ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಇದು ಬಯಲುಸೀಮೆಯ ಗಡಿನಾಡು ಕೋಲಾರ ಜಿಲ್ಲೆಯ ಸ್ಥಿತಿ. ಒಂದು ಕಾಲದಲ್ಲಿ ಅತಿ ಹೆಚ್ಚು ಕೆರೆಗಳ ನಾಡು ಎಂದು ಪ್ರಸಿದ್ಧಿ ಪಡೆದು ಸದಾ ಹಸಿರಿನಿಂದ ಕೂಡಿದ್ದ ಜಿಲ್ಲೆಯಾಗಿತ್ತು ಕೋಲಾರ. ಕಾಲಾಂತರ ಮಳೆರಾಯನ ಮುನಿಸು ಜಿಲ್ಲೆಯ ಮೇಲೆ ಬಂದಿದ್ರಿಂದ ಇಲ್ಲಿನ ರೈತರು ಪರ್ಯಾಯ ಹಾಗೂ ಆಧುನಿಕ ಕೃಷಿಯತ್ತ ಮುಂದಾದ್ರು. ಇದ್ರಿಂದ ಹೆಚ್ಚು ಲಾಭ ಹಾಗೂ ಕಡಿಮೆ ಶ್ರಮವುಳ್ಳ ನೀಲಗಿರಿ ಸಸಿಗಳನ್ನು ನೆಡಲು ರೈತ್ರು ಮುಂದಾದ್ರು. ಇದ್ರಿಂದ ಭೂಮಿಯಲ್ಲಿ ಇರುವ ನೀರಿನ ಪ್ರಮಾಣವನ್ನು ಈ ಮರಗಳು ತೆಗೆದುಕೊಂಡು ನೆಲವನ್ನು ಬರಡುಗೊಳಿಸಿತು. ಇದರಿಂದ ಅಂತರ್ಜಲಮಟ್ಟ ತೀವ್ರ ಕುಸಿದಿದೆ.
ಬಯಲುಸೀಮೆ ಕೋಲಾರ ಜಿಲ್ಲೆಯಲ್ಲಿ ನೀರಿನ ಅಭಾವ ಹಿನ್ನೆಲೆ ಶೇಕಡವಾರು ರೈತರು ನೀಲಗಿರಿಯನ್ನೇ ಅವಲಂಬಿಸಿದ್ದಾರೆ. 1000 ಹಾಗೂ 1500 ಅಡಿ ಬೋರ್ವೆಲ್ ಕೊರೆಸಿದ್ರು ನೀರು ದೊರೆಯದಂತಾಗಿದೆ. ದೊರೆತ ಅಂತರ್ಜಲದಲ್ಲಿ ಫ್ಲೋರೈಡ್ ಅಂಶ ಅಧಿಕವಾಗಿದೆ. ಹೀಗಾಗಿ ಸರ್ಕಾರ ಈಗಾಗಲೇ ನೀಲಗಿರಿ ಬೆಲಯುವುದನ್ನು ನಿಷೇದಿಸಿದೆ.
ಹಾಗಾದ್ರೆ ಈ ನೀಲಗಿರಿ ಮರಗಳು ನಮ್ಮ ಭಾರತಕ್ಕೆ ಬಂದಿದ್ದು ಎಲ್ಲಿಂದ ಗೊತ್ತಾ?
ನೀಲಗಿರಿಯು ಮಿರ್ಟ್ಲ್ ಕುಟುಂಬವಾದ ಮಿರ್ಟೇಸಿಯಲ್ಲಿನ ಹೂಬಿಡುವ ಮರಗಳ (ಮತ್ತು ಕೆಲವೊಂದು ಪೊದೆಸಸ್ಯಗಳ) ಒಂದು ಬಹುವಿಧದ ಕುಲವಾಗಿದೆ. ಈ ಕುಲದ ಸದಸ್ಯ ಮರಗಳನ್ನು ಆಸ್ಟ್ರೇಲಿಯಾದ ಮರದ ಸಸ್ಯಸಂಪತ್ತು ವ್ಯಾಪಿಸಿದೆ. ಬಹುತೇಕವಾಗಿ ಆಸ್ಟ್ರೇಲಿಯಾದ ಸ್ಥಳೀಯ ಸಸ್ಯವಾಗಿರುವ ನೀಲಗಿರಿ ಯ ೭೦೦ಕ್ಕೂ ಹೆಚ್ಚು ಜಾತಿಗಳು ಅಸ್ತಿತ್ವದಲ್ಲಿವೆ, ಮತ್ತು ಅತ್ಯಂತ ಚಿಕ್ಕ ಸಂಖ್ಯೆಯಲ್ಲಿ ಇವು ನ್ಯೂಗಿನಿಯಾ ಮತ್ತು ಇಂಡೋನೇಷ್ಯಾದ ಮಗ್ಗುಲಿನ ಭಾಗಗಳಲ್ಲಿ ಕಾಣಿಸಿಕೊಳ್ಳುತ್ತವೆ ಹಾಗೂ ಫಿಲಿಪ್ಪೀನ್ ದ್ವೀಪಸಮೂಹದಷ್ಟು ದೂರದ ಉತ್ತರ ಭಾಗದಲ್ಲಿ ಒಂದು ಜಾತಿಯು ಕಾಣಿಸಿಕೊಳ್ಳುತ್ತದೆ. ಕೇವಲ ೧೫ ಜಾತಿಗಳು ಆಸ್ಟ್ರೇಲಿಯಾದಿಂದ ಆಚೆಗೆ ಕಾಣಿಸಿಕೊಳ್ಳುತ್ತವೆ, ಮತ್ತು ಕೇವಲ ೯ ಜಾತಿಗಳು ಆಸ್ಟ್ರೇಲಿಯಾದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಅಮೆರಿಕಾ ಖಂಡಗಳು, ಯುರೋಪ್, ಆಫ್ರಿಕಾ, ಮೆಡಿಟರೇನಿಯನ್ ನೆಲಸುತ್ತು ರೇವು, ಮಧ್ಯಪ್ರಾಚ್ಯ, ಚೀನಾ ಹಾಗೂ ಭಾರತದ ಉಪಖಂಡವನ್ನುಒಳಗೊಂಡಂತೆ ಉಷ್ಣವಲಯ ಹಾಗೂ ಉಪೋಷ್ಣವಲಯದಾದ್ಯಂತ ನೀಲಗಿರಿ ಯ ಜಾತಿಗಳನ್ನು ಬೆಳೆಸಲಾಗುತ್ತದೆ.
ನೀಲಗಿರಿ ಮರಗಳು” ಎಂದು ಸಾಮಾನ್ಯವಾಗಿ ಉಲ್ಲೇಖಿಸಲ್ಪಡುವ ಮೂರು ಒಂದೇ ರೀತಿಯ ಕುಲಗಳಲ್ಲಿ ನೀಲಗಿರಿ ಯು ಒಂದಾಗಿದ್ದು, ಕೊರಿಂಬಿಯಾ ಹಾಗೂ ಆಂಗೊಫೋರಾ ಗಳು ಉಳಿದ ಎರಡು ಕುಲಗಳಾಗಿವೆ. ಅನೇಕ ಜಾತಿಗಳು, ಇತರವುಗಳಿಗಿಂತ ಭಿನ್ನವಾಗಿ, ಅಂಟು ಮರಗಳು ಎಂದು ಚಿರಪರಿಚಿತವಾಗಿವೆ. ಏಕೆಂದರೆ, ಅನೇಕ ಜಾತಿಗಳು ತೊಗಟೆಯಲ್ಲಿನ ಯಾವುದೇ ಮುರಿತದಿಂದ ಹೇರಳವಾದ ಸಸ್ಯರಸವನ್ನು ಹೊರಸೂಸುತ್ತವೆ (ಉದಾಹರಣೆಗೆ ಗೀಚಿದಂಥ ಅಂಟು). ಈ ಕುಲದ ‘ಯೂಕಲಿಪ್ಟಸ್’ ಎಂಬ ಸಾರ್ವತ್ರಿಕ ನಾಮವನ್ನು ಗ್ರೀಕ್ ಪದಗಳಿಂದ ಪಡೆಯಲಾಗಿದೆ. ಗ್ರೀಕ್ ಭಾಷೆಯಲ್ಲಿ ευ (ಯೂ ) ಎಂದರೆ “ಚೆನ್ನಾಗಿ” ಎಂಬ ಅರ್ಥ ಹಾಗೂ καλυπτος (ಕಲಿಪ್ಟಸ್ ) ಎಂದರೆ ಚೆನ್ನಾಗಿ “ಆವರಿಸಲ್ಪಟ್ಟಿರುವ” ಎಂಬ ಅರ್ಥವಿದ್ದು, ಇದು ಹೂವನ್ನುಆರಂಭದಲ್ಲಿ ಅವಿಸಿಟ್ಟುಕೊಂಡಿರುವ ಪುಷ್ಪಪಾತ್ರೆಯ ಮೇಲಿನ ಬೀಜಕಣಕೋಶದ ಮುಚ್ಚಳಕ್ಕೆ ಉಲ್ಲೇಖಿಸಲ್ಪಡುತ್ತದೆ.
ನೀಲಗಿರಿ ಯು ಜಾಗತಿಕ ಅಭಿವೃದ್ಧಿಯ ಸಂಶೋಧಕರು ಹಾಗೂ ಪರಿಸರವಾದಿಗಳ ಗಮನವನ್ನು ಸೆಳೆದಿದೆ. ಇದೊಂದು ವೇಗವಾಗಿ-ಬೆಳೆಯುವ ಕಾಡಿನ ಮೂಲವಾಗಿದ್ದು, ಇದರ ತೈಲವನ್ನುಶುದ್ಧೀಕರಣಕ್ಕಾಗಿ ಬಳಸಬಹುದಾಗಿದೆ ಹಾಗೂ ಇದು ಒಂದು ನೈಸರ್ಗಿಕ ಕೀಟನಾಶಕವಾಗಿ ಕಾರ್ಯನಿರ್ವಹಿಸುತ್ತದೆ. ಇದರ ಹೆಚ್ಚು ನೀರನ್ನು ಹೀರುವ ಗುಣವನ್ನು ಕೆಲವೊಮ್ಮೆ ಜೌಗುನೆಲಗಳನ್ನುಒಣಗಿಸಲು, ತನ್ಮೂಲಕ ಮಲೇರಿಯಾದ ಅಪಾಯವನ್ನು ತಗ್ಗಿಸಲು ಬಳಸಲಾಗುತ್ತದೆ. ಅವುಗಳ ಸ್ವಾಭಾವಿಕ ವ್ಯಾಪ್ತಿಯಿಂದ ಆಚೆಗೆ ನೀಲಗಿರಿಯ ಮರಗಳನ್ನು, ಬಡಜನತೆಯ ಮೇಲೆ ಅವು ಬೀರುವ ಪ್ರಯೋಜನಕಾರಿ ಪ್ರಭಾವಕ್ಕಾಗಿ ಶ್ಲಾಘಿಸುವುದೂ ಉಂಟು ಮತ್ತು ಆಕ್ರಮಣಶೀಲ ನೀರು-ಚೂಷಕಗಳಾಗಿರುವ ಕಾರಣಕ್ಕಾಗಿ ಅವುಗಳನ್ನು ತಿರಸ್ಕಾರದಿಂದ ಕಾಣುವುದೂ ಉಂಟು. ಇದು ಅವುಗಳ ಒಟ್ಟಾರೆ ಪ್ರಭಾವದ ಕುರಿತಾದ ವಿವಾದಕ್ಕೆ ಕಾರಣವಾಗಿದೆ.
ಗಾತ್ರ ಮತ್ತು ಆವಾಸಸ್ಥಾನ
ಬಲಿತಿರುವ ಒಂದು ನೀಲಗಿರಿ ಯು ಒಂದು ಕೆಳಮಟ್ಟದ ಪೊದೆಸಸ್ಯದ ಅಥವಾ ಒಂದು ಅತ್ಯಂತ ದೊಡ್ಡ ಮರದ ಸ್ವರೂಪವನ್ನು ತಾಳಬಹುದು. ಜಾತಿಗಳನ್ನು ವಿಭಜಿಸಲು ಅನುವಾಗುವಂಥ ಮುಖ್ಯವಾದ ಮೂರು ಬೆಳೆಯುವ ಸ್ವಭಾವ ರೀತಿಗಳು ಹಾಗೂ ನಾಲ್ಕು ಗಾತ್ರದ ವರ್ಗಗಳು ಕಂಡುಬರುತ್ತವೆ.
ಒಂದು ಸಾಮಾನ್ಯೀಕರಣವಾಗಿ “ಕಾಡು ಮರಗಳು” ಏಕ-ಕಾಂಡದವಾಗಿರುತ್ತವೆ ಮತ್ತು ಒಂದು ಕಿರೀಟವನ್ನು ಹೊಂದುವ ಮೂಲಕ ಸಂಪೂರ್ಣ ಮರದ ಎತ್ತರದ ಒಂದು ಕಿರುಭಾಗವನ್ನು ರೂಪಿಸುತ್ತವೆ. “ಕಾಡುಪ್ರದೇಶದ ಮರಗಳು” ಏಕ-ಕಾಂಡದವಾಗಿದ್ದರೂ ಸಹ ನೆಲದ ಮಟ್ಟದಿಂದ ಒಂದು ಕಿರು ಅಂತರದಷ್ಟು ಮೇಲಕ್ಕೆ ಅವು ಕವಲೊಡೆಯಬಹುದು.
“ಮ್ಯಾಲಿಗಳು” ನೆಲದ ಮಟ್ಟದಿಂದಲೇ ಬಹು-ಕಾಂಡದವಾಗಿರುವ ವಿಶಿಷ್ಟತೆಯನ್ನು ಹೊಂದಿದ್ದು, ಸಾಮಾನ್ಯವಾಗಿ …10 m (33 ft)ಗಿಂತ ಕಡಿಮೆಯ ಎತ್ತರವನ್ನು ಹೊಂದಿರುತ್ತವೆ. ಹಲವು ವೇಳೆ ಅವು ಸಣ್ಣರೆಂಬೆಗಳ ತುದಿಗಳಲ್ಲಿ ಉಳಿದವಕ್ಕಿಂತ ಅಧಿಕವಾಗಿ ಕಿರೀಟವನ್ನು ಹೊಂದಿರುತ್ತವೆ ಮತ್ತು ಬಿಡಿಯಾದ ಅಥವಾ ಪ್ರತ್ಯೇಕವಾದ ಸಸ್ಯಗಳು ಸೇರಿಕೊಂಡು ಒಂದು ತೆರೆದಿರುವ ಇಲ್ಲವೇ ಮುಚ್ಚಲ್ಪಟ್ಟಿರುವ ರಚನೆಯನ್ನು ಸೃಷ್ಟಿಸಬಹುದು. ಅನೇಕ ಮ್ಯಾಲಿ ಮರಗಳು ತುಂಬಾ ಕೆಳಮಟ್ಟದಲ್ಲಿ-ಬೆಳೆಯುವ ಸ್ವಭಾವವನ್ನು ಹೊಂದಿರಲು ಸಾಧ್ಯವಿದ್ದು, ಅಂಥವುಗಳನ್ನು ಒಂದು ಪೊದೆಸಸ್ಯವಾಗಿಪರಿಗಣಿಸಲಾಗುತ್ತದೆ.
ಮರದ ಇತರ ಎರಡು ಸ್ವರೂಪಗಳು ಪಶ್ಚಿಮದ ಆಸ್ಟ್ರೇಲಿಯಾದಲ್ಲಿ ಗಮನಾರ್ಹವಾಗಿದ್ದು, “ಮ್ಯಾಲೆಟ್” ಹಾಗೂ “ಮಾರ್ಲಾಕ್” ಎಂಬ ಸ್ಥಳೀಯ ಹೆಸರುಗಳನ್ನು ಬಳಸಿಕೊಂಡು ಅವುಗಳನ್ನು ವಿವರಿಸಲಾಗುತ್ತದೆ. “ಮ್ಯಾಲೆಟ್” ಸ್ವರೂಪವು ಚಿಕ್ಕದರಿಂದ ಮಧ್ಯಮ-ಗಾತ್ರದವರೆಗಿನ ಒಂದು ಮರವಾಗಿದ್ದು, ಅದು ಲಿಗ್ನೋಟ್ಯೂಬರ್ ಎಂದು ಕರೆಯಲ್ಪಡುವ ಗಡ್ಡೆಗಳನ್ನು ಬಿಡುವುದಿಲ್ಲ ಮತ್ತು ಒಂದು ಸಾಕಷ್ಟು ಉದ್ದವಾದ ಕಾಂಡವನ್ನು ಹೊಂದಿರುತ್ತದೆ. ಲಂಬಾಕಾರವಾಗಿ ಕವಲೊಡೆಯುವ ಲಕ್ಷಣ ಮತ್ತು ಅನೇಕವೇಳೆ ಎದ್ದುಕಾಣುವಂತಿರುವ ಒಂದು ದಟ್ಟವಾದ ತುದಿಯ ಕಿರೀಟದವಿಶಿಷ್ಟತೆಯನ್ನು ಇದು ಹೊಂದಿರುತ್ತದೆ. ಇದು , E. ಕ್ಲಿವಿಕೋಲಾ ಮತ್ತು E. ಓರ್ನಾಟಾ ಮೊದಲಾದವುಗಳ ಬಲಿತ ಆರೋಗ್ಯಕರ ಮಾದರಿಗಳ ಸಾಮಾನ್ಯ ಬೆಳೆಯುವ ಸ್ವಭಾವವಾಗಿರುತ್ತದೆ. ಮ್ಯಾಲೆಟ್ಗಳ ನಯವಾದ ತೊಗಟೆಯು ಅನೇಕ ಬಾರಿ ಒಂದು ಸ್ಯಾಟಿನ್ನಿನಂಥ ನವಿರು ಮತ್ತು ಹೊಳಪನ್ನು ಹೊಂದಿರುತ್ತದೆ ಹಾಗೂ ಅದು ಬಿಳಿ, ಕೆನೆ, ಬೂದು, ಹಸಿರು ಅಥವಾ ತಾಮ್ರದ ಬಣ್ಣದಲ್ಲಿರಲು ಸಾಧ್ಯವಿದೆ.
ನೀಲಗಿರಿ ಎಲೆಗಳನ್ನು ತಿನ್ನುತ್ತಿರುವ ಫ್ಯಾಸ್ಕೋಲಾರ್ಕ್ಟಸ್ ಸಿನೆರಿಯಸ್ ಕೋಲಾ ಕರಡಿ
ಸಾಮಾನ್ಯವಾಗಿ ನೀಲಗಿರಿ ಮರದ ಗಾತ್ರಗಳು ಈ ಕೆಳಗಿನಂತೆ ಇರುತ್ತವೆ:-
ನೆಡುತೋಪು ಮತ್ತು ಪರಿಸರ ವಿಜ್ಞಾನದ ಸಮಸ್ಯೆಗಳು:-
ಸರ್ ಜೋಸೆಫ್ ಬ್ಯಾಂಕ್ಸ್ ಎಂಬ ಸಸ್ಯವಿಜ್ಞಾನಿಯೊಬ್ಬ 1770ರಲ್ಲಿ ಕೈಗೊಂಡ ಕುಕ್ ವಿಶೇಷ ಕಾರ್ಯಯಾತ್ರೆಯ ಸಂದರ್ಭದಲ್ಲಿ ನೀಲಗಿರಿ ಯನ್ನು ಆಸ್ಟ್ರೇಲಿಯಾದಿಂದ ವಿಶ್ವದ ಇತರ ಭಾಗಗಳಿಗೆ ಮೊದಲು ಪರಿಚಯಿಸಿದ. ತರುವಾಯ ಇದು ವಿಶ್ವದ ಅನೇಕ ಭಾಗಗಳಿಗೆ ಪರಿಚಯಿಸಲ್ಪಟ್ಟಿತು. ಅವುಗಳಲ್ಲಿ ಗಮನಾರ್ಹವಾದ ಪ್ರದೇಶಗಳೆಂದರೆ: ಕ್ಯಾಲಿಫೋರ್ನಿಯಾ, ಬ್ರೆಝಿಲ್, ಈಕ್ವೆಡಾರ್, ಕೊಲಂಬಿಯಾ, ಎಥಿಯೋಪಿಯಾ, ಮೊರೊಕೋ, ಪೋರ್ಚುಗಲ್, ದಕ್ಷಿಣ ಆಫ್ರಿಕಾ, ಉಗಾಂಡಾ, ಇಸ್ರೇಲ್, ಗ್ಯಾಲೀಷಿಯಾ ಮತ್ತು ಚಿಲಿ. ಸ್ಪೇನ್ ದೇಶದಲ್ಲಿ, ನೀಲಗಿರಿ ಮರಗಳು ತಿರುಳುಮರದ ನೆಡುತೋಪುಗಳಲ್ಲಿ ನೆಡಲ್ಪಟ್ಟಿವೆ. ಗರಗಸದ ಕಾರ್ಖಾನೆಯ ಕೆಲಸಗಾರಿಕೆ, ತಿರುಳು, ಇದ್ದಿಲು ಸಂಬಂಧಿ ಕೆಲಸಗಳು ಮತ್ತು ಇತರ ಕೆಲಸಗಳಂಥ ಹಲವಾರು ಉದ್ಯಮಗಳಿಗೆ ನೀಲಗಿರಿ ಗಳು ಆಧಾರವಾಗಿವೆ. ಹಲವಾರು ಜಾತಿಗಳು ಆಕ್ರಮಣಶೀಲವಾಗಿ ಮಾರ್ಪಟ್ಟಿವೆ ಮತ್ತು ಸ್ಥಳೀಯ ಪರಿಸರ ವ್ಯವಸ್ಥೆಗಳಿಗೆ ಪ್ರಮುಖ ಸಮಸ್ಯೆಗಳನ್ನು ತಂದೊಡ್ಡುತ್ತಿವೆ. ವನ್ಯಜೀವಿಕುಲದ ಮುಚ್ಚುದಾರಿಗಳು ಹಾಗೂ ಬೆಳೆಗಳ ಸರದಿಯ ನಿರ್ವಹಣೆಯ ಗೈರುಹಾಜರಿಯು ಇದಕ್ಕೆ ಪ್ರಮುಖ ಕಾರಣವಾಗಿದೆ.
ಇದೇ ರೀತಿಯ ಅನುಕೂಲಕರ ವಾತಾವರಣದ ಸ್ಥಿತಿಗತಿಗಳಿಂದಾಗಿ, ನೀಲಗಿರಿ ನೆಡುತೋಪುಗಳು ಅನೇಕ ವೇಳೆ ಓಕ್ ಕಾಡುಪ್ರದೇಶಗಳನ್ನು ಸ್ಥಾನಪಲ್ಲಟಗೊಳಿಸಿವೆ. ಕ್ಯಾಲಿಫೋರ್ನಿಯಾ ಮತ್ತು ಪೋರ್ಚುಗಲ್ಗಳಲ್ಲಿ ಕಂಡುಬಂದಿರುವ ಸ್ಥಿತಿ ಇದಕ್ಕೊಂದು ನಿದರ್ಶನವಾಗಿದೆ. ಇದರ ಫಲವಾಗಿ ಹೊರಹೊಮ್ಮಿದ ಏಕಫಸಲಿನ ಕೃಷಿಗಳಿಂದಾಗಿ ಸಸ್ತನಿಗಳು ಹಾಗೂ ಪಕ್ಷಿಗಳು ಆಹಾರಕ್ಕಾಗಿ ಅವಲಂಬಿಸಿರುವ ಓಕ್ ಮರದ ಹಣ್ಣುಗಳು ಇಲ್ಲದಂತಾಗಿರುವುದರಿಂದ, ಜೀವ ವೈವಿಧ್ಯತೆಯ ನಷ್ಟವಾಗಿದ್ದು ಅದು ಕಳವಳಗಳನ್ನು ಸೃಷ್ಟಿಸಿದೆ. ಓಕ್ ಮರಗಳಲ್ಲಿನ ಪೊಟರೆಗಳು ಪಕ್ಷಿಗಳಿಗೆ ಹಾಗೂ ಸಣ್ಣ-ಪುಟ್ಟ ಸಸ್ತನಿಗಳಿಗೆ ಮತ್ತು ಜೇನು ಸಮುದಾಯಗಳಿಗೆ ಆಶ್ರಯ ಮತ್ತು ಗೂಡುಕಟ್ಟುವ ತಾಣಗಳನ್ನು ಒದಗಿಸುತ್ತಿದ್ದು, ಏಕಫಸಲಿನ ಕೃಷಿಯ ಕಾರಣದಿಂದಾಗಿ ಅದೂ ಇಲ್ಲದಂತಾಗಿದ್ದು ಜೀವವೈವಿಧ್ಯತೆಯ ನಷ್ಟಕ್ಕೆ ಕಾರಣವಾಗಿ ಕಳವಳಗಳನ್ನು ಸೃಷ್ಟಿಸಿದೆ. ಅಷ್ಟೇ ಅಲ್ಲ, ನಿರ್ವಹಿಸಲ್ಪಟ್ಟ ನೆಡುತೋಪುಗಳಲ್ಲಿ ಕಡಿದು ಉರುಳಿಸಲಾದ ಮರಗಳು ಇಲ್ಲದಿರುವುದೂ ಸಹ ಸಮಸ್ಯೆಗೆ ಮತ್ತೊಂದು ಕಾರಣವಾಗಿದೆ.
ಆಯಾ ಋತುವಿಗೆ ತಕ್ಕಂತಿರುವ ಶುಷ್ಕ ಹವಾಮಾನಗಳಲ್ಲಿ, ಅದರಲ್ಲೂ ನಿರ್ದಿಷ್ಟವಾಗಿ ತೆರೆದ ಹುಲ್ಲುಗಾವಲುಗಳಲ್ಲಿ, ಅಲ್ಲೊಂದು-ಇಲ್ಲೊಂದು ಎಂಬಂತೆ ವಿರಳವಾಗಿರುವ ಮರಗಳಿಗೆ ಬೆಂಕಿಯನ್ನು ಹಚ್ಚಲು ಹುಲ್ಲಿನ ಬೆಂಕಿಯೊಂದು ಸಾಕಾಗುವುದಿಲ್ಲವಾದ್ದರಿಂದ, ಓಕ್ ಮರಗಳು ಹಲವು ವೇಳೆ ಬೆಂಕಿ-ನಿರೋಧಕವಾಗಿರುತ್ತವೆ. ಇದಕ್ಕೆ ಪ್ರತಿಯಾಗಿ ಒಂದು ನೀಲಗಿರಿಯ ಕಾಡು ಬೆಂಕಿಯನ್ನು ಉತ್ತೇಜಿಸುವ ಪ್ರವೃತ್ತಿಯನ್ನು ಹೊಂದಿರುತ್ತದೆ. ಏಕೆಂದರೆ ಅದರ ಎಲೆಗಳು ತಯಾರಿಸುವ ತೈಲಗಳು ಬಾಷ್ಪಶೀಲವಷ್ಟೇ ಅಲ್ಲದೇ ಅಧಿಕವಾಗಿ ದಹನಶೀಲ ಸ್ವಭಾವವನ್ನು ಹೊಂದಿರುತ್ತವೆ. ಮೇಲಾಗಿ, ದೊಡ್ಡ ಪ್ರಮಾಣಗಳಲ್ಲಿ ಉತ್ಪಾದನೆಯಾಗುವ ಕಸದಲ್ಲಿ ಫೀನಾಲಿಕ್ ರಾಸಾಯನಿಕಗಳು ಹೆಚ್ಚಿನ ಪ್ರಮಾಣದಲ್ಲಿದ್ದು, ಅವು ಶಿಲೀಂಧ್ರಗಳಿಂದತಮ್ಮ ವಿಘಟನೆಯಾಗದಂತೆ ತಡೆಯುವುದರಿಂದ, ಬೃಹತ್ ಪ್ರಮಾಣಗಳಲ್ಲಿನ ಶುಷ್ಕ, ದಹನಶೀಲ ಇಂಧನವಾಗಿ ಕಸವು ಸಂಚಯನಗೊಳ್ಳುತ್ತದೆ. ಇದರ ಪರಿಣಾಮವಾಗಿ, ನೀಲಗಿರಿ ಮರಗಳ ದಟ್ಟವಾದ ನೆಡುವಿಕೆಗಳು ಮಹಾಕ್ಷೋಭೆಯ ಬೆಂಕಿಯ ಬಿರುಗಾಳಿಗಳಿಗೆ ಈಡಾಗಬಹುದು. ನೀಲಗಿರಿ ಮರಗಳು ದೀರ್ಘಾವಧಿಯವರೆಗೆ ಬೆಂಕಿಯಿಂದ ತಪ್ಪಿಸಿಕೊಂಡು ಬದುಕುಳಿಯುವ ತಮ್ಮ ಸಾಮರ್ಥ್ಯವನ್ನು, ಕುರುಚಲು ಎಳೆಕೊಂಬೆಗಳು ಮತ್ತು ಲಿಗ್ನೋಟ್ಯೂಬರ್ಗಳಿಂದ ಮತ್ತೆಹುಟ್ಟುವ ತಮ್ಮ ಸಾಮರ್ಥ್ಯದಿಂದ ಅಥವಾ ಸೆರೋಟಿನ್ಯುಕ್ತ ಹಣ್ಣುಗಳನ್ನು ಉತ್ಪಾದಿಸುವುದರಿಂದ ಪಡೆದುಕೊಳ್ಳುತ್ತವೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನವದೆಹಲಿ, ಕೊಡಗುಜಿಲ್ಲೆಯಲ್ಲಿ ವರ್ಗಭೂಮಿ ಹೊಂದಿರುವವರಿಗೆ ಲಭ್ಯವಾಗುವಬಾಣೆ ಜಮೀನು ಹಂಚಿಕೊಳ್ಳುವ ಅಧಿಕಾರವನ್ನುಸುಪ್ರೀಂ ಕೋರ್ಟ್ ನೀಡಿದೆ. ಈ ಮೂಲಕ ಬಾಣೆ ಜಮೀನು ಕೂಡ ಸೀಮಿತ ಆಸ್ತಿ ಹಕ್ಕಿನ ವ್ಯಾಪ್ತಿಯನ್ನು ಹೊಂದಿದೆಎಂಬ ವಾದಕ್ಕೆ ಸುಪ್ರೀಂನ ಮುದ್ರೆ ಬಿದ್ದಂತಾಗಿದೆ. ಕೊಡಗಿನ ಬಾಣೆ ಭೂಮಿಗೆ ಸಮಾನಂತರವಾಗಿ ವ್ಯಾಖ್ಯಾನಿಸಲಾಗುವ ಕುಮ್ಕಿ, ಕಾಣೆ, ಬೆಟ್ಟಭೂಮಿ, ಹಾದಿ ಭೂಮಿ, ಕಾನ್ ಮತ್ತು ಸೊಪ್ಪಿನ ಬೆಟ್ಟ, ಜಮ್ಮಾ ಮತ್ತು ಮೊಟಸ್ಥಳಗಳನ್ನು ಹೊಂದಿರುವ ರಾಜ್ಯದ ಉದ್ದಗಲದಲ್ಲಿನ ಲಕ್ಷಾಂತರ ರೈತರಿಗೆ ಸುಪ್ರೀಂಕೋರ್ಟ್ನ ಈ ಆದೇಶ ತುಸು ನೆಮ್ಮದಿಯನ್ನು ನೀಡಿದೆ. ಕೊಡಗಿನ ಕೋಟಿಯಂಗದ ಬಿ. ಮೋಟಯ್ಯ…
ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು ಉಡುಪಿ ಮೊದಲ ಸ್ಥಾನ ಪಡೆದುಕೊಂಡಿದ್ದರೆ ಚಿತ್ರದುರ್ಗ ಕೊನೆಯ ಸ್ಥಾನ ಪಡೆದು ಕಳಪೆ ಫಲಿತಾಂಶ ಪಡೆದ ಜಿಲ್ಲೆಯಾಗಿದೆ. ಈ ಸಲದ ದ್ವಿತೀಯ ಪರೀಕ್ಷೆಯಲ್ಲಿ ಕೂಡ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಅದರಲ್ಲಿಯೂ ಪಂಕ್ಚರ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದ ಕುಸುಮ ಎಂಬುವವರು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವುದು ವಿಶೇಷವಾಗಿದೆ. ಬಳ್ಳಾರಿಯ ಕೊಟ್ಟೂರಿನಲ್ಲಿ ಸೈಕಲ್ ಶಾಪ್ನಲ್ಲಿ ನಡೆಸುತ್ತಿದ್ದ ದೇವೇಂದ್ರಪ್ಪ ಮತ್ತು ಜಯಮ್ಮ ಎಂಬುವವರ ಪುತ್ರಿ ಕುಸುಮಾ ಸೈಕಲ್ ಶಾಪ್ನಲ್ಲಿ ಪಂಕ್ಚರ್ ಹಾಕುವ ಕೆಲಸ…
ರವಿವಾರ, 25/03/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ… ಮೇಷ:– ಸಮಸ್ಯೆಗಳ ಪರಿಹಾರಕ್ಕೆ ಹೊಸ ಜಾಣ್ಮೆ ಬಳಬೇಕಾದ ಸಂದರ್ಭ ಬರಬಹುದು. ಮಕ್ಕಳ ಪುರೋಭಿವೃದ್ಧಿ ತೋರಿ ಬಂದೀತು. ವಿವಾಹಾದಿ ಶುಭಮಂಗಲ ಕಾರ್ಯಗಳು ನಡೆದಾವು. ಉಷ್ಣ ಪ್ರಕೋಪದಿಂದ ಆಗಾಗ ದೇಹಾರೋಗ್ಯದಲ್ಲಿ ಸಮಸ್ಯೆ ತರಲಿದೆ. ನಿಮ್ಮ ದಿಟ್ಟ ಮಾತುಗಳಿಂದಾಗಿ ಅನಾವಶ್ಯಕ ಹೊರೆ ಹೊರಬೇಕಾದೀತು. ಸಾಂಸಾರಿಕ ಸಂತೋಷ ಅನುಭವಿಸುವಿರಿ. ವೃಷಭ:- ವೃತ್ತಿರಂಗದಲ್ಲಿ ಉತ್ತಮ ಅಭಿವೃದ್ಧಿ ಇರುತ್ತದೆ. ಕಷ್ಟಗಳೆಲ್ಲವೂ ಕರಗಿ ಹೋಗಿ ಕಾರ್ಯ ಯೋಜನೆಗಳು ಸುಲಭವಾಗಿ ಸಾಕಾರಗೊಳ್ಳುವವು. ಕೆಲಸಕಾರ್ಯಗಳಿಗೆ ಸ್ಪೂರ್ತಿ ದೊರಕುವುದು. ಬಂಧುವರ್ಗದವರಿಂದ ಸಕಾಲಿಕ…
ಲೋಕಸಭಾ ಚುನಾವಣೆಗೆ ಕೌಂಟ್ ಡೌನ್ ಶುರುವಾಗಿದೆ. ಇಂತಹ ಸಂದರ್ಭದಲ್ಲಿ ಗದಗ ರಾಜಕಾರಣದಲ್ಲಿ ಬಿಜೆಪಿಗೆ ಬಿಗ್ ಶಾಕ್ ಸಿಕ್ಕಿದೆ. ಗದಗದಲ್ಲಿ ರಾತ್ರೋ ರಾತ್ರಿ ಕಾಂಗ್ರೆಸ್ ನಾಯಕರು ಆಪರೇಷನ್ ಹಸ್ತ ನಡೆಸಿದ್ದು, ಮಾಜಿ ಸಚಿವ ಹೆಚ್.ಕೆ. ಪಾಟೀಲ್, ಪ್ರಭಾವಿ ಲಿಂಗಾಯತ ಮುಖಂಡರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಮಾಜಿ ಶಾಸಕ ಮತ್ತು ಪ್ರಭಾವಿ ಲಿಂಗಾಯತ ಮುಖಂಡ ಶ್ರೀಶೈಲಪ್ಪ ಬಿದರೂರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಲು ಮುಂದಾಗಿದ್ದಾರೆ. ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಹೆಚ್.ಕೆ. ಪಾಟೀಲ್ ಜೊತೆ ಶ್ರೀಶೈಲಪ್ಪ ಮಾತುಕತೆ ನಡೆಸಿರುವ…
ಸೋಮವಾರ, 23/04/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…ಪಂಡಿತ್ ಸುದರ್ಶನ್ ಭಟ್ ದೈವಜ್ಞ ಜ್ಯೋತಿಷ್ಯರು ಹಾಗೂ ಆಧ್ಯಾತ್ಮಿಕ ಚಿಂತಕರು ನಿಮ್ಮ ಜೀವನದ ನಿಖರವಾದ ಭವಿಷ್ಯ ತಿಳಿಸುತ್ತಾರೆ ಹಾಗೂ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ಮಕ್ಕಳು ವ್ಯವಹಾರ ಹಣಕಾಸು ಸಮಸ್ಯೆಗಳಿಗೆ ಪರಿಹಾರ ಸೂಚಿಸುವರು 9663542672 ಮೇಷ:- ದೂರದ ಗೆಳೆಯರನ್ನು ಅನಿರೀಕ್ಷಿತವಾಗಿ ಭೇಟಿ ಮಾಡುವಿರಿ. ಇದರಿಂದ ನಿಮ್ಮ ಬಾಳಿಗೆ ಹೊಸ ತಿರುವೊಂದು ದೊರೆಯಲಿದೆ. ಧರ್ಮಕಾರ್ಯಗಳಿಗೆ ಹಣವನ್ನು ಖರ್ಚು ಮಾಡುವಿರಿ. ಆರೋಗ್ಯದ ಕಡೆ ಗಮನ…
ಕೆಲವರು ಸಂಗಾತಿಯನ್ನು ತಬ್ಬಿ ಮಲಗುತ್ತಾರೆ. ಆದ್ರೆ ಇದ್ರಿಂದ ಲಾಭವೇನು? ನಷ್ಟವೇನು? ಎಂಬುದು ಅವ್ರಿಗೆ ತಿಳಿದಿರುವುದಿಲ್ಲ. ಸಂಗಾತಿಯನ್ನು ತಬ್ಬಿ ಮಲಗುವುದ್ರಿಂದ ಸಾಕಷ್ಟು ಲಾಭವಿದೆ. ಕೇವಲ ಸಂಗಾತಿಗೆ ಪ್ರೀತಿ ವ್ಯಕ್ತಪಡಿಸುವ ವಿಧಾನ ಮಾತ್ರವಲ್ಲ. ಆರೋಗ್ಯಕ್ಕೆ ಸಂಬಂಧಿಸಿದ ಲಾಭಗಳೂ ಇವೆ. ಸಂಗಾತಿಯನ್ನು ತಬ್ಬಿ ಮಲಗುವುದ್ರಿಂದ ನೆನಪಿನ ಶಕ್ತಿ ಹೆಚ್ಚುತ್ತದೆ. ಸಂಶೋಧನೆಯಲ್ಲಿ ಇದನ್ನು ಸ್ಪಷ್ಟಪಡಿಸಲಾಗಿದೆ. ಪತಿ-ಪತ್ನಿ ತಬ್ಬಿ ಮಲಗಿದ್ರೆ ಇಬ್ಬರಿಗೂ ಆರೋಗ್ಯಕರ ಲಾಭವಿದೆ. ತಲೆನೋವು ಇತ್ತೀಚಿನ ದಿನಗಳಲ್ಲಿ ಅನೇಕರನ್ನು ಕಾಡ್ತಿದೆ. ರಾತ್ರಿ ಇಬ್ಬರು ತಬ್ಬಿ ಮಲಗುವುದ್ರಿಂದ ತಲೆನೋವು ಕಡಿಮೆಯಾಗುತ್ತದೆ. ಸಂಶೋಧಕರ ಪ್ರಕಾರ, ತಬ್ಬಿ…