ಸಂಬಂಧ

ಒಂದು ಫೋಟೋಗಾಗಿ ಮದುವೆಮನೆಯಲ್ಲೇ ಕಿತ್ತಾಡಿಕೊಂಡ ವಧು ವರರು!ಆಮೇಲೆ ಏನಾಯ್ತು ಗೊತ್ತಾ???

2623

ಕೆಲವಾರು ಮದುವೆ ಸಮಾರಂಭಗಳಲ್ಲಿ  ತಲೆದೋರುವ ನಾನಾರೀತಿಯ ಸಮಸ್ಯೆಗಳಿಂದ ವಿವಾದಗಳುಂಟಾಗಿ ಮದುವೆ ಮಂಟಪಗಳಲ್ಲಿಯೇ ವಧು, ವರರು ಮತ್ತು ಅವರ ಕಡೆಯವರು  ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪುವುದೂ ಇದೆ. ಇಂತಹುದೇ ಘಟನೆ ಇದೀಗ ರಾಜಸ್ಥಾನದಲ್ಲೂ ನಡೆದಿದೆ. ಸಪ್ತಪದಿಯ ಸಂದರ್ಭದಲ್ಲಿ ಗಂಡು ತಾನು ಮದುವೆಯಾಗವ ಮದುಮಗಳೆದುರು ಇಟ್ಟ ಬೇಡಿಕೆಯಿಂದಾಗಿ ಜಗಳವೇರ್ಪಟ್ಟಿದ್ದಲ್ಲದೇ ಮದುವೆಯೇ ಮುರಿದು ಬಿದ್ದಿದೆ.

ಮಾಧ್ಯಮಗಳಲ್ಲಿ ಪ್ರಸಾರವಾದ ವರದಿಗಳನ್ವಯ ಭಂವರ್’ಲಾಲ್ ಬಂಗ್ ಎಂಬಾತನ ಮಗಳ ಮದುವೆ ದಿನೇಶ್ ಎಂಬಾತನ ಮಗ ವಿವೇಕ್’ನೊಂದಿಗೆ ನಿಶ್ಚಯವಾಗಿತ್ತು. ವರ ಯುವಕ ವೃತ್ತಿಯಲ್ಲಿ ಚಾರ್ಟೆಡ್ ಅಕೌಂಟೆಂಟ್ ಆಗಿದ್ದರೆ, ಮಧುಮಗಳೂ ಎಲ್’ಎಲ್’ಬಿ ಮುಗಿಸಿದ್ದಳು. ಹೀಗಿರುವಾಗ ಇವರಿಬ್ಬರ ಮದುವೆ ದಿನದಂದು ಮದುಮಗಳ ಮನೆಗೆ ವರ ಹಾಗೂ ದಿಬ್ಬಣವನ್ನು ಅದ್ಧೂರಿಯಾಗಿಯೇ ಸ್ವಾಗತಿಸಲಾಯಿತು.

ಮದುವೆಯ ಸಂಪ್ರದಾಯಗಳನ್ನು ಒಂದಾದ ಬಳಿಕ ಒಂದರಂತೆ ನಡೆಯುತ್ತಿದ್ದವು ಹೀಗಿರುವಾಗ ಮದುವೆಯ ಪ್ರಮುಖ ಭಾಗವೆಂದೇ ಪರಿಗಣಿಸುವ ಸಪ್ತಪದಿಯೂ ನಡೆದಿತ್ತು. ಆದರೆ ಅಷ್ಟರಲ್ಲೇ ವರ ಮಧುಮಗಳ ಕಿವಿಯಲ್ಲಿ ತನ್ನದೊಂದು ಬೇಡಿಕೆ ಇದೆ ಎಂದು ಹೇಳಿಕೊಂಡಿದ್ದಾರೆ. ಈತನ ಆ ಬೇಡಿಕೆ ಕೇಳಿ ಕೆರಳಿದ ವಧು ಬೇಡಿಕೆ ಪೂರೈಸಲು ಸಾಧ್ಯವೇ ಇಲ್ಲ ಎಂದಿದ್ದಾಳೆ. ವಾಸ್ತವವಾಗಿ ವರ ತನಗೆ ಇಷ್ಟವಾಗುವಂತೆ ಫೋಟೋಗೆ ಫೋಸ್ ನೀಡಬೇಕೆಂದು ಕೇಳಿಕೊಂಡಿದ್ದಾನೆ. ಈ ವೇಳೆ ವಧು ಎಲ್ಲರೆದುರು ಅಂತಹ ಭಂಗಿಯಲ್ಲಿ ಫೋಟೋ ತೆಗೆಸುವುದು ಸರಿಯಲ್ಲ ಎಂದು ನಿರಾಕರಿಸಿದ್ದಾಳೆ.

ಮದುಮಗಳ ಈ ಪ್ರತಿಕ್ರಿಯೆ ಕೇಳಿ ಯುವಕ ಕೋಪಗೊಂಡಿದ್ದಾನೆ. ವಧು ಕೂಡಾ ತಾನೂ ಕಮ್ಮಿ ಇಲ್ಲ ಎನ್ನುವಂತೆ ತನ್ನ ನಿರ್ಧಾರದಿಂದ ಅವರು ಕೂಡ ಹಿಂದೆ ಸರಿದಿಲ್ಲ. ನಿಧಾನವಾಗಿ ಈ ವಿವಾದ ಹೆಚ್ಚಾಗಿದ್ದು, ಎರಡೂ ಕಡೆಯ ಸಂಬಂಧಿಕರ ನಡುವೆ ಜಗಳವೇರ್ಪಟ್ಟಿದ್ದು, ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ಈ ವೇಳೆ ವರ ವಧು ಕೂಡಾ ಹೊಡೆದಾಡಿಕೊಂಡಿದ್ದಾರೆ. ಮದುವೆ ಮಂಟಪದಲ್ಲಿ ನಡೆದ ಈ ಜಗಳದಲ್ಲಿ ವರನ ಸಹೋದರನ ತಲೆಗೆ ಗಂಭೀರ ಗಾಯವೂ ಆಗಿದೆ ಎಂದು ವರದಿಯಾಗಿದೆ. ಆದರೆ ಈ ಜಗಳ ನೋಡಿದ ವ್ಯಕ್ತಿಯೊಬ್ಬ ಆ ಕೂಡಲೇ ಪೊಲೀಸರಿಗೆ ಕರೆ ಮಾಡಿ ಸೂಚನೆ ನೀಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಈ ಜಗಳವನ್ನು ಮಾತುಕತೆಯಲ್ಲೇ ಕೊನೆಗೊಳಿಸಲು ಯತ್ನಿಸಿದ್ದಾರೆ.

ಆದರೆ ಇದರಿಂದ ಯಾವುದೇ ಪ್ರಯೋಜನವಾಗಿಲ್ಲ. ಹೀಗಗಿ ಬೇರೆ ವಿಧಿ ಇಲ್ಲದೇ ವರ ಹಾಗೂ ಕೆಲ ಸಂಬಂಧಿಗಳನ್ನು ಬಂಧಿಸಿದ ಪೊಲೀಸರು ಠಾಣೆಗೊಯ್ದಿದ್ದು, ಅಲ್ಲಿ ಅವರನ್ನು ಸಮಾಧಾನಗೊಳಿಸುವ ಪ್ರಯತ್ನ ನಡೆಸಿದ್ದಾರೆ. ಆದರೆ ಅಷ್ಟರಲ್ಲೇ ವಧುವಿನ ತಂದೆಯೂ ಇಂತಹ ಜಗಳಕಾಯುವ ಕುಟುಂಬಕ್ಕೆ ನನ್ನ ಮಗಳನ್ನು ಮದುವೆ ಮಾಡಿಕೊಡುವುದಿಲ್ಲ ಎಂದು ಈ ಸಂಬಂಧವನ್ನೇ ಮುರಿದಿದ್ದಾನೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಕಡಲೆ ತಿನ್ನುವುದರಿಂದ ಗರ್ಭಿಣಿಯರಿಗಿರುವ ಪ್ರಯೋಜನಗಳೇನು ಗೊತ್ತಾ?ತಿಳಿಯಲು ಇದನ್ನೊಮ್ಮೆ ಓದಿ..!

    ಗರ್ಭಿಣಿ ಮಹಿಳೆಯರಿಗೆ ಈ ಆಹಾರ ತಿನ್ನು, ಇದನ್ನು ತಿನ್ನಬೇಡ ಎಂದು ಮನೆಯವರು, ಸ್ನೇಹಿತರು ಸಲಹೆ ನೀಡುತ್ತಾರೆ. ವೈದ್ಯರು ಕೂಡ ಯಾವ ಆಹಾರಗಳನ್ನು ತೆಗೆದುಕೊಳ್ಳಬೇಕು, ಯಾವುದನ್ನು ತಿನ್ನದಿರುವುದು ಸೂಕ್ತ ಎಂಬ ಮಾಹಿತಿ ನೀಡುತ್ತಾರೆ. ಏಕೆಂದರೆ ಗರ್ಭಿಣಿ ಮಹಿಳೆಯರ ಆಹಾರಕ್ರಮ ಗರ್ಭದಲ್ಲಿ ಬೆಳೆಯುತ್ತಿರುವ ಮಕ್ಕಳ ಆರೋಗ್ಯದ ಮೇಲೆ ತುಂಬಾ ಪರಿಣಾಮ ಬೀರುತ್ತದೆ. ಗರ್ಭಿಣಿಯರು ಪೌಷ್ಟಿಕಾಂಶಗಳಿರುವ ಆಹಾರವನ್ನು ತೆಗೆದುಕೊಳ್ಳುವುದರಿಂದ ಮಗು ಆರೋಗ್ಯಕರವಾಗಿ ಬೆಳೆಯುತ್ತದೆ. ಆದ್ದರಿಂದ ಕಾಳುಗಳನ್ನು ತಿನ್ನುವಂತೆ ಹೇಳುತ್ತಾರೆ. ಕಾಳುಗಳಲ್ಲಿ ಒಂದು ಬಗೆಯಾದ ಚೆನ್ನಾ ಕೂಡ ಗರ್ಭಿಣಿಯರಿಗೆ ಸೇವಿಸಲು ಸೂಕ್ತವಾದ ಆಹಾರವಾಗಿದ್ದು…

  • ಸಿನಿಮಾ

    ಅಬ್ಬಬ್ಬಾ “ರಾಜ್ ವಿಷ್ಣು” ಕನ್ನಡ ಚಿತ್ರದ ಟ್ರೇಲರ್ ಯೂಟ್ಯೂಬಲ್ಲಿ ಚಿಂದಿ! ಟ್ರೇಲರ್ ನೋಡಲು ಈ ಲೇಖನಿ ಓದಿ….

    ಶರಣ್ ನಾಯಕ ನಟನಾಗಿ ನಟಿಸಿದ್ದು ಪ್ರಮುಖ ಪಾತ್ರಧಾರಿಗಳಾಗಿ ಚಿಕ್ಕಣ್ಣ, ಸಾಧು ಕೋಕಿಲ ನಟಿಸಿದ್ದಾರೆ. ಅದರಲ್ಲೂ ಕನ್ನಡ ಚಿತ್ರರಂಗದ ಇಬ್ಬರು ದಿಗ್ಗಜರ ಹೆಸರುಗಳನ್ನು ಇಟ್ಟು ನಿರ್ಮಾಣವಾಗುತ್ತಿರುವ ಸಿನಿಮಾ ‘ರಾಜ್ ವಿಷ್ಣು’ ಸಿನಿಮಾದ ಟ್ರೇಲರ್ ಇದೀಗ ಯೂಟ್ಯೂಬಲ್ಲಿ

  • inspirational

    ಕೊರೊನಾ 3ನೇ ಅಲೆ ಎದುರಿಸುವುದಕ್ಕೆ ರಾಜ್ಯ ಸರ್ಕಾರ ಸಿದ್ಧತೆ; ಆಸ್ಪತ್ರೆಗಳಲ್ಲೇ ಆಕ್ಸಿಜನ್ ಪ್ಲಾಂಟ್ ತೆರೆಯಲು ಚರ್ಚೆ

    ಮೂರನೇ ಅಲೆಯಲ್ಲಿ ಕೊರೊನಾ ಮಕ್ಕಳನ್ನೆ ಟಾರ್ಗೆಟ್ ಮಾಡುತ್ತದೆ ಎಂದು ತಜ್ಞರು ಹೇಳಿದ್ದಾರೆ. ಸೆಪ್ಟೆಂಬರ್ ಅಥವಾ ನವೆಂಬರ್ ತಿಂಗಳಲ್ಲಿ ಮೂರನೇ ಅಲೆ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ತಜ್ಞರ ಮಾಹಿತಿ ಕೇಳಿ ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ. ಮಯೂನ್.ಎನ್ Published On – 25 May 2021 ಸಾಂದರ್ಭಿಕ ಚಿತ್ರ ಬೆಂಗಳೂರು: ಕೊರೊನಾ ಸೋಂಕು ಇಡೀ ವಿಶ್ವವನ್ನೆ ಕಂಗಾಲಾಗಿಸಿದೆ. ಈಗಾಗಲೇ ಅದೆಷ್ಟೋ ಬಡ ಜೀವಿಗಳನ್ನು ಬಲಿ ಪಡೆದಿದೆ. ಪೋಷಕರನ್ನು ಕಳೆದುಕೊಂಡ ಮಕ್ಕಳು ಅನಾಥರಾಗಿದ್ದಾರೆ. ಕೊರೊನಾ ಆರ್ಭಟ ಕಡಿಮೆಯಾಗುತ್ತಿದೆ. ಇನ್ನು ಮುಂದೆ ಎಲ್ಲವೂ ಮೊದಲಿನಂತೆ…

  • ಆಧ್ಯಾತ್ಮ, ಜ್ಯೋತಿಷ್ಯ

    ಚಂಡಿಯಾಗ ಎಂದರೇನು,? ಯಾರು ಯಾವಾಗ ಮಾಡಬೇಕು,? ಇದರಿಂದಾಗುವ ಲಾಭಗಳೇನು ಗೊತ್ತಾ..??

    ಪಂಡಿತ್ ರಾಘವೇಂದ್ರ ಸಾಮ್ವಿ ಗಳು ಜ್ಯೋತಿಷ್ಯರು 9901077772 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ವ್ಯಾಪಾರ ಮಕ್ಕಳು9901077772 ದೇವಿ ಉಪಾಸನೆಯ ಪ್ರಮುಖ ಭಾಗವೇ ದುರ್ಗಾಸಪ್ತಶತಿ ಪಾರಾಯಣ. ದುರ್ಗಾಸಪ್ತಶತಿಯಲ್ಲಿ 700 ಶ್ಲೋಕಗಳಿವೆ. ಪ್ರತಿಯೊಂದು ಶ್ಲೋಕವನ್ನು ಮಂತ್ರರೂಪಕವಾಗಿ ಚರುವಿನ ಮೂಲಕ ಮಾಡುವ ಯಜ್ಞವೇ ಚಂಡಿಕಾಯಾಗ. ಚಂಡಿಕಾಯಾಗದ ಮೂಲಕ ಮಹಾಲಕ್ಷ್ಮಿ,…

  • ವ್ಯಕ್ತಿ ವಿಶೇಷಣ

    ಈ 10 ಗುಣಗಳು ನಿಮ್ಮಲ್ಲಿದ್ರೆ ಜನರು ನಿಮ್ಮನು ಅಪರೂಪದ ವ್ಯಕ್ತಿ ಎಂದು ಕಾಣುತ್ತಾರೆ ..!ತಿಳಿಯಲು ಈ ಲೇಖನ ಓದಿ…

    ನಿಮಗೆ ನೀವು ಬೇರೆಯವರಿಗಿಂತ ವಿಭಿನ್ನ ಅಂತ ಅನಿಸುತ್ತೀರಾ? ನಿಮ್ಮನ್ನ ಅರ್ಥ ಮಾಡಿಕೊಳ್ಳೋರು ಯಾರು ಇಲ್ಲ ಅನ್ನಿಸುತ್ತಾ?
    ಕಾರ್ಲ್ ಜಂಕ್ ಸೈಕೋ ಅನಾಲಿಸಿಸ್ ಥಿಯರೀ ಅನುದಾರ ಮೇಯರ್ಸ್ ಅಂಡ್ ಬ್ರಿಗ್ಗರ್ಸ್ ಸಿಸ್ಟೆಮ್ ಪ್ರತಿ ಮನುಷ್ಯನನ್ನ ಬೇರೆ ಬೇರೆ ವ್ಯಕ್ತಿತ್ವದವರಾಗಿ ವಿಂಗಡಿಸಲಾಗಿದ್ಯಂತೆ.

  • ದೇವರು-ಧರ್ಮ

    ರಾಮಕೋಟಿ ಯಾಕೆ ಬರೆಯಬೇಕು? ಯಾವ ಪೆನ್‌ನಲ್ಲಿ ಬರೆದರೆ ಒಳ್ಳೆಯದಾಗುತ್ತದೆ.!ತಿಳಿಯಲು ಓದಿ ಮರೆಯದೇ ಶೇರ್ ಮಾಡಿ…

    ರಾಮನ ಹೆಸರನ್ನು ಅಕ್ಷರ ರೂಪದಲ್ಲಿ ಜಪಿಸುವುದೇ ರಾಮಕೋಟಿ.! ಮನಸಾ ವಾಚಾ ಕರ್ಮೇಣ ರಾಮನ ಸ್ತುತಿ ಮಾಡುತ್ತಾ ಆ ಮಧುರನಾಮವನ್ನು ಕೋಟಿ ಸಲ ಬರೆಯುವುದೇ ರಾಮಕೋಟಿ. ಶ್ರೀಮನ್ನಾರಾಯಣನ ಎಲ್ಲ ರೂಪಗಳಲ್ಲಿ ರಾಮಾವತಾರಕ್ಕೆ ಬಹಳ ಪ್ರಾಮುಖ್ಯತೆ ಪಡೆದಿದ್ದು, ರಾಮನನ್ನು ಪ್ರತಿಯೊಬ್ಬರೂ ನಮ್ಮ ದೇವರು ಅಂದುಕೊಳ್ಳುವಷ್ಟು ಹತ್ತಿರವಾದ. ಅತೀತ ಶಕ್ತಿಗಳಿಗಿಂತ ರಾಮನು ತೋರಿದ ಆದರ್ಶವಂತ ಜೀವನವೇ ಬಹಳ ಮಂದಿಗೆ ರಾಮ ಎಂದರೆ ಒಂದು ವಿಶೇಷವಾದ ಇಷ್ಟ, ಭಕ್ತಿಯನ್ನು ಉಂಟುಮಾಡಿತು! ರಾಮ ಕೋಟೆಯನ್ನು ಬರೆಯುವಾಗ ಕೆಲವು ಮುಖ್ಯ ನಿಯಮಗಳನ್ನು ಪಾಲಿಸಬೇಕು… ರಾಮ ಕೋಟಿಯನ್ನು…