News

ವಿಜಯನಗರದಲ್ಲಿ ಭಿಕ್ಷಾಟನೆ ಜಾಲ: ಶಾಲೆ ರಜೆ ಎಂದು ಮಕ್ಕಳನ್ನೇ ಭಿಕ್ಷೆಗೆ ಇಳಿಸಿದ್ದ ತಾಯಂದಿರು
ಬ್ಯಾಕ್ ಟು ಬ್ಯಾಕ್ ಟ್ರೋಫಿ ಗೆದ್ದು ಇತಿಹಾಸ ಬರೆದ ಆರ್‌ಸಿಬಿ – ಬೆಂಗಳೂರು
ಶಿಕ್ಷಕರಿಗೆ ಎಐ (AI) ಆಧರಿತ ಹಾಜರಾತಿ ಫಜೀತಿ;
“ಸಿದ್ದರಾಮಯ್ಯ ಸೀಕ್ರೆಟ್ ರಿವೇಂಜ್‌, ಡಿಕೆಶಿ ಮತ್ತು ರಾಹುಲ್‌ ಗಾಂಧಿಗೆ ಸೈಲೆಂಟ್ ಏಟು”
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ಘೋಷಣೆ – ಡಿಕೆ ಶಿವಕುಮಾರ್ ಮುಂದಿನ ಸಿಎಂ?
ಸ್ಟೈಲ್‌ಗಾಗಿ ಕಡಿಮೆ ಬೆಲೆಯ ಸನ್‌ಗ್ಲಾಸ್ ಧರಿಸುತ್ತೀರಾ? ಹಾಗಾದರೆ ಈ ಅಪಾಯಗಳ ಬಗ್ಗೆ ತಿಳಿಯಲೇಬೇಕು!
DIGITAL ARREST SCAM : ವೃದ್ಧೆ ಆಸ್ತಿ ಮಾರಿ ಖಾತೆಯಲ್ಲಿಟ್ಟಿದ್ದ 24 ಕೋಟಿ ರೂ ಲೂಟಿ
ಭಾರತದಲ್ಲಿ ಚಿನ್ನದ ಬೇಡಿಕೆಗೆ ದೊಡ್ಡ ಹೊಡೆತ ಬಿದ್ದಿದೆ.
ಸಿಲ್ಕಿ ಮತ್ತು ಶೈನಿಂಗ್ ಕೂದಲಿಗೆ ಬೀಟ್ರೂಟ್‌ನ ಈ ಹೇರ್ ಕೇರ್ ಟಿಪ್ಸ್ ಪ್ರಯತ್ನಿಸಿ
ರಾಜ್ಯದ ಜನತೆಗೆ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಶಾಕ್
ಸುದ್ದಿ

ದೇಹದ ಕೆಟ್ಟ ಕೊಬ್ಬು ಕರಗಬೇಕೆಂದರೆ ದಿನ ನಿತ್ಯ ಈ ಹಣ್ಣನ್ನು ತಿಂದರೆ ಸಾಕು,.!

131

ಹಣ್ಣುಗಳು ನಮ್ಮ ದೇಹದ ಆರೋಗ್ಯವನ್ನು ಕಾಪಾಡುವಲ್ಲಿ ಮುಖ್ಯ  ಪಾತ್ರ ವಹಿಸುತ್ತದೆ ಹಾಗೆಯೇ ಕೊಬ್ಬನ್ನು ಕರಗಿಸುವಲ್ಲಿಯೂ ಸಹ ಸಹಾಯ ಮಾಡುತ್ತದೆ, ಒಂದೊಂದು ಹಣ್ಣಿನಲ್ಲಿ ಒಂದೊಂದು ರೀತಿಯ  ಪೋಷಕಾಂಶಗಳು ಹಾಗೂ ವಿಟಮಿನ್ ಗಳು ನಮಗೆ ಸಿಗುತ್ತದೆ . ಹೀಗಾಗಿ ಎಲ್ಲಾ ರೀತಿಯ ಹಣ್ಣುಗಳನ್ನು ತಿನ್ನುವುದರಿಂದ  ಅದರ ಲಾಭಗಳು ನಮಗೆ ಸಿಗುತ್ತದೆ. ಕೆಲವು ಹಣ್ಣುಗಳು ರುಚಿಯಲ್ಲಿ ತುಂಬಾ ಸಿಹಿಯಲ್ಲದೆ ಇದ್ದರೂ ಅದರಲ್ಲಿ ದೇಹಕ್ಕೆ ಬೇಕಾಗುವಂತಹ ಪ್ರಮುಖ ಪೋಷಕಾಂಶಗಳು ಇರುತ್ತದೆ. ಹಾಗೆಯೆ ಅದರಲ್ಲಿ ಅವಕಾಡೊ(ಬೆಣ್ಣೆ ಹಣ್ಣು) ಹಣ್ಣು ಕೂಡ ಒಂದಾಗಿದೆ. ಅವಕಾಡೊ ಹಣ್ಣು ಬಾಯಿಗೆ ರುಚಿಸದೆ ಇದ್ದರೂ ಇದರಲ್ಲಿ ಇರುವಂತಹ ಪೋಷಕಾಂಶಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅವಕಾಡೊ ಹಣ್ಣನ್ನು ಹೆಚ್ಚಿನವರು ತಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಲು ಹಿಂಜರಿಯುವರು. ಬೆಳಗ್ಗೆ ಉಪಾಹಾರಕ್ಕೆ ಅಥವಾ ರಾತ್ರಿ ಊಟದ ವೇಳೆ ಅವಕಾಡೊ ಸೇವನೆ ಮಾಡುವಂತಹ ಜನರ ಸಂಖ್ಯೆಯು ಕಡಿಮೆ. ಇದರ ರುಚಿಯ ಹೊರತಾಗಿಯೂ ಇದರಲ್ಲಿ ಯಾವ ಲಾಭಗಳು ಇವೆ ಎಂದು ನಾವು ಇಲ್ಲಿ ತಿಳಿಯೋಣ.

ಅವಕಾಡೊದ ಆಂಟಿಆಕ್ಸಿಡೆಂಟ್ ಯಾವುದಕ್ಕೆ ನೆರವಾಗುವುದು : ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಇದ್ದರೆ ಆಗ ಹೃದಯ ಸಂಬಂಧಿ ಕಾಯಿಲೆಗಳು ಬರುತ್ತದೆ. ಕೆಟ್ಟ ಕೊಲೆಸ್ಟ್ರಾಲ್  ನಿವಾರಣೆ ಮಾಡುವ ಅಂಶಗಳು  ಅವಕಾಡೊದಲ್ಲಿ ಇದೆ ಎಂದು ಸಂಶೋಧನೆಯಲ್ಲಿ  ಸಾಬೀತಾಗಿದೆ. ಒಳ್ಳೆಯ ಕೊಲೆಸ್ಟ್ರಾಲ್ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಬಗ್ಗೆ ಜನರಿಗೆ ಹೆಚ್ಚಾಗಿ ತಿಳಿದಿಲ್ಲ. ಕೆಟ್ಟ ಕೊಲೆಸ್ಟ್ರಾಲ್ ಎಂದರೆ ಆಕ್ಸಿಡೀಕೃತ ಕಡಿಮೆ ಸಾಂದ್ರತೆಯಲಿಪೊಪ್ರೋಟೀನ್(ಎಲ್ ಡಿಎಲ್) ಮತ್ತು ಸಣ್ಣ ಸಾಂದ್ರತೆಯ ಎಲ್ ಡಿಎಲ್ ಕಣಗಳು. ಅದೇ ಒಳ್ಳೆಯಕೊಲೆಸ್ಟ್ರಾಲ್ ಎಂದರೆ ಅಧಿಕ ಸಾಂದ್ರತೆಯ ಲಿಪೊಪ್ರೋಟೀನ್(ಎಚ್ ಡಿಎಲ್).

ಸಂಶೋಧನೆ : ಸುಮಾರು21ರ ಹರೆಯದಿಂದ 70ರ ಹರೆಯದ 45 ಪುರುಷರು ಹಾಗೂ ಮಹಿಳೆಯರನ್ನು ಐದು ವಾರಗಳ ಕಾಲ ಅವಕಾಡೊ ನೀಡಿ ಪರೀಕ್ಷೆ ಮಾಡಲಾಯಿತು. ಈ ಪರೀಕ್ಷೆಗೆ ಒಳಪಟ್ಟವರು ಎಲ್ಲವರು ಅಧಿಕ ತೂಕ ಅಥವಾ ಬೊಜ್ಜು ಮತ್ತು ಎಲ್ಡಿಎಲ್ ಮಟ್ಟವನ್ನು ಹೆಚ್ಚು ಹೊಂದಿದ್ದರು. ಇವರೆಲ್ಲರಿಗೂ ಕೊಲೆಸ್ಟ್ರಾಲ್ ಕಡಿಮೆ ಮಾಡುವಂತಹ ಎರಡು ಬಗೆಯ ಆಹಾರ ನೀಡಲಾಯಿತು. ಇದರಲ್ಲಿ ಒಂದು ಶೇ.24ರಷ್ಟು ಕೊಬ್ಬಿನಿಂದ ಪಡೆದ ಕ್ಯಾಲರಿಯ ಹೊಂದಿರುವ ಕಡಿಮೆ ಕೊಬ್ಬಿನ ಆಹಾರ ಮತ್ತು ಎರಡನೇಯದು ಮಧ್ಯಮ ಕೊಬ್ಬು ಹೊಂದಿರುವ ಕೊಬ್ಬಿನಿಂದ ಶೇ.36ರಷ್ಟುಕ್ಯಾಲರಿ ಪಡೆಯುವ ಆಹಾರ ನೀಡಲಾಯಿತು. ಮಧ್ಯಮ ಕೊಬ್ಬು ಹೊಂದಿರುವ ಆಹಾರ ಕ್ರಮದಲ್ಲಿ ಒಂದು ಮಧ್ಯಮಗಾತ್ರದ ಅವಕಾಡೊ(136 ಗ್ರಾಂ) ನೀಡಲಾಯಿತು. ಇದರಿಂದ ಅಧ್ಯಯನಗಳು ಕಂಡುಕೊಂಡಿರುವಂತಹ ವಿಚಾರವೆಂದರೆ ದಿನಕ್ಕೊಂದು ಅವಕಾಡೊ ಸೇವಿಸಿದರೆ ದೇಹದಲ್ಲಿರುವ ಎಲ್ ಡಿಎಲ್ ಮಟ್ಟವನ್ನು ಕಡಿಮೆ ಮಾಡುತ್ತದೆ . 

ದಿನಕ್ಕೊಂದು ಬೆಣ್ಣೆಹಣ್ಣು : ರಕ್ತನಾಳಗಳಲ್ಲಿ ಶೇಖರಣೆ ಆಗಿರುವ ಕೊಬ್ಬಿನ ಪದರಗಳಿಂದಾಗಿ ಅಧಿಕ ಸಂಖ್ಯೆಯ ಜನರು ಹೃದಯದ ಕಾಯಿಲೆಗಳಿಂದಾಗಿ ಸಾವನ್ನಪ್ಪುವರು. ಈ ಪದರ ನಿರ್ಮಾಣವನ್ನು ಕಡಿಮೆ ಮಾಡಿದರೆ ಆಗ ಹೃದಯದ ಕಾಯಿಲೆಗಳನ್ನು ಅರ್ಧದಷ್ಟುತಡೆಗಟ್ಟಿದಂತೆ. ದಿನಕ್ಕೆ ಒಂದು ಅವಕಾಡೊ ತಿಂದರೆ ಅದರ ಲಾಭಗಳು ಸಿಗುವುದು. ಆದರೆ ಬೇಗ ಇದರ ಲಾಭಪಡೆಯಲು ಹೆಚ್ಚಿನ ಮಟ್ಟದಲ್ಲಿ ಸೇವನೆ ಮಾಡಿದರೆ ಅವಕಾಡೊದಲ್ಲಿ ಇರುವಂತಹ 230 ಕ್ಯಾಲರಿಯು ತೂಕಹೆಚ್ಚಳಕ್ಕೆ ಕಾರಣವಾಗಬಹುದು ಮತ್ತು ಅದರಿಂದ ಸಿಗುವ ಲಾಭಗಳು ಸಿಗದೆ ಇರಬಹುದು. ಆದ್ದರಿಂದ ನಿಮ್ಮಆಹಾರ ಕ್ರಮದಲ್ಲಿ ಅವಕಾಡೊವನ್ನು ಸೇರಿಸಿಕೊಳ್ಳಿ ಮತ್ತು ಇದನ್ನು ಮುಂದುವರಿಸಿಕೊಂಡು ಹೋಗಿ. ಇದು ಆರೋಗ್ಯಕಾರಿ ಕೊಬ್ಬನ್ನು ನೀಡುವುದು ಮಾತ್ರವಲ್ಲದೆ, ಹೃದಯದ ಕಾಯಿಲೆ ಸಮಸ್ಯೆ ನಿವಾರಣೆಮಾಡುವುದು. ಆದರೆ ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ ನೀವು ಇದನ್ನು ತುಂಬಾ ಮಿತ ಪ್ರಮಾಣದಲ್ಲಿಸೇವನೆ ಮಾಡಬೇಕು.

ಅವಕಾಡೊಆಹಾರ ಕ್ರಮದಲ್ಲಿ ಹೇಗೆ ಸೇರಿಸಿಕೊಳ್ಳುವುದು? 136 ಗ್ರಾಂ ಅವಕಾಡೊಎಂದರೆ ಅದು ಮೂರನೇ ಎರಡುಕಪ್ ನಷ್ಟು ಗ್ವಾಕಮೋಲ್ ಗೆ ಸಮಾನವಾಗಿದೆ. ಎರಡು ತುಂಡು ಅವಕಾಡೊಟೋಸ್ಟ್ ಅಥವಾ ಅವಕಾಡೊ ಚಾಕಲೇಟ್ಟ್ರಫ್ಫೆಲ್ ಗೆ ಸಮಾನ. ನೀವುಒಂದೇ ಸಲ ಇದನ್ನು ಸೇವನೆಮಾಡಬಹುದು. ಬೆಳಗ್ಗೆ ಕೆಲವು ತುಂಡುಅವಕಾಡೊ ಜತೆಗೆ ಮೊಟ್ಟೆ, ಗ್ವಾಕಮೋಲ್ಅನ್ನು ಮಧ್ಯಾಹ್ನದ ಊಟಕ್ಕೆ ಮತ್ತು ರಾತ್ರಿಗೆಅವಕಾಡೊ ಚಾಕಲೇಟ್ ಬಳಸಿಕೊಳ್ಳಬಹುದು. ನೀವುಇದನ್ನು ಪಾಲಿಸಿದರೆ ನಿಮ್ಮ ಹೃದಯದ ಆರೋಗ್ಯವುಚೆನ್ನಾಗಿರುವುದು. 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಗಣಪತಿಗೆ ಮಾನವ ಮುಖ ಇರುವ ಜಗತ್ತಿನ ಏಕೈಕ ದೇವಾಲಯ! ಇಲ್ಲಿ ಗಜಮುಖನಿಗಲ್ಲ ನರ ಮುಖದ ಗಣಪತಿಗೆ ನಡೆಸಲಾಗುತ್ತದೆ ಪೂಜೆ…!!

    ನಾವೆಲ್ಲಾ ತಿಳಿದಂತೆ ಪಾರ್ವತಿ-ಪರಶಿವನ ಪುತ್ರನಾದ ಗಣೇಶನ ಶಿರವನ್ನು ಶಿವ ತನ್ನ ತ್ರಿಶೂಲದಿಂದ ಕಡಿದುರುಳಿಸಿದ ಬಳಿಕ ಆತನಿಗೆ ಆನೆಯ ಮುಖವೊಂದನ್ನು ಜೋಡಿಸಲಾಗುತ್ತದೆ. ಅಂದಿನಿಂದ ಇಂದಿನವರೆಗೂ ಗಣಪತಿಯನ್ನು ಗಜಮುಖ ರೂಪದಲ್ಲಿಯೇ ಪೂಜಿಸುತ್ತೇವೆ. ಆದರೆ ನಮಗೆಲ್ಲ ತಿಳಿಯದಿರುವ ವಿಚಾರವೆಂದರೆ ತಮಿಳುನಾಡಿನ ತಿಲತರ್ಪಣ ಪುರಿಯಲ್ಲಿ ನರ ಮುಖದ ಗಣೇಶನನ್ನು ಪೂಜಿಸಲಾಗುತ್ತದೆ ಎನ್ನುವುದು. ಗಣೇಶನನ್ನು ಆತನ ಮೂಲ ರೂಪವಾದ ‘ಆದಿ ವಿನಾಯಕ’ ರೂಪದಲ್ಲಿ ಪೂಜಿಸುವ ಜಗತ್ತಿನ ಏಕೈಕ ದೇವಾಲಯವಿದು. ತಮಿಳುನಾಡಿನ ಕುತ್ನೂರಿನಿಂದ ಎರಡು ಕಿ.ಮೀ ದೂರದಲ್ಲಿರುವ ತಿಲತರ್ಪಣ ಪುರಿ ದೇವಸ್ಥಾನದಲ್ಲಿ ನರಮುಖ ಆದಿವಿನಾಯಕನನ್ನು ಪೂಜಿಸಲಾಗುತ್ತದೆ….

  • ಸುದ್ದಿ

    ಮದರಂಗಿ ಬಣ್ಣ ಕೆಂಪಗಲು ಇಗೆ ಮಾಡಿ…!

    ಕೈಗಳ ಅಂದ ಹೆಚ್ಚಿಸಲು ಮಾತ್ರ ಮೆಹಂದಿ ಬಳಸುವುದಿಲ್ಲ. ಇದನ್ನು ಶುಭ ಸಂಕೇತವೆಂದು ನಂಬಲಾಗಿದೆ. ನಮ್ಮ ದೇಶದಲ್ಲಿ ಯಾವುದೇ ಹಬ್ಬ, ಸಮಾರಂಭವಿರಲಿ. ಕೈಗೆ ಮೆಹಂದಿ ಬಣ್ಣವಿಲ್ಲದೆ ಅದು ಪೂರ್ತಿಯಾಗುವುದಿಲ್ಲ. ಚೆಂದದ ಬಟ್ಟೆ, ಸುಂದರ ಮೇಕಪ್ ಜೊತೆ ಕೈ ಅಂದ ಹೆಚ್ಚಿಸಲು ಮೆಹಂದಿ ಇರಬೇಕು. ಮೆಹಂದಿಹಚ್ಚಿದ್ರೆ ಸಾಕಾಗೊಲ್ಲ, ಅದು ಸರಿಯಾಗಿ ಬಣ್ಣ ಬಿಡಬೇಕು. ಎಲ್ಲ ಡಿಸೈನ್ ಸರಿಯಾಗಿ ಮೂಡಬೇಕು.ಕೆಲವೊಮ್ಮೆ ಮೆಹಂದಿ ಹಸಿಯಿರುವಾಗ ಸುಂದರವಾಗಿ ಕಾಣುತ್ತೆ. ಆದ್ರೆ ಬಣ್ಣ ಮಾತ್ರ ಸರಿಯಾಗಿಬಂದಿರುವುದಿಲ್ಲ. ಕೆಲವರ ಕೈಗೆ ಮೆಹಂದಿ ಕೇಸರಿಯಾದ್ರೆ ಮತ್ತೆ ಕೆಲವರ ಕೈಗೆ…

  • inspirational

    ವಾಸ್ಕೋಡಿಗಾಮ ಭಾರತಕ್ಕೆ ಬಂದು ಇಂದಿಗೆ 520 ವರ್ಷ! ಹೇಗಿತ್ತು ಆತನ ಪ್ರಯಾಣ?

    ಯುರೋಪ್​ನಿಂದ ಭಾರತಕ್ಕೆ ಮೊದಲ ಬಾರಿಗೆ ಸಮುದ್ರಯಾನ ಕೈಗೊಂಡ ಯುರೋಪ್​ ನಾವಿಕ ವಾಸ್ಕೋಡಿಗಾಮ ಭಾರತಕ್ಕೆ ಬಂದು ಇಂದಿಗೆ 520 ವರ್ಷ ಕಳೆದಿವೆ. ವಾಸ್ಕೋಡಿಗಾಮ ಭಾತರಕ್ಕೆ ಬಂದು 523 ವರ್ಷಗಳು ಸಂದಿವೆ. 1460ರ ಸುಮಾರಿಗೆ ಜನಿಸಿದ ಪೋರ್ಚುಗೀಸ್​ ಕುಲೀನ ವಾಸ್ಕೋಡಿಗಾಮ 1497ರ ಜುಲೈ 8ರಂದು ಲಿಸ್ಬನ್​ನಿಂದ ಪ್ರಯಾಣ ಕೈಗೊಂಡು 1498 ಮೇ 20ರಂದು ಕ್ಯಾಲಿಕಟ್​ಗೆ ತಲುಪಿದನು. ಯುರೋಪ್​ನಿಂದ ಭಾರತಕ್ಕೆ ಮೊದಲ ಬಾರಿಗೆ ಸಮುದ್ರಯಾನ ಕೈಗೊಂಡ ಯುರೋಪ್​ ನಾವಿಕ ವಾಸ್ಕೋಡಿಗಾಮ ಭಾರತಕ್ಕೆ ಬಂದು ಇಂದಿಗೆ 523 ವರ್ಷ ಕಳೆದಿವೆ. ಭಾರತವನ್ನು ವಾಸ್ಕೋಡಿಗಾಮನಿಗಿಂತ…

  • Health, ಆಯುರ್ವೇದ, ಆರೋಗ್ಯ, ಉಪಯುಕ್ತ ಮಾಹಿತಿ

    ಪಾರಿಜಾತದ ಆರೋಗ್ಯಕರ ಗುಣಗಳು !!!

    ಪಾರಿಜಾತಕ ಎಂಬ ರಾಜಕುಮಾರಿ ಸೂರ್ಯನೊಡನೆ ಪ್ರೀತಿಗೆ ಬಿದ್ದಳು. ಆದರೆ, ಸೂರ್ಯ ಮುಲಾಜಿಲ್ಲದೆ ಅವಳ ಪ್ರೀತಿಯನ್ನು ತಿರಸ್ಕರಿಸಿದ. ಇದರಿಂದ ನೊಂದ ಪಾರಿಜಾತಕ ಆತ್ಮಹತ್ಯೆ ಮಾಡಿಕೊಂಡಳು. ಅವಳ ದೇಹದ ಬೂದಿಯಿಂದ ಉದಯಿಸಿದ್ದೇ ಸುಂದರವಾದ ಪಾರಿಜಾತದ ಗಿಡ. ಹೀಗೆ ಗಿಡವಾಗಿ ಹುಟ್ಟಿದ ಪಾರಿಜಾತಕಳಿಗೆ ದಿನ ಬೆಳಗಾದರೆ ಕಣ್ಣಿಗೆ ಬೀಳುವ ತನ್ನ ಪ್ರೇಮಿಯ ನೋಟ ನೋವನ್ನು ನೀಡುತ್ತದೆ. ಅದಕ್ಕಾಗಿಯೇ ಪಾರಿಜಾತದ ಹೂವುಗಳು ಬೆಳಗಿನ ಹೊತ್ತು ಬಾಡಿದ್ದು, ಸಂಜೆಯ ನಂತರ ಅರಳುತ್ತವೆ ಎನ್ನುತ್ತದೆ ಪುರಾಣ. ಸಸ್ಯದ ಸ್ವಭಾವಕ್ಕೆ ತಕ್ಕಂತಿದೆ ಈ ಕತೆ. ಇದೇ ಕಾರಣಕ್ಕೆ…

  • ಸುದ್ದಿ

    ವಿಚ್ಛೇದನ ನೀಡಿ ಎರಡನೇ ಮದುವೆ ಆದ್ರೂ, ಈ ಮಹಿಳೆ ತನ್ನ ಎರಡನೇ ಗಂಡನ ಜೊತೆಗೇ, ಮೊದಲ ಪತಿಯ ಸೇವೆ ಮಾಡುತ್ತಿದ್ದಾಳೆ..!ಏಕೆ?ತಿಳಿಯಲು ಈ ಲೇಖನ ಓದಿ…

    ಚೀನಾದಲ್ಲಿ ಮಹಿಳೆಯೊಬ್ಬಳು ತನ್ನ ಪಾರ್ಶ್ವವಾಯು ಪತಿಗೆ ವಿಚ್ಛೇದನ ನೀಡಿದ್ದಾಳೆ. ನಂತ್ರ ತನ್ನ ಸ್ನೇಹಿತನೊಬ್ಬನ ಜೊತೆ ಮದುವೆಯಾಗಿದ್ದಾಳೆ. ಇಷ್ಟಕ್ಕೆ ಕಥೆ ಮುಗಿಯಲಿಲ್ಲ.

  • ಮನರಂಜನೆ

    ಬಿಗ್‍ಬಾಸ್ ಸೀಸನ್ 7 ಟಿಕೆಟ್ ಟು ರಲ್ಲಿ ಫಿನಾಲೆ ಗೆದ್ದ ವಾಸುಕಿ ವೈಭವ್.

    ಈ ವಾರ ಬಿಗ್ ಮನೆಯಿಂದ ಹೊರ ಹೋಗಲು ಏಳು ಸ್ಪರ್ಧಿಗಳು ನಾಮಿನೇಟ್ ಆಗಿದ್ದರು. ಮನೆಯ ಎಲ್ಲಾ ಸದಸ್ಯರು ನಾಮಿನೇಟ್ ಆದರೂ ಬಿಗ್‍ಬಾಸ್ ಸ್ಪರ್ಧಿಗಳಿಗೆ ಫಿನಾಲೆ ಹಂತ ತಲುಪಲು ಒಂದು ಬಿಗ್ ಆಫರ್ ನೀಡಿದ್ದರು. ಈ ವಾರ ಅತಿ ಹೆಚ್ಚು ಪದಕ ಪಡೆಯುವ ಒಬ್ಬ ಸ್ಪರ್ಧಿ ‘ಬಿಗ್‍ಬಾಸ್ ಸೀಸನ್ 7’ ರ ಫಿನಾಲೆ ಹಂತವನ್ನು ತಲುಪುವ ಅವಕಾಶವನ್ನು ಬಿಗ್‍ಬಾಸ್ ನೀಡಿದ್ದರು. ಇದೀಗ ‘ಬಿಗ್‍ಬಾಸ್ ಸೀಸನ್ 7’ ರ ಮೊದಲ ಫೈನಲಿಸ್ಟ್ ಆಗಿ ವಾಸುಕಿ ಆಯ್ಕೆಯಾಗಿದ್ದಾರೆ. ಈ ವಾರ ಟಿಕೆಟ್…