ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ತುಂಬಾ ಸರ್ತಿ ಜೀವನದಲ್ಲಿ ನಮ್ಮನ್ನ ನಾವೇ ಕಡೆಗಾಣಿಸ್ಕೊತೀವಿ. ನಮ್ಮ ಮನೆಯೋರು ಕೂಡ ನಮ್ಮನ್ನ ಎಷ್ಟೋ ಸರ್ತಿ ನೀನು ಸೋಮಾರಿ, ಒಂದು ಕೆಲಸ ಕೂಡ ಗಮನ ಇಟ್ಟು ಮಾಡಲ್ಲಾ ಅಂತೆಲ್ಲಾ ಬೈತಿರ್ತರೆ.
ಆದ್ರೆ ತಮಾಷೆ ಏನಪ್ಪಾ ಅಂದ್ರೆ, ಇಲ್ಲಿರುವ ಕೆಲವು ಗುಣಗಳು ನಮ್ಮಲ್ಲಿದ್ರೆ, ವಿಜ್ಞಾನದ ಪ್ರಕಾರ ನಾವು ನಮಗಿಂತ, ನಾವಂದುಕೊಂಡಿರೋದಕ್ಕಿಂತ ಜಾಸ್ತಿ ಬುದ್ಧಿವಂತ್ರಂತೆ. ಅದು ಹೇಗೆ ಅಂತಿರಾ…..ಮುಂದೆ ಓದಿ
ನಿಮ್ಮಲ್ಲಿ ನೀವೂ ನಕ್ಕು, ನಿಮ್ಮ ಜೊತೆ ಇರೋರನ್ನೂ ನಗಿಸೊ ಸ್ವಭಾವ ಇದ್ದರೆ, ನಿಮ್ಮ ಮೆದುಳು ತುಂಬ ಚನ್ನಾಗಿ ಕೆಲಸ ಮಾಡುತ್ತೆ, ಚುರುಕಾಗಿದೆ ಅಂತ ಅರ್ಥ. 1990 ರಲ್ಲಿ ಮೈಕಲ್ ಎ. ಜಾನ್ ಹೇಳೊ ಪ್ರಕಾರ ನೀವು ಹಾಸ್ಯಭರಿತರಾಗಿದ್ರೆ, ನಿಮ್ಮಲ್ಲಿ ಪ್ರಾಬ್ಲಮ್ ಸಾಲ್ವಿಂಗ್ ಶಕ್ತಿ ಹೆಚ್ಚಂತೆ.
ನಿಮಗೆ ಎಲ್ಲರೂ ಟೆನ್ಷನ್ ಒಳ್ಳೇದಲ್ಲ ಅಂತ ಸುಮಾರ್ ಸರ್ತಿ ಹೇಳಿರ್ತಾರೆ. ಆದರೆ, ಸ್ಟ್ರೆಸ್ನ ಸರಿಯಾಗಿ ನಿಭಾಯಿಸಿದ್ರೆ ಅದರಿಂದ ತುಂಬ ಉಪಯೋಗ ಇದೆಯಂತೆ ಕಣ್ರಿ. ಈ ಸ್ಟ್ರೆಸ್ಸ್ ಲೆವಲ್ ಹಿತ – ಮಿತವಾಗಿದ್ರೆ, ನಮ್ಮ ಎಷ್ಟೋ ದಿನನಿತ್ಯದ ಕೆಲಸಗಳಿಗೆ ಸಹಾಯ ಆಗುತ್ತೆ. ಹಿಂಗೆ ಒಂದು ಸರ್ತಿ, ಇಸ್ರೇಲ್ ಅಲ್ಲಿ ಒಂದ್ಸಲ್ಪ ಜನಕ್ಕೆ ಕಂಪ್ಯೂಟರ್ ಲ್ಯಾಬಲ್ಲಿ ಏನೋ ನೋಡಿ ಅಂತ ಸುಳ್ಳು ಕಂಪ್ಯೂಟರ್ ವೈರಸ್ ಹಬ್ಬಿಸಿಬಿಟ್ರಂತೆ … ಅಲ್ಲಿದವ್ರು ಪಾಪ ಇದನ್ನ ತಾವೇ ಮಾಡಿದ್ದು ಅಂತ ಕಕ್ಕಾಬಿಕ್ಕಿ ಆಗಿ ಅದನ್ನ ಸರಿ ಮಾಡೋ ರೀತಿ ಯೋಚ್ಸಿದ್ರಂತೆ . ಆಗ ಸಂಶೋಧಕರು ಕಂಡು ಹಿಡಿದಿದ್ದೇನಪ್ಪಾ ಅಂದ್ರೆ, ಯಾರು ಟೆನ್ಷನ್ ಮಾಡ್ಕೊಂಡಿದ್ರೋ, ಅವರೇ ಚನ್ನಾಗಿ ಕೆಲಸ ಮುಗಿಸೋದು ಅಂತ. ವಿಚಿತ್ರ ಅಲ್ವಾ?
ನೀವು, ಸ್ಕೂಲು- ಕಾಲೇಜಲ್ಲಿ ನಾನು ಯಾವಾಗ್ಲೂ ಕನಸು ಕಾಣ್ತಾ ಲಾಸ್ಟ್ ಬೆಂಚಲ್ಲೇ ಉಳ್ಕೊಂಡ್ಬಿಟ್ಟೆ… ನನ್ನ ಲೈಫ್ ಏನಾಗತ್ತೋ ಅಂತ ಚಿಂತೆ ಮಾಡಿದ್ರೆ, ಇಲ್ಲಿದೆ ನಿಮ್ಗೊಂದು ಒಳ್ಳೆ ಸುದ್ದಿ. ವಿಜ್ಞಾನಿಗಳ ಪ್ರಕಾರ, ಒಂದು ಕೆಲಸ ಮಾಡೋವಾಗ ನಿಮ್ಮ ಗಮನ ಆ ಕಡೆ ಈ ಕಡೆ ಹೋದ್ರೆ, ಒಂದೇ ಸಲಕ್ಕೆ ನಿಮಗೆ ಒಂದಕ್ಕಿಂತ ಹೆಚ್ಚು ಕೆಲಸ ಮಾಡೊ ಶಕ್ತಿ ಇದೆ ಅಂತಂತೆ. ಹಾಗೇ, ಹಗಲುಗನಸು ಕಾಣೋರಿಗೆ, ನೆನಪಿನ ಶಕ್ತಿ ಜಾಸ್ತಿ .
ನಿಮ್ಮ ಕೈಲಿ ಒಂದು ಪುಸ್ತಕ ಇದ್ದುಬಿಟ್ರೆ, ಲೋಕಾನೇ ಮರೆತುಬಿಡ್ತೀರ…ಇದರ ಜೊತೆಗೆ ಸ್ವಲ್ಪ ಕಾಫಿ ಸಿಕ್ಕಿಬಿಟ್ರಂತೂ, ಸ್ವರ್ಗಕ್ಕೆ ಮೂರೇ ಮೆಟ್ಟಿಲು. ಮತ್ತೇನೂ ಬೇಡ, ಯಾರೂ ಬೇಡ ಅಲ್ವಾ?ನೀವು ನಿಮ್ಮ ಜೊತೇನೆ ಜಾಸ್ತಿ ಸಮಯ ಕಳೆಯಕ್ಕೆ ಇಷ್ಟ ಪಡ್ತೀರ. 90 % ಅಂತರ್ಮುಖಿಗಳಿಗೆ ಓದೋ ಹವ್ಯಾಸ ಉಂಟಂತೆ ಹಾಗೇ,ಯಾರು ಚಿಕ್ಕ ವಯಸ್ಸಿಂದ ಓದೋ ಹವ್ಯಾಸ ಬೆಳೆಸಿಕೊಂಡಿರ್ತಾರೋ ಅಂಥಾವರು, ಮುಂದೆ ಬುದ್ದಿವಂತರಾಗಿರ್ತಾರೆ ಮತ್ತು ತಮ್ಮನ್ನ ಚನ್ನಾಗಿ ವ್ಯಕ್ತಪಡಿಸಿಕೊಳ್ತಾರೆ.
ಎಡಚರಿಗೆ ವಿಭಿನ್ನವಾದ ಯೋಚನಾಶಕ್ತಿ ಇರುತ್ತಂತೆ. 90 ರ ದಶಕದಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ,ಎಡಗೈ ಉಪಯೋಗಿಸೋರ ಆಲೋಚನೆಗಳು ಡಿಫರೆಂಟಾಗಿ ಇರೋದ್ರಿಂದ ಅವರು ಎರಡು ಸಂಬಂಧ ಇಲ್ಲದಿರೊ ವಸ್ತುಗಳಲ್ಲೂ ಲಿಂಕ್ ಹುಡುಕ್ತಾರಂತೆ. ಇವರಲ್ಲಿ ಕ್ರಿಯಾಶೀಲತೆ ಜಾಸ್ತಿ ಮತ್ತು ಯಾವುದೇ ಸಮಸ್ಯೆ ಇದ್ದರೂ ಅದಕ್ಕೆ ಬೇಗ ಒಂದು ಉಪಾಯ ಕಂಡು ಹಿಡೀತಾರೆ.
… ಹಾಗಾದ್ರೆ ಈಗ ಹೇಳಿ ನೀವು ಬುದ್ದಿವಂತರಾ, ಅಲ್ವಾ
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬಿಗ್ ಬಾಸ್ ಸೀಸನ್ 5ರಲ್ಲಿ ಸ್ಪರ್ಧಿಯಾಗಿದ್ದ ಬಾರ್ಬಿ ಡಾಲ್ ನಿವೇದಿತಾ ಗೌಡ ತನ್ನ ಆತ್ಮೀಯ ಗೆಳೆಯ ರ್ಯಾಪರ್ ಚಂದನ್ ಶೆಟ್ಟಿಗೆ ಕಾಫಿ ಮಗ್ ಮೂಲಕ ತಮ್ಮ ಮನದ ಮಾತನ್ನು ಹೇಳಿದ್ದಾರೆ. ನಿವೇದಿತಾ ತಮ್ಮ ಗೆಳೆಯ ಚಂದನ್ ಅವರಿಗೆ ಒಂದು ಕಾಫಿ ಮಗ್ ನೀಡಿದ್ದಾರೆ. ಆ ಕಾಫಿ ಮಗ್ ಮೇಲೆ “ನಾನು ನಿನ್ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನೀನು ನನ್ನ ಪಕ್ಕದಲ್ಲೇ ಇರಬೇಕು ಎಂದು ನಾನು ಬಯಸುತ್ತೇನೆ. ಇಂತಿ ನಿನ್ನ ಪ್ರೀತಿಯ ನಿವಿ” ಎಂದು ಬರೆದು ಅದನ್ನು ಚಂದನ್ಗೆ…
ನಾವು ದಶಕಗಳಿಂದಲೂ ನೀರಿನಲ್ಲಿ ಓಡುವ ಬೈಕ್ ಗಳ ಕತೆಗಳ ಬಗ್ಗೆ ಓದಿರುತ್ತೇವೆ. ಅದೇ ರೀತಿ ಬ್ರೆಜಿಲ್ ಒಬ್ಬರು ನೀರಿನಲ್ಲಿ ಓಡುವ ಬೈಕ್’ನ್ನು ಕಂಡುಹಿಡಿದಿದ್ದಾರೆ.
ಬೆಂಗಳೂರು, ಹೊಸ ಟ್ರಾಫಿಕ್ ನಿಯಮ ಜಾರಿಯಾದ ಬಳಿಕ ವಾಹನ ಸವಾರರು ಲೈಸೆನ್ಸ್, ವಿಮೆ ಸೇರಿದಂತೆ ಎಲ್ಲಾ ದಾಖಲೆಗಳನ್ನು ಇಟ್ಟುಕೊಂಡಿರಲೇ ಬೇಕು. ಫೋಟೋಕಾಪಿ(ಝೆರಾಕ್ಸ್) ಡೂಪ್ಲಿಕೇಟ್ ಕಾಪಿ ಇದ್ದರೆ ದಂಡ ಬೀಳುವುದು ಖಚಿತ. ದುಬಾರಿ ದಂಡದಿಂದ ಪಾರಾಗಲು 2 ಆ್ಯಪ್ಗಳಿವೆ. ಇವುಗಳಲ್ಲಿ ಯಾವುದಾದರು ಒಂದು ಆ್ಯಪ್ ಇದ್ದರೆ ಹೊಸ ಟ್ರಾಫಿಕ್ ಪನ್ನಿಂದ ಬಚಾವ್ ಆಗಬಹುದು. ಹೊಸ ನಿಯಮ ಜಾರಿಯಾದ ಮೇಲೆ ಯಾವುದೂ ಕೂಡ ಫೋಟೋ ಕಾಪಿ ಇಟ್ಟುಕೊಳ್ಳುವಂತಿಲ್ಲ. ಪ್ರತಿಯೊಂದು ದಾಖಲೆಯೂ ಒರಿಜನಲ್ ಇರಲೇ ಬೇಕು. ಇನ್ನು ಪ್ರತಿ ಬಾರಿ ಮೂಲ ಪ್ರತಿ…
ನಮಗೆ ಕೆಲವು ಸಮಯದಲ್ಲಿ ಧಿಡೀರನೆ ತಲೆಯಲ್ಲಿ ಬರುವ ಕೆಲವು ಯೋಚನೆಗಳು ಕೆಲವೊಮ್ಮೆ ನಮ್ಮ ಜೀವನವನ್ನ ಬದಲಾಯಿಸಬಹುದು ಅನ್ನುವುದಕ್ಕೆ ಉತ್ತಮ ಉದಾಹರಣೆ ಇದಾಗಿದೆ. ಹೌದು ಕೆಲವೊಮ್ಮೆ ನಮ್ಮ ತಲೆಯಲ್ಲಿ ಬರುವ ಕೆಲವು ಯೋಚನೆಗಳು ಬೇರೆಯವರಿಗೆ ತಮಾಷೆ ಅನಿಸಿದರೂ ಅದೂ ಕೆಲವೊಮ್ಮೆ ನಮ್ಮ ಜೀವನದ ಹಾದಿಯನ್ನೇ ಬದಲಾಯಿಸಬಹುದು. ಹೌದು ಕೇರಳಕ್ಕೆ ರಾಜ್ಯದ ಒಂದು ಕುಗ್ರಾಮದಲ್ಲಿ ಹುಟ್ಟಿದ್ದ ಈ ಹುಡುಗನ ಹೆಸರು ಮುಸ್ತಫಾ, ಮುಸ್ತಫಾ ಅವರು ವಾಸವಿದ್ದ ಊರಿನಲ್ಲಿ ಸರಿಯಾದ ರಸ್ತೆ ಮತ್ತು ನೀರು ಇರಲಿಲ್ಲ ಮತ್ತು ಅವರ ಊರಿನಲ್ಲಿ ಕೇವಲ…
ಏಪ್ರಿಲ್ 3, 2026ರಂದು ಬೆಂಗಳೂರಿನಲ್ಲಿ ನಡೆದ ಒಂದು ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಷಣ ಮಾಡುತ್ತಿರುವ ಸಂದರ್ಭದಲ್ಲಿ ಸಂತೋಷ್ ಹೆಗ್ಡೆ ಅವರುಏಕಾಏಕಿ ಅಸ್ವಸ್ಥಗೊಂಡು ವೇದಿಕೆಯಲ್ಲೇ ಕುಸಿದು ಬಿದ್ದರು ಅಲ್ಲಿದ್ದವರು ತಕ್ಷಣವೇ ಸಹಾಯ ಮಾಡಿ ಅವರನ್ನು ಆಸ್ಪತ್ರೆಗೆ ಕರೆದೊಯ್ದರು ಆಸ್ಪತ್ರೆಗೆ ದಾಖಲಾತಿ ಅವರನ್ನು ತಕ್ಷಣವೇ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ವೈದ್ಯರು ತಕ್ಷಣ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ ಪ್ರಾಥಮಿಕ ವರದಿಗಳ ಪ್ರಕಾರ: ಬಿಪಿ (ರಕ್ತದ ಒತ್ತಡ) ಅಥವಾ ತಲೆ ಸುತ್ತು ಕಾರಣವಾಗಿರಬಹುದು ಎಂದು ಅನುಮಾನ ಇನ್ನಷ್ಟು ಪರೀಕ್ಷೆಗಳು ನಡೆಯುತ್ತಿವೆ ಆರೋಗ್ಯ ಸ್ಥಿತಿ…
ನಟ ರಾಕಿಂಗ್ ಸ್ಟಾರ್ ಯಶ್ ಹಾಸನದಲ್ಲಿ ಮನೆ ಹಾಗೂ 80 ಎಕರೆ ತೋಟ ಖರೀದಿಸಿದ್ದಾರೆ. ಹಾಸನ ದೊಡ್ಡಕೊಂಡಗೋಳ ಯಶ್ ತಾಯಿ ಪುಷ್ಪಾ ಅವರ ತವರಾಗಿದೆ.ಯಶ್ ಜನಿಸಿದ್ದು ಹಾಸನ ಜಿಲ್ಲಾಸ್ಪತ್ರೆಯಲ್ಲಿ. ಈ ನಂಟಿನಿಂದ ಹುಟ್ಟೂರು ಹಾಸನದಲ್ಲಿ ಮನೆ ಹಾಗೂ ತೋಟವನ್ನು ಅವರು ಖರೀದಿಸಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅವರು ಈಗಾಗಲೇ ತನ್ನುರಿನ ಕೆರೆಯನ್ನು ಕೋಟಿಗಳ ವೆಚ್ಛದಲ್ಲಿ ಹೂಳು ತೆಗೆಸಿ ಸುತ್ತಮುತ್ತಲಿನ ಹತ್ತಾರು ಗ್ರಾಮಗಳಿಗೆ ಕುಡಿಯುವ ನೀರಿನ ತೊಂದರೆಯನ್ನು ಹೋಗಲಾಡಿಸಿದ್ದರು. ಈಗ ಅದರ ಜೊತೆಗೆ ತನ್ನ ಹುಟ್ಟೂರಿನಲ್ಲಿ ಜಮೀನು ಮತ್ತು…