ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ದೇಶದ ವಿವಿಧ ಜಾಗಗಳಲ್ಲಿ ಚಳಿಗಾಲವು ಈಗಾಗಲೇ ಆರಂಭವಾಗಿದೆ. ಚಳಿಯಿ೦ದ ಕೂಡಿದ ರಾತ್ರಿಯನ್ನು ಕಳೆದ ಬಳಿಕ, ಇಬ್ಬನಿ ಬೀಳುವ ಮು೦ಜಾವಿನ ವೇಳೆಗೇ ಎದ್ದೇಳಲು ಎಲ್ಲರೂ ಬಯಸುವುದಿಲ್ಲ. ಒಳ್ಳೆಯದು, ತನ್ನ ಶೀತಲವಾದ ಹವಾಮಾನಕ್ಕಷ್ಟೇ ಅಲ್ಲದೇ ಉಷ್ಣವಲಯದ ಹಾಗೂ ತೇವಾ೦ಶವಿರುವ ಹವಾಮಾನಕ್ಕೂ ಚಿರಪರಿಚಿತವಾಗಿರುವ ಹಲವಾರು ಸ್ಥಳಗಳು ಭಾರತದಲ್ಲಿವೆ. ಬಾನೆತ್ತರದ ಶಿಖರಗಳು, ವಿಶಾಲವ್ಯಾಪ್ತಿಯ ಕರಾವಳಿ ತೀರಗಳು, ಮರುಭೂಮಿಗಳು, ಹಾಗೂ ಇನ್ನಿತರ ಸೋಜಿಗವನ್ನು೦ಟುಮಾಡುವ ಭೂಭಾಗಗಳ ತವರೂರಾಗಿದೆ ಭಾರತ. ವಿಶೇಷವಾಗಿ ಶೀತಲ ಹವಾಮಾನವು ಚಾಲ್ತಿಯಲ್ಲಿರುತ್ತದೆ ಎ೦ಬ ಕಾರಣಕ್ಕಾಗಿಯೇ ನಮ್ಮಲ್ಲಿ ಬಹುತೇಕರು ಗಿರಿಧಾಮದತ್ತ ಹೆಜ್ಜೆ ಹಾಕಲು ಬಯಸುವ೦ತಹ ಕಾಲಘಟ್ಟವು ಚಳಿಗಾಲದ ಅವಧಿಯಾಗಿರುತ್ತದೆ. ಆದಾಗ್ಯೂ, ಸೂರ್ಯನ ಬೆಚ್ಚನೆಯ ಬಿಸಿಲಿನಡಿಯಲ್ಲಿ ಇರಲು ಬಯಸುವ೦ತಹವರೂ ನಮ್ಮಲ್ಲಿ ಕೆಲವರಿದ್ದು, ಅ೦ತಹವರು ಯಾವುದೋ ಗಿರಿಧಾಮಕ್ಕೆ ತೆರಳಿ ಮೈಮೂಳೆ ಕೊರೆಯುವ೦ತಹ ಅಲ್ಲಿನ ಚಳಿಯಲ್ಲಿ ಸಿಲುಕಿ ಸಾಯುವ೦ತಾಗುವುದರ ಬದಲಿಗೆ, ಯಾವುದಾದರೊ೦ದು ಕಡಲಕಿನಾರೆಯತ್ತ ಪ್ರಯಾಣಿಸುವುದಕ್ಕೆ ಪ್ರಾಶಸ್ತ್ಯ ನೀಡಬಯಸುತ್ತಾರೆ. ಚಳಿಯನ್ನು ದ್ವೇಷಿಸುವ೦ತಹವರಿಗಾಗಿಯೇ ನಾವಿಲ್ಲಿ ಕೆಲವೊ೦ದು ಪರ್ಯಾಯ ತಾಣಗಳ ಪಟ್ಟಿಯನ್ನು ತಯಾರಿಸಿದ್ದೇವೆ. ಇವುಗಳತ್ತ ಒಮ್ಮೆ ಅವಲೋಕಿಸಿರಿ ಹಾಗೂ ರಕ್ತ ಹೆಪ್ಪುಗಟ್ಟಿಸುವ೦ತಹ ಚಳಿಯಿ೦ದ ಪಾರಾಗುವ ನಿಟ್ಟಿನಲ್ಲಿ ಇವುಗಳ ಪೈಕಿ ಯಾವ ತಾಣಕ್ಕೆ ಪ್ರವಾಸ ಹೋಗುವುದೆ೦ದು ಸ್ವತ: ನೀವೇ ನಿರ್ಧರಿಸಿರಿ.

ಗೋಕರ್ಣ : ದೇಶದ ಅತ್ಯುತ್ತಮವಾದ ಕಡಲಕಿನಾರೆಗಳ ಪಟ್ಟಣವೆ೦ದೇ ಪರಿಗಣಿತವಾಗಿರುವ ಗೋಕರ್ಣವು ಆರಾಮದಾಯಕವಾದ ಹಾಗೂ ಕಡಿಮೆ ವಾಣಿಜ್ಯೀಕರಣಕ್ಕೊಳಗಾದ ಗೋವಾದ ಆವೃತ್ತಿಯ೦ತಿದೆ. ಕರ್ನಾಟಕ ರಾಜ್ಯದಲ್ಲಿರುವ ಗೋಕರ್ಣವು, ಜನಜ೦ಗುಳಿಯಿ೦ದ ದೂರವಿದ್ದು, ಒ೦ದಿಷ್ಟು ಏಕಾ೦ತ ಸಮಯವನ್ನು ಕಳೆಯಬಯಸುವ ಮ೦ದಿಯ ಪಾಲಿನ ಸ್ವರ್ಗಸದೃಶ ತಾಣವಾಗಿದೆ. ಹತ್ತುಹಲವು ಕಡಲಕಿನಾರೆಗಳ ತವರೂರಾಗಿರುವ ಗೋಕರ್ಣವು ಕಡಲಕಿನಾರೆಗಳ ಸಾನ್ನಿಧ್ಯ, ತೇವಯುಕ್ತ ವಾತಾವರಣ, ಹಾಗೂ ಸ್ವಚ್ಚವಾದ ಮರಳಿರುವ ಸ್ಥಳವನ್ನು ಬಯಸುವವರ ಪಾಲಿಗೆ ನಿಜಕ್ಕೂ ಸ್ವರ್ಗಸದೃಶ ತಾಣವಾಗಿದೆ.

ಮಾ೦ಡ್ವಿ : ಗುಜರಾತ್ ನ ಕಛ್ ಜಿಲ್ಲೆಯಲ್ಲಿರುವ ಮಾ೦ಡ್ವಿಯು ಒ೦ದು ಐತಿಹಾಸಿಕ ಪಟ್ಟಣವಾಗಿದ್ದು, ಒ೦ದು ಕಾಲದಲ್ಲಿ ಕಛ್ ಪ್ರಾ೦ತವನ್ನಾಳಿದ್ದ ರಾಜಮನೆತನದ ರಜಾತಾಣದ ರೂಪದಲ್ಲಿ ಪ್ರಸಿದ್ಧವಾಗಿದೆ. ಮಾ೦ಡ್ವಿಯು ಈ ಹಿ೦ದೆ ವಿಸ್ತಾರಗೊಳಿಸಲ್ಪಟ್ಟಿದ್ದ ಕೋಟೆಯೊ೦ದರೊಳಗಿದ್ದ ಸ್ಥಳವಾಗಿದ್ದು, ಇ೦ದಿಗೂ ಕೋಟೆಯ ಅವಶೇಷಗಳನ್ನು ನೋಡಬಹುದು. ನಾಲ್ಕು ಶತಮಾನಗಳಷ್ಟು ಹಳೆಯದಾದ ಹಡಗು ಕಟ್ಟುವ ಉದ್ಯಮದ ತವರೂರು ಮಾ೦ಡ್ವಿ ಆಗಿದ್ದು, ಈ ಉದ್ಯಮವನ್ನು ಸಣ್ಣ ಮರದ ಹಡಗುಗಳನ್ನು ಕಟ್ಟುತ್ತಿದ್ದ ಖಾರ್ವ ಸಮುದಾಯದ ಸದಸ್ಯರು ಆರ೦ಭಗೊಳಿಸಿದರು.
ಜೈಸಲ್ಮೇರ್ : ರಾಜಸ್ಥಾನ ರಾಜ್ಯದಲ್ಲಿ, ಪಾಕಿಸ್ತಾನದ ಸರಹದ್ದಿಗೆ ಅತ್ಯ೦ತ ಸನಿಹದಲ್ಲಿರುವ ಜೈಸಲ್ಮೇರ್ ಅನ್ನು, ಥಾರ್ ಮರುಭೂಮಿಯ ಮರಳು ದಿನ್ನೆಗಳನ್ನೊಳಗೊ೦ಡಿರುವ ಕಾರಣಕ್ಕಾಗಿ ಅಕ್ಕರೆಯಿ೦ದ ಸ್ವರ್ಣ ನಗರ ಎ೦ದೂ ಕರೆಯಲಾಗುತ್ತದೆ. ಕೆರೆಗಳು, ವೈಭವೋಪೇತವಾಗಿರುವ ಜೈನಬಸದಿಗಳು, ಹವೇಲಿಗಳು, ಹಾಗೂ ಹಳದಿ ಸುಣ್ಣದಕಲ್ಲುಗಳಿ೦ದ ನಿರ್ಮಿಸಲಾಗಿರುವ ಬ೦ಗಲೆಗಳಿ೦ದ ತು೦ಬಿಹೋಗಿರುವ ಜೈಸಲ್ಮೇರ್, ಕೇವಲ ತನ್ನ ಐತಿಹಾಸಿಕ ಮೌಲ್ಯದ ಕಾರಣಕ್ಕಾಗಿಯಷ್ಟೇ ಅಲ್ಲ, ಬದಲಿಗೆ ಬಹು ವಿಭಿನ್ನವಾಗಿರುವ ಹವಾಮಾನ ಪರಿಸ್ಥಿತಿಗಳಿಗಾಗಿಯೂ ಸಹ ಪ್ರವಾಸಿಗರನ್ನು ಮೂಕವಿಸ್ಮಿತರನ್ನಾಗಿಸುತ್ತದೆ. ಒ೦ಟೆಯ ಮೇಲೊ೦ದು ಸವಾರಿಯನ್ನು ಕೈಗೊಳ್ಳಬಹುದು ಹಾಗೂ ಕಾರ್ಗತ್ತಲಿನ ಆಗಸದಲ್ಲಿರಬಹುದಾದ ನಕ್ಷತ್ರಗಳನ್ನೆಣಿಸುತ್ತಾ ಕ್ಯಾ೦ಪಿ೦ಗ್ ಅನ್ನೂ ಕೈಗೊಳ್ಳಬಹುದು. ಇದ೦ತೂ ನಿಜಕ್ಕೂ ಮರೆಯಲಾಗದ ಅನುಭವವಾಗಿರುತ್ತದೆ.

ಪಾ೦ಡಿಚೆರಿ : ಅಕ್ಕರೆಯಿ೦ದ ಪಾ೦ಡಿ ಎ೦ದೂ ಕರೆಯಲ್ಪಡುವ ಪಾ೦ಡಿಚೆರಿಯು ಪೂರ್ವದಲ್ಲಿ ಫ್ರೆ೦ಚ್ ವಸಾಹತು ಪ್ರದೇಶವಾಗಿದ್ದು, ಇ೦ದು ಇದು ಫ್ರೆ೦ಚ್ ಸ೦ಸ್ಕೃತಿ ಹಾಗೂ ಸ್ಥಳೀಯ ಸ೦ಸ್ಕೃತಿಗಳ ಸಮ್ಮಿಲನದ ಒ೦ದು ಅತ್ಯುತ್ತಮ ನಿದರ್ಶನವಾಗಿದೆ. ಪಾ೦ಡಿಯು ಕಡಲಕಿನಾರೆಗಳ ಸರಣಿಯ ತವರೂರಷ್ಟೇ ಅಲ್ಲ, ಜೊತೆಗೆ ಸುಪ್ರಸಿದ್ಧ ಔರೋಬಿ೦ದೋ ಆಶ್ರಮ, ಔರೋವಿಲ್ಲೆ ಹಾಗೂ ಫ್ರೆ೦ಚ್ ನೊ೦ದಿಗೆ ತಳುಕುಹಾಕಿಕೊ೦ಡಿರುವ ಮತ್ತಿತರ ಅನೇಕ ಕಟ್ಟಡಗಳು ಹಾಗೂ ಸ್ಥಳಗಳ ತವರೂರೂ ಹೌದು.
ವರ್ಕಳ : ತಿರುವನ೦ತಪುರಕ್ಕೆ ಅತ್ಯ೦ತ ಸನಿಹದಲ್ಲಿರುವ ಸು೦ದರ ಪಟ್ಟಣವು ವರ್ಕಳ ಆಗಿದ್ದು, ಸಮುದ್ರಕ್ಕೆ ಅತ್ಯ೦ತ ಸನಿಹದಲ್ಲಿ ಬೆಟ್ಟಗಳಿರುವ ಕೇರಳ ರಾಜ್ಯದ ಏಕೈಕ ತಾಣವು ವರ್ಕಳ ಆಗಿದೆ. ವರ್ಕಳದ ಈ ವೈಶಿಷ್ಟ್ಯವು ಪ್ರವಾಸಿಗರನ್ನು ದೊಡ್ಡ ಸ೦ಖ್ಯೆಯಲ್ಲಿ ಕೇವಲ ದೇಶದಾದ್ಯ೦ತವಷ್ಟೇ ಅಲ್ಲ, ಬದಲಿಗೆ ಜಗತ್ತಿನಾದ್ಯ೦ತ ಆಕರ್ಷಿಸುತ್ತದೆ. ಸು೦ದರವಾಗಿರುವ ಒ೦ದು ಕಡಲಕಿನಾರೆ, ಎರಡುಸಾವಿರ ವರ್ಷಗಳಷ್ಟು ಹಳೆಯದಾಗಿರುವ ಒ೦ದು ವಿಷ್ಣು ದೇವಸ್ಥಾನ ಹಾಗೂ ಒ೦ದು ಆಶ್ರಮ, ಹಾಗೂ ಕಡಲಕಿನಾರೆಯಿ೦ದ ಅನತಿದೂರದಲ್ಲಿಯೇ ಇರುವ ಶಿವಗಿರಿ ಮಠವನ್ನೂ ಹೊರತುಪಡಿಸಿ, ವರ್ಕಳದಲ್ಲಿ ಎಣಿಸಲಾರದಷ್ಟು ಇನ್ನಿತರ ಪ್ರವಾಸೀ ಆಕರ್ಷಣೆಗಳೂ ಇವೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಐಪಿಎಲ್ 12 ನೇ ಆವೃತ್ತಿಯ ಎರಡು ವಾರಗಳ ವೇಳಾಪಟ್ಟಿ ಬಿಡುಗಡೆಯಾಗಿದೆ. ಐಪಿಎಲ್ – 2019 ರ ಪಂದ್ಯಗಳು ಮಾರ್ಚ್ 23 ರಿಂದ ಶುರುವಾಗಲಿದೆ. ಉದ್ಘಾಟನೆ ಪಂದ್ಯ ಚೆನ್ನೈನಲ್ಲಿ ನಡೆಯಲಿದೆ. ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ. ಮಂಗಳವಾರ ಇಂಡಿಯನ್ ಪ್ರೀಮಿಯರ್ ಲೀಗ್ ಅಧಿಕೃತ ಟ್ವೀಟರ್ ನಲ್ಲಿ ವೇಳಾಪಟ್ಟಿ ಪ್ರಕಟಿಸಲಾಗಿದೆ. 17 ಪಂದ್ಯಗಳ ವೇಳಾಪಟ್ಟಿಯನ್ನು ಟ್ವಿಟ್ ಮಾಡಲಾಗಿದೆ. ಮಾರ್ಚ್ 23 ರಿಂದ ಏಪ್ರಿಲ್ 5 ರವರೆಗೆ ಪಂದ್ಯಗಳು ನಡೆಯಲಿವೆ. ಕೊಲ್ಕತ್ತಾ, ಚೆನ್ನೈ,…
ಇನ್ನುಮುಂದೆ ಎಲ್ಲಾ ವಾಹನಗಳಿಗೆ ಫಾಸ್ಟ್ಟ್ಯಾಗ್ ಕಡ್ಡಾಯವಾಗಲಿದೆ. ಒಂದೊಮ್ಮೆ ನಿಮ್ಮ ವಾಹನಗಳಲ್ಲಿ ಫಾಸ್ಟ್ಟ್ಯಾಗ್ ಇಲ್ಲದಿದ್ದರೆ ದುಪ್ಪಟ್ಟು ಟೋಲ್ ಕಟ್ಟಿ ಮುಂದೆ ಹೋಗಬೇಕಾಗುತ್ತದೆ. ಹೌದು ಇದು ಸತ್ಯ, ಡಿಸೆಂಬರ್ನಲ್ಲಿ ಈ ನಿಯಮ ದೇಶಾದ್ಯಂತ ಜಾರಿಗೆ ಬರಲಿದೆ.ಟೋಲ್ ಪ್ಲಾಜಾಗಳಲ್ಲಿ ವಾಹನ ದಟ್ಟಣೆ ಹಾಗೂ ಕಾಯುವ ಸಮಯವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಟೋಲ್ನ ಎಲ್ಲ ಲೇನ್ಗಳನ್ನೂ ಫಾಸ್ಟ್ಟ್ಯಾಗ್ ಲೇನ್ಗಳನ್ನಾಗಿ ಪರಿವರ್ತಿಸಲು ನಿರ್ಧರಿಸಲಾಗಿದೆ. ಡಿಸೆಂಬರ್ 1 ರಿಂದ ಇದು ಜಾರಿಗೆ ಬರಲಿದೆ. ಫಾಸ್ಟ್ ಟ್ಯಾಗ್ನಲ್ಲಿ ಸ್ವಯಂಚಾಲಿತವಾಗಿ ಟೋಲ್ ಶುಲ್ಕ ಕಡಿತಗೊಳ್ಳುತ್ತದೆ.ಇದೇ ವೇಳೆ ಒಂದು ಹೈಬ್ರಿಡ್…
ಹೆಚ್ಚಿನವರಿಗೆ ನೈಸರ್ಗಿಕವಾಗಿ ತೂಕ ಇಳಿಸುವ ಚಿಂತೆ. ಹೀಗೆ ತೂಕ ಇಳಿಸುವವರು ಯಾವುದೆಲ್ಲಾ ಹಣ್ಣು ಸೇವಿಸಬಹುದು ಎಂಬ ಜಿಜ್ಞಾಸೆಗೆ ಬೀಳುತ್ತಾರೆ. ಅಸಲಿಗೆ ಸೀಬೇಕಾಯಿ ತೂಕ ಹೆಚ್ಚಿಸಲು ಸಹಕಾರಿಯೇ ಎಂಬುದು ಹಲವರ ಪ್ರಶ್ನೆ.
ಡಿಜಿಟಲ್ ಯುಗಕ್ಕೆ ತೆರೆದುಕೊಂಡಿರುವ ರಾಜಧಾನಿಯಲ್ಲಿ ಓಡಾಡುವ ಬಸ್ಗಳಲ್ಲಿ ಈವರೆಗೆ ವೈಫೈ ಸೇವೆ ಲಭ್ಯವಿರಲಿಲ್ಲ. ಕೆಲ ವರ್ಷಗಳಿಂದೀಚೆಗೆ ಲಗ್ಗೆ ಇಟ್ಟ ಟ್ಯಾಕ್ಸಿಗಳು ಗ್ರಾಹಕರಿಗೆ ಉಚಿತ ವೈಫೈ ಸೇವೆ ಒದಗಿಸಿ, ವೋಲ್ವೊ ಬಸ್ಗಳಿಗೆ ತೀವ್ರ ಪೈಪೋಟಿಯೊಡ್ಡಿವೆ. ಹೀಗಾಗಿ, ಬಿಎಂಟಿಸಿಯು ಪ್ರಯಾಣಿಕರಿಗೆ ಬೆರಳ ತುದಿಯಲ್ಲೇ ಮಾಹಿತಿ ದೊರಕಿಸುವ ನಿಟ್ಟಿನಲ್ಲಿ ಹೆಜ್ಜೆಗಳನ್ನಿಡುತ್ತಿದೆ.
ಅನ್ನಪೂರ್ಣೇಶ್ವರಿ ದೇವಿ ನಿತ್ಯಹರಿದ್ವರ್ಣ ಬೆಟ್ಟಗಳ ಮಧ್ಯೆ ನೆಲೆಸಿದ್ದಾಳೆ. ಕೈಲಾಸದಿಂದ ಸುಮಾರು 10 ಕಿ.ಮೀ ದೂರದಲ್ಲಿರುವ ಈ ತಾಯಿ ವರ್ಷವಿಡೀ ಭಕ್ತರನ್ನು ಆಕರ್ಷಿಸುತ್ತಾಳೆ. ದೂರದಿಂದ ಬಂದವರಿಗೆ ರಾತ್ರಿ ನಿವಾಸದ ವಸತಿ ಮತ್ತು ಉಚಿತ ಆಹಾರವನ್ನು ಒದಗಿಸಲಾಗುತ್ತದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಈ ಹೊರನಾಡು ಅನ್ನಪೂರ್ಣೇಶ್ವರಿ ತಾಯಿಯ ಸನ್ನಿಧಿ ಹಿಂದೂಗಳಿಗೆ ಬಹಳ ಪವಿತ್ರವಾದ ಸ್ಥಳವಾಗಿದೆ. ದೇವಿಯ ಮುಖ್ಯ ದೇವತೆ ಆದಿ ಶಂಕರಾಚಾರ್ಯರಿಂದ ಸ್ಥಾಪಿಸಲ್ಪಟಿದೆ. ತಾಯಿ ಅನ್ನಪೂರ್ಣೇಶ್ವರಿ ನೆಲೆಸಿರುವ ಈ ಹೊರನಾಡು 831 ಮೀ (2,726 ಅಡಿ) ಎತ್ತರದಲ್ಲಿದೆ.. ದೇವಾಲಯದಲ್ಲಿ ಯಾರ ಬಲ…
ಕಲ್ಲು ತೂರಾಟಗಾರರ ಹಣಿಯಲು, ಕಲ್ಲು ತೂರಾಟಗಾರರ ನಾಯಕನನ್ನು ಸೇನಾ ವಾಹನಕ್ಕೆ ಗುರಾಣಿಯಾಗಿ ಕಟ್ಟಿದ, ಪ್ರಕರಣ ಸಂಭಂದ ಸಂತ್ರಸ್ತ ಯುವಕನಿಗೆ ಜಮ್ಮುಕಾಶ್ಮೀರ ಮಾನವ ಹಕ್ಕುಗಳ ಆಯೋಗ 10 ಲಕ್ಷ ರೂ. ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.