ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಸುಂದರ್ ಪಿಚೈ ಅವರು ಮೊದಲು ಕಂಪನಿಯ ಇಂಟರ್ ನೆಟ್ ವ್ಯವಹಾರವನ್ನು ಉನ್ನತಮಟ್ಟಕ್ಕೇರಿಸುವ ನಿಟ್ಟಿನಲ್ಲಿ ಪ್ರಾಡಕ್ಟ್ ಮತ್ತು ಇಂಜಿನಿಯರಿಂಗ್ ವಿಭಾಗದ ಜವಾಬ್ದಾರಿಯನ್ನು ನೋಡಿಕೊಳ್ಳುತ್ತಿದ್ದರು.

ಗೂಗಲ್ ಕಂಪನಿಯ ಸ್ಥಾಪಕ ಲ್ಯಾರಿ ಪೇಜ್ ಅವರು ಸುಂದರ್ ಪಿಚೈ ಅವರನ್ನು ನೂತನ ಸಿಇಒ ಆಗಿ ನೇಮಕ ಮಾಡಲಾಗಿದೆ ಎಂದು ಪ್ರಕಟಿಸಿದ್ದಾರೆ. ಹೊಸ ಸಿಇಒ ನೇಮಕ ಮಾಡುವ ಜೊತೆಗೆ ಕಂಪನಿಯು ಇಂದು ಹೊಸ ಸಹ ಸಂಸ್ಥೆಯಾದ ‘ಆಲ್ಫಬೆಟ್’ ಕಂಪನಿಯನ್ನು ಆರಂಭಿಸಿದೆ.
ಸುಂದರ್ ಪಿಚೈ ಅವರ ಬಗ್ಗೆ ಕೆಲ ಮಾಹಿತಿ ಇಲ್ಲಿದೆ:-
* ಸುಂದರ್ ಪಿಚೈ ಅವರು ಭಾರತದ ತಮಿಳುನಾಡಿನ ಚೆನ್ನೈನಲ್ಲಿ 1972ರಲ್ಲಿ ಜನಿಸಿದರು. ಇಂದಿಗೂ ಭಾರತೀಯ ಪೌರತ್ವ ಉಳಿಸಿಕೊಂಡಿದ್ದಾರೆ.

* ಸುಂದರ್ ಪಿಚೈ ಅವರ ಪೂರ್ತಿ ಹೆಸರು ಪಿಚೈ ಸುಂದರಾಜನ್, ಜನಪ್ರಿಯ ಹೆಸರು ಸುಂದರ್ ಪಿಚೈ.
* 2004ರಲ್ಲಿ ಗೂಗಲ್ ಸೇರಿದ ಸುಂದರ್ ಅವರು ಮೊದಲಿಗೆ ಪ್ರಾಡೆಕ್ಟ್ ಹಾಗೂ ಇನ್ನೋವೇಷನ್ ಅಧಿಕಾರಿಯಾಗಿದ್ದರು.
* ಪೆನ್ನಿಸಿಲ್ವೆನಿಯಾದ ವಿಶ್ವವಿದ್ಯಾಲಯದಿಂದ ಸೈಬಲ್ ಸ್ಕಾಲರ್ ಎನಿಸಿಕೊಂಡಿದ್ದಾರೆ.
* ಖರಗ್ ಪುರದ ಐಐಟಿಯಿಂದ ಮೆಟರ್ಲರ್ಜಿ ವಿಷಯದಲ್ಲಿ ಪದವಿ ಪಡೆದುಕೊಂಡ ಪಿಚೈ ಅವರು ಆ ಬ್ಯಾಚಿನ ಬೆಳ್ಳಿ ಪದಕ ವಿಜೇತರಾಗಿದ್ದಾರೆ.

* ಅಮೆರಿಕದ ವಾರ್ಟನ್ ವಿಶ್ವವಿದ್ಯಾಲಯ ಹಾಗೂ ಸ್ಟಾನ್ ಫರ್ಡ್ ವಿಶ್ವವಿದ್ಯಾಲಯಿಂದ ಕ್ರಮವಾಗಿ ಎಂಬಿಎ ಹಾಗೂ ಎಂಎಸ್ ಪಡೆದುಕೊಂಡಿದ್ದಾರೆ.
* ಸದ್ಯ ಗೂಗಲ್ ನ ಆಪ್ಸ್, ಕ್ರೋಮ್ ಹಾಗೂ ಆಂಡ್ರಾಯ್ಡ್ ವಿಭಾಗದ ಉಪಾಧ್ಯಕ್ಷರಾಗಿದ್ದರು.
* ಗೂಗಲ್ ಡ್ರೈವ್, ಜೀಮೇಲ್ ಅಪ್ಲಿಕೇಷನ್, ಗೂಗಲ್ ವಿಡಿಯೋ ಕೊಡೆಕ್ ಎಲ್ಲದರ ಸೃಷ್ಟಿಗೆ ಬಹುತೇಕ ಸುಂದರ್ ಪಿಚೈ ಅವರೇ ಕಾರಣ.
* ಆದರೆ, ಪಿಚೈ ಅವರನ್ನು ಗೂಗಲ್ ನ ಕ್ರೋಮ್ ಆಪರೇಟಿಂಗ್ ಸಿಸ್ಟಮ್ ಹಾಗೂ ಆಂಡ್ರಾಯ್ಡ್ ಅಪ್ಲಿಕೇಷನ್ ನಿರ್ಮಾತೃವಾಗೇ ಗುರುತಿಸಲಾಗಿದೆ.
* ಟ್ವಿಟ್ಟರ್ ಸಂಸ್ಥೆ 2011ರಲ್ಲಿ ಪಿಚೈ ಅವರನ್ನು ತಮ್ಮ ಸಂಸ್ಥೆಗೆ ಸೇರಿಸಿಕೊಳ್ಳಲು ಯತ್ನಿಸಿತ್ತು. ಅದರೆ, ಗೂಗಲ್ ಅವರಿಗೆ 50 ಮಿಲಿಯನ್ ಡಾಲರ್ ಹೆಚ್ಚಿಗೆ ಮೊತ್ತ ನೀಡಿ ಗೂಗಲ್ ನಲ್ಲೇ ಉಳಿಸಿಕೊಂಡಿತ್ತು. ( ಒನ್ ಇಂಡಿಯಾ ಸುದ್ದಿ)
ಖಾಲಿ ಜೇಬಿನಲ್ಲಿ ಹುಟ್ಟಿದ ಗೂಗಲ್ ಸಿಇಒ ಸುಂದರ್ ಪಿಚೈ ಪ್ರೇಮ ಕಥೆ:-
ಅವರಿಬ್ಬರ ಪ್ರೀತಿ ಹುಟ್ಟಿಕೊಂಡಿದ್ದು ಕಾಲೇಜು ದಿನಗಳಲ್ಲಿ. ಆಕೆ ಹೆಸರು ಅಂಜಲಿ; ಆತನ ಹೆಸರು ಸುಂದರ್ ಪಿಚೈ; ಸದ್ಯ ಗೂಗಲ್ ಸಂಸ್ಥೆಯ ಸಿಇಒ. ಅವರ ಪ್ರತಿ ದಿನದ ಸಂಬಳವೇ 3.5 ಕೋಟಿ.
ಆದರೆ ಅಂಜಲಿ ಪ್ರೇಮದ ಬಲೆಯಲ್ಲಿ ಬಿದ್ದಾಗ ಪಿಚೈ ಜೇಬಿನಲ್ಲಿ ಏನೂ ಇರಲಿಲ್ಲ; ಖಾಲಿ ಜೇಬು. ಅವತ್ತಿಗೆ ಚೆನ್ನೈ ಅಪಾರ್ಟ್ಮೆಂಟ್ ಒಂದರಲ್ಲಿ ಪಿಚೈ ವಾಸವಾಗಿದ್ದರು. ಕಾರಿರಲಿಲ್ಲ, ಮನೆಯಲ್ಲೊಂದು ಟಿವಿಯೂ ಇರಲಿಲ್ಲ.

ಅಲ್ಲಿಂದ ಐಐಟಿ ಖರಗ್ ಪುರದಲ್ಲಿ ಎಂಜಿನಿಯರಿಂಗ್ ಅಭ್ಯಾಸ ಮಾಡಲು ಇಬ್ಬರೂ ತೆರಳಿದರು. ಅಲ್ಲಿ ಡೇಟಿಂಗ್ ಆರಂಭಿಸಿದರು. ಜೇಬಿನಲ್ಲಿ ಕಾಸಿಲ್ಲದಿದ್ದರೇನಂತೆ ಹೃದಯ ಶ್ರೀಮಂತವಾಗಿತ್ತು. ಪಿಚೈ ಅಂಜಲಿ ಮುಂದೆ ಮದುವೆ ಪ್ರಸ್ತಾಪ ಇಟ್ಟರು. ಅಂಜಲಿಯೂ ಅಷ್ಟೆ ಅತ್ತಿತ್ತ ನೋಡದೆ ಮದುವೆಗೆ ಒಪ್ಪಿಗೆ ನೀಡಿಯೇ ಬಟ್ಟರು. ಅಂಜಲಿಗೆ ಪಿಚೈ ಬಡತನದ ಬಗ್ಗೆ ಗೊತ್ತಿರಲಿಲ್ಲವೆಂದಲ್ಲ. ಸುಂದರ್ ಮನೆಯ ಎಲ್ಲಾ ಪರಿಸ್ಥಿತಿಯೂ ಅಂಜಲಿಗೆ ಗೊತ್ತಿತ್ತು. ಹೀಗಿದ್ದೂ ಮದುವೆಗೆ ಒಪ್ಪಿಕೊಂಡರು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಾವು ಮನೆ ಮುಂದೆ ಕೆಲವೊಂದು ಗಿಡ ಗಳನ್ನು ನೆಡುವುದು ಸಾಮಾನ್ಯ. ಆದರೆ ಕೆಲವೊಂದು ಗಿಡಗಳನ್ನು ನೆಟ್ಟರೆ ಶ್ರೀಮಂತಿಕೆ ಬರುತ್ತೆ ಎನ್ನುವ ನಂಬಿಕೆ ಇದೆ. ಅದರಲ್ಲಿ ಒಂದು ಗಿಡದ ಹೆಸರು ಮನಿಪ್ಲಾಂಟ್.
ಮನುಷ್ಯತ್ವ ಮರೆತು ಮಂಗವನ್ನು ಹಗ್ಗದಿಂದ ಮರಕ್ಕೆ ಕಟ್ಟಿ ಬಡಿಗೆಯಿಂದ ಹೊಡೆದು ಅಮಾನುಷವಾಗಿ ಹಲ್ಲೆ ಮಾಡಿ ಕೊಂದಿದ್ದ ಆರೋಪಿ ಪವನ್ ಬಂಗಾರ್ ಗೆ ಕೋರ್ಟ್ ಎರಡು ಬಾರಿ ಜಾಮೀನು ನಿರಾಕರಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಅತಿ ಹೆಚ್ಚಿನ ನೀರಿನ ಅಂಶವಿರುವ ಹಣ್ಣು ಎಂದರೆ ಕಲ್ಲಂಗಡಿ. ಅಲ್ಲದೆ ಇದರಲ್ಲಿ ವಿಟಮಿನ್ ಎ, ಬಿ1, ಬಿ6, ವಿಟಮಿನ್ ಸಿ, ಪೊಟ್ಯಾಶಿಯಂ ಹಾಗೂ ಮೆಗ್ನೇಶಿಯಂ ಇವೆ. ಸಾಮಾನ್ಯವಾಗಿ ಎಲ್ಲರೂ ಹಣ್ಣಿನ ತಿರುಳನ್ನು ಸೇವಿಸಿ ಬೀಜಗಳನ್ನು ಎಸೆಯುತ್ತಾರೆ. ಆದರೆ ಕಲ್ಲಂಗಡಿ ಹಣ್ಣಿನ ಬೀಜಗಳಲ್ಲಿಯೂ ಆರೋಗ್ಯಕರ ಅಂಶಗಳಿವೆ. * ಕಲ್ಲಂಗಡಿ ಬೀಜಗಳಲ್ಲಿರುವ ಉತ್ತಮ ಪ್ರಮಾಣದ ಮೆಗ್ನೇಶಿಯಂ ಹೃದಯವು ಸಹಜವಾಗಿ ಕಾರ್ಯ ನಿರ್ವಹಿಸಲು ನೆರವಾಗುತ್ತದೆ. *ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ವೃದ್ಧಾಪ್ಯವನ್ನು ನಿಧಾನವಾಗಿಸುತ್ತದೆ. *ಮುಖದ ಮೇಲೆ ಮೂಡುವ ಮೊಡವೆಗಳನ್ನು ನಿವಾರಿಸಲು ಈ ಬೀಜಗಳಿಂದ…
ಮನೆಯಲ್ಲಿ ಫ್ಯಾನ್, ಕೂಲರ್ ಇಲ್ಲಾಂದ್ರೆ ನೀವು ಸೊಳ್ಳೆಮಹರಾಯನಿಂದ ತಪ್ಪಿಸಿಕೊಳ್ಳುವುದು ತುಂಬಾ ಕಷ್ಟ. ಅದರಲ್ಲೂ ಮನೆಯಲ್ಲಿ ಕರೆಂಟ್ ಏನಾದ್ರೂ ಹೋದ್ರೆ ನಿಮ್ಮ ಕತೆ ಮುಗಿದ ಹಾಗೆ. ಇನ್ನೂ ಚಳಿಗಾಲದಲ್ಲಂತೂ ಕೇಳದೇ ಬೇಡ. ಕೆಲವೊಂದು ಸಾರಿ ನಮ್ಗೆ ಅನ್ನಿಸುವುದೇನಂದ್ರೆ ಈ ಸೊಳ್ಳೆಗಳು ನಮಗೆ ಯಾಕೆ ಕಚ್ಚುತ್ತವೆ ಅಂತ ಬಹಳ ತಲೆ ಕೆಡಿಸಿಕೊಳ್ಳುತ್ತೇವೆ.
ಎಂಟೆಕ್ ಪದವೀಧರ ಯುವಕನೊಬ್ಬ ಪ್ರಧಾನಿ ಕಚೇರಿಗೆ ಬರೆದ ಒಂದೇ ಒಂದು ಪತ್ರದಿಂದ ಕತ್ತಲ ಕೂಪದಲ್ಲಿ ನಲುಗುತ್ತಿದ್ದ ಹತ್ತಾರು ಹಳ್ಳಿಗಳಿಗೆ ಬೆಳಕು ಲಭಿಸುತ್ತಿದೆ. ಯುವಕನ ಜಾಣ್ಮೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದರೆ, ಪ್ರಧಾನಿ ಮೋದಿ ಆಡಳಿತಕ್ಕೆ ಪ್ರಶಂಸೆಗಳ ಸುರಿಮಳೆಯೇ ಲಭಿಸಿದೆ.ಲಿಂಗಸುಗೂರು ತಾಲೂಕು ಗಲಗನ ದೊಡ್ಡಿ, ಗುಳೆದರ ದೊಡ್ಡಿ, ಕಾಶಪ್ಪನ ದೊಡ್ಡಿಗಳು ಈವರೆಗೂ ಬೆಳಕು ಕಂಡಿಲ್ಲ. ಅಂಥ ಚಿಕ್ಕ ದೊಡ್ಡಿಯ ಯುವಕ ಅಮರೇಶ ಗುಡುಗುಂಟಾ ಎಂಟೆಕ್ ಪದವಿ ಪಡೆದು ಮುಂಬೈನಲ್ಲಿ ಕೆಲಸ ಮಾಡುತ್ತಿದ್ದರು. ತಮ್ಮ ದೊಡ್ಡಿಗಳ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕೆಂಬ ಕಾರಣಕ್ಕೆ 2018ರ…
ನಿಮಗೆ ನೀರು ಪದೇ ಪದೇ ಕುಡಿಯಲು ಬೇಜಾರೆನಿಸಿದರೆ ಮಜ್ಜಿಗೆ ಕುಡಿದು ನೋಡಿ, ದೇಹ ಉಲ್ಲಾಸಿತವಾಗುತ್ತದೆ. ಅಜೀರ್ಣ, ಹೊಟ್ಟೆನೋವು ಕಂಡುಬಂದಲ್ಲಿ ಅರ್ಧ ಲೋಟ ಹುಳಿ ಮಜ್ಜಿಗೆಗೆ ಇಂಗು, ಉಪ್ಪು ಬೆರೆಸಿ ಕುಡಿದರೆ ಕೆಲವೇ ಹೊತ್ತಿನಲ್ಲಿ ಹೊಟ್ಟೆನೋವು ಉಪಶಮನವಾಗುತ್ತದೆ.