ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮಲಯಾಳಂನ ಖ್ಯಾತ ನಟ ದೇವನ್ ಅವರ ಬಳಿ ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಅವರು ತನ್ನ ಹಳೆ ಪ್ರೇಮವನ್ನು ನೆನೆದು ಕಣ್ಣೀರಿಟ್ಟಿರಿಟ್ಟಿದ್ದಾರಂತೆ. ತೆರೆಯ ಮೇಲೆ ಲವರ್ ಬಾಯ್ ಅಗಿ ಮಿಂಚುತ್ತಿದ್ದ ರಜನಿ ಅವರ ನಿಜ ಜೀವನದಲ್ಲಿ ತನ್ನ ಮೊದಲ ಪ್ರೇಮ ವಿಫಲವಾಗಿತ್ತು. ಬೆಂಗಳೂರು ಟ್ರಾನ್ಸ್ಪೋರ್ಟ್ ಸರ್ವಿಸ್ ಬಸ್ ಕಂಡಕ್ಟರ್ ಆಗಿದ್ದ ಸಮಯದಲ್ಲಿ ರಜನಿ, ರೂಟ್ ನಂಬರ್ 10ಎ ಬಸ್ ನಲ್ಕಿ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಸಮಯದಲ್ಲಿ, ಎಂಬಿಬಿಎಸ್ ಓದುತ್ತಿರುವ ನಿರ್ಮಲಾ ಎಂಬುವವರನ್ನು ಪ್ರೀತಿಸುತ್ತಿದ್ದರು.

ನಿರ್ಮಲಾ ಅವರನ್ನು ಘಾಡವಾಗಿ ಪ್ರೀತಿಸುತ್ತಿದ್ದ ರಜನಿ,ತನ್ನ ಮೊದಲ ಪ್ರೆಮ ಪುರಾಣದ ಬಗ್ಗೆ ತನ್ನ ಸ್ನೇಹಿತರಾದ ಮಲಯಾಳಂನ ಖ್ಯಾತ ನಟ ದೇವನ್ಗೆ ಹೇಳಿ ಕಣ್ಣೀರಿಟ್ಟಿದ್ದರಂತೆ. ಮಾಲಿವುಡ್ ವೆಬ್ಸೈಟ್ ನಲ್ಲಿ ನೀಡಿರುವ ಸಂದರ್ಶನದಲ್ಲಿ ದೇವನ್ ಅವರು ಈ ವಿಚಾರವನ್ನು ಹಿಂದೊಮ್ಮೆ ತಿಳಿಸಿದ್ದು,”ನಾವೆಲ್ಲ ಸಿನಿಮಾ ಶೂಟಿಂಗ್ಗಾಗಿ ಚೆನ್ನೈನಲ್ಲಿ ಇದ್ದೆವು. ಒಂದು ದಿನ ರಜನಿಕಾಂತ್ ನನ್ನನ್ನು ಡಿನ್ನರ್ಗೆ ಆಹ್ವಾನಿಸಿದರು. ಹಾಗಾಗಿ ಅವರ ಕೋಣೆಗೆ ಹೋದೆ.

ಊಟಕ್ಕೆ ಬೇಕಾಗಿದ್ದ ಎಲ್ಲವನ್ನೂ ತರಿಸಿದ್ದರು. ಆ ಸಮಯದಲ್ಲಿ ರಜನಿಕಾಂತ್ ಸ್ವಲ್ಪ ಮದ್ಯ ಸೇವಿಸಿ, “ನಿಮಗೆ ಫಸ್ಟ್ ಲವ್ ಇದೆಯಾ? ಎಂದು ಕೇಳಿದ್ದರು.ಆಗ ನಾನು ನನ್ನ ಲವ್ ಸ್ಟೋರಿ ಹೇಳಿದೆ ಅದನ್ನು ಕೇಳಿ ಸಿಕ್ಕಾಪಟ್ಟೆ ಭಾವುಕರಾದ ರಜನಿ, ಯಾಕೆ ಇಷ್ಟೊಂದು ದುಃಖಪಡುತ್ತಿದ್ದೀರಿ ಎಂದು ನಾನು ಕೇಳಿದೆ. ಆಗ ಬೆಂಗಳೂರಿನಲ್ಲಿ ಆರಂಭವಾದ ತನ್ನ ಫಸ್ಟ್ ಲವ್ ವಿವರಿಸಿದರು”

ರಜನಿ- “ನಾನು ಬಸ್ ಕಂಡಕ್ಟರ್ ಆಗಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಎಂಬಿಬಿಎಸ್ ಓದುತ್ತಿದ್ದ ನಿರ್ಮಲಾ ಎಂಬುವಳ ಜೊತೆಗೆ ಪರಿಚಯ ಬೆಳೆಯಿತು. ಆಕೆ ನಮ್ಮ ಬಸ್ಸಿಗೆ ಪ್ರತಿನಿತ್ಯ ಬರುತ್ತಿದ್ದಳು. ಇಬ್ಬರೂ ಮಾತನಾಡಿಕೊಳ್ಳುತ್ತಿದ್ದೆವು. ಒಂದು ದಿನ ನಾನು ಮುಖ್ಯ ಪಾತ್ರ ಪೋಷಿಸುತ್ತಿರುವ ನಾಟಕವನ್ನು ನೋಡಲು ನಿರ್ಮಾಲಾನನ್ನು ಕರೆದಿದ್ದೆ,ನಂತರ ಮದ್ರಾಸ್ ಫಿಲ್ಮ್ ಇನ್ಸ್ಟಿಟ್ಯೂಟ್ನಿಂದ ನನಗೆ ಸಂದರ್ಶನಕ್ಕೆ ಪತ್ರ ಬಂತು. ಆದರೆ ನಾನು ಅರ್ಜಿ ಸಲ್ಲಿಸಲಿಲ್ಲ ಲೆಟರ್ ಬಂದಿದ್ದು ನೋಡಿ ಶಾಕ್ ಆಗಿದ್ದೆ. ಬಳಿಕ ಅರ್ಜಿಯನ್ನು ನಿರ್ಮಾಲಾ ಸಲ್ಲಿಸಿದಳು.

ನಾನು ನಾಟಕದಲ್ಲಿ ಅಭಿನಯಿಸಿದ ಪಾತ್ರ ನಿರ್ಮಾಲಾಗೆ ಬಹಳ ಇಷ್ಟವಾಯಿತು. ನನ್ನ ಪ್ರತಿಭೆಯನ್ನು ಪ್ರೋತ್ಸಾಹಿಸಲು ನನ್ನ ಪರವಾಗಿ ಮದ್ರಾಸ್ ಫಿಲ್ಮ್ ಇನ್ಸ್ಟಿಟ್ಯೂಟ್ಗೆ ಅರ್ಜಿ ಯನ್ನು ಆಕೆ ಸಲ್ಲಿಸಿದ್ದರು. ನಾನು ದೊಡ್ಡ ಸ್ಟಾರ್ ಆಗಬೇಕು ಎಂಬುದು ನಿರ್ಮಾಲ ಕನಸಾಗಿತ್ತು. ಮದ್ರಾಸ್ ಫಿಲ್ಮ್ ಇನ್ಸ್ಟಿಟ್ಯೂಟ್ಗಾಗಿ ಬೆಂಗಳೂರಿನಿಂದ ಚೆನ್ನೈಗೆ ಹೋಗಲು ನನ್ನ ಬಳಿ ಹಣವಿರಲಿಲ್ಲ. ನಿರ್ಮಲಾ ನನಗೆ 500 ರೂ ನೀಡಿದರು. ಆ ಹಣದಲ್ಲಿ ನಾನು ಚೆನ್ನೈಗೆ ಬಂದೆ. ಮದ್ರಾಸ್ ಫಿಲ್ಮ್ ಇನ್ಸ್ಟ್ಯೂಟ್ನಲ್ಲಿ ಸೇರಿದ ಬಳಿಕ ಒಂದು ದಿನ ಬೆಂಗಳೂರಿಗೆ ಹೋದೆ.ಆದರೆ ನಿರ್ಮಲಾ ಕಾಣಿಸಲಿಲ್ಲ.ಅಷ್ಟೇ ಅಲ್ಲ ಇದುವರೆಗೂ ತನ್ನ ಜೀವನದಲ್ಲಿ ನಿರ್ಮಲಾರನ್ನು ರಜನಿಕಾಂತ್ ನೋಡಲಿಲ್ಲವಂತೆ. ಆ ವಿಷಯ ಹೇಳುತ್ತಾ ಕಣ್ಣೀರಿಡಲು ಪ್ರಾರಂಭಿಸಿದರು. ಸುಮ್ಮನೆ ಅಳಲಿಲ್ಲ, ಬಿಕ್ಕಿಬಿಕ್ಕಿ ಅತ್ತರು ಎಂದು ದೇವನ್ ತಿಲಿಸಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಅಮರಾವತಿ, ಸೆ.29-ಚುನಾವಣೆಗೂ ಮುನ್ನವೇ ರಾಜ್ಯಾದಾದ್ಯಂತ ಮದ್ಯ ನಿಷೇಧ ಮಾಡಲಾಗುವುದು ಎಂದು ಭರವಸೆ ನೀಡಿದ್ದ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ಮೋಹನ್ರೆಡ್ಡಿ ಹಂತ ಹಂತವಾಗಿ ಜಾರಿಗೆ ತರಲು ಕ್ರಮಗಳನ್ನು ಕೈಗೊಂಡಿದ್ದಾರೆ. ಈ ನಿಟ್ಟಿನಲ್ಲಿ ಅಕ್ಟೋಬರ್ 1 ರಿಂದಲೇ ಕಾರ್ಯಪ್ರವೃತ್ತವಾಗುವ ಜಗನ್ ಸರ್ಕಾರವು 3500 ಖಾಸಗಿ ಮದ್ಯದ ಅಂಗಡಿಗಳನ್ನು ಸರ್ಕಾರದ ಅಧೀನಕ್ಕೆ ಪಡೆದುಕೊಳ್ಳಲು ಕ್ರಮಕೈಗೊಂಡಿದೆ. ಆಂಧ್ರದಾದ್ಯಂತ ಕಾರ್ಯಾಚರಣೆ ನಡೆಸಿದ್ದ ರಾಜ್ಯ ಪಾನೀಯ ನಿಗಮವು ಸೆಪ್ಟೆಂಬರ್ 1 ರಂದೇ 475 ವೈನ್ಶಾಪ್ಗಳನ್ನು ಒಳಪಡಿಸಿಕೊಂಡಿತ್ತು, ಈಗ ರಾಜ್ಯಾದಾದ್ಯಂತ 4380 ಮದ್ಯದಂಗಡಿಗಳಿದ್ದು ಅ.1 ರಿಂದ ಅದರ ಸಂಖ್ಯೆಯನ್ನು…
ಈ ಬೀಜಗಳು ಅಧಿಕ ನಾರಿನಂಶವನ್ನು ಹೊಂದಿವೆ. ಈ ಬೀಜಗಳನ್ನು ನೆನೆಸಿದ ನೀರಿನ ಸೇವನೆಯಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ ಮತ್ತು ಕರುಳುಗಳಲ್ಲಿ ಜೀರ್ಣಗೊಂಡ ಆಹಾರದ ಚಲನೆ ಸುಲಭಗೊಳ್ಳುತ್ತದೆ. ಈ ನೀರಿನ ಸೇವನೆಯ ಇತರ ಮಹತ್ವಗಳನ್ನು ನೋಡೋಣ. ಚಿಯಾ ಬೀಜಗಳ ಸೇವನೆಯ ಆರೋಗ್ಯಕರ ಪ್ರಯೋಜನಗಳು: ತೂಕ ಇಳಿಕೆಗೆ ಅಪಾರ ನೆರವು ನೀಡುವ ಆರೋಗ್ಯಕರ ವಿಧವೆಂದರೆ ಆಹಾರದಲ್ಲಿ ನಾರಿನಂಶವನ್ನು ಹೆಚ್ಚಿಸುವುದು. ಇದಕ್ಕೆ ಉತ್ತಮ ಆಯ್ಕೆ ಚಿಯಾ ಬೀಜಗಳು. ಇವುಗಳಲ್ಲಿ ಕರಗದ ನಾರು, ಪ್ರೋಟೀನ್, ಆರೋಗ್ಯಕರ ಕೊಬ್ಬುಗಳು, ಕ್ಯಾಲ್ಸಿಯಂ, ಮ್ಯಾಂಗನೀಸ್, ಮೆಗ್ನೀಸಿಯಮ್ ಮತ್ತು ರಂಜಕ…
ಮಾಲೂರಿನ ‘ಯಶವಂತಪುರ’ ಗ್ರಾಮ ರಾಜ್ಯದ ಮೊದಲ ಡಿಜಿಟಲ್ ವಿಲೇಜ್’ ಆಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಹಯೋಗದಲ್ಲಿ ರೂಪಿಸಿರುವ ರಾಜ್ಯದ ಮೊದಲ ಡಿಜಿಟಲ್ ವಿಲೇಜ್’ ಇದನ್ನು ಮಾಲೂರಿನ ಶಾಸಕ ಎಸ್.ಮಂಜುನಾಥ್ ಗೌಡ ಉದ್ಘಾಟನೆ ಮಾಡುವ ಮೂಲಕ ಲೋಕಾರ್ಪಣೆ ಮಾಡಿದರು.
ಹಾಲಿನಿಂದ ಬೆಳಕಾಗುವ ಪರಿ. ಇದೇನಿದು ಹಾಲಿನಿಂದ ಬೆಳಕೇ? ಸಂಸ್ಕೃತದಲ್ಲಿ ಒಂದು ಕಥೆ ಇದೆ. ಒಂದು ಸಲ ಹಾಲು ದೇವರನ್ನು ಕುರಿತು ತಪಸ್ಸು ಮಾಡಿತಂತೆ. ದೇವರು ಪ್ರತ್ಯಕ್ಷನಾಗಿ ಏನು ಸಮಸ್ಯೆ ಎಂದನಂತೆ. ಆಗ ಹಾಲು ಹೇಳಿತಂತೆ. ದೇವರೇ ನಾನು ಹಾಲು ಆಕಳು ಎಮ್ಮೆಯಿಂದ ಬಂದಾಗ ಶುದ್ಧವಾಗೇ ಇರುತ್ತೇನೆ. ಆದರೆ ಈ ಪಾಪಿ ಮಾನವ ನನಗೆ ಹುಳಿ ಇಂಡಿ ನನ್ನ ಮನಸ್ಸನ್ನು ಕೆಡಿಸಿಬಿಡುತ್ತಾನೆ. ನನಗೆ ಹಾಲಾಗೇ ಇರುವಂತೆ ವರ ಕೊಡು ಎಂದು ಬೇಡಿಕೊಂಡಿತಂತೆ. ಆಗ ದೇವರು ನಕ್ಕು ಎಲೈ ಹಾಲೇ…
ಇಂದಿನ ಚುನಾವಣೆ ಫಲಿತಾಂಶ ಇಂದು ದೇಶದ ಪ್ರಮುಖ ರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯ ಮತ ಎಣಿಕೆ ಬೆಳಿಗ್ಗೆ 8 ಗಂಟೆಯಿಂದ ಆರಂಭವಾಗಿದೆ. ಪಶ್ಚಿಮ ಬಂಗಾಳ, ತಮಿಳುನಾಡು, ಅಸ್ಸಾಂ, ಕೇರಳ ಮತ್ತು ಪುದುಚೇರಿ ಸೇರಿದಂತೆ ಹಲವು ರಾಜ್ಯಗಳಲ್ಲಿ ತೀವ್ರ ರಾಜಕೀಯ ಪೈಪೋಟಿ ನಡೆಯುತ್ತಿದೆ. ರಾಜ್ಯವಾರು ತಾಜಾ ಟ್ರೆಂಡ್ಗಳು 🟠 ಪಶ್ಚಿಮ ಬಂಗಾಳ (West Bengal) ಆರಂಭಿಕ ಟ್ರೆಂಡ್ಗಳಲ್ಲಿ BJP ಮುನ್ನಡೆ ಸಾಧಿಸಿದೆ ಕೆಲ ಕ್ಷೇತ್ರಗಳಲ್ಲಿ ತೃಣಮೂಲ ಕಾಂಗ್ರೆಸ್ (TMC) ಹತ್ತಿರದ ಪೈಪೋಟಿ ಪ್ರಮುಖ ನಾಯಕಿ ಮಮತಾ ಬ್ಯಾನರ್ಜಿ ಕೆಲವು…
ಸುಮಾರು 200 ವರ್ಷ ಹಳೆಯ ಶಿವಾಲಯ ದೇವಾಲಯವು ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ಪತ್ತೆಯಾಗಿದೆ. ಮರಳು ಗಣಿಗಾರಿಕೆ ವೇಳೆ ಶಿವ ದೇವಾಲಯ ಕಂಡು ಜನರು ಅಚ್ಚರಿಗೆಗೊಳಗಾಗಿದ್ದಾರೆ. ಸುಮಾರು 200 ವರ್ಷ ಹಳೆಯ ದೇಗುಲ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಮರಳು ಗಣಿಗಾರಿಕೆಯ ಸಮಯದಲ್ಲಿ ಈ ದೇಗುಲದ ಗೋಪುರ ಕಾಣಿಸಿಕೊಂಡಿದೆ. ಈ ಗೋಪುರವನ್ನು ಕಲ್ಲುಗಳಿಂದ ಮಾಡಲ್ಪಟ್ಟಿದ್ದು ಇದರ ಹಿನ್ನೆಲೆ ಮರಳಿನಲ್ಲಿ ಕಂಡ ದೇವಾಲಯವನ್ನು ತೆಗೆಯಲು ಸ್ಥಳೀಯರು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಇದರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಳು ಲಭ್ಯವಾಗಬೇಕಿದೆ ಎಂದು…