಕಿರುಕುಳ ನಿಡಿದ್ದರೆಂದು, ಬೆದರಿಕೆ ಹಾಕಿದ್ದರೆಂದೂ ಆರೋಪಿಸಿದ್ದ ನಟಿ ಸಂಜನಾ ಇದೀಗ ತಣ್ಣಗಾಗಿದ್ದಾರೆ.ನಿರ್ದೇಶಕ ರವಿ ಶ್ರೀವತ್ಸ ವಿರುದ್ಧ ಮೀಟೂ ಆರೋಪ ಮಾಡಿದ್ದ ನಟಿ ಸಂಜನಾ ಬಹಿರಂಗವಾಗಿ ಕ್ಷಮೆ ಕೇಳಿದ್ದಾರೆ. ಗಂಡ-ಹೆಂಡತಿ ಚಿತ್ರದಲ್ಲಿ ಪದೇ ಪದೇ ಕಿಸ್ಸಿಂಗ್ ಸೀನ್ ಮಾಡಿಸಿದ್ದರು ಎಂದು ಆರೋಪಿಸಿದ್ದ ಸಂಜನಾ ತಮ್ಮ ಆರೋಪದ ಕುರಿತು ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದ್ದಾರೆ. ಸಂಜನಾ ಕಲಾವಿದರ ಸಂಘ, ನಿರ್ದೇಶಕರ ಸಂಘದ ಪದಾಧಿಕಾರಿಗಳ ಸಮ್ಮುಖದಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ…
ಹಣ್ಣುಗಳು ದೇಹದ ಆರೋಗ್ಯಕ್ಕೆ ಬಹಳಷ್ಟು ಉತ್ತಮ ಎನ್ನುವುದನ್ನು ನಾವೆಲ್ಲರೂ ತಿಳಿದಿದ್ದೇವೆ, ಆದರೆ ಯಾವ ಯಾವ ಹಣ್ಣುಗಳು ಯಾವ ಯಾವ ಅಂಶಗಳನ್ನು ಒಳಗೊಂಡಿರುತ್ತವೆ ಮತ್ತು ಅವು ನಮ್ಮ ಆರೋಗ್ಯವೃದ್ಧಿಗೆ ಹೇಗೆ ಸಹಕರಿಸುತ್ತವೆ ಎಂಬುದು ಹಲವರಿಗೆ ತಿಳಿದಿರುವುದಿಲ್ಲ. ಈ ಭೂಮಿಯ ಮೇಲೆ ಹಲವು ರೀತಿಯ ಹಣ್ಣುಗಳಿವೆ ಮತ್ತು ಒಂದೊಂದು ಹಣ್ಣು ಕೂಡ ಒಂದೊಂದು ರೀತಿಯ ಗುಣಲಕ್ಷಣಗಳನ್ನ ಹೊಂದಿರುತ್ತದೆ, ಇನ್ನು ಹಣ್ಣುಗಳನ್ನು ತಿನ್ನಲೂ ಕ್ರಮವಿದೆ, ಹಾಗಾದರೆ ಹಣ್ಣುಗಳನ್ನ ತಿನ್ನುವಾಗ ಅನುಸರಿಸಬೇಕಾದ ಕ್ರಮಗಳೇನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ…
ಒಂದೆಲಗ ಅಥವಾ ಬ್ರಾಹ್ಮೀ ಎಲೆ ಇದಕ್ಕೆ ದಕ್ಷಿಣ ಕನ್ನಡದ ಕಡೆ ತಿಮರೆ ಎಂದು ಕರೆಯುತ್ತಾರೆ. ಒಂದೆಲಗ ಎಂದರೆ ಒಂದು ಎಲೆ ಉಳ್ಳ ಸಸಿ ಎಂದರ್ಥ. ಇದರಲ್ಲಿರುವ ಮದ್ದಿನ ಗುಣ ಅಸಾಮಾನ್ಯವಾದದ್ದು. ಅದು ಏನೆಂದು ತಿಳಿದರೆ ನಿಮಗೆ ಆಗುತ್ತೆ ನೋಡಿ ಆಶ್ಚರ್ಯ.
ಮಳೆ ಬಂದಿಲ್ಲ ಅಂದ್ರೆ ಹಳ್ಳಿಗಳ ಕಡೆ ಮಳೆರಾಯನ ಪೂಜೆ ಮತ್ತು ಕಪ್ಪೆಗಳಗೆ ಮದುವೆ ಮಾಡಿಸುವುದು ವಾಡಿಕೆ. ಹಾಗೂ ಕಪ್ಪೆಗಳಿಗೆ ಮದುವೆ ಮಾಡಿಸಿ ಮಳೆರಾಯನ ಮೊರೆಹೊದರೆ ಖಂಡಿತ ಮಳೆ ಬರುತ್ತದೆ ಎಂಬ ನಂಬಿಕೆ ಇದೆ… ಹೌದು, ಕೋಲಾರ ತಾಲ್ಲೂಕಿನ ತೊಟ್ಲಿ ಗ್ರಾಮಸ್ಥರು ಹೀಗೆ ಕಪ್ಪೆಗಳಗೆ ಮದುವೆ ಮಾಡಿಸಿ ಮೂರೇ ದಿನದಲ್ಲಿ ಮಳೆ ಬರಿಸಿದ್ದಾರೆ. ಕಪ್ಪೆ ಮದುವೆ ಮಾಡಿಸುವುದು ಹೇಗೆ? ಊರಿನ ಜನರು ಮಳೆರಾಯನಿಗೆ ಪ್ರಾರ್ಥಿಸಿ ಹೆಣ್ಣು ಮತ್ತು ಗಂಡು ಕಪ್ಪೆಗಳಿಗೆ ಸಿಂಗಾರ ಮಾಡಿ ಗ್ರಾಮದ ಮುಖ್ಯಬೀದಿಗಳಲ್ಲಿ ತಮಟೆವಾದ್ಯಗಳೊಂದಿಗೆ ಕಪ್ಪೆ ಜೊಡಿಯ ಮೆರವಣಿಗೆ…
ಡ್ರೈವಿಂಗ್ ಲೈಸೆನ್ಸ್ ನವೀಕರಣ ಅಥವಾ ಅದರಲ್ಲಿನ ವಿಳಾಸ ಬದಲಾವಣೆಗೆ ಸಾರಿಗೆ ಇಲಾಖೆ ಕಚೇರಿಗಳಿಗೆ ಇನ್ನು ಮುಂದೆ ಪದೇ ಪದೇ ಅಲೆಯಬೇಕಿಲ್ಲ. ಅಲ್ಲದೇ, ಈ ಪ್ರಕ್ರಿಯೆಗೆ ಯಾವುದೇ ನಿರಾಕ್ಷೇಪಣಾ ಪತ್ರ ಅವಶ್ಯಕತೆ ಇಲ್ಲ ಎಂದು ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವಾಲಯ ಹೇಳಿದೆ. ಬಹುತೇಕ ಜನ ಸ್ವಂತ ಊರಿನ ವ್ಯಾಪ್ತಿಯ ಆರ್.ಟಿ.ಓ. ಕಚೇರಿಯಲ್ಲಿ ಡಿಎಲ್ ಮಾಡಿಸಿಕೊಂಡಿರುತ್ತಾರೆ ಕಾರಣಾಂತರದಿಂದ ಅವರು ಬೇರೆ ನಗರ ಅಥವಾ ರಾಜ್ಯದಲ್ಲಿ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಡಿಎಲ್ ನವೀಕರಣ ಮತ್ತು ವಿಳಾಸ ಬದಲಾವಣೆಗೆ ಆರ್.ಟಿ.ಓ….
ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ಮದೋರಾ ಗ್ರಾಮದ ಪಂಚಾಯಿತಿ ವಿವಾದಾತ್ಮಕ ತೀರ್ಮಾನ ಕೈಗೊಂಡಿದೆ. ಗ್ರಾಮದ ಹುಡುಗಿಯರು ಮೊಬೈಲ್ ನಲ್ಲಿ ಮಾತನಾಡುವುದು ಕಂಡು ಬಂದರೆ ಅವರಿಗೆ ೨೧ ಸಾವಿರ ರೂ. ದಂಡ ವಿಧಿಸಲಾಗುವುದೆಂದು ಎಚ್ಚರಿಸಿದೆ.