ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬಡತನ ಅನ್ನೋದು ಮನಸ್ಸಿನಲ್ಲಿ ಇದೆಯಾ ಅಥವಾ ಆಸ್ತಿಯಲ್ಲಿ ? ದುಡ್ಡಿನ ಓಟದಲ್ಲಿ ನಾವು ಯಾರು ಎಂಬುದನ್ನು ನಾವೇ ಮರೆತಿದ್ದೇವೆ. ಬಡವರು ಯಾರು? ಶ್ರೀಮಂತರು ಯಾರು? ಈ ಲೇಖನ ಓದಿ ನೀವೆ ನಿರ್ಧರಿಸಿ ಹೇಳಿ.

ಒಬ್ಬ ಶ್ರೀಮಂತ ಮಹಿಳೆ ಸೀರೆ ಅಂಗಡಿಗೆ ಬಂದು ಅಂಗಡಿಯವನನ್ನು ಕೇಳಿದಳು, Excuse me ಒಂದು ಕಡಿಮೆ ಬೆಲೆಯ (100 ರುಪಾಯಿ) ಸೀರೆ ತೋರಿಸಿ ನನ್ನ ಮಗಳ ಮದುವೆ ಇದೆ ಕೆಲಸದವಳಿಗೆ ಕೋಡಲು ಎಂದು ಹೇಳಿ ಕಡಿಮೆ ಬೆಲೆಯ ಸೀರೆ ಖರೀದಿಸಿದಳು.

ಸ್ವಲ್ಪ ಸಮಯದ ನಂತರ ಅದೇ ಅಂಗಡಿಗೆ ಆ ಮನೆ ಕೆಲಸದವಳು ಬಂದು ಅಂಗಡಿಯವನನ್ನು ಕೇಳಿದಳು, ಅಣ್ಣಾ ಒಂದು ದುಬಾರಿ ಸೀರೆ ತೋರಿಸು (1000 ರುಪಾಯಿ) ನಮ್ಮ ಮಾಲೀಕರ ಮಗಳ ಮದುವೆಗೆ ಉಡುಗೊರೆ ಕೊಡಬೇಕು ಎಂದು ಸೀರೆ ಖರೀದಿಸಿ ಹೋದಳು.
ಈಗ ಹೇಳಿ ಇವರಲ್ಲಿ ಶ್ರೀಮಂತರು ಯಾರು?
ನಿಜವಾದ ಶ್ರೀಮಂತರು ಮನೆ ಯಜಮಾನಿಯಾ ಅಥವಾ ಕೆಳಸದವಳಾ ?

ಒಂದು ದಿನ ಒಬ್ಬ ಮಹಿಳೆ ತನ್ನ ಕುಟುಂಬ ಸಮೇತ 5 ಸ್ಟಾರ್ ಹೋಟೆಲ್ ಗೆ ಊಟಕ್ಕೆ ಹೋಗಿದ್ದರು. ಅವಳು ಆರು ತಿಂಗಳ ಮಗುವಿನ ತಾಯಿ,ಮಗು ಹಸಿವಿನಿಂದ ಅಳತೊಡಗಿತು, ಅವಳು ಹೋಟೆಲ್ ಮ್ಯಾನೇಜರ್ ಗೆ ಒಂದು ಲೋಟ ಹಾಲು ಸಿಗುತ್ತಾ..? ಎಂದು ಕೇಳಿದಳು. ಮ್ಯಾನೇಜರ್ ಎಸ್ ಮೇಡಮ್ ಆದರೆ ಅದಕ್ಕೆ ಮತ್ತೆ ದುಡ್ಡಾಗುತ್ತೆ. ಮಹಿಳೆ ಹೇಳಿದಳು ನೋ ಪ್ರಾಬ್ಲಮ್ ಎಂದು ಹಣ ನೀಡಿ ಒಂದು ಲೋಟ ಹಾಲು ಪಡೆದು ಮಗುವಿಗೆ ನೀಡಿದಳು.

ಹೋಟೆಲ್ ನಿಂದ ವಾಪಸ್ ಬರುವಾಗ ಮಗು ಹಸಿವಿನಿಂದ ಮತ್ತೆ ಅಳತೊಡಗಿತು, ರಸ್ತೆ ಪಕ್ಕ ಗಾಡಿ ನಿಲ್ಲಿಸಿ ಚಹಾ ಮಾರುವ ಮುದುಕನ ಹತ್ತೀರ ಒಂದು ಒಂದು ಲೋಟ ಹಾಲು ಸಿಗುತ್ತಾ..? ದುಡ್ಡು ಎಷ್ಟು ? ಎಂದು ಕೇಳಿದಳು. ಆ ಮುದುಕ ನಗುತ್ತಾ ಹೇಳಿದ ಮೇಡಮ್ ಮಕ್ಕಳ ಹಾಲಿಗೆ ನಾವು ದುಡ್ಡು ತೆಗೆದುಕೊಳ್ಳಲ್ಲ, ನೀವು ಇನ್ನೂ ಬಹಳಷ್ಟು ಪ್ರಯಾಣ ಮಾಡುವದಿದ್ದರೆ ಇನ್ನೊಂದು ಲೋಟ ಹಾಲು ತಗೊಳ್ಳಿ ಎಂದು ಎರಡು ಲೋಟ ಹಾಲು ನೀಡಿದ. ಆ ಮಹಿಳೆ ಎರಡು ಲೋಟ ಹಾಲು ತೆಗೆದುಕೊಂಡು ಹೊರಟಳು.

ಈಗ ಹೇಳಿ ಇವರಲ್ಲಿ ಶ್ರೀಮಂತರು ಯಾರು?
ನಿಜವಾದ ಶ್ರೀಮಂತರು ಹೋಟೆಲ್ ಮ್ಯಾನೇಜರ್ ಅಥವಾ ಚಹಾ ಮಾರುವವ ?
“ಬನ್ನಿ ಸಹಾಯದ ಅವಶ್ಯಕತೆಯಿರುವವರಿಗೆ ಪ್ರತಿಫಲ ನಿರಿಕ್ಷಿಸದೆ ಸಹಾಯ ಮಾಡೋಣ ಅದು ನಮ್ಮ ಮನಸಿಗೆ ಸುಖ ನೀಡುತ್ತದೆ ಆ ಸುಖ ದುಡ್ಡಿನಿಂದ ಸಿಗುವದಿಲ್ಲ”
“ಜಗತ್ತು ಒಳ್ಳೆಯವರಿಂದ ತುಂಬಿದೆ ನಾವು ಹುಡುಕಬೇಕಷ್ಟೆ ಒಂದಾಗೋಣ ಜಗತ್ತನ್ನೆ ಬದಲಾಯಿಸೋಣ”
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಆನ್ಲೈನ್ ನಲ್ಲಿ ಹುಡುಗಿ ಸಿಗುತ್ತಾಳೆ ಎಂದು ಹುಡುಗರು ಚಾಟ್ ಮಾಡುತ್ತಾ ಸ್ವಲ್ಪ ಯಾಮಾರಿದ್ರೂ ಲಕ್ಷ ಲಕ್ಷ ಹಣ ದೋಚುವವರು ಇದ್ದಾರೆ. ಇಂತಹ ಆನ್ಲೈನ್ ದೋಖಾ ಪ್ರಕರಣಗಳ ಉದಾಹರಣೆಗಳು ಸಾಕಷ್ಟಿದ್ದರೂ ಮತ್ತೆ ಕೆಲವರು ಆನ್ಲೈನ್ ನಲ್ಲಿ ಪರಿಚಯವಾದವರಿಂದ ಪದೇ ಪದೇ ಮೋಸ ಹೋಗುತ್ತಿರುತ್ತಾರೆ.
ಪ್ರತಿ ವರ್ಷ ಶಾಲಾ ಆವರಣದಲ್ಲಿ 150 ಗಿಡ ನೆಡುತ್ತೇವೆ, ಆದರೆ ದನಗಳು ದಾಳಿನಡೆಸಿ ಎಲ್ಲವೂ ಹಾಳಾಗುತ್ತವೆ. ಹಾಗಾಗಿ,ಶಾಲೆಗೆ ಕಾಂಪೌಂಡ್ ಕಟ್ಟಿಸಲು ಮೊದಲ ಆದ್ಯತೆ ನೀಡುತ್ತೇನೆ..’ನಟ ಪುನೀತ್ ರಾಜ್ಕುಮಾರ್ ನಡೆಸಿಕೊಡುವ ರಿಯಾಲಿಟಿ ಶೋ ‘ಕನ್ನಡದ ಕೋಟ್ಯಧಿಪತಿ’ಯಲ್ಲಿ ಭಾಗವಹಿಸಿ 6.4 ಲಕ್ಷ ರೂ. ಗೆದ್ದ ತಾಲೂಕಿನ ಕಟ್ಟಾಯ ಸರ್ಕಾರಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ಕೆ.ಎನ್. ತೇಜಸ್ ಅವರ ಮನದಾನದ ಮಾತುಗಳಿವು. ರಿಯಾಲಿಟಿ ಶೋಗಾಗಿ ಸರ್ಕಾರಿ ಶಾಲಾ ಮಕ್ಕಳಿಗೆ ನಡೆಸಿದ ಪರೀಕ್ಷೆ ಬರೆದು ಆಯ್ಕೆಯಾದ ವಿದ್ಯಾರ್ಥಿ ತೇಜಸ್ ಜಿಲ್ಲೆಗೆ ಕೀರ್ತಿತಂದಿದ್ದಾನೆ….
ಕೆಆರ್ಎಸ್ ಅಣೆಕಟ್ಟೆಯಿಂದ ರೈತರ ಬೆಳೆಗಳೆಗೆ ನೀರು ಬಿಡಲಾಗಿದ್ದು, ಅಂತೂ ಕಾಲುವೆಗಳಿಗೆ ನೀರು ಬಂತು ತಮ್ಮ ಬೆಳೆ ಉಳಿಸಿಕೊಳ್ಳಬಹುದು ಎಂದು ರೈತರು ಖುಷಿಯಾಗಿದ್ದಾರೆ. ಜಿಲ್ಲೆಯಲ್ಲಿ ನೀರಿಲ್ಲದೆ ಒಣಗುತ್ತಿರುವ ಬೆಳೆ ರಕ್ಷಣೆಗಾಗಿ ಕೆಆರ್ಎಸ್ ಅಣೆಕಟ್ಟೆಯಿಂದ ನಾಲೆಗಳಿಗೆ ನೀರು ಹರಿಸುವಂತೆ ಕಳೆದೊಂದು ತಿಂಗಳಿನಿಂದ ರೈತರು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದರು.ಕಾಲುವೆಗಳಿಗೆ ಕೊನೆಗೂ ಕಾವೇರಿ ನೀರು ಹರಿದಿದೆ. ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ ಅಣೆಕಟ್ಟೆಯಿಂದ ಮಂಗಳವಾರ ರಾತ್ರಿಯಿಂದ ಸಕ್ಕರೆ ನಾಡಿನ ಕಾಲುವೆಗಳಿಗೆ ನೀರು ಹರಿಸಲಾಗ್ತಿದೆ ಈ ಹಿನ್ನೆಲೆಯಲ್ಲಿ ಜುಲೈ 15 ರಂದು ಬೆಂಗಳೂರಿನಲ್ಲಿ ಸಚಿವ…
ಈ ವರ್ಷದ ಡಿಸೆಂಬರ್ 1ರ ಒಳಗಾಗಿ ನಾಲ್ಕು-ಚಕ್ರ ವಾಹನ ಅಥವಾ ಎಲ್ಲಾ ಕಾರುಗಳ ಮುಂಭಾಗದ ವಿಂಡ್ಸ್ಕ್ರೀನ್ನಲ್ಲಿ ಹೊಸ ಟೋಲ್ಗಳಲ್ಲಿ ಫಾಸ್ಟ್ ಟ್ಯಾಗ್ ಸಾಧನಗಳನ್ನು ಹೊಂದಲು ರಸ್ತೆ ಸಾರಿಗೆ ಸಚಿವಾಲಯ ಸೂಚಿಸಿದೆ.
ಓದು ಮುಗಿಸಿದ ನಂತರ ಉದ್ಯೋಗ ಹುಡುಕುವುದು, ಒಂದು ಜಾಬ್ನಲ್ಲಿ ಇದ್ದು ಮೊತ್ತೊಂದು ಉದ್ಯೋಗ ಸರ್ಚ್ ಮಾಡುವುದು ಹಲವರಿಗೆ ತುಂಬಾ ಕಷ್ಟದ ಕೆಲಸ.ಇದನ್ನು ಸರಳಗೊಳಿಸುವುದು, ಎಲ್ಲರೂ ಬೆಳೆಸಿಕೊಂಡ ವೃತ್ತಿಪರ ಸಂಪರ್ಕಗಳು ಮಾತ್ರ ಎಂಬುದನ್ನು ಮರೆಯುವ ಹಾಗಿಲ್ಲ. ಉತ್ತಮ ಸಂವಹನ ಬೆಳವಣಿಗೆಗಾಗಿ ಇರುವ ಹಲವು ಮಾರ್ಗಗಳನ್ನು ಅಳವಡಿಸಿಕೊಳ್ಳಬೇಕು. ಖಾಸಗಿ ಕ್ಷೇತ್ರಗಳಲ್ಲಿ ಆಗಲಿ, ಸರ್ಕಾರಿ ಇಲಾಖೆಗಳ ಖಾಯಂ ಮತ್ತು ಗುತ್ತಿಗೆ ಆಧಾರದ ಕೆಲಸಗಳೇ ಆಗಲಿ, ಯಾವುದೇ ಕ್ಷೇತ್ರಗಳಲ್ಲಿ ಉದ್ಯೋಗ ಪಡೆಯಲು ವೃತ್ತಿ ಪರ ಸಂಪರ್ಕಗಳು ಮತ್ತು ಅವರೊಂದಿಗಿನ ಉತ್ತಮ ಸಂವಹನ ಮಾತ್ರ…
ನಮ್ಮ ಪ್ರಪಂಚದಲ್ಲಿ ಅದೆಷ್ಟೋ ನಿಗೂಢಗಳು ಇನ್ನು ಇದೆ ಮತ್ತು ಆ ನಿಗೂಢಗಳನ್ನ ಭೇದಿಸಲು ಮನುಷ್ಯನಿಂದ ಇನ್ನು ಕೂಡ ಸಾಧ್ಯವಾಗಿಲ್ಲ, ದೇವರ ಸೃಷ್ಟಿಯಾದ ಈ ಪ್ರಪಂಚದಲ್ಲಿ ಯಾವುದೇ ಜೀವಿ ಕೂಡ ಜೀವಿಸಬೇಕು ಅಂದರೆ ಆಹಾರ, ನೀರು ಮತ್ತು ಗಾಳಿಯನ್ನ ಸೇವನೆ ಮಾಡಲೇಬೇಕು, ಹೆಚ್ಚುಕಮ್ಮಿ ಒಂದೆರಡು ದಿನ ಊಟ ಇಲ್ಲದೆ ಜೀವನವನ್ನ ಮಾಡಬಹುದು ಆದರೆ ಜಾಸ್ತಿ ದಿನ ಊಟ ಮಾಡದೆ ಇರಲು ಯಾರಿಂದಲೂ ಕೂಡ ಸಾಧ್ಯವಿಲ್ಲ ಮತ್ತು ಹೆಚ್ಚು ದಿನ ಆಹಾರವನ್ನ ಬಿಟ್ಟು ಇದ್ದರೆ ಆ ಜೀವಿಯ ಸಾವು ಕೂಡ…