ಸುದ್ದಿ

ಶಿವಸೇನಾ ಬೆಂಬಲಿಗರ ಒತ್ತಾಯ ; ಆದಿತ್ಯ ಠಾಕ್ರೆಗೆ ಮುಖ್ಯಮಂತ್ರಿ ಸ್ಥಾನ,.!!

33

ಶಿವಸೇನೆ ಮುಖ್ಯಸ್ಥ ಉದ್ಧವ್​ಠಾಕ್ರೆ ಮಗ ಆದಿತ್ಯ ಠಾಕ್ರೆ ಮೊದಲ ಚುನಾವಣೆಯಲ್ಲಿಯೇ ಭರ್ಜರಿ ಗೆಲುವನ್ನು   ದಾಖಲಿಸಿದ  ಮತ್ತು ಅವರಿಗೆ  ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂಬ ಕೂಗು ಬೆಂಬಲಿಗರಿಂದ ಜೋರಾಗಿ  ಕೇಳಿ ಬಂದಿದೆ.

ಇನ್ನು ಇದನ್ನು  ಕುರಿತು ಮುಂಬೈನ ಅನೇಕ ಕಡೆ ಶಿವಸೇನಾ ಕಾರ್ಯಕರ್ತರು ಬ್ಯಾನರ್​ ಹಾಕಿದ್ದು, ಅದರಲ್ಲಿ ಶಿವಸೇನೆಯ ಯುವನಾಯಕ, ರಾಜ್ಯದ ಭಾವಿ ಮುಖ್ಯಮಂತ್ರಿ ಎಂದು ಘೋಷಣೆ ಬರೆದಿದ್ದಾರೆ ಎಂದು ತಿಳಿಸಿದ್ದಾರೆ.

ಸದ್ಯ ಮುಖ್ಯಮಂತ್ರಿ ಸ್ಥಾನವನ್ನು  ಉದ್ಧವ್​ ಠಾಕ್ರೆ ಮುನ್ನಡೆಸುತ್ತಿದ್ದು, ಅವರು  ಇರುವಾಗಲೇ ಅವರ ಮಗನಿಗೆ ಸಿಎಂ ಸ್ಥಾನ ನೀಡಬೇಕು ಎಂಬ ಕೂಗು ಹೆಚ್ಚಾಗಿದೆ. ಶಿವಸೇನೆಯ ಎದುರಾಳಿ ಪಕ್ಷವಾದ ನ್ಯಾಷನಲಿಸ್ಟ್​ ಕಾಂಗ್ರೆಸ್​ ಪಕ್ಷದ ಸುರೇಶ್​ ಮನೆ ವಿರುದ್ಧ  ಆದಿತ್ಯ ಠಾಕ್ರೆ 67 ಸಾವಿರ ಮತಗಳಿಂದ ಜಯಗಳಿಸಿದ್ದರು.

ಮಹಾರಾಷ್ಟ್ರ ಚುನಾವಣೆಯಲ್ಲಿ  ಮೈತ್ರಿ ಮೂಲಕ ಶಿವಸೇನೆ-ಬಿಜೆಪಿ 160 ಸ್ಥಾನಗಳನ್ನು ಗೆದ್ದಿದ್ದು, ಉದ್ಧವ್​ ಠಾಕ್ರೆ ಮೈತ್ರಿ ಪಕ್ಷದ ಎದುರು 50-50 ಡೀಲ್​ ಮುಂದಿಟ್ಟಿದ್ದಾರೆ. ಈ ಮೂಲಕ ಅರ್ಧ ಅವಧಿಗೆ ಶಿವಸೇನೆ, ಮುಂದಿನ ಅರ್ಧ ಅವಧಿಗೆ ಬಿಜೆಪಿಗೆ ಮುಖ್ಯಮಂತ್ರಿ ಸ್ಥಾನ ನೀಡುವ ಬಗ್ಗೆ ಮಾತನಾಡಿದ್ದಾರೆ. ಆದರೆ, ಬಿಜೆಪಿ ಮಾತ್ರ ಈ ಡೀಲ್​ಗೆ ಒಪ್ಪಿಗೆ ಸೂಚಿಸಿಲ್ಲ. ಇನ್ನು ಆದಿತ್ಯ ಠಾಕ್ರೆಗೆ ಈ ಸರ್ಕಾರದಲ್ಲಿ ಪ್ರಮುಖ ಸ್ಥಾನ ಸಿಗಲಿದ್ದು, ಡಿಸಿಎಂ ಆಗುವ ಸಾಧ್ಯತೆ ಇದೆ ಎಂಬ ಊಹಾಪೋಹಾಗಳು ಹರಿದಾಡುತ್ತಿವೆ .

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ