ದೇವರು-ಧರ್ಮ

ಇಸ್ಕಾನ್ ದೇವಾಲಯದಲ್ಲಿ ಅದ್ಧೂರಿಯಾಗಿ ನಡೆದ ಗೋವರ್ಧನ ಪೂಜೆ…!ಇದರ ಇನ್ನಳೆಯೇನು ಗೊತ್ತಾ?

27

ನಗರದ ಇಸ್ಕಾನ್​ ದೇವಸ್ಥಾನದಲ್ಲಿ ಗೋವರ್ಧನ ಪೂಜೆ ಹಮ್ಮಿಕೊಳ್ಳಲಾಗಿತ್ತು. ಪ್ರತೀ ವರ್ಷ ಹಬ್ಬದಂತೆ ಆಚರಿಸುವ ಈ ದಿನವನ್ನ ಈ ಬಾರಿ ತುಂಬಾನೆ ವಿಶಿಷ್ಟವಾಗಿ ಆಚರಿಸಲಾಯಿತು.

ಭಾರಿ ಮಳೆಯಿಂದಾಗಿ ದ್ವಾರಕವೇ ಮುಳುಗುತ್ತಿದ್ದಾಗ, ಶ್ರೀ ಕೃಷ್ಣ ತನ್ನ ಕಿರು ಬೆರಳಲ್ಲಿ ಗೋವರ್ಧನ ಬೆಟ್ಟವನ್ನ ಎತ್ತಿ ಹಿಡಿದು, ದ್ವಾರಕೆಯ ಜನರನ್ನ ರಕ್ಷಿಸುತ್ತಾನೆ. ಅಂದಿನಿಂದ ಈ ದಿನದಂದು ಗೋವರ್ಧನಗಿರಿ ಪೂಜೆ ಮಾಡಲಾಗುತ್ತೆ. ಇನ್ನು ಪ್ರತೀ ವರ್ಷ ಈ ದಿನವನ್ನ ಸಂಭ್ರಮದಿಂದ ನಗರದ ಇಸ್ಕಾನ್​ ದೇವಸ್ಥಾನದಲ್ಲಿ ಗೋವರ್ಧನ ಪೂಜೆ ಮಾಡಲಾಗಿದ್ದು ಈ ಬಾರಿ ಬಹಳ ವಿಶಿಷ್ಟವಾಗಿ ಆಚರಿಸಲಾಗಿದೆ.

ಹಣ್ಣು- ಡ್ರೈ ಫ್ರೂಟ್ಸ್​ನ 1000ಕೆಜಿ ತೂಕದ ಕೇಕ್​ ಅನ್ನ ಗೋವರ್ಧನಗಿರಿ  ಬೆಟ್ಟ ಮಾದರಿಯಲ್ಲಿ ತಯಾರಿಸಲಾಗಿತ್ತು. ಜೊತೆಗೆ ದೇವರ ನೈವೇದ್ಯಕ್ಕೆ 56 ತರದ ತಿಂಡಿ ತಿನಿಸುಗಳನ್ನ ಇಡಲಾಯಿತು. ಎರಡು ಹಸುಗಳನ್ನ ತರಿಸಿ ಸಂಪ್ರದಾಯಿಕವಾಗಿ ಪೂಜೆಯನ್ನ ಕೂಡ ಸಲ್ಲಿಸಲಾಯಿತು.

ಪೂಜೆ ಪುನಸ್ಕಾರಗಳ ನಂತರ, ನೆರೆದಿದ್ದ ಸಾವಿರಾರು ಭಕ್ತರಿಗೆ ಅದೇ ಕೇಕ್​ನ್ನ ಪ್ರಸಾದವಾಗಿ ನೀಡಲಾಯಿತು. ಒಟ್ಟಾರೆ, ಈ ಬಾರಿ ಇಸ್ಕಾನ್​ನಲ್ಲಿ ನಡೆದ ಗೋವರ್ಧನ ಪೂಜೆ ತುಂಬಾನೆ ವಿಶೇಷವಾಗಿದ್ದು, ದೇವರ ದರ್ಶನ ಪಡೆದ ಭಕ್ತರು ಕೂಡ ಖುಷಿ ಪಟ್ರು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ