ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಒಂದು ವರ್ಷದ ಹಿಂದೆ ಅಧಿಕೃತವಾಗಿ ಈ ಧರೆಯಲ್ಲಿ ಅವತರಿಸಿರುವ ಪುಟ್ಟ ಬಾಲಕಿಯೀಗ ಆರೋಗ್ಯವಂತಳಾಗಿ ಬೆಳೆಯುತ್ತಿದ್ದಾಳೆ. ಇದರಲ್ಲೇನು ವಿಶೇಷ ಎನ್ನುತ್ತೀರಾ? ಈ ಮಗು ಎರಡು ಬಾರಿ ಜನಿಸಿದ್ದು, ಇದಕ್ಕಾಗಿ ಆಧುನಿಕ ವೈದ್ಯಕೀಯಕ್ಕೆ ಕೃತಜ್ಞತೆಗಳನ್ನು ಹೇಳಬೇಕಾಗಿದೆ.

ಅಮೆರಿಕದ ಹ್ಯೂಸ್ಟನ್ನಲ್ಲಿರುವ ಮಕ್ಕಳ ಆಸ್ಪತ್ರೆಯ ಸರ್ಜನ್ಗಳಾದ ಡ್ಯಾರೆಲ್ ಕಾಸ್ ಮತ್ತು ಒಲುಯಿಂಕ್ ಒಲ್ಟೊಯಿ ಅವರು ಕಳೆದ ವರ್ಷ ಸೋನೊಗ್ರಾಮ್ ಪರೀಕ್ಷೆಯಲ್ಲಿ ಆಗ ಕೇವಲ 23 ವಾರ ಪ್ರಾಯವಾಗಿದ್ದ ಲಿನ್ಲೀ ಹೋಪ್ಳ ಮಿದುಳು ಬಳ್ಳಿಯ ಬುಡದಲ್ಲಿ ಭಾರೀ ಗಡ್ಡೆಯೊಂದು ಬೆಳೆದಿರುವುದು ಪತ್ತೆಯಾದ ಬಳಿಕ ಆ ಶಿಶುವನ್ನು ತಾಯಿ ಮಾರ್ಗರೆಟ್ ಬೋಮರ್(38)ಳ ಗರ್ಭಕೋಶದಿಂದ ಹೊರಕ್ಕೆ ತೆಗೆದಿದ್ದರು. ಆಗ ಮೊದಲ ಬಾರಿಗೆ ಶಿಶು ಈ ಧರೆಗಿಳಿದಿತ್ತು.

ಅದು(ಗಡ್ಡೆ) ಹೆಚ್ಚುಕಡಿಮೆ ಇನ್ನೊಂದು ತಲೆಯಂತೆ ಕಾಣುತ್ತಿತ್ತು ಎಂದು ಮಾರ್ಗರೆಟ್ ನೆನಪಿಸಿಕೊಂಡಿದ್ದಾಳೆ.ಗರ್ಭಕೋಶದಲ್ಲಿನ ಶಿಶುವಿನ ಮಿದುಳು ಬಳ್ಳಿಯಲ್ಲಿದ್ದ ಗಡ್ಡೆ ಇನ್ನೂ ಬೆಳೆಯುತ್ತಲೇ ಇತ್ತು. ಗಡ್ಡೆಯ ಬೃಹತ್ ಗಾತ್ರದಿಂದಾಗಿ ಈ ಶಿಶು ಬದುಕುಳಿಯುವುದಿಲ್ಲ ಎಂದು ವೈದ್ಯರು ಮಾರ್ಗರೆಟ್ಗೆ ತಿಳಿಸಿದ್ದರು.
ಸ್ಯಾಕ್ರೋಕೊಸಿಜೀಲ್ ಟೆರಾಟೋಮಾ ಎಂದು ವೈದ್ಯಕೀಯ ಭಾಷೆಯಲ್ಲಿ ಹಣೆಪಟ್ಟಿ ಅಂಟಿಸಿಕೊಂಡಿದ್ದ ಈ ಟ್ಯೂಮರ್ ಭ್ರೂಣದಿಂದ ರಕ್ತವನ್ನು ಸೆಳೆಯುತ್ತಿತ್ತು ಮತ್ತು ಇದರಿಂದಾಗಿ ಹೃದಯಾಘಾತದ ಅಪಾಯ ಹೆಚ್ಚಾಗಿತ್ತು.
ಅದು ಎಂತಹ ಬಿಕ್ಕಟ್ಟನ್ನು ಸೃಷ್ಟಿಸಿತ್ತೆಂದರೆ ವೈದ್ಯರು ಕಾಯುವಂತಿರಲಿಲ್ಲ, ಶಿಶು ಬದುಕುಳಿಯಬೇಕೆಂದರೆ ಅವರು ತಕ್ಷಣವೇ ಶಸ್ತ್ರಚಿಕಿತ್ಸೆಯನ್ನು ನಡೆಸಲೇಬೇಕಾಗಿತ್ತು.
ವೈದ್ಯರ ತಂಡ ಶಿಶುವನ್ನು ತಾಯಿಯ ಗರ್ಭಕೋಶದಿಂದ ಹೊರಗೆ ತೆಗೆದಿದ್ದರು. ಐದು ಗಂಟೆಗಳ ಸುದೀರ್ಘ ಅವಧಿಯ ಶಸ್ತ್ರಚಿಕಿತೆಯನ್ನು ನಡೆಸುತ್ತಿದ್ದಾಗ ಮಗುವಿನ ಸಾವು-ಬದುಕಿನ ಸಾಧ್ಯತೆ 50:50ರಷ್ಟಿತ್ತು.

ಪೂರ್ತಿ 20 ನಿಮಿಷಗಳ ಕಾಲ ಶಿಶು ತಾಯಿಯ ಶರೀರದಿಂದ ಹೊರಗಿತ್ತು ಮತ್ತು ಟ್ಯೂಮರ್ನ್ನು ಬೇರ್ಪಡಿಸಿದಾಗ ಅದರ ತೂಕ ಕೇವಲ ಒಂದು ಪೌಂಡ್ ಮೂರು ಔನ್ಸ್ ಅಂದರೆ 538.64 ಗ್ರಾಮ್ಗಳಷ್ಟಿತ್ತು. ಶಸ್ತ್ರಚಿಕಿತ್ಸೆ ಪೂರ್ಣಗೊಂಡ ಬಳಿಕ ಭ್ರೂಣವನ್ನು ಅತ್ಯಂತ ಎಚ್ಚರಿಕೆಯಿಂದ ತಾಯಿಯ ಗರ್ಭಾಶಯದಲ್ಲಿ ಮರು ಸ್ಥಾಪಿಸಲಾಗಿತ್ತು.
ಮೂರು ತಿಂಗಳುಗಳ ಬಳಿಕ ಸಿಸೇರಿಯನ್ ಶಸ್ತ್ರಚಿಕಿತ್ಸೆಯ ಮೂಲಕ ಲಿನ್ಲೀ ಎರಡನೇ ಬಾರಿ, ಅಂದರೆ ಈ ಬಾರಿ ಅಧಿಕೃತವಾಗಿ ಜನಿಸಿದಾಗ ಐದು ಪೌಂಡ್ ಐದು ಔನ್ಸ್(2.410 ಕೆ.ಜಿ) ತೂಗುತ್ತಿದ್ದಳು.
ಈಗ ಒಂದು ವರ್ಷ ಪ್ರಾಯವಾಗಿರುವ ಲಿನ್ಲೀ ಯಾವುದೇ ಆರೋಗ್ಯ ಸಮಸ್ಯೆಯಲ್ಲದೆ ಸೊಂಪಾಗಿ ಬೆಳೆಯುತ್ತಿದ್ದಾಳೆ. ತನ್ನ ಮಗು ಎಷ್ಟೊಂದು ಜಾಣೆಯಾಗಿದ್ದಾಳೆ ಎಂದು ತಾಯಿ ಮಾರ್ಗರೆಟ್ಗೆ ಹೆಮ್ಮೆಯೋ ಹೆಮ್ಮೆ.

ಅವಳು ನಡೆಯುವುದನ್ನು ಮತ್ತು ಓಡುವುದನ್ನು ಇಷ್ಟಪಡುತ್ತಾಳೆ. ಇದೊಂದು ದೊಡ್ಡ ಪವಾಡವಾಗಿದೆ. ಅವಳು ನಮ್ಮ ಪಾಲಿಗೆ ಅದ್ಭುತ ಆನಂದವಾಗಿದ್ದಾಳೆ ಎನ್ನುತ್ತಾಳೆ ಆಕೆ.
ವರ್ಷದಲ್ಲಿ ಎರಡು ಬಾರಿ ಹುಟ್ಟುಹಬ್ಬ ಆಚರಿಸುತ್ತಿರುವ ಲಿನ್ಲೀಯ ಭವಿಷ್ಯ ಉಜ್ವಲವಾಗಿದೆ. ಆಕೆ ತನ್ನ ಮನಸ್ಸಿಗೆ ಬಂದಿದ್ದನ್ನು ಮಾಡಲಿ, ಅವಳಿಗೆ ಯಾವುದೇ ಮಿತಿಯಿಲ್ಲ ಎನ್ನುತ್ತಾಳೆ ಮಾರ್ಗರೆಟ್.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಮ್ಮ ಭಾರತೀಯ ಹಿಂದೂ ಸಂಪ್ರದಾಯದಲ್ಲಿ ದೇವರ ಪೂಜೆಗೆ, ವಿಶೇಷ ಸ್ಥಾನವಿದೆ. ಎಲ್ಲರೂ ಅವರವರ ಭಕ್ತಿಗೆ ತಕ್ಕಂತೆ ಪ್ರತಿದಿನ ಪೂಜೆ ಮಾಡುತ್ತಾರೆ. ಏಕೆಂದರೆ ಪ್ರತಿದಿನ ದೇವರ ಪೂಜೆ ಮಾಡೋದು ಶುಭ. ಅನೇಕರ ದಿನ ಆರಂಭವಾಗುವುದು ದೇವರ ಪೂಜೆ ಮೂಲಕ.
ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್,ಶಿವರಾಜ್ ಕುಮಾರ್ ನಂತರ ಕನ್ನಡದ ಮತ್ತೊಬ್ಬ ನಟ ಗೌರವ ಡಾಕ್ಟರೇಟ್ ಪಡೆಯಲಿದ್ದಾರೆ. ಅವರು ಬೇರೆ ಯಾರು ಅಲ್ಲ ಕ್ರೇಜಿ ಸ್ಟಾರ್ ರವಿ ಚಂದ್ರನ್. ಬೆಂಗಳೂರಿನ ಸಿ ಎಮ್ ಆರ್ ವಿಶ್ವ ವಿದ್ಯಾನಿಲಯ ರವಿ ಚಂದ್ರನ್ ರಿಗೆ ಗೌರವ ಡಾಕ್ಟರೇಟ್ ನೀಡುತ್ತಿದೆ. ಈ ಹಿಂದೆ ರವಿಚಂದ್ರನ್ ಅಭಿಮಾನಿಗಳು ತಮ್ಮ ಪ್ರೀತಿಯ ನಟನಿಗೆ ಡಾಕ್ಟರೇಟ್ ನೀಡಬೇಕು ಎಂದು ತಮ್ಮ ಆಸೆ ವ್ಯಕ್ತ ಪಡಿಸಿದ್ದರು. ಇದೀಗ ಅವರ ಬಯಕೆ ಈಡೇರಿದೆ. ನವೆಂಬರ್ 3 ರಂದು ದೊಡ್ಡ ಕಾರ್ಯಕ್ರಮದ ಮೂಲಕ…
ಇಂದು ಬುಧವಾರ, 21/02/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…
ನಮ್ಮ ಭಾರತದಲ್ಲಿ ಸುಧಾರಣೆಯಾಗುವುದು ತುಂಬಾನೇ ಇದೆ ಆದರೆ ಕೆಲವರು ಮಾತ್ರ ಅದನ್ನು ಸ್ವೀಕರಿಸಿ ಅದರ ಪಾಲನೆಯನ್ನು ಮಾಡುತ್ತಾರೆ. ಇನ್ನು ಕೆಲವರು ತಮ್ಮ ಹೊಟ್ಟೆ ಪಾಡಿಗಾಗಿಯೇ ಬದುಕುವ ಮಂದಿ ಹೆಚ್ಚು. ಸಮಾಜ ಸುಧಾರಣೆ ಮಾಡುವವರ ಸಂಖ್ಯೆ ಕಡಿಮೆ.
ಮನುಷ್ಯನ ದೇಹದ ರಚನೆ ಆತನ ಭವಿಷ್ಯವನ್ನು ಹೇಳುತ್ತದೆ. ನಮ್ಮ ಕೈ, ಕಾಲು ಸೇರಿದಂತೆ ದೇಹದ ಪ್ರತಿಯೊಂದು ಭಾಗವೂ ನಮ್ಮ ಜೀವನದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ನಮ್ಮ ಕೈ, ಕಾಲು, ಮಚ್ಚೆಯನ್ನೇ ನೋಡಿ ಪಂಡಿತರು ನಮ್ಮ ಭವಿಷ್ಯ ಹೇಳ್ತಾರೆ. ಸಾಮಾನ್ಯವಾಗಿ ಮನುಷ್ಯನ ಕೈ, ಕಾಲಿನ ಸೌಂದರ್ಯವನ್ನು ಉಗುರು ಹೆಚ್ಚಿಸುತ್ತದೆ. ಇದೇ ಕಾರಣಕ್ಕೆ ಮಹಿಳೆಯರು ಉಗುರಿನ ಸೌಂದರ್ಯಕ್ಕೆ ಹೆಚ್ಚಿನ ಗಮನ ನೀಡ್ತಾರೆ. ಉಗುರಿಗೆ ಚೆಂದದ ಆಕಾರ ನೀಡಿ, ಬಣ್ಣ ಹಚ್ಚಿಕೊಳ್ತಾರೆ. ಆದ್ರೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಉಗುರಿನ ಬಗ್ಗೆ ಬೇರೆಯದೇ ನಂಬಿಕೆಯಿದೆ….
ಬ್ರಹ್ಮಪುತ್ರದ ಉಪ ನದಿಯಾದ ಲೋಹಿತ ನದಿಗೆ ಅಡ್ಡವಾಗಿ ಅಸ್ಸಾಂನಲ್ಲಿ ನಿರ್ಮಿಸಿರುವ ದೇಶದ ಅತಿ ದೊಡ್ಡ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರಕ್ಕೆ ಸಮರ್ಪಿಸುವ ಜೊತೆಗೆ ಮೂರು ಯೋಜನೆಗಳಿಗೆ ಚಾಲನೆ ನೀಡಿದರು. ಈ ಮೂಲಕ ಸರ್ಕಾರದ ಮೂರು ವರ್ಷಗಳ ಸಂಭ್ರಮಾಚರಣೆಗೆ ಮೋದಿ ಅಧಿಕೃತ ಚಾಲನೆ ನೀಡಿದಂತಾಯಿತು.