ಆರೋಗ್ಯ

ಈ ಜ್ಯೂಸ್‌ ಅನ್ನು ಕುಡಿದರೆ ಸಾಕು ಕೆಮ್ಮು ಮಂಗಮಾಯ! ಈ ಉಪಯುಕ್ತ ಮಾಹಿತಿ ನೋಡಿ.

277

ಈಗ ಚಳಿಗಾಲ. ಅಂದರೆ ಸಣ್ಣ ಪುಟ್ಟ ಕಾಯಿಲೆಗಳಿಗೆ ಆಹ್ವಾನ ಕೊಡುವ ಕಾಲ. ನೀವು ಬೇಡ ಎಂದರೂ ಅವುಗಳು ಮಾತ್ರ ನಿಮ್ಮನ್ನು ಬಿಡುವುದಿಲ್ಲ. ವರ್ಷ ಪೂರ್ತಿ ಈ ಸಮಯಕ್ಕಾಗಿಯೇ ಹೊಂಚು ಹಾಕಿ ಕಾದು ಕುಳಿತಿರುತ್ತವೆ. ಅಕ್ಟೋಬರ್, ನವೆಂಬರ್ ತಿಂಗಳು ಪ್ರಾರಂಭವಾಗುತ್ತಿದ್ದ ಹಾಗೆ ಮೈಯಲ್ಲಿ ಬೆವರು ಕಡಿಮೆಯಾಗಿ ಮೂಗಿನಲ್ಲಿ ಶೀತ ದ್ರವ ಹರಿಯಲು ಪ್ರಾರಂಭವಾಗುತ್ತದೆ. ಇದನ್ನು ಹಾಗೇ ಬಿಟ್ಟರೆ ಒಂದರ ಹಿಂದೆ ಒಂದು ಕೊಂಡಿಯಂತೆ ಶೀತ, ಕೆಮ್ಮು, ಜ್ವರ ಹೀಗೆ ಒಂದೊಂದಾಗಿ ಬಂದು ಅಂಟಿಕೊಳ್ಳುತ್ತವೆ. ಅಷ್ಟು ದಿನಗಳವರೆಗೆ ಬೆಳಗ್ಗೆ ಎದ್ದು ಆಫೀಸಿನ ಕಡೆ ಮುಖ ಮಾಡುತ್ತಿದ್ದವರು ಹಠಾತ್ತನೆ ಆಸ್ಪತ್ರೆಯ ಕಡೆಗೆ ಓಡುವಂತೆ ಮಾಡುತ್ತವೆ. ಆದರೆ ಮುಂಜಾಗೃತಾ ಕ್ರಮವಾಗಿ ಕಾಯಿಲೆ ಬಂದ ಮೇಲೆ ಅದರ ಜೊತೆ ಹೆಣಗಾಡುವುದಕ್ಕಿಂತ ಬರದ ಹಾಗೆ ತಡೆಯುವುದು ಒಳಿತಲ್ಲವೇ? ಆ ಸಮಯದಲ್ಲಿ ಮಾತ್ರೆ ಅಥವಾ ಔಷಧಿಗಳು ನಮ್ಮ ಬಳಿ ಇಲ್ಲದೆ ಹೋದರೂ, ಕನಿಷ್ಠ ಪಕ್ಷ ಮನೆ ಮದ್ದು ಎಂದು ಪ್ರಸಿದ್ಧವಾಗಿರುವ ನಮ್ಮ ಅಡುಗೆ ಮನೆಯ ಹಲವಾರು ಆಹಾರ ಪದಾರ್ಥಗಳು ನಮಗೆ ಬಹಳ ಉಪಯೋಗವಾಗುತ್ತವೆ. ಇದರಲ್ಲಿ ಕೆಲವೊಂದು ಹಣ್ಣು-ತರಕಾರಿಗಳು ಸಹ ಸೇರಿವೆ.

ಇಂತಹ ಚಳಿಗಾಲಕ್ಕೆ ಎಂದೇ ಔಷಧಿಯಾಗಿ ಮಾರ್ಪಾಡಾಗುವ ಒಂದು ಹಣ್ಣು ಮತ್ತು ಅದರ ಹುಳಿ ಸಿಹಿ ಮಿಶ್ರಿತ ರಸ ನಮಗೆ ಆ ಕ್ಷಣದಲ್ಲಿ ತ್ವರಿತಗತಿಯಲ್ಲಿ ಕೆಮ್ಮನ್ನು ಉಪಶಮನ ಮಾಡುವ ಅದ್ಭುತ ಶಕ್ತಿಯನ್ನು ಹೊಂದಿದೆ. ಈ ಹಣ್ಣು ಮಿಕ್ಕ ಎಲ್ಲಾ ಸಮಯದಲ್ಲಿ ಕೇವಲ ರುಚಿಗಾಗಿ ಅದರ ಹಳದಿ ಬಣ್ಣದ ಹೋಳುಗಳ ಮೇಲೆ ಉಪ್ಪು ಖಾರ ಸವರಿಕೊಂಡು ತಿನ್ನಲು ಮಾತ್ರ ಯೋಗ್ಯ ಎಂದು ನೀವು ಅಂದುಕೊಂಡರೆ ಅದು ನಿಮ್ಮ ತಪ್ಪು ಕಲ್ಪನೆ. ಸಾಮಾನ್ಯವಾಗಿ ಇದರ ಅದ್ಭುತ ಆರೋಗ್ಯ ಪ್ರಯೋಜನಗಳು ಇದುವರೆಗೂ ನಿಮಗೆ ತಿಳಿದಿರುವುದಿಲ್ಲ ಎಂದುಕೊಳ್ಳುತ್ತೇವೆ. ವಿಶೇಷವಾಗಿ ಕೆಮ್ಮಿನ ಸಮಸ್ಯೆಗೆ ಈ ಹಣ್ಣು ಮತ್ತು ಅದರ ರಸ ಉಪಯೋಗಿಸಲ್ಪಡುತ್ತದೆ. ಇಷ್ಟೊಂದು ಈ ಹಣ್ಣಿನ ಬಗ್ಗೆ ಹೇಳಬೇಕಾದರೆ ಇದು ಯಾವುದೋ ಒಂದು ವಿಶೇಷವಾದ ಹಣ್ಣೇ ಆಗಿರಬೇಕು ಎಂದು ನಿಮ್ಮ ಮನಸ್ಸಿನಲ್ಲಿ ಬಂದಿದೆ ಎಂಬುದು ನಮಗೆ ಗೊತ್ತು

.ಹಾಗಾದರೆ ಈ ಹಣ್ಣು ಯಾವುದು? ಅದೇ ನಿಮ್ಮ ನೆಚ್ಚಿನ ಪೈನಾಪಲ್ ಹಣ್ಣು. ಹೌದು ನಾವು ಇದುವರೆಗೂ ಹೇಳಿದ್ದು ಇದರ ಬಗ್ಗೆಯೇ. ಪೈನಾಪಲ್ ಹಣ್ಣು ನಮ್ಮ ಎಂತಹದೇ ಕೆಮ್ಮಿಗೂ ಸಹ ಪೂರ್ಣ ವಿರಾಮ ವನ್ನು ಹಾಕಬಲ್ಲ ಶಕ್ತಿಯನ್ನು ಹೊಂದಿದೆ. ಕೆಮ್ಮಿಗೆ ಇದೊಂದು ಮನೆಮದ್ದು ಎಂದರೂತಪ್ಪಾಗುವುದಿಲ್ಲ. ಕೇವಲ ಪೈನಾಪಲ್ ಹಣ್ಣನ್ನು ತಿಂದರೆ ಕೆಮ್ಮು ದೂರಾಗುತ್ತದೆ ಅಥವಾ ಈ ಹಣ್ಣಿನ ಜೊತೆ ಬೇರೆ ಇನ್ಯಾವುದೇ ಆಹಾರ ಪದಾರ್ಥವನ್ನು ಬಳಸಬೇಕೇ ಎಂಬುದರ ಬಗ್ಗೆ ಈ ಲೇಖನದಲ್ಲಿ ಸ್ಪಷ್ಟತೆಯನ್ನು ಕೊಡಲಾಗಿದೆ.

ಪೈನಾಪಲ್ ಹಣ್ಣಿನ ರುಚಿ ಪ್ರತಿಯೊಬ್ಬರಿಗೂ ಇಷ್ಟವಾಗುತ್ತದೆ.ಅದರ ಹುಳಿ ಸಿಹಿ ಮಿಶ್ರಣದ ಜ್ಯೂಸು ಸಹ ಎಂತಹವರ ಬಾಯಲ್ಲೂ ನೀರು ತರಿಸುತ್ತದೆ. ಮನುಷ್ಯನ ದೇಹಕ್ಕೆ ಉಂಟಾಗುವ ಯಾವುದೇ ಬಗೆಯ ಸಣ್ಣ ಪುಟ್ಟ ಕಾಯಿಲೆಗಳನ್ನು ನಿಯಂತ್ರಣ ಮಾಡುವುದರಲ್ಲಿ ಪೈನಾಪಲ್ ನಲ್ಲಿರುವ ಆಂಟಿ – ಆಕ್ಸಿಡೆಂಟ್ ಗಳು ಸಹಾಯ ಮಾಡುತ್ತವೆ. ನಮ್ಮ ಜೀರ್ಣಾಂಗದ ಉತ್ತಮ ಕಾರ್ಯ ಚಟುವಟಿಕೆಗೆ ಪೈನಾಪಲ್ ಹಣ್ಣು ಸಹಕಾರಿ. ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ನಮಗೆ ಎದುರಾಗುವ ಕೆಮ್ಮು ಮತ್ತು ಶೀತದಂತಹ ಕಾಯಿಲೆಗಳಿಗೆ ಪೂರ್ಣವಿರಾಮ ಹಾಕುತ್ತದೆ.

ಪೈನಾಪಲ್ ಜ್ಯೂಸ್ ಅನ್ನು ಕೆಮ್ಮಿಗೆ ಒಂದು ಔಷಧಿಯಾಗಿ ಉಪಯೋಗಿಸಬಹುದು. ಏಕೆಂದರೆ ಪೈನಾಪಲ್ ಹಣ್ಣಿನ ರಸದಲ್ಲಿ ಬ್ರೊಮೆಲೈನ್ ಎಂಬ ಎಂಜೈಮ್ ಇದ್ದು ಇದರ ಆಂಟಿ – ಇಂಪ್ಲಾಮೇಟರಿ ಗುಣ ಲಕ್ಷಣಗಳು ಕೆಮ್ಮು ಮತ್ತು ಶೀತದಿಂದ ಉಂಟಾಗುವ ಯಾವುದೇ ಬಗೆಯ ಸೋಂಕುಗಳನ್ನು ಮತ್ತು ಅಲರ್ಜಿಗಳನ್ನು ಕಡಿಮೆ ಮಾಡುತ್ತದೆ. ಫೈನಾಪಲ್ ರಸವನ್ನು ನಿಯಮಿತವಾಗಿ ಸೇವಿಸುವುದರಿಂದ ನೆಗಡಿ ಕೆಮ್ಮಿನಂತಹ ಲಕ್ಷಣಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದು. ಇದರ ಬಗ್ಗೆ ಹಲವಾರು ಅಧ್ಯಯನಗಳು ಕೂಡ ತಮ್ಮ ಸಂಶೋಧನೆಯಲ್ಲಿ ತಿಳಿಸಿವೆ.

ಆರೋಗ್ಯ ತಜ್ಞರ ಪ್ರಕಾರ ” ಯಾವುದೇ ಒಬ್ಬ ಮನುಷ್ಯ ತನ್ನ ದೇಹಕ್ಕೆ ಯೋಗ, ವ್ಯಾಯಾಮದಂತಹ ಹವ್ಯಾಸಗಳನ್ನು ರೂಡಿಸಿ ಆಗಾಗ ಜೇನು ತುಪ್ಪದ ಜೊತೆಗೆ ಸ್ವಲ್ಪ ಬಿಸಿ ನೀರಿನ ಆವಿಯನ್ನು ತೆಗೆದುಕೊಂಡು ಪೈನಾಪಲ್ ಹಣ್ಣಿನ ರಸವನ್ನು ಸೇವಿಸುತ್ತಿದ್ದರೆ ಅದರಲ್ಲಿರುವ ಬ್ರೊಮೆಲೈನ್ ಎಂಜೈಮ್ ತನ್ನ ಆಂಟಿ – ಇನ್ಫಾಮೇಟರಿ ಗುಣ ಲಕ್ಷಣಗಳಿಂದ ಕೆಮ್ಮು ಮತ್ತು ಅದಕ್ಕೆ ಸಂಬಂಧಿಸಿದ ಇನ್ನಿತರ ಲಕ್ಷಣಗಳನ್ನು ನಿಗ್ರಹಿಸುತ್ತದೆ ಎಂದು ಹಲವಾರು ಸಂಶೋಧನಾ ಅಧ್ಯಯನಗಳು ದೃಢಪಡಿಸಿವೆ ” ಎಂದು ಹೇಳುತ್ತಾರೆ.

ಪೈನಾಪಲ್ ಅಥವಾ ಅನಾನಸ್‌ ಹಣ್ಣಿನ ರಸವನ್ನು ಕೆಮ್ಮಿಗೆ ಹೇಗೆ ಉಪಯೋಗಿಸಬೇಕು?

ನಾವು ಮೇಲೆ ಹೇಳಿದ ರೀತಿಯಲ್ಲಿ ಕೇವಲ ಪೈನಾಪಲ್ ಹಣ್ಣಿನ ರಸ ಕೆಮ್ಮಿನ ನಿವಾರಣೆಗೆ ಮಾಡುವ ಪ್ರಯೋಗಕ್ಕಿಂತ ಅದರ ಜೊತೆ ಇನ್ನಿತರೆ ಪ್ರಾಚೀನ ಕಾಲದಿಂದ ಪ್ರಸಿದ್ಧವಾದ ಮನೆ ಮದ್ದುಗಳನ್ನು ಬಳಸಿ ಉಪಯೋಗಿಸುವುದರಿಂದ ಹೆಚ್ಚಿನ ಪ್ರಯೋಜನ ಉಂಟಾಗುತ್ತದೆ. ಹಾಗಾದರೆ ಪೈನಾಪಲ್ ಹಣ್ಣಿನ ರಸದ ಜೊತೆಯಲ್ಲಿ ಉಪಯೋಗಿಸಲ್ಪಡುವ ಮನೆ ಮದ್ದುಗಳು ಯಾವುವು ಮತ್ತು ಅವುಗಳಿಂದ ಉಂಟಾಗುವ ಪ್ರಯೋಜನಗಳು ಏನೇನು ಎಂದು ಈಗ ನೋಡೋಣ ಬನ್ನಿ.

ಪೈನಾಪಲ್ ಜ್ಯೂಸ್ ಮತ್ತು ಜೇನುತುಪ್ಪ :ಇದೊಂದು ಸರಳ ವಿಧಾನವಾಗಿದ್ದು ಕೆಮ್ಮಿನ ಉಪಶಮನಕ್ಕೆ ಬಳಸುವ ಸಾಧಾರಣ ಮನೆ ಮದ್ದಾಗಿದೆ. ಆದರೂ ಕೂಡ ಇದು ಬಹಳ ಪ್ರಸಿದ್ದಿಯನ್ನು ಪಡೆದ ಕೇವಲ ಎರಡು ವಸ್ತುಗಳನ್ನು ಒಳಗೊಂಡ ಮತ್ತು ಅದ್ಭುತ ಪ್ರಯೋಜನಗಳನ್ನು ಹೊಂದಿರುವ ಒಂದು ಮನೆ ಔಷಧಿಯಾಗಿದೆ. ನೀವು ಇಲ್ಲಿ ಮಾಡಬೇಕಾಗಿರುವುದು ಇಷ್ಟೇ. ಅರ್ಧ ಕಪ್ ನಷ್ಟು ಉಗುರು ಬೆಚ್ಚಗಿನ ಪೈನಾಪಲ್ ಜ್ಯೂಸ್ ಗೆ ಒಂದು ಟೇಬಲ್ ಚಮಚದಷ್ಟು ಶುದ್ಧವಾದ ಜೇನು ತುಪ್ಪವನ್ನು ಹಾಕಿ ಚೆನ್ನಾಗಿ ಕಲಸಿ. ಈ ಮಿಶ್ರಣವನ್ನು ಬಿಸಿ ಇರುವಾಗಲೇ ಕುಡಿಯಿರಿ. ಇಲ್ಲಿ ಜೇನು ತುಪ್ಪ ಮತ್ತು ಪೈನಾಪಲ್ ಎರಡೂ ಸಹ ಕೆಮ್ಮನ್ನು ಗುಣಪಡಿಸುವ ಅಂಶಗಳನ್ನು ತಮ್ಮಲ್ಲಿ ಹೊಂದಿದ್ದು ಕೆಮ್ಮಿಗೆ ಉತ್ತಮ ಚಿಕಿತ್ಸೆಯನ್ನು ಒದಗಿಸುತ್ತವೆ.

ಪೈನಾಪಲ್ ಜ್ಯೂಸ್ ನ ಜೊತೆಗೆ ಉಪ್ಪು, ಮೆಣಸು ಮತ್ತು ಜೇನು ತುಪ್ಪದ ಸಮ್ಮಿಶ್ರಣ : ಆಯುರ್ವೇದ ಪದ್ಧತಿಯಲ್ಲಿ ಈ ಎಲ್ಲಾ ಆಹಾರ ಪದಾರ್ಥಗಳು ಸಹ ಕೆಮ್ಮನ್ನು ಉಪಶಮನ ಮಾಡುವ ಅತ್ಯದ್ಭುತ ಶಕ್ತಿಶಾಲಿ ಗುಣ ಲಕ್ಷಣವನ್ನು ಹೊಂದಿರುವ ವಸ್ತುಗಳು. ಇನ್ನು ಇವುಗಳ ಮಿಶ್ರಣ ಮಾಡುವ ಚಮತ್ಕಾರ ಕೇಳಬೇಕೇ?

ಒಂದು ಕಪ್ ನಷ್ಟು ಪೈನಾಪಲ್ ಜ್ಯೂಸ್ ಗೆ ಸುಮಾರು ಮುಕ್ಕಾಲು ಟೇಬಲ್ ಚಮಚದಷ್ಟು ಜೇನು ತುಪ್ಪ, ಚಿಟಿಕೆ ಉಪ್ಪು ಮತ್ತು ಚಿಟಿಕೆಯಷ್ಟು ಕಪ್ಪು ಮೆಣಸಿನ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಈ ಅಪರೂಪದ ಜ್ಯೂಸ್ ಅನ್ನು ಒಂದು ಸಲಕ್ಕೆ ಕಾಲು ಕಪ್ ನಂತೆ ದಿನಕ್ಕೆ ಮೂರು ಬಾರಿ ಸೇವಿಸಿ. ಆದರೆ ನೆನಪಿಡಿ, ಇದು ಶೀತ, ಕೆಮ್ಮು ಗಳಿಗೆ ಬಹಳ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಕಾರಣ ಇಲ್ಲಿರುವ ಎಲ್ಲಾ ಪದಾರ್ಥಗಳು ಉಷ್ಣ ಗುಣವನ್ನು ಹೊಂದಿರುವುದರಿಂದ. ಇದನ್ನು ಸೇವಿಸಿದ ಮೇಲೆ ನಿಮ್ಮ ದೇಹದ ನೀರಿನ ಅಂಶ ಕಡಿಮೆಯಾಗುವ ಸಂಭವ ಹೆಚ್ಚಿರುತ್ತದೆ. ಅದರಿಂದ ಇಡೀ ದಿನ ಸಾಕಷ್ಟು ನೀರನ್ನು ಕುಡಿಯಲು ಸೂಚಿಸಲಾಗಿದೆ.

ಕೆಲವೊಂದು ಎಚ್ಚರಿಕೆಗಳು :ಇಲ್ಲಿ ನೀವು ಪೈನಾಪಲ್ ಜ್ಯೂಸ್ ನ ಸೇವಿಸುವ ಪ್ರಮಾಣದ ಬಗ್ಗೆ ಎಚ್ಚರಿಕೆ ವಹಿಸಿ. ಒಂದು ವೇಳೆ ಇದನ್ನು ಸೇವಿಸಿದ ನಂತರ ನಿಮ್ಮ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾದರೂ ಇನ್ನೊಮ್ಮೆ ಕುಡಿಯಲು ಹೋಗಬೇಡಿ. ಅದೂ ಅಲ್ಲದೇ ಪೈನಾಪಲ್ ಜ್ಯೂಸ್ ಅನ್ನು ನಿಗದಿತ ಪ್ರಮಾಣಕ್ಕಿಂತ ಹೆಚ್ಚಿಗೆ ಕುಡಿಯಬೇಡಿ. ಆಹಾರ ತಜ್ಞರು ಹೇಳುವ ಪ್ರಕಾರ ಪೈನಾಪಲ್ ಜ್ಯೂಸ್ ಮನುಷ್ಯನ ದೇಹದಲ್ಲಿ ಕರುಳಿನ ಭಾಗದಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಉಂಟು ಮಾಡುತ್ತದೆ. ಅಷ್ಟೇ ಅಲ್ಲದೆ ಕೆಲವರಿಗೆ ಅಲರ್ಜಿಯ ಪ್ರತಿಕ್ರಿಯೆ, ಹೃದಯ ಬಡಿತದ ಹೆಚ್ಚುವಿಕೆ ಮತ್ತು ಹೆಂಗಸರಲ್ಲಿ ಮುಟ್ಟಿಗೆ ಸಂಬಂಧಪಟ್ಟ ತೊಂದರೆಗಳು ಎದುರಾಗುತ್ತವೆ. ಆದ್ದರಿಂದ ಪೈನಾಪಲ್ ಜ್ಯೂಸ್ ನ ಪ್ರಮಾಣದ ಬಗ್ಗೆ ವಿಪರೀತ ಗಮನ ವಹಿಸುವುದು ಒಳ್ಳೆಯದು ಮತ್ತು ಇದನ್ನು ಸೇವಿಸುವ ಮುಂಚೆ ಎಷ್ಟು ಪ್ರಮಾಣ ಸೇವಿಸಬೇಕೆಂದು ನಿಮಗೆ ನೀವೇ ತೀರ್ಮಾನ ಮಾಡುವುದನ್ನು ಬಿಟ್ಟು ವೈದ್ಯರನ್ನು ಸಂಪರ್ಕಿಸಿ ಸೂಕ್ತ ಸಲಹೆಯನ್ನು ಪಡೆಯುವುದು ಉತ್ತಮ.ಶುಂಠಿ ಚಹಾವನ್ನು ಒಮ್ಮೆ ಪ್ರಯತ್ನಿಸಿ. ಏಕೆಂದರೆ ಶುಂಠಿಯಲ್ಲಿ ಕೆಮ್ಮನ್ನು ಹೋಗಲಾಡಿಸುವ ವಿಶೇಷ ಗುಣ ಲಕ್ಷಣವಿದೆ.

ಬಿಸಿ ನೀರಿನ ಆವಿಯನ್ನು ನಿಯಮಿತವಾದ ರೀತಿಯಲ್ಲಿ ಆಗಾಗ ತೆಗೆದುಕೊಳ್ಳುತ್ತಿರಿ. ಕೆಮ್ಮು-ಶೀತ ಸಮಯದಲ್ಲಿ ನಮ್ಮ ದೇಹದಿಂದ ನಮಗೆ ಗೊತ್ತಿಲ್ಲದ ಹಾಗೆ ವಿಪರೀತ ನೀರಿನ ಅಂಶ ಬೆವರಿನ ಮುಖಾಂತರ ದೇಹದಿಂದ ಹೊರ ಹೋಗುತ್ತಿರುತ್ತದೆ. ಆದ್ದರಿಂದ ದೇಹದಲ್ಲಿ ನೀರಿನಂಶದ ಮಟ್ಟದ ಸಮತೋಲನವನ್ನು ಕಾಯ್ದುಕೊಳ್ಳಲು ಹೆಚ್ಚಿಗೆ ನೀರನ್ನು ಅಥವಾ ದ್ರವಾಹಾರಗಳನ್ನು ಸೇವಿಸಿ. ದಿನಕ್ಕೆರಡು 2 ಬಾರಿಯಂತೆ ಉಪ್ಪು ಮಿಶ್ರಿತ ನೀರನ್ನು ಬಾಯಿಗೆ ಹಾಕಿಕೊಂಡು ಬಾಯಿ ಮುಕ್ಕಳಿಸಿ. ಶೀತದ ಸಮಯದಲ್ಲಿ ಕೆಮ್ಮನ್ನು ಗುಣಪಡಿಸುವ ಕೆಲವೊಂದು ಸೂಪ್ ಗಳನ್ನು ಮಾಡಿಕೊಂಡು ದಿನಕ್ಕೆ ಒಂದು ಅಥವಾ ಎರಡು ಬಾರಿ ಸೇವಿಸಿ. ಮೇಲೆ ತಿಳಿಸಿದ ಮತ್ತು ಇದುವರೆಗೂ ಚರ್ಚಿಸಿದ ಎಲ್ಲಾ ವಿಷಯಗಳು ಕೇವಲ ನಿಮಗೆ ಶೀತದಿಂದ ಉಂಟಾದ ಕೆಮ್ಮಿಗೆ ಪರಿಹಾರಗಳು ಎಂದು ನೀವು ಭಾವಿಸಬೇಕು. ನಿಮಗೆ ಒಂದು ವೇಳೆ ದೀರ್ಘಕಾಲದಿಂದ ಇನ್ನಾವುದೇ ಕೆಮ್ಮಿನ ಸಮಸ್ಯೆ ಇದ್ದರೆ ದಯಮಾಡಿ ಈ ಮನೆ ಮದ್ದುಗಳ ಮೇಲೆ ಅವಲಂಬಿತ ರಾಗುವುದನ್ನು ನಿಲ್ಲಿಸಿ ವೈದ್ಯರ ಬಳಿ ಹೋಗಿ ಔಷಧಿಗಳನ್ನು ತೆಗೆದುಕೊಳ್ಳುವುದು ಉತ್ತಮ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ನಗರಕ್ಕೆ ಬಂದಿದೆ ಲೂಸಿಯಾ ಮಾತ್ರೆ! ಟೆಕ್ಕಿ ಮತ್ತು ಸ್ಟುಡೆಂಟ್​​ಗಳೇ ಇವರ ಟಾರ್ಗೆಟ್​​!!

    ಸ್ಯಾಂಡಲವುಡ್​ನಲ್ಲಿ ಹೊಸತನದಿಂದ ಗೆದ್ದಿದ್ದ ಚಿತ್ರ ಲೂಸಿಯಾ ಎಲ್ಲರ ಗಮನವನ್ನು ಸೆಳೆದಿದ್ದದ್ದು ಆ ಚಿತ್ರದಲ್ಲಿ ಹೀರೋ ಸತೀಶ್ ತೆಗೆದುಕೊಳ್ಳುತ್ತಿದ್ದ ಮಾತ್ರೆಯಿಂದ. ಇದೀಗಾ ಅಂತಹದ್ದೇ ಮಾತ್ರೆ ಬೆಂಗಳೂರಿಗೆ ಕಾಲಿಟ್ಟಿದ್ದು, ಟೆಕ್ಕಿ ಮತ್ತು ಕಾಲೇಜ್ ಸ್ಟೂಡೆಂಟ್‌ಗಳನ್ನು ಗಮನದಲ್ಲಿಟ್ಟುಕೊಂಡು ಈ ಗುಳಿಗೆ ಮಾರಾಟ ನಡೆಯುತ್ತಿದೆ ಎನ್ನಲಾಗಿದೆ. ಎಂತಹ ಮನುಷ್ಯನಾದರೂ ಕನಿಷ್ಠ 8-10 ಗಂಟೆಗಳ ಕಾಲ ಅಮಲಿನಲ್ಲಿ ಇಡಬಹುದಾದ ಈ ಮಾತ್ರೆ ಮಾದಕ ವಸ್ತುಗಳನ್ನು ಮೀರಿಸುವಷ್ಟು ಶಕ್ತಿ ಹೊಂದಿದೆ. ವಿದೇಶದಿಂದ ಬರುವ ಈ ಟ್ಯಾಬ್ಲೆಟ್ ಮೂಲ ಬರ್ಮಾ. ಒಂದು ಟ್ಯಾಬ್ಲೆಟ್‌ನ ಬೆಲೆ 1000 ರೂಪಾಯಿ….

  • ಜ್ಯೋತಿಷ್ಯ

    ದಿನ ಭವಿಷ್ಯ ಶನಿವಾರ, ರಾಶಿ ಭವಿಷ್ಯದ ಜೊತೆಗೆ ನಿಮ್ಮ ಅದೃಷ್ಟದ ಸಂಖ್ಯೆ ತಿಳಿಯಿರಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(20 ಏಪ್ರಿಲ್, 2019) ಜೀವನದಲ್ಲಿ ಒತ್ತಡದ ಮನೋಭಾವವನ್ನು ತಪ್ಪಿಸಿ ನಿಮ್ಮ ಪೋಷಕರು ನೀಡಿದ ಬೆಂಬಲದಿಂದ ಹಣಕಾಸು ಸಮಸ್ಯೆಗಳು ನಿವಾರಣೆಯಾದಂತೆನಿಸುತ್ತವೆ….

  • ಸುದ್ದಿ

    ನಿಮ್ಮ ಅದೃಷ್ಟವನ್ನು ಬದಲಾಯಿಸಿಕೊಳ್ಳಬೇಕೇ; ಹಾಗಾದರೆ ಅಮಾವಾಸ್ಯೆಯಂದು ಹೀಗೆ ಮಾಡಿದರೆ ಸಾಕು,..

    ಹಿಂದಿನ ಕಾಲದಲ್ಲಿ ಹಿಂದೂ ಸಮಾಜದಲ್ಲಿ ಅಮಾವಾಸ್ಯೆಯಂದು ತಿಂಗಳ ರಜೆಯನ್ನಾಗಿ ನೀಡಲಾಗುತ್ತಿತ್ತು. ಪ್ರತಿತಿಂಗಳೂ ಅವಮಾಸ್ಯೆಯಂದು ರಜೆ ಇತ್ತು. ಅಮಾವಾಸ್ಯೆಯು ಶುಭವಲ್ಲವೆಂದು ಯಾರೂ ಕೆಲಸ ಮಾಡುತ್ತಿರಲಿಲ್ಲ. ಪ್ರಯಾಣವನ್ನೂ ಕೂಡಾ ಅಮವಾಸ್ಯೆಯಂದು ಮಾಡುತ್ತಿರಲಿಲ್ಲ.ಚಂದ್ರನ ಚಕ್ರವು ಜಲಮೂಲಗಳ ಮೇಲೆಯೂಪ್ರಭಾವ ಬೀರುತ್ತದೆ ಇದರಿಂದಾಗಿ ಸಮುದ್ರದಲ್ಲೂ ಉಬ್ಬರವಿಳಿತಗಳೂ ಕಂಡು ಬರುತ್ತದೆ. ಮನುಷ್ಯನನಡವಳಿಕೆಯ ಮೇಲೂ ಚಂದ್ರನು ಪ್ರಭಾವಬೀರುವುದರಿಂದ ವ್ಯಕ್ತಿಯು ಪ್ರಕ್ಷುಬ್ಧನಾಗಬಹುದು, ಇತರರಿಗೆ ಕಿರಿಕಿರಿಯುಂಟು ಮಾಡಬಹುದುಅಥವಾ ಇತರರಿಗೆ ಕೆಟ್ಟವನಾಗಬಹುದು. ಆದ್ದರಿಂದ ಅಮಾವಾಸ್ಯೆ ಹಾಗೂ ಹುಣ್ಣಿಯ ಕುರಿತುಹಲವಾರು ಆಚರಣೆಗಳು, ನಂಬಿಕೆಗಳು ಇವೆ. ಅಮಾವಾಸ್ಯೆ ಒಳ್ಳೆಯದೇ? : ಅನೇಕರಲ್ಲಿ ಅಮಾವಾಸ್ಯೆಯ ದಿನ ಒಳ್ಳೆಯದಲ್ಲ ಎಂಬ…

  • ರಾಜಕೀಯ, ಸಿನಿಮಾ

    ಪ್ರಚಾರಕ್ಕೆ ಬಂದ್ರೆ ನಿಮ್ಮ ಆಸ್ತಿ ಪಾಸ್ತಿ ತನಿಖೆ ಮಾಡಿಸ್ತಿವಿ ಎಂದು ದರ್ಶನ್ ಯಶ್ ವಿರುದ್ದ ವಾರ್ನಿಂಗ್ ಕೊಟ್ಟ ಶಾಸಕ..!

    ಕನ್ನಡ ಚಿತ್ರರಂಗದ ನಟರು ಗೌರವದಿಂದ ಮನೆಯಲ್ಲಿ ಇರಬೇಕು. ಪ್ರಚಾರಕ್ಕೆ ಬಂದು ಜೆಡಿಎಸ್ ಪಕ್ಷ ಹಾಗೂ ನಾಯಕರ ವಿರುದ್ಧ ಬಾಯಿಬಿಟ್ಟರೆ ಪರಿಣಾಮ ಸರಿ ಇರುವುದಿಲ್ಲ ಎಂದು ಕೆ.ಆರ್. ಪೇಟೆ ಶಾಸಕ ನಾರಾಯಣಗೌಡ ಹೇಳಿದ್ದಾರೆ. ಮಂಡ್ಯದಲ್ಲಿ ಕೆ.ಆರ್ ಪೇಟೆ ಸಮಾವೇಶದಲ್ಲಿ ಮಾತನಾಡಿದ ಅವರು, ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಪರ ಕಾಂಗ್ರೆಸ್ ಪರ ಪ್ರಚಾರ ಮಾಡಿದ ಅವರು ಅಂಬರೀಶ್ ಬಗ್ಗೆ ನಮಗೆ ಈಗಲೂ, ಮುಂದೆಯೂ ಗೌರವವಿದೆ. ಆದರೆ ಇತರ ಚಲನಚಿತ್ರ ಕಲಾವಿದರ ಬಗ್ಗೆ ನನಗೆ ಅಸಮಾಧಾನವಿದೆ. ದರ್ಶನ್ ಮತ್ತು ಯಶ್ ಅವರು…

  • ಸುದ್ದಿ

    ಪೆಟ್ರೋಲ್ ಬೇಕು ಅಂದ್ರೆ ಈ ನಿಯಮವನ್ನು ಪಾಲಿಸಲೇಬೇಕು …!

    ಬೆಂಗಳೂರು:  ಜನರಿಗೆ ಅನುಕೂಲ ಆಗಲಿ ಅಂತ ಸರ್ಕಾರ ಮತ್ತು ಪೊಲೀಸರು ಅನೇಕ ಕಾನೂನುಗಳನ್ನು ಜಾರಿಗೆ ತರ್ತಾರೆ.. ಆದರೆ ಅದನ್ನ ಪಾಲಿಸೋದು ಮಾತ್ರ ಕಡಿಮೆ. ಇದೀಗ ಸಂಚಾರಿ ಪೊಲೀಸರು ಮತ್ತೊಂದು ಕಾನೂನು ಜಾರಿಗೆ ಕೈ ಹಾಕ್ತಿದ್ದಾರೆ. ಬೈಕ್ ಸವಾರರ ಸೇಫ್ಟಿಗಾಗಿ ಪೊಲೀಸರ ಹೊಸ ಪ್ರಯೋಗ..! ದಿನದಿಂದ ದಿನಕ್ಕೆ ಬೆಳೀತಿರೋ ಸಿಲಿಕಾನ್ ಸಿಟಿ ಬೆಂಗಳೂರು ವಿಶ್ವದಲ್ಲೇ ಅತೀ ಹೆಚ್ಚು ಬೈಕ್‌ಗಳನ್ನು ಹೊಂದಿರೋ ನಗರ. ಹೀಗಾಗಿ ಬೆಂಗಳೂರಿನಲ್ಲಿ ಆ್ಯಕ್ಸಿಡೆಂಟ್ ಕೂಡ ಹೆಚ್ಚಾಗ್ತಿದೆ. ಅಪಘಾತ ತಪ್ಪಿಸಲು ಎಷ್ಟೇ ಕಾನೂನು ಜಾರಿಗೆ ತಂದರು ಅನುಷ್ಠಾನ…

  • ಉಪಯುಕ್ತ ಮಾಹಿತಿ

    ನೋಟುಗಳಲ್ಲಿರುವ ಗಾಂಧಿ ತಾತನ ಚಿತ್ರ ಬಂದಿದ್ದು ಹೇಗೆ ಮತ್ತು ಎಲ್ಲಿಂದ..?ತಿಳಿಯಲು ಈ ಲೇಖನ ಓದಿ…

    ಅಂದಿನ ವೈಸ್ ರಾಯ್ ಹೌಸ್ ಅಂದ್ರೆ ಇಂದಿನ ರಾಷ್ಟ್ರಪತಿ ಭವನ, ಐತಿಹಾಸಿಕ ಹೌಸ್ ಮುಂದೆ 1946 ರಲ್ಲಿ ನಗು ಮುಖದಿಂದ ನಿಂತಿರುವ ‘ರಾಷ್ಟ್ರಪಿತ’- ‘ಮಹಾತ್ಮಾ’ಗಾಂಧೀಜಿ ಮತ್ತು ಬ್ರಿಟಿಷ್ Political Leader (ಬ್ರಿಟನ್ ಪ್ರಜೆ ಆಗಿದ್ದರೂ ಸಹಿತ, ಗಾಂಧಿ ಅವರ ಅಪ್ಪಟ ಅಭಿಮಾನಿ.