News

The Founding of YouTube A Short History
ವಿಜಯನಗರದಲ್ಲಿ ಭಿಕ್ಷಾಟನೆ ಜಾಲ: ಶಾಲೆ ರಜೆ ಎಂದು ಮಕ್ಕಳನ್ನೇ ಭಿಕ್ಷೆಗೆ ಇಳಿಸಿದ್ದ ತಾಯಂದಿರು
ಬ್ಯಾಕ್ ಟು ಬ್ಯಾಕ್ ಟ್ರೋಫಿ ಗೆದ್ದು ಇತಿಹಾಸ ಬರೆದ ಆರ್‌ಸಿಬಿ – ಬೆಂಗಳೂರು
ಶಿಕ್ಷಕರಿಗೆ ಎಐ (AI) ಆಧರಿತ ಹಾಜರಾತಿ ಫಜೀತಿ;
“ಸಿದ್ದರಾಮಯ್ಯ ಸೀಕ್ರೆಟ್ ರಿವೇಂಜ್‌, ಡಿಕೆಶಿ ಮತ್ತು ರಾಹುಲ್‌ ಗಾಂಧಿಗೆ ಸೈಲೆಂಟ್ ಏಟು”
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ಘೋಷಣೆ – ಡಿಕೆ ಶಿವಕುಮಾರ್ ಮುಂದಿನ ಸಿಎಂ?
ಸ್ಟೈಲ್‌ಗಾಗಿ ಕಡಿಮೆ ಬೆಲೆಯ ಸನ್‌ಗ್ಲಾಸ್ ಧರಿಸುತ್ತೀರಾ? ಹಾಗಾದರೆ ಈ ಅಪಾಯಗಳ ಬಗ್ಗೆ ತಿಳಿಯಲೇಬೇಕು!
DIGITAL ARREST SCAM : ವೃದ್ಧೆ ಆಸ್ತಿ ಮಾರಿ ಖಾತೆಯಲ್ಲಿಟ್ಟಿದ್ದ 24 ಕೋಟಿ ರೂ ಲೂಟಿ
ಭಾರತದಲ್ಲಿ ಚಿನ್ನದ ಬೇಡಿಕೆಗೆ ದೊಡ್ಡ ಹೊಡೆತ ಬಿದ್ದಿದೆ.
ಸಿಲ್ಕಿ ಮತ್ತು ಶೈನಿಂಗ್ ಕೂದಲಿಗೆ ಬೀಟ್ರೂಟ್‌ನ ಈ ಹೇರ್ ಕೇರ್ ಟಿಪ್ಸ್ ಪ್ರಯತ್ನಿಸಿ
ಮನರಂಜನೆ

ಬಿಗ್ ಬಾಸ್ ಮನೆಯಲ್ಲಿ ರಾಕೇಶ್ ಕಾಲಿಗೆ ಬಿದ್ದು ಕೈ ಮುಗಿದು ತಪ್ಪಾಯಿತೆಂದು ಕೇಳಿಕೊಂಡ ಅಕ್ಷತಾ..!

144

ಕನ್ನಡದ ಖಾಸಗಿ ವಾಹಿನಿಯಲ್ಲಿ ನಡೆಯುತ್ತಿರುವ ಬಿಗ್ ಬಾಸ್ ಶೋ ಆರರಲ್ಲಿ ಸದಾ ಸುದ್ದಿಯಲ್ಲೇ ಇರುವ ಅಕ್ಷತಾ ಮತ್ತು ರಾಕೇಶ್ ಸ್ಪರ್ಧಿಗಳು ಮತ್ತೆ ಈಗ ಬಿಸಿ ಬಿಸಿ ಸುದ್ದಿಯಲ್ಲಿದ್ದಾರೆ..

ಬಿಗ್ ಮನೆಯ ಮಂದಿಗೆ ಬಿಗ್‍ಬಾಸ್ ಲಕ್ಷುರಿ ಬಜೆಟ್ ಟಾಸ್ಕ್ ಕೊಟ್ಟಿದ್ದರು. ಆ ಟಾಸ್ಕ್ ಹೆಸರು ‘ಮಡಿಕೆ ಒಡಿ, ಲಕ್ಷುರಿ ಪಡಿ’. ಇದರ ಅರ್ಥ ಮಡಿಕೆಯನ್ನು ಒಡೆದು ಬಜೆಟ್ ಗಳಿಸುವುದಾಗಿದೆ. ಈ ಟಾಸ್ಕ್ ನಲ್ಲಿ ಮಡಿಕೆ ಒಡೆಯುವ ಜವಾಬ್ದಾರಿಯನ್ನು ರಶ್ಮಿ ಪಡೆದಿದ್ದು, ಮಡಿಕೆ ಒಡೆದ ಬಳಿಕ ಅದರಲ್ಲಿರುವ ಚೀಟಿಗಳನ್ನು ಓದಿ ಅಕ್ಷತಾ ಹೇಳಬೇಕಾಗಿತ್ತು.

ಟಾಸ್ಕ್ ಶುರುವಾಗಿ ರಶ್ಮಿ ಕಣ್ಣಿಗೆ ಬಟ್ಟೆ ಕಟ್ಟಲಾಗಿದ್ದು, ಮಡಿಕೆ ಒಡೆಯುತ್ತಿದ್ದರು. ಉಳಿದ ಸ್ಪರ್ಧಿಗಳು ಅವರಿಗೆ ಗೈಡ್ ಮಾಡಲು ಎಲ್ಲರೂ ಕೂಗಾಡುತ್ತಿದ್ದರು. ಈ ನಡುವೆ ಅಕ್ಷತಾ ಮಡಿಕೆಯಲ್ಲಿ ಸಿಕ್ಕ ಚೀಟಿಗಳನ್ನು ಓದಿ ಪದಾರ್ಥಗಳ ಹೆಸರನ್ನು ಹೇಳುತ್ತಿದ್ದರು. ಅಕ್ಷತಾ ಹೇಳುವ ಪದಾರ್ಥವನ್ನು ಆಂಡಿ ಬರೆಯುತ್ತಿದ್ದರು. ಆದರೆ ಎಲ್ಲರೂ ಕೂಗಾಡುತ್ತಿದ್ದ ಕಾರಣ ಅಕ್ಷತಾ ಹೇಳುತ್ತಿದ್ದ ಪದಾರ್ಥಗಳ ಹೆಸರು ಕೇಳಿಸುತ್ತಿರಲಿಲ್ಲ.

ಕೆಲವು ಬಾರಿ ಅಕ್ಷತಾ, ಆಂಡಿ ಬಳಿ ಬಂದು ಹೇಳುತ್ತಿದ್ದರು. ಈ ವೇಳೆ ಬಝರ್ ಶಬ್ಧ ಬಂತು. ಆಗ ಪಾಯಿಂಟ್ಸ್ ಇನ್ನೂ ಉಳಿದಿತ್ತು. ಹೀಗಾಗಿ ಕೋಪಗೊಂಡ ರಾಕೇಶ್, ಅಕ್ಷತಾ ವಿರುದ್ಧ ಕೂಗಾಡುತ್ತಿದ್ದರು. ಆಗ ರಾಕೇಶ್, ನೀನು ಹತ್ತಿರ ಬಂದು ಹೇಳಬೇಕಿತ್ತು. ಯಾಕಂದ್ರೆ ಇನ್ನು ಪಾಯಿಂಟ್ಸ್ ಇತ್ತು ಅಂತ ಅಕ್ಷತಾಗೆ ಹೇಳಿದ್ರು. ಆಗ ಅಕ್ಷತಾ, ಎಲ್ಲರೂ ಕೂಡಾಗುತ್ತಿದ್ದರು ಆದ್ದರಿಂದ ನನ್ನ ಧ್ವನಿ ಕೇಳಿಸುತ್ತಿರಲಿಲ್ಲ ಎಂದು ರಾಕೇಶ್‍ಗೆ ಉತ್ತರ ಕೊಟ್ಟರು.

ಮಾತು ಮುಂದುವರಿಸಿದ ರಾಕೇಶ್, ನೀನು ಎಲ್ಲರ ಧ್ವನಿಗಿಂತ ಜೋರಾಗಿ ಕೇಳಿಸುವ ರೀತಿ ಹೇಳಬೇಕಿತ್ತು ಎಂದು ಅಕ್ಷತಾಗೆ ಹೇಳಿದರು. ಇದರಿಂದ ಬೇಸರಗೊಂಡ ಅಕ್ಷತಾ ತಪ್ಪು ನನ್ನದೆ, ಕ್ಷಮಿಸಿ ಎಂದು ಹೇಳಿ ಕೈ ಮುಗಿದು ರಾಕೇಶ್ ಕಾಲಿಗೆ ಬಿದ್ದಿದ್ದಾರೆ. ಬಳಿಕ ಇದೇ ವಿಚಾರಕ್ಕೆ ಅಕ್ಷತಾ ಮತ್ತು ರಾಕೇಶ್ ನಡುವೆ ಮಾತಿನ ಚಕಮಕಿ ನಡೆದಿತ್ತು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಭವಿಷ್ಯ

    ಫೆಬ್ರವರಿಯಲ್ಲಿ ‘ಮೋದಿ’ಗೆ ಗಂಡಾಂತರ..!ಕಿಂಗ್ ಮೇಕರ್ ಆಗಲಿದ್ದಾರೆ “ಎಚ್’ಡಿಕೆ”!ಈ ಗುರೂಜಿಯಿಂದ ಭವಿಷ್ಯ…

    ಪ್ರಧಾನಿ ನರೇಂದ್ರ ಮೋದಿಗೆ ಗಂಡಾಂತರ ಕಾದಿದೆ ಎಂದು ಬ್ರಹ್ಮಾಂಡ ಗುರೂಜಿ ನರೇಂದ್ರ ಬಾಬು ಶರ್ಮ ಭವಿಷ್ಯ ನುಡಿದಿದ್ದಾರೆ.ಮಾಧ್ಯಮಗಳೊಂದಿಗೆ ಮಾತನಾಡಿದ ಗುರೂಜಿ, ಪ್ರಧಾನಿ ಈಗಾಗಲೇ ಎರಡು ದೊಡ್ಡ ಗಂಡಾಂತರಗಳಿಂದ ತಪ್ಪಿಸಿಕೊಂಡು ಸುರಕ್ಷಿತರಾಗಿದ್ದಾರೆ ಎಂದು ಹೇಳಿದ್ದಾರೆ.

  • ಉಪಯುಕ್ತ ಮಾಹಿತಿ

    ಬ್ಯಾಂಕ್’ಗಳಿಂದ ಸಾಲ ಪಡೆದುಕೊಂಡ ಗ್ರಾಹಕರಿಗೆ ಸಿಹಿ ಸುದ್ದಿ..!ತಿಳಿಯಲು ಈ ಲೇಖನ ಓದಿ..

    ಸಾಲಗಳಿಗೆ ವಿಧಿಸುವ ಬಡ್ಡಿ ದರವನ್ನು ನಿಗದಿಪಡಿಸಲು ವಾಣಿಜ್ಯ ಬ್ಯಾಂಕ್ ಗಳು ಏಪ್ರಿಲ್ 1 ರಿಂದ ಹೊಸ ವಿಧಾನ ಅಳವಡಿಸಿಕೊಂಡಿವೆ. ಭಾರತೀಯ ರಿಸರ್ವ್ ಬ್ಯಾಂಕ್ ಅಲ್ಪಾವಧಿ ಬಡ್ಡಿ ದರಗಳನ್ನು ಕಡಿತ ಮಾಡಿದ ಸಂದರ್ಭದಲ್ಲಿ ಬ್ಯಾಂಕ್ ಗಳು ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುತ್ತಿರಲಿಲ್ಲ. ಈ ಕಾರಣದಿಂದ ಆರ್.ಬಿ.ಐ. ಸೂಚನೆಯಂತೆ ಏಪ್ರಿಲ್ 1, 2016 ರಿಂದ ಎಂ.ಸಿ.ಎಲ್.ಆರ್. ವ್ಯವಸ್ಥೆ ಜಾರಿಗೆ ತರಲಾಗಿದೆ. ಇದರ ಆಧಾರದ ಮೇಲೆ ಬದಲಾಗುವ ಬಡ್ಡಿದರದ ಸಾಲಗಳನ್ನು ನಿಧಿಗಳ ಮೇಲಿನ ಹೆಚ್ಚುವರಿ ವೆಚ್ಚವನ್ನಾಧರಿಸಿದ ಬಡ್ಡಿದರಕ್ಕೆ(MCLR) ಜೋಡಿಸಲಾಗುತ್ತದೆ. ಮೂಲ ದರ ಆಧರಿಸಿ…

  • ಸಿನಿಮಾ

    ಶ್ರೀಮಂತ ಕುಟುಂಬದಲ್ಲಿ ಬೆಳೆದಿದ್ರೂ,ಈ ನಟನ ಜನಪರ ಕಾಳಜಿ ಬಗ್ಗೆ ಕೇಳಿದ್ರೆ ಶಾಕ್ ಆಗ್ತೀರಾ..!ತಿಳಿಯಲು ಈ ಲೇಖನಿ ಓದಿ…

    ಇವರನ್ನು ಬಿಟ್ಟರೆ ಬೇರೆ ಯಾರಾದರೂ, ಸಿನಿಮಾ ನಟ ಸಮಾಜ ಸುಧಾರಣೆಯ ಕೆಲಸಕ್ಕೆ ಕೈ ಹಾಕಿದ್ರೆ ತೋರಿಸಿ. ಮತ್ತೊಂದು ವಿಚಾರ ಇವರ ಬಗ್ಗೆ ನಾವು ಹೆಮ್ಮೆ ಪಡಬೇಕು ಇದುವರೆಗೆ ಯಾವ ಸಿನಿಮಾ ನಟನ ಬಾಯಿಂದ ಅಂಬೇಡ್ಕರ್,ಬುದ್ದರ ,ಬಸವಣ್ಣ ಟಿಪ್ಪು, ರವರ ಹೆಸರನ್ನು ವೇದಿಕೆ ಮೇಲೆ ಅಲ್ಲ ಸಿನಿಮಾದಲ್ಲು ಕೂಡ, ಹೇಳಿರುವ ಯಾವ ನಟರನ್ನು ನಾನು ನೋಡಿಲ್ಲ ಇಂಥಹ ನಾಯಕನನ್ನು ಪಡೆದ ನಾವೇ ಪುಣ್ಯ ವಂತರು. ನಾವೆಲ್ಲ ಅವರ ಬೆಂಬಲಕ್ಕೆ ನಿಲ್ಲೋಣ…

  • ವಿಚಿತ್ರ ಆದರೂ ಸತ್ಯ

    ಪ್ಲಾಸ್ಟಿಕ್ ತಿನ್ನುವ ಮೇಣದ ಹುಳುಗಳ ಆವಿಷ್ಕಾರ ಹೇಗಾಯಿತು ಗೊತ್ತೇ? ಓದಿ ಇದನ್ನು

    ಪ್ಲಾಸ್ಟಿಕ್ ತಿನ್ನುವ ಮೇಣದ ಹುಳುಗಳ ಆವಿಷ್ಕಾರ ಆಕಸ್ಮಿಕ ಮತ್ತು ಆಶ್ಚರ್ಯದ ಅನ್ವೇಷಣೆಯಾಗಿತ್ತು.. ಸ್ಪೇನ್ ನಲ್ಲಿ ಕ್ಯಾಂಟಾಬ್ರಿಯಾದ ಬಯೋಮೆಡಿಸಿನ್ ಮತ್ತು ಬಯೋಟೆಕ್ನಾಲಜಿ ವಿಶ್ವವಿದ್ಯಾನಿಲಯದ ವಿಜ್ಞಾನಿ ಮತ್ತು ಹವ್ಯಾಸಿ ಜೇನುಸಾಕಣೆಗಾರ್ತಿ ಫೆಡೆರಿಕಾ ಬೆರ್ಟೊಕ್ಚಿನಿಯು ತನ್ನ ಮನೆಯಲ್ಲಿ ಮೇಣದ ಹುಳುಗಳೊಂದಿಗೆ ಮುತ್ತಿಕೊಂಡಿರುವ ಜೇನು ಗೂಡುಗಳನ್ನು ನೋಡಿ ಬೇಸರಗೊಂಡು ಜೇನುಗೂಡಿನನ್ನು ಸ್ವಚ್ಛಗೊಳಿಸಲು ನಿರ್ಧರಿಸಿದರು, ಮೇಣದ ಹುಳುಗಳನ್ನು ಸಾಮಾನ್ಯ ಪ್ಲ್ಯಾಸ್ಟಿಕ್ ಶಾಪಿಂಗ್ ಬ್ಯಾಗ್ನಲ್ಲಿ ಇಟ್ಟುಹೋದರು. ಅವರು ಪ್ಲಾಸ್ಟಿಕ್ ಚೀಲವನ್ನು 6 7 ಗಂಟೆಗಳ ಬಳಿಕ ಅವರು ನೋಡಿದಾಗ, ಹುಳುಗಳು ಎಲ್ಲೆಡೆಯೂ ಪ್ಲಾಸ್ಟಿಕ್ ಅನ್ನು ಸಣ್ಣ…

  • ಉಪಯುಕ್ತ ಮಾಹಿತಿ

    ನೀವು ಜಿಮ್ ಗೆ ಹೋಗುತ್ತಿದ್ದರೆ, ಹೋಗುವ ಮುನ್ನ ಮರೆಯದೇ ಇದನ್ನು ಸೇವಿಸಿ!

    ಉತ್ತಮ ಆರೋಗ್ಯ ಹಾಗೂ ಸದೃಢ ದೇಹಕ್ಕಾಗಿ ಜನ ಜಿಮ್ ಗೆ ಹೋಗ್ತಾರೆ. ಕೆಲವರಿಗೆ ಸದೃಢ ದೇಹ ಹೊಂದುವ ಆಸೆ ಸಿಕ್ಕಾಪಟ್ಟೆ ಇರುತ್ತೆ. ಹಾಗಾಗಿ ಏನೂ ತಿನ್ನದೆ ಜಿಮ್ ಗೆ ಹೋಗ್ತಾರೆ. ಇದ್ರಿಂದ ಆರೋಗ್ಯ ಹಾಗೂ ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಖಾಲಿ ಹೊಟ್ಟೆಯಲ್ಲಿ ಜಿಮ್ ಗೆ ಹೋಗುವುದು ಒಳ್ಳೆಯದಲ್ಲ. ಅಲ್ಪ ಆಹಾರ ಸೇವನೆ ಮಾಡಿ ಜಿಮ್ ಗೆ ಹೋಗುವುದು ಬೆಸ್ಟ್. ಜಿಮ್ ಗೆ ಹೋಗುವ ಮೊದಲು ಹಾಲು ಮತ್ತು ಓಟ್ಸ್ ಸೇವನೆ ಮಾಡಿ. ಹೀಗೆ ಮಾಡುವುದರಿಂದ…

  • ಸಿನಿಮಾ

    KGF ಚಿತ್ರದ ಬಗ್ಗೆ ಪುನೀತ್ ರಾಜ್ ಸೇರಿದಂತೆ ಕನ್ನಡದ ಸ್ಟಾರ್ ನಟರು ಹೇಳಿದ್ದೇನು ಗೊತ್ತಾ..!

    ವಿಶ್ವಾದ್ಯಂತ ನಿನ್ನೆ ಬಿಡುಗಡೆಯಾದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ನಿರೀಕ್ಷೆಯಂತೆಯೇ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದ್ದು, ಕೇವಲ ಅಭಿಮಾನಿಗಳಿಂದ ಮಾತ್ರವಲ್ಲ ಇಡೀ ಸ್ಯಾಂಡಲ್ ವುಡ್ ಸ್ಟಾರ್ ಗಳೂ ಕೆಜಿಎಫ್ ಗೆ ಫಿದಾ ಆಗಿದ್ದಾರೆ. ಹೌದು.. ಕರ್ನಾಟಕ ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗದಲ್ಲೇ ಬಾಹುಬಲಿ ಬಳಿಕ ಭಾರಿ ಹವಾ ಸೃಷ್ಟಿಸಿರುವ ಚಿತ್ರ ಕೆಜಿಎಫ್.. ಪ್ರಶಾಂತ್ ನೀಲ್ ನಿರ್ದೇಶನದ ಮತ್ತು ಯಶ್ ಅಭಿನಯದ ಕೆಜಿಎಫ್ ಚಿತ್ರ ಅಬ್ಬರದ ಪ್ರಚಾರದಂತೆಯೇ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದೆ. ಕೆಜಿಎಫ್ ಚಿತ್ರಕ್ಕೆ…