ವಿಚಿತ್ರ ಆದರೂ ಸತ್ಯ

ವೈದ್ಯಕೀಯ ಪವಾಡದಿಂದ ವರ್ಷದಲ್ಲಿ ‘ಎರಡು ಬಾರಿ ಹುಟ್ಟುಹಬ್ಬ’ ಆಚರಿಸುತ್ತಿರುವ ಮಗು..!ತಿಳಿಯಲು ಈ ಲೇಖನ ಓದಿ..

142

ಒಂದು ವರ್ಷದ ಹಿಂದೆ ಅಧಿಕೃತವಾಗಿ ಈ ಧರೆಯಲ್ಲಿ ಅವತರಿಸಿರುವ ಪುಟ್ಟ ಬಾಲಕಿಯೀಗ ಆರೋಗ್ಯವಂತಳಾಗಿ ಬೆಳೆಯುತ್ತಿದ್ದಾಳೆ. ಇದರಲ್ಲೇನು ವಿಶೇಷ ಎನ್ನುತ್ತೀರಾ? ಈ ಮಗು ಎರಡು ಬಾರಿ ಜನಿಸಿದ್ದು, ಇದಕ್ಕಾಗಿ ಆಧುನಿಕ ವೈದ್ಯಕೀಯಕ್ಕೆ ಕೃತಜ್ಞತೆಗಳನ್ನು ಹೇಳಬೇಕಾಗಿದೆ.

ಅಮೆರಿಕದ ಹ್ಯೂಸ್ಟನ್ನಲ್ಲಿರುವ ಮಕ್ಕಳ ಆಸ್ಪತ್ರೆಯ ಸರ್ಜನ್ಗಳಾದ ಡ್ಯಾರೆಲ್ ಕಾಸ್ ಮತ್ತು ಒಲುಯಿಂಕ್ ಒಲ್ಟೊಯಿ ಅವರು ಕಳೆದ ವರ್ಷ ಸೋನೊಗ್ರಾಮ್ ಪರೀಕ್ಷೆಯಲ್ಲಿ ಆಗ ಕೇವಲ 23 ವಾರ ಪ್ರಾಯವಾಗಿದ್ದ ಲಿನ್ಲೀ ಹೋಪ್ಳ ಮಿದುಳು ಬಳ್ಳಿಯ ಬುಡದಲ್ಲಿ ಭಾರೀ ಗಡ್ಡೆಯೊಂದು ಬೆಳೆದಿರುವುದು ಪತ್ತೆಯಾದ ಬಳಿಕ ಆ ಶಿಶುವನ್ನು ತಾಯಿ ಮಾರ್ಗರೆಟ್ ಬೋಮರ್(38)ಳ ಗರ್ಭಕೋಶದಿಂದ ಹೊರಕ್ಕೆ ತೆಗೆದಿದ್ದರು. ಆಗ ಮೊದಲ ಬಾರಿಗೆ ಶಿಶು ಈ ಧರೆಗಿಳಿದಿತ್ತು.

ಅದು(ಗಡ್ಡೆ) ಹೆಚ್ಚುಕಡಿಮೆ ಇನ್ನೊಂದು ತಲೆಯಂತೆ ಕಾಣುತ್ತಿತ್ತು ಎಂದು ಮಾರ್ಗರೆಟ್ ನೆನಪಿಸಿಕೊಂಡಿದ್ದಾಳೆ.ಗರ್ಭಕೋಶದಲ್ಲಿನ ಶಿಶುವಿನ ಮಿದುಳು ಬಳ್ಳಿಯಲ್ಲಿದ್ದ ಗಡ್ಡೆ ಇನ್ನೂ ಬೆಳೆಯುತ್ತಲೇ ಇತ್ತು. ಗಡ್ಡೆಯ ಬೃಹತ್ ಗಾತ್ರದಿಂದಾಗಿ ಈ ಶಿಶು ಬದುಕುಳಿಯುವುದಿಲ್ಲ ಎಂದು ವೈದ್ಯರು ಮಾರ್ಗರೆಟ್ಗೆ ತಿಳಿಸಿದ್ದರು.

 

ಸ್ಯಾಕ್ರೋಕೊಸಿಜೀಲ್ ಟೆರಾಟೋಮಾ ಎಂದು ವೈದ್ಯಕೀಯ ಭಾಷೆಯಲ್ಲಿ ಹಣೆಪಟ್ಟಿ ಅಂಟಿಸಿಕೊಂಡಿದ್ದ ಈ ಟ್ಯೂಮರ್ ಭ್ರೂಣದಿಂದ ರಕ್ತವನ್ನು ಸೆಳೆಯುತ್ತಿತ್ತು ಮತ್ತು ಇದರಿಂದಾಗಿ ಹೃದಯಾಘಾತದ ಅಪಾಯ ಹೆಚ್ಚಾಗಿತ್ತು.

ಅದು ಎಂತಹ ಬಿಕ್ಕಟ್ಟನ್ನು ಸೃಷ್ಟಿಸಿತ್ತೆಂದರೆ ವೈದ್ಯರು ಕಾಯುವಂತಿರಲಿಲ್ಲ, ಶಿಶು ಬದುಕುಳಿಯಬೇಕೆಂದರೆ ಅವರು ತಕ್ಷಣವೇ ಶಸ್ತ್ರಚಿಕಿತ್ಸೆಯನ್ನು ನಡೆಸಲೇಬೇಕಾಗಿತ್ತು.

ವೈದ್ಯರ ತಂಡ ಶಿಶುವನ್ನು ತಾಯಿಯ ಗರ್ಭಕೋಶದಿಂದ ಹೊರಗೆ ತೆಗೆದಿದ್ದರು. ಐದು ಗಂಟೆಗಳ ಸುದೀರ್ಘ ಅವಧಿಯ ಶಸ್ತ್ರಚಿಕಿತೆಯನ್ನು ನಡೆಸುತ್ತಿದ್ದಾಗ ಮಗುವಿನ ಸಾವು-ಬದುಕಿನ ಸಾಧ್ಯತೆ 50:50ರಷ್ಟಿತ್ತು.

ಪೂರ್ತಿ 20 ನಿಮಿಷಗಳ ಕಾಲ ಶಿಶು ತಾಯಿಯ ಶರೀರದಿಂದ ಹೊರಗಿತ್ತು ಮತ್ತು ಟ್ಯೂಮರ್ನ್ನು ಬೇರ್ಪಡಿಸಿದಾಗ ಅದರ ತೂಕ ಕೇವಲ ಒಂದು ಪೌಂಡ್ ಮೂರು ಔನ್ಸ್ ಅಂದರೆ 538.64 ಗ್ರಾಮ್ಗಳಷ್ಟಿತ್ತು. ಶಸ್ತ್ರಚಿಕಿತ್ಸೆ ಪೂರ್ಣಗೊಂಡ ಬಳಿಕ ಭ್ರೂಣವನ್ನು ಅತ್ಯಂತ ಎಚ್ಚರಿಕೆಯಿಂದ ತಾಯಿಯ ಗರ್ಭಾಶಯದಲ್ಲಿ ಮರು ಸ್ಥಾಪಿಸಲಾಗಿತ್ತು.

ಮೂರು ತಿಂಗಳುಗಳ ಬಳಿಕ ಸಿಸೇರಿಯನ್ ಶಸ್ತ್ರಚಿಕಿತ್ಸೆಯ ಮೂಲಕ ಲಿನ್ಲೀ ಎರಡನೇ ಬಾರಿ, ಅಂದರೆ ಈ ಬಾರಿ ಅಧಿಕೃತವಾಗಿ ಜನಿಸಿದಾಗ ಐದು ಪೌಂಡ್ ಐದು ಔನ್ಸ್(2.410 ಕೆ.ಜಿ) ತೂಗುತ್ತಿದ್ದಳು.

ಈಗ ಒಂದು ವರ್ಷ ಪ್ರಾಯವಾಗಿರುವ ಲಿನ್ಲೀ ಯಾವುದೇ ಆರೋಗ್ಯ ಸಮಸ್ಯೆಯಲ್ಲದೆ ಸೊಂಪಾಗಿ ಬೆಳೆಯುತ್ತಿದ್ದಾಳೆ. ತನ್ನ ಮಗು ಎಷ್ಟೊಂದು ಜಾಣೆಯಾಗಿದ್ದಾಳೆ ಎಂದು ತಾಯಿ ಮಾರ್ಗರೆಟ್ಗೆ ಹೆಮ್ಮೆಯೋ ಹೆಮ್ಮೆ.

ಅವಳು ನಡೆಯುವುದನ್ನು ಮತ್ತು ಓಡುವುದನ್ನು ಇಷ್ಟಪಡುತ್ತಾಳೆ. ಇದೊಂದು ದೊಡ್ಡ ಪವಾಡವಾಗಿದೆ. ಅವಳು ನಮ್ಮ ಪಾಲಿಗೆ ಅದ್ಭುತ ಆನಂದವಾಗಿದ್ದಾಳೆ ಎನ್ನುತ್ತಾಳೆ ಆಕೆ.

ವರ್ಷದಲ್ಲಿ ಎರಡು ಬಾರಿ ಹುಟ್ಟುಹಬ್ಬ ಆಚರಿಸುತ್ತಿರುವ ಲಿನ್ಲೀಯ ಭವಿಷ್ಯ ಉಜ್ವಲವಾಗಿದೆ. ಆಕೆ ತನ್ನ ಮನಸ್ಸಿಗೆ ಬಂದಿದ್ದನ್ನು ಮಾಡಲಿ, ಅವಳಿಗೆ ಯಾವುದೇ ಮಿತಿಯಿಲ್ಲ ಎನ್ನುತ್ತಾಳೆ ಮಾರ್ಗರೆಟ್.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸಿನಿಮಾ

    ವಿಡಿಯೋದಲ್ಲಿ ಬಟ್ಟೆ ಬಿಚ್ಚಿ ಶ್ರಿರೆಡ್ಡಿಗೆ ಕೌಂಟರ್ ಕೊಟ್ಟ ಕನ್ನಡದ ನಟಿ..!ಯಾರು?ಏಕೆ ಗೊತ್ತಾ.?ತಿಳಿಯಲು ಈ ಲೇಖನ ಓದಿ…

    *ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ* ಕೆಲವು ದಿನಗಳ ಹಿಂದಯೇ ನಟಿ ಶ್ರೀರೆಡ್ಡಿ,  ತೆಲುಗು ಚಿತ್ರರಂಗದಲ್ಲಿ ನಡೆಯುತ್ತಿರುವ ಬೆಳವಣಿಗೆ ಕುರಿತಾಗಿ ಹೇಳಿಕೆ ನೀಡಿದ್ದರು. ‘ನೇನು ನಾನಾ ಅಪದ್ಧಂ’ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿರುವ ಶ್ರೀರೆಡ್ಡಿ, ಮಂಚ ಹಂಚಿಕೊಳ್ಳಲು ಸಿದ್ಧವಿರುವವರಿಗೆ ಮಾತ್ರ ಚಾನ್ಸ್ ಕೊಡಲಾಗ್ತಿದೆ ಎಂದು ಗಂಭೀರ ಆರೋಪ ಮಾಡಿದ್ದರು. ಇದಲ್ಲದೆ ತೆಲುಗು ಸಿನಿಮ ಕಲಾವಿದರ ಸಂಘದಿಂದ ಗುರುತಿನ ಚೀಟಿ ನೀಡದ ಸಂಭಂದ ಶ್ರೀರೆಡ್ಡಿ,ಹೈದರಾಬಾದ್’ನ ಫಿಲ್ಮ್ ಚೇಂಬರ್ ಎದುರು ಬೆತ್ತಲೆಯಾಗಿ ಪ್ರತಿಭಟನೆ ನಡೆಸಿ ವಿವಾದವಾಗಿದ್ದರು. ಶ್ರಿರೆಡ್ಡಿಗೆ ಕೌಂಟರ್ ಕೊಡಲು ಬಟ್ಟೆ…

  • ಸಿನಿಮಾ, ಸುದ್ದಿ

    ಅಪಘಾತವಾಗಿ 40 ನಿಮಿಷಗಳ ಕಾಲ ವಿಲವಿಲ ಎಂದು ಒದ್ದಾಡಿ ನಿಧನ ಹೊಂದಿದ ನಟ ಸುನಿಲ್.!

    ಹುಡುಗಿಯರ ಎದೆಗೆ ಕನ್ನ ಹಾಕಿದ ಚಾಕ್ಲೇಟ್ ಹೀರೋ. ತನ್ನ ಮುದ್ದು ಮುಖದ ಚೆಲುವಿನಿಂದ ಹುಡುಗಿಯರ ನಿದ್ದೆ ಕದ್ದ ಚೋರನೀತ. ಹುಡುಗ ಅಂದ್ರೆ ಇವನ ತರ ಸುಂದರವಾಗಿರಬೇಕು ಅಂತ ಹುಡುಗಿಯರ ಮನದಲ್ಲಿ ಆಸೆ ಹುಟ್ಟಿಸಿದವ. ಅವನೇ ಸುನಿಲ್. ಬೆಳ್ಳಿಕಾಲುಂಗುರ ಸುನಿಲ್ ಅಂತಾನೆ ಇವತ್ತಿಗೂ ಫೇಮಸ್. ಮಂಗಳೂರು ಮೂಲದವರಾದ ಸುನೀಲ್ 1991 ರಲ್ಲಿ ಚಿತ್ರರಂಗಕ್ಕೆ ದ್ವಾರಕೀಶ್ ಅವರ ನಿರ್ದೇಶನದ ಶ್ರುತಿ ಚಿತ್ರದ ಮೂಲಕ ಎಂಟ್ರಿ ಕೊಡ್ತಾರೆ. ನಂತರ ಕನಸಿನ ರಾಣಿ ಮಾಲಾಶ್ರಿ ಜೊತೆ ಅನೇಕ ಚಿತ್ರಗಳಲ್ಲಿ ನಟಿಸುತ್ತಾರೆ. ತೊಂಬತ್ತರ ದಶಕದಲ್ಲಿ…

  • Health

    ಕಿತ್ತಳೆ ಹಣ್ಣು ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳು!!

    ಕಿತ್ತಳೆ ಒಂದು ರೀತಿಯ ಕಡಿಮೆ ಕ್ಯಾಲೋರಿ, ಹೆಚ್ಚು ಪೌಷ್ಟಿಕ ಸಿಟ್ರಸ್ ಹಣ್ಣು. ಆರೋಗ್ಯಕರ ಮತ್ತು ವೈವಿಧ್ಯಮಯ ಆಹಾರದ ಭಾಗವಾಗಿ, ಕಿತ್ತಳೆ ಹಣ್ಣುಗಳು ಬಲವಾದ, ಸ್ಪಷ್ಟವಾದ ಚರ್ಮಕ್ಕೆ ಕೊಡುಗೆ ನೀಡುತ್ತವೆ ಮತ್ತು ವ್ಯಕ್ತಿಯ ಅನೇಕ ಪರಿಸ್ಥಿತಿಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕಿತ್ತಳೆ ಹಣ್ಣುಗಳು ಅವುಗಳ ನೈಸರ್ಗಿಕ ಮಾಧುರ್ಯ, ಲಭ್ಯವಿರುವ ಹಲವು ವಿಧಗಳು ಮತ್ತು ಬಳಕೆಯ ವೈವಿಧ್ಯತೆಯಿಂದಾಗಿ ಜನಪ್ರಿಯವಾಗಿವೆ. ಉದಾಹರಣೆಗೆ, ಒಬ್ಬ ವ್ಯಕ್ತಿಯು ಅವುಗಳನ್ನು ರಸ ಮತ್ತು ಮಾರ್ಮಲೇಡ್‌ಗಳಲ್ಲಿ ಸೇವಿಸಬಹುದು, ಅವುಗಳನ್ನು ಸಂಪೂರ್ಣವಾಗಿ ತಿನ್ನಬಹುದು, ಅಥವಾ ಕೇಕ್…

  • ಸುದ್ದಿ

    ಚಿಕಿತ್ಸೆ ಹೆಸರಿನಲ್ಲಿ ವೈದ್ಯ ಮಾಡ್ತಿದ್ದ ಕೊಳಕು ಕೆಲಸ…!

    ಮುಂಬೈನ ಓಶಿವಾರ ಪೊಲೀಸರು ವೈದ್ಯನೊಬ್ಬನನ್ನು ಬಂಧಿಸಿದ್ದಾರೆ. ಚಿಕಿತ್ಸೆ ಸ್ಥಳದಲ್ಲಿ ವೈದ್ಯ ಕ್ಯಾಮರಾ ಇಟ್ಟಿದ್ದನೆಂದು ಮಹಿಳೆ ಆರೋಪ ಮಾಡಿದ್ದಾಳೆ. ಮಹಿಳೆ ಕೂದಲು ತೆಗೆಸಿಕೊಳ್ಳಲು ಮುಂದಾಗಿದ್ದಳಂತೆ. ಇದೇ ಕಾರಣಕ್ಕೆ ಆಸ್ಪತ್ರೆಗೆ ಹೋಗಿದ್ದಾಳೆ. ಚಿಕಿತ್ಸಾ ಸ್ಥಳದಲ್ಲಿ ವೈದ್ಯರ ಜೊತೆ ಮೂವರು ಸಹಾಯಕರು ಇದ್ದರು ಎನ್ನಲಾಗಿದೆ. ಚಿಕಿತ್ಸೆ ವೇಳೆ ಮಹಿಳೆ ಬಟ್ಟೆ ಬಿಚ್ಚುತ್ತಿದ್ದಂತೆ ಮುಂದಿದ್ದ ಕ್ಯಾಮರಾ ಕಣ್ಣಿಗೆ ಬಿದ್ದಿದೆ. ತಕ್ಷಣ ಆ ಕ್ಯಾಮರಾ ಫೋಟೋವನ್ನು ಸೆರೆ ಹಿಡಿದ ಮಹಿಳೆ ಅಲ್ಲಿಂದ ಹೊರಗೆ ಬಂದಿದ್ದಾಳೆ. ಹದಿನೈದು ದಿನಗಳಿಗೊಮ್ಮೆ ಕ್ಯಾಮರಾದಲ್ಲಿರುವ ತುಣುಕುಗಳು ಸ್ವಯಂಚಾಲಿತವಾಗಿ ಅಳಿಸಿ ಹೋಗುತ್ತವೆ…

  • ಉಪಯುಕ್ತ ಮಾಹಿತಿ

    ಜೇನು ತುಪ್ಪದಲ್ಲಿದೆ ಔಷದಕಾರಿ ಗುಣಗಳು..!ತಿಳಿಯಲು ಈ ಲೇಖನ ಓದಿ ..

    ನಿಸರ್ಗ ನಮಗೆ ನೀಡಿದ ಒಂದು ವರ ಈ ಜೇನು ತುಪ್ಪ ಎಂದರೆ ತಪ್ಪಾಗಲಾರದು. ಜಗತ್ತಿನಲ್ಲಿ ಮಧು ಅರ್ಥಾತ್ ಜೇನುತುಪ್ಪ ಪರಮ ಪವಿತ್ರವಾದ ಸರ್ವೋಪಯೋಗಿಯಾದ ಮತ್ತು ಮಹತ್ವಪೂರ್ಣವಾದ ದಿವ್ಯ ಪದಾರ್ಥವಾಗಿದೆ.

  • ಉಪಯುಕ್ತ ಮಾಹಿತಿ

    ವೀಳ್ಯದೆಲೆಯಾ ಬಗ್ಗೆ ನಿಮ್ಗೆ ಗೊತ್ತಿಲ್ಲದಿರೋ ಮಾಹಿತಿ…ತಿಳಿಯಲು ಈ ಲೇಖನ ಓದಿ ಮತ್ತು ಮರೆಯದೇ ಶೇರ್ ಮಾಡಿ..

    ವೀಳ್ಯದೆಲೆ ಎಂದರೆ ನೆನಪಾಗುವುದು ತಾಂಬೂಲ. ಎಲ್ಲಾ ಶುಭ ಸಮಾರಂಭದಲ್ಲಿ ಹೆಚ್ಚು ಬಳಸುವ ಎಲೆ.ತಾಂಬೂಲದಲ್ಲಿ ಪ್ರಮುಖ ಸ್ಥಾನ ಹೊಂದಿರುವ ವೀಳ್ಯದೆಲೆಗೆ ಸದಾ ಬೇಡಿಕೆ ಇದೆ. ನಿಶ್ಚಿತಾರ್ಥ, ಮದುವೆ, ಮುಂಜಿ, ವ್ರತ ಹೀಗೆ ಏನೇ ಮಂಗಳ ಕಾರ್ಯಗಳಿದ್ದರೂ ವೀಳ್ಯದೆಲೆ ಬೇಕೇ ಬೇಕು. ಊಟದ ನಂತರ ತಾಂಬೂಲ ಹಾಕಿಕೊಳ್ಳಲಂತೂ ಈ ಎಲೆ ಅತ್ಯಗತ್ಯ.ಆದರೆ ಸಾಂಪ್ರದಾಯಕವಾಗಷ್ಟೆ ಅಲ್ಲ, ಇದರ ಔಷಧೀಯ ಗುಣಗಳು ಕೂಡ ಹಲವು. ಆದರೆ ರಕ್ತಸ್ರಾವ, ಪಿತ್ತದಿಂದ ತಲೆ ಸುತ್ತು ಹಾಗೂ ತಿವಿದ ಗಾಯವಾಗಿದ್ದರೆ ವೀಳ್ಯದೆಲೆಯನ್ನು ಸೇವಿಸಬಾರದು. ವೀಳ್ಯೆದೆಲೆಯನ್ನು ಹೆಚ್ಚಾಗಿ ಬಳಸಿದಲ್ಲಿ…