ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ತುಂಬಾ ಸರ್ತಿ ಜೀವನದಲ್ಲಿ ನಮ್ಮನ್ನ ನಾವೇ ಕಡೆಗಾಣಿಸ್ಕೊತೀವಿ. ನಮ್ಮ ಮನೆಯೋರು ಕೂಡ ನಮ್ಮನ್ನ ಎಷ್ಟೋ ಸರ್ತಿ ನೀನು ಸೋಮಾರಿ, ಒಂದು ಕೆಲಸ ಕೂಡ ಗಮನ ಇಟ್ಟು ಮಾಡಲ್ಲಾ ಅಂತೆಲ್ಲಾ ಬೈತಿರ್ತರೆ.
ಆದ್ರೆ ತಮಾಷೆ ಏನಪ್ಪಾ ಅಂದ್ರೆ, ಇಲ್ಲಿರುವ ಕೆಲವು ಗುಣಗಳು ನಮ್ಮಲ್ಲಿದ್ರೆ, ವಿಜ್ಞಾನದ ಪ್ರಕಾರ ನಾವು ನಮಗಿಂತ, ನಾವಂದುಕೊಂಡಿರೋದಕ್ಕಿಂತ ಜಾಸ್ತಿ ಬುದ್ಧಿವಂತ್ರಂತೆ. ಅದು ಹೇಗೆ ಅಂತಿರಾ…..ಮುಂದೆ ಓದಿ
ನಿಮ್ಮಲ್ಲಿ ನೀವೂ ನಕ್ಕು, ನಿಮ್ಮ ಜೊತೆ ಇರೋರನ್ನೂ ನಗಿಸೊ ಸ್ವಭಾವ ಇದ್ದರೆ, ನಿಮ್ಮ ಮೆದುಳು ತುಂಬ ಚನ್ನಾಗಿ ಕೆಲಸ ಮಾಡುತ್ತೆ, ಚುರುಕಾಗಿದೆ ಅಂತ ಅರ್ಥ. 1990 ರಲ್ಲಿ ಮೈಕಲ್ ಎ. ಜಾನ್ ಹೇಳೊ ಪ್ರಕಾರ ನೀವು ಹಾಸ್ಯಭರಿತರಾಗಿದ್ರೆ, ನಿಮ್ಮಲ್ಲಿ ಪ್ರಾಬ್ಲಮ್ ಸಾಲ್ವಿಂಗ್ ಶಕ್ತಿ ಹೆಚ್ಚಂತೆ.
ನಿಮಗೆ ಎಲ್ಲರೂ ಟೆನ್ಷನ್ ಒಳ್ಳೇದಲ್ಲ ಅಂತ ಸುಮಾರ್ ಸರ್ತಿ ಹೇಳಿರ್ತಾರೆ. ಆದರೆ, ಸ್ಟ್ರೆಸ್ನ ಸರಿಯಾಗಿ ನಿಭಾಯಿಸಿದ್ರೆ ಅದರಿಂದ ತುಂಬ ಉಪಯೋಗ ಇದೆಯಂತೆ ಕಣ್ರಿ. ಈ ಸ್ಟ್ರೆಸ್ಸ್ ಲೆವಲ್ ಹಿತ – ಮಿತವಾಗಿದ್ರೆ, ನಮ್ಮ ಎಷ್ಟೋ ದಿನನಿತ್ಯದ ಕೆಲಸಗಳಿಗೆ ಸಹಾಯ ಆಗುತ್ತೆ. ಹಿಂಗೆ ಒಂದು ಸರ್ತಿ, ಇಸ್ರೇಲ್ ಅಲ್ಲಿ ಒಂದ್ಸಲ್ಪ ಜನಕ್ಕೆ ಕಂಪ್ಯೂಟರ್ ಲ್ಯಾಬಲ್ಲಿ ಏನೋ ನೋಡಿ ಅಂತ ಸುಳ್ಳು ಕಂಪ್ಯೂಟರ್ ವೈರಸ್ ಹಬ್ಬಿಸಿಬಿಟ್ರಂತೆ … ಅಲ್ಲಿದವ್ರು ಪಾಪ ಇದನ್ನ ತಾವೇ ಮಾಡಿದ್ದು ಅಂತ ಕಕ್ಕಾಬಿಕ್ಕಿ ಆಗಿ ಅದನ್ನ ಸರಿ ಮಾಡೋ ರೀತಿ ಯೋಚ್ಸಿದ್ರಂತೆ . ಆಗ ಸಂಶೋಧಕರು ಕಂಡು ಹಿಡಿದಿದ್ದೇನಪ್ಪಾ ಅಂದ್ರೆ, ಯಾರು ಟೆನ್ಷನ್ ಮಾಡ್ಕೊಂಡಿದ್ರೋ, ಅವರೇ ಚನ್ನಾಗಿ ಕೆಲಸ ಮುಗಿಸೋದು ಅಂತ. ವಿಚಿತ್ರ ಅಲ್ವಾ?
ನೀವು, ಸ್ಕೂಲು- ಕಾಲೇಜಲ್ಲಿ ನಾನು ಯಾವಾಗ್ಲೂ ಕನಸು ಕಾಣ್ತಾ ಲಾಸ್ಟ್ ಬೆಂಚಲ್ಲೇ ಉಳ್ಕೊಂಡ್ಬಿಟ್ಟೆ… ನನ್ನ ಲೈಫ್ ಏನಾಗತ್ತೋ ಅಂತ ಚಿಂತೆ ಮಾಡಿದ್ರೆ, ಇಲ್ಲಿದೆ ನಿಮ್ಗೊಂದು ಒಳ್ಳೆ ಸುದ್ದಿ. ವಿಜ್ಞಾನಿಗಳ ಪ್ರಕಾರ, ಒಂದು ಕೆಲಸ ಮಾಡೋವಾಗ ನಿಮ್ಮ ಗಮನ ಆ ಕಡೆ ಈ ಕಡೆ ಹೋದ್ರೆ, ಒಂದೇ ಸಲಕ್ಕೆ ನಿಮಗೆ ಒಂದಕ್ಕಿಂತ ಹೆಚ್ಚು ಕೆಲಸ ಮಾಡೊ ಶಕ್ತಿ ಇದೆ ಅಂತಂತೆ. ಹಾಗೇ, ಹಗಲುಗನಸು ಕಾಣೋರಿಗೆ, ನೆನಪಿನ ಶಕ್ತಿ ಜಾಸ್ತಿ .
ನಿಮ್ಮ ಕೈಲಿ ಒಂದು ಪುಸ್ತಕ ಇದ್ದುಬಿಟ್ರೆ, ಲೋಕಾನೇ ಮರೆತುಬಿಡ್ತೀರ…ಇದರ ಜೊತೆಗೆ ಸ್ವಲ್ಪ ಕಾಫಿ ಸಿಕ್ಕಿಬಿಟ್ರಂತೂ, ಸ್ವರ್ಗಕ್ಕೆ ಮೂರೇ ಮೆಟ್ಟಿಲು. ಮತ್ತೇನೂ ಬೇಡ, ಯಾರೂ ಬೇಡ ಅಲ್ವಾ?ನೀವು ನಿಮ್ಮ ಜೊತೇನೆ ಜಾಸ್ತಿ ಸಮಯ ಕಳೆಯಕ್ಕೆ ಇಷ್ಟ ಪಡ್ತೀರ. 90 % ಅಂತರ್ಮುಖಿಗಳಿಗೆ ಓದೋ ಹವ್ಯಾಸ ಉಂಟಂತೆ ಹಾಗೇ,ಯಾರು ಚಿಕ್ಕ ವಯಸ್ಸಿಂದ ಓದೋ ಹವ್ಯಾಸ ಬೆಳೆಸಿಕೊಂಡಿರ್ತಾರೋ ಅಂಥಾವರು, ಮುಂದೆ ಬುದ್ದಿವಂತರಾಗಿರ್ತಾರೆ ಮತ್ತು ತಮ್ಮನ್ನ ಚನ್ನಾಗಿ ವ್ಯಕ್ತಪಡಿಸಿಕೊಳ್ತಾರೆ.
ಎಡಚರಿಗೆ ವಿಭಿನ್ನವಾದ ಯೋಚನಾಶಕ್ತಿ ಇರುತ್ತಂತೆ. 90 ರ ದಶಕದಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ,ಎಡಗೈ ಉಪಯೋಗಿಸೋರ ಆಲೋಚನೆಗಳು ಡಿಫರೆಂಟಾಗಿ ಇರೋದ್ರಿಂದ ಅವರು ಎರಡು ಸಂಬಂಧ ಇಲ್ಲದಿರೊ ವಸ್ತುಗಳಲ್ಲೂ ಲಿಂಕ್ ಹುಡುಕ್ತಾರಂತೆ. ಇವರಲ್ಲಿ ಕ್ರಿಯಾಶೀಲತೆ ಜಾಸ್ತಿ ಮತ್ತು ಯಾವುದೇ ಸಮಸ್ಯೆ ಇದ್ದರೂ ಅದಕ್ಕೆ ಬೇಗ ಒಂದು ಉಪಾಯ ಕಂಡು ಹಿಡೀತಾರೆ.
… ಹಾಗಾದ್ರೆ ಈಗ ಹೇಳಿ ನೀವು ಬುದ್ದಿವಂತರಾ, ಅಲ್ವಾ
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕೊನೆಗೂ ಬಿಗ್ ಬಾಸ್ ಕನ್ನಡ ಸಂಚಿಕೆ 5 ಕಾರ್ಯಕ್ರಮಕ್ಕೆ ಭರ್ಜರಿಯಾಗಿ ತೆರೆ ಬಿದ್ದಿದೆ.ಈ ಸಲದ ಬಿಗ್ ಬಾಸ್ ಸಂಚಿಕೆಯಲ್ಲಿ ಕಾಮಾನ್ ಮ್ಯಾನ್’ಗೂ ಕೂಡ ಕಲರ್ಸ್ ಕನ್ನಡ ವಾಹಿನಿಯವರು ಅವಕಾಷ ಕೊಟ್ಟಿದ್ದರು.ಕಾಮಾನ್ ಮ್ಯಾನ್’ಗಳಾಗಿ ದಿವಾಕರ್,ಸಮೀರ್ ಆಚಾರ್ಯ ಮತ್ತು ರಿಯಾಜ್ ರವರು ಭಾಗವಹಿಸಿ
ಉದ್ಯೋಗದ ನಿರೀಕ್ಷೆಯಲ್ಲಿದ್ದ ಕನ್ನಡಿಗರಿಗೆ ಶುಭ ಸುದ್ದಿ ಇಲ್ಲಿದೆ. ಖಾಸಗಿ ವಲಯದ ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡುವ ಕುರಿತು ಅಧಿಸೂಚನೆ ಹೊರಬಿದ್ದಿದೆ. ಸರೋಜಿನಿ ಮಹಿಷಿ ವರದಿಯನ್ನು ಪರಿಷ್ಕರಿಸಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಹಿಂದಿನ ಸರ್ಕಾರದ ಬಜೆಟ್ ನಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡುವ ಬಗ್ಗೆ ಘೋಷಣೆ ಮಾಡಲಾಗಿತ್ತು. ನಂತರದಲ್ಲಿ ಚರ್ಚೆಗಳು ನಡೆದು ಅಧಿಸೂಚನೆ ಹೊರಡಿಸಲಾಗಿದೆ. ಅನೇಕ ಕೈಗಾರಿಕೋದ್ಯಮಿಗಳೊಂದಿಗೆ ಸರ್ಕಾರ ಈಗಾಗಲೇ ಚರ್ಚೆ ನಡೆಸಿದ್ದು, ಕರ್ನಾಟಕ ಕೈಗಾರಿಕಾ ಉದ್ಯೋಗ(ಸ್ಥಾಯಿ ಆದೇಶಗಳು) ನಿಯಮ 1969 ತಿದ್ದುಪಡಿ ತರುತ್ತಿದೆ. ಇದರ…
ಮದುವೆ ಎಂಬುದೇ ವಿಚಿತ್ರ ನಂಟು. ಎಲ್ಲಿಯೋ ಇದ್ದ ಹುಡುಗ – ಹುಡುಗಿ ಮದುವೆ ಎಂಬ ಸಂಬಂಧ ದೊಂದಿಗೆ ಬೆಸೆಯುತ್ತದೆ. ಹುಡುಗ ಏನೋ ಸಂತಸದಲ್ಲೇ ಮದುವೆಯಾಗುತ್ತಾನೆ. ಆದರೆ
ಮೇಷ ರಾಶಿ ಭವಿಷ್ಯ (Tuesday, November 30, 2021) ನೀವು ವಿರಾಮದ ಸಂತೋಷವನ್ನು ಅನುಭವಿಸಲಿದ್ದೀರಿ. ಇಂದು ವ್ಯಾಪಾರದಲ್ಲಿ ಉತ್ತಮ ಲಾಭವನ್ನು ಗಳಿಸುವ ಸಾಧ್ಯತೆ ಇದೆ. ಇಂದಿನ ದಿನ ನೀವು ನಿಮ್ಮ ವ್ಯಾಪಾರಕ್ಕೆ ಹೊಸ ಎತ್ತರವನ್ನು ನೀಡಬಹುದು. ಸಂಗಾತಿಯು ಸಂತೋಷ ನೀಡಲು ಪ್ರಯತ್ನ ಮಾಡಿದಾಗಿನ ಪೂರ್ಣ ಸಂತೋಷದ ಒಂದು ದಿನ. ನಿಮ್ಮ ಸಂಗಾತಿಗೆ ಸಾಕಷ್ಟು ಗಮನ ನೀಡಲಾಗದಿದ್ದಲ್ಲಿ ಅದು ಅವರ ಅಸಮಾಧಾನಕ್ಕೆ ಕಾರಣವಾಗಬಹುದು. ನೀವು ಯಾವುದೇ ಹೊಸ ಯೋಜನೆಯನ್ನು ತೆಗೆದುಕೊಳ್ಳುವ ಮೊದಲು ಎರಡು ಬಾರಿ ಆಲೋಚಿಸಿ. ಇದ್ದಕ್ಕಿದ್ದಂತೆ ಇಂದು…
ಬಾಲೀವುಡ್ ನಟ ಅಮೀರ್ ಖಾನ್ ಬಹಳ ವಿಜೃಂಭಣೆಯಿಂದ ಚಿತ್ರೀಕರಿಸುತ್ತಿರುವ ‘ ಮಹಾಭಾರತ್ ‘ ಸಿನಿಮಾ ಸರಣಿಗೆ ಸಂಬಂಧಿಸಿದಂತೆ ಒಂದು ಮುಖ್ಯವಾದ ವಿಷಯ ಹೊರಬಂದಿದೆ. 1000 ಕೋಟಿ ರೂಪಾಯಿಗಳ ಬಂಡವಾಳದೊಂದಿಗೆ ತೆರೆಯ ಮೇಲೆ ರಾರಾಜಿಸಲಿರುವ ಈ ಸಿನಿಮಾವನ್ನು ದೇಶದಲ್ಲೇ ಆಗರ್ಭ ಶ್ರೀಮಂತರಾದ , ರಿಲಯೆನ್ಸ್ ಇಂಡಸ್ಟ್ರೀಸ್ ಅಧಿನೇತ ಮುಖೇಷ್ ಅಂಬಾನಿ ಸಹ ನಿರ್ಮಾಪಕನಾಗಿ ಭಾಗವಹಿಸುತ್ತಿರುವಂತೆ ತಿಳಿದು ಬಂದಿದೆ. ನಾಲಕ್ಕರಿಂದ ಐದು ಭಾಗಗಳಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತದೆಂದು ತಿಳಿದು ಬಂದಿದೆ. ಬಹಳಷ್ಟು ನಿರ್ದೇಶಕರು ಈ ಚಿತ್ರದಲ್ಲಿ ಕೆಲಸಮಾಡುವ ಅವಕಾಶವಿದೆಯೆಂಬ ಸುದ್ದಿಯಿದೆ….
ಈಗಾಗಲೇ ಮಿಲನ ಪ್ರಕಾಶ್ ಅವರು ಕತೆ ಓಕೆ ಮಾಡಿಕೊಂಡಿದ್ದು, ಆ ಬಗ್ಗ ದರ್ಶನ್ ಅವರೊಂದಿಗೆ ಒಂದು ಸುತ್ತಿನ ಮಾತುಕತೆ ಕೂಡ ಮಾಡಿದ್ದಾರೆ. ಸದ್ಯಕ್ಕೆ ದರ್ಶನ್ ಅವರು ‘ಒಡೆಯ’ ಚಿತ್ರದ ಬಾಕಿ ದೃಶ್ಯಗಳು ಹಾಗೂ ‘ರಾಬರ್ಟ್’ ಚಿತ್ರದ ಶೂಟಿಂಗ್ನಲ್ಲಿದ್ದಾರೆ. ಕುರುಕ್ಷೇತ್ರ ಅಬ್ಬರವೇ ಕಮ್ಮಿಯಾಗಿಲ್ಲ ಆಗಲೇ ‘ಒಡೆಯಾ’ ರಿಲೀಸ್ ಡೇಟ್ ಫಿಕ್ಸ್,ಇದರ ನಡುವೆ ‘ಗಂಡುಗಲಿ ಮದಕರಿನಾಯಕ’ ಸಿನಿಮಾ. ಈ ಮೂರೂ ಚಿತ್ರಗಳ ನಂತರ ಪ್ರಕಾಶ್ ಅವರ ಸಿನಿಮಾ ಸೆಟ್ಟೇರುತ್ತಾ ಅಥವಾ ಇವುಗಳ ನಡುವೆಯೇ ಇವರ ಎರಡನೇ ಸಿನಿಮಾ ಶುರುವಾಗುತ್ತದ ಎಂಬುದು…