News

ನಿಮ್ಮ ಜ್ಞಾನಕ್ಕೆ ಮತ್ತಷ್ಟು ಬಲ KAS ಅಥವಾ ಕೋಟ್ಯಾದಿ ಪತಿಗೆ ಇದು ತುಂಬ ಸಹಾಯ ಮಾಡಲಿದೆ ಲೇಖನ ಓದಿ
ಓಂ “ॐ ” ಮಂತ್ರ ಪಠಿಸಿ, ಸರ್ವ ರೋಗ ನಿವಾರಿಸಿ !
ಗೃಹಲಕ್ಷ್ಮಿ ಯೋಜನೆ ಹಣ ಬಂದಿಲ್ಲವೇ! ಹಾಗಾದರೆ ಹೀಗೆ ಮಾಡಿ
ಗೃಹ ಲಕ್ಷ್ಮಿ ಯೋಜನೆಗೆ ಎಲ್ಲಿ ಯಾವಾಗ ಅರ್ಜಿ ಸಲ್ಲಿಸಬೇಕು
ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಆರಂಭ!
ರೇಷನ್ ಹಣದ Status Check ಮಾಡಲು ಈ ಲಿಂಕ್ ಮೂಲಕ ಪರೀಕ್ಷಿಸಿಕೊಳ್ಳಿ
ಪೋಕ್ಸೊ ಕಾಯಿದೆ ಅಡಿ ಆರೋಪಿಗೆ 20 ವರ್ಷ ಸಜೆ-30 ಸಾವಿರ ದಂಡ
ಈ ಲಿಂಕ್‌ ಕ್ಲಿಕ್‌ ಮಾಡಿದರೆ ಗೃಹಲಕ್ಷ್ಮೀ ಯೋಜನೆಯ ಅರ್ಜಿ
ಗೃಹಜ್ಯೋತಿ ಯೋಜನೆಗೆ ಅರ್ಜಿಸಲ್ಲಿಕೆ ಹೇಗೆ? ಜೂನ್‌ 15 ರಿಂದ ಅರ್ಜಿ ಆಹ್ವಾನ
ಪೋಕ್ಸೊ ಕಾಯಿದೆ ಅಡಿ ಆರೋಪಿಗೆ 20 ವರ್ಷ ಸಜೆ-35 ಸಾವಿರ ದಂಡ
ನೂತನ ಸಂಸತ್ ಭವನದ ಉದ್ಘಾಟನೆ ಸ್ಮರಣಾರ್ಥ 75 ರೂ. ಮುಖಬೆಲೆಯ ವಿಶೇಷ ನಾಣ್ಯ ಬಿಡುಗಡೆ..!!
ಜೀವನಶೈಲಿ

ಶೌಚಾಲಯವಿಲ್ಲದ ಗ್ರಾಮಗಳಲ್ಲಿ ಈ ಶಿಕ್ಷಕಿ 6000ಕ್ಕೂ ಹೆಚ್ಚು ಶೌಚಾಲಯವನ್ನು ನಿರ್ಮಿಸಿದ್ದಾರೆ..!ತಿಳಿಯಲು ಈ ಲೇಖನ ಓದಿ ..

130

ಸಮಾಜ ಸೇವೆ ಮಾಡುವುದು ಅಂದರೆ ಅಷ್ಟೊಂದು ಸುಲಭದ ಮಾತಲ್ಲ ಯಾಕೆಂದರೆ. ಮಾನವ ಬುದ್ದಿ ಜೀವಿಯಾಗಿದ್ದರು ಕೆಲವೊಂದು ಸಾರಿ ಬುದ್ದಿ ಇಲ್ಲದ ರೀತಿಯಲ್ಲಿ ವರ್ತಿಸುತ್ತಾನೆ ಅಂತ ಜನಗಳ ಮದ್ಯೆ ಒಂದು ಕೆಲಸವನ್ನು ಮಾಡ ಬೇಕೆಂದರೆ ಸುಲಭದ ಕೆಲಸ ಆಗಿರುವುದಿಲ್ಲ.ಅಲ್ಲದೆ ಒಂದು ಯಶಸ್ಸು ಕಾಣ ಬೇಕೆಂದರೆ ಅದರ ಹಿಂದಿನ ಕಷ್ಟಗಳು ಅನುಭವಿಸುವವರಿಗೆ ಮಾತ್ರ ಗೊತ್ತಿರುತ್ತದೆ.

ಮೀತ್ ಎನ್ನುವ ಶಿಕ್ಷಕಿ  ಗುಜರಾತ್ ನಗರದ ಅತ್ಯಂತ ಪ್ರತಿಷ್ಠಿತ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಹೀಗಿರುವಾಗ 2013ರಲ್ಲಿ ತಮ್ಮ ಕಾಲೇಜಿನಿಂದ ಗಾಂಧಿ ಪಾದಯಾತ್ರ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾರೆ.ವಿವಿಧ ಗ್ರಾಮಗಳಿಗೆ ವಿದ್ಯಾರ್ಥಿಗಳು ಹಾಗು ಪ್ರಾದ್ಯಾಪಕಾರು ಎಲ್ಲರು ಭೇಟಿ ನೀಡುತ್ತಾರೆ. ಇದರ ಉದ್ದೇಶ ಆ ಗ್ರಾಮಗಳಲ್ಲಿ ಏನೆಲ್ಲಾ ಸಮಸ್ಯೆಯನ್ನು ಜನರು ಅನುಭವಿಸುತ್ತಿದ್ದಾರೆ ಅನ್ನೋದನ್ನ ತಿಳಿದು ಕೊಳ್ಳುವುದು.

ಹೀಗಿರುವಾಗ ಈ ಶಿಕ್ಷಕಿಯು ಆಳವಾಗಿ ಜನರ ಸಮಸ್ಯೆಯನ್ನು ತಿಳಿಯಲು ಪ್ರಯತ್ನಿಸುತ್ತಾರೆ. ಹೀಗೆ ಅಲ್ಲಿನ ಪ್ರವಾಸ ಮುಗಿಸು ಕೊಂಡು ಬಂದಾಗ ಅವರು ಯೋಚಿಸುತ್ತಾರೆ ಗ್ರಾಮೀಣ ಪ್ರದೇಶದಲ್ಲಿ ಶೌಚಾಲಯಗಳು ಇಲ್ಲದೆ ಗ್ರಾಮೀಣ ಪ್ರದೇಶದ ಮಹಿಳೆಯರು ಎಷ್ಟೊಂದು ಕಷ್ಟ ಅನುಭವಿಸುತ್ತಾರೆ. ಅನ್ನೋದನ್ನ ತಿಳಿದ ಇವರು ಆ ಜನರಲ್ಲಿ ಪ್ರೇರಣೆ ಮಾಡಿ ಶೌಚಾಲಯ ಕಟ್ಟಿಸಿ ಅದನ್ನು ಬಳಕೆ ಮಾಡುವ ಹಾಗೆ ಮಾಡಬೇಕು ಅನ್ನೋದನ್ನ ನಿರ್ಧರಿಸುತ್ತಾರೆ.

ಆ ವಿಶ್ವ ವಿದ್ಯಾಲಯದ ಉಪಕುಲಪತಿ ಡಾ ಸುದರ್ಶನ್ ಅಯ್ಯಂಗಾರ್ ಎಂಬವರು ಹಳ್ಳಿಗಳಲ್ಲಿ ಶೌಚಾಲಯಗಳನ್ನು ನಿರ್ಮಿಸುವ ಯೋಜನೆಯೊಂದನ್ನು ಪ್ರಾರಂಭಿಸಿದರು. ನನ್ನ ರಾಷ್ಟ್ರವನ್ನು ಪೂರೈಸಲು ಮತ್ತು ನನ್ನ ತಾಯಿಯ ಭೂಮಿಯನ್ನು ಸ್ವಚ್ಛಗೊಳಿಸಲು ಒಂದು ಭಾಗವಾಗಲು ಒಂದು ದೊಡ್ಡ ಅವಕಾಶ ಸಿಕ್ಕಿತು ಆಗಾಗಿ ನಾನು ತಕ್ಷಣ ಒಪ್ಪಿಕೊಂಡೆ ಅನ್ನುತ್ತಾರೆ.

ನಂತರ ಆ ಗ್ರಾಮಗಳಿಗೆ ಭೇಟಿ ನೀಡಿ ಯಾರ ಮನೆಯಲ್ಲಿ ಶೌಚಾಲಯ ಇಲ್ಲವೋ ಅವರ ಮನೆಯಲ್ಲಿ ಕಟ್ಟಿಸಿ ಕೊಳ್ಳುವ ಹಾಗೆ ಪ್ರೇರಣೆಯನ್ನು ಮಾಡುತ್ತಾರೆ . ಅಲ್ಲದೆ ಅದರಿಂದಾಗು ಅನುಕೂಲಗಳ ಬಗ್ಗೆ ಹಾಗು ಯಾವ ರೀತಿಯಲ್ಲಿ ನಿರ್ಮಿಸಿ ಕೊಳ್ಳ ಬೇಕು ಎಂದೆಲ್ಲ ಮಾಹಿತಿಯನ್ನು ಆ ಗ್ರಾಮದ ಮಹಿಳೆಯರಲ್ಲಿ ತಿಳಿಸುತ್ತಾರೆ.

ಅಲ್ಲದೆ ಸರಕಾರಿ ಕಾರ್ಯಕ್ರಮದಡಿಯಲ್ಲಿ ಶೌಚಾಲಯಗಳನ್ನು ಕಟ್ಟಲು ಗ್ರಾಮಸ್ಥರಿಗೆ ಮನವೊಲಿಸಲು ಏಳು ತಿಂಗಳುಗಳನ್ನು ತೆಗೆದುಕೊಂಡಿತು’

4 ವರ್ಷದಲ್ಲಿ 34 ಗ್ರಾಮಗಳಲ್ಲಿ 6000 ಕ್ಕೂ ಹೆಚ್ಚು ಶೌಚಾಲಯಗಳನ್ನು ನಿರ್ಮಿಸಿ ಕೊಳ್ಳುವ ಹಾಗೆ ಮಾಡಿದ್ದಾರೆ.ಯಾರು ಶೌಚಾಲಯ ನಿರ್ಮಿಸಿ ಕೊಳ್ಳುತ್ತಾರೆ ಅವರಿಗೆ ಬಹುಮಾನ ಕೊಡಲಾಗುತ್ತದೆ ಅನ್ನೋ ಯೋಜನೆಯನ್ನು ಹಾಕಿ ಕೊಂಡು ಜನರಲ್ಲಿ ಪ್ರೇರಣೆ ಮಾಡುತ್ತಾರೆ.

ಹೀಗೆ ಕಟ್ಟಿಸಿ ಕೊಂಡವರಿಗೆ ತಮ್ಮ ಸ್ವಂತ ಹಣದಲ್ಲಿ ಆ ಬಹುಮಾನವನ್ನು ಕೂಡುವ ಕೆಲಸ ಮಾಡುತ್ತಾರೆ. ಹೇಗೆ ಕೆಲಸ ಮಾಡಿದಾಗ ಹಲವು ಜನ ಇವರನ್ನು ಅಪಹಾಸ್ಯ ಮಾಡುತ್ತಾರೆ ಅವುಗಳನ್ನು ಲೆಕ್ಕಕೆ ಹಾಕದೆ ನಾನು ನನ್ನ ರಾಷ್ಟ್ರಕ್ಕೆ ಹಾಗು ನನ್ನ ಭೂಮಿ ತಾಯಿಯನ್ನು ಸ್ವಚ್ಛತೆ ಮಾಡುವ ಹೆಮ್ಮೆ ನನಗಿದೆ ಅನ್ನೋ ನಿರ್ಧಾರದೊಂದಿಗೆ ಯಶಸ್ಸು ಕಾಣುತ್ತಾರೆ.

 

 

About the author / 

admin

Categories

Date wise

  • ಟೊಮೇಟೋ ಅಂಚೆ ಲಕೋಟೆ ಬಿಡುಗಡೆ

    ಕೋಲಾರ ನಗರದ ಪ್ರಧಾನ ಅಂಚೆ ಕಚೇರಿಯಲಿ ಶನಿವಾರ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಕೋಲಾರ ಜಿಲ್ಲೆಯ ಟೊಮೇಟೋ ಕುರಿತು ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ಇತ್ತೀಚಿನ ದಿನಗಳಲ್ಲಿ ಟೊಮೇಟೋ ಕೋಲಾರ ಜಿಲ್ಲೆಯ ಪ್ರಧಾನ ತೋಟಗಾರಿಕೆ ಬೆಳೆಯಾಗಿ ಹೊರ ಹೊಮ್ಮಿದೆ. ರೈತರು ವರ್ಷದ ೩೬೫ ದಿನವೂ ಟೊಮೇಟೋವನ್ನು ಬೆಳೆಯುತ್ತಿದ್ದಾರೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯೂ ಏಷ್ಯಾದ ಎರಡನೇ ಅತಿ ದೊಡ್ಡ ಟೊಮೇಟೋ ಮಾರುಕಟ್ಟೆಯಾಗಿ ಪ್ರಸಿದ್ಧಿ ಪಡೆದಿದೆ. ಈ ಹಿನ್ನೆಲೆಯಲ್ಲಿ ಟೊಮೇಟೋ ಬೆಳೆಯನ್ನು ಕೋಲಾರದ ಒಂದು ಜಿಲ್ಲೆ ಒಂದು…

ಏನ್ ಸಮಾಚಾರ