ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಒಂದು ವರ್ಷದ ಹಿಂದೆ ಅಧಿಕೃತವಾಗಿ ಈ ಧರೆಯಲ್ಲಿ ಅವತರಿಸಿರುವ ಪುಟ್ಟ ಬಾಲಕಿಯೀಗ ಆರೋಗ್ಯವಂತಳಾಗಿ ಬೆಳೆಯುತ್ತಿದ್ದಾಳೆ. ಇದರಲ್ಲೇನು ವಿಶೇಷ ಎನ್ನುತ್ತೀರಾ? ಈ ಮಗು ಎರಡು ಬಾರಿ ಜನಿಸಿದ್ದು, ಇದಕ್ಕಾಗಿ ಆಧುನಿಕ ವೈದ್ಯಕೀಯಕ್ಕೆ ಕೃತಜ್ಞತೆಗಳನ್ನು ಹೇಳಬೇಕಾಗಿದೆ.

ಅಮೆರಿಕದ ಹ್ಯೂಸ್ಟನ್ನಲ್ಲಿರುವ ಮಕ್ಕಳ ಆಸ್ಪತ್ರೆಯ ಸರ್ಜನ್ಗಳಾದ ಡ್ಯಾರೆಲ್ ಕಾಸ್ ಮತ್ತು ಒಲುಯಿಂಕ್ ಒಲ್ಟೊಯಿ ಅವರು ಕಳೆದ ವರ್ಷ ಸೋನೊಗ್ರಾಮ್ ಪರೀಕ್ಷೆಯಲ್ಲಿ ಆಗ ಕೇವಲ 23 ವಾರ ಪ್ರಾಯವಾಗಿದ್ದ ಲಿನ್ಲೀ ಹೋಪ್ಳ ಮಿದುಳು ಬಳ್ಳಿಯ ಬುಡದಲ್ಲಿ ಭಾರೀ ಗಡ್ಡೆಯೊಂದು ಬೆಳೆದಿರುವುದು ಪತ್ತೆಯಾದ ಬಳಿಕ ಆ ಶಿಶುವನ್ನು ತಾಯಿ ಮಾರ್ಗರೆಟ್ ಬೋಮರ್(38)ಳ ಗರ್ಭಕೋಶದಿಂದ ಹೊರಕ್ಕೆ ತೆಗೆದಿದ್ದರು. ಆಗ ಮೊದಲ ಬಾರಿಗೆ ಶಿಶು ಈ ಧರೆಗಿಳಿದಿತ್ತು.

ಅದು(ಗಡ್ಡೆ) ಹೆಚ್ಚುಕಡಿಮೆ ಇನ್ನೊಂದು ತಲೆಯಂತೆ ಕಾಣುತ್ತಿತ್ತು ಎಂದು ಮಾರ್ಗರೆಟ್ ನೆನಪಿಸಿಕೊಂಡಿದ್ದಾಳೆ.ಗರ್ಭಕೋಶದಲ್ಲಿನ ಶಿಶುವಿನ ಮಿದುಳು ಬಳ್ಳಿಯಲ್ಲಿದ್ದ ಗಡ್ಡೆ ಇನ್ನೂ ಬೆಳೆಯುತ್ತಲೇ ಇತ್ತು. ಗಡ್ಡೆಯ ಬೃಹತ್ ಗಾತ್ರದಿಂದಾಗಿ ಈ ಶಿಶು ಬದುಕುಳಿಯುವುದಿಲ್ಲ ಎಂದು ವೈದ್ಯರು ಮಾರ್ಗರೆಟ್ಗೆ ತಿಳಿಸಿದ್ದರು.
ಸ್ಯಾಕ್ರೋಕೊಸಿಜೀಲ್ ಟೆರಾಟೋಮಾ ಎಂದು ವೈದ್ಯಕೀಯ ಭಾಷೆಯಲ್ಲಿ ಹಣೆಪಟ್ಟಿ ಅಂಟಿಸಿಕೊಂಡಿದ್ದ ಈ ಟ್ಯೂಮರ್ ಭ್ರೂಣದಿಂದ ರಕ್ತವನ್ನು ಸೆಳೆಯುತ್ತಿತ್ತು ಮತ್ತು ಇದರಿಂದಾಗಿ ಹೃದಯಾಘಾತದ ಅಪಾಯ ಹೆಚ್ಚಾಗಿತ್ತು.
ಅದು ಎಂತಹ ಬಿಕ್ಕಟ್ಟನ್ನು ಸೃಷ್ಟಿಸಿತ್ತೆಂದರೆ ವೈದ್ಯರು ಕಾಯುವಂತಿರಲಿಲ್ಲ, ಶಿಶು ಬದುಕುಳಿಯಬೇಕೆಂದರೆ ಅವರು ತಕ್ಷಣವೇ ಶಸ್ತ್ರಚಿಕಿತ್ಸೆಯನ್ನು ನಡೆಸಲೇಬೇಕಾಗಿತ್ತು.
ವೈದ್ಯರ ತಂಡ ಶಿಶುವನ್ನು ತಾಯಿಯ ಗರ್ಭಕೋಶದಿಂದ ಹೊರಗೆ ತೆಗೆದಿದ್ದರು. ಐದು ಗಂಟೆಗಳ ಸುದೀರ್ಘ ಅವಧಿಯ ಶಸ್ತ್ರಚಿಕಿತೆಯನ್ನು ನಡೆಸುತ್ತಿದ್ದಾಗ ಮಗುವಿನ ಸಾವು-ಬದುಕಿನ ಸಾಧ್ಯತೆ 50:50ರಷ್ಟಿತ್ತು.

ಪೂರ್ತಿ 20 ನಿಮಿಷಗಳ ಕಾಲ ಶಿಶು ತಾಯಿಯ ಶರೀರದಿಂದ ಹೊರಗಿತ್ತು ಮತ್ತು ಟ್ಯೂಮರ್ನ್ನು ಬೇರ್ಪಡಿಸಿದಾಗ ಅದರ ತೂಕ ಕೇವಲ ಒಂದು ಪೌಂಡ್ ಮೂರು ಔನ್ಸ್ ಅಂದರೆ 538.64 ಗ್ರಾಮ್ಗಳಷ್ಟಿತ್ತು. ಶಸ್ತ್ರಚಿಕಿತ್ಸೆ ಪೂರ್ಣಗೊಂಡ ಬಳಿಕ ಭ್ರೂಣವನ್ನು ಅತ್ಯಂತ ಎಚ್ಚರಿಕೆಯಿಂದ ತಾಯಿಯ ಗರ್ಭಾಶಯದಲ್ಲಿ ಮರು ಸ್ಥಾಪಿಸಲಾಗಿತ್ತು.
ಮೂರು ತಿಂಗಳುಗಳ ಬಳಿಕ ಸಿಸೇರಿಯನ್ ಶಸ್ತ್ರಚಿಕಿತ್ಸೆಯ ಮೂಲಕ ಲಿನ್ಲೀ ಎರಡನೇ ಬಾರಿ, ಅಂದರೆ ಈ ಬಾರಿ ಅಧಿಕೃತವಾಗಿ ಜನಿಸಿದಾಗ ಐದು ಪೌಂಡ್ ಐದು ಔನ್ಸ್(2.410 ಕೆ.ಜಿ) ತೂಗುತ್ತಿದ್ದಳು.
ಈಗ ಒಂದು ವರ್ಷ ಪ್ರಾಯವಾಗಿರುವ ಲಿನ್ಲೀ ಯಾವುದೇ ಆರೋಗ್ಯ ಸಮಸ್ಯೆಯಲ್ಲದೆ ಸೊಂಪಾಗಿ ಬೆಳೆಯುತ್ತಿದ್ದಾಳೆ. ತನ್ನ ಮಗು ಎಷ್ಟೊಂದು ಜಾಣೆಯಾಗಿದ್ದಾಳೆ ಎಂದು ತಾಯಿ ಮಾರ್ಗರೆಟ್ಗೆ ಹೆಮ್ಮೆಯೋ ಹೆಮ್ಮೆ.

ಅವಳು ನಡೆಯುವುದನ್ನು ಮತ್ತು ಓಡುವುದನ್ನು ಇಷ್ಟಪಡುತ್ತಾಳೆ. ಇದೊಂದು ದೊಡ್ಡ ಪವಾಡವಾಗಿದೆ. ಅವಳು ನಮ್ಮ ಪಾಲಿಗೆ ಅದ್ಭುತ ಆನಂದವಾಗಿದ್ದಾಳೆ ಎನ್ನುತ್ತಾಳೆ ಆಕೆ.
ವರ್ಷದಲ್ಲಿ ಎರಡು ಬಾರಿ ಹುಟ್ಟುಹಬ್ಬ ಆಚರಿಸುತ್ತಿರುವ ಲಿನ್ಲೀಯ ಭವಿಷ್ಯ ಉಜ್ವಲವಾಗಿದೆ. ಆಕೆ ತನ್ನ ಮನಸ್ಸಿಗೆ ಬಂದಿದ್ದನ್ನು ಮಾಡಲಿ, ಅವಳಿಗೆ ಯಾವುದೇ ಮಿತಿಯಿಲ್ಲ ಎನ್ನುತ್ತಾಳೆ ಮಾರ್ಗರೆಟ್.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮ್ಯಾನ್ಮಾರ್ನಲ್ಲಿ ಹೆಚ್ಚುತ್ತಿರುವ ರೊಹಿಂಗ್ಯಾ ವಿರೋಧಿ ಹಿಂಸಾಚಾರದಿಂದ ಕಂಗೆಟ್ಟಿರುವ ರೊಹಿಂಗ್ಯಾ ಮುಸ್ಲಿಮರು ಪ್ಲಾಸ್ಟಿಕ್ ಡಬ್ಬಗಳನ್ನು ಬಳಸಿ ಸಮುದ್ರ ದಾಟಿ ಬಾಂಗ್ಲಾದೇಶಕ್ಕೆ ಬರುತ್ತಿದ್ದಾರೆ.
ದೇಹದಲ್ಲಿ ಬಿಸಿಯಾಗಲು ಮತ್ತು ಶರೀರ ತಾಪಮಾನ ಏರಿಕೆಗೆ ಹಲವು ಕಾರಣಗಳಿವೆ. ನಿಮ್ಮ ಸುತ್ತಲಿನ ಪರಿಸರದ ಕಾರಣದಿಂದಾಗಿ ನಿಮ್ಮ ದೇಹದಲ್ಲಿನ ಶಾಖಕ್ಕೆ ಕಾರಣ.
ಬಾಳೆ ಹಣ್ಣು ಯಾರು ತಾನೇ ತಿನ್ನಲ್ಲ ಹೇಳಿ, ಚಿಕ್ಕ ಮಕ್ಕಳಿಂದ ಹಿಡಿದು ಮುದುಕರ ವರೆಗೂ ಬಾಳೆ ಹಣ್ಣನ್ನ ತಿನ್ನುತ್ತಾರೆ, ಬಾಳೆ ಹಣ್ಣಿನಲ್ಲಿ ಸುಕ್ರೋಸ್, ಫ್ರಕ್ಟೋಸ್ ಮತ್ತು ಗ್ಲೋಕೋಸ್ ಎಂಬ ಮೂರು ರೀತಿಯ ಸಕ್ಕರೆ ಅಂಶಗಳನ್ನು ಒಳಗೊಂಡ ಪೈಬರ್ ಇವೆ, ಬಾಳೆಹಣ್ಣು ತ್ವರಿತ ನಿರಂತರ ಮತ್ತು ಗಮನಾರ್ಹ ಶಕ್ತಿ ನೀಡುತ್ತದೆ. ಎರಡು ಬಾಳೆಹಣ್ಣು ತಿಂದರೆ 90 ನಿಮಿಷ ಶ್ರಮದಾಯಕ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ಅಧ್ಯನದಿಂದ ತಿಳಿದು ಬಂದಿದೆ, ವಿಶ್ವದ ಪ್ರಮುಖ ಕ್ರೀಡಾ ಪಟುಗಳು ಸೇವಿಸುವ ಹಣ್ಣುಗಳ ಪೈಕಿ…
ಪ್ರಸ್ತುತ ನಾವೆಲ್ಲರೂ ಇರುವುದು ಕಲಿಯುಗದಲ್ಲಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಈ ಯುಗದಲ್ಲೇ ಯುಗಾಂತ್ಯವಾಗುತ್ತದೆ ಎಂದು ಪುರಾಣಗಳು ಹೇಳುತ್ತಿವೆ. ಕಲಿಯುಗದಲ್ಲಿ ಮನುಷ್ಯರು ಉನ್ನತ ಸ್ಥಾನಕ್ಕೆ ಸೇರಿಕೊಳ್ಳಲು ವಿಧವಿಧವಾಗಿ ಪ್ರಯತ್ನಿಸುತ್ತಾರೆಂದು, ಅಗತ್ಯ ಬಿದ್ದರೆ ಅಡ್ಡದಾರಿ ಸಹ ತುಳಿಯುತ್ತಾರೆ, ವಯಸ್ಸು, ಎತ್ತರ, ಬಲ, ಜ್ಞಾನ, ಆಕರ್ಷಣೆಯಂತಹವು ಬರುಬರುತ್ತಾ ಕಲಿಯುಗದಲ್ಲಿ ಕಡಿಮೆಯಾಗುತ್ತವೆ ಎಂದು ಪುರಾಣಗಳು ಹೇಳುತ್ತಿವೆ. ಅವೆಲ್ಲಾ ನಡೆಯುತ್ತಿರುವುದನ್ನು ನೋಡುತ್ತಿದ್ದೇವೆ.
ಮೊಟ್ಟಮೊದಲನೆಯದಾಗಿ ಕಿಟ್ಟೆಲ್ಲರು ಇಂದಿಗೂ ‘ಅವಿಸ್ಮರಣೀಯರಾಗಿರುವುದು’ ಅವರ ಕಿಟ್ಟೆಲ್ ಶಬ್ದಕೋಶದಿಂದ. ಸುಮಾರು ೨೦ ವರ್ಷಗಳಕಾಲ ಸತತವಾಗಿ ದುಡಿದಿದ್ದರ ಪರಿಣಾಮ – ಈ ಅಮರ ಕೃತಿಯ ನಿರ್ಮಾಣ. ಅವರು ೧೮೫೭ ರಲ್ಲಿ ಮೊದಲುಮಾಡಿ, ೧೮೯೩ ರಲ್ಲಿ ಹಸ್ತಪ್ರತಿ ತಯಾರಿಸಿದರು. ಅದನ್ನು ‘ಬಾಸೆಲ್ ಮಿಶನ್’ ನವರು ಪ್ರಕಟಿಸಿದರು.
ಅಕ್ಟೋಬರ್ ನಲ್ಲಿ ಹಬ್ಬದ ಕಾರಣ ರಜೆ ಇರುವುದರಿಂದ ಬ್ಯಾಂಕ್ ವಹಿವಾಟುಗಳಿಗೆ ಸಮಸ್ಯೆಯಾಗುವ ಸಾಧ್ಯತೆ ಇದೆ. ಅಕ್ಟೋಬರ್ ತಿಂಗಳಿನಲ್ಲಿ ಬ್ಯಾಂಕ್ ಗಳಿಗೆ ಬರೋಬ್ಬರಿ 11 ದಿನ ರಜೆ ಇದೆ. ದಸರಾ ನಂತರ ದೀಪಾವಳಿ ಇರುವುದರಿಂದ ಬ್ಯಾಂಕ್ 11 ದಿನ ಕೆಲಸ ಮಾಡುವುದಿಲ್ಲ. ಆರ್.ಬಿ.ಐ. ವತಿಯಿಂದ ಬ್ಯಾಂಕ್ ರಜಾ ದಿನದ ಪಟ್ಟಿ ಬಿಡುಗಡೆ ಮಾಡಲಾಗಿದೆ. ಅಕ್ಟೋಬರ್ 2 ರಂದು ಗಾಂಧಿ ಜಯಂತಿ. ಅಕ್ಟೋಬರ್ 6 ಭಾನುವಾರ. ಅಕ್ಟೋಬರ್ 7 ನವಮಿ. ಅಕ್ಟೋಬರ್ 8 ರಂದು ದಶಮಿ. ಹಾಗಾಗಿ 3 ದಿನ…