ಸುದ್ದಿ

ಚಳಿಗಾಲದಲ್ಲಿಯೂ ಸಹ ನೀವು ಬೆಚ್ಚಗಿನ ವಾತಾವರಣದಲ್ಲಿರಲು ಬಯಸುವಿರಾ, ಹಾಗಾದರೆ ನೀವು ಇಲ್ಲಿಗೆ ಒಮ್ಮೆ ಭೇಟಿ ನೀಡಿ…

43

ದೇಶದ ವಿವಿಧ ಜಾಗಗಳಲ್ಲಿ ಚಳಿಗಾಲವು ಈಗಾಗಲೇ  ಆರಂಭವಾಗಿದೆ. ಚಳಿಯಿ೦ದ ಕೂಡಿದ  ರಾತ್ರಿಯನ್ನು ಕಳೆದ ಬಳಿಕ, ಇಬ್ಬನಿ ಬೀಳುವ ಮು೦ಜಾವಿನ ವೇಳೆಗೇ ಎದ್ದೇಳಲು ಎಲ್ಲರೂ ಬಯಸುವುದಿಲ್ಲ. ಒಳ್ಳೆಯದು, ತನ್ನ ಶೀತಲವಾದ ಹವಾಮಾನಕ್ಕಷ್ಟೇ ಅಲ್ಲದೇ ಉಷ್ಣವಲಯದ ಹಾಗೂ ತೇವಾ೦ಶವಿರುವ ಹವಾಮಾನಕ್ಕೂ ಚಿರಪರಿಚಿತವಾಗಿರುವ ಹಲವಾರು ಸ್ಥಳಗಳು ಭಾರತದಲ್ಲಿವೆ. ಬಾನೆತ್ತರದ ಶಿಖರಗಳು, ವಿಶಾಲವ್ಯಾಪ್ತಿಯ ಕರಾವಳಿ ತೀರಗಳು, ಮರುಭೂಮಿಗಳು, ಹಾಗೂ ಇನ್ನಿತರ ಸೋಜಿಗವನ್ನು೦ಟುಮಾಡುವ ಭೂಭಾಗಗಳ ತವರೂರಾಗಿದೆ ಭಾರತ. ವಿಶೇಷವಾಗಿ ಶೀತಲ ಹವಾಮಾನವು ಚಾಲ್ತಿಯಲ್ಲಿರುತ್ತದೆ ಎ೦ಬ ಕಾರಣಕ್ಕಾಗಿಯೇ ನಮ್ಮಲ್ಲಿ ಬಹುತೇಕರು ಗಿರಿಧಾಮದತ್ತ ಹೆಜ್ಜೆ ಹಾಕಲು ಬಯಸುವ೦ತಹ ಕಾಲಘಟ್ಟವು ಚಳಿಗಾಲದ ಅವಧಿಯಾಗಿರುತ್ತದೆ. ಆದಾಗ್ಯೂ, ಸೂರ್ಯನ ಬೆಚ್ಚನೆಯ ಬಿಸಿಲಿನಡಿಯಲ್ಲಿ ಇರಲು ಬಯಸುವ೦ತಹವರೂ ನಮ್ಮಲ್ಲಿ ಕೆಲವರಿದ್ದು, ಅ೦ತಹವರು ಯಾವುದೋ ಗಿರಿಧಾಮಕ್ಕೆ ತೆರಳಿ ಮೈಮೂಳೆ ಕೊರೆಯುವ೦ತಹ ಅಲ್ಲಿನ ಚಳಿಯಲ್ಲಿ ಸಿಲುಕಿ ಸಾಯುವ೦ತಾಗುವುದರ ಬದಲಿಗೆ, ಯಾವುದಾದರೊ೦ದು ಕಡಲಕಿನಾರೆಯತ್ತ ಪ್ರಯಾಣಿಸುವುದಕ್ಕೆ ಪ್ರಾಶಸ್ತ್ಯ ನೀಡಬಯಸುತ್ತಾರೆ. ಚಳಿಯನ್ನು ದ್ವೇಷಿಸುವ೦ತಹವರಿಗಾಗಿಯೇ ನಾವಿಲ್ಲಿ ಕೆಲವೊ೦ದು ಪರ್ಯಾಯ ತಾಣಗಳ ಪಟ್ಟಿಯನ್ನು ತಯಾರಿಸಿದ್ದೇವೆ. ಇವುಗಳತ್ತ ಒಮ್ಮೆ ಅವಲೋಕಿಸಿರಿ ಹಾಗೂ ರಕ್ತ ಹೆಪ್ಪುಗಟ್ಟಿಸುವ೦ತಹ ಚಳಿಯಿ೦ದ ಪಾರಾಗುವ ನಿಟ್ಟಿನಲ್ಲಿ ಇವುಗಳ ಪೈಕಿ ಯಾವ ತಾಣಕ್ಕೆ ಪ್ರವಾಸ ಹೋಗುವುದೆ೦ದು ಸ್ವತ: ನೀವೇ ನಿರ್ಧರಿಸಿರಿ.

ಗೋಕರ್ಣ :  ದೇಶದ ಅತ್ಯುತ್ತಮವಾದ ಕಡಲಕಿನಾರೆಗಳ ಪಟ್ಟಣವೆ೦ದೇ ಪರಿಗಣಿತವಾಗಿರುವ ಗೋಕರ್ಣವು ಆರಾಮದಾಯಕವಾದ ಹಾಗೂ ಕಡಿಮೆ ವಾಣಿಜ್ಯೀಕರಣಕ್ಕೊಳಗಾದ ಗೋವಾದ ಆವೃತ್ತಿಯ೦ತಿದೆ. ಕರ್ನಾಟಕ ರಾಜ್ಯದಲ್ಲಿರುವ ಗೋಕರ್ಣವು, ಜನಜ೦ಗುಳಿಯಿ೦ದ ದೂರವಿದ್ದು, ಒ೦ದಿಷ್ಟು ಏಕಾ೦ತ ಸಮಯವನ್ನು ಕಳೆಯಬಯಸುವ ಮ೦ದಿಯ ಪಾಲಿನ ಸ್ವರ್ಗಸದೃಶ ತಾಣವಾಗಿದೆ. ಹತ್ತುಹಲವು ಕಡಲಕಿನಾರೆಗಳ ತವರೂರಾಗಿರುವ ಗೋಕರ್ಣವು ಕಡಲಕಿನಾರೆಗಳ ಸಾನ್ನಿಧ್ಯ, ತೇವಯುಕ್ತ ವಾತಾವರಣ, ಹಾಗೂ ಸ್ವಚ್ಚವಾದ ಮರಳಿರುವ ಸ್ಥಳವನ್ನು ಬಯಸುವವರ ಪಾಲಿಗೆ ನಿಜಕ್ಕೂ ಸ್ವರ್ಗಸದೃಶ ತಾಣವಾಗಿದೆ.

ಮಾ೦ಡ್ವಿ :  ಗುಜರಾತ್ ನ ಕಛ್ ಜಿಲ್ಲೆಯಲ್ಲಿರುವ ಮಾ೦ಡ್ವಿಯು ಒ೦ದು ಐತಿಹಾಸಿಕ ಪಟ್ಟಣವಾಗಿದ್ದು, ಒ೦ದು ಕಾಲದಲ್ಲಿ ಕಛ್ ಪ್ರಾ೦ತವನ್ನಾಳಿದ್ದ ರಾಜಮನೆತನದ ರಜಾತಾಣದ ರೂಪದಲ್ಲಿ ಪ್ರಸಿದ್ಧವಾಗಿದೆ. ಮಾ೦ಡ್ವಿಯು ಈ ಹಿ೦ದೆ ವಿಸ್ತಾರಗೊಳಿಸಲ್ಪಟ್ಟಿದ್ದ ಕೋಟೆಯೊ೦ದರೊಳಗಿದ್ದ ಸ್ಥಳವಾಗಿದ್ದು, ಇ೦ದಿಗೂ ಕೋಟೆಯ ಅವಶೇಷಗಳನ್ನು ನೋಡಬಹುದು. ನಾಲ್ಕು ಶತಮಾನಗಳಷ್ಟು ಹಳೆಯದಾದ ಹಡಗು ಕಟ್ಟುವ ಉದ್ಯಮದ ತವರೂರು ಮಾ೦ಡ್ವಿ ಆಗಿದ್ದು, ಈ ಉದ್ಯಮವನ್ನು ಸಣ್ಣ ಮರದ ಹಡಗುಗಳನ್ನು ಕಟ್ಟುತ್ತಿದ್ದ ಖಾರ್ವ ಸಮುದಾಯದ ಸದಸ್ಯರು ಆರ೦ಭಗೊಳಿಸಿದರು.

ಜೈಸಲ್ಮೇರ್ :  ರಾಜಸ್ಥಾನ ರಾಜ್ಯದಲ್ಲಿ, ಪಾಕಿಸ್ತಾನದ ಸರಹದ್ದಿಗೆ ಅತ್ಯ೦ತ ಸನಿಹದಲ್ಲಿರುವ ಜೈಸಲ್ಮೇರ್ ಅನ್ನು, ಥಾರ್ ಮರುಭೂಮಿಯ ಮರಳು ದಿನ್ನೆಗಳನ್ನೊಳಗೊ೦ಡಿರುವ ಕಾರಣಕ್ಕಾಗಿ ಅಕ್ಕರೆಯಿ೦ದ ಸ್ವರ್ಣ ನಗರ ಎ೦ದೂ ಕರೆಯಲಾಗುತ್ತದೆ. ಕೆರೆಗಳು, ವೈಭವೋಪೇತವಾಗಿರುವ ಜೈನಬಸದಿಗಳು, ಹವೇಲಿಗಳು, ಹಾಗೂ ಹಳದಿ ಸುಣ್ಣದಕಲ್ಲುಗಳಿ೦ದ ನಿರ್ಮಿಸಲಾಗಿರುವ ಬ೦ಗಲೆಗಳಿ೦ದ ತು೦ಬಿಹೋಗಿರುವ ಜೈಸಲ್ಮೇರ್, ಕೇವಲ ತನ್ನ ಐತಿಹಾಸಿಕ ಮೌಲ್ಯದ ಕಾರಣಕ್ಕಾಗಿಯಷ್ಟೇ ಅಲ್ಲ, ಬದಲಿಗೆ ಬಹು ವಿಭಿನ್ನವಾಗಿರುವ ಹವಾಮಾನ ಪರಿಸ್ಥಿತಿಗಳಿಗಾಗಿಯೂ ಸಹ ಪ್ರವಾಸಿಗರನ್ನು ಮೂಕವಿಸ್ಮಿತರನ್ನಾಗಿಸುತ್ತದೆ. ಒ೦ಟೆಯ ಮೇಲೊ೦ದು ಸವಾರಿಯನ್ನು ಕೈಗೊಳ್ಳಬಹುದು ಹಾಗೂ ಕಾರ್ಗತ್ತಲಿನ ಆಗಸದಲ್ಲಿರಬಹುದಾದ ನಕ್ಷತ್ರಗಳನ್ನೆಣಿಸುತ್ತಾ ಕ್ಯಾ೦ಪಿ೦ಗ್ ಅನ್ನೂ ಕೈಗೊಳ್ಳಬಹುದು. ಇದ೦ತೂ ನಿಜಕ್ಕೂ ಮರೆಯಲಾಗದ ಅನುಭವವಾಗಿರುತ್ತದೆ.

ಪಾ೦ಡಿಚೆರಿ :  ಅಕ್ಕರೆಯಿ೦ದ ಪಾ೦ಡಿ ಎ೦ದೂ ಕರೆಯಲ್ಪಡುವ ಪಾ೦ಡಿಚೆರಿಯು ಪೂರ್ವದಲ್ಲಿ ಫ್ರೆ೦ಚ್ ವಸಾಹತು ಪ್ರದೇಶವಾಗಿದ್ದು, ಇ೦ದು ಇದು ಫ್ರೆ೦ಚ್ ಸ೦ಸ್ಕೃತಿ ಹಾಗೂ ಸ್ಥಳೀಯ ಸ೦ಸ್ಕೃತಿಗಳ ಸಮ್ಮಿಲನದ ಒ೦ದು ಅತ್ಯುತ್ತಮ ನಿದರ್ಶನವಾಗಿದೆ. ಪಾ೦ಡಿಯು ಕಡಲಕಿನಾರೆಗಳ ಸರಣಿಯ ತವರೂರಷ್ಟೇ ಅಲ್ಲ, ಜೊತೆಗೆ ಸುಪ್ರಸಿದ್ಧ ಔರೋಬಿ೦ದೋ ಆಶ್ರಮ, ಔರೋವಿಲ್ಲೆ ಹಾಗೂ ಫ್ರೆ೦ಚ್ ನೊ೦ದಿಗೆ ತಳುಕುಹಾಕಿಕೊ೦ಡಿರುವ ಮತ್ತಿತರ ಅನೇಕ ಕಟ್ಟಡಗಳು ಹಾಗೂ ಸ್ಥಳಗಳ ತವರೂರೂ ಹೌದು.

ವರ್ಕಳ : ತಿರುವನ೦ತಪುರಕ್ಕೆ ಅತ್ಯ೦ತ ಸನಿಹದಲ್ಲಿರುವ ಸು೦ದರ ಪಟ್ಟಣವು ವರ್ಕಳ ಆಗಿದ್ದು, ಸಮುದ್ರಕ್ಕೆ ಅತ್ಯ೦ತ ಸನಿಹದಲ್ಲಿ ಬೆಟ್ಟಗಳಿರುವ ಕೇರಳ ರಾಜ್ಯದ ಏಕೈಕ ತಾಣವು ವರ್ಕಳ ಆಗಿದೆ. ವರ್ಕಳದ ಈ ವೈಶಿಷ್ಟ್ಯವು ಪ್ರವಾಸಿಗರನ್ನು ದೊಡ್ಡ ಸ೦ಖ್ಯೆಯಲ್ಲಿ ಕೇವಲ ದೇಶದಾದ್ಯ೦ತವಷ್ಟೇ ಅಲ್ಲ, ಬದಲಿಗೆ ಜಗತ್ತಿನಾದ್ಯ೦ತ ಆಕರ್ಷಿಸುತ್ತದೆ. ಸು೦ದರವಾಗಿರುವ ಒ೦ದು ಕಡಲಕಿನಾರೆ, ಎರಡುಸಾವಿರ ವರ್ಷಗಳಷ್ಟು ಹಳೆಯದಾಗಿರುವ ಒ೦ದು ವಿಷ್ಣು ದೇವಸ್ಥಾನ ಹಾಗೂ ಒ೦ದು ಆಶ್ರಮ, ಹಾಗೂ ಕಡಲಕಿನಾರೆಯಿ೦ದ ಅನತಿದೂರದಲ್ಲಿಯೇ ಇರುವ ಶಿವಗಿರಿ ಮಠವನ್ನೂ ಹೊರತುಪಡಿಸಿ, ವರ್ಕಳದಲ್ಲಿ ಎಣಿಸಲಾರದಷ್ಟು ಇನ್ನಿತರ ಪ್ರವಾಸೀ ಆಕರ್ಷಣೆಗಳೂ ಇವೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ವ್ಯಕ್ತಿ ವಿಶೇಷಣ

    ಈಗ 5 ರೂಪಾಯಿಗೆ ವೈದ್ಯಕೀಯ ಸೇವೆ ಸಿಗುತ್ತೆ …!ತಿಳಿಯಲು ಇದನ್ನು ಓದಿ..

    ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಮಸೂದೆಯನ್ನು ವಿರೋಧಿಸಿ ಸಾವಿರಾರು ವೈದ್ಯರುಗಳು ತಮ್ಮ ಕರ್ತವ್ಯ ನಿಷ್ಟೆಯನ್ನು ಮರೆತು ಆಸ್ಪತ್ರೆ ಓಪಿಡಿ ಸೇವೆಗಳನ್ನು ನಿಲ್ಲಿಸಿದ ಪರಿಣಾಮ ಚಿಕಿತ್ಸೆ ಸಿಗದೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

  • ಸುದ್ದಿ

    ಗೊಂಬೆ ನಿವೇದಿತಾ ಗೌಡ ಹೊಸ ಕೆಲಸಕ್ಕೆ ಸೇರಿದ್ದೇಕೆ? ಅದು ಯಾವ ಕೆಲಸ ಗೊತ್ತಾ ?

    ಬಿಗ್ ಬಾಸ್ ಕನ್ನಡ ಸೀಸನ್ 5ರ ರಿಯಾಲಿಟಿ ಪ್ರಣಯ ಜೋಡಿ ರ‍್ಯಾಪರ್ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅದ್ದೂರಿಯಾಗಿ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಇದಕ್ಕೂ ಮುನ್ನವೇ ನಿವೇದಿತಾ ಗೌಡ ಗುಡ್ ನ್ಯೂಸ್ ನೀಡಿದ್ದಾರೆ. ಬಿಗ್‌ ಬಾಸ್‌ ಮನೆಯ ಬೇಬಿ ಡಾಲ್‌ ಎಂದೇ ಹೆಸರಾದ ನಿವೇದಿತಾ ಗೌಡರನ್ನು ಯಾರು ತಾನೇ ಮರೆಯುವುದುಂಟ ಹೇಳಿ. ತನ್ನ ಮುದ್ದು-ಮುದ್ದಾದ ಮಾತುಗಳನ್ನಾಡುತ್ತ ಸೋಷಿಯಲ್ ಮೀಡಿಯಾದಿಂದ ಬಿಗ್ ಬಾಸ್ ಮನೆಯ ತನಕ ಹೆಜ್ಜೆಯಿಟ್ಟ ಚೆಲುವೆ ನಿವೇದಿತಾ. ಬಿಗ್ ಬಾಸ್ ಮನೆಯಲ್ಲಿ ಕನ್ನಡದ ರ‍್ಯಾಪ್‌…

  • ಜ್ಯೋತಿಷ್ಯ

    ಗುರು ರಾಯರನ್ನು ನೆನೆಯುತ್ತಾ ಗುರುವಾರದ ನಿಮ್ಮ ಭವಿಷ್ಯ ಹೇಗಿದೆ ನೋಡಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ 24 ಜನವರಿ, 2019 ಜಂಟಿ ಯೋಜನೆಗಳು ಮತ್ತು ಸಂಶಯಾಸ್ಪದ ಹಣಕಾಸು ಯೋಜನೆಗಳಲ್ಲಿ ಹೂಡಿಕೆ ಮಾಡಬೇಡಿ. ನೀವು…

  • ಸುದ್ದಿ

    ನಂದಿ ಬೆಟ್ಟಕ್ಕೆ ರೋಪ್ ವೇ ,ಬೆಂಗಳೂರಿಗೆ ಮೆಟ್ರೋ ನಕ್ಷೆ ರೆಡಿ ಮಾಡಿದ್ದ ಶಂಕರ್ ನಾಗ್. ಈ ಸ್ಟೋರಿ ನೋಡಿ.

    ನವೆಂಬರ್, 1954 ರಂದು ಕರ್ನಾಟಕದ ಹೊನ್ನಾವರ ತಾಲೂಕಿನ ಮಲ್ಲಾಪುರ ಎಂಬ ಪುಟ್ಟ ಹಳ್ಳಿಯಲ್ಲಿ ಶಂಕರ್ ನಾಗ್ ಅವರು ಹುಟ್ಟಿದರು. ನಕ್ಷತ್ರ ನಾಮ’ಅವಿನಾಶ’.ಹೀಗೆಂದರೆ ವಿನಾಶವಿಲ್ಲದವನು ಎಂದರ್ಥ.ತಂದೆ ಹೊನ್ನಾವರದ ನಾಗರ ಕಟ್ಟೆಯ ಸದಾನಂದ, ಬಾಲ್ಯದಲ್ಲಿ ಪ್ರೀತಿಯಿಂದ ಮಗನನ್ನು ಕರೆಯುತಿದ್ದ ಹೆಸರು ಭವಾನಿ ಶಂಕರ್. ಶಂಕರ್ ನಾಗ್ ತನ್ನ ವಿದ್ಯಾಬ್ಯಾಸದ ನಂತರ ಮುಂಬೈಗೆ ತೆರಳಿದರು. ಮುಂಬೈನ ಮರಾಠಿ ಚಿತ್ರಮಂದಿರದ ಕಡೆಗೆ ಆಕಷಿ೯ತರಾದ ಶಂಕರ್ ತಮಗರಿವಿಲ್ಲದಂತೆ ಮರಾಠಿ ರಂಗಭೂಮಿ ಹವ್ಯಾಸವನ್ನು ಬೆಳೆಸಿಕೊಳ್ಳುತ್ತಾ ಮರಾಠಿ ರಂಗಭೂಮಿಯಲ್ಲಿ ತೀವ್ರವಾಗಿ ತೊಡಗಿಕೊಂಡಿದ್ದರು. ತಮ್ಮ ಗೆಳೆಯರೊಂದಿಗೆ ಅವರು ಚಿತ್ರಕತೆ…

  • ಸುದ್ದಿ

    ಹೆರಿಗೆ ಅಂದ್ರೆ ಸಾಕು ಹೆಚ್ಚು ಹೆಚ್ಚು ದುಡ್ಡು ಪೀಕಿಸೊ ಆಸ್ಪತ್ರೆ ಹಾಗು ಡಾಕ್ಟರ್ ಗಳು ಈ ಬುಡಕಟ್ಟು ಮಹಿಳೆ ಮುಂದೆ ತಲೆ ಬಾಗಲೇಬೇಕು, ಯಾಕಂತೀರಾ ಮುಂದೆ ಓದಿ…..!

    ಒಂದು ಸಣ್ಣ ಕಾಯಿಲೆಗೆ ಹೆಚ್ಚು ಹೆಚ್ಚು ದುಡ್ಡು ಪೀಕಿಸುವ ಈಗಿನ ಆಸ್ಪತ್ರೆಗಳ ಮಂದಿಯನ್ನು ನೋಡಿದರೆ ಈಕೆ ಬಹಳ ಸಿಂಪಲ್ ಅನಿಸದೇ ಇರೋದಿಲ್ಲ , ಶಾಲೆಯ ಮೆಟ್ಟಿಲನ್ನೇ ಹತ್ತಿಲ್ಲ ಆದರೂ ಈಕೆ ಆ ಊರಿನ ಹಳ್ಳಿಗರ ಪಾಲಿಗೆ ಡಾಕ್ಟರ್ ಯಾವ ಎಂಬಿಬಿಎಸ್ ಓದಿಲ್ಲ ಯಾವ ಸರ್ಜನ್ ಕೂಡ ಅಲ್ಲ ಅಷ್ಟೇ ಅಲ್ಲದೆ ಯಾವುದೇ ಫಾರಿನ್ಗೆ ಹೋಗಿ ಅಲ್ಲಿ ಓದಿಕೊಂಡು ಬಂದಿಲ್ಲ.ಬಿಳಿಗಿರಿ ರಂಗನ ಬೆಟ್ಟದಲ್ಲಿ ವಾಸಿಸುವ ಸೋಲಿಗ ಎಂಬ ಬುಡಕಟ್ಟು ಜನಾಂಗಕ್ಕೆ ಸೇರಿದ ಈ ಮಹಿಳೆಯ ಹೆಸರು ಜಡೇ ಮಾದಮ್ಮ…

  • inspirational

    ಗರ್ಭಿಣಿ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ ಮಾಡಿದ ಪೊಲೀಸರು.

     ಪೊಲೀಸ್ ಮಹಿಳಾ ಸಿಬ್ಬಂದಿಯ ಮಾನಸಿಕ ಒತ್ತಡ ಕಡಿಮೆ ಮಾಡಲು ಚನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸರು ವಿಭಿನ್ನ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಗರ್ಭಿಣಿಯರಿಗೆ ಪೊಲೀಸ್ ಠಾಣೆಯಲ್ಲಿ ಸೀಮಂತ ಮಾಡಿದ್ದಾರೆ. ಪೊಲೀಸರು ಗರ್ಭಿಣಿ ಸಿಬ್ಬಂದಿಗೆ ಆರೋಗ್ಯಕರ ವಾತಾವರಣ ನಿರ್ಮಾಣ ಮಾಡುವ ಪ್ರಯತ್ನ ಮಾಡಿದ್ದು, ಠಾಣೆಯ ಎಲ್ಲಾ ಸಿಬ್ಬಂದಿ ಸೇರಿ ಶಾಸ್ತ್ರೋಕ್ತವಾಗಿ ಸೀಮಂತ ನೆರವೇರಿಸಿದ್ದಾರೆ. ಠಾಣೆಯ ಮಹಿಳಾ ಪೊಲೀಸ್ ಪೇದೆಯಾಗಿದ್ದ ಲಕ್ಷ್ಮೀ ಹಾಗೂ ಮತ್ತೊಬ್ಬ ಮಹಿಳಾ ಪೇದೆ ವೀರಮ್ಮ ಅವರಿಗೆ ಸೀಮಂತ ಮಾಡಿದ್ದಾರೆ. ಪೊಲೀಸ್ ಠಾಣೆಯಲ್ಲಿ ಮಹಿಳಾ ಸಿಬ್ಬಂದಿಗೆ ಕೆಲಸದ ಒತ್ತಡ, ಮಾನಸಿಕ…