ವಿಚಿತ್ರ ಆದರೂ ಸತ್ಯ

7 ವರ್ಷದಿಂದ ಊಟ ಮಾಡದೆ, ನಿಂತಲ್ಲೇ ನಿಂತಿದೆ ಈ ಜೀವಿ, ಅಷ್ಟಕ್ಕೂ ಈ ಜೀವಿ ಯಾವುದು ಗೊತ್ತಾ.

146

ನಮ್ಮ ಪ್ರಪಂಚದಲ್ಲಿ ಅದೆಷ್ಟೋ ನಿಗೂಢಗಳು ಇನ್ನು ಇದೆ ಮತ್ತು ಆ ನಿಗೂಢಗಳನ್ನ ಭೇದಿಸಲು ಮನುಷ್ಯನಿಂದ ಇನ್ನು ಕೂಡ ಸಾಧ್ಯವಾಗಿಲ್ಲ, ದೇವರ ಸೃಷ್ಟಿಯಾದ ಈ ಪ್ರಪಂಚದಲ್ಲಿ ಯಾವುದೇ ಜೀವಿ ಕೂಡ ಜೀವಿಸಬೇಕು ಅಂದರೆ ಆಹಾರ, ನೀರು ಮತ್ತು ಗಾಳಿಯನ್ನ ಸೇವನೆ ಮಾಡಲೇಬೇಕು, ಹೆಚ್ಚುಕಮ್ಮಿ ಒಂದೆರಡು ದಿನ ಊಟ ಇಲ್ಲದೆ ಜೀವನವನ್ನ ಮಾಡಬಹುದು ಆದರೆ ಜಾಸ್ತಿ ದಿನ ಊಟ ಮಾಡದೆ ಇರಲು ಯಾರಿಂದಲೂ ಕೂಡ ಸಾಧ್ಯವಿಲ್ಲ ಮತ್ತು ಹೆಚ್ಚು ದಿನ ಆಹಾರವನ್ನ ಬಿಟ್ಟು ಇದ್ದರೆ ಆ ಜೀವಿಯ ಸಾವು ಕೂಡ ನಿಶ್ಚಿತ. ಇನ್ನು ಈ ಸೃಷ್ಟಿಯಲ್ಲಿ ಕೆಲವು ಪ್ರಾಣಿಗಳು ವಾರಗಟ್ಟಲೆ ಆಹಾರವನ್ನ ಸೇವನೆ ಮಾಡದೆ ಬದುಕುತ್ತದೆ, ಆದರೆ ನಾವು ಹೇಳುವ ಈ ಜೀವಿ ಮಾತ್ರ ಏಳು ವರ್ಷದಿಂದ ಏನನ್ನೂ ಕೂಡ ತಿನ್ನದೇ ನಿಂತಲ್ಲೇ ನಿಂತಿದೆ ಮತ್ತು ಅಷ್ಟೇ ಅಲ್ಲದೆ ಬದುಕಿದೆ ಕೂಡ.

ವಿಜ್ಞಾನ ಲೋಕಕ್ಕೆ ಸವಾಲನ್ನ ಹಾಕಿರುವ ಆ ಜೀವಿ ಯಾವುದು ಅನ್ನುವುದರ ಬಗ್ಗೆ ತಿಳಿಯೋಣ. ವಿಜ್ಞಾನ ಲೋಕಕ್ಕೆ ಸವಾಲನ್ನ ಹಾಕಿರುವ ಈ ಪ್ರಾಣಿಯ ಹೆಸರು ಕೇವ್ ಸಲಮೆಂಡರ ಅನ್ನುವ ಹಲ್ಲಿ ಜಾತಿಗೆ ಸೇರಿದ ಜೀವಿ, ಇನ್ನು ಈ ಜೀವಿಗಳು ಹೆಚ್ಚಾಗಿ ಯೂರೋಪ್ ನ ಬೋಸ್ನಿಯಾ ದೇಶದ ನೈಸರ್ಗಿಕ ಗುಹೆಗಳಲ್ಲಿ ವಾಸ ಮಾಡುತ್ತದೆ, ಗುಹೆಗಳಲ್ಲಿ ವಾಸ ಮಾಡುವ ಈ ಜೀವಿ ತುಂಬಾ ವಿಚಿತ್ರವಾದ ಪ್ರಾಣಿಗಳು ಆಗಿವೆ ಮತ್ತು ಇದಕ್ಕೆ ಕಾರಣ ಅವುಗಳು ಕ್ರಮಿಸುವ ದೂರ ಆಗಿದೆ.

ಇನ್ನು ಈ ಹಲ್ಲಿಗಳನ್ನ ಸೋಮಾರಿ ಹಲ್ಲಿಗಳೆಂದು ಕರೆಯಲಾಗುತ್ತದೆ, ಹೌದು ಹತ್ತು ವರ್ಷದಲ್ಲಿ ಈ ಹಲ್ಲಿಗಳು ಕ್ರಮಿಸುವ ದೂರ ಕೇವಲ 32 ಮೀಟರ್ ಮಾತ್ರ, ಈಗ ವಿಜ್ಞಾನಿಗಳಿಗೆ ಸವಾಲಾಗಿ ನಿಂತಿರುವುದು ಎಲ್ಲಾ ಸಲಮೆಂಡರ ಜಾತಿಯ ಹಲ್ಲಿಗಳು ಅಲ್ಲ ಬದಲಾಗಿ ಒಂದು ಹಲ್ಲಿ ಮಾತ್ರ. ಹೌದು ಬರೋಬ್ಬರಿ ಏಳು ವರ್ಷದಿಂದ ನಿಂತಲ್ಲೇ ನಿಂತಿರುವ ಈ ಒಂದು ಹಲ್ಲಿ ನಿಂತ ಜಾಗದಿಂದ ಸ್ವಲ್ಪನೂ ಕದಲದೆ ಯಾವುದೇ ಆಹಾರ ಕೂಡ ಸೇವನೆ ಮಾಡದೆ ಇನ್ನು ಜೀವಂತವಾಗಿದೆ. ಇನ್ನು ಏಳು ವರ್ಷದಿಂದ ಯಾವುದೇ ಆಹಾರವನ್ನ ಸೇವನೆ ಮಾಡದೆ ಈ ಹಲ್ಲಿ ಹೇಗೆ ಬದುಕಿದೆ ಎಂದು ತಿಳಿಯಲು ವಿಜ್ಞಾನಿಗಳು ಎಷ್ಟೇ ಪ್ರಯತ್ನ ಮಾಡಿದರು ಅವರಿಂದ ಅದನ್ನ ತಿಳಿದುಕೊಳ್ಳಲು ಸಾಧ್ಯವಾಗಿಲ್ಲ.

ಇನ್ನು ಸಿಕ್ಕಿರುವ ಕೆಲವು ಮಾಹಿತಿಗಳ ಪ್ರಕಾರ ಈ ಜಾತಿಯ ಹಲ್ಲಿಗಳು ಹತ್ತಾರು ವರ್ಷ ಬದುಕುತ್ತದೆ ಮತ್ತು ಕೆಲವೊಮ್ಮೆ ನೂರು ವರ್ಷ ಬದುಕುವುದು ಕೂಡ ಉಂಟು, ಆದರೆ ಯಾವುದೇ ಆಹಾರವನ್ನ ಸೇವನೆ ಮಾಡದೆ ನಿಂತಲ್ಲೇ ಏಳು ವರ್ಷದಿಂದ ನಿಂತಿಯುವ ಈ ಹಲ್ಲಿ ವಿಜ್ಞಾನ ಲೋಕಕ್ಕೆ ದೊಡ್ಡ ಸವಾಲಾಗಿ ನಿಂತು ದೊಡ್ಡ ದಾಖಲೆಯನ್ನ ಮಾಡಿದೆ. ತನಗೆ ಎಲ್ಲಾ ಗೊತ್ತು ಎಂದು ಭೀಗುವ ಮಾನವನಿಗೆ ನಿನಗೆ ಏನು ಗೊತ್ತಿಲ್ಲ ಎಂದು ಈ ಹಲ್ಲಿಯ ಮೂಲಕ ಸವಾಲನ್ನ ಎಸೆಯುತ್ತಿದೆ ಪ್ರಕೃತಿ, ಆಹಾರವನ್ನ ಸೇವನೆ ಮಾಡದೆ ಈ ಹಲ್ಲಿ ಇನ್ನು ಎಷ್ಟು ವರ್ಷ ಬದುಕುತ್ತದೆ ಎಂದು ನಾವು ಕಾದು ನೋಡಬೇಕಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಕರ್ನಾಟಕ

    ರಾಷ್ಟ್ರಕವಿ ಕುವೆಂಪುರವರಿಗೆ ಗೂಗಲ್‌ ಡೂಡಲ್‌ ಗೌರವ…ಗೂಗಲ್‌ ಮುಖಪುಟದಲ್ಲಿ ರಾರಾಜಿಸುತ್ತಿರುವ ಕನ್ನಡದ ಕಂಪು…

    ಇಂದು ಡಿಸೆಂಬರ್‌ 29 ರಾಷ್ಟ್ರಕವಿ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಅವರ 113 ನೇ ಜನ್ಮದಿನ. ವಿಶೇಷ ಸಂದರ್ಭದಲ್ಲಿ ವಿಶ್ವಮಾನವ ಸಂದೇಶ ಸಾರಿದ ಮಹಾನ್‌ ಕವಿಗೆ ಗೂಗಲ್‌ ವಿಶೇಷ ಡೂಡಲ್‌ ಮೂಲಕ ಗೌರವ ಸಲ್ಲಿಸಿದೆ.

  • ಸುದ್ದಿ

    ಇನ್ನುಮುಂದೆ ಮೇಘಾಲಯದಲ್ಲಿ ಒಂದು ದಿನಕ್ಕಿಂತ ಹೆಚ್ಚು ದಿನ ಉಳಿಯಬೇಕೆಂದರೆ ಇದನ್ನು ಪಾಲಿಸಲೇಬೇಕು..!ಏನದು?

    ಇನ್ನು ಮುಂದೆ ಮೇಘಾಲಯದಲ್ಲಿ ಒಂದು ದಿನಕ್ಕಿಂತ ಹೆಚ್ಚು ದಿನ ಉಳಿಯುವುದಾದರೆ ಮೇಘಾಲಯಕ್ಕೆ ಬರುವ ಮುನ್ನ ನೋಂದಾಯಿಸಿಕೊಳ್ಳಬೇಕು. ಅಲ್ಲಿನ ಬುಡಕಟ್ಟು ಜನಾಂಗದವರ ಸುರಕ್ಷತೆ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಶುಕ್ರವಾರ ನಡೆದ ಮೇಘಾಲಯ ಸಚಿವ ಸಂಪುಟ ಸಭೆಯಲ್ಲಿ ಅಮೆಂಡ್‌ಮೆಂಟ್ ಗೆ ಒಪ್ಪಿಗೆ ಸಿಕ್ಕಿದೆ. 2016ರ ಮೇಘಾಲಯ ರೆಸಿಡೆಂಟ್  ಕಾಯ್ದೆ ಪ್ರಕಾರ ಈ ವರದಿಯನ್ನು ಮನ್ನಿಸಲಾಗಿದೆ. ತಕ್ಷಣದಿಂದ ಕಾನೂನು ಜಾರಿಯಾಗುವಂತೆ ಆದೇಶಿಸಲಾಗಿದೆ ಎಂದು ಉಪಮುಖ್ಯಮಂತ್ರಿ ತಿಳಿಸಿದ್ದಾರೆ. ಒಂದೊಮ್ಮೆ 24 ಗಂಟೆಗಿಂತ ಹೆಚ್ಚು ಇರುವುದಾದರೆ ಸರ್ಕಾರಕ್ಕೆ ದಾಖಲೆಗಳನ್ನು ಸಲ್ಲಿಸಬೇಕು. ತಕ್ಷಣದಿಂದ ಜಾರಿಗೆ…

  • ತಂತ್ರಜ್ಞಾನ

    ನೀವು ಫೇಸ್ಬುಕ್ ನಲ್ಲಿ ಬೇರೆಯವರ ಫೋಟೋ ಹಾಕುವ ಮುನ್ನ ನಿಮ್ಗೆ ಇದು ತಿಳಿದಿರಬೇಕು..!

    ಫೋಟೋ ಪೋಸ್ಟ್ ಮಾಡಿದ ವ್ಯಕ್ತಿ ನಿಮಗೆ ಟ್ಯಾಗ್ ಮಾಡಿಲ್ಲವಾದಲ್ಲಿ ಮಾತ್ರ ಈ ಸಂದೇಶ ನಿಮಗೆ ಬರಲಿದೆ. ಸಾಮಾಜಿಕ ಜಾಲತಾಣದ ದೈತ್ಯ ಫೇಸ್ಬುಕ್ ಫೋಟೋವನ್ನು ಗುರುತಿಸಲು ಫೇಶಿಯಲ್ ರೆಕಗ್ನೈಸ್ ಟೆಕ್ನಾಲಜಿಯನ್ನು ಬಳಸಲಿದೆ.

  • ಕವಿ

    ಸಾಹಿತಿ ಕಾಮರೂಪಿ ಇನ್ನಿಲ್ಲ

    ಕೋಲಾರ ಜಿಲ್ಲೆಯ ಹಿರಿಯ ಪತ್ರಕರ್ತರು ಹಾಗೂ ಸಾಹಿತಿಗಳಾದ ಎಂ.ಎಸ್.ಪ್ರಭಾಕರ (ಕಾಮರೂಪಿ) (87) ಇಂದು ಕೋಲಾರ ಕಠಾರಿಪಾಳ್ಯದ ಸ್ವಗೃಹದಲ್ಲಿ ವಯೋಸಹಜತೆಯಿಂದ ವಿಧಿವಶರಾದರು. ಕೋಲಾರದಲ್ಲಿ ಹುಟ್ಟಿ ಬೆಳೆದು ಉಪನ್ಯಾಸಕರಾಗಿ ಸೇವೆ ಆರಂಭಿಸಿ ಪತ್ರಕರ್ತ ಅಂಕಣಕಾರರಾಗಿ ಹೆಸರು ಸಂಪಾದಿಸಿ ದ ಹಿಂದೂ ಪತ್ರಿಕೆಯ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಿ ಖ್ಯಾತರಾಗಿದ್ದಾರೆ. ದಕ್ಷಿಣ ಆಫ್ರಿಕಾದ ನೀಗ್ರೋ ಜನಾಂಗದ ನೆಲ್ಸನ್ ಮಂಡೇಲಾ ಅವರನ್ನು ಸಂದರ್ಶನ ಮಾಡಿದ ಏಕೈಕ ಭಾರತೀಯ ಪತ್ರಕರ್ತ ಇವರಾಗಿದ್ದರು. ಕುದುರೆಮೊಟ್ಟೆ ಕಥಾ ಸಂಕಲನದಿಂದ ಕನ್ನಡ ಸಾರಸ್ವತ ಲೋಕಕ್ಕೆ ಚಿರಪರಿಚಿತರಾಗಿದ್ದರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ…

  • ಸುದ್ದಿ

    ಸಾರ್ವಜನಿಕರ ಮುಂದೆಯೇ ಚಾಕುವಿನಿಂದ ಇರಿದು ಯುವತಿಯ ಬರ್ಬರ ಹತ್ಯೆ …!

    20 ವರ್ಷದ ಯುವತಿಯನ್ನು ಸಾರ್ವಜನಿಕವಾಗಿ ಯುವಕನೊಬ್ಬ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ದೆಹಲಿಯ ಭೋಗಲ್ ಪ್ರದೇಶದಲ್ಲಿ ನಡೆದಿದೆ.ಈ ಘಟನೆ ಭೋಗಲ್ ಬಸ್ ನಿಲ್ದಾಣದ ಬಳಿ ನಡೆದಿದೆ. ಆರೋಪಿಯನ್ನು ಮುನಾಸೀರ್ ಎಂದು ಗುರುತಿಸಲಾಗಿದೆ. ಈ ಘಟನೆಯಲ್ಲಿ ಆತನಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯಕ್ಕೆ ದೆಹಲಿ ಪೊಲೀಸರು ಆರೋಪಿ ಮತ್ತು ಮೃತ ಯುವತಿಗೆ ಸಂಬಂಧ ಇದೆಯೇ ಎಂದು ತನಿಖೆ ನಡೆಸುತ್ತಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆರೋಪಿ ಮೊದಲಿಗೆ ಮೃತ ಯುವತಿಯ ಬಳಿ ಬಂದು ಮಾತನಾಡುತ್ತಿದ್ದನು. ಆದರೆ…

  • ಸುದ್ದಿ

    ಇನ್ಮುಂದೆ ಹೊಸ ಅಂಕಪಟ್ಟಿ ಪಡೆಯಬೇಕೆಂದರೆ ಆಧಾರ್‌ ಕಡ್ಡಾಯ,.!

    ನೀವು ಎಸೆಸೆಲ್ಸಿ ಅಂಕಪಟ್ಟಿ ಕಳೆದುಕೊಂಡಿದ್ದರೆ ಹೊಸತಾಗಿ ಪಡೆಯಲು ಇನ್ನು ಆಧಾರ್‌ ಕಡ್ಡಾಯ. ಇಷ್ಟು ಮಾತ್ರವಲ್ಲ ಅಂಕಪಟ್ಟಿಯಲ್ಲಿ ಏನಾದರೂ ಲೋಪಗಳು ಇದ್ದರೆ ಅದನ್ನು ಸರಿಪಡಿಸಿ ಹೊಸತನ್ನು ಪಡೆಯಲೂ ಅದು ಬೇಕು. ಈ ಬಗ್ಗೆ ರಾಜ್ಯ ಪ್ರೌಢ ಶಿಕ್ಷಣ ಮಂಡಳಿ ಸುತ್ತೋಲೆ ಹೊರಡಿಸಿದೆ. ಅಂಕಪಟ್ಟಿ ಕಳೆದುಕೊಂಡವರು ಅಥವಾ ಯಾವುದೇ ಅಭ್ಯರ್ಥಿ ದ್ವಿತೀಯ, ತೃತೀಯ ಅಥವಾ ನಾಲ್ಕನೇ ಅಂಕಪಟ್ಟಿಗೆ ಶಾಲೆಯ ಮೂಲಕವೇ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಿಗದಿ ಪಡಿಸಿರುವ ಶುಲ್ಕ ಪಾವತಿಸಿ, ಸಂಬಂಧ ಪಟ್ಟ…